Homeಅಂಕಣಗಳುಎಲೆಮರೆಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ 'ಸಂತೋಷ ಗುಡ್ಡಿಯಂಗಡಿ’

ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ಶಾಲಾ ಶಿಕ್ಷಣದಲ್ಲಿ ರಂಗಭೂಮಿ ಕಸಿ ಮಾಡುತ್ತಿರುವ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಒಂದಿಷ್ಟು...

- Advertisement -
- Advertisement -

ಎಲೆಮರೆ-5

-ಅರುಣ್ ಜೋಳದಕೂಡ್ಲಿಗಿ.

ಶಿವಾಜಿಯ ಆಡಳಿತವಿದ್ದಾಗ ಆತನ ಸೈನ್ಯದಲ್ಲಿದ್ದ ಒಂದು ಗುಂಪು ಆತನ  ಸಾವಿನ ನಂತರ ಸಾಗರದ ಕಡೆಗೆ ವಲಸೆ ಬರುತ್ತಾರೆ. ಇಲ್ಲಿ ಹವ್ಯಕರ ಮನೆಗಳಲ್ಲಿ ಕೆಲವು ಕಾಲ ಜೀತ ಮಾಡಿಕೊಂಡಿದ್ದು, ಕಾಲಾನಂತರ ಶಿವನ ಭಕ್ತರಾಗಿದ್ದ ಇವರು ಕರಾವಳಿಯ ಕೋಟೇಶ್ವರಕ್ಕೆ ಬಂದು ಅಲ್ಲಿನ ಕೆರೆಗೆ ತಾವು ಕಟ್ಟಿದ್ದ ಲಿಂಗವನ್ನು ಎಸೆದು ಮೀನು ತಿನ್ನಲು ಶುರುಮಾಡಿದ ಪುಟ್ಟ ಸಮುದಾಯವೆ ‘ಕೂಸಾಳ’. ಜೀತ ಮಾಡುವವರನ್ನು ಒಡೆಯರು ಮನೆಯ ಮಕ್ಕಳೆಂದು ಪ್ರೀತಿಯಿಂದ ಕರೆಯುತ್ತಾರೆಂದು ನಂಬಿಸಿರುವ ‘ಕೂಸಾಳು’ ಪದವೇ ಸಮುದಾಯಕ್ಕೂ ಬಂದಿರಬಹುದು. ಉಡುಪಿ, ಕಾರ್ಕಳ, ಕುಂದಾಪುರ ಮುಂತಾದ ಕಡೆಗಳಲ್ಲಿ ನೆಲೆಸಿದ ಕೂಸಾಳುಗಳು ದಲಿತ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದು, ಇದೀಗ ತಮ್ಮನ್ನು ಆದಿ ದ್ರಾವಿಡ ಎಂದು ಕರೆದುಕೊಳ್ಳುತ್ತಾರೆ.

ಈ ಕೂಸಾಳು ಸಮುದಾಯ ‘ಕೀಳು’ ಎನ್ನುವ ಭೂತವನ್ನು ಆರಾಧಿಸುತ್ತಾರೆ. ಮರದ ಬಳಿ ಇಟ್ಟಿರುವ ಕಲ್ಲೇ ದೈವ, ಈ ದೈವದ ಹೆಸರೇ ಕೀಳು. ಹೀಗೆ ತಮ್ಮದೇ ಆದ ಪುಟ್ಟ ದೈವದ ಮನೆಗಳನ್ನು ಕಟ್ಟಿಕೊಂಡು ಪೂಜೆ ಮಾಡುತ್ತ ತಮ್ಮ ಗುರುತನ್ನು ಕಾಪಿಟ್ಟುಕೊಂಡ ಪುಟ್ಟದಾದ ಕೂಸಾಳು ಸಮುದಾಯದ ಒಳಗಿಂದ ಅಕ್ಷರದ ಬೆಳಕಿನಲ್ಲಿ ನಡೆದುಕೊಂಡು ಬಂದವರು ಸಂತೋಷ್ ಗುಡ್ಡಿಯಂಗಡಿ.

“ಮಂತ್ರವಾದಿಯಾದ ತಾತ ಸಾಗರ – ಶಿವಮೊಗ್ಗದ ಕಡೆಯ ಘಟ್ಟಕ್ಕೆ ಹೋಗುವಾಗ ಕೊಲ್ಲೂರು ಕಾಡಲ್ಲಿ ರಾತ್ರಿಯಾಗುತ್ತದೆ. ಆಗ ಮಂತ್ರಶಕ್ತಿಯಿಂದ ಎರಡು ಹುಲಿಗಳನ್ನು ವಶಮಾಡಿಕೊಂಡು ತನ್ನ ಕಾಲು ಮತ್ತು ತಲೆಯ ಬಳಿ ಕಾವಲಿಗಿರಿಸಿ ಅಜ್ಜ ಮಲಗುತ್ತಾನೆ. ದಾರಿಹೋಕ ಬ್ರಿಟೀಷ್ ಅಧಿಕಾರಿ ಅಜ್ಜನನ್ನು ನೋಡುತ್ತಾನೆ. ಈ ಮನುಷ್ಯ ಅಸಾಮಾನ್ಯ, ಇಂತವರು ನಮ್ಮ ವಿರುದ್ಧ ತಿರುಗಿಬಿದ್ದರೆ ಕಷ್ಟವೆಂದು ಆ ಮಂತ್ರವಾದಿಯನ್ನು ಏಳು ಗುಂಡಿಟ್ಟು ಕೊಂದರಂತೆ. ಅಜ್ಜಿಯ ಮೇಲೆ ಭೂತ ಬಂದು ಮೈಮೇಲೆ ಅಳಕೊಂಡು ಈ ಕತೆಯನ್ನು ಹೇಳುತ್ತಿದ್ದರು” ಎನ್ನುತ್ತ ತನ್ನ ಮುತ್ತಾತನ ಕತೆ ಹೇಳುವ ಸಂತೋಷ ತನ್ನ ಸಮುದಾಯದ ಕಥನಗಳನ್ನು ಒಡಲೊಳಗಿಟ್ಟುಕೊಂಡ ಯುವಕ.

ನಂದನ್ ನೀಲೆಕಣಿ ಅವರ ಶಿರಸಿಯ ಕಡೆ ತೋಟದಲ್ಲಿ ಜೀತ ಮಾಡುತ್ತಿದ್ದ ತಂದೆತಾಯಿಯ ಮಗನಾದ ಸಂತೋಷ್, ಪಿಯುಸಿ ಫೇಲಾಗಿ ಮನೆಯಲ್ಲಿ ಸುಳ್ಳು ಹೇಳಿ, 4 ವರ್ಷ ಗಾರೆ ಕೆಲಸ ಮಾಡುತ್ತಾನೆ. ಹಿಮಕರ ಎನ್ನುವವರ ಸಂಪರ್ಕ ಸಿಕ್ಕು ‘ನಮ್ಮ ಭೂಮಿ’ ಸಂಸ್ಥೆಯ ಬೀದಿನಾಟಕಕ್ಕೆ ಸಂತೋಷ್ ಅವರನ್ನು ಪರಿಚಯಿಸುತ್ತಾರೆ. ನಂತರ ಮುರಾರಿ ಬಲ್ಲಾಳ್ ಎನ್ನುವವರು ನೀನಾಸಂಗೆ ದಾರಿ ತೋರುತ್ತಾರೆ. ನೀನಾಸಂ ತಿರುಗಾಟದಲ್ಲಿ ಮೂರು ವರ್ಷ ಓಡಾಟ ಮಾಡಿ, ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಒಂದು ವರ್ಷ ಮೇಷ್ಟ್ರಾಗಿ ಕೆಲಸ ಮಾಡುತ್ತಾರೆ. ಅದೇ ಹೊತ್ತಿಗೆ 2009 ರಲ್ಲಿ ಸರಕಾರಿ ಪ್ರೌಢಶಾಲೆಯ ನಾಟಕದ ಮೇಷ್ಟ್ರಾಗಿ ಕೆಲಸಕ್ಕೆ ಸೇರುತ್ತಾರೆ. ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ಒಂದು ದಶಕ ಪೂರೈಸಿದ್ದಾರೆ.

ಶಾಲೆಗಳಲ್ಲಿ ರಂಗಶಿಕ್ಷಣಕ್ಕೆ ಇಂತದ್ದೇ ಮಾದರಿಯಿಲ್ಲ. ಆಯಾ ಶಾಲೆಯಲ್ಲಿ ಆಯ್ಕೆಯಾದ ರಂಗಶಿಕ್ಷಕರು ತಮ್ಮ ಕ್ರಿಯಾಶೀಲತೆ, ಹೊಸತನದಿಂದ ತಾವೇ ಮಾದರಿಗಳನ್ನು ರೂಪಿಸಬೇಕು. ಒಂದು ದಶಕದಲ್ಲಿ ಸಂಶೋಷ್ ಅವರು ರಂಗ ಶಿಕ್ಷಕರಾಗಿ ನಡೆಸಿದ ಪ್ರಯೋಗಗಳು ನಿಜಕ್ಕೂ ಅತ್ಯುತ್ತಮ ರಂಗಶಿಕ್ಷಣದ ಮಾದರಿಗಳಾಗಿವೆ. ಇಡೀ ಶಾಲೆಯನ್ನೇ ಒಂದು ರಂಗಮಂದಿರವನ್ನಾಗಿಸಿ, ಮಕ್ಕಳನ್ನು ರಂಗಭೂಮಿಯ ಕಣ್ಣೋಟದಿಂದ ಲೋಕವನ್ನು ನೋಡುವ ಮಾದರಿ ರೂಪಿಸಿದ್ದಾರೆ. ಈ ಪ್ರಯೋಗದಲ್ಲಿ ಮಕ್ಕಳಿಂದ ಈತನಕ 25 ನಾಟಕಗಳನ್ನು ಮಾಡಿಸಿದ್ದಾರೆ. ಸಂತೋಷ್ ಅವರು ‘ಸನಿಮಾತ್ಮೆ’ ಮತ್ತು ‘ಗಾಯ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳಿಗಾಗಿಯೇ ‘ಹುಲಿಯಜ್ಜ’, ‘ತಿಕ್ಕಲು ರಾಜ ತಿರಬೋಕಿ ರಾಜ್ಯ’, ‘ಭೂಮಿಗೆ ಜ್ವರ ಬಂದಿದೆ’, ‘ಜಟ್ರೋಫ ಎಂಬ ವರ’, ‘ಮಾಯದ ಡಬ್ಬಿ’, ‘ಪ್ಲಾಸ್ಟಿಕ್ ರಾಕ್ಷಸ’, ‘ಕಾಮನಬಿಲ್ಲಿನ ಸೈನಿಕರು’, ‘ಕಪ್ಪು ವಜ್ರ’ ನಾಟಕಗಳನ್ನು ಮಾಡಿಸಿದ್ದಾರೆ.

ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಶಾಲಾ ಮಕ್ಕಳ ಬರಹಗಳನ್ನೊಳಗೊಂಡ “ಹೆಮ್ಮರ” ಕೈಬರಹದ ಮಾಸಿಕವನ್ನು ಸಂತೋಷ್‌ರವರು ಬಹಳ ವರ್ಷ ಪ್ರಕಟಿಸಿದ್ದಾರೆ. ಅದು ಮಕ್ಕಳ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಲು, ಮಕ್ಕಳಲ್ಲಿ ಓದಲು, ಬರೆಯಲು ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಸ್ವೀಡನ್‌ನ 16 ವರ್ಷದ ಶಾಲಾ ಬಾಲಕಿ ಗ್ರೇಟಾ ಥನ್ಬರ್ಗ್ ಹವಾಮಾನ ವೈಪರೀತ್ಯ ಕಂಡು 2018 ರಲ್ಲಿ ‘ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೆಟ್/ ಪ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನ ಆರಂಭಿಸಿದಳು. ಸೆಪ್ಟಂಬರ್ 23 ರಂದು ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ‘ನಿಮಗೆಷ್ಟು ಧೈರ್ಯ’? ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ ಎಂದು ಜಾಗತಿಕ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಳು. ಗ್ರೇಟಾ ಪ್ರಭಾವದಿಂದ ಸಂತೋಷ್ ತಮ್ಮ ಶಾಲೆಯ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ ‘ನಾಳೆಗಳು ನಮ್ಮದು’ ಎನ್ನುವ ಧ್ಯೇಯವಾಕ್ಯದೊಂದಿಗೆ ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನವನ್ನು ಆರಂಭಿಸಿದರು. ಉತ್ಪಾದಕ ಕಂಪನಿಗಳಿಗೇ ಅವರ ಪ್ಲಾಸ್ಟಿಕ್ ಕಸವನ್ನು ಪೋಸ್ಟ್ ಮಾಡುವ ವಿಶಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಹೆಗ್ಗಡನಳ್ಳಿ ಮಕ್ಕಳು ರಾಜ್ಯವ್ಯಾಪಿ ಗಮನ ಸೆಳೆಯುತ್ತಿದ್ದಾರೆ. ಇದು ಇಡೀ ದೇಶಕ್ಕೆ ಮಾದರಿಯಾಗಿದೆ.

ಸಂತೋಷ್ ಒಳ್ಳೆಯ ಕಥೆಗಾರ ಕೂಡ. ಅವರ ‘ಕೊರಬಾಡು’ ಕಥಾಸಂಕಲನ ಭಿನ್ನ ಪ್ರಯೋಗ. ಅಷ್ಟು ಚರ್ಚೆಗೆ ಬಾರದ ಈ ಸಂಕಲನದಲ್ಲಿ ದೇವನೂರು ಮಾದರಿಯ ಕಥನ ಶೈಲಿಯನ್ನು ಅನುಕರಿಸುತ್ತಲೇ ಅದನ್ನು ಮೀರಲು ಪ್ರಯತ್ನಿಸಲಾಗಿದೆ. ಬಹುಶಃ ದೇವನೂರೋತ್ತರ ನಂಜನಗೂಡಿನ ಜನರ ನುಡಿಗಟ್ಟನ್ನು ಸಂತೋಷ್ ಅವರ ಕತೆಗಳಲ್ಲಿ ಕಾಣಬಹುದು. ಕಥನ ಶೈಲಿಯಲ್ಲಿಯೂ ದೇವನೂರರ ಮಾದರಿಯನ್ನು ಹೊಸದಾಗಿ ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಸಂತೋಷ್ ನಾಟಕದ ಹಿನ್ನೆಲೆಯವರಾದ ಕಾರಣ ಈ ಕತೆಗಳಲ್ಲಿನ ನಾಟಕೀಯ ಗುಣ ವಿಶಿಷ್ಟವಾಗಿ ಮೂಡಿಬಂದಿದೆ. ಹೊಸ ತಲೆಮಾರಿನ ಬರಹಗಾರರು ಓದಲೇಬೇಕಾದ ಕಥಾ ಸಂಕಲನವಿದು. ಹೀಗೆ ಸಂತೋಷ್ ತನ್ನದೇ ಲೋಕದಲ್ಲಿ ನಡೆಸುತ್ತಿರುವ ಕ್ರಿಯಾಶೀಲ ಚಟುವಟಿಕೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಮ್ಮೂರ ಸಂತೋಷ್ ಗುಡ್ಡಿಯಂಗಡಿಯವರ ಕುರಿತು ಹೆಮ್ಮೆಯೆನಿಸುತ್ತದೆ. ಲೇಖನಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...