Homeಕರ್ನಾಟಕಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

ಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

- Advertisement -
- Advertisement -

ಜಿ. ಮಾದೇಗೌಡರು ಗಾಂಧಿವಾದಿ. ಕೆಲವರಿಗೆ ’ಇವನ್ಯಾವ ಸೀಮೆ ಗಾಂಧಿವಾದಿ’ ಅನ್ನಿಸುತ್ತಿದ್ದುದೂ ಉಂಟು. ಯಾಕೆಂದರೆ ಅವರ ಅಸಹನೆಯ ಸಿಟ್ಟಿನ ಮುಖ, ತೀಕ್ಷ್ಣವಾದ ಕಣ್ಣುಗಳು ಮತ್ತು ಈ ರೂಪಕ್ಕೆ ಮೆರಗು ಕೊಟ್ಟಂತಹ ಅವರ ನಿಷ್ಠುರವಾದ ಮಾತುಗಳು ಹಾಗೂ ಆ ಮಾತಿನಲ್ಲಿ ಅಡಗಿದ್ದ ಸತ್ಯ ಸಂಗತಿಗಳು. ಹೀಗೆ, ಗಾಂಧಿವಾದಿಗಳು ಹೀಗೂ ಇರಬಲ್ಲರು ಎಂದು ತೋರಿಸಿಕೊಟ್ಟವರು ಮಾದೇಗೌಡರು. ಮಂಡ್ಯದ ಮಣ್ಣು ರೂಪಿಸಿದ ಅಪರೂಪದ ರಾಜಕಾರಣಿಗಳ ಪೈಕಿ ಮಾದೇಗೌಡರ ವರಸೆಯೇ ಬೇರೆ. ಇತರರನ್ನು ಮೆಚ್ಚಿಸುವುದಕ್ಕಾಗಿ ಎಂದೂ ಮಾತನಾಡಿದವರಲ್ಲ. ಹಾಸ್ಯ ಅವರಿಗೆ ಹಿಡಿಸುತ್ತಿರಲಿಲ್ಲ. ಆದರೆ ಅವರ ಕೆಲವು ಮಾತುಗಳು ಹಾಸ್ಯವಾಗಿ ಪರಿವರ್ತನೆಯಾಗುತ್ತಿದ್ದವು. ಉದಾಹರಣೆಗೆ ಅವರೇ ಹೇಳಿದಂತೆ, ’ಈ ಎಸ್.ಎಂ. ಕೃಷ್ಣ ಮತ್ತೆ ಅಂಬರೀಶ್ ರಾಜಕಾರಣದಲ್ಲಿ ಯಾವ ಗೇಮೆಯನ್ನು ಮಾಡದವರು. ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಇಂತಹ ದೈಹಿಕ ಶ್ರಮದಿಂದ ದೂರವುಳಿದವರು. ಆದರೂ ಅವುರು ರಾಜಕಾರಣದಲ್ಲಿ ಏನೇನೊ ಆದ್ರು. ಒಬ್ಬ ಮೋಜುಗಾರ ಇನ್ನೊಬ್ಬ ಸೊಗಸುಗಾರ. ಈ ಹಾಳುಡುಗ್ರು ಅವುರು ಬಂದಾಗ ನ್ವಣ ಮುತ್ತಿದಂಗೆ ಮುತ್ತಿಗತವೆ. ಇದಕೇನೇಳನ’ ಎಂದಿದ್ದರು.

ಕಾವೇರಿ ವಿಷಯ ಅವರ ಜೀವನಾಡಿಯಾಗಿತ್ತು. ಕಾವೇರಿ ಸಮಸ್ಯೆ ಭುಗಿಲೇಳುವುದಕ್ಕೂ ಮೊದಲೆ ಹಾಜರಾಗಿ ಚಳವಳಿಯನ್ನ ನಿಯಂತ್ರಿಸುತ್ತಿದ್ದರು. ಅದೂ ಗಾಂಧಿ ಮಾರ್ಗದಲ್ಲಿ. ಒಮ್ಮೆ ಈ ಚಳವಳಿಯೊಳಕ್ಕೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜಿನಾಮೆಯಿತ್ತು ಬಂದು ಸೇರಿಕೊಂಡರು. ಇದು ಮಾದೇಗೌಡರಿಗೆ
ಸಿಟ್ಟು ತರಿಸಿ ಗದರಿಸಿ ಕಳಿಸಿದ್ದರು. ಇಷ್ಟಾದರೂ ಅಂಬಿ ಮತ್ತು ಮಾದೇಗೌಡರ ನಡುವೆ ಒಳ್ಳೆ ಸಂಬಂಧವಿತ್ತು. ಒಮ್ಮೆ ಗೌಡರು ಅಂಬರೀಶ್‌ರನ್ನು ಕುರಿತು “ಲೇ ಅಂಬರೀಶ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು” ಅಂದರು. ಅದಕ್ಕೆ ಅಂಬಿ “ಲೇ ಮುದುಕ ಮ್ಯಟ್ರೆ ಹಿಸಿಗಿ ಸಾಯಿಸಿಬುಡ್ತಿನಿ ಸುಮ್ಮನಿರು” ಎಂದರು. ಎಲ್ಲರ ಸ್ಥಾನಮಾನ ಸೊಕ್ಕನ್ನು ಮುರಿದು ತನ್ನ ವ್ಯಕ್ತಿತ್ವಕ್ಕೆ ಒಗ್ಗಿಸಿಕೊಳ್ಳುವ ಅಂಬರೀಶ್ ತನ್ನ ಇಂತಹ ಗುಣಕ್ಕೆ ಒಗ್ಗಿಕೊಳ್ಳದವರ ಬಳಿ ಸುಳಿಯುತ್ತಿರಲಿಲ್ಲ. ಉದಾಹರಣೆ ದೇವೇಗೌಡರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇಂತಹವರ ಬಳಿ ಐದು ನಿಮಿಷವೂ ಇರುತ್ತಿರಲಿಲ್ಲ. ಆದರೆ ಇಂತವರ ಸಾಲಿನ ಮಾದೇಗೌಡರನ್ನ ಪಳಗಿಸಿದ್ದರು. ಕಾವೇರಿ ವಿಷಯದಲ್ಲಿ ಇಬ್ಬರ ಅಭಿಪ್ರಾಯಗಳು ಅವರ ಮನೋಗತಕ್ಕೆ ತಕ್ಕಂತಿದ್ದವು. ಕೆರೆಕಟ್ಟೆಯ ವಿಷಯದಲ್ಲಿ ವಾಟರ್ ಪಾಲಿಸಿ ಎಂಬುದೊಂದಿದೆ. ಅಚ್ಚುಕಟ್ಟಿನ ಕಟ್ಟಕಡೆ ರೈತನಿಗೂ ನೀರು ತಲುಪಬೇಕು.

ಆದರೆ ಮಾದೇಗೌಡರು “ಡ್ಯಾಂ ನಮ್ಮದು, ಅದರ ಗೇಟಿನ ಕೀ ನನ್ನ ಬಳಿ ಇರಬೇಕು. ಬೇಕಾದ್ರೆ ನೀರು ಕೊಟ್ಟೆ ಇಲ್ದಿದ್ರೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದರು. ಅದೇ ಅಂಬರೀಶ್ “ನನ್ನ ಬಕೀಟಲ್ಲಿ ನೀರಿದ್ರೆ ಯರಡು ಲೋಟ ಕೊಡ್ತಿನಪ್ಪ ನೀರೆ ಇಲ್ದಿದ್ರೆ ಎಲ್ಲಿಕೊಡ್ಲಿ” ಎನ್ನುತ್ತಿದ್ದರು.

ಮಾದೇಗೌಡರ ಚಳವಳಿ ಕಾವೇರಿಗೆ ಮಾತ್ರ ಸೀಮಿತವಾಗಿತ್ತು. ಒಂದು ಬಾರಿ ಕಾವೇರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗಕ್ಕೆ ಬಂದರು. ಈಗಾಗಲೇ ಪ್ರತಿಭಟಿಸುತ್ತಿದ್ದ ರೈತರು “ಅಯ್ಯವ್ ಏಳಯ್ಯ ಮ್ಯಾಕೆ ನಡಿಯಯ್ಯ ಈಗ ಬಂದುಬಿಟ್ಟ. ಅಲ್ಲೋಗಿ ಸಿ.ಎಂ ಅತ್ರ ಏನೇನೊ ಕ್ಯಲಸ ಮಾಡಿಸಿಕೊಳದು ಇಲ್ಲಿ ಬಂದು ಚಳವಳಿ ಮಾಡದು” ಎಂದು ಮೂದಲಿಸಿಬಿಟ್ಟರು. ಚಳವಳಿಗೆ ನನ್ನಂಥವರ ಅಗತ್ಯವಿಲ್ಲವೇನೊ ಅಂತ ಒಂದುಕ್ಷಣ ಮಾದೇಗೌಡರಿಗೆ ಅನ್ನಿಸಿಬಿಟ್ಟಿತು. ಆದರೆ, ಗಾಂಧಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಅವರು ತಮ್ಮ ಹೋರಾಟಗಳನ್ನು ಕೈಬಿಟ್ಟವರಲ್ಲ. ಅವರ ಬದುಕಿನ ಬಹುದೊಡ್ಡ ಸಾಧನೆಯಾದ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡ ಮೇಲೆ ಅದರ ಮುಂದೆ ಕುಳಿತು, ಹಾಳಾಗುತ್ತಿರುವ ಯುವಜನತೆ, ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಯೋಚಿಸುತ್ತ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಸಮಕಾಲೀನ ರಾಜಕಾರಣಿಯಾದ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಮಯದಲ್ಲಿ ಮಾತನಾಡಿಸಲು ಹೋಗಿದ್ದೆ. ಗಾಂಧಿ ಭವನದ ವರಾಂಡದಲ್ಲಿ ಕುಳಿತಿದ್ದ ಅವರ ಪಕ್ಕ ಕುಳಿತ ನಾನು “ಸಾರ್ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರತಾಯಿದ್ದಿವಿ, ಅವರು ನಿಮ್ಮ ಸಮಕಾಲೀನರು ಮತ್ತು ಒಡನಾಡಿಯಾಗಿದ್ರು. ಅವುರ ಬಗ್ಗೆ ಹೇಳಿ ಸಾರ್” ಎಂದೆ. ಮಾದೇಗೌಡರು ಒಳಗಣ್ಣಾಗಿ “ಕೃಷ್ಣಪ್ಪ ನಾನು ತಾಲೂಕ್ ಬೋರ್ಡ್ ಚುನಾವಣೆ ಮುಖಾಂತರ ರಾಜಕೀಯಕ್ಕೆ ಬಂದೊ.. ಅವುರು ಇಲ್ಲೇ ಲಾಯರಾಗಿದ್ರು. ನಾಟಕದಲ್ಲಿ ಪಾರ್ಟು ಮಾಡತಿದ್ರು. ಪದ ಹೇಳತಿದ್ರು. ಮಾತ್ರ ವಳ್ಳೆ ಮನ್ಸ” ಎಂದವರು ತಿರುಗಿ ಮಾತನಾಡಲಿಲ್ಲ. ಈ ರೀತಿ ಕೇಳಲು ಬಂದವನು ಯಾವೂರ ದಾಸಯ್ಯ ಎಂದೂ ನೋಡಲಿಲ್ಲ. ’ಗಾಂಧಿ ಭವನ ಚನ್ನಾಗ್ಯದೆ ಸಾರ್’ ಎಂದೆ. “ಇನ್ನ ಚನ್ನಾಗಿರದು. ಇರೊ ಜಾಗದಲ್ಯಲ್ಲ. ಕಟ್ಟಿದ್ರೆ ಹೊರಗಡೆ ಜಾಗದಲ್ಲಿ ಗಾಡಿಗಳು ನಿಂತಗಳವು. ಆ ಡಿ.ಕೆ ಶಿವಕುಮಾರ ವಸಿ ಜಾಗ ವಡಕಂಡು ಅದೇನೊ ಕಟ್ಟಿಗಂಡ. ಬರಿ ಇಂತ ಕ್ಯಲಸಗಳಯ ಅವುರವು” ಎಂದು ಸಿಟ್ಟಾದರು. ಎದ್ದು ಬಂದೆ ಆ ನಂತರ ಹೆಚ್.ಟಿ ಕೃಷ್ಣಪ್ಪನವರ ಬಳಿ ಬಂದು “ಸಾರ್ ಮಾದೇಗೌಡ್ರು ಅದ್ಭುತ ಸಾರ್. ನಿಮ್ಮ ಇಡೀ ಜೀವನನ ಐದು ಪದದಲ್ಲಿ ಹೇಳಿ ಮುಗಿಸಿದ್ರು” ಅಂದೆ. ನಗಾಡಿದ ಅವರು “ಆಯ್ತು ಅಷ್ಟನೆ ಹಾಕಿ” ಎಂದರು. ಹಾಗೇ ಮಾಡಿದೆ. ಮಾದೇಗೌಡರ ಬಳಿ ಅನವಶ್ಯಕ ಪುಲಾರಕ್ಕೆ ಅವಕಾಶವಿರಲಿಲ್ಲ.

ವಯಸ್ಸಾದ ವ್ಯಕ್ತಿಯ ಮಾತಿನಲ್ಲಿ ಮೊದಲಿನ ನಿಷ್ಠುರತೆ ಸಿಟ್ಟು ಸೆಡವುಗಳಿರುವುದಿಲ್ಲ ಎನ್ನುತ್ತಾರೆ. ಆದರೆ ಮಾದೇಗೌಡರ ವಿಷಯದಲ್ಲಿ ಇವು ಸುಳ್ಳಾಗಿದ್ದವು. ಬದುಕಿನ ಕಟ್ಟಕಡೆಯವರೆಗೂ ಅವರು ಕಡುಪಾಗೇ ಇದ್ದರು. ಜಿಲ್ಲಾಧಿಕಾರಿಯಿಂದ ಹಿಡಿದು ಯಾರಿಗೂ ಕೇರ್ ಮಾಡದ ಮಾದೇಗೌಡರು, ಮೈಗಳ್ಳ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದರು. ಕಲೆ, ಸಾಹಿತ್ಯ ಸಂಗೀತದ ಅಭಿರುಚಿಯಿಂದ ಕೆ.ವಿ ಶಂಕರೇಗೌಡರು ಜಿಲ್ಲೆಗೆ ಕೀರ್ತಿ ತಂದರೆ ಮಾದೇಗೌಡರು ತಮ್ಮ ವಿಶಿಷ್ಟ ರೀತಿಯ ರಾಜಕಾರಣದ ವರಸೆಯಿಂದ ಮಂಡ್ಯ ಜಿಲ್ಲೆಗೆ ಹೆಸರು ತಂದಿದ್ದರು. ತುಂಬ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಮಗನಿಗೆ ವಹಿಸಿದ್ದರು. ಮಗ ಚಿರಂಜೀವಿ ಸಿಂಗ್ ತರದ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಮಗ ರಾಜಕಾರಣಕ್ಕೆ ಬಂದಾಗ ಅವರು ಸಿಡಿಮಿಡಿಗೊಂಡು “ವಳ್ಳೆ ಅಧಿಕಾರಿಯಾಗು ಅಂದ್ರೆ ಈ ಬಡೆತದ್ದು ರಾಜಕೀಯಕ್ಕೆ ಬತ್ತಲ್ಲ ಹೇಳು” ಎಂದಿದ್ದರು.

ಒಮ್ಮೆ ಲಂಕೇಶ್ ಎದುರು ಕುಳಿತಿದ್ದ ಹೆಚ್.ಎಲ್. ಕೇಶವಮೂರ್ತಿಯವರು ಮಾದೇಗೌಡರ ಆರೋಗ್ಯದ ಬಗ್ಗೆ ಮಾತನಾಡುತ್ತ “ತುಂಬಾ ಕುಡಿತರೆ ಸಾರ್ ಎದುರಿಗಿದ್ದ ಬಾಟ್ಳಿ ಖಾಲಿ ಮಾಡಿದ ಮ್ಯಾಲೆ ಮೇಕ್ಕೇಳದು” ಎಂದರು. ತುಂಬಾ ಒಳ್ಳೆದು, ಮಾದೇಗೌಡ್ರು ಈ ವಯಸ್ಸಲ್ಲಿ ಅಷ್ಟು ಕುಡಿತರೆ ಅಂದ್ರೆ ಹೆಮ್ಮೆ ಪಡಬೇಕು ನಾವು ಎಂದು ನಕ್ಕರು. ಆದರೆ, ಮಾದೇಗೌಡರು ತುಂಬು ಜೀವನ ನಡೆಸಿ ಶಿಕ್ಷಣ ಸಂಸ್ಥೆ, ಗಾಂಧಿ ಭವನ ಮತ್ತು ಚಳವಳಿಯನ್ನು ಬಿಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಂಡ್ಯದಲ್ಲಿ ಅವರ ಜಾಗ ತುಂಬುವವರು ಯಾರೂ ಇಲ್ಲ. ಒಂದು ಇತಿಹಾಸ ಕೊನೆಗೊಂಡಿದೆ.

  • ಬಿ ಚಂದ್ರೇಗೌಡ

ಇದನ್ನೂ ಓದಿ: ಕೊಪ್ಪಳ: ಹಿರಿಯ ಸಾಹಿತಿ, ಜನಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...