Homeಮುಖಪುಟಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

- Advertisement -
- Advertisement -

ರಾಜಕಾರಣಿಯಾಗಿ ಬದಲಾದ ಸರಕಾರಿ ಅಧಿಕಾರಿ ಶಾ ಫೈಸಲ್ ಅವರನ್ನು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬರಖಾಸ್ತು ಮಾಡಿದ ತಕ್ಷಣ ಬಂಧಿಸಿರಲಿಲ್ಲ. ಅವರನ್ನು ಆಗಸ್ಟ್ 14ರಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲು ಯತ್ನಿಸುತ್ತಿರುವಾಗ ವಶಕ್ಕೆ ತಗೆದುಕೊಳ್ಳಲಾಯಿತು. ಅಧಿಕಾರಿಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಹಿಂದಿನ ದಿನ ಅವರು ಬಿಬಿಸಿಗೆ ನೀಡಿದ್ದ ಸಂದರ್ಶನದ ಬಗ್ಗೆ ವಿಚಾರಿಸಿದರು ಎಂದು ಅವರ ಗೆಳೆಯರೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ತಿಳಿಸಿದ್ದಾರೆ.

ಅವರನ್ನು ಶ್ರೀನಗರಕ್ಕೆ ಹೊತ್ತೊಯ್ದು, ಕರಾಳ ಸಾರ್ವಜನಿಕ ಸುರಕ್ಷಾ ಕಾಯಿದೆ (Public Safety Act) ಅಡಿಯಲ್ಲಿ ಬಂಧಿಸಲಾಯಿತು. ಈ ಕಾಯಿದೆಯ ಪ್ರಕಾರ ಸರಕಾರವು ಯಾರನ್ನೇ ಆಗಲಿ ವಿಚಾರಣೆ ಇಲ್ಲದೇ ಆರು ತಿಂಗಳುಗಳ ಕಾಲ ಬಂಧನದಲ್ಲಿ ಇಡಬಹುದು. (ಪ್ರಜಾಪ್ರಭುತ್ವಕ್ಕೆ ಜಯವಾಗಲಿ!)

ಆವರು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ತೊಂದರೆ ಉಂಟುಮಾಡಿರಲಿಲ್ಲ ಬದಲಿಗೆ ಶಾ ಫೈಸಲ್ ಹಾರ್ವರ್ಡಿಗೆ ಓಡಿಹೋಗುತ್ತಿದ್ದರು. (ಮಹಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಜನರನ್ನು ಕೈಬಿಟ್ಟು ಹೋಗುವವನು ಯಾವ ರಾಜಕಾರಣಿ! ಸರಕಾರವು ಈ ಬಂಧನದಿಂದ ಅವರಿಗೆ ಉಪಕಾರವನ್ನೇ ಮಾಡಿದೆ ಎಂದು ಕೆಲವು ಜನರು ಯೋಚಿಸುತ್ತಿರುವುದರಲ್ಲಿ ಅಚ್ಚರಿ ಏನಿಲ್ಲ!)

ನಿಜ ಕಾರಣ!

ಶಾ ಫೈಸಲ್ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದಕ್ಕೆ ನೈಜಕಾರಣವೆಂದರೆ ಅವರು ಬಿಬಿಸಿಗೆ ಸಂದರ್ಶನ ನೀಡಿರುವುದು ಎಂಬುದು ಸ್ಪಷ್ಟವಾಗಿದೆ. ಅವರು ಕಾಶ್ಮೀರಕ್ಕೆ ಆಜಾದಿ ಕೇಳಿದರೇ? ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದರೇ? ಇಲ್ಲವೇ ಇಲ್ಲ! ಬದಲಾಗಿ ಅವರು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ನರೇಂದ್ರ ಮೋದಿ ಸರಕಾರ ಬರಖಾಸ್ತುಗೊಳಿಸಿದ್ದನ್ನು ಮತ್ತು ಅದನ್ನು ಮಾಡಲಾದ ವಿಧಾನಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದರು ಅಷ್ಟೇ. ಮೋದಿ ಸಂವಿಧಾನದ ಕೊಲೆ ಮಾಡುತ್ತಿದ್ದಾರೆ ಎಂದವರು ಹೇಳಿದ್ದರು. ಇದನ್ನೇ ಪ್ರತಿಪಕ್ಷಗಳು ಈ ಸರಕಾರಕ್ಕೆ ಸಂಬಂಧಿಸಿದಂತೆ ಹೇಳುತ್ತಲೇ ಬಂದಿವೆ.

ಇದಕ್ಕಾಗಿ ಅವರ ಬಂಧನವಾಯಿತು, ಅವರ ನಾಗರಿಕ ಹಕ್ಕುಗಳನ್ನು ಅಮಾನತಿನಲ್ಲಿಡಲಾಯಿತು ಮತ್ತು ಅವರ ಧ್ವನಿಯನ್ನು ಅಡಗಿಸಲಾಯಿತು. ಸರ್ವಾಧಿಕಾರಿ ಆಡಳಿತಗಳು ಮಾಡುತ್ತಾ ಬಂದಿರುವುದು ಇದನ್ನೇ. ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಡಿದ್ದೂ ಇದನ್ನೇ. ಸಾರ್ವಜನಿಕರ ಜೊತೆ ಮಾತನಾಡದಂತೆ ತಡೆಯಲು ಪ್ರತಿಪಕ್ಷಗಳ ನಾಯಕರನ್ನು ಬಂಧಿಸಲಾಗುತ್ತದೆ. ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾದಾಗ ಸರ್ವಾಧಿಕಾರಿ ಆಡಳಿತಗಳು ಇದನ್ನೇ ಮಾಡಲು ಹೊರಡುತ್ತವೆ.

ಇದಕ್ಕಾಗಿಯೇ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಅವರ ಕುಟುಂಬದ ಹಲವಾರು ಸದಸ್ಯರನ್ನು ಬಂಧನದಲ್ಲಿ ಇರಿಸಲಾಗಿರುವುದು. ಇವರೆಲ್ಲರೂ ಪ್ರತ್ಯೇಕತಾವಾದವು ತಾರಕಕ್ಕೇರಿದ್ದ ಸಂದರ್ಭದಲ್ಲಿ ತಮ್ಮ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ, ಭಾರತದ ಧ್ವಜವನ್ನು ಎತ್ತಿಹಿಡಿದಿದ್ದ ಭಾರತೀಯ ರಾಜಕಾರಣಿಗಳು. ಆದರೆ, ಇಂದು ಅವರನ್ನೇ ದಮನಿಸಿ, ತಾತ್ಕಾಲಿಕ ಸೆರೆಮನೆಗೆ ತಳ್ಳಲಾಗಿದೆ.

ಅವರನ್ನು ಜೈಲಿಗೆ ತಳ್ಳಿರುವುದು ಅವರ ಆತ್ಮಸಾಕ್ಷಿಗಾಗಿ; ಕೇವಲ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬಷ್ಟೇ ಕಾರಣಕ್ಕಾಗಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಈ ಅನ್ಯಾಯಕ್ಕೆ ಹೆಚ್ಚಿನವರು ಬಾಯ್ಮಾತಿನ ಸೇವೆಗಿಂತ ಹೆಚ್ಚೇನನ್ನೂ ಮಾಡದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. “ಕಾನೂನು ಮತ್ತು ಶಿಸ್ತನ್ನು ಕಾಪಾಡಲು ಪ್ರತಿಬಂಧಕ ಬಂಧನ” ಎಂಬುದು ಸರ್ವಾನುಮತದ ಭ್ರಮೆ ಹುಟ್ಟಿಸುವಂತೆ ಬ್ರಿಟಿಷ್ ರಾಜ್‌ನಲ್ಲಿ ನೀಡಲಾಗುತ್ತಿದ್ದ ಸಿದ್ಧ ನೆಪ. (ಅದನ್ನೇ ಮೋದಿ ಅನುಸರಿಸುತ್ತಿರುವುದು)

ಭಿನ್ನಮತಕ್ಕೆ ಮುನ್ನವೇ ಬಾಯಿಗೆ ಬೀಗ!

ಆಗಸ್ಟ್ 5ರಂದು ಘೋಷಿಸಲಾದ ಏಕಪಕ್ಷೀಯ ಸಾಂವಿಧಾನಿಕ ಬದಲಾವಣೆಯ ಬಳಿಕ ಮೋದಿ ಸರಕಾರವು ಕಾಶ್ಮೀರದಲ್ಲಿ ಎಲ್ಲವೂ ಕುಶಲಮಂಗಲ, ಕಾಶ್ಮೀರಿಗಳು ತುಂಬಾ ಕುಶಿಯಾಗಿದ್ದಾರೆ ಎಂಬ ಸುಳ್ಳಿನ ಕಂತೆಯನ್ನು ಬಿತ್ತಲು ಯತ್ನಿಸಿತ್ತು. ಈ ಕಟ್ಟುಕತೆಯನ್ನು ಎತ್ತಿಹಿಡಿಯಲು ಯಾವುದೇ ಕಾಶ್ಮೀರಿ ರಾಜಕಾರಣಿ ಟಿವಿಯಲ್ಲಿ ಕಾಣಿಸಿಕೊಳ್ಳದಿರುವುದು ಅಥವಾ ಬೀದಿಗಳಲ್ಲಿ ಮೋದಿ ಸರಕಾರದ ಕ್ರಮವನ್ನು ವಿರೋಧಿಸದಿರುವುದು ಅಗತ್ಯವಾಗಿತ್ತು.

ಅತ್ಯಲ್ಪ ಅವಧಿಗೆ ಗೃಹಬಂಧನದಲ್ಲಿರುವಾಗಲೇ ಮೆಹಬೂಬಾ ಮುಫ್ತಿಗೆ ಟ್ವೀಟ್ ಮಾಡಲು ಸಾಧ್ಯವಾಗಿತ್ತು. ಅವರು ಹೀಗೆ ಬರೆದಿದ್ದರು: “ಮೋದಿ ಜೀಗೆ ಸಿಕ್ಕ ಭಾರೀ ಬಹುಮತವು- ಅವರು ಮುತ್ಸದ್ದಿಯಂತೆ ಕಾಶ್ಮೀರದ ಜನತೆಯತ್ತ ಕೈಚಾಚುತ್ತಾರೆ; ಅವರು ಕೂಡಾ ಅಟಲ್ ಜೀ ಅವರು ತುಳಿದ ದಾರಿಯನ್ನೇ ತುಳಿಯುತ್ತಾರೆ ಎಂಬ ನಂಬಿಕೆಯನ್ನು ನಮ್ಮಲ್ಲಿ ಮೂಡಿಸಿತ್ತು. ಎಂತಹ ವಿಶ್ವಾಸದ್ರೋಹವಿದು.”

ಫಾರೂಕ್ ಅಬ್ದುಲ್ಲಾ ಅವರನ್ನು ಬಹಿರಂಗಪಡಿಸದ ಗೃಹಬಂಧನದಲ್ಲಿ ಇರಿಸಲಾಗಿದೆ. ಆದರೆ, ಅವರು ಬಂಧನದಲ್ಲಿಲ್ಲ ಎಂದು ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ್ದಾರೆ.

ಭಾರತದ ಗೃಹಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು (ಫೈಸಲ್ ಮತ್ತು ಫಾರೂಕ್) ಹೇಳಿದ್ದಾರೆ. ಫಾರೂಕ್ ಗೃಹಬಂಧನದಿಂದ ತಪ್ಪಿಸಿಕೊಂಡುಬಂದು ಎನ್‌ಡಿಟಿವಿಯ ಜೊತೆ ಮಾತನಾಡಿದರು. ಈಗ ಅವರು ಮತ್ತೆ ಗೃಹಬಂಧನದಲ್ಲಿದ್ದು, ಒಂದು ಮಸೀದಿಯಲ್ಲಿ ಈದ್ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಅವರ ಬೇಡಿಕೆಯನ್ನು ಕೂಡಾ ನಿರಾಕರಿಸಲಾಯಿತು.

ಓಮರ್ ಅಬ್ದುಲ್ಲಾ ತನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುವ ಕೊಂಚವೇ ಮುನ್ನ ಜನರಿಗೆ ಹೇಳಿದ್ದೆಂದರೆ, ಶಾಂತವಾಗಿರಿ, ಹಿಂಸಾಚಾರಕ್ಕೆ ಇಳಿಯಬೇಡಿ ಎಂದು. ಈ ಗುಲಾಮಿ- ಕರಣಿಕ-ಕಾರಕೂನ ವರದಿಗಾರರ ಮೂಲಕ ಕೆಳಮಟ್ಟದ ಅಪಪ್ರಚಾರದ ಕತೆಗಳನ್ನು ಹರಿಯಬಿಡಲಾಗುತ್ತದೆ- ಏನೆಂದರೆ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ‘ಜೈಲಿನಲ್ಲಿ’ ಹೋರಾಟ ನಡೆಸುತ್ತಿದ್ದಾರೆ! (ಪ್ರಜಾಪ್ರಭುತ್ವವನ್ನು ಕೊಂದ ಬಳಿಕ ಈ ಮೋದಿ ಸರಕಾರ ತುಚ್ಛವಾದ ವ್ಯಂಗ್ಯದಿಂದ ಇಂತಹಾ ಆನಂದವನ್ನು ಅನುಭವಿಸುತ್ತಿದೆ.)

ಕೆಲವು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರನ್ನು ಕೂಡಾ ಆಗ್ರಾ ಮತ್ತು ಬರೇಲಿಯಲ್ಲಿರುವ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ತನ್ನನ್ನು ಯಾವ ಕಾರಣಕ್ಕಾಗಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಮೆಹಬೂಬಾ ಮುಫ್ತಿಯವರ ಮಗಳು ಗೃಹಸಚಿವ ಅಮಿತ್ ಶಾಗೆ ಪತ್ರ ಬರೆದು ಕೇಳಲಿಚ್ಛಿಸಿದ್ದಾರೆ.

ಅವರೇನು ಬರೆದ್ದಿದ್ದಾರೆಂದರೆ, “ಏನಿದ್ದರೂ, ನಾನು ವಿವಿಧ ಪತ್ರಿಕೆಗಳಿಗೆ, ಮಾಧ್ಯಮ ಪೋರ್ಟಲ್‌ಗಳಿಗೆ ನೀಡಿದ ಸಂದರ್ಶನಗಳು ನನ್ನ ಬಂಧನಕ್ಕೆ ಕಾರಣ ಎಂದು ಭದ್ರತಾ ಸಿಬ್ಬಂದಿಗಳು ಹೇಳಿದ್ದಾರೆ. ವಾಸ್ತವವಾಗಿ, ನಾನು ಇನ್ನೊಮ್ಮೆ ಮಾತಾಡಿಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅವರು ನನ್ನನ್ನು ಬೆದರಿಸಿದ್ದಾರೆ.”

ಮಾತನಾಡಿದರೆ ಜಾಗ್ರತೆ!

ಇದು ಹೇಗೆ ಕಾಣುತ್ತಿದೆ ಎಂದರೆ, ಮೋದಿ-ಶಾ (ಗಳಸ್ಯ-ಕಂಠಸ್ಯ) ಅವರು ಕೇವಲ ಭಾರತೀಯ ಸಂವಿಧಾನದ ವಿಧಿ 370 ಮಾತ್ರವಲ್ಲ; ವಿಧಿ 19ನ್ನೂ ವಜಾ ಗೊಳಿಸಿದೆ. (ಅದು ನಮ್ಮ ನಿಮ್ಮೆಲ್ಲರಿಗೆ ಅನ್ವಯಿಸುವಂತದ್ದು!) ಈ ವಿಧಿ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಹಲವಾರು ಮೂಲಭೂತ ಹಕ್ಕುಗಳನ್ನೂ ಕೊಟ್ಟಿದೆ. ಈ ತನಕ ಎಷ್ಟು ರಾಜಕಾರಣಿಗಳನ್ನು ಬಂಧಿಸಲಾಗಿದೆ ಎಂದು ನಿಖರವಾಗಿ ಗೊತ್ತಿಲ್ಲ; ಆದರೆ, ಮೋದಿ-ಶಾ ಹೇಳಿಕೆಗಳಿಗಿಂತ ಅದು ವ್ಯತಿರಿಕ್ತವಾಗಿದೆ. ಸುಮಾರು 400ರಷ್ಟು ರಾಜಕಾರಣಿಗಳನ್ನು ಎರಡೇ ದಿನಗಳಲ್ಲಿ ಬಂಧಿಸಲಾಗಿತ್ತು ಎಂದು ವರದಿಗಳು ಹೇಳುತ್ತವೆ. ಪತ್ರಕರ್ತರ ಬಂಧನ ಆರಂಭವಾಗಿದೆ.

ಇಂದು ಯಾರೂ ಭಾರತದಲ್ಲಿ ಕಾಶ್ಮೀರದ ಜೊತೆಗೆ ಸ್ಪಂದಿಸುತ್ತಿಲ್ಲ. ಆದರೆ, ಇದೇ ತಂತ್ರವನ್ನು ಈ ಮೋದಿ ಸರಕಾರ ಭಾರತದಾದ್ಯಂತ ಅನುಸರಿಸುವುದಿಲ್ಲ ಎಂದು ಹೇಳಬಲ್ಲವರು ಯಾರು? ಪ್ರತಿಪಕ್ಷಗಳವರನ್ನು ಜೈಲಿಗೆ ತಳ್ಳಿ, ಸ್ಥಳೀಯ ಮಾಧ್ಯಮಗಳನ್ನು ಹೊಸಕಿ, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಈ  ಸರಕಾರ ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವಾಗ, ಅಲ್ಲಿನ ಜನರು ಸಂತೋಷವಾಗಿದ್ದಾರೋ, ಕಡುಕೋಪದಲ್ಲಿದ್ದಾರೋ ಎಂದು ನಮಗೆಲ್ಲಾ ಗೊತ್ತಾಗುವುದಾದರೂ ಹೇಗೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

ಕೃಪೆ-ಶಿವಂ ವಿಜ್ (ದಿ ಪ್ರಿಂಟ್)

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...