HomeಮುಖಪುಟMSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

MSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

- Advertisement -
- Advertisement -

ಪ್ರಧಾನಿಯವರ ಕೊರೊನಾ ಪ್ಯಾಕೇಜ್ ಆದ ಇಪ್ಪತ್ತು ಲಕ್ಷ ಕೋಟಿಗಳಲ್ಲಿ ಸಣ್ಣ, ಅತಿಸಣ್ಣ ಮತ್ತು ಮದ್ಯಮ ಗಾತ್ರದ ಉದ್ದಿಮೆಗಳಿಗೆ (MSME – micro, small and medium enterprise) ಕೊಟ್ಟಿರುವ ಪ್ಯಾಕೇಜ್ ಈಗ ಬಹುಚರ್ಚಿತ ವಿಷಯವಾಗಿದೆ. ಕೆಲವರು ಈ ಪ್ಯಾಕೇಜ್ ಒಂದು ಗೇಮ್ ಚೇಂಜರ್ ಎಂದು ಹೇಳುತ್ತಿದ್ದರೆ, ಇನ್ನು ಹಲವರು ಈ ಪ್ಯಾಕೇಜ್ ವಾಸ್ತವದಲ್ಲಿ ಉಂಟುಮಾಡುವ ಪರಿಣಾಮ ನಗಣ್ಯ ಎಂದು ಹೇಳುತ್ತಿದ್ದಾರೆ.

ಈ MSMEಪ್ಯಾಕೇಜ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ ನಡೀತಿದೆ? ನಿಜಕ್ಕೂ ಈ MSMEಗಳು ದೇಶದ ಎಕಾನಮಿಯೊಳಗೆ ಅಷ್ಟೊಂದು ಮುಖ್ಯಾನ? ಕೆಲ ಅಂಕಿಅಂಶಗಳನ್ನ ನೋಡಿದ್ರೆ ಇವುಗಳ ಪ್ರಾಮುಖ್ಯತೆ ಎಷ್ಟು ಅಂತ ನಮಗೆ ತಿಳಿಯುತ್ತೆ. ಇಂಡಿಯಾದಲ್ಲಿ ಒಟ್ಟು 6.3 ಕೋಟಿ MSMEಗಳು ಇವೆ. ಅವುಗಳು ಸೃಷ್ಟಿಮಾಡಿರುವ ಒಟ್ಟು ನೇರ ಉದ್ಯೋಗಗಳು ಬರೋಬ್ಬರಿ ಹನ್ನೊಂದು ಕೋಟಿಗಳಷ್ಟು. ಈ ದೇಶದ ಒಟ್ಟು ಜಿಡಿಪಿಯಲ್ಲಿ 30% ರಷ್ಟು ಅಂದ್ರೆ 60 ಲಕ್ಷ ಕೋಟಿಗಳಿಗಿಂತ ಹೆಚ್ಚು ಈ MSMEಗಳಿಂದನೇ ಬರುತ್ತೆ. ಈ ದೇಶದ ಒಟ್ಟು ತಯಾರಿಕೆಯಲ್ಲಿ (manufacturing) 45% ರಷ್ಟು MSMEಗಳೇ ಮಾಡುತ್ವೆ. ಹಾಗೂ ದೇಶದಿಂದ ಆಗುವ ಒಟ್ಟು ರಫ್ತಿನಲ್ಲಿ 50% ನಷ್ಟು MSMEಗಳಿಂದಲೇ ಆಗುತ್ತೆ.

ಈ ಮೇಲಿನ ಅಂಕಿಅಂಶಗಳು MSMEಗಳು ಈ ದೇಶದ ಎಕಾನಮಿಯ ಆರೋಗ್ಯಕ್ಕೆ ಎಷ್ಟು ಮುಖ್ಯ ಅಂತ ಯಾರಿಗೇ ಆದ್ರೂ ಸುಲಭವಾಗಿ ಗೊತ್ತಾಗುತ್ತೆ. ಅದರಲ್ಲೂ ಈ ದೇಶದ ವರ್ಕ್ ಫೋರ್ಸಿನ ಶೇಖಡಾ ಇಪ್ಪತ್ತರಷ್ಟು ಮಂದಿ MSMEಗಳಲ್ಲೇ ಕೆಲಸ ಮಾಡ್ತಿದಾರೆ ಅಂದರೆ ಉದ್ಯೋಗ ಸೃಷ್ಟಿಯಲ್ಲಿ ಇವುಗಳ ಮಹತ್ವ ಎಂಥದು ಅಂತ ಅರಿವಾಗುತ್ತೆ. ಆದರೆ, ಬಹುತೇಕ MSMEಗಳ ಅತಿಮುಖ್ಯವಾದ ಪ್ರಾಬ್ಲಮ್ ಏನು ಅಂದ್ರೆ ಶೇಕಡಾ ತೊಂಬತ್ತರಷ್ಟು MSMEಗಳು ಅತ್ಯಂತ ಕಡಿಮೆ ಹೆಚ್ಚುವರಿ ನಗದಿನ ಲಭ್ಯತೆಯಲ್ಲಿಯೇ ಉದ್ಯಮ ನಿರ್ವಹಣೆ ಮಾಡಬೇಕಾದ ಸ್ಥಿತಿಯಲ್ಲಿವೆ. ಹಾಗಾಗಿ, ಇವುಗಳಿಗೆ ನಗದಿನ ಹರಿವು ಸ್ವಲ್ಪ ಕಡಿಮೆಯಾದರೂ workkng capital ಇಲ್ಲದಂತಾಗಿ ಈ MSMEಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ನಮಗೆ ತಿಳಿದಿರುವಂತೆ ದೇಶದ ಕಡೆಯ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯ ಬೆಳವಣಿಗೆ ಶೇ.5 ಮತ್ತು ಶೇ.4.5 ಕ್ಕಿಳಿದಿತ್ತು. ಅದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲುಂಟಾದ ಬೇಡಿಕೆಯ ಕೊರತೆ. ಅಂದರೆ ಜನಗಳ ಕೈಯಲ್ಲಿ ಹಣವಿಲ್ಲದ ಕಾರಣ ಅವರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದು. ಇದರ ಹೊಡೆತ ಅತಿ ಬೇಗನೆ ಬಿದ್ದಿದ್ದೇ ಈ MSMEಗಳಿಗೆ ಮತ್ತು ಅದರಿಂದಾಗಿಯೇ ಅನೇಕವು ಮುಚ್ಚುವ ಸ್ಥಿತಿಗೆ ಬಂದಿದ್ದವು. ಆದರೆ, ಈಗ ಕೊರೋನಾ ಲಾಕ್‍ಡೌನಿಂದಾಗಿ ಕೋಟ್ಯಂತರ ಜನ ಕೆಲಸ ಕಳೆದುಕೊಂಡಿದ್ದು ಅವರ ಕೊಳ್ಳುವ ಶಕ್ತಿ ಶೂನ್ಯವಾಗಿದೆ. ಇದರಿಂದಾಗಿ ಅತಿ ಹೆಚ್ಚು ಮತ್ತು ಅತಿ ಶೀಘ್ರವಾಗಿ ಹೊಡೆತ ತಿನ್ನುತ್ತಿರುವುದು MSMEಗಳೇ. ತಾತ್ಕಾಲಿಕವಾಗಿಯಾದರೂ ಅತಿ ಹೆಚ್ಚು ಉದ್ಯೋಗ ನಷ್ಟವಾಗಿರುವುದೂ ಕೂಡ MSMEಗಳಲ್ಲಿಯೇ.

ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಈ MSMEಗಳ ಪುನಶ್ಚೇತನಕ್ಕೆಂದೇ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜು ಒಟ್ಟಾರೆಯಾಗಿ MSMEಗಳಿಗೆ ಸುಲಭವಾಗಿ ಸಾಲಕೊಡುವ ಯೋಜನೆಯಾಗಿದ್ದು ಇದರಲ್ಲಿ ನಾಲ್ಕೈದು ಅಂಶಗಳಿದ್ದರೂ ಅವುಗಳಲ್ಲಿ ಅತಿದೊಡ್ಡ ಪ್ಯಾಕೇಜಿನ ಪರಿಣಾಮದ ಬಗ್ಗೆ ಇಲ್ಲಿ ಚರ್ಚಿಸೋಣ. ಅದು ನೂರು ಕೋಟಿಯ ತನಕ ಟರ್ನೋವರ್ ಇರುವ MSMEಗಳಿಗೆ ಮೂರುಲಕ್ಷ ಕೋಟಿಗಳಷ್ಟು ಸಾಲವನ್ನು ಪ್ರಕಟಿಸಿರುವ ಪ್ಯಾಕೇಜ್. ಈ ಸಾಲ ತೆಗೆದುಕೊಂಡರೆ ಒಂದು ವರ್ಷದವರೆಗೆ moratorium ಅಂದರೆ ಅಸಲು ಮತ್ತು ಬಡ್ಡಿಯನ್ನು ಕಟ್ಟುವಂತಿಲ್ಲ. ನಾಲ್ಕು ವರ್ಷಗಳ ಅವಧಿ ಇರುತ್ತದೆ.

ಇಲ್ಲಿ ಮುಖ್ಯ ಅಂಶವೆಂದರೆ ಈ ಸಾಲಕ್ಕೆ ಮತ್ತು ಇದರ ಮೇಲಿನ ಬಡ್ಡಿ ಗೆ ಸರ್ಕಾರವೇ ಸಂಪೂರ್ಣ ಗ್ಯಾರಂಟಿ ಕೊಡುತ್ತದೆ. ಇದರಿಂದಾಗಿ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತವೆ ಮತ್ತು ಈ ಕ್ರಮದಿಂದಾಗಿ ಸುಮಾರು 45 ಲಕ್ಷ MSMEಗಳಿಗೆ ಈ ರೀತಿಯ ಅಡಮಾನ ಕೇಳದ ಸಾಲ ಸಿಗಲಿದೆ. ಅದೇ ರೀತಿ ಈಗಾಗಲೇ ಸಾಲದ ಸುಳಿಯಲ್ಲಿರುವ MSMEಗಳಿಗೆ 20000 ಕೋಟಿ ರೂಗಳ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದ್ದು ಅದಕ್ಕೆ ಸರ್ಕಾರ 4000 ಕೋಟಿ ರೂಗಳಷ್ಟು ಗ್ಯಾರಂಟಿ ನೀಡಲಿದೆ. ಇದರಿಂದ ಒಟ್ಟು ಎರಡು ಲಕ್ಷ MSMEಗಳಿಗೆ ಸಹಾಯವಾಗಲಿದೆ.

ಇದರ ಉದ್ದೇಶ: ಇದು ಅಡಮಾನರಹಿತ ಸಾಲವಾಗಿರುವುದರಿಂದ MSMEಗಳು ಈ ಸಾಲವನ್ನು ತೆಗೆದುಕೊಳ್ಳುತ್ತವೆ. ಈ ಹಣವನ್ನು ಬೇಕಾದ ಕಚ್ಚಾವಸ್ತು ಖರೀದಿಗೆ, ಉತ್ಪಾದನಾ ಸಾಮಥ್ರ್ಯ ಹೆಚ್ಚಿಸುವಿಕೆಗೆ ಮತ್ತು ಸಿಬ್ಬಂದಿಗಳಿಗೆ ಮೂರ್ನಾಲ್ಕು ತಿಂಗಳ ವೇತನ ಕೊಡಲು ಬಳಸುತ್ತವೆ. ಇದರಿಂದ ಈ MSMEಗಳು ತಡೆರಹಿತ ಉತ್ಪಾದನೆ ಮಾಡುವಂತಾಗಿ ಇಡೀ ಈ ವಲಯವು ಮತ್ತಷ್ಟು ಉದ್ಯೋಗವನ್ನೂ ಸೃಷ್ಟಿಸಿ ದೇಶದ ಎಕಾನಮಿ ಮತ್ತೆ ಪುಟಿದೇಳಲು ಸಹಾಯವಾಗುತ್ತದೆ ಎಂಬುದು.

ಆದರೆ ಇಲ್ಲಿ ಸರ್ಕಾರ ಅರ್ಥ ಮಾಡಿಕೊಳ್ಳದಂತೆ ನಟಿಸುತ್ತಿರುವ ಬಹುಮುಖ್ಯ ಅಂಶವೊಂದಿದೆ. ಕೊರೋನಾಕ್ಕೂ ಮೊದಲು ಈ ದೇಶದ ಆರ್ಥಿಕತೆ ತಗ್ಗಿದ್ದು ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದರಿಂದ. ಅದು MSMEಗಳ ಮೇಲೂ ಭಾರೀ ನಕಾರಾತ್ಮಕ ಪರಿಣಾಮ ಬೀರಿತ್ತು. ಈಗ ಕೊರೊನಾ ಅಟ್ಯಾಕ್ ನಂತರವಂತೂ ಜನರ ಕೊಳ್ಳುವ ಶಕ್ತಿ ಪಾತಾಳಕ್ಕಿಳಿದಿದೆ. ಇಂಥಾ ಸನ್ನಿವೇಶದಲ್ಲಿ MSMEಗಳು ಸಾಲ ತೆಗೆದುಕೊಂಡು ಉತ್ಪಾದನೆ ಮಾಡಿದರೂ ಕೂಡ ಆ ಉತ್ಪನ್ನಗಳನ್ನು ಕೊಳ್ಳುವವರಿಲ್ಲದೆ ಆ ಸಾಲವೆಲ್ಲ ಮತ್ತಷ್ಟು NPA ಆಗುವುದಲ್ಲದೆ ಈ MSMEಗಳು ಮತ್ತೆ ಏಳಲಾರದಂತೆ ಮುಗಿದುಹೋಗುವ ಸಾಧ್ಯತೆಗಳಿವೆ.

ಇದರಿಂದಾಗಿಯೇ ಈ MSMEಗಳ ಹಲವು ಪ್ರಮುಖ ಉದ್ದಿಮೆದಾರರು ನಮಗೆ ಈ ಸಾಲಕ್ಕಿಂತ ಸಿಬ್ಬಂದಿಗಳ ಕನಿಷ್ಟ ಮೂರು ತಿಂಗಳ ವೇತನಕ್ಕೆ ಮತ್ತು ಕಚ್ಚಾ ವಸ್ತು ಖರೀದಿಗೆ ಸರ್ಕಾರ ಫ್ರೀಯಾಗಿ ಹಣಕೊಟ್ಟಿದ್ದರೆ ಅದು ನಿಜಕ್ಕೂ ಅತ್ಯುತ್ತಮ ಕ್ರಮವಾಗುತ್ತಿತ್ತು ಎಂದಿದ್ದಾರೆ. ಆಗ ಅದು ಒಂದೇ ಸಲ ಉತ್ಪಾದನೆ ಮತ್ತು ಬೇಡಿಕೆ ಎರಡನ್ನೂ ಹೆಚ್ಚಿಸುತ್ತಿತ್ತು ಎಂಬ ಕಾರಣಕ್ಕೆ. ಒಟ್ಟಿನಲ್ಲಿ ಸರ್ಕಾರ MSMEಗಳಿಗೆ ಅಡಮಾನ ರಹಿತ ಸಾಲ ಕೊಡಲು ವ್ಯವಸ್ಥೆ ಮಾಡುವುದು MSMEಗಳಿಗೆ ಒಳ್ಳೆಯ ಉತ್ತೇಜನಾ ಕ್ರಮವೇ ಆದರೂ ಕೂಡ ಆ ಕ್ರಮ ಫಲಪ್ರದವಾಗಬೇಕಾದರೆ ಸರ್ಕಾರ ಜನರ ಕೈಗೆ ನೇರ ಮತ್ತು ಪರೋಕ್ಷ ಕ್ರಮಗಳ ಮೂಲಕ ನಗದು ಸಿಗುವಂತೆ ಮಾಡಬೇಕಿದೆ.
ಈಗಾಗಲೇ ತುಂಬಾ ವಿಳಂಬವಾಗಿದ್ದರೂ, ಈಗಲಾದರೂ ಜನರಿಗೆ ನಗದು ಸಿಗುವಂತ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ MSMEಗಳಿಗೆ ಅಡಮಾನ ರಹಿತ ಸಾಲ ಕೊಡುವ ಈ ಕ್ರಮ ನಿರಿಕ್ಷಿತ ಫಲ ಕೊಡುವ ಸಾಧ್ಯತೆಯಿದೆ ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...