Homeಮುಖಪುಟದೆಹಲಿ ಚುನಾವಣೆಯಲ್ಲಿ ಈ ಬಾರಿಯು ಆಪ್‌ ಗೆಲ್ಲುತ್ತದೆ. ಏಕೆಂದರೆ...

ದೆಹಲಿ ಚುನಾವಣೆಯಲ್ಲಿ ಈ ಬಾರಿಯು ಆಪ್‌ ಗೆಲ್ಲುತ್ತದೆ. ಏಕೆಂದರೆ…

ದೇಶಕ್ಕೆ ನರೇಂದ್ರ ಮೋದಿ, ದೆಹಲಿಗೆ ಕೇಜ್ರಿವಾಲ್ ಎಂದು ಹಲವು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

- Advertisement -
- Advertisement -

ದೆಹಲಿಯ ಚುನಾವಣೆಯನ್ನು “ಪ್ರಸ್ತುತ ಆಪ್ ಸರ್ಕಾರದ ಇದುವರೆಗಿನ ಕಾರ್ಯಸಾಧನೆಗಳು ಮತ್ತು ಬಿಂಬಿತವಾಗಿರುವ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಆಶ್ಚರ್ಯವಾದ ಫಲಿತಾಂಶಗಳೇನು ಇರಲಿಕ್ಕಿಲ್ಲ” ಎಂದುಕೊಳ್ಳಬಹುದು. ಅಂದರೆ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಪ್ ಒಟ್ಟು 70 ಕ್ಷೇತ್ರಗಳಲ್ಲಿ ಕನಿಷ್ಟ 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಏರಲಿದೆ.

ಆದರೆ ರಾಷ್ಟ್ರರಾಜಧಾನಿಯಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಈ ಬಾರಿ, ಧರ್ಮ, ದೇಶದ್ರೋಹ, ಪಾಕಿಸ್ತಾನ, ಕೋಮು ಪ್ರಚೋದನಾ ಹೇಳಿಕೆಗಳ ಜೊತೆಗೆ ಒಂದಷ್ಟು ಸುಳ್ಳುಗಳನ್ನು ಹೆಣೆದು ಮತದಾರರ ಮನಸ್ಸನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳನ್ನು ಕಳೆದುಕೊಂಡ ಬಿಜೆಪಿ ದೆಹಲಿ ಗೆಲ್ಲಲು ತನ್ನಿಡೀ ಬಲವನ್ನು ಸುರಿದಿದೆ. ಹಾಗಾಗಿ ದೆಹಲಿ ಚುನಾವಣೆಗೆ ಈ ಬಾರಿ ವಿಶೇಷ ಮಹತ್ವವಿದೆ.

ಒಂದು ಕಡೆ ಜನರಿಂದಲೇ ಹುಟ್ಟಿಬಂದ ಆಮ್‌ಆದ್ಮಿ ಪಾರ್ಟಿ ತನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ನೀಡಿದ ಭರವಸೆಗಳನ್ನು ಬಹುತೇಕ ಈಡೇರಿಸಿ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಇನ್ನೊಂದು ಕಡೆ ‘ವಿಕಾಸ’ದ ಹಳಿ ಏರಿಬಂದ ಬಿಜೆಪಿ ಹಳಿ ಬದಲಿಸಿ ಸನಾತನ ಧರ್ಮದ ಹೆಸರಿನಲ್ಲಿ ದೇಶವನ್ನು ಸನಾತನ ಕಾಲಕ್ಕೆ ಕರೆದೊಯ್ಯುವ ಭರದಲ್ಲಿದ್ದಂತಿದೆ. ಈ ಮಧ್ಯೆ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಭಾಗವಹಿಸುತ್ತಿದೆ.

ಆಪ್ ಏಕೆ ಗೆಲ್ಲುತ್ತದೆ?

ಆಮ್‌ಆದ್ಮಿ ನೀಡಿದ ಭರವಸೆಗಳಲ್ಲಿ “ವಿದ್ಯುತ್ ದರ ಕಡಿತ, ಉಚಿತ ನೀರು ಸರಬರಾಜು, ಉಚಿತ ಆರೋಗ್ಯ, ಮುಖ್ಯವಾಗಿ ಉತ್ತಮ ದರ್ಜೆಯ ಶಿಕ್ಷಣ” ಎಂಬ ಮೂಲ ಸೌಕರ್ಯಗಳನ್ನು ನೀಡಿದ ರೀತಿ ಇತ್ತೀಚಿನ ವರ್ಷಗಳ ರಾಜಕೀಯ ಪಕ್ಷಗಳನ್ನು ನೋಡಿದಾಗ ಅದು ರಾಜಕಾರಣದಲ್ಲಿ ಓಯಸಿಸ್‌ನಂತೆ ಕಾಣುತ್ತದೆ. ಅತ್ಯುತ್ತಮ ಸರ್ಕಾರಿ ಶಾಲೆಗಳು, ಉತ್ತಮ ಮೊಹಲ್ಲಾ ಕ್ಲಿನಿಕ್‌ಗಳು ದೇಶದ ಗಮನ ಸೆಳೆದಿವೆ. ಮಹಿಳೆಯರಿಗೆ ಉಚಿತ ಪ್ರಯಾಣ, ದೆಹಲಿ ತುಂಬಾ ಸಿಸಿಟಿವಿ ಕ್ಯಾಮರಾಗಳು, ಮನೆಬಾಗಿಲಿಗೆ ಸರ್ಕಾರಿ ಸೇವೆಗಳು ಹೀಗೆ ಅವರು ಮಾಡಿರುವ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗೂ ಕೆಲಸ ಮಾಡಬಹುದು ಎನ್ನುವುದನ್ನು ಬಹುಶಃ ಜನ ಮರೆತೇಹೋಗಿರುವ ಸಮಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಕೇಜ್ರಿವಾಲ್ ಒಂದು ಉದಾಹರಣೆಯಾಗಿ ಭಿನ್ನವಾಗಿ ನಿಲ್ಲುತ್ತಾರೆ. ಆದರೆ ಅವರ ಸರ್ಕಾರ ಹಾಗೂ ಅವರ ವೈಯಕ್ತಿಕ ನಡೆಗಳನ್ನು ನೇರವಾಗಿ ಟೀಕಿಸಲು ಸಕಾರಣಗಳು ಇಲ್ಲದ್ದರಿಂದ ಬಿಜೆಪಿ ‘ತುಕುಡೆ ತುಕುಡೆ ಗ್ಯಾಂಗ್ ಹಿಂದೆ ನಿಂತಿರುವ ದೇಶದ್ರೋಹಿಗಳು’ ಎನ್ನುವ ಪರೋಕ್ಷ ದಾಳಿಯಿಂದ ಉರುಳಿಸುವ ಯತ್ನ ನಡೆಸುತ್ತಿದೆ.

ಬಿಜೆಪಿ ವರಸೆ…

ಇಲ್ಲಿವರೆಗೂ ಭಾರತದ ಗಣತಂತ್ರದಲ್ಲಿ ಕಂಡುಕೇಳರಿಯದ ಘಟನೆಗಳು ಇಂದಿನ ದಿನ ನಡೆಯುತ್ತಿವೆ. ಕೇಂದ್ರ ಸರ್ಕಾರ ಪಾಸು ಮಾಡಿದ ಸಿಎಎಯಂತಹ ಕಾಯ್ದೆಯ ವಿರುದ್ಧ ದೇಶದ ಒಂದು ದೊಡ್ಡ ಜನಸಮೂಹ ಕಂಡುಕೇಳರಿಯದ ರೀತಿಯಲ್ಲಿ ನಿರಂತರವಾದ ಪ್ರತಿಭಟನೆಯನ್ನು ಮಾಡುತ್ತಿದ್ದರೆ, ಸರ್ಕಾರದ ಪ್ರತಿನಿಧಿಗಳು ಉಪಯುಕ್ತ ಚರ್ಚೆಗಳನ್ನು ಕೈಗೊಳ್ಳುವ ಬದಲು ಮನೆಮನೆಗೆ ತಿರುಗಿ ಸಿಎಎ ಕಾಯ್ದೆಯ ಉಪಯುಕ್ತತೆಯ ಬಗ್ಗೆ ತಿಳಿವಳಿಕೆ ನೀಡುವಲ್ಲಿ ನಿರತರಾಗಿದ್ದಾರೆ. ಅನುರಾಗ್ ಠಾಕೂರ್ ಎಂಬ ಕೇಂದ್ರ ಮಂತ್ರಿ ತನ್ನ ಸಾರ್ವಜನಿಕ ಭಾಷಣದಲ್ಲಿ “ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ” ಎಂಬ ಘೋಷಣೆ ಕೂಗಿದರೆ, ಇನ್ನೊಬ್ಬ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ “ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುವ ಜನ ನಾಳೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಂಡತಿ, ಮಗಳನ್ನು ರೇಪ್ ಮಾಡುತ್ತಾರೆ, ನಮಗೆ ಮತ ನೀಡಿದರೆ ಅಂತವರನ್ನು ಒಂದು ಗಂಟೆಯಲ್ಲಿ ಕಿತ್ತು ಹಾಕುತ್ತೇವೆ” ಎನ್ನುತ್ತಾನೆ. ಎಲ್ಲರಿಗಿಂತ ಹೆಚ್ಚಾಗಿ ದೇಶದ ಗೃಹಮಂತ್ರಿ ಅಮಿತ್ ಶಾ “ನೀವು ಸಿಟ್ಟಿನಿಂದ ಇವಿಯಂ ಗುಂಡಿ ಒತ್ತಿದರೆ ಅದರ ಬಿಸಿ ಶಾಹಿನ್‌ಬಾಗ್‌ನಲ್ಲಿರುವರನ್ನು ತಟ್ಟಬೇಕು” ಎಂಬ ಫರ್ಮಾನು ಹೊರಡಿಸುತ್ತಾರೆ. ಶಾಹಿನ್‌ಬಾಗ್ ಎಂಬುದು ಇಂದು ದೇಶದಲ್ಲಿ ಪ್ರತಿಭಟನೆ ನಡೆಸುವವರಿಗೆ ಒಂದು ಮಾದರಿಯಾಗಿ ಬದಲಾಗುತ್ತಿರುವುದು ಬಿಜೆಪಿಗೆ ಮಗ್ಗುಲಮುಳ್ಳಾಗಿ ಕಾಡುತ್ತಿದೆ.

ಜೆಎನ್‌ಯು ಒಳಗೆ ಗೂಂಡಾಗಳು ಅಟ್ಟಹಾಸ ಮಾಡುವುದನ್ನು ಕೈಕಟ್ಟಿ ನೋಡುತ್ತಾ ಕುಳಿತ ಗೃಹಮಂತ್ರಿಗೆ, ಶಾಹಿನ್‌ಬಾಗ್‌ನಲ್ಲಿ ಕುಳಿತ ಮಹಿಳೆಯರನ್ನು ಓಡಿಸುವುದು ದೂಡ್ಡ ಮಾತೇನಲ್ಲ. ಆದರೆ ಈಗಾಗಲೇ ಬೇಕಾದಷ್ಟು ಹುಳ ಮೈಮೇಲೆ ಬಿಟ್ಟುಕೊಂಡಿರುವ ಅವರಿಗೆ ಅದ್ಯಾಕೋ ಒಳನಡುಕ ಶುರುವಾದಂತಿದೆ.

ದೆಹಲಿಯ ಗದ್ದುಗೆ ಎನ್ನುವುದು ಕೇಂದ್ರ ಸರ್ಕಾರದ ಆಡಳಿತ ಪಕ್ಷಕ್ಕೆ ಸೇರಿದರೆ ಅದರ ಸ್ವರೂಪವೇ ಬೇರೆ. ಆದರೆ ಬೇರೆ ಪಕ್ಷಕ್ಕೆ ಸೇರಿದ್ದರೆ ಅದೊಂದು ದೊಡ್ಡ ಪ್ರಮಾಣದ ಮಹಾನಗರ ಪಾಲಿಕೆಗಿಂತ ಭಿನ್ನವೇನಲ್ಲ. ಆದರೆ ದೇಶದ ರಾಜಧಾನಿಯನ್ನೇ ಕೈಯಲ್ಲಿಟ್ಟುಕೊಳ್ಳಲು ಆಗದವರು ಎಂಬ ಹಣೆಪಟ್ಟಿ ಬಿಜೆಪಿಗೆ ದೊಡ್ಡದಾಗಿ ಕಾಡುತ್ತಿದೆ.

ಬಿಜೆಪಿ, ಕಾಂಗ್ರೆಸ್‌ಗೆ ಮುಖಗಳಿಲ್ಲ…

ದೇಶಕ್ಕೆ ನರೇಂದ್ರ ಮೋದಿ, ದೆಹಲಿಗೆ ಕೇಜ್ರಿವಾಲ್ ಎಂದು ಹಲವು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೋಕಸಭೆಯ ಚುನಾವಣೆಯ ವೇಳೆಯಲ್ಲಿ ಹೇಗೆ ಮೋದಿಗೆ ಎದುರಾಳಿಗಳಿರಲಿಲ್ಲವೋ ಹಾಗೆ ಈಗ ದೆಹಲಿಯಲ್ಲಿ ಕೇಜ್ರಿವಾಲ್‌ಗೆ ಎದುರಾಳಿಗಳಿಲ್ಲ.. ಇದುವರೆಗೂ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ಪ್ರತಿದಿನ ಅರವಿಂದ್ ಕೇಜ್ರಿವಾಲ್ ಮೇಲೆ ಟೀಕೆ ಮಾಡುತ್ತಿರುವ ಬಿಜೆಪಿಗೆ ಕೇಜ್ರಿವಾಲ್ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ, ಅವರೊಡನೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಆದರೆ ಆ ರೀತಿಯ ಸಮರ್ಥ ಅಭ್ಯರ್ಥಿ ಇದ್ದರೆ ತಾನೇ ಚರ್ಚೆಯ ವಿಷಯ…?

ಕೊನೆಯದಾಗಿ…

ದಿಲ್ಲಿಯಲ್ಲಿ ಮೇಲು ಮತ್ತು ಮಧ್ಯಮ ವರ್ಗದವರು ಕೇಜ್ರಿವಾಲ್ ಬಗ್ಗೆ ಭ್ರಮನಿರಸನಗೊಂಡಿರಬಹುದು. ಆದರೆ, ಅವರು ಕೆಳಮಧ್ಯಮ ಮತ್ತು ಬಡಜನರು ಮತ್ತು ಆ ನಡುವೆ ಬದುಕುವ ಜನರ ಕಣ್ಮಣಿಯಾಗಿಯೇ ಉಳಿದಿದ್ದಾರೆ. ಬಿಜೆಪಿ ನಾಯಕರಿಗೆ ವ್ಯತಿರಿಕ್ತವಾಗಿ ಅವರು ಯಾವತ್ತೂ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ವ್ಯಕ್ತಿ. 2017ರ ಏಪ್ರಿಲ್‌ನಲ್ಲಿ ನಡೆದ ದಿಲ್ಲಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೋತ ಬಳಿಕ ಅವರು ದಿಲ್ಲಿಯ ಮೂಲೆಮೂಲೆಯನ್ನೂ ತಿರುಗಿ ಪ್ರತಿದಿನವೆಂಬತೆ ಚಿಕ್ಕ ದೊಡ್ಡ ಸಭೆಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ಅವರೀಗ ತನ್ನ ಮಾಂತ್ರಿಕ ಸ್ಪರ್ಶವನ್ನು ಮರಳಿ ಪಡೆದಂತಿದೆ ಎನ್ನುತ್ತಾರೆ ದೆಹಲಿಯ ಪತ್ರಕರ್ತ ಅಶುತೋಷ್..

ಹಾಗೆಯೇ ಕೇಜ್ರಿವಾಲ್ ಮೌನ ಸಹ ಅವರಿಗೆ ವರದಾನವಾಗಲಿದೆ. 2015ರ ಭಾರೀ ಗೆಲುವಿನ ನಂತರ ಕೇಜ್ರಿವಾಲ್ ಆಕ್ರಮಣಕಾರಿಯಾಗಿ ಮೋದಿಯನ್ನು ಎದುರಿಸಿದ್ದರು. ಅದನ್ನು ಮೋದಿ ನೆಗೆಟಿವಾಗಿ ಬಳಸಿದ್ದರು. ಆದರೆ, ಈ ಬಾರಿ ಅವರ ಮೌನ ಮೋದಿಗೆ ಯಾವುದೇ ಅಸ್ತ್ರ ಒದಗಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...