Homeಮುಖಪುಟದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ

ದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ

"ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿಯಬೇಕಾಗಿದೆ" ಎಂದು ಅಂಬೇಡ್ಕರ್‌ ಹೇಳಿದ್ದರು.

- Advertisement -
- Advertisement -

ಅನುವಾದ: ನಿಖಿಲ್ ಕೋಲ್ಪೆ

ಪೌರತ್ವ ತಿದ್ದುಪಡಿ ಕಾಯಿದೆ(CAA)ಯು ಪಾಕಿಸ್ತಾನ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಬಯಸಿದೆ. ಇಲ್ಲಿ ಧಾರ್ಮಿಕ ನೆಲೆಯನ್ನು ಅನುಸರಿಸಲಾಗಿದೆ. ಆದರೆ, ಇದೇ ಹೊತ್ತಿಗೆ ಮೂಲತಃ ಭಾರತೀಯರಾಗಿದ್ದು ರಬ್ಬರ್, ಚಹಾತೋಟಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಕೊಂಡೊಯ್ದು, ನಂತರ ಅಲ್ಲಿಯೇ ನೆಲೆನಿಂತ ಹಿಂದೂ ತಮಿಳರನ್ನು ಈ ಕಾಯಿದೆಯಿಂದ ಹೊರಗಿಡಲಾಗಿದೆ. ದೇಶ ವಿಭಜನೆಯ ಕಾಲದಲ್ಲಿ ಸಾವಿರಾರು ಮಂದಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಅಂತೆಯೇ ಸಾವಿರಾರು ಮಂದಿ ಭಾರತಕ್ಕೆ ವಲಸೆ ಬಂದಿದ್ದರು. (ಆಗ ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನವಾಗಿತ್ತು.) ಆಗಲೂ ಸಂವಿಧಾನ ಸಭೆಯು ವಲಸಿಗರ ಕುರಿತು ಈಗ ಎತ್ತಲಾಗುತ್ತಿರುವ ಪ್ರಶ್ನೆಗಳನ್ನೂ ಚರ್ಚಿಸಿತ್ತು. ಆ ಕುರಿತ ಕೆಲವು ಕುತೂಹಲಕಾರಿ ವಿವರಗಳು ಇಲ್ಲಿವೆ.

ಕೇವಲ ಹಿಂದೂಗಳು ಮತ್ತು ಸಿಕ್ಖ್ ವಲಸಿಗರಿಗೆ ಮಾತ್ರ ಭಾರತೀಯ ಪೌರತ್ವ ನೀಡಬೇಕು ಎಂದು ಬಲಪಂಥೀಯರು ಬಯಸಿದ್ದರು. ಆದೆ, ಈ ರೀತಿ ಧರ್ಮಾಧರಿತ ಆಯ್ಕೆಗಳನ್ನು ಮಾಡುವುದು ಅನ್ಯಾಯ ಎಂದು ಇನ್ನೂ ಕೆಲವರು ಬಯಸಿದ್ದರು. ಅಷ್ಟಕ್ಕೂ ವಿಭಜನೆಯ ಬಳಿಕ ನಡೆದ ರಕ್ತಸಿಕ್ತ ಹಿಂಸಾಚಾರದಿಂದ ಭಯಗೊಂಡಷ್ಟೇ ವಲಸೆಹೋದ ಮುಸ್ಲಿಮರಿರಬಹುದು. ಅವರು ಎಲ್ಲಾ ಶಾಂತವಾದ ಮೇಲೆ ಮರಳಿ ಬಂದು ಭಾರತೀಯ ಪೌರರಾಗಲು ಬಯಸಿರಬಹುದು.

ಆದರೆ, ಮರಳಿ ಬರಲು ಬಯಸುವ ಮುಸ್ಲಿಮರನ್ನು ಹೊರಗಿಡಬೇಕು ಎಂದು ಕೆಲವರು ಬಯಸಿದ್ದರೆ, ಇಲ್ಲಿ ಬದುಕಲು ಬಯಸುವ ಎಲ್ಲರಿಗೂ ಭಾರತದ ಗಡಿಗಳು ತೆರೆದಿರಬೇಕೆಂದು ಕಾಂಗ್ರೆಸ್ ನಾಯಕ ಬ್ರಿಜೇಶ್ವರ ಪ್ರಸಾದ್ ಅವರಂತವರು ವಾದಿಸಿದ್ದರು. ಮುಸ್ಲಿಮ್ ನಿರಾಶ್ರಿತರು ವಾಸ್ತವದಲ್ಲಿ “ಗೂಢಚಾರ”ರಾಗಿದ್ದು, “ರಾಷ್ಟ್ರೀಯ ಭದ್ರತೆ”ಗೆ ಅಪಾಯವಾಗಬಹುದು ಎಂದು ವಾದಿಸಿದವರೂ ಇದ್ದರು. ಮುಸ್ಲಿಮರ ದೇಶಪ್ರೇಮದ ಮೇಲೆ ಆಗಲೇ ಸಂಶಯದ ಲೇಬಲ್ ಅಂಟಿಸಲಾಗಿತ್ತು.

ಹಿಂದೂ ಬಹುಸಂಖ್ಯಾತವಾದವು ತಲೆಯೆತ್ತಿದರೆ, ಅದು ಭಾರತಕ್ಕೆ ಯಾವುದೇ ಅಲ್ಪಸಂಖ್ಯಾತ ಗುಂಪಿಗಿಂತ ಹೆಚ್ಚಿನ ಅಪಾಯ ಒಡ್ಡಬಹುದು ಎಂಬ ಜವಾಹರಲಾಲ್ ನೆಹರೂ ಅವರ ವಾದನ್ನು ಬ್ರಿಜೇಶ್ವರ ಪ್ರಸಾದ್ ಬೆಂಬಲಿಸಿದ್ದರು. ಮತ್ತೆ ಕೆಲವರು ಮರಳಿ ಬರಬಯಸುವ ಮುಸ್ಲಿಮರನ್ನು ಹಿಂದಕ್ಕೆ ಪಡೆಯುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದೂ ವಾದಿಸಿದ್ದರು.

ಆದರೆ, ಬ್ರಿಜೇಶ್ವರ ಪ್ರಸಾದ್ ಅವರು ಮಾರ್ಮಿಕ ಉತ್ತರ ನೀಡಿ. “ನಾವು ಒಂದು ಅಂಗಡಿ ವ್ಯಾಪಾರಿಗಳ ದೇಶವಲ್ಲ…ಆರ್ಥಿಕ ಪರಿಣಾಮ ಏನೇ ಇದ್ದರೂ, ನಾವು ಕೆಲವು ಕೆಲವು ಆದರ್ಶಗಳ ಮೇಲೆ ನಿಲ್ಲಬಯಸುತ್ತೇವೆ. ಕೆಲವು ನೈತಿಕ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರ ಮೂಲಕ ಮಾತ್ರ ದೇಶಗಳು ಪ್ರಗತಿ ಸಾಧಿಸುತ್ತವೆ. ಜೀವನದ ಭೌತಿಕ ಅಭಿವೃದ್ಧಿಯು ಪ್ರಗತಿ ಮತ್ತು ನಾಗರಿಕತೆಯ ಮಾನದಂಡವಲ್ಲ. ಅಗ್ಗದ ಆರ್ಥಿಕತೆಗೆ ಭದ್ರವಾದ ರಾಜಕೀಯ ತತ್ವಗಳನ್ನು ಅಡಿಯಾಳಾಗಿಸುವುದು ರಾಜಕೀಯ ಅಥವಾ ಮುತ್ಸದ್ದಿತನವೆಂದು ನಾನು ಭಾವಿಸುವುದಿಲ್ಲ. ಭಾರತೀಯ ಪ್ರಜೆಯಾಗಿರುವ ಒಬ್ಬ ಮುಸ್ಲಿಮನನ್ನು ಈ ಸಂವಿಧಾನದ ಆರಂಭದೊಂದಿಗೆ ಆತನ ಪೌರತ್ವದಿಂದ ವಂಚಿತಗೊಳಿಸಲು ಯಾವುದೇ ಕಾರಣವೂ ನನಗೆ ಕಾಣುವುದಿಲ್ಲ. ಅದೂ ಕೂಡಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳಿಗೆ ಭಾರತೀಯ ಪೌರತ್ವ ಪಡೆಯಲು ನಾವು ಆಹ್ವಾನಿಸುತ್ತಿರುವಾಗ” ಎಂದು ಹೇಳಿದ್ದರು.

ಯುದ್ಧವಿನ್ನೂ ಮುಗಿದಿಲ್ಲ

ಬಹುಸಂಖ್ಯಾತವಾದದ ಪರವಿದ್ದವರು 1948ರಲ್ಲಿ ಸಂವಿಧಾನ ಸಭೆಯಲ್ಲಿ ನಿರ್ಣಾಯಕವಾಗಿ ಸೋತಿದ್ದರು. ಆದರೆ, ಜಾತ್ಯತೀತವಾದಿಗಳು ಕೆಲವು ರಾಜಿಗಳನ್ನು ಒಪ್ಪುವಂತೆ ಮಾಡಲು ಅವರು ಸಫಲರಾಗಿದ್ದರು. ಹೀಗಿದ್ದರೂ, ಜನಾಂಗೀಯವಾದದ ವಿಚಾರ ಮತ್ತು ಹೆಚ್ಚು ಪ್ರಜಾಪ್ರಭುತ್ವವಾದಿ ವಿಚಾರಗಳ ನಡುವಿನ ಯುದ್ಧವು ಇನ್ನೂ ಮುಗಿದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಾದ ಭಾರತೀಯ ಜನತಾ ಪಕ್ಷ ಮುಂತಾದವು ಈ ಚರ್ಚೆಯನ್ನು ತಮ್ಮ ಪರವಾಗಿ ಮುಗಿಸಲು ಶ್ರಮಿಸುತ್ತಿವೆ.

ಕೊನೆಗೂ ಪೌರತ್ವ ತಿದ್ದುಪಡಿ ಕಾಯಿದೆಯು ಕೇವಲ ಊರು ದೇಶಗಳ ಮುಸ್ಲಿಮೇತರರಿಗೆ ಪೌರತ್ವ ನೀಡುವ ಉದ್ದೇಶವನ್ನು ಮಾತ್ರ ಹೊಂದಿಲ್ಲ.  ಅದನ್ನು ಈ ಕಾಯಿದೆ ಇಲ್ಲದೆಯೇ ಮಾಡಬಹುದು. ಭಾರತವು ಕೆಲವರಿಗೆ ಸಹಜ ಮನೆಯಾಗಿದ್ದು, ಮತ್ತೆ ಕೆಲವರು ಇನ್ನೂ ಹೊರಗಿನವರಾಗಿದ್ದಾರೆ ಎಂಬ ಚಿಂತನೆಗೆ ಕಾನೂನು ಮಾನ್ಯತೆ ಒದಗಿಸುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ.

ಬಿ.ಆರ್. ಅಂಬೇಡ್ಕರ್ ಅವರ ಭಯವು ನಿಜವಾಗಿದೆ. “ಭಾರತದಲ್ಲಿ ಪ್ರಜಾಪ್ರಭುತ್ವವು ಭಾರತದ ಮಣ್ಣಿನ ಮೇಲಿನ ಮೇಲುಡುಪು ಮಾತ್ರವಾಗಿದೆ‌; ಅದು ಮೂಲಭೂತವಾಗಿ ಅಪ್ರಜಾಸತ್ತಾತ್ಮಕವಾಗಿದೆ” ಎಂದು ಅವರು ಹೇಳಿದ್ದರು. “ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿಯಬೇಕಾಗಿದೆ” ಎಂದೂ ಅವರು ಹೇಳಿದ್ದರು.

ಇವತ್ತು ಭವಿಷ್ಯಕ್ಕಾಗಿನ ಹೋರಾಟವನ್ನು ಬೀದಿಗಳಲ್ಲಿ- ದೇಶದಾದ್ಯಂತ ಅನೇಕ ಶಾಹೀನ್‌ ಬಾಗ್‌ಗಳಲ್ಲಿ ನಡೆಸಲಾಗುತ್ತಿದೆ. ಸಂಗೀತ, ಕವಿತೆ, ಚಿತ್ರಗಳು, ಫಲಕಗಳು ಮತ್ತು ಘೋಷಣೆಗಳಿಂದ ಸಜ್ಜಿತ ಮಹಿಳೆಯರು ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಪ್ರತಿಯೊಂದು ಸ್ಥಳವೂ ನಾವು ಸಾಂವಿಧಾನಿಕ ನೈತಿಕತೆಯನ್ನು ಕಲಿಯುವ ಶಾಲೆಯಾಗಿದೆ. ಸಂವಿಧಾನದ ಪೀಠಿಕೆಯನ್ನು ಉಚ್ಛರಿಸುವ, ಪುನರುಚ್ಛರಿಸುವ ಮತ್ತು ವಿಶ್ಲೇಷಿಸುವ ಮೂಲಕ ನಾವು ಸಂವಿಧಾನವು ನಮಗೆ ನೀಡಿರುವುದನ್ನು ಗಳಿಸುತ್ತಿದ್ದೇವೆ. ಅಷ್ಟಕ್ಕೂ ರಸ್ತೆಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುವುದರ ಹೊರತಾಗಿ ಈ ನಿಟ್ಟಿನಲ್ಲಿ ನಿಜವಾದ ಕಲಿಕೆ ಸಾಧ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...