Homeಸಾಹಿತ್ಯ-ಸಂಸ್ಕೃತಿಕವನಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

ಎರಿನ್ ಹ್ಯಾನ್ಸನ್ ಅವರ ನಾಲ್ಕು ಪದ್ಯಗಳ ಅನುವಾದ

- Advertisement -
- Advertisement -

1.

ನೀನು,
ನಿನ್ನ ವಯಸ್ಸಲ್ಲ,
ನಿನ್ನ ಎತ್ತರವಲ್ಲ,
ನೀನು ಧರಿಸುವ ಉಡುಪೂ ಅಲ್ಲ,
ನಿನ್ನ ತೂಕವಲ್ಲ,
ನಿನ್ನ ಕೂದಲಿನ ಬಣ್ಣವೂ ಅಲ್ಲ.

ನೀನು ನಿನ್ನ ಹೆಸರಲ್ಲ,
ನಿನ್ನ ಕೆನ್ನೆಯಲಿ ಬೀಳುವ ಗುಳಿಯೂ ಅಲ್ಲ.

ಆದರೆ ನೀನು,
ನೀನು ಓದಿದ ಎಲ್ಲ ಪುಸ್ತಕಗಳು,
ನೀನು ಆಡಿದ ಎಲ್ಲ ಮಾತುಗಳು,
ನಿನ್ನ ಮುಂಜಾನೆಯ ಗಡಸು ದನಿ ಮತ್ತು
ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವ
ನಿನ್ನ ಮುಗುಳ್ನಗು.

ನೀನು,
ನಿನ್ನ ನಗೆಯೊಳಗಿನ ಮಾಧುರ್ಯ ಮತ್ತು
ನೀನು ಅತ್ತ ಎಲ್ಲ ಕಣ್ಣೀರು.

ನೀನು,
ಗಟ್ಟಿಯಾಗಿ ನೀನು ಹಾಡುವ ಹಾಡುಗಳು,
ನಿನಗೆ ಮಾತ್ರ ಗೊತ್ತಿರುವ ನಿನ್ನ ಏಕಾಂತ,
ನೀನು ಭೇಟಿ ಮಾಡಿದ ಎಲ್ಲ ಸ್ಥಳಗಳು ಮತ್ತು
ನೀನು ಮನೆ ಎಂದು ಕರೆಯುವ ಜಾಗ.

ನೀನು,
ನೀನು ನಂಬಿಕೆಯಿಟ್ಟಿರುವ ಸಂಗತಿಗಳು,
ನೀನು ಪ್ರೀತಿಸುವ ಎಲ್ಲ ಜನಗಳು ಮತ್ತು,
ನಿನ್ನ ಬೆಡ್ರೂಮಿನಲ್ಲಿರುವ ಎಲ್ಲ ಫೋಟೋಗಳು ಮತ್ತು
ನೀನು ಕನಸುಗಾಣುವ ಭವಿಷ್ಯ.

ಎಷ್ಟೊಂದು ಚೆಲುವುಗಳಿಂದ
ಸೃಷ್ಟಿಯಾಗಿರುವೆ ನೀನು
ಆದರೂ
ಬಹುಶಃ ಎಲ್ಲ ಮರೆತಿರುವೆ,
ಯಾವಾಗ ಜನ
ನೀನು ಯಾವುದಲ್ಲವೋ ಆ ಸಂಗತಿಗಳಿಂದಲೇ
ನಿನ್ನನ್ನು ಗುರುತಿಸುತ್ತಿದ್ದಾರೆ ಎನ್ನುವುದು
ಗೊತ್ತಾದಾಗ ನಿನಗೆ.
________________________________

2.

ನಿನ್ನ ಕಣ್ಣುಗಳ ದಿಟ್ಟಿಸುತ್ತ,
ನಿನ್ನ ಎಲ್ಲ ಮಾತುಗಳಿಗೆ ಕಿವಿಯಾಗಬಲ್ಲೆನೇ ಹೊರತು
ಎಂದೂ ನಿನ್ನೆದುರು ನನ್ನ ಎದೆಯ ಬಿಚ್ಚಿಡುವುದಿಲ್ಲ.
ನಾನು ಬದಲಾಗಬೇಕು ಎನ್ನುವ
ನಿನ್ನ ಬೇಡಿಕೆಯಲ್ಲಿ ಇರುವ ಕಳಕಳಿ
ಗೊತ್ತಾಗುತ್ತದೆ ನನಗೆ.
ಆದರೆ ಈ ಬದಲಾಗುವುದನ್ನ
ಎಲ್ಲಿಂದ ಮೊದಲು ಮಾಡಲಿ ನಾನು?
ನನ್ನ ನಗು ಲೋಕಕ್ಕೆ ಕಾಣುವುದಕ್ಕಿಂತ ಹೆಚ್ಚಾಗಿ
ನನಗೆ ಕಾಣಿಸಿದ್ದೇ ಹೆಚ್ಚು.
ಕಾರಣ ಅಂಥ ವಿಶೇಷವೇನಿಲ್ಲ,
ನನ್ನ ನಗು
ನಾನು ನನ್ನ ಜೊತೆ ಇರುವಾಗ ಮಾತ್ರ ಸಾಚಾ.
ಅರ್ಥವಾಗುವುದಿಲ್ಲ ಜನರಿಗೆ ನನ್ನ ಭಾವನೆಗಳು
ಮತ್ತು ಈಗೀಗ ಅವರು ಅರ್ಥ ಕೇಳುವುದಿಲ್ಲ ಕೂಡ,

ಏಕೆಂದರೆ
ಮೂರ್ಖರನ್ನಾಗಿಸಿದ್ದೇನೆ ಅವರನ್ನೆಲ್ಲ ನಾನು
ಎನ್ನುವ ಅನುಮಾನ
ಅವರಿಗಷ್ಟೇ ಅಲ್ಲ ಇದೆ ನನಗೂ.
ಮುಖವಾಡದಾಚೆಗಿನ ನನ್ನ ಮುಖ
ಕಾಣಿಸುವುದಿಲ್ಲ ಅವರಿಗೆ.
ಲೋಕ ಇನ್ನೂ ನಿದ್ದೆಯಲ್ಲಿರುವಾಗ,

ರಾತ್ರಿಯನ್ನು ಸಾಕ್ಷಿಯಾಗಿಟ್ಟುಕೊಂಡು
ಜನ ನನ್ನೆದುರು
ತಮ್ಮ ಕುತೂಹಲಗಳನ್ನು ತೋಡಿಕೊಂಡಾಗಲೆಲ್ಲ,
ನನ್ನ ರಹಸ್ಯಗಳನ್ನ ಅವರೆದುರು ಬಿಚ್ಚಿಟ್ಟು
ಹಾಕಿದ್ದೇನೆ ಸವಾಲು,
ಆದರೆ ನನ್ನ ಕಣ್ಣಿನ ಹಸಿ ಆರಿ ಹೋಗುವ ಮುನ್ನವೇ
ಅವರು ಎದ್ದು ಹೋದಾಗ ಖಾತ್ರಿ ಮಾಡಿಕೊಂಡಿದ್ದೇನೆ,
ಜನರಿಗೆ ಬಾಡಿಗೆ ಕುತೂಹಲ ಮಾತ್ರ
ಸ್ವಂತಿಕೆಯಿಲ್ಲ ಒಬ್ಬರಲ್ಲೂ
ನನ್ನ ಬಗ್ಗೆ

ನನ್ನ ನಗು ನಕಲಿ ಎನ್ನುವ
ಲೋಕದ ಆಪಾದನೆಗಳನ್ನು ಕೇಳಿದಾಗಲೆಲ್ಲ
ನಗುತ್ತೇನೆ ಬಿದ್ದು ಬಿದ್ದು ಮತ್ತು
ಬಾಕಿ ಉಳಿದ ರಾತ್ರಿಗಳ ಕತ್ತಲನ್ನು ಮಡಿಚಿಟ್ಟು
ಬೆಚ್ಚಿ ಬೀಳಿಸುತ್ತೇನೆ
ಗಂಡು ಜಾತಿಯ ತಿಳಿವಳಿಕೆಯನ್ನ.
________________________________

3.

ಹೃದಯಗಳಿಗಾಗಿಯೇ ಎಂಬಂತೆ
ಮಾಡಿಸಿಟ್ಟುಕೊಂಡಿದ್ದಾಳೆ ಒಂದು ಬುಕ್ ಶೆಲ್ಫ್,
ಮತ್ತು ಬರೆಯುವ ಶಾಯಿ
ತುಂಬಿಕೊಂಡಿದೆ ಅವಳ ನರನಾಡಿಗಳಲ್ಲಿ.
ಅವಳ ಮೆದುಳಿನಲ್ಲಿ ಕುಟ್ಟುವ
ಟೈಪ್ ರೈಟರ್‌ನ ಕೀಗಳು ನಿನ್ನನ್ನು
ಅವಳ ಕಥೆಯಲ್ಲಿ ಪ್ರಕಟ ಮಾಡುತ್ತವೆ.
ಅವಳ ಪುಟಗಳನ್ನು ತಿರುವಿಹಾಕಿದ,
ಆದರೆ ಕೊನೆಯ ಪುಟ ಮುಟ್ಚುವ ಮುನ್ನವೇ
ಪುಸ್ತಕ ಮುಚ್ಚಿಬಿಟ್ಟವರ ಕಥೆಗಳ ನೂಕುನುಗ್ಗಲಿನಿಂದಾಗಿ
ತುಂಬಿಹೋಗಿದೆ ಅವಳ ಬುಕ್ ಶೆಲ್ಫ್.

ಕೆಲವು ಪುಸ್ತಕಗಳು ಡಸ್ಟ ಬಿನ್ ಸೇರಿರುವಾಗಲೂ
ಆ ಒಂದು ಪುಸ್ತಕ ಮಾತ್ರ
ಅವಳ ಫೈನೆಸ್ಟ್ ರೈಟಿಂಗ್
‘The One’s Who Lost My Trust’
ಧೂಳು ತಿನ್ನುತ್ತ ಬುಕ್ ಶೆಲ್ಫ್‌ನ ತುದಿಯಲ್ಲಿ
ಕೈಗೆಟುಕುವ ಹಾಗೆ ಬಾಗಿದೆ.

ಅವಳಿಗೆ ಕೆಲ ಪುಸ್ತಕಗಳನ್ನ
ಓಪನ್ ಮಾಡಲು ಭಯ ಮತ್ತು
ಕೆಲ ಪುಸ್ತಕಗಳನ್ನು ಮುಚ್ಚಲು ಬೇಸರ.
ಭೇಟಿ ಮಾಡಿದ ಪ್ರತೀ ಮನುಷ್ಯನ ಕಥೆಗಳು
ಪುಸ್ತಕದ ಕೊನೆಯಿಲ್ಲದ ಸಾಲುಗಳಲ್ಲಿ
ಹಿಗ್ಗಿಸಿಕೊಂಡಿವೆ ತಮ್ಮನ್ನು ತಾವು.

ಕೆಲವರು ಒಂದು ವಾಕ್ಯದಲ್ಲಿ ಮಾತ್ರ
ಮತ್ತು ಕೆಲವರು ಒಮ್ಮೆ ಕಥೆಯ ಮುಖ್ಯ ಭಾಗದಲ್ಲಿ,
ಅವಳ ಎದೆಯ ಮೇಲೆ ಬಿಟ್ಟು ಹೋಗಿದ್ದಾರೆ
ಶಾಯಿಯ ಹೆಜ್ಜೆ ಗುರುತುಗಳ.

ನಿಮಗೆ ಆಶ್ಚರ್ಯ ಆಗಬಹುದು
ಯಾಕೆ ಹೀಗೆ ಅವಳು?
ಯಾಕೆ ತನಗೆ ಎದುರಾದವರನ್ನ
ಕಟ್ಟಿ ಹಾಕುತ್ತಾಳೆ ತನ್ನ ಕಥೆಗಳಲ್ಲಿ?
ಅವಳಿಗೊಂದು ಭರವಸೆ;

ಮುಂದೆ ಒಂದು ದಿನ ತಾನೂ ಇನ್ನೊಬ್ಬರನ್ನು
ತಾಕಬಹುದು,
ಅವರೂ ಪಾತ್ರವಾಗಿಸಬಹುದು ತನ್ನ
ಅವರ ಕಥೆಗಳಲ್ಲಿ, ಕವಿತೆಗಳಲ್ಲಿ,
ಪ್ರೀತಿಯಾಗಿ, ಸಂಕಟವಾಗಿ, ಅಸೂಯೆಯಾಗಿ,
ಅಥವಾ ಸಾಧ್ಯವಾಗದಿದ್ದರೆ
ಪ್ರಶ್ನಾರ್ಥಕದಂತೆ, ಉದ್ಘಾರ ವಾಚಕದಂತೆ
ಅಲ್ಪ ವಿರಾಮದಂತೆ, ಪೂರ್ಣ
ವಿರಾಮವಾಗಿ.
_____________________________

4.

ನೀವು
ಯಾವುದೇ ಮೂಲೆಯನ್ನ ನೋಡಿ,
ಅಲ್ಲಿ ಅವಳು ಸಿಕ್ಕೇ ಸಿಗುತ್ತಾಳೆ ನಿಮಗೆ,
ಕತ್ತಲು, ತನ್ನೊಳಗೆ ಅಡಗಿಸಿಕೊಂಡ
ಗುಂಗುರು ಕೂದಲಿನ ಹುಡುಗಿ.

ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಮೋಡಗಳಲ್ಲಿ ಕೈಚಾಚಿಕೊಂಡ,
ಸಂತೆಗಳಿಂದ ದೂರ ನಿಂತುಕೊಂಡ,
ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ
ಗುಂಗುರು ಕೂದಲಿನ ಹುಡುಗಿ.

ಜಗತ್ತು ನಿಮ್ಮನ್ನು ದಾಟಿ ಹೋಗುತ್ತಿರುವಾಗ
ಕುಳಿತುಕೊಳ್ಳಿ ಪಕ್ಕ, ಅವಳ ಕೈ ಹಿಡಿದುಕೊಂಡು.
ನಿಮ್ಮ ಐದೇ ಐದು ನಿಮಿಷ
ಅವಳದಾಗಬಹುದಾದರೆ,
ನೀವೇ ನೋಡುತ್ತೀರಿ, ಹೇಗೆ ಅವಳ ನಗು
ಜಗತ್ತಿನ ಅತ್ಯಂತ ಕೆಟ್ಟ ಸಂಗತಿಗಳನ್ನೂ
ಬೇಕೆನಿಸುವಂತೆ ಮಾಡುತ್ತದೆ,
ಮತ್ತೆ ಮತ್ತೆ ನಿಮಗೆ.

ಆದರೆ ನೀವು
ಕತ್ತಲ ಮೂಲೆಗಳನ್ನು ನೋಡುವುದಿಲ್ಲ,
ಆ ದಿಕ್ಕಿನಲ್ಲಿ ಹೊರಳುವುದೂ ಇಲ್ಲ.
ಆದರೂ ಅವಳು ನಿಮ್ಮ ಒಂದು ನೋಟಕ್ಕಾಗಿ
ಕಾಯುತ್ತಲೇ ಇದ್ದಾಳೆ ಇನ್ನೂ,
ತನ್ನ ನಗು, ಅಳು, ನಾಚಿಕೆಗಳ ಮುಚ್ಚಿಟ್ಟುಕೊಂಡ,
ಪುಸ್ತಕದಲ್ಲಿ ಮೂಗು ತೂರಿಸಿಕೊಂಡ,
ಗುಂಗುರು ಕೂದಲಿನ ಹುಡುಗಿ.
—————————

ಎರಿನ್ ಹ್ಯಾನ್ಸನ್
ಅಸ್ಟ್ರೇಲಿಯಾ ಮೂಲದ ಕವಿ. ತಮ್ಮ 11ನೆಯ ವಯಸ್ಸಿನಲ್ಲಿಯೇ ಬ್ಲಾಗ್‌ನಲ್ಲಿ ಅಭಿವ್ಯಕ್ತಿಸುತ್ತಿದ್ದ ಅವರ ಪದ್ಯಗಳು ಭಾರಿ ಜನಪ್ರಿಯತೆ ಪಡೆದು ಕವಿಯಾಗಿ ಗುರುತಿಸಿಕೊಂಡವರು.

(ಕನ್ನಡಕ್ಕೆ): ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.


ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...