Homeಮುಖಪುಟದೇಶದಲ್ಲಿ ಆಹಾರಗಳ ದಾಸ್ತಾನು ಸಾಕಷ್ಟಿದೆ, ಆದರೂ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ!

ದೇಶದಲ್ಲಿ ಆಹಾರಗಳ ದಾಸ್ತಾನು ಸಾಕಷ್ಟಿದೆ, ಆದರೂ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ!

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣಕ್ಕಾಗಿ ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಬಹಳಷ್ಟು ಬಡವರು ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳು ಸಿಗದೇ ಸಂಕಷ್ಟದಲ್ಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ಮಧ್ಯೆ ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಹೇಳಿಕೊಳ್ಳಲು ಸರ್ಕಾರ ಹೆಣಗಾಡುತ್ತಿದೆ. ಹಾಗಾದರೆ ವಾಸ್ತವವೇನು? ಭಾರತದಲ್ಲಿನ ಆಹಾರದ ಪ್ರಮಾಣವೆಷ್ಟು? ಹಸಿದವರ ಸಂಖ್ಯೆಯೆಷ್ಟು ಎಂಬುದನ್ನು ಅರಿತುಕೊಳ್ಳಬೇಕಿದೆ.

ಮಾರ್ಚ್ ನಲ್ಲಿ ಭಾರತದ ಆಹಾರ ನಿಗಮ ( FCI) ದಲ್ಲಿನ ದಾಸ್ತಾನು ಸುಮಾರು 770 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಇದು FCI ನ ಈ ಹಿಂದಿನ ಕಾಪು ದಾಸ್ತಾನು 210 ಲಕ್ಷ ಟನ್ ಗಿಂತ ಮೂರು ಪಟ್ಟು ಹೆಚ್ಚು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಹೆಚ್ಚುವರಿ ಆಹಾರ ಧಾನ್ಯಗಳ ಬಗ್ಗೆ ಹೇಳಿದ್ದಾರೆ.

“ಗೊಡೌನ್‌ಗಳಲ್ಲಿ ನಮಗೆ ಆಹಾರ ಧಾನ್ಯದ ದಾಸ್ತಾನು ಕೊರತೆಯಿಲ್ಲ ಮತ್ತು ಅಗತ್ಯವಿರುವದಕ್ಕಿಂತ ಎರಡು ಪಟ್ಟು ಹೆಚ್ಚು ಸಂಗ್ರಹವಿದೆ” ಎಂದು ಪಾಸ್ವಾನ್ ಹೇಳಿದ್ದರು.

ಈ ವರ್ಷ, ಭಾರತವು ಪ್ರಮುಖ ಚಳಿಗಾಳದ ಬೆಳೆಯಾದ 106.21 ಮಿಲಿಯನ್ ಟನ್ ಗೋಧಿ ಕೊಯ್ಲು ಮಾಡಲು ಸಜ್ಜಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ಸರ್ಕಾರದ ಎರಡನೇ ಮುಂಗಡ ಅಂದಾಜಿನ ಪ್ರಕಾರ, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಒಟ್ಟು ಚಳಿಗಾಳದ ಆಹಾರ ಧಾನ್ಯಗಳನ್ನು 149.60 ಮಿಲಿಯನ್ ಟನ್ ಎಂದು ನಿರೀಕ್ಷಿಸಲಾಗಿದೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 4.10 ರಷ್ಟು ಹೆಚ್ಚಾಗಿದೆ.

“ಇದು ಹುಚ್ಚು. ಭಾರತದಲ್ಲಿ ಅಂತಹ ಶೇಖರಣಾ ಮಟ್ಟಗಳು ಎಂದಿಗೂ ಇರಲಿಲ್ಲ. FCI ಗೆ ಆ ಮಟ್ಟಿನ ಶೇಖರಣಾ ಸಾಮರ್ಥ್ಯವಿಲ್ಲ” ಎಂದು ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಜ್ಞಾನಿ ಜೀನ್ ಡ್ರೀಜ್ ಹೇಳಿದ್ದಾರೆ.

ಆಹಾರ ಮತ್ತು ವ್ಯಾಪಾರ ನೀತಿ ವಿಶ್ಲೇಷಕ ದೇವಿಂದರ್ ಶರ್ಮಾ “ಅಂದಾಜಿನ ಪ್ರಕಾರ ಜುಲೈವರೆಗೆ ಆಹಾರ ದಾಸ್ತಾನು ಇರುವ ಕಾರಣದಿಂದಾಗಿ ಭಾರತವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸುರಕ್ಷಿತ ಸ್ಥಾನದಲ್ಲಿದೆ” ಎಂದು ಹೇಳಿದ್ದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

“ಕನಿಷ್ಠ ಒಂದು ವರ್ಷದವರೆಗೆ ಇಡೀ ರಾಷ್ಟ್ರಕ್ಕೆ ಆಹಾರ ಸರಬರಾಜು ಮಾಡುವ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ. ಈ ರೀತಿಯಾಗಿರದಿದ್ದರೆ ನಾವು ಎರಡು ವಿಷಯಗಳ ವಿರುದ್ಧ ಹೋರಾಡುತ್ತಿದ್ದೆವು, ಒಂದು ಸಾಂಕ್ರಾಮಿಕ ಮತ್ತು ಇನ್ನೊಂದು ಹಸಿವು” ಎಂದು ಅವರು ವಿವರಿಸಿದರು.

ಆದರೆ ದುರದೃಷ್ಟವಶಾತ್, ಆಹಾರ ದಾಸ್ತಾನಿನಲ್ಲಿ ಈ ಹಿಂದಿನ ಕಾಪು ದಾಸ್ತಾನು ಇದ್ದ ಹೊರತಾಗಿಯೂ ಭಾರತ ಇನ್ನೂ ಎರಡು ವಿಷಯಗಳ ವಿರುದ್ಧ ಹೋರಾಡುತ್ತಿದೆ ಎಂದು ಅವರು ಹೇಳಿದರು. “ನಾವು ಆಹಾರ ದಾಸ್ತಾನು ಹೊಂದಿರುವಾಗ ಯಾಕೆ ಚಿಂತೆ ಮಾಡಬೇಕಾಗಿದೆ? ಈ ದೇಶದಲ್ಲಿ ಹಸಿವು ಬರದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ”ಎಂದು ಶರ್ಮಾ ಹೇಳಿದ್ದಾರೆ.

ಅಸಾಧಾರಣ ಬಿಕ್ಕಟ್ಟುಗಳಿಗೆ ಅಸಾಧಾರಣ ಪರಿಹಾರಗಳು ಬೇಕಾಗುತ್ತವೆ… ಹಸಿವಿನಿಂದ ಯಾರು ಬಳಲುತ್ತಿದ್ದಾರೋ ಅವರಿಗೆ ಈ ದಾಸ್ತಾನುಗಳನ್ನು ತೆರೆಯಿರಿ. ರಾಷ್ಟ್ರವನ್ನು ಪೋಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ದೇವಿಂದರ್ ಶರ್ಮಾ ಹೇಳಿದ್ದಾರೆ.

ಮುಖ್ಯವಾಗಿ ಆಹಾರ-ಸಬ್ಸಿಡಿ ಅಕೌಂಟಿಂಗ್‌ಗೆ ಸಂಬಂಧಿಸಿರುವ ಅಸಂಗತತೆಯು, ಪರಿಸ್ಥಿತಿಯನ್ನು ನಿಭಾಯಿಸುವಾಗ ಕೇಂದ್ರದ ಮೇಲೆ ಪರಿಣಾಮ ಬೀರುವ ವಿವಿಧ ಸಮಸ್ಯೆಗಳನ್ನು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ವಿವರಿಸಿದ್ದಾರೆ. “ಆರ್ಥಿಕ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೆಚ್ಚುವರಿ ದಾಸ್ತಾನುಗಳನ್ನು ಲೋಡ್ ಮಾಡಿ ಅದನ್ನು ರಾಜ್ಯಕ್ಕೆ ಕೊಡುವುದರಿಂದ ಏನೂ ಖರ್ಚಾಗುವುದಿಲ್ಲ” ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರಲ್ಲದೆ, “ನಾವು ಶೂನ್ಯವಾಗಿರುವ ಆರ್ಥಿಕ ವೆಚ್ಚದ ಬಗ್ಗೆ ಯೋಚಿಸಬಾರದು. ಸಾರಿಗೆಯಲ್ಲಿ ಸಣ್ಣ ಆರ್ಥಿಕ ವೆಚ್ಚವಿರಬಹುದು, ” ಎಂದಿದ್ದಾರೆ.

ಏಪ್ರಿಲ್ 13 ರಂದು ಪಾಸ್ವಾನ್ ಅವರು ಲಾಕ್ ಡೌನ್ ಮಾಡುವ ಮೊದಲು ಸುಮಾರು 30 ಲಕ್ಷ ಟನ್ ಆಹಾರ ಧಾನ್ಯವನ್ನು ರೈಲ್ವೆ ಮೂಲಕ ಲೋಡ್ ಮಾಡಿ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಜ್ಞರು ಆಹಾರ ಧಾನ್ಯಗಳ ಸಾಗಣೆಯು ಸಮಸ್ಯೆಯಲ್ಲ ಎಂದು ಸೂಚಿಸಿದ್ದಾರೆ, ವಿಶೇಷವಾಗಿ ಈಗ ಸರಕುಗಳ ಚಲನೆ ತೆರೆದುಕೊಂಡಿದೆ. ನಿಜವಾದ ಕಾಳಜಿ ಪಡಿತರ ಚೀಟಿ ಇಲ್ಲದವರ ಬಗ್ಗೆ, ವಿಶೇಷವಾಗಿ ಸಿಕ್ಕಿಬಿದ್ದ ಸಾವಿರಾರು ವಲಸೆ ಕಾರ್ಮಿಕರ ಬಗ್ಗೆ ಎಂದಿದ್ದಾರೆ.

ವಾಸ್ತವವೆಂದರೆ ಹೆಚ್ಚಿನ ಸಂಖ್ಯೆಯ ಜನರು ಇನ್ನೂ ಪಡಿತರ ಚೀಟಿಗಳನ್ನು ಹೊಂದಿಲ್ಲ. ಈ ಜನರು ಹೊಸ ಕುಟುಂಬಗಳನ್ನು ಹೊಂದಿರಬಹುದು, ಕೆಲಸದ ಹುಡುಕಾಟದಲ್ಲಿ ಇತರ ನಗರಗಳಿಗೆ ವಲಸೆ ಹೋಗಿರಬಹುದು ಅಥವಾ ಅವರ ಆಧಾರ್ ಕಾರ್ಡ್‌ಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗದ ಕಾರಣ ಅವರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಿಂದಾಗಿ ಹಲಾವಾರು ಜನರು ತಮ್ಮ ಸ್ಥಿರವಾದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಿಕ್ಕಿಬಿದ್ದವರಿಗೆ ರಾಜ್ಯ ವಿಪತ್ತು ನಿಧಿಯಿಂದ ಆಹಾರವನ್ನು ನೀಡಬೇಕು ಎಂದು ಪಾಸ್ವಾನ್ ಹೇಳಿದ್ದರು. “ರಾಜ್ಯ ಸರ್ಕಾರಗಳು ಎಷ್ಟು ಆಹಾರ ಧಾನ್ಯವನ್ನು ತೆಗೆದುಕೊಳ್ಳಬಹುದು – ಗೋಧಿಗೆ ಕಿಲೋಗೆ 21 ರೂ ಮತ್ತು ಅಕ್ಕಿಗೆ 22 ರೂ. – ಮತ್ತು ಜನರಿಗೆ ಮತ್ತಷ್ಟು ವಿತರಿಸಬಹುದು” ಎಂದು ಸಚಿವರು ಹೇಳಿದ್ದರು. ಮೂರು ತಿಂಗಳವರೆಗೆ ಪ್ರತಿ ಕೆ.ಜಿ.ಗೆ 2 ಅಥವಾ 3 ರೂ.ಗಳಂತೆ ವಿತರಿಸಲಾಗುವ ಉಚಿತ ಪಡಿತರವನ್ನು ನೀಡುವ ಸರ್ಕಾರದ ನಿರ್ಧಾರವನ್ನೂ ಅವರು ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವರು ಉಲ್ಲೇಖಿಸಿದ ಬೆಲೆ ಮಾರುಕಟ್ಟೆ ಬೆಲೆಗಿಂತ ಕೆಲವೇ ರೂಪಾಯಿಗಳಷ್ಟಿದೆ ಎಂದು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಗಮನಸೆಳೆದದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಂತೆಯೇ ಸಂಪನ್ಮೂಲಗಳನ್ನು ಹೊಂದಿರದ ಕಾರಣ ರಾಜ್ಯ ಸರ್ಕಾರಗಳು ಅದನ್ನು ಪಾವತಿಸುವುದಿಲ್ಲ.

ಸರ್ಕಾರವು ಕನಿಷ್ಠ ಆರು ತಿಂಗಳವರೆಗೆ ತುರ್ತು ಪಡಿತರ ಚೀಟಿಗಳನ್ನು ಒದಗಿಸಬೇಕು ಮತ್ತು ಮುಂದಿನ 12 ತಿಂಗಳುಗಳ ತಾತ್ಕಾಲಿಕ ಕ್ರಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಕೊಳೆಗೇರಿಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು ಎಂದು ಜೀನ್ ಡ್ರೀಜ್ ಸಲಹೆ ನೀಡಿದರು.

“ಇದು ಆಹಾರ ದಾಸ್ತಾನುಗಳಲ್ಲಿ ಸಣ್ಣ ಪರಿಣಾಮ ಮಾತ್ರ ಮಾಡುತ್ತದೆ. ಅಸ್ತಿತ್ವದಲ್ಲಿರುವ ಹಂಚಿಕೆಗೆ ಹೋಲಿಸಿದರೆ ಇದಕ್ಕೆ ಹೆಚ್ಚುವರಿ 200 ಲಕ್ಷ ಟನ್ ಆಹಾರ ಧಾನ್ಯಗಳು ಬೇಕಾಗುತ್ತವೆ. ಇದು ಹೆಚ್ಚುವರಿಯಾಗಿ ಇರುವ ಆಹಾರ ದಾಸ್ತಾನಿನ ಅರ್ಧದಷ್ಟು ಆಗುವುದಿಲ್ಲ” ಎಂದು ಡ್ರೋಜ್ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...