Homeಮುಖಪುಟದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ

ದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ

"ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿಯಬೇಕಾಗಿದೆ" ಎಂದು ಅಂಬೇಡ್ಕರ್‌ ಹೇಳಿದ್ದರು.

- Advertisement -
- Advertisement -

ಅನುವಾದ: ನಿಖಿಲ್ ಕೋಲ್ಪೆ

ಪೌರತ್ವ ತಿದ್ದುಪಡಿ ಕಾಯಿದೆ(CAA)ಯು ಪಾಕಿಸ್ತಾನ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಬಯಸಿದೆ. ಇಲ್ಲಿ ಧಾರ್ಮಿಕ ನೆಲೆಯನ್ನು ಅನುಸರಿಸಲಾಗಿದೆ. ಆದರೆ, ಇದೇ ಹೊತ್ತಿಗೆ ಮೂಲತಃ ಭಾರತೀಯರಾಗಿದ್ದು ರಬ್ಬರ್, ಚಹಾತೋಟಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಕೊಂಡೊಯ್ದು, ನಂತರ ಅಲ್ಲಿಯೇ ನೆಲೆನಿಂತ ಹಿಂದೂ ತಮಿಳರನ್ನು ಈ ಕಾಯಿದೆಯಿಂದ ಹೊರಗಿಡಲಾಗಿದೆ. ದೇಶ ವಿಭಜನೆಯ ಕಾಲದಲ್ಲಿ ಸಾವಿರಾರು ಮಂದಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಅಂತೆಯೇ ಸಾವಿರಾರು ಮಂದಿ ಭಾರತಕ್ಕೆ ವಲಸೆ ಬಂದಿದ್ದರು. (ಆಗ ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನವಾಗಿತ್ತು.) ಆಗಲೂ ಸಂವಿಧಾನ ಸಭೆಯು ವಲಸಿಗರ ಕುರಿತು ಈಗ ಎತ್ತಲಾಗುತ್ತಿರುವ ಪ್ರಶ್ನೆಗಳನ್ನೂ ಚರ್ಚಿಸಿತ್ತು. ಆ ಕುರಿತ ಕೆಲವು ಕುತೂಹಲಕಾರಿ ವಿವರಗಳು ಇಲ್ಲಿವೆ.

ಕೇವಲ ಹಿಂದೂಗಳು ಮತ್ತು ಸಿಕ್ಖ್ ವಲಸಿಗರಿಗೆ ಮಾತ್ರ ಭಾರತೀಯ ಪೌರತ್ವ ನೀಡಬೇಕು ಎಂದು ಬಲಪಂಥೀಯರು ಬಯಸಿದ್ದರು. ಆದೆ, ಈ ರೀತಿ ಧರ್ಮಾಧರಿತ ಆಯ್ಕೆಗಳನ್ನು ಮಾಡುವುದು ಅನ್ಯಾಯ ಎಂದು ಇನ್ನೂ ಕೆಲವರು ಬಯಸಿದ್ದರು. ಅಷ್ಟಕ್ಕೂ ವಿಭಜನೆಯ ಬಳಿಕ ನಡೆದ ರಕ್ತಸಿಕ್ತ ಹಿಂಸಾಚಾರದಿಂದ ಭಯಗೊಂಡಷ್ಟೇ ವಲಸೆಹೋದ ಮುಸ್ಲಿಮರಿರಬಹುದು. ಅವರು ಎಲ್ಲಾ ಶಾಂತವಾದ ಮೇಲೆ ಮರಳಿ ಬಂದು ಭಾರತೀಯ ಪೌರರಾಗಲು ಬಯಸಿರಬಹುದು.

ಆದರೆ, ಮರಳಿ ಬರಲು ಬಯಸುವ ಮುಸ್ಲಿಮರನ್ನು ಹೊರಗಿಡಬೇಕು ಎಂದು ಕೆಲವರು ಬಯಸಿದ್ದರೆ, ಇಲ್ಲಿ ಬದುಕಲು ಬಯಸುವ ಎಲ್ಲರಿಗೂ ಭಾರತದ ಗಡಿಗಳು ತೆರೆದಿರಬೇಕೆಂದು ಕಾಂಗ್ರೆಸ್ ನಾಯಕ ಬ್ರಿಜೇಶ್ವರ ಪ್ರಸಾದ್ ಅವರಂತವರು ವಾದಿಸಿದ್ದರು. ಮುಸ್ಲಿಮ್ ನಿರಾಶ್ರಿತರು ವಾಸ್ತವದಲ್ಲಿ “ಗೂಢಚಾರ”ರಾಗಿದ್ದು, “ರಾಷ್ಟ್ರೀಯ ಭದ್ರತೆ”ಗೆ ಅಪಾಯವಾಗಬಹುದು ಎಂದು ವಾದಿಸಿದವರೂ ಇದ್ದರು. ಮುಸ್ಲಿಮರ ದೇಶಪ್ರೇಮದ ಮೇಲೆ ಆಗಲೇ ಸಂಶಯದ ಲೇಬಲ್ ಅಂಟಿಸಲಾಗಿತ್ತು.

ಹಿಂದೂ ಬಹುಸಂಖ್ಯಾತವಾದವು ತಲೆಯೆತ್ತಿದರೆ, ಅದು ಭಾರತಕ್ಕೆ ಯಾವುದೇ ಅಲ್ಪಸಂಖ್ಯಾತ ಗುಂಪಿಗಿಂತ ಹೆಚ್ಚಿನ ಅಪಾಯ ಒಡ್ಡಬಹುದು ಎಂಬ ಜವಾಹರಲಾಲ್ ನೆಹರೂ ಅವರ ವಾದನ್ನು ಬ್ರಿಜೇಶ್ವರ ಪ್ರಸಾದ್ ಬೆಂಬಲಿಸಿದ್ದರು. ಮತ್ತೆ ಕೆಲವರು ಮರಳಿ ಬರಬಯಸುವ ಮುಸ್ಲಿಮರನ್ನು ಹಿಂದಕ್ಕೆ ಪಡೆಯುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದೂ ವಾದಿಸಿದ್ದರು.

ಆದರೆ, ಬ್ರಿಜೇಶ್ವರ ಪ್ರಸಾದ್ ಅವರು ಮಾರ್ಮಿಕ ಉತ್ತರ ನೀಡಿ. “ನಾವು ಒಂದು ಅಂಗಡಿ ವ್ಯಾಪಾರಿಗಳ ದೇಶವಲ್ಲ…ಆರ್ಥಿಕ ಪರಿಣಾಮ ಏನೇ ಇದ್ದರೂ, ನಾವು ಕೆಲವು ಕೆಲವು ಆದರ್ಶಗಳ ಮೇಲೆ ನಿಲ್ಲಬಯಸುತ್ತೇವೆ. ಕೆಲವು ನೈತಿಕ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರ ಮೂಲಕ ಮಾತ್ರ ದೇಶಗಳು ಪ್ರಗತಿ ಸಾಧಿಸುತ್ತವೆ. ಜೀವನದ ಭೌತಿಕ ಅಭಿವೃದ್ಧಿಯು ಪ್ರಗತಿ ಮತ್ತು ನಾಗರಿಕತೆಯ ಮಾನದಂಡವಲ್ಲ. ಅಗ್ಗದ ಆರ್ಥಿಕತೆಗೆ ಭದ್ರವಾದ ರಾಜಕೀಯ ತತ್ವಗಳನ್ನು ಅಡಿಯಾಳಾಗಿಸುವುದು ರಾಜಕೀಯ ಅಥವಾ ಮುತ್ಸದ್ದಿತನವೆಂದು ನಾನು ಭಾವಿಸುವುದಿಲ್ಲ. ಭಾರತೀಯ ಪ್ರಜೆಯಾಗಿರುವ ಒಬ್ಬ ಮುಸ್ಲಿಮನನ್ನು ಈ ಸಂವಿಧಾನದ ಆರಂಭದೊಂದಿಗೆ ಆತನ ಪೌರತ್ವದಿಂದ ವಂಚಿತಗೊಳಿಸಲು ಯಾವುದೇ ಕಾರಣವೂ ನನಗೆ ಕಾಣುವುದಿಲ್ಲ. ಅದೂ ಕೂಡಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳಿಗೆ ಭಾರತೀಯ ಪೌರತ್ವ ಪಡೆಯಲು ನಾವು ಆಹ್ವಾನಿಸುತ್ತಿರುವಾಗ” ಎಂದು ಹೇಳಿದ್ದರು.

ಯುದ್ಧವಿನ್ನೂ ಮುಗಿದಿಲ್ಲ

ಬಹುಸಂಖ್ಯಾತವಾದದ ಪರವಿದ್ದವರು 1948ರಲ್ಲಿ ಸಂವಿಧಾನ ಸಭೆಯಲ್ಲಿ ನಿರ್ಣಾಯಕವಾಗಿ ಸೋತಿದ್ದರು. ಆದರೆ, ಜಾತ್ಯತೀತವಾದಿಗಳು ಕೆಲವು ರಾಜಿಗಳನ್ನು ಒಪ್ಪುವಂತೆ ಮಾಡಲು ಅವರು ಸಫಲರಾಗಿದ್ದರು. ಹೀಗಿದ್ದರೂ, ಜನಾಂಗೀಯವಾದದ ವಿಚಾರ ಮತ್ತು ಹೆಚ್ಚು ಪ್ರಜಾಪ್ರಭುತ್ವವಾದಿ ವಿಚಾರಗಳ ನಡುವಿನ ಯುದ್ಧವು ಇನ್ನೂ ಮುಗಿದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಾದ ಭಾರತೀಯ ಜನತಾ ಪಕ್ಷ ಮುಂತಾದವು ಈ ಚರ್ಚೆಯನ್ನು ತಮ್ಮ ಪರವಾಗಿ ಮುಗಿಸಲು ಶ್ರಮಿಸುತ್ತಿವೆ.

ಕೊನೆಗೂ ಪೌರತ್ವ ತಿದ್ದುಪಡಿ ಕಾಯಿದೆಯು ಕೇವಲ ಊರು ದೇಶಗಳ ಮುಸ್ಲಿಮೇತರರಿಗೆ ಪೌರತ್ವ ನೀಡುವ ಉದ್ದೇಶವನ್ನು ಮಾತ್ರ ಹೊಂದಿಲ್ಲ.  ಅದನ್ನು ಈ ಕಾಯಿದೆ ಇಲ್ಲದೆಯೇ ಮಾಡಬಹುದು. ಭಾರತವು ಕೆಲವರಿಗೆ ಸಹಜ ಮನೆಯಾಗಿದ್ದು, ಮತ್ತೆ ಕೆಲವರು ಇನ್ನೂ ಹೊರಗಿನವರಾಗಿದ್ದಾರೆ ಎಂಬ ಚಿಂತನೆಗೆ ಕಾನೂನು ಮಾನ್ಯತೆ ಒದಗಿಸುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ.

ಬಿ.ಆರ್. ಅಂಬೇಡ್ಕರ್ ಅವರ ಭಯವು ನಿಜವಾಗಿದೆ. “ಭಾರತದಲ್ಲಿ ಪ್ರಜಾಪ್ರಭುತ್ವವು ಭಾರತದ ಮಣ್ಣಿನ ಮೇಲಿನ ಮೇಲುಡುಪು ಮಾತ್ರವಾಗಿದೆ‌; ಅದು ಮೂಲಭೂತವಾಗಿ ಅಪ್ರಜಾಸತ್ತಾತ್ಮಕವಾಗಿದೆ” ಎಂದು ಅವರು ಹೇಳಿದ್ದರು. “ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿಯಬೇಕಾಗಿದೆ” ಎಂದೂ ಅವರು ಹೇಳಿದ್ದರು.

ಇವತ್ತು ಭವಿಷ್ಯಕ್ಕಾಗಿನ ಹೋರಾಟವನ್ನು ಬೀದಿಗಳಲ್ಲಿ- ದೇಶದಾದ್ಯಂತ ಅನೇಕ ಶಾಹೀನ್‌ ಬಾಗ್‌ಗಳಲ್ಲಿ ನಡೆಸಲಾಗುತ್ತಿದೆ. ಸಂಗೀತ, ಕವಿತೆ, ಚಿತ್ರಗಳು, ಫಲಕಗಳು ಮತ್ತು ಘೋಷಣೆಗಳಿಂದ ಸಜ್ಜಿತ ಮಹಿಳೆಯರು ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಪ್ರತಿಯೊಂದು ಸ್ಥಳವೂ ನಾವು ಸಾಂವಿಧಾನಿಕ ನೈತಿಕತೆಯನ್ನು ಕಲಿಯುವ ಶಾಲೆಯಾಗಿದೆ. ಸಂವಿಧಾನದ ಪೀಠಿಕೆಯನ್ನು ಉಚ್ಛರಿಸುವ, ಪುನರುಚ್ಛರಿಸುವ ಮತ್ತು ವಿಶ್ಲೇಷಿಸುವ ಮೂಲಕ ನಾವು ಸಂವಿಧಾನವು ನಮಗೆ ನೀಡಿರುವುದನ್ನು ಗಳಿಸುತ್ತಿದ್ದೇವೆ. ಅಷ್ಟಕ್ಕೂ ರಸ್ತೆಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುವುದರ ಹೊರತಾಗಿ ಈ ನಿಟ್ಟಿನಲ್ಲಿ ನಿಜವಾದ ಕಲಿಕೆ ಸಾಧ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...