Homeಚಳವಳಿಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು... : ಭಾಗ -2

ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

- Advertisement -
- Advertisement -

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್ ಕೋಲ್ಪೆ

ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಚುನಾಯಿತ ಸಂವಿಧಾನ ಸಭೆಯು ಅಂಗೀಕರಿಸಿತು. ಅದು ಜನವರಿ 26, 1950ರಲ್ಲಿ ಜಾರಿಗೆ ಬಂತು. ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಇದರ ನೇತೃತ್ವ ವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ನೆನಪಿಸಿಕೊಳ್ಳುತ್ತೇವೆ. ಆದರೆ, ಸಂವಿಧಾನ ಸಭೆಯಲ್ಲಿದ್ದ ಆ ಕಾಲದ ಕೇವಲ 15 ಮಹಿಳೆಯರನ್ನು ನಾವು ಸಂಪೂರ್ಣ ಮರೆತುಬಿಟ್ಟಿದ್ದೇವೆ. ಅವರಲ್ಲಿ ಐವರ ಕಿರುಪರಿಚಯವನ್ನು ಈ ಮೊದಲ ಭಾಗದಲ್ಲಿ ನೀಡಲಾಗಿತ್ತು. ಈ ಎರಡನೆಯ ಭಾಗದಲ್ಲಿ ಇನ್ನೂ ಐವರು ಸಾಧಕಿಯರ ಪರಿಚಯ ನೀಡಲಾಗಿದೆ.

ಇದನ್ನೂ ಓದಿ: ನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

6. ಕಮಲಾ ಚೌಧರಿ

ಕಮಲಾ ಚೌಧರಿಯವರು ಲಕ್ನೋದ ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ, ತನ್ನ ಶಿಕ್ಷಣ ಮುಂದುವರಿಸುವುದು ಅವರಿಗೆ ಒಂದು ಸವಾಲೇ ಆಗಿತ್ತು. ಅದಕ್ಕಾಗಿ ಸಾಮ್ರಾಜ್ಯವಾದಿ ಸರಕಾರಕ್ಕೆ ನಿಷ್ಟವಾಗಿದ್ದ ತನ್ನ ಕುಟುಂಬದಿಂದ ದೂರ ಸರಿದು ಅವರು ರಾಷ್ಟ್ರೀಯವಾದಿ ಕಾಂಗ್ರೆಸ್‌ಗೆ ಸೇರಿದರು. ಅವರು ಗಾಂಧೀಜಿಯವರು 1930ರಲ್ಲಿ ಆರಂಭಿಸಿದ ನಾಗರಿಕ ಕಾನೂನುಭಂಗ ಚಳುವಳಿಯಲ್ಲಿ ಸಕ್ರಿಯ ಪಾಲುದಾರರಾಗಿದ್ದರು.

ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ 54ನೇ ಅಧಿವೇಶನದಲ್ಲಿ ಉಪಾಧ್ಯಕ್ಷೆಯಾಗಿದ್ದರು. ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಸಂಸತ್ ಸದಸ್ಯೆಯಾಗಿ ಚುನಾಯಿತರಾದರು. ಕಮಲಾ ಚೌಧರಿಯವರು ಪ್ರಖ್ಯಾತ ಕತೆಗಾರ್ತಿಯೂ ಹೌದು. ಅವರ ಕತೆಗಳು ಸಾಮಾನ್ಯವಾಗಿ ಮಹಿಳೆಯರ ಆಂತರಿಕ ಲೋಕವನ್ನು ಅಥವಾ ಆಧುನಿಕ ಭಾರತದ ಹುಟ್ಟನ್ನು ಚಿತ್ರಿಸುತ್ತಿದ್ದವು.

7. ಲೀಲಾ ರಾಯ್

ಲೀಲಾ ರಾಯ್ ಅವರು ಅಸ್ಸಾಂನ ಗೋಪಾಲಪುರದಲ್ಲಿ 1900ರ ಆಕ್ಟೋಬರ್‌ನಲ್ಲಿ ಜನಿಸಿದರು. ಅವರ ತಂದೆ ಉಪ ಮ್ಯಾಜಿಸ್ಟ್ರೇಟ್ (ಆ ಕಾಲದ ಜಿಲ್ಲಾಧಿಕಾರಿ) ಆಗಿದ್ದು ರಾಷ್ಟ್ರೀಯವಾದಿ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದರು. ಅವರು 1921ರಲ್ಲಿ ಬೆಥನಿ ಕಾಲೇಜಿನಿಂದ ಪದವಿ ಪಡೆದು ಅಖಿಲ ಭಾರತ ವುಮನ್ಸ್ ಸಫರೇಜ್ (ಮಹಿಳಾ ಮತದಾನ ಹಕ್ಕು) ಕಮಿಟಿಯ ಸಹಾಯಕ ಕಾರ್ಯದರ್ಶಿಯಾದರು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಅನೇಕ ಹೋರಾಟಗಳನ್ನು ಸಂಘಟಿಸಿದರು.

1923ರಲ್ಲಿ ತನ್ನ ಗೆಳೆಯರ ಜೊತೆ ಸೇರಿ ‘ದೀಪಾಲಿ ಸಂಘ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿತು. ಅವು ಸ್ವಾತಂತ್ರ್ಯ ಕುರಿತ ರಾಜಕೀಯ ಚರ್ಚಾ ಕೇಂದ್ರಗಳಾದವು ಮತ್ತು ಅದರಲ್ಲಿ ಅನೇಕ ಪ್ರಸಿದ್ಧ ನಾಯಕರು ಭಾಗವಹಿಸುತ್ತಿದ್ದರು. ನಂತರ 1926ರಲ್ಲಿ ಅವರು ಡಾಕ್ಕಾ ಮತ್ತು ಕೋಲ್ಕತ್ತಾದಲ್ಲಿ ‘ಛಾತ್ರಿ ಸಂಘ’ (ಛಾತ್ರಿ ಎಂದರೆ ಬಂಗಾಳಿ ಮತ್ತು ಅಸ್ಸಾಮಿಯಲ್ಲಿ ವಿದ್ಯಾರ್ಥಿನಿ) ಸ್ಥಾಪಿಸಿದರು. ನಂತರ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯ ಪಾತ್ರ ವಹಿಸಿದ ‘ಡಾಕ್ಕಾ ಮಹಿಳಾ ಸತ್ಯಾಗ್ರಹ ಸಂಘ’ ಸ್ಥಾಪಿಸಿದರು. ನಂತರ ಅವರು ಕವಿ ರವೀಂದ್ರನಾಥ ಠಾಗೋರ್ ಅವರ ಆಶೀರ್ವಾದ ಪಡೆದಿದ್ದ ‘ಜಯಶ್ರೀ’ ಎಂಬ ಪತ್ರಿಕೆಯ ಸಂಪಾದಕಿಯಾದರು.

1937ರಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿ, ಮರುವರ್ಷ ಬಂಗಾಳ ಪ್ರಾಂತ್ಯದ ಕಾಂಗ್ರೆಸ್ ಮಹಿಳಾ ಸಂಘಟನೆ ಸ್ಥಾಪಿಸಿದರು. ಅವರು ಸುಭಾಷ್‌ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಮಹಿಳಾ ಉಪಸಮಿತಿಯ ಸದಸ್ಯೆಯಗಿದ್ದು, 1940ರಲ್ಲಿ ಬೋಸ್ ಅವರು ಜೈಲಿಗೆ ಹೋದಾಗ, ಅವರ ‘ಫಾರ್ವರ್ಡ್ ಬ್ಲಾಕ್’ ವಾರಪತ್ರಿಕೆಯ ಸಂಪಾದಕಿಯಾದರು. ಭಾರತವನ್ನು ಬಿಟ್ಟುಬಿಡುವ ಮೊದಲು ಬೋಸ್ ಅವರು ಪಕ್ಷದ ಎಲ್ಲಾ ಚಟುವಟಿಕೆಗಳ ಜವಾಬ್ದಾರಿಯನ್ನು ಲೀಲಾ ಮತ್ತವರ ಗಂಡನಿಗೆ ವಹಿಸಿದ್ದರು.

1947ರಲ್ಲಿ ಅವರು ಪಶ್ಚಿಮ ಬಂಗಾಳದಲ್ಲಿ ‘ಜಾತೀಯ ಮಹಿಳಾ ಸಂಗಾತಿ’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. 1960ರಲ್ಲಿ ಫಾರ್ವರ್ಡ್ ಬ್ಲಾಕ್ (ನೇತಾಜಿ ಬಣ) ಮತ್ತು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ (ಪಿಎಸ್ಪಿ) ವಿಲಯನಗೊಂಡು ಹೊಸ ಪಕ್ಷ ಸ್ಥಾಪಿಸಿದಾಗ ಅದರ ಅಧ್ಯಕ್ಷೆಯಾದರು. ಆದರೆ, ಅದರ ಕಾರ್ಯಶೈಲಿಯಿಂದ ಭ್ರಮನಿರಸನಗೊಂಡರು.

8. ಮಾಲತಿ ಚೌಧರಿ

ಮಾಲತಿ ಚೌಧರಿಯವರು 1904ರಲ್ಲಿ ಈಗ ಬಾಂಗ್ಲಾದೇಶ ಎನಿಸಿರುವ ಪೂರ್ವ ಬಂಗಾಳದಲ್ಲಿ ಒಂದು ಪ್ರತಿಷ್ಟಿತ ಕುಟುಂಬದಲ್ಲಿ ಹುಟ್ಟಿದರು. 1921ರಲ್ಲಿ ಹದಿನಾರರ ಹರೆಯದಲ್ಲಿ ಅವರನ್ನು ಶಿಕ್ಷಣಕ್ಕಾಗಿ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನಕ್ಕೆ ಕಳುಹಿಸಲಾಯಿತು. ಅಲ್ಲಿ ಅವರಿಗೆ ‘ವಿಶ್ವಭಾರತಿ’ಯಲ್ಲಿ ಪ್ರವೇಶ ಸಿಕ್ಕಿತು. ಅವರು ನಂತರದಲ್ಲಿ ಒಡಿಶಾದ ಮುಖ್ಯಮಂತ್ರಿಯಾದ ನಭಕೃಷ್ಣ ಚೌಧರಿಯವರನ್ನು ಮದುವೆಯಾಗಿ 1927ರಲ್ಲಿ ಒಡಿಶಾಗೆ ಹೋದರು. ಉಪ್ಪಿನ ಸತ್ಯಾಗ್ರಹದ ವೇಳೆ ಮಾಲತಿ ಚೌಧರಿ ಮತ್ತವರ ಪತಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಅವರಿಬ್ಬರೂ ಸತ್ಯಾಗ್ರಹಕ್ಕೆ ಪೂರಕ ವಾತಾವರಣ ನಿರ್ಮಿಸಲು ಸಾಮಾನ್ಯ ಜನರ ಜೊತೆ ಸಂಪರ್ಕ ಬೆಳೆಸಿ, ಶಿಕ್ಷಣ ನೀಡಿದರು.

ಚಿತ್ರಕೃಪೆ: ವುಮೆನ್‌ ಒಡಿಸ್ಸಾ

1933ರಲ್ಲಿ ಅವರು, ಪತಿಯೊಂದಿಗೆ ಸೇರಿ ‘ಉತ್ಕಲ ಕಾಂಗ್ರೆಸ್ ಸಮಾಜವಾದಿ ಕರ್ಮಿ ಸಂಘ’ ಎಂಬ ಸಂಘಟನೆ ಸ್ಥಾಪಿಸಿದರು. ಮುಂದೆ ಇದು ಅಖಿಲ ಭಾರತ ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿಯ ಒರಿಸ್ಸಾ ಘಟಕ ಎಂದು ಕರೆಯಲ್ಪಟ್ಟಿತು. 1934ರಲ್ಲಿ ಅವರು ಗಾಂಧೀಜಿಯವರು ಒಡಿಶಾದಲ್ಲಿ ನಡೆಸಿದ ಪ್ರಖ್ಯಾತ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಅವರು ನಂತರ ‘ಬಾಜಿರಾವುತ್ ಛಾತ್ರಾವಾಸ್’ (ಬಾಜಿರಾವುತ್ ಅಂದರೆ ಹಿಂದುಳಿದ, ಬದಿಗೆ ಸರಿಸಲ್ಪಟ್ಟ, ಛಾತ್ರಾವಾಸ್ ಎಂದರೆ ವಿದ್ಯಾರ್ಥಿನಿಲಯ) ಎಂಬ ಸಂಸ್ಥೆ ಸೇರಿದಂತೆ ಕಡೆಗಣಿಸಲ್ಪಟ್ಟ ವರ್ಷಗಳಿಗೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು.  ಅವರು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲುಪಾಲಾದರು.

9. ಪೂರ್ಣಿಮಾ ಬ್ಯಾನರ್ಜಿ

ಪೂರ್ಣಿಮಾ ಬ್ಯಾನರ್ಜಿಯವರು ಅಲಹಾಬಾದ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿದ್ದರು. 1930 ಮತ್ತು 1940ರ ದಶಕಗಳಲ್ಲಿ ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿ ಮಹಿಳೆಯರ ಜಾಲದಲ್ಲಿ ಅವರೂ ಒಬ್ಬರಾಗಿದ್ದರು.

ಅವರು ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಆಂದೋಲನಗಳಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. ಪೂರ್ಣಿಮಾ ಬ್ಯಾನರ್ಜಿ ಅವರಲ್ಲಿ ಎದ್ದು ಕಾಣುವ ವಿಷಯವೆಂದರೆ ಸಂವಿಧಾನ ರಚನಾ ಸಭೆಯಲ್ಲಿ ಅವರು ಮಾಡಿದ ಭಾಷಣಗಳು. ಅವರು ಅವುಗಳಲ್ಲಿ ಸಮಾಜವಾದಕ್ಕೆ ದೃಢವಾದ ನಿಷ್ಟೆ ವ್ಯಕ್ತಪಡಿಸಿದ್ದರು. ಅಲಹಾಬಾದ್ ನಗರ ಸಮಿತಿಯ ಸದಸ್ಯೆಯಾಗಿ ಅವರು ಕಾರ್ಮಿಕ ಮತ್ತು ರೈತ ಸಂಘಗಳನ್ನು ಸಂಘಟಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚುಹೆಚ್ಚಾಗಿ ಗ್ರಾಮೀಣ ಜನತೆಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುತ್ತಿದ್ದರು.

10. ರಾಜಕುಮಾರಿ ಅಮೃತಾ ಕೌರ್

ಅಮೃತಾ ಕೌರ್ ಅವರು 1889ರ ಫೆಬ್ರವರಿ 2ರಂದು ಲಕ್ನೋದಲ್ಲಿ ಜನಿಸಿದರು. ಅವರು ಭಾರತದ ಮೊದಲ ಆರೋಗ್ಯ ಮಂತ್ರಿಯಾಗಿದ್ದು, ಮುಂದಿನ ಹತ್ತು ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿದರು. ಕಪೂರ್ತಲಾದ ರಾಜನ ಮಗನಾದ ಹರ್‌ನಾಮ್ ಸಿಂಗ್ ಅವರ ಮಗಳಾದ ಅಮೃತಾ ಕೌರ್, ಇಂಗ್ಲೆಂಡ್‌ನ ಡೋರ್ಸೆಟ್‌ನಲ್ಲಿರುವ ಶೇರ್ಬೋರ್ನ್ ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿತವರು. ಆದರೆ, ಎಲ್ಲವನ್ನೂ ಬಿಟ್ಟು ಮಹಾತ್ಮಾ ಗಾಂಧೀಜಿಯವರ ಕಾರ್ಯದರ್ಶಿಯಾಗಿ 16 ವರ್ಷ ದುಡಿದರು.

ಚಿತ್ರಕೃಪೆ: ಇಂಡಿಯಾ ಟುಡೆ

ಜವಾಹರಲಾಲ್ ನೆಹರೂ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿದ್ದು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯ ಸ್ಥಾಪಕರು ಇವರು ಮತ್ತು ಅದರ ಸ್ವಾಯತ್ತತೆಗಾಗಿ ಹೋರಾಡಿದವರು. ಇಂದು ಎಲ್ಲಾ ಪಕ್ಷಗಳ ರಾಜಕಾರಣಿಗಳು ಚಿಕಿತ್ಸೆ ಪಡೆಯುವ ಈ ಸಂಸ್ಥೆ ನೆಹರೂ ಏನು ಮಾಡಿದರು ಎಂದು ಕೇಳುವವರಿಗೆ ಅರೋಗ್ಯಕರ ಉತ್ತರವಾಗಿ ನಿಂತಿದೆ. ಮಹಿಳಾ ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆಗಳಲ್ಲಿ ಅವರ ಭಾಗವಹಿಸುವಿಕೆ ಬಗ್ಗೆ ಕೌರ್ ಅತಿಯಾದ ಕಾಳಜಿ ಹೊಂದಿದ್ದರು. ಇಂಡಿಯನ್ ಟ್ಯೂಬರ್‌ಕ್ಯುಲೋಸಿಸ್ ಅಸೋಸಿಯೇಷನ್ ( ಕ್ಷಯರೋಗ ಸಂಸ್ಥೆ) ಮತ್ತು ಕೇಂದ್ರ ಕುಷ್ಠರೋಗ ಸಂಶೋಧನಾ ಸಂಸ್ಥೆಯನ್ನೂ ಅವರ ಅಧಿಕಾರಾವಧಿಯಲ್ಲಿಯೇ ಸ್ಥಾಪಿಸಲಾಯಿತು. ಇವೆರಡೂ ರೋಗಗಳು ಭಾರತೀಯರನ್ನು ಅತ್ಯಂತ ಹೆಚ್ಚು ಕೊಲ್ಲುವ ರೋಗಗಳಾಗಿದ್ದವು. ಅವರು ಲೀಗ್ ಆಫ್ ರೆಡ್‌ಕ್ರಾಸ್ ಸೊಸೈಟೀಸ್ ಉಪಾಧ್ಯಕ್ಷೆ ಮತ್ತು ಸೈಂಟ್ ಜಾನ್ಸ್ ಅಂಬ್ಯುಲೆನ್ಸ್ ಸೊಸೈಟಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯೂ ಆಗಿದ್ದರು. 1964ರಲ್ಲಿ ಅವರು ನಿಧನ ಹೊಂದಿದಾಗ ದಿ ನ್ಯೂಯಾರ್ಕ್ ಟೈಮ್ಸ್ ಅವರನ್ನು “ತನ್ನ ದೇಶದ ಸೇವೆಯಲ್ಲಿ ತೊಡಗಿದ್ದ ರಾಜಕುಮಾರಿ” ಎಂದು ಬಣ್ಣಿಸಿತ್ತು.

(ಮುಂದುವರೆಯುವುದು)

ಇದನ್ನೂ ಓದಿ: 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...