Homeಕರ್ನಾಟಕಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

ಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

- Advertisement -
- Advertisement -

ಜಿ. ಮಾದೇಗೌಡರು ಗಾಂಧಿವಾದಿ. ಕೆಲವರಿಗೆ ’ಇವನ್ಯಾವ ಸೀಮೆ ಗಾಂಧಿವಾದಿ’ ಅನ್ನಿಸುತ್ತಿದ್ದುದೂ ಉಂಟು. ಯಾಕೆಂದರೆ ಅವರ ಅಸಹನೆಯ ಸಿಟ್ಟಿನ ಮುಖ, ತೀಕ್ಷ್ಣವಾದ ಕಣ್ಣುಗಳು ಮತ್ತು ಈ ರೂಪಕ್ಕೆ ಮೆರಗು ಕೊಟ್ಟಂತಹ ಅವರ ನಿಷ್ಠುರವಾದ ಮಾತುಗಳು ಹಾಗೂ ಆ ಮಾತಿನಲ್ಲಿ ಅಡಗಿದ್ದ ಸತ್ಯ ಸಂಗತಿಗಳು. ಹೀಗೆ, ಗಾಂಧಿವಾದಿಗಳು ಹೀಗೂ ಇರಬಲ್ಲರು ಎಂದು ತೋರಿಸಿಕೊಟ್ಟವರು ಮಾದೇಗೌಡರು. ಮಂಡ್ಯದ ಮಣ್ಣು ರೂಪಿಸಿದ ಅಪರೂಪದ ರಾಜಕಾರಣಿಗಳ ಪೈಕಿ ಮಾದೇಗೌಡರ ವರಸೆಯೇ ಬೇರೆ. ಇತರರನ್ನು ಮೆಚ್ಚಿಸುವುದಕ್ಕಾಗಿ ಎಂದೂ ಮಾತನಾಡಿದವರಲ್ಲ. ಹಾಸ್ಯ ಅವರಿಗೆ ಹಿಡಿಸುತ್ತಿರಲಿಲ್ಲ. ಆದರೆ ಅವರ ಕೆಲವು ಮಾತುಗಳು ಹಾಸ್ಯವಾಗಿ ಪರಿವರ್ತನೆಯಾಗುತ್ತಿದ್ದವು. ಉದಾಹರಣೆಗೆ ಅವರೇ ಹೇಳಿದಂತೆ, ’ಈ ಎಸ್.ಎಂ. ಕೃಷ್ಣ ಮತ್ತೆ ಅಂಬರೀಶ್ ರಾಜಕಾರಣದಲ್ಲಿ ಯಾವ ಗೇಮೆಯನ್ನು ಮಾಡದವರು. ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಇಂತಹ ದೈಹಿಕ ಶ್ರಮದಿಂದ ದೂರವುಳಿದವರು. ಆದರೂ ಅವುರು ರಾಜಕಾರಣದಲ್ಲಿ ಏನೇನೊ ಆದ್ರು. ಒಬ್ಬ ಮೋಜುಗಾರ ಇನ್ನೊಬ್ಬ ಸೊಗಸುಗಾರ. ಈ ಹಾಳುಡುಗ್ರು ಅವುರು ಬಂದಾಗ ನ್ವಣ ಮುತ್ತಿದಂಗೆ ಮುತ್ತಿಗತವೆ. ಇದಕೇನೇಳನ’ ಎಂದಿದ್ದರು.

ಕಾವೇರಿ ವಿಷಯ ಅವರ ಜೀವನಾಡಿಯಾಗಿತ್ತು. ಕಾವೇರಿ ಸಮಸ್ಯೆ ಭುಗಿಲೇಳುವುದಕ್ಕೂ ಮೊದಲೆ ಹಾಜರಾಗಿ ಚಳವಳಿಯನ್ನ ನಿಯಂತ್ರಿಸುತ್ತಿದ್ದರು. ಅದೂ ಗಾಂಧಿ ಮಾರ್ಗದಲ್ಲಿ. ಒಮ್ಮೆ ಈ ಚಳವಳಿಯೊಳಕ್ಕೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜಿನಾಮೆಯಿತ್ತು ಬಂದು ಸೇರಿಕೊಂಡರು. ಇದು ಮಾದೇಗೌಡರಿಗೆ
ಸಿಟ್ಟು ತರಿಸಿ ಗದರಿಸಿ ಕಳಿಸಿದ್ದರು. ಇಷ್ಟಾದರೂ ಅಂಬಿ ಮತ್ತು ಮಾದೇಗೌಡರ ನಡುವೆ ಒಳ್ಳೆ ಸಂಬಂಧವಿತ್ತು. ಒಮ್ಮೆ ಗೌಡರು ಅಂಬರೀಶ್‌ರನ್ನು ಕುರಿತು “ಲೇ ಅಂಬರೀಶ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು” ಅಂದರು. ಅದಕ್ಕೆ ಅಂಬಿ “ಲೇ ಮುದುಕ ಮ್ಯಟ್ರೆ ಹಿಸಿಗಿ ಸಾಯಿಸಿಬುಡ್ತಿನಿ ಸುಮ್ಮನಿರು” ಎಂದರು. ಎಲ್ಲರ ಸ್ಥಾನಮಾನ ಸೊಕ್ಕನ್ನು ಮುರಿದು ತನ್ನ ವ್ಯಕ್ತಿತ್ವಕ್ಕೆ ಒಗ್ಗಿಸಿಕೊಳ್ಳುವ ಅಂಬರೀಶ್ ತನ್ನ ಇಂತಹ ಗುಣಕ್ಕೆ ಒಗ್ಗಿಕೊಳ್ಳದವರ ಬಳಿ ಸುಳಿಯುತ್ತಿರಲಿಲ್ಲ. ಉದಾಹರಣೆ ದೇವೇಗೌಡರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇಂತಹವರ ಬಳಿ ಐದು ನಿಮಿಷವೂ ಇರುತ್ತಿರಲಿಲ್ಲ. ಆದರೆ ಇಂತವರ ಸಾಲಿನ ಮಾದೇಗೌಡರನ್ನ ಪಳಗಿಸಿದ್ದರು. ಕಾವೇರಿ ವಿಷಯದಲ್ಲಿ ಇಬ್ಬರ ಅಭಿಪ್ರಾಯಗಳು ಅವರ ಮನೋಗತಕ್ಕೆ ತಕ್ಕಂತಿದ್ದವು. ಕೆರೆಕಟ್ಟೆಯ ವಿಷಯದಲ್ಲಿ ವಾಟರ್ ಪಾಲಿಸಿ ಎಂಬುದೊಂದಿದೆ. ಅಚ್ಚುಕಟ್ಟಿನ ಕಟ್ಟಕಡೆ ರೈತನಿಗೂ ನೀರು ತಲುಪಬೇಕು.

ಆದರೆ ಮಾದೇಗೌಡರು “ಡ್ಯಾಂ ನಮ್ಮದು, ಅದರ ಗೇಟಿನ ಕೀ ನನ್ನ ಬಳಿ ಇರಬೇಕು. ಬೇಕಾದ್ರೆ ನೀರು ಕೊಟ್ಟೆ ಇಲ್ದಿದ್ರೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದರು. ಅದೇ ಅಂಬರೀಶ್ “ನನ್ನ ಬಕೀಟಲ್ಲಿ ನೀರಿದ್ರೆ ಯರಡು ಲೋಟ ಕೊಡ್ತಿನಪ್ಪ ನೀರೆ ಇಲ್ದಿದ್ರೆ ಎಲ್ಲಿಕೊಡ್ಲಿ” ಎನ್ನುತ್ತಿದ್ದರು.

ಮಾದೇಗೌಡರ ಚಳವಳಿ ಕಾವೇರಿಗೆ ಮಾತ್ರ ಸೀಮಿತವಾಗಿತ್ತು. ಒಂದು ಬಾರಿ ಕಾವೇರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗಕ್ಕೆ ಬಂದರು. ಈಗಾಗಲೇ ಪ್ರತಿಭಟಿಸುತ್ತಿದ್ದ ರೈತರು “ಅಯ್ಯವ್ ಏಳಯ್ಯ ಮ್ಯಾಕೆ ನಡಿಯಯ್ಯ ಈಗ ಬಂದುಬಿಟ್ಟ. ಅಲ್ಲೋಗಿ ಸಿ.ಎಂ ಅತ್ರ ಏನೇನೊ ಕ್ಯಲಸ ಮಾಡಿಸಿಕೊಳದು ಇಲ್ಲಿ ಬಂದು ಚಳವಳಿ ಮಾಡದು” ಎಂದು ಮೂದಲಿಸಿಬಿಟ್ಟರು. ಚಳವಳಿಗೆ ನನ್ನಂಥವರ ಅಗತ್ಯವಿಲ್ಲವೇನೊ ಅಂತ ಒಂದುಕ್ಷಣ ಮಾದೇಗೌಡರಿಗೆ ಅನ್ನಿಸಿಬಿಟ್ಟಿತು. ಆದರೆ, ಗಾಂಧಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಅವರು ತಮ್ಮ ಹೋರಾಟಗಳನ್ನು ಕೈಬಿಟ್ಟವರಲ್ಲ. ಅವರ ಬದುಕಿನ ಬಹುದೊಡ್ಡ ಸಾಧನೆಯಾದ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡ ಮೇಲೆ ಅದರ ಮುಂದೆ ಕುಳಿತು, ಹಾಳಾಗುತ್ತಿರುವ ಯುವಜನತೆ, ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಯೋಚಿಸುತ್ತ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಸಮಕಾಲೀನ ರಾಜಕಾರಣಿಯಾದ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಮಯದಲ್ಲಿ ಮಾತನಾಡಿಸಲು ಹೋಗಿದ್ದೆ. ಗಾಂಧಿ ಭವನದ ವರಾಂಡದಲ್ಲಿ ಕುಳಿತಿದ್ದ ಅವರ ಪಕ್ಕ ಕುಳಿತ ನಾನು “ಸಾರ್ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರತಾಯಿದ್ದಿವಿ, ಅವರು ನಿಮ್ಮ ಸಮಕಾಲೀನರು ಮತ್ತು ಒಡನಾಡಿಯಾಗಿದ್ರು. ಅವುರ ಬಗ್ಗೆ ಹೇಳಿ ಸಾರ್” ಎಂದೆ. ಮಾದೇಗೌಡರು ಒಳಗಣ್ಣಾಗಿ “ಕೃಷ್ಣಪ್ಪ ನಾನು ತಾಲೂಕ್ ಬೋರ್ಡ್ ಚುನಾವಣೆ ಮುಖಾಂತರ ರಾಜಕೀಯಕ್ಕೆ ಬಂದೊ.. ಅವುರು ಇಲ್ಲೇ ಲಾಯರಾಗಿದ್ರು. ನಾಟಕದಲ್ಲಿ ಪಾರ್ಟು ಮಾಡತಿದ್ರು. ಪದ ಹೇಳತಿದ್ರು. ಮಾತ್ರ ವಳ್ಳೆ ಮನ್ಸ” ಎಂದವರು ತಿರುಗಿ ಮಾತನಾಡಲಿಲ್ಲ. ಈ ರೀತಿ ಕೇಳಲು ಬಂದವನು ಯಾವೂರ ದಾಸಯ್ಯ ಎಂದೂ ನೋಡಲಿಲ್ಲ. ’ಗಾಂಧಿ ಭವನ ಚನ್ನಾಗ್ಯದೆ ಸಾರ್’ ಎಂದೆ. “ಇನ್ನ ಚನ್ನಾಗಿರದು. ಇರೊ ಜಾಗದಲ್ಯಲ್ಲ. ಕಟ್ಟಿದ್ರೆ ಹೊರಗಡೆ ಜಾಗದಲ್ಲಿ ಗಾಡಿಗಳು ನಿಂತಗಳವು. ಆ ಡಿ.ಕೆ ಶಿವಕುಮಾರ ವಸಿ ಜಾಗ ವಡಕಂಡು ಅದೇನೊ ಕಟ್ಟಿಗಂಡ. ಬರಿ ಇಂತ ಕ್ಯಲಸಗಳಯ ಅವುರವು” ಎಂದು ಸಿಟ್ಟಾದರು. ಎದ್ದು ಬಂದೆ ಆ ನಂತರ ಹೆಚ್.ಟಿ ಕೃಷ್ಣಪ್ಪನವರ ಬಳಿ ಬಂದು “ಸಾರ್ ಮಾದೇಗೌಡ್ರು ಅದ್ಭುತ ಸಾರ್. ನಿಮ್ಮ ಇಡೀ ಜೀವನನ ಐದು ಪದದಲ್ಲಿ ಹೇಳಿ ಮುಗಿಸಿದ್ರು” ಅಂದೆ. ನಗಾಡಿದ ಅವರು “ಆಯ್ತು ಅಷ್ಟನೆ ಹಾಕಿ” ಎಂದರು. ಹಾಗೇ ಮಾಡಿದೆ. ಮಾದೇಗೌಡರ ಬಳಿ ಅನವಶ್ಯಕ ಪುಲಾರಕ್ಕೆ ಅವಕಾಶವಿರಲಿಲ್ಲ.

ವಯಸ್ಸಾದ ವ್ಯಕ್ತಿಯ ಮಾತಿನಲ್ಲಿ ಮೊದಲಿನ ನಿಷ್ಠುರತೆ ಸಿಟ್ಟು ಸೆಡವುಗಳಿರುವುದಿಲ್ಲ ಎನ್ನುತ್ತಾರೆ. ಆದರೆ ಮಾದೇಗೌಡರ ವಿಷಯದಲ್ಲಿ ಇವು ಸುಳ್ಳಾಗಿದ್ದವು. ಬದುಕಿನ ಕಟ್ಟಕಡೆಯವರೆಗೂ ಅವರು ಕಡುಪಾಗೇ ಇದ್ದರು. ಜಿಲ್ಲಾಧಿಕಾರಿಯಿಂದ ಹಿಡಿದು ಯಾರಿಗೂ ಕೇರ್ ಮಾಡದ ಮಾದೇಗೌಡರು, ಮೈಗಳ್ಳ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದರು. ಕಲೆ, ಸಾಹಿತ್ಯ ಸಂಗೀತದ ಅಭಿರುಚಿಯಿಂದ ಕೆ.ವಿ ಶಂಕರೇಗೌಡರು ಜಿಲ್ಲೆಗೆ ಕೀರ್ತಿ ತಂದರೆ ಮಾದೇಗೌಡರು ತಮ್ಮ ವಿಶಿಷ್ಟ ರೀತಿಯ ರಾಜಕಾರಣದ ವರಸೆಯಿಂದ ಮಂಡ್ಯ ಜಿಲ್ಲೆಗೆ ಹೆಸರು ತಂದಿದ್ದರು. ತುಂಬ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಮಗನಿಗೆ ವಹಿಸಿದ್ದರು. ಮಗ ಚಿರಂಜೀವಿ ಸಿಂಗ್ ತರದ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಮಗ ರಾಜಕಾರಣಕ್ಕೆ ಬಂದಾಗ ಅವರು ಸಿಡಿಮಿಡಿಗೊಂಡು “ವಳ್ಳೆ ಅಧಿಕಾರಿಯಾಗು ಅಂದ್ರೆ ಈ ಬಡೆತದ್ದು ರಾಜಕೀಯಕ್ಕೆ ಬತ್ತಲ್ಲ ಹೇಳು” ಎಂದಿದ್ದರು.

ಒಮ್ಮೆ ಲಂಕೇಶ್ ಎದುರು ಕುಳಿತಿದ್ದ ಹೆಚ್.ಎಲ್. ಕೇಶವಮೂರ್ತಿಯವರು ಮಾದೇಗೌಡರ ಆರೋಗ್ಯದ ಬಗ್ಗೆ ಮಾತನಾಡುತ್ತ “ತುಂಬಾ ಕುಡಿತರೆ ಸಾರ್ ಎದುರಿಗಿದ್ದ ಬಾಟ್ಳಿ ಖಾಲಿ ಮಾಡಿದ ಮ್ಯಾಲೆ ಮೇಕ್ಕೇಳದು” ಎಂದರು. ತುಂಬಾ ಒಳ್ಳೆದು, ಮಾದೇಗೌಡ್ರು ಈ ವಯಸ್ಸಲ್ಲಿ ಅಷ್ಟು ಕುಡಿತರೆ ಅಂದ್ರೆ ಹೆಮ್ಮೆ ಪಡಬೇಕು ನಾವು ಎಂದು ನಕ್ಕರು. ಆದರೆ, ಮಾದೇಗೌಡರು ತುಂಬು ಜೀವನ ನಡೆಸಿ ಶಿಕ್ಷಣ ಸಂಸ್ಥೆ, ಗಾಂಧಿ ಭವನ ಮತ್ತು ಚಳವಳಿಯನ್ನು ಬಿಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಂಡ್ಯದಲ್ಲಿ ಅವರ ಜಾಗ ತುಂಬುವವರು ಯಾರೂ ಇಲ್ಲ. ಒಂದು ಇತಿಹಾಸ ಕೊನೆಗೊಂಡಿದೆ.

  • ಬಿ ಚಂದ್ರೇಗೌಡ

ಇದನ್ನೂ ಓದಿ: ಕೊಪ್ಪಳ: ಹಿರಿಯ ಸಾಹಿತಿ, ಜನಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...