Homeಚಳವಳಿನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

ನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

- Advertisement -
- Advertisement -

ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಚುನಾಯಿತ ಸಂವಿಧಾನ ಸಭೆಯು ಅಂಗೀಕರಿಸಿತು. ಅದು ಜನವರಿ 26, 1950ರಲ್ಲಿ ಜಾರಿಗೆ ಬಂತು. ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಸಂವಿಧಾನ ಸಭೆಯಲ್ಲಿದ್ದ 15 ಮಹಿಳೆಯರನ್ನು ನಾವು ಸಂಪೂರ್ಣ ಮರೆತುಬಿಟ್ಟಿದ್ದೇವೆ. ಅವರಲ್ಲಿ ಐವರ ಕಿರುಪರಿಚಯವನ್ನು ಈ ಮೊದಲ ಭಾಗದಲ್ಲಿ ನೀಡಲಾಗಿದೆ. 

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್ ಕೋಲ್ಪೆ

1. ಅಮ್ಮು ಸ್ವಾಮಿನಾಥನ್

ಅಮ್ಮು ಸ್ವಾಮಿನಾಥನ್ ಅವರು ಕೇರಳದ ಪಾಲಕ್ಕಾಡ್ ಜಿಲ್ಲೆಯ ಆನಕ್ಕರ ಎಂಬಲ್ಲಿ ಮೇಲ್ಜಾತಿಯ ಹಿಂದೂ ಕುಟುಂಬವೊಂದರಲ್ಲಿ ಜನಿಸಿದರು. ಅವರು 1917ರಲ್ಲಿ ಅನ್ನಿ ಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಮಾಲತಿ ಪಟವರ್ಧನ್, ದಾದಾಭೋಯ್ ಮತ್ತು ಅಂಬುಜಮ್ಮಾಳ್ ಅವರ ಜೊತೆ ಸೇರಿ ವುಮನ್ಸ್ ಇಂಡಿಯಾ ಅಸೋಸಿಯೇಷನ್ ಎಂಬ ಸಂಘಟನೆಯನ್ನು ಕಟ್ಟಿದರು.

ಚಿತ್ರಕೃಪೆ: ದಿಇಂಡಿಯನ್‌ ಎಕ್ಸ್‌ಪ್ರೆಸ್‌

ಡಾ. ಬಿ.ಆರ್. ಅಂಬೇಡ್ಕರ್ ಅವರು 24 ನವೆಂಬರ್ 1949ರಲ್ಲಿ ಕರಡು ಸಂವಿಧಾನವನ್ನು ಅಂಗೀಕರಿಸುವ ಗೊತ್ತುವಳಿಯನ್ನು ಮಂಡಿಸಿದಾಗ ಆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅಮ್ಮು ಸ್ವಾಮಿನಾಥನ್ ಅವರು, “ಭಾರತವು ತನ್ನ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೊಟ್ಟಿಲ್ಲ ಎಂದು ಹೊರಗಿನವರು ಹೇಳುತ್ತಿದ್ದರು. ಆದರೆ, ಭಾರತೀಯ ಜನರು ತಮ್ಮ ಸ್ವಂತ ಸಂವಿಧಾನವನ್ನು ರೂಪಿಸಿದಾಗ ಮಹಿಳೆಯರಿಗೆ ದೇಶದ ಯಾವುದೇ ನಾಗರಿಕನಿಗೆ ಇರುವಷ್ಟೇ ಸ್ವಾತಂತ್ರ್ಯವನ್ನು ನೀಡಿದ್ದಾರೆ ಎಂದು ನಾವೀಗ ಹೇಳಬಹುದು” ಎಂದು ಹೇಳಿದ್ದರು.

ಅವರು 1952ರಲ್ಲಿ ಲೋಕಸಭೆಗೆ ಮತ್ತು 1954ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಚಲನಚಿತ್ರ ಚಿತ್ರಗಳಲ್ಲಿ ಅತ್ಯಂತ ಆಸಕ್ತಿಯಿದ್ದ ಅವರು 1959ರಲ್ಲಿ  ಫೆಡರೇಷನ್ ಆಫ್ ಫಿಲ್ಮ್ ಸೊಸೈಟೀಸ್‌ನ ಉಪಾಧ್ಯಕ್ಷರಾದರು. ಆಗ ಸತ್ಯಜಿತ್ ರಾಯ್ ಅಧ್ಯಕ್ಷರಾಗಿದ್ದರು. ಅವರು ಸೆನ್ಸಾರ್ ಮಂಡಳಿ ಮತ್ತು ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ (1960-65) ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

2. ದಾಕ್ಷಾಯಣಿ ವೇಲಾಯುಧನ್

ದಾಕ್ಷಾಯಣಿ ವೇಲಾಯುಧನ್ ಅವರು 1912ರ ಜುಲೈ 4ರಂದು ಕೊಚ್ಚಿಯ ಬೋಲ್ಗಟ್ಟಿ ದ್ವೀಪದಲ್ಲಿ ಜನಿಸಿದರು. ಅತ್ಯಂತ ಅವಗಣಿತ ಪುಲಯ ಸಮುದಾಯದ ನಾಯಕಿಯಾಗಿದ್ದ ಅವರು ಈ ಸಮುದಾಯದ ಮೊದಲ ತಲೆಮಾರಿನ ವಿದ್ಯಾವಂತೆಯಾಗಿದ್ದು, ಈ ಸಮುದಾಯದಲ್ಲಿ ರವಕೆ ಧರಿಸಿದ ಮೊದಲ ಮಹಿಳೆ.

1945ರಲ್ಲಿ ದಾಕ್ಷಾಯಣಿ ಅವರನ್ನು ರಾಜ್ಯ ಸರಕಾರ ಕೊಚ್ಚಿ ವಿಧಾನ ಮಂಡಳಿಗೆ ನಾಮಕರಣ ಮಾಡಿತು. 1946ರಲ್ಲಿ ಅವರು ಸಂವಿಧಾನ ಸಭೆಗೆ ಆಯ್ಕೆಯಾದ ಮೊದಲ ಮತ್ತು ಏಕೈಕ ದಲಿತ ಮಹಿಳೆ ಎನಿಸಿದರು. ಸಂವಿಧಾನ ಸಭೆಯ ಚರ್ಚೆಗಳ ವೇಳೆ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ಅಂಬೇಡ್ಕರ್ ಪರವಾಗಿ ನಿಂತಿದ್ದರು.

3. ಬೇಗಂ ಐಝಾಝ್ ರಸೂಲ್

ಮಾಲೇರ್ ಕೋಟ್ಲಾದ ರಾಜಮನೆತನದಲ್ಲಿ ಹುಟ್ಟಿದ ಅವರು ಯುವ ಜಮೀನ್ದಾರ ನವಾಬ್ ಐಝಾಝ್ ರಸೂಲ್ ಅವರನ್ನು ಮದುವೆಯಾದರು. ಅವರು ಸಂವಿಧಾನ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ. 1935ರ ಭಾರತ ಸರಕಾರ ಕಾಯಿದೆ ಜಾರಿಗೆ ಬಂದಾಗ ಬೇಗಂ ಹಾಗೂ ಅವರ ಗಂಡ ಮುಸ್ಲಿಂ ಲೀಗ್ ಸೇರಿ ಚುನಾವಣಾ ರಾಜಕೀಯಕ್ಕೆ ಧುಮುಕಿದರು. 1937ರ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು.

ಚಿತ್ರಕೃಪೆ: ಎನ್‌ಡಿಟಿವಿ

1950ರಲ್ಲಿ ಭಾರತದಲ್ಲಿ ಮುಸ್ಲಿಂ ಲೀಗ್ ವಿಸರ್ಜನೆಗೊಂಡಾಗ ಬೇಗಂ ಐಝಾಝ್ ರಸೂಲ್ ಕಾಂಗ್ರೆಸ್ ಸೇರಿದರು. 1952ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು. ಅವರು 1969ರಿಂದ 1990ರ ತನಕವೂ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯೆಯಾಗಿದ್ದರು. 1971ರಿಂದ 1971ರ ತನಕ ಅವರು ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವೆಯಾಗಿದ್ದರು. 2000ದಲ್ಲಿ ಸಮಾಜಸೇವೆಗಾಗಿ ಅವರಿಗೆ ಪದ್ಮಭೂಷಣದ ಗೌರವ ಸಿಕ್ಕಿತು.

4. ದುರ್ಗಾಬಾಯಿ ದೇಶ್‌ಮುಖ್

ದುರ್ಗಾಬಾಯಿಯವರು 15 ಜುಲೈ 1909ರಲ್ಲಿ ರಾಜಮುಂದ್ರಿಯಲ್ಲಿ ಹುಟ್ಟಿದರು. 12ರ ಹರೆಯದಲ್ಲಿಯೇ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಆಂಧ್ರ ಕೇಸರಿ ಟಿ. ಪ್ರಕಾಶಂ ಅವರ ಜೊತೆ 1930ರ ಮೇಯಲ್ಲಿ ಮದ್ರಾಸ್ ನಗರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. 1936ರಲ್ಲಿ ಅವರು ಆಂಧ್ರ ಮಹಿಳಾ ಸಭಾವನ್ನು ಸ್ಥಾಪಿದರು. ಅದು ಒಂದೇ ದಶಕದ ಅವಧಿಯಲ್ಲಿ ಮದ್ರಾಸಿನಲ್ಲಿ  ಮಹಾನ್ ಶೈಕ್ಷಣಿಕ ಮತ್ತು ಸಮಾಜಸೇವಾ ಸಂಸ್ಥೆ ಎನಿಸಿಕೊಂಡಿತು.

ಚಿತ್ರಕೃಪೆ: ವಿಮೆನ್ಸ್‌ ವೆಬ್‌

ಅವರು ಕೇಂದ್ರೀಯ ಸಮಾಜ ಕಲ್ಯಾಣ ಮಂಡಳಿ, ರಾಷ್ಟ್ರೀಯ ಮಹಿಳಾ ಶಿಕ್ಷಣ ಮಂಡಳಿ, ಹೆಣ್ಣು ಮಕ್ಕಳು ಮತ್ತು ಮಹಿಳಾ ಶಿಕ್ಷಣ ರಾಷ್ಟ್ರೀಯ ಸಮಿತಿ ಮುಂತಾದ ಸಂಸ್ಥೆಗಳ ಅಧ್ಯಕ್ಷೆಯಾಗಿದ್ದರು. ಅವರು ಸಂಸದೆಯೂ, ಯೋಜನಾ ಆಯೋಗದ ಸದಸ್ಯೆಯೂ ಆಗಿದ್ದರು.

ಅವರು ದಿಲ್ಲಿಯ ಆಂಧ್ರ ಎಜುಕೇಶನಲ್ ಸೊಸೈಟಿಯೊಂದಿಗೆ ಸಂಬಂಧ ಹೊಂದಿದ್ದರು. ಭಾರತದಲ್ಲಿ ಸಾಕ್ಷರತೆಗೆ ಅವರ ಅಮೋಘ ಕೊಡುಗೆಗಾಗಿ 1971ರಲ್ಲಿ ಅವರಿಗೆ ನಾಲ್ಕನೇ ನೆಹರೂ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. 1975ರಲ್ಲಿ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

5. ಹಂಸಾ ಜೀವರಾಜ್ ಮೆಹ್ತಾ

ಬರೋಡದ ದಿವಾನ ಮನುಭಾಯ್ ನಂದಶಂಕರ ಮೆಹ್ತಾ ಅವರ ಮಗಳಾಗಿ ಜೂನ್ 3, 1879ರಲ್ಲಿ ಹುಟ್ಟಿದ ಹಂಸಾ ಅವರು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ಮತ್ತು ಸಮಾಜಶಾಸ್ತ್ರ ಕಲಿತಿದ್ದರು. ಸಮಾಜ ಸುಧಾರಕಿ, ಕಾರ್ಯಕರ್ತೆ, ಶಿಕ್ಷಣ ತಜ್ಞೆ ಹಾಗೂ ಲೇಖಕಿಯಾಗಿಯೂ ಹೆಸರು ಪಡೆದಿದ್ದರು.

ಚಿತ್ರಕೃಪೆ: ದಿಇಂಡಿಯನ್‌ ಎಕ್ಸ್‌ಪ್ರೆಸ್‌

ಅವರು ಗುಜರಾತಿಯಲ್ಲಿ ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದು, ‘ಗಲಿವರ್‌ನ ಯಾತ್ರೆಗಳು’ ಸೇರಿದಂತೆ ಹಲವು ಇಂಗ್ಲಿಷ್ ಕತೆಗಳನ್ನು ಅನುವಾದಿಸಿದ್ದಾರೆ. ಅವರು 1926ರಲ್ಲಿ ಬಾಂಬೆ ಸ್ಕೂಲ್ ಕಮಿಟಿಗೆ ಆಯ್ಕೆಯಾದರು. 1945-46ರಲ್ಲಿ ಆಲ್ ಇಂಡಿಯಾ ವುಮನ್ಸ್ ಕಾನ್ಫರೆನ್ಸ್‌ನ ಅಧ್ಯಕ್ಷೆಯಾದರು. ಹೈದರಾಬಾದ್‌ನಲ್ಲಿ ನಡೆದ ಅದರ ಸಮಾವೇಶದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿ ಮಹಿಳಾ ಹಕ್ಕುಗಳ ಕುರಿತು ಕಾರ್ಯಕ್ರಮಪಟ್ಟಿಯನ್ನು ಮಂಡಿಸಿದ್ದರು.

ಅವರು 1945ರಿಂದ 1960ರ ತನಕ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ, ಅಖಿಲ ಭಾರತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಸದಸ್ಯೆ, ಭಾರತೀಯ ಅಂತರವಿಶ್ವವಿದ್ಯಾಲಯ ಮಂಡಳಿಯ ಅಧ್ಯಕ್ಷೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಉಪಕುಲಪತಿ ಇತ್ಯಾದಿಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...