Homeಕರ್ನಾಟಕಕರ್ನಾಟಕದ್ದೇ ರೈತ ಹೋರಾಟ ರೂಪು ತಳೆಯುವ ಸಾಧ್ಯತೆ ನಮ್ಮ ಮುಂದಿದೆ

ಕರ್ನಾಟಕದ್ದೇ ರೈತ ಹೋರಾಟ ರೂಪು ತಳೆಯುವ ಸಾಧ್ಯತೆ ನಮ್ಮ ಮುಂದಿದೆ

- Advertisement -
- Advertisement -

ಪ್ರಧಾನವಾಗಿ ಪಂಜಾಬಿನ ರೈತರು ಮತ್ತು ದೆಹಲಿಯ ಸುತ್ತಲಿನ ಇತರ ರಾಜ್ಯಗಳ ರೈತರು ದೆಹಲಿ ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ. ಇಡೀ ದೇಶಕ್ಕೆ ಅನ್ವಯಿಸುವ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಒಕ್ಕೂಟ ಸರ್ಕಾರದ ನಡೆಯ ವಿರುದ್ಧ ಈ ಕೆಲವು ರಾಜ್ಯಗಳ ರೈತರ ಜೊತೆ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ರೈತರೇಕೆ ಜೊತೆಗೂಡಿಲ್ಲ ಎಂಬ ಪ್ರಶ್ನೆ ಎದ್ದಿದೆ. ಪ್ರಶ್ನೆ ಕೇಳುತ್ತಿರುವವರಲ್ಲಿ ಎರಡು ವಿಧಗಳಿವೆ. ಒಂದು, ಪಂಜಾಬಿನ ರೈತರಾದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನೂ ನೋಡಲಿಚ್ಛಿಸದೇ, ಈ ಹೋರಾಟವನ್ನು ಹೇಗಾದರೂ ಹತ್ತಿಕ್ಕಲು ಬಯಸುತ್ತಿರುವ ಬಿಜೆಪಿ ಪಕ್ಷದ ಹಿಂಬಾಲಕರು. ಇವರಲ್ಲಿ ಮಾಧ್ಯಮಗಳೂ ಇವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಸುಪ್ರೀಂಕೋರ್ಟೂ ಇದೆಯೇ ಎಂಬ ಪ್ರಶ್ನೆ ಏಳುವಂತೆ ಅದರ ಕೆಲವು ಮಾತುಗಳಿದ್ದವು.

ಎರಡನೆಯದಾಗಿ, ಈ ಹೋರಾಟ ಯಶಸ್ವಿಯಾಗಬೇಕೆಂದರೆ ಎಲ್ಲಾ ರಾಜ್ಯಗಳ ರೈತರೂ ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯಬೇಕು ಎಂದು ಬಯಸುತ್ತಿರುವವರಿದ್ದಾರೆ. ಇವರಲ್ಲಿ ದೆಹಲಿ ಸುತ್ತ ಹೋರಾಟ ನಡೆಸುತ್ತಿರುವ ರಾಜ್ಯಗಳವರೂ ಇದ್ದಾರೆ; ಅಷ್ಟು ದೊಡ್ಡ ಪ್ರಮಾಣದಲ್ಲಿ ಚಳವಳಿ ನಡೆಯದ ರಾಜ್ಯಗಳವರೂ ಇದ್ದಾರೆ. ಹಾಗೆ ನೋಡಿದರೆ ದೇಶದಲ್ಲಿ ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆಗಳನ್ನು ಕಂಡಿರುವ ರಾಜ್ಯಗಳಿಂದ ಸಾಪೇಕ್ಷವಾಗಿ ಕಡಿಮೆ ಪ್ರಮಾಣದ ಮೊಬಿಲೈಸೇಷನ್ ಇದೆ.

ಅಂದರೆ, ಕೃಷಿ ಬಿಕ್ಕಟ್ಟು ಎಲ್ಲೆಡೆ ಇದೆ ಮತ್ತು ಇಂದು ಸಾಪೇಕ್ಷವಾಗಿ ಕಡಿಮೆ ಮೊಬಿಲೈಸೇಷನ್ ಇರುವ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ, ನಿರ್ದಿಷ್ಟ ಸಂದರ್ಭವೊಂದರಲ್ಲಿ ಆ ಬಿಕ್ಕಟ್ಟುಗಳಿಗೆ ರೈತರಾಗಲೀ, ಯಾವುದೇ ಸಮುದಾಯವಾಗಲೀ ಪ್ರತಿಕ್ರಿಯಿಸುವ ರೀತಿ ಹೀಗೇ ಇರುತ್ತದೆಂದು ಹೇಳಲಾಗದು. ಹೀಗಿದ್ದೂ, ಪಂಜಾಬಿನ ಕುರಿತು ಹೇಳಲೇಬೇಕಾದ ಒಂದು ಮಾತಿದೆ. ಅಲ್ಲಿ ಇಂತಹ ಹೋರಾಟ ನಡೆಯಲು ಕಾಲ ಕೂಡಿ ಬಂದಿದೆ; ಅಂದರೆ ಈ ಹೊತ್ತಿನಲ್ಲಿ ಇಂತಹ ದೊಡ್ಡ ಮತ್ತು ದೃಢ ಸಂಕಲ್ಪವುಳ್ಳ ರೈತ ಸಮುದಾಯದ ಸತ್ಯಾಗ್ರಹಕ್ಕೆ ಹತ್ತಾರು ಸಂಗತಿಗಳು ಕಾರಣವಾಗಿವೆ. ಆದರೆ, ಅದರಾಚೆಗೆ ವರ್ಷಗಳ ಕಾಲ ಸುಸಂಘಟಿತ ಪ್ರಯತ್ನವೂ ಅಲ್ಲಿ ನಡೆದಿದೆ.

ಕರ್ನಾಟಕದ ಬಗ್ಗೆ ಪ್ರೀತಿ ಕಾಳಜಿಗಳುಳ್ಳ ಪ್ರತಿಯೊಬ್ಬರೂ ಚಿಂತಿಸಬೇಕಾದ ಕೆಲವು ಸಂಗತಿಗಳಿವೆ. ಅವನ್ನಿಟ್ಟುಕೊಂಡು ಇಲ್ಲೂ ವರ್ಷಗಳ ಕಾಲ ಸುಸಂಘಟಿತವಾದ ಪ್ರಯತ್ನವೊಂದು ನಡೆಯಬೇಕು. ಅದನ್ನು ಆರಂಭಿಸಲು ಈ ಸಮಯವೇ ಸರಿಯಾದುದು. ಕರ್ನಾಟಕವು ರಾಜಸ್ತಾನದ ನಂತರ ಅತಿ ಹೆಚ್ಚು ಬರಪೀಡಿತ ಪ್ರದೇಶವುಳ್ಳ ರಾಜ್ಯವಾಗಿದೆ. ಮಳೆ ನೆರಳಿನ ಪ್ರದೇಶವಾಗಿರುವುದು ಒಂದು ಕಾರಣವಾದರೆ, ಇರುವ ನದೀ ಸಂಪನ್ಮೂಲದ ಸದ್ಬಳಕೆಗೆ ಸರಿಯಾದ ಯೋಜನೆ ಹಾಗೂ ಇಚ್ಛಾಶಕ್ತಿ ಇಲ್ಲದಿರುವುದು ಇನ್ನೊಂದು ಕಾರಣ. ಉತ್ತರ ಒಳನಾಡಿಗೆ ಲಭ್ಯವಿರುವ (ಆದರೆ ಈಗಲೂ ಸಮರ್ಪಕವಾಗಿ ಬಳಕೆಯಾಗದ) ಕೃಷ್ಣಾ ನೀರಿನಂತೆ ಜಲಸಂಪನ್ಮೂಲವಿಲ್ಲದ ದಕ್ಷಿಣ ಒಳನಾಡಿನ ಸಾವಿರಾರು ಕೆರೆ ಕಟ್ಟೆಗಳು ಹೂಳಿನಿಂದ ತುಂಬಿಕೊಂಡಿದ್ದು, ರಾಜಕಾಲುವೆಗಳು ಕಾಣದಾಗಿವೆ. ಜಲಸಂಪನ್ಮೂಲ ಖಾತೆಯು ಪ್ರಭಾವೀ ಸಚಿವರ ಸಂಪನ್ಮೂಲವನ್ನು ಹೆಚ್ಚಿಸುವ ಫಲವತ್ತಾದ ಖಾತೆಯಾಗಿ ಬಹುಕಾಲ ಕಳೆದರೂ, ನೆಲ ಬರಡಾಗಿಯೇ ಇದೆ.

ಇದರ ಫಲವಾಗಿ ಕಳೆದ 20 ವರ್ಷಗಳಲ್ಲಿ 15 ವರ್ಷಗಳ ಕಾಲ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು ಬರದಿಂದ ಬಳಲಿವೆ. ಇನ್ನೊಂದಷ್ಟು ತಾಲೂಕು/ಜಿಲ್ಲೆಗಳ ಭೀಕರ ಪ್ರವಾಹದಿಂದ ತತ್ತರಿಸಿವೆ. ಬರದಿಂದಲೇ ಸುಮಾರು 4 ಲಕ್ಷ ಕೋಟಿ ರೂ.ಗಳ ಬೆಳೆ ನಷ್ಟವನ್ನು ಗ್ರಾಮೀಣ ಕರ್ನಾಟಕವು ಕಂಡಿದ್ದರೆ, ಅದರಲ್ಲಿ ಶೇ.6ರಷ್ಟು ಪರಿಹಾರವನ್ನೂ ಪಡೆದುಕೊಂಡಿಲ್ಲ. ಇಂತಹ ಗ್ರಾಮೀಣ ಕರ್ನಾಟಕದ ಪುನಶ್ಚೇತನಕ್ಕೆ ಒಂದು ಸಮಗ್ರ ಪ್ಯಾಕೇಜ್ ಬೇಕಿದೆ ಎಂದು ಯಾವ ರಾಜಕೀಯ ಪಕ್ಷಕ್ಕೂ ಅನಿಸಿಲ್ಲ. ಹೆಚ್ಚೆಂದರೆ ರೈತರ ಸಾಲಮನ್ನಾ ಎಂಬ ತಾತ್ಕಾಲಿಕವಾಗಿ ಮೂಗಿಗೆ ಸವರುವ ತುಪ್ಪವನ್ನು ಹಿಡಿದು ಜಗ್ಗಾಡುತ್ತವೆ. ಇದನ್ನು ರೈತಾಪಿಗೂ ಸಮರ್ಥವಾಗಿ ವಿವರಿಸಿ ಒಂದು ಆಂದೋಲನ ಮಾಡಬೇಕೆಂದರೆ ಅದಕ್ಕೆ ಒಂದಷ್ಟು ಅಧ್ಯಯನ, ಚಿಂತನೆ ಕೇಳುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳು ಸಿದ್ಧವಾಗುವ ಸಾಧ್ಯತೆಗಳಿಲ್ಲ. ಅವು ಶುರು ಮಾಡಿದರೂ ಆರೋಪ ಪ್ರತ್ಯಾರೋಪಗಳಷ್ಟೇ! ಅಲ್ಲಿಂದಿಲ್ಲಿಗೆ ಹಾರಬಹುದು.

PC : India Legal

ಕರ್ನಾಟಕದಲ್ಲಿ ಹತ್ತು ಕೃಷಿ ಪರಿಸರ ವಲಯಗಳಿವೆ. ಆದರೆ ಹತ್ತಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುವ, ಒಂದೇ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವ ವೈವಿಧ್ಯತೆ ಇದೆ. ಹೀಗಾಗಿ ಬೆಳೆ ಬೆಳೆಯುವವರದ್ದೂ ಬೇರೆ ಬೇರೆ ವಲಯಗಳಾಗಿವೆ. ರೈತಸಂಘವು ರಾಜ್ಯಮಟ್ಟದ ಹೋರಾಟವೊಂದನ್ನು ಸಂಘಟಿಸಿದರೆ, ಅದರಲ್ಲಿ ವಿವಿಧ ಬೆಳೆಗಳಿಗೆ ಸಂಬಂಧಿಸಿದ ಹತ್ತಿಪ್ಪತ್ತು ಹಕ್ಕೊತ್ತಾಯಗಳು ಸೇರಿಸುವುದು ಆ ಕಾರಣಕ್ಕೇ. ಆದರೆ, ಒಂದೇ ಬೆಳೆಯ ಬೆಳೆಗಾರರನ್ನು ಸಂಘಟಿಸಿ ಅವರ ಹಕ್ಕೊತ್ತಾಯ ಮಾತ್ರ ಕೇಂದ್ರೀಯ ಘೋಷಣೆಯಾಗಿದ್ದರೆ ಮಾತ್ರ ರೈತರ ಜಮಾವಣೆ ಹೆಚ್ಚು. ಅದರಲ್ಲೂ ಕಬ್ಬು ಕ್ರಷಿಂಗ್ ಆಗುವ, ಬೆಲೆ ಹೆಚ್ಚಿಸುವ ಅಥವಾ ಈಗಾಗಲೇ ಕ್ರಷಿಂಗ್ ಆಗಿರುವ ಕಬ್ಬಿನ ಬಾಕಿ ಕೊಡಿಸುವ ತಕ್ಷಣದ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಡುವ ಕಬ್ಬು ಬೆಳೆಗಾರರಷ್ಟು ಸಂಘಟಿತವಾದ ಇನ್ನೊಂದು ಗುಂಪು ಕಾಣುವುದಿಲ್ಲ. ಸುಸಂಘಟಿತವಾದ ವಲಯವಾದ ಹಾಲು ಉತ್ಪಾದಕರನ್ನು ಅಷ್ಟೇ ಸಂಘಟಿತವಾಗಿ ರಾಜ್ಯವ್ಯಾಪಿ ಒಟ್ಟುಗೂಡಿಸಿದ ಒಂದು ಹೋರಾಟವೂ ನಮ್ಮ ನೆನಪಿನಲ್ಲಿ ಇಲ್ಲ.

ಹೀಗಿದ್ದಾಗಲೂ ಕೇವಲ ಎರಡು ದಶಕಗಳ ಕೆಳಗೆ ಇದೇ ರಾಜ್ಯದಲ್ಲಿ ಅಭೂತಪೂರ್ವ ರೈತ ಚಳವಳಿಯೊಂದು ನಡೆದಿದ್ದು, ಆಳುವ ಸರ್ಕಾರಗಳ ನಿದ್ದೆಗೆಡಿಸಿದ್ದು ಹೇಗೆ?

ಅದು ಹೇಗೆಂಬುದು ಇಂದು ಅಧ್ಯಯನಯೋಗ್ಯ ವಿಚಾರವಾದರೂ, ಅಲ್ಲಿಂದಿಲ್ಲಿಗೆ ರಾಜ್ಯದ ಕೃಷಿ ಸ್ವರೂಪವು ಸಾಕಷ್ಟು ಬದಲಾಗಿದೆ ಎಂಬ ಕುರಿತು ಒಂದೆರಡಾದರೂ ಅಧ್ಯಯನಗಳು ಬಂದಿವೆ. ಅವುಗಳನ್ನೂ ಮುಂದಿಟ್ಟುಕೊಂಡು ಬದಲಾಗಿರುವ ಮತ್ತು ಬದಲಾಗುತ್ತಿರುವ ಕೃಷಿ ಸ್ವರೂಪದ ಕುರಿತು ಚಿಂತನ-ಮಂಥನ ನಡೆದರೆ ರೈತ ಸಂಘಟನೆಗಳ ಹೋರಾಟವು ಇಡೀ ರೈತ ಸಮುದಾಯದ ಹೋರಾಟವಾಗುತ್ತದೆ.

ದೆಹಲಿಯ ಸುತ್ತ ಹೋರಾಟ ನಡೆಸುತ್ತಿರುವ ರೈತ ಸಮುದಾಯಕ್ಕೆ ಮತ್ತು ಅದಕ್ಕೆ ನೇತೃತ್ವ ವಹಿಸಿರುವ ಸಂಘಟನೆಗಳಿಗೆ ನಮ್ಮ ಗೌರವವು ಸಲ್ಲಲೇಬೇಕು. ಆದರೆ, ಕರ್ನಾಟಕವು ಕರ್ನಾಟಕದ ರೀತಿಯ ಆಂದೋಲನವನ್ನೇ ಕಟ್ಟಬೇಕು. ಒಕ್ಕೂಟ ಸರ್ಕಾರದ ಬಾಲಂಗೋಚಿಯಾಗಿ ಕರ್ನಾಟಕ ಸರ್ಕಾರವು ಕರ್ನಾಟಕದ ರೈತರು ಕೇಳದಿದ್ದ ಬದಲಾವಣೆಗಳನ್ನು ಏಕೆ ತರುತ್ತಿದೆ ಎಂಬ ಪ್ರಶ್ನೆಯು ಕೇವಲ ರೈತರ ಪ್ರಶ್ನೆಯಲ್ಲ; ಇಡೀ ಕರ್ನಾಟಕದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಬೇಕು. ಒಕ್ಕೂಟ ಸರ್ಕಾರದ ಅಧಿಕಾರಿಯೊಬ್ಬರು ರಾಜ್ಯ ಸರ್ಕಾರದ ಅಧಿಕಾರಿಗೆ ಪತ್ರ ಬರೆದು ಈಗಿಂದೀಗಲೇ ಇದನ್ನು ಸುಗ್ರೀವಾಜ್ಞೆ ತನ್ನಿ ಎಂದಪ್ಪಣೆ ಮಾಡುವ ಧಾರ್ಷ್ಟ್ಯದ ಕುರಿತು ಕರ್ನಾಟಕದ ಪ್ರಜ್ಞಾವಂತ ಸಮುದಾಯಕ್ಕೆ ಸಿಟ್ಟೇ ಬರಲಿಲ್ಲ. ಹಾಗಾಗಿಯೇ ಯಡಿಯೂರಪ್ಪನವರ ಸರ್ಕಾರವು ಅದನ್ನೂ ತಂದಿತು, ನಂತರ ಕಾಯ್ದೆಯನ್ನೂ ತಂದುಕೊಂಡಿತು.

ಈ ರಾಜ್ಯದ ಎಲ್ಲಾ ರೈತರ ಸಂಕಷ್ಟವನ್ನು ಒಂದು ತಂತುವಿನಲ್ಲಿ ಬೆಸೆಯುವುದು ಕೇವಲ ನೆರೆ ಹಾಗೂ ಬರದ ಸಂಕಷ್ಟ ಮಾತ್ರವಾಗಿಲ್ಲ; ಇಲ್ಲಿನ ಪ್ರತೀ ಬೆಳೆಯ ಬೆಲೆಯ ಏರಿಳಿತ ಮತ್ತು ನಷ್ಟಗಳಿಗೆ ಸರ್ಕಾರಗಳ (ಅದರಲ್ಲೂ ದೆಹಲಿ ಸರ್ಕಾರದ) ಒಂದಲ್ಲಾ ಒಂದು ನೀತಿ ಕಾರಣವಾಗಿದೆ. ಅಂದರೆ ಸರ್ಕಾರದ ನೀತಿಯೇ ಕಬ್ಬು, ತೊಗರಿ, ಭತ್ತ, ರೇಷ್ಮೆ, ಮೆಣಸು, ಜೋಳ, ಹತ್ತಿ, ಅಡಿಕೆ ಮತ್ತಿತರ ಬೆಳೆಗಾರರು ಬಿಕ್ಕಟ್ಟಿಗೆ ಗುರಿಯಾಗುವಂತೆ ಮಾಡಿವೆ. ಇದನ್ನು ಅರ್ಥ ಮಾಡಿಕೊಂಡು ಅಣಿನೆರೆಯುವ ದೊಡ್ಡ ಸಮುದಾಯ ಈಗಿಲ್ಲದೇ ಇರಬಹುದು. ಆದರೆ ಅದನ್ನು ಅರ್ಥೈಸಿಕೊಂಡು ನಂತರ ಎಲ್ಲರಿಗೂ ತಿಳಿಹೇಳುವ ಹತ್ತಾರು ಜನರು ಪ್ರತಿ ಹಳ್ಳಿಯಲ್ಲೂ ಇದ್ದಾರೆ. ಮೊದಲ ಹಂತದಲ್ಲಿ ಅಂಥವರನ್ನು ಒಂದೆಡೆ ತರುವ ಕೆಲಸವಾಗಬೇಕು. ರಾಜ್ಯವ್ಯಾಪಿ ಈ ಕೆಲಸ ನಡೆದರೆ ಅದೇ ದೊಡ್ಡ ಸಮೂಹವಾಗುತ್ತದೆ. ಅದಾನಿ, ಅಂಬಾನಿಯ ತಿಜೋರಿ ತುಂಬಿಸಲು ಮುಂದಿನ ದಿನಗಳಲ್ಲಿ ಇನ್ನೂ ಘಾತುಕವಾದ ನೀತಿಗಳು ಬಂದಾಗ, ಈ ಸಮೂಹವು ಇನ್ನಷ್ಟು ಜನರಲ್ಲಿ ಅರಿವು ತುಂಬಿ ಪ್ರವಾಹವಾಗುತ್ತದೆ.
ಆ ನಿಟ್ಟಿನಲ್ಲಿ ಮೊದಲ ಗಟ್ಟಿ ಹಾಗೂ ವ್ಯಾಪಕ ಹೆಜ್ಜೆಗಳನ್ನಿಡಲು ಇದು ಸಕಾಲವಾಗಿದೆ.


ಇದನ್ನೂ ಓದಿ: ರೈತ ಹೋರಾಟ: ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಗೆ ರಾಜ್ಯ ರೈತ ಸಂಘ ಆಕ್ಷೇಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...