Homeಮುಖಪುಟಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ...!!

ಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ…!!

- Advertisement -
- Advertisement -

ಬೆಂಕಿಕಡ್ಡಿ ಗೀರಿದ ಪರಿಣಾಮವೇ ಹಿಂಸಾಚಾರಕ್ಕೆ ಮೂಲ ಕಾರಣ. ಮೂರು ಕಿಡಿಗಳು ಹೊತ್ತಿಕೊಂಡು ಉರಿಯಲು ಆರಂಭಿಸಿದಾಗಲೇ ಆರಿಸುವ ಯತ್ನ ಮಾಡಿದ್ದರೆ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇರಲಿಲ್ಲ.. ಸೂತ್ರಧಾರಿಗಳು ಹೊತ್ತಿಸಿದ ಕಿಡಿಗಳು ಸುಡುತ್ತಲೇ ಹೋದವು. ಬೆಂಕಿ ಹೊತ್ತಿಕೊಳ್ಳುತ್ತಿ ದ್ದಂತೆಯೇ ತುಪ್ಪವನ್ನೂ ಸುರಿಯತೊಡಗಿದರು. ಬೆಂಕಿಯ ಕೆನ್ನಾಲಗೆಗಳು ಇಡೀ ಈಶಾನ್ಯ ದೆಹಲಿಯ ಹಲವು ಪ್ರದೇಶಗಳು ಹೊತ್ತಿ ಉರಿದವು. ಹಿಂಸಾಚಾರ 42 ಬಲಿ ಪಡೆಯಿತು. ನೂರಾರು ಮಂದಿ ಗಾಯಗೊಂಡರು. ಹಲವು ಮನೆಗಳು, ಶಾಪ್ ಮತ್ತು ಮನೆಗಳು ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯಲ್ಲಿ ಭಸ್ಮವಾದವು. ಇದರ ಅರಿವು ಇರಬೇಕಾಗಿದ್ದವರು ಜಾಣತನ ಪ್ರದರ್ಶಿಸಿದರು. ಜಾಣತನ ಫಲವೇ ಹಿಂಸಾಚಾರ ಮತ್ತು ಬೆಂಕಿ .

ಧ್ವಂಸಗೈದ ಕೈಗಳಿಗೆ ಮಣ್ಣು ಮೆತ್ತಿಕೊಳ್ಳಲಿಲ್ಲ.ಮಣ್ಣುಮೆತ್ತಿಕೊಂಡ ಸಾಕ್ಷಿಯೂ ಇರಲಿಲ್ಲ.ಎಲ್ಲವೂ ಸೇವೆಯೊಳಗೆ ಮುಗಿದು ಹೋಗಿತ್ತು. 1992, 2002 ಮತ್ತು 2020 ಪ್ರತಿ ಘಟನೆಯ ನಡುವೆ 10 ವರ್ಷಗಳ ಅಂತರವಿದೆ. ಮೂರನೆಯದು 18 ವರ್ಷದ ಅಂತರ.ಇವೆಲ್ಲವೂ  “ನಿರ್ದಿಷ್ಟ ದಾಳಿ”ಯ ಭಾಗವೇ ಆಗಿವೆ. “ನಿರ್ದಿಷ್ಟ ದಾಳಿ”ಗೆ 28 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಕರಾಳ ಅಧ್ಯಾಯಗಳು ಪ್ರತಿ ಹತ್ತು ಇಲ್ಲವೇ ಹದಿನೆಂಟು ವರ್ಷಕ್ಕೊಮ್ಮೆ ತೆರೆದುಕೊಳ್ಳುತ್ತಲೇ ಹೋಗುತ್ತಿವೆ. ಸಂಘಟಿತ, ವ್ಯವಸ್ಥಿತ ಮತ್ತು “ನಿರ್ದಿಷ್ಟ ದಾಳಿ” ನಡೆದಾಗ ಸಾಮಾನ್ಯ ಜನತೆ ಜರ್ಝರಿತಗೊಂಡಿರುವುದಂತೂ ಸತ್ಯದ ಸಂಗತಿ.

ಸೂತ್ರ ಹಿಡಿದವರು ಪರದೆಯ ಹಿಂದೆ ಇದ್ದಾರೆ. ಪರದೆಯ ಹಿಂದೆ ಯಾರು ಕುಳಿತಿದ್ದಾರೆ? ಯಾವ ಬೊಂಬೆ ಸೂತ್ರ ಹಿಡಿದ್ದಾರೆಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತಿಲ್ಲ. ಸೂತ್ರಧಾರರು ನಿರ್ದೇಶಿಸಿದಂತೆ ಗೊಂಬೆಗಳು ನರ್ತಿಸುತ್ತಿವೆ. ಕೊಳ್ಳಿ ಇಟ್ಟಂತೆ ನಟಿಸಿದರೆ ವಾಸ್ತವದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ಪಾತ್ರದ ಹತ್ಯೆ ನಡೆದುಹೋದರೆ ವಾಸ್ತವದಲ್ಲಿ ಹಲವು ತಲೆಗಳು ಉರುಳಿಹೋಗಿರುತ್ತವೆ. ಸೂತ್ರಧಾರರ ಶಕ್ತಿ ಏನೆಂಬುದು ಅವರ ಬೊಂಬೆ ಆಡಿಸುವ ರೀತಿಯಲ್ಲೇ ತಿಳಿಯುತ್ತದೆ. ರಂಗಸ್ಥಳದಲ್ಲಿ ಅಭಿನಯಿಸುವ ಬೊಂಬೆಗಳು ನಿಜ ಜೀವನದಲ್ಲಿ ಜೀವಂತ ಮನುಷ್ಯರೇ ಆಗಿರುತ್ತಾರೆ. ಅಂಥ ಬೊಂಬೆಗಳಿಂದಾಗಿಯೇ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿರುವುದು.

ಬೊಂಬೆಗಳು ಅಭಿನಯಿಸುವಾಗ ಯಾರೂ ರಂಗಸ್ಥಳಕ್ಕೆ ಹೋಗುವಂತಿಲ್ಲ. ಹೋಗಬೇಕಾದವರು ಹತ್ತಿರದಲ್ಲೇ ನಿಂತು ತಾದಾತ್ಮ್ಯದಿಂದ ನೋಡುತ್ತಾರೆ. ಬೊಂಬೆಗಳ ಅಭಿನಯ ಅಂಥದ್ದು. ನಿಜದಲ್ಲಿ ಬೆಂಕಿ ಹಚ್ಚಿದರೂ, ಜೀವಗಳು ಉರುಳಿಬಿದ್ದರೂ ಅದು ರಂಗದ ಮೇಲೆಯೇ ನಡೆದಂತೆ ಕಾಣುತ್ತದೆ. ಸೂತ್ರಧಾರರ ”ಪಾಲಕರು” ಆಜ್ಞಾನುವರ್ತಿಗಳು ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ನೀರು ಸುರಿದು ಆರಿಸುವ ಪ್ರಯತ್ನ ಮಾಡಬಹುದಿತ್ತು ಅದು ಮಾಡಲೇ ಇಲ್ಲ. ”ಊರೆಲ್ಲಾ ಕೊಳ್ಳೇ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬಂತೆ ಪಾಲಕರು ನಡೆದುಕೊಂಡರು. ಸೂತ್ರದಾರರ ಕೈಚಳಕ ಪ್ರೇಕ್ಷಕರನ್ನು ಮನರಂಜಿಸಿತ್ತು. ಅವರ ಬಯಕೆಯೂ ಈಡೇರಿತ್ತು.

ಯಕ್ಷಗೊಂಬೆಗಳು ಪರಸ್ಪರ ಕಲ್ಲು ತೂರಿಕೊಂಡಿದ್ದವು. ಇದು ಜನರಿಗೆ ಕಾಣುವ ಹೊತ್ತಿಗೆ ಪರಸ್ಪರ ವಿರೋಧಿ ಗುಂಪು ಕಲ್ಲುತೂರಿಕೊಂಡಂತೆ. ಯಾಕೆ ಹೀಗೆ? ಇಂತಹ ನಾಟಕದ ದೃಶ್ಯಗಳ ಸೂತ್ರಧಾರರು ಆಟ ಆಡಲು ಬೇಕು. ಆ ಆಟ ಪ್ರೇಕ್ಷಕರಿಂದ ಹೊಗಳಿಕೆಯ ಗದ್ದುಗೆಗೆ ಏರಿಸುತ್ತದೆ. ಸೂತ್ರದಾರರು ಹೊಗಳಿಕೆಯ ಗದ್ದುಗೆ ಹಿಡಿಯುವುದೇ ತೊಗಲು ಬೊಂಬೆಗಳ ನರ್ತನದಿಂದ. ಆ ತೊಗಲು ಗೊಂಬೆಗಳು ಇಡೀ ದೇಶದ ಯಾವುದೇ ರಾಜ್ಯದಲ್ಲಿರಬಹುದು. ಅವು ಸದಾ ಕುಣಿಯುತ್ತಲೇ ಇರುತ್ತವೆ. ಗೊಂಬೆಗಳು ಹೆಚ್ಚುಹೆಚ್ಚು ಕುಣಿದಂತೆ ಪ್ರೇಕ್ಷಕ ಅಳುತ್ತಾನೆ, ನಗುತ್ತಾನೆ, ನೋವು ತಾಳಲಾರದೆ ಆಕ್ರಂದನ ಮಾಡುತ್ತಾನೆ.

ಮಹಾಭಾರತದಲ್ಲಿ ಕೃಷ್ಣ ಸೂತ್ರಧಾರ  ಅರ್ಜುನನ ಸಾರಥಿ. ದ್ವಾರಕಾ ನಗರಿಯ ಅವತಾರ ಪುರುಷ. ಅಂಥ ಕೃಷ್ಣ ಯುದ್ದರಂಗದಲ್ಲಿ ಕುದುರೆಯ ಲಗಾಮು ಹಿಡಿದು ಅರ್ಜುನನಿಗೆ ನೆರವಾದ. ಪಾಂಡವರಿಗೆ ಪಟ್ಟಾಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ. ಯುದ್ದದಲ್ಲಿ ಸಾವು ನೋವಾದಾಗ ಅವರು ಮಾಡಿದ ಪಾಪದ ಫಲ ಅಂದ. ಧರ್ಮಕ್ಕೆ ಜ್ಲಾನಿ ಉಂಟಾದಾಗ ಅವತಾರವೆತ್ತಿ ದುಷ್ಟರ ಸಂಹಾರ ಮಾಡುತ್ತೇನೆ ಎಂದ. ಆ ದುಷ್ಟರು ಕೂಡ ನಮ್ಮೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಿದ್ದವರೇ. ಆದರೆ ಅಧಿಕಾರದ ಆಸೆಗೆ ನಮ್ಮೊಂದಿಗಿನ ದುಷ್ಟರೆಂದು ಕರೆಯಲ್ಪಡುವವನ್ನು ಕೊಲ್ಲಲು ಪ್ರೇರೇಪಿಸಿದ. ದುಷ್ಟರು ಯಾರು ಎಂಬುದನ್ನು ನಿರ್ಧರಿಸುವರು ದ್ವಾರಕೆಯ ಪುತ್ರರು. ದ್ವಾರಕೆಯ ಸೂತ್ರದಾರರು ಮಾಡಿದ್ದು ತಪ್ಪಲ್ಲವೇ ಎಂದು ಕೇಳಿದರೆ ಧರ್ಮದ ಕಡೆ ಮುಖ ಮಾಡುತ್ತಾರೆ. ಆ ಮುಖಗಳಿಗೆ ರಕ್ತದ ಕಲೆಗಳು ಮೆತ್ತಿಕೊಂಡಿವೆ.

ಸಧ್ಯಕ್ಕೆ ತೊಗಲು ಬೊಂಬೆಯಾಟ ನಿಂತಿದೆ. ಯುದ್ದದಲ್ಲಿ ಕಾಲು, ಕಣ್ಣು, ಕೈ ಕಳೆದುಕಕೊಂಡ, ಗಾಯಗೊಂಡ ಅಮಾಯಕರು ಧನ್ವಂತರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಗಳ ರೋಧಿಸುತ್ತಿವೆ. ಮನೆ, ಅಂಗಡಿ ಕಳೆದು ಕೊಂಡವರು ದಿಕ್ಕುಗಾಣದೆ ಯಾರತ್ತಲೋ ಸಹಾಯಹಸ್ತ ಚಾಚಿದ್ದಾರೆ. ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕ್ರೂರ ಮನಸ್ಸುಗಳು ಜಯದಲ್ಲಿ ಸಂಭ್ರಮಿಸುತ್ತಿವೆ. ದುಃಖತಪ್ತರು ‘ಹರ ಕೊಲ್ಲಲ್ ಪರ ಕಾಯ್ವನೆ’? ಎಂದು ಗೋಳಾಡುತ್ತಿದ್ದಾರೆ. ಭೀಭತ್ಸ ಸನ್ನಿವೇಶ ನಮ್ಮೆದುರಿಗಿದೆ. ದುಃಖದ ಕಾರ್ಮೋಡಗಳು ಮಳೆಸುರಿಸುತ್ತಿವೆ. ಭೂಮಿ ನೆನೆಯದು ಬೆಂಕಿ ಆರದು ಅನ್ನುವಂತಿದೆ. ‘ಎಳವನ ಮೇಲೆ ಕುರುಡ ಕುಳಿತಿದ್ದಾನೆ/ ದಾರಿ ಸಾಗುವುದೆಂತೋ ನೋಡಬೇಕಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...