Homeಮುಖಪುಟತುಮಕೂರು ಮಹಾನಗರ ಪಾಲಿಕೆ: 2 ತಿಂಗಳಲ್ಲೇ 9 ಕೋಟಿ ರೂ. ಸಮಾಪ್ತಿ!

ತುಮಕೂರು ಮಹಾನಗರ ಪಾಲಿಕೆ: 2 ತಿಂಗಳಲ್ಲೇ 9 ಕೋಟಿ ರೂ. ಸಮಾಪ್ತಿ!

ಭೂಬಾಲನ್ ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಉಳಿದಿತ್ತು. ಅವರು ಮತ್ತೆ ವಾಪಸ್‌ ಬರುವ ವೇಳೆಗೆ ಎಲ್ಲಾ ಮಂಗಮಾಯವಾಗಿದೆ!

- Advertisement -
- Advertisement -

ತುಮಕೂರು ಮಹಾನಗರ ಪಾಲಿಕೆಯಲ್ಲಿ ದಿಕ್ಕುತಪ್ಪಿದ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಸರಿದಾರಿಗೆ ತರಲು ಆಯುಕ್ತ ಭೂಬಾಲನ್ ಹೆಣಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಐರನ್ ಮೈಂಡ್ ಗಳ ಬಿಗಿಹಿಡಿತ ದಿಂದ ಭೂಬಾಲನ್ ಸುಸೂತ್ರವಾಗಿ; ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎರಡನೇ ಬಾರಿಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಬಾಲನ್ ರಾಜಕಾರಣಿಗಳ ಅಸಹಕಾರ ಮನೋಭಾವದಿಂದ ಕೆಲಸ ಮಾಡಲು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ ಎಂಬ ಚರ್ಚೆ ಜೋರಾಗಿಯೇ ನಡೆದಿದೆ.

ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭೂಬಾಲನ್ ತುಮಕೂರು ಪಾಲಿಕೆಯಿಂದ ವರ್ಗಾವಣೆ ಗೊಂಡರು. ಇದು ಮೇಲ್ನೋಟದ ವಿವರಣೆ. ಆದರೆ ಇವರು ವರ್ಗಾವಣೆಗೊಂಡರು ಎನ್ನುವುದಕ್ಕಿಂತ ಎತ್ತಂಗಡಿ ಮಾಡಿಸಿದರು ಎನ್ನುವುದೇ ಸೂಕ್ತ. ಇದರ ಹಿಂದೆ ‘ಬಸವಜ್ಯೋತಿ’ ಪ್ರಭಾವ ಇದರ ಹಿಂದೆ ಇತ್ತು. ಸಾದಾಸೀದ ಪ್ರಾಮಾಣಿಕ ಅಧಿಕಾರಿ ಭೂಬಾಲನ್ ‘ಬಸವಜ್ಯೋತಿ’ ಮುಂದೆ ಶರಣಾಗಿರಲಿಲ್ಲ. ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ’ ಎಂಬ ಮಾತುಗಳು ಈ ಅಧಿಕಾರಿಗೆ ಹೇಳಿಮಾಡಿಸಿದಂತಿತ್ತು. ಹೀಗಾಗಿ ‘ಪ್ರಭಾವಳಿ’ ಬೀರಿ  ‘ರಿಲ್ಯಾಕ್ಸ್’ ಪಡೆಯಲು ವರ್ಗಾವಣೆ ನಡೆದುಹೋಗಿತ್ತು.

ಇದನ್ನೂ ಓದಿ: ತುಮಕೂರಿನ ಪ್ರಾಮಾಣಿಕ ಅಧಿಕಾರಿಯ ಎತ್ತಂಗಡಿಯ ಹಿಂದಿದ್ದಾರೆ ರಿಯಲ್ ಎಸ್ಟೇಟ್ ರಾಜಕಾರಣಿಗಳು..

ಭೂಬಾಲನ್ ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಪಾಲಿಕೆಯ ಖಜಾನೆಯಲ್ಲಿತ್ತು. ಜನರಿಂದ ನೀರು ಮೊದಲಾದ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಇಷ್ಟೊಂದು ಹಣವನ್ನು ಉಳಿಸಿ ಹೋಗಿದ್ದರು. ಹೋಗುವಾಗ ಯೋಗಾನಂದ ಎಂಬ ಅಧಿಕಾರಿಗೆ ಪಾಲಿಕೆಯ ಅಧಿಕಾರ ಹಸ್ತಾಂತರಿಸಿದ್ದರು. ಯೋಗಾನಂದರಿಗೆ ಯೋಗ ಖುಲಾಯಿಸಿತ್ತು. ಯೋಗಾನಂದರವರು ಆನಂದಲ್ಲಿ ತೇಲತೊಡಗಿದರು. ಸು’ಯೋಗ’ ಬರಬಹುದೆಂದು ನಂಬಿದ್ದವರಿಗೆ ನಿರಾಸೆಯಾಯಿತು.’ಸತ್ಯ’ ಗೊತ್ತಾದ ಮೇಲೆ ಯೋಗಾನಂದರಿಗೆ ಗೇಟ್ ಪಾಸ್ ಕೊಡಿಸಿದರು. ಜನ ಇವರನ್ನು ಅಯೋಗಾನಂದ ಎಂದೇ ಗೇಲಿ ಮಾಡುವುದುಂಟು.

ಜನಪ್ರಿಯ ಆಯುಕ್ತ ಭೂಬಾಲನ್‌

ಇಷ್ಟೊತ್ತಿಗಾಗಲೇ ಪಾಲಿಕೆ ಆಡಳಿತ ಹಳ್ಳ ಹಿಡಿದಿತ್ತು. ಆಗ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು ಬಂದ ಮೇಲೆ ಭೂಬಾಲನ್ ಉಳಿಸಿಹೋಗಿದ್ದ ಸುಮಾರು 9 ರಿಂದ 12 ಕೋಟಿ ರೂ ಹಣ ‘ಕರಗಿ’ಹೋಯಿತು. ಎರಡು ಮೂರು ತಿಂಗಳೊತ್ತಿನಲ್ಲಿ ಕೋಟಿಕೋಟಿ ಹಣ ಧನದಾಹಿಗಳ ಕೈಗೆ ಸೇರಿತ್ತು. ಐರನ್ ಮೈಂಡ್ ಗಳ ಅಸೆಯೂ ಈಡೇರಿತ್ತು. ಪಾಲಿಕೆ ಖಜಾನೆ ಖಾಲಿಖಾಲಿ ಆಗಿದೆ. ಇಷ್ಟೊಂದು ಮೊತ್ತ ಯಾವ ಬಾಬ್ತಿಗೆ ವೆಚ್ಚವಾಯ್ತು ಅಂಬೋ ಲೆಕ್ಕವನ್ನು ಯಾರಿಗೆ ಕೇಳೋದು ಎಂದು ಜನರಂತೂ ಮಾತನಾಡಿಕೊಳ್ಳುತ್ತಿದ್ದಾರೆ.

ಇಂಥೆಂಬೋ ಹೊತ್ತಿನಲ್ಲಿ ತುಮಕೂರು ನಗರಪಾಲಿಕೆಯ ಆಯುಕ್ತರಾಗಿ ಭೂಬಾಲನ್ ಎರಡನೇ ಅವಧಿಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲು ಇದ್ದ ಹುಮ್ಮಸ್ಸು, ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಗಾಂಧಿನಗರದಲ್ಲಿ ಬಿಜೆಪಿ ಮುಖಂಡರೊಬ್ಬರು ಪಿಜಿ ನಡೆಸುತ್ತಿದ್ದರು. ಇದರ ಬಗ್ಗೆ ಮರಗಳಿಗೆ ಪಿಜಿ ಫಲಕಗಳು ನೇತುಹಾಕಿ ಉಚಿತ ಜಾಹಿರಾತು ನೀಡಿದರು. ತಮ್ಮದೇ ಆಡಳಿತ, ತಮ್ಮದೇ ಸಂಸದರು, ತಮ್ಮದೇ ಶಾಸಕರು ಕೇಳುವವರು ಯಾರು ಎಂಬ ಹುಂಬುತನದಿಂದ ಮರಮರಗಳಿಗೂ ಬೋರ್ಡ್ ಗಳು ನೇತುಬಿದ್ದವು.

ಇದೆಲ್ಲವನ್ನು ನೋಡಿದ ಆಯುಕ್ತ ಬೂಬಾಲನ್ ಸೀದಾ ಗಾಂಧೀನಗರಕ್ಕೆ ಹೋಗಿ ಎಚ್ಚರಿಕೆ ನೀಡಿದರು. ಕೂಡಲೇ ಮರಗಳಿಗೆ ನೇತುಹಾಕಿರುವ ಫಲಕಗಳನ್ನು ತೆರವುಗೊಳಿಸುವಂತೆ ಹೇಳಿಬಂದರು. ಇದು ಆ ಬಿಜೆಪಿ ಮುಖಂಡನನ್ನು ಕೆರಳಿಸಿತು. ಪಾಲಿಕೆ ಕಚೇರಿಗೆ ಹೋಗಿ ಆಯುಕ್ತರಿಗೆ ಧಮಕಿ ಹಾಕಿದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ‘ಆಂಜನೇಯ’ ಹೋಗಿ ಕ್ಷಮೆಯಾಚಿಸಿದ.

ಆಗ ಆಯುಕ್ತ ಭೂಬಾಲನ್ ಬಿಜೆಪಿ ಮುಖಂಡನಿಗೆ ತರಾಟೆಗೆ ತೆಗೆದುಕೊಂಡು ನೀರಿಳಿಸಿದರು. ನಿಮ್ಮದೇ ಸರ್ಕಾರ ಇದೆ. ನಿಮ್ಮವರೇ ‘ಎಲ್ಲರೂ’ ಇದ್ದಾರೆ. ಟ್ರಾನ್ಸ್ ಫರ್ ಮಾಡಿಸು. ನನಗೆ ಇಲ್ಲೇ ಇರಬೇಕೆಂದೇ ಇಲ್ಲ. ಮತ್ತೆ ಹೀಗೆಲ್ಲ ಮಾಡಬೇಡ ಎಂದು ಎಚ್ಚರಿಸಿದ್ದಾರೆ. ಆದರೆ ಈಗ ಬಂದಿರುವ ವರ್ತಮಾನವೆಂದರೆ ಇಂಥವರ ನಡುವೆ ಹೇಗೆ ಕೆಲಸ ಮಾಡುವುದು? ಕೆಲಸ ಮಾಡಲು ಮನಸ್ಸೇ ಬರುತ್ತಿಲ್ಲ ಎಂದು ಭೂಬಾಲನ್ ಕೆಲವರಲ್ಲಿ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ. ಈಗ ‘ಬಸವಜ್ಯೋತಿ’ ಮತ್ತಷ್ಟು ಪ್ರಖರವಾಗಿ ಬೆಳಗುತ್ತಿದೆ. ಸೂಟ್ ಕೇಸ್ ಗಳ ಕೈಬದಲಾವಣೆ ಎಲ್ಲವನ್ನೂ ಒಂದಾಗಿಸುತ್ತದೆ ಎಂದು ಪಾಲಿಕೆ ಆವರಣದಲ್ಲಿ ಮಗುಮ್ಮಾಗಿ ನಗುವವರ ಸಂಖ್ಯೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...