Homeಕರ್ನಾಟಕಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

ಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

- Advertisement -
- Advertisement -

ಜಿ. ಮಾದೇಗೌಡರು ಗಾಂಧಿವಾದಿ. ಕೆಲವರಿಗೆ ’ಇವನ್ಯಾವ ಸೀಮೆ ಗಾಂಧಿವಾದಿ’ ಅನ್ನಿಸುತ್ತಿದ್ದುದೂ ಉಂಟು. ಯಾಕೆಂದರೆ ಅವರ ಅಸಹನೆಯ ಸಿಟ್ಟಿನ ಮುಖ, ತೀಕ್ಷ್ಣವಾದ ಕಣ್ಣುಗಳು ಮತ್ತು ಈ ರೂಪಕ್ಕೆ ಮೆರಗು ಕೊಟ್ಟಂತಹ ಅವರ ನಿಷ್ಠುರವಾದ ಮಾತುಗಳು ಹಾಗೂ ಆ ಮಾತಿನಲ್ಲಿ ಅಡಗಿದ್ದ ಸತ್ಯ ಸಂಗತಿಗಳು. ಹೀಗೆ, ಗಾಂಧಿವಾದಿಗಳು ಹೀಗೂ ಇರಬಲ್ಲರು ಎಂದು ತೋರಿಸಿಕೊಟ್ಟವರು ಮಾದೇಗೌಡರು. ಮಂಡ್ಯದ ಮಣ್ಣು ರೂಪಿಸಿದ ಅಪರೂಪದ ರಾಜಕಾರಣಿಗಳ ಪೈಕಿ ಮಾದೇಗೌಡರ ವರಸೆಯೇ ಬೇರೆ. ಇತರರನ್ನು ಮೆಚ್ಚಿಸುವುದಕ್ಕಾಗಿ ಎಂದೂ ಮಾತನಾಡಿದವರಲ್ಲ. ಹಾಸ್ಯ ಅವರಿಗೆ ಹಿಡಿಸುತ್ತಿರಲಿಲ್ಲ. ಆದರೆ ಅವರ ಕೆಲವು ಮಾತುಗಳು ಹಾಸ್ಯವಾಗಿ ಪರಿವರ್ತನೆಯಾಗುತ್ತಿದ್ದವು. ಉದಾಹರಣೆಗೆ ಅವರೇ ಹೇಳಿದಂತೆ, ’ಈ ಎಸ್.ಎಂ. ಕೃಷ್ಣ ಮತ್ತೆ ಅಂಬರೀಶ್ ರಾಜಕಾರಣದಲ್ಲಿ ಯಾವ ಗೇಮೆಯನ್ನು ಮಾಡದವರು. ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಇಂತಹ ದೈಹಿಕ ಶ್ರಮದಿಂದ ದೂರವುಳಿದವರು. ಆದರೂ ಅವುರು ರಾಜಕಾರಣದಲ್ಲಿ ಏನೇನೊ ಆದ್ರು. ಒಬ್ಬ ಮೋಜುಗಾರ ಇನ್ನೊಬ್ಬ ಸೊಗಸುಗಾರ. ಈ ಹಾಳುಡುಗ್ರು ಅವುರು ಬಂದಾಗ ನ್ವಣ ಮುತ್ತಿದಂಗೆ ಮುತ್ತಿಗತವೆ. ಇದಕೇನೇಳನ’ ಎಂದಿದ್ದರು.

ಕಾವೇರಿ ವಿಷಯ ಅವರ ಜೀವನಾಡಿಯಾಗಿತ್ತು. ಕಾವೇರಿ ಸಮಸ್ಯೆ ಭುಗಿಲೇಳುವುದಕ್ಕೂ ಮೊದಲೆ ಹಾಜರಾಗಿ ಚಳವಳಿಯನ್ನ ನಿಯಂತ್ರಿಸುತ್ತಿದ್ದರು. ಅದೂ ಗಾಂಧಿ ಮಾರ್ಗದಲ್ಲಿ. ಒಮ್ಮೆ ಈ ಚಳವಳಿಯೊಳಕ್ಕೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜಿನಾಮೆಯಿತ್ತು ಬಂದು ಸೇರಿಕೊಂಡರು. ಇದು ಮಾದೇಗೌಡರಿಗೆ
ಸಿಟ್ಟು ತರಿಸಿ ಗದರಿಸಿ ಕಳಿಸಿದ್ದರು. ಇಷ್ಟಾದರೂ ಅಂಬಿ ಮತ್ತು ಮಾದೇಗೌಡರ ನಡುವೆ ಒಳ್ಳೆ ಸಂಬಂಧವಿತ್ತು. ಒಮ್ಮೆ ಗೌಡರು ಅಂಬರೀಶ್‌ರನ್ನು ಕುರಿತು “ಲೇ ಅಂಬರೀಶ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು” ಅಂದರು. ಅದಕ್ಕೆ ಅಂಬಿ “ಲೇ ಮುದುಕ ಮ್ಯಟ್ರೆ ಹಿಸಿಗಿ ಸಾಯಿಸಿಬುಡ್ತಿನಿ ಸುಮ್ಮನಿರು” ಎಂದರು. ಎಲ್ಲರ ಸ್ಥಾನಮಾನ ಸೊಕ್ಕನ್ನು ಮುರಿದು ತನ್ನ ವ್ಯಕ್ತಿತ್ವಕ್ಕೆ ಒಗ್ಗಿಸಿಕೊಳ್ಳುವ ಅಂಬರೀಶ್ ತನ್ನ ಇಂತಹ ಗುಣಕ್ಕೆ ಒಗ್ಗಿಕೊಳ್ಳದವರ ಬಳಿ ಸುಳಿಯುತ್ತಿರಲಿಲ್ಲ. ಉದಾಹರಣೆ ದೇವೇಗೌಡರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇಂತಹವರ ಬಳಿ ಐದು ನಿಮಿಷವೂ ಇರುತ್ತಿರಲಿಲ್ಲ. ಆದರೆ ಇಂತವರ ಸಾಲಿನ ಮಾದೇಗೌಡರನ್ನ ಪಳಗಿಸಿದ್ದರು. ಕಾವೇರಿ ವಿಷಯದಲ್ಲಿ ಇಬ್ಬರ ಅಭಿಪ್ರಾಯಗಳು ಅವರ ಮನೋಗತಕ್ಕೆ ತಕ್ಕಂತಿದ್ದವು. ಕೆರೆಕಟ್ಟೆಯ ವಿಷಯದಲ್ಲಿ ವಾಟರ್ ಪಾಲಿಸಿ ಎಂಬುದೊಂದಿದೆ. ಅಚ್ಚುಕಟ್ಟಿನ ಕಟ್ಟಕಡೆ ರೈತನಿಗೂ ನೀರು ತಲುಪಬೇಕು.

ಆದರೆ ಮಾದೇಗೌಡರು “ಡ್ಯಾಂ ನಮ್ಮದು, ಅದರ ಗೇಟಿನ ಕೀ ನನ್ನ ಬಳಿ ಇರಬೇಕು. ಬೇಕಾದ್ರೆ ನೀರು ಕೊಟ್ಟೆ ಇಲ್ದಿದ್ರೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದರು. ಅದೇ ಅಂಬರೀಶ್ “ನನ್ನ ಬಕೀಟಲ್ಲಿ ನೀರಿದ್ರೆ ಯರಡು ಲೋಟ ಕೊಡ್ತಿನಪ್ಪ ನೀರೆ ಇಲ್ದಿದ್ರೆ ಎಲ್ಲಿಕೊಡ್ಲಿ” ಎನ್ನುತ್ತಿದ್ದರು.

ಮಾದೇಗೌಡರ ಚಳವಳಿ ಕಾವೇರಿಗೆ ಮಾತ್ರ ಸೀಮಿತವಾಗಿತ್ತು. ಒಂದು ಬಾರಿ ಕಾವೇರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗಕ್ಕೆ ಬಂದರು. ಈಗಾಗಲೇ ಪ್ರತಿಭಟಿಸುತ್ತಿದ್ದ ರೈತರು “ಅಯ್ಯವ್ ಏಳಯ್ಯ ಮ್ಯಾಕೆ ನಡಿಯಯ್ಯ ಈಗ ಬಂದುಬಿಟ್ಟ. ಅಲ್ಲೋಗಿ ಸಿ.ಎಂ ಅತ್ರ ಏನೇನೊ ಕ್ಯಲಸ ಮಾಡಿಸಿಕೊಳದು ಇಲ್ಲಿ ಬಂದು ಚಳವಳಿ ಮಾಡದು” ಎಂದು ಮೂದಲಿಸಿಬಿಟ್ಟರು. ಚಳವಳಿಗೆ ನನ್ನಂಥವರ ಅಗತ್ಯವಿಲ್ಲವೇನೊ ಅಂತ ಒಂದುಕ್ಷಣ ಮಾದೇಗೌಡರಿಗೆ ಅನ್ನಿಸಿಬಿಟ್ಟಿತು. ಆದರೆ, ಗಾಂಧಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಅವರು ತಮ್ಮ ಹೋರಾಟಗಳನ್ನು ಕೈಬಿಟ್ಟವರಲ್ಲ. ಅವರ ಬದುಕಿನ ಬಹುದೊಡ್ಡ ಸಾಧನೆಯಾದ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡ ಮೇಲೆ ಅದರ ಮುಂದೆ ಕುಳಿತು, ಹಾಳಾಗುತ್ತಿರುವ ಯುವಜನತೆ, ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಯೋಚಿಸುತ್ತ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಸಮಕಾಲೀನ ರಾಜಕಾರಣಿಯಾದ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಮಯದಲ್ಲಿ ಮಾತನಾಡಿಸಲು ಹೋಗಿದ್ದೆ. ಗಾಂಧಿ ಭವನದ ವರಾಂಡದಲ್ಲಿ ಕುಳಿತಿದ್ದ ಅವರ ಪಕ್ಕ ಕುಳಿತ ನಾನು “ಸಾರ್ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರತಾಯಿದ್ದಿವಿ, ಅವರು ನಿಮ್ಮ ಸಮಕಾಲೀನರು ಮತ್ತು ಒಡನಾಡಿಯಾಗಿದ್ರು. ಅವುರ ಬಗ್ಗೆ ಹೇಳಿ ಸಾರ್” ಎಂದೆ. ಮಾದೇಗೌಡರು ಒಳಗಣ್ಣಾಗಿ “ಕೃಷ್ಣಪ್ಪ ನಾನು ತಾಲೂಕ್ ಬೋರ್ಡ್ ಚುನಾವಣೆ ಮುಖಾಂತರ ರಾಜಕೀಯಕ್ಕೆ ಬಂದೊ.. ಅವುರು ಇಲ್ಲೇ ಲಾಯರಾಗಿದ್ರು. ನಾಟಕದಲ್ಲಿ ಪಾರ್ಟು ಮಾಡತಿದ್ರು. ಪದ ಹೇಳತಿದ್ರು. ಮಾತ್ರ ವಳ್ಳೆ ಮನ್ಸ” ಎಂದವರು ತಿರುಗಿ ಮಾತನಾಡಲಿಲ್ಲ. ಈ ರೀತಿ ಕೇಳಲು ಬಂದವನು ಯಾವೂರ ದಾಸಯ್ಯ ಎಂದೂ ನೋಡಲಿಲ್ಲ. ’ಗಾಂಧಿ ಭವನ ಚನ್ನಾಗ್ಯದೆ ಸಾರ್’ ಎಂದೆ. “ಇನ್ನ ಚನ್ನಾಗಿರದು. ಇರೊ ಜಾಗದಲ್ಯಲ್ಲ. ಕಟ್ಟಿದ್ರೆ ಹೊರಗಡೆ ಜಾಗದಲ್ಲಿ ಗಾಡಿಗಳು ನಿಂತಗಳವು. ಆ ಡಿ.ಕೆ ಶಿವಕುಮಾರ ವಸಿ ಜಾಗ ವಡಕಂಡು ಅದೇನೊ ಕಟ್ಟಿಗಂಡ. ಬರಿ ಇಂತ ಕ್ಯಲಸಗಳಯ ಅವುರವು” ಎಂದು ಸಿಟ್ಟಾದರು. ಎದ್ದು ಬಂದೆ ಆ ನಂತರ ಹೆಚ್.ಟಿ ಕೃಷ್ಣಪ್ಪನವರ ಬಳಿ ಬಂದು “ಸಾರ್ ಮಾದೇಗೌಡ್ರು ಅದ್ಭುತ ಸಾರ್. ನಿಮ್ಮ ಇಡೀ ಜೀವನನ ಐದು ಪದದಲ್ಲಿ ಹೇಳಿ ಮುಗಿಸಿದ್ರು” ಅಂದೆ. ನಗಾಡಿದ ಅವರು “ಆಯ್ತು ಅಷ್ಟನೆ ಹಾಕಿ” ಎಂದರು. ಹಾಗೇ ಮಾಡಿದೆ. ಮಾದೇಗೌಡರ ಬಳಿ ಅನವಶ್ಯಕ ಪುಲಾರಕ್ಕೆ ಅವಕಾಶವಿರಲಿಲ್ಲ.

ವಯಸ್ಸಾದ ವ್ಯಕ್ತಿಯ ಮಾತಿನಲ್ಲಿ ಮೊದಲಿನ ನಿಷ್ಠುರತೆ ಸಿಟ್ಟು ಸೆಡವುಗಳಿರುವುದಿಲ್ಲ ಎನ್ನುತ್ತಾರೆ. ಆದರೆ ಮಾದೇಗೌಡರ ವಿಷಯದಲ್ಲಿ ಇವು ಸುಳ್ಳಾಗಿದ್ದವು. ಬದುಕಿನ ಕಟ್ಟಕಡೆಯವರೆಗೂ ಅವರು ಕಡುಪಾಗೇ ಇದ್ದರು. ಜಿಲ್ಲಾಧಿಕಾರಿಯಿಂದ ಹಿಡಿದು ಯಾರಿಗೂ ಕೇರ್ ಮಾಡದ ಮಾದೇಗೌಡರು, ಮೈಗಳ್ಳ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದರು. ಕಲೆ, ಸಾಹಿತ್ಯ ಸಂಗೀತದ ಅಭಿರುಚಿಯಿಂದ ಕೆ.ವಿ ಶಂಕರೇಗೌಡರು ಜಿಲ್ಲೆಗೆ ಕೀರ್ತಿ ತಂದರೆ ಮಾದೇಗೌಡರು ತಮ್ಮ ವಿಶಿಷ್ಟ ರೀತಿಯ ರಾಜಕಾರಣದ ವರಸೆಯಿಂದ ಮಂಡ್ಯ ಜಿಲ್ಲೆಗೆ ಹೆಸರು ತಂದಿದ್ದರು. ತುಂಬ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಮಗನಿಗೆ ವಹಿಸಿದ್ದರು. ಮಗ ಚಿರಂಜೀವಿ ಸಿಂಗ್ ತರದ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಮಗ ರಾಜಕಾರಣಕ್ಕೆ ಬಂದಾಗ ಅವರು ಸಿಡಿಮಿಡಿಗೊಂಡು “ವಳ್ಳೆ ಅಧಿಕಾರಿಯಾಗು ಅಂದ್ರೆ ಈ ಬಡೆತದ್ದು ರಾಜಕೀಯಕ್ಕೆ ಬತ್ತಲ್ಲ ಹೇಳು” ಎಂದಿದ್ದರು.

ಒಮ್ಮೆ ಲಂಕೇಶ್ ಎದುರು ಕುಳಿತಿದ್ದ ಹೆಚ್.ಎಲ್. ಕೇಶವಮೂರ್ತಿಯವರು ಮಾದೇಗೌಡರ ಆರೋಗ್ಯದ ಬಗ್ಗೆ ಮಾತನಾಡುತ್ತ “ತುಂಬಾ ಕುಡಿತರೆ ಸಾರ್ ಎದುರಿಗಿದ್ದ ಬಾಟ್ಳಿ ಖಾಲಿ ಮಾಡಿದ ಮ್ಯಾಲೆ ಮೇಕ್ಕೇಳದು” ಎಂದರು. ತುಂಬಾ ಒಳ್ಳೆದು, ಮಾದೇಗೌಡ್ರು ಈ ವಯಸ್ಸಲ್ಲಿ ಅಷ್ಟು ಕುಡಿತರೆ ಅಂದ್ರೆ ಹೆಮ್ಮೆ ಪಡಬೇಕು ನಾವು ಎಂದು ನಕ್ಕರು. ಆದರೆ, ಮಾದೇಗೌಡರು ತುಂಬು ಜೀವನ ನಡೆಸಿ ಶಿಕ್ಷಣ ಸಂಸ್ಥೆ, ಗಾಂಧಿ ಭವನ ಮತ್ತು ಚಳವಳಿಯನ್ನು ಬಿಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಂಡ್ಯದಲ್ಲಿ ಅವರ ಜಾಗ ತುಂಬುವವರು ಯಾರೂ ಇಲ್ಲ. ಒಂದು ಇತಿಹಾಸ ಕೊನೆಗೊಂಡಿದೆ.

  • ಬಿ ಚಂದ್ರೇಗೌಡ

ಇದನ್ನೂ ಓದಿ: ಕೊಪ್ಪಳ: ಹಿರಿಯ ಸಾಹಿತಿ, ಜನಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...