Homeಮುಖಪುಟತುಮಕೂರು ಮಹಾನಗರ ಪಾಲಿಕೆ: 2 ತಿಂಗಳಲ್ಲೇ 9 ಕೋಟಿ ರೂ. ಸಮಾಪ್ತಿ!

ತುಮಕೂರು ಮಹಾನಗರ ಪಾಲಿಕೆ: 2 ತಿಂಗಳಲ್ಲೇ 9 ಕೋಟಿ ರೂ. ಸಮಾಪ್ತಿ!

ಭೂಬಾಲನ್ ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಉಳಿದಿತ್ತು. ಅವರು ಮತ್ತೆ ವಾಪಸ್‌ ಬರುವ ವೇಳೆಗೆ ಎಲ್ಲಾ ಮಂಗಮಾಯವಾಗಿದೆ!

- Advertisement -
- Advertisement -

ತುಮಕೂರು ಮಹಾನಗರ ಪಾಲಿಕೆಯಲ್ಲಿ ದಿಕ್ಕುತಪ್ಪಿದ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಸರಿದಾರಿಗೆ ತರಲು ಆಯುಕ್ತ ಭೂಬಾಲನ್ ಹೆಣಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಐರನ್ ಮೈಂಡ್ ಗಳ ಬಿಗಿಹಿಡಿತ ದಿಂದ ಭೂಬಾಲನ್ ಸುಸೂತ್ರವಾಗಿ; ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎರಡನೇ ಬಾರಿಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಬಾಲನ್ ರಾಜಕಾರಣಿಗಳ ಅಸಹಕಾರ ಮನೋಭಾವದಿಂದ ಕೆಲಸ ಮಾಡಲು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ ಎಂಬ ಚರ್ಚೆ ಜೋರಾಗಿಯೇ ನಡೆದಿದೆ.

ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭೂಬಾಲನ್ ತುಮಕೂರು ಪಾಲಿಕೆಯಿಂದ ವರ್ಗಾವಣೆ ಗೊಂಡರು. ಇದು ಮೇಲ್ನೋಟದ ವಿವರಣೆ. ಆದರೆ ಇವರು ವರ್ಗಾವಣೆಗೊಂಡರು ಎನ್ನುವುದಕ್ಕಿಂತ ಎತ್ತಂಗಡಿ ಮಾಡಿಸಿದರು ಎನ್ನುವುದೇ ಸೂಕ್ತ. ಇದರ ಹಿಂದೆ ‘ಬಸವಜ್ಯೋತಿ’ ಪ್ರಭಾವ ಇದರ ಹಿಂದೆ ಇತ್ತು. ಸಾದಾಸೀದ ಪ್ರಾಮಾಣಿಕ ಅಧಿಕಾರಿ ಭೂಬಾಲನ್ ‘ಬಸವಜ್ಯೋತಿ’ ಮುಂದೆ ಶರಣಾಗಿರಲಿಲ್ಲ. ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ’ ಎಂಬ ಮಾತುಗಳು ಈ ಅಧಿಕಾರಿಗೆ ಹೇಳಿಮಾಡಿಸಿದಂತಿತ್ತು. ಹೀಗಾಗಿ ‘ಪ್ರಭಾವಳಿ’ ಬೀರಿ  ‘ರಿಲ್ಯಾಕ್ಸ್’ ಪಡೆಯಲು ವರ್ಗಾವಣೆ ನಡೆದುಹೋಗಿತ್ತು.

ಇದನ್ನೂ ಓದಿ: ತುಮಕೂರಿನ ಪ್ರಾಮಾಣಿಕ ಅಧಿಕಾರಿಯ ಎತ್ತಂಗಡಿಯ ಹಿಂದಿದ್ದಾರೆ ರಿಯಲ್ ಎಸ್ಟೇಟ್ ರಾಜಕಾರಣಿಗಳು..

ಭೂಬಾಲನ್ ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಪಾಲಿಕೆಯ ಖಜಾನೆಯಲ್ಲಿತ್ತು. ಜನರಿಂದ ನೀರು ಮೊದಲಾದ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಇಷ್ಟೊಂದು ಹಣವನ್ನು ಉಳಿಸಿ ಹೋಗಿದ್ದರು. ಹೋಗುವಾಗ ಯೋಗಾನಂದ ಎಂಬ ಅಧಿಕಾರಿಗೆ ಪಾಲಿಕೆಯ ಅಧಿಕಾರ ಹಸ್ತಾಂತರಿಸಿದ್ದರು. ಯೋಗಾನಂದರಿಗೆ ಯೋಗ ಖುಲಾಯಿಸಿತ್ತು. ಯೋಗಾನಂದರವರು ಆನಂದಲ್ಲಿ ತೇಲತೊಡಗಿದರು. ಸು’ಯೋಗ’ ಬರಬಹುದೆಂದು ನಂಬಿದ್ದವರಿಗೆ ನಿರಾಸೆಯಾಯಿತು.’ಸತ್ಯ’ ಗೊತ್ತಾದ ಮೇಲೆ ಯೋಗಾನಂದರಿಗೆ ಗೇಟ್ ಪಾಸ್ ಕೊಡಿಸಿದರು. ಜನ ಇವರನ್ನು ಅಯೋಗಾನಂದ ಎಂದೇ ಗೇಲಿ ಮಾಡುವುದುಂಟು.

ಜನಪ್ರಿಯ ಆಯುಕ್ತ ಭೂಬಾಲನ್‌

ಇಷ್ಟೊತ್ತಿಗಾಗಲೇ ಪಾಲಿಕೆ ಆಡಳಿತ ಹಳ್ಳ ಹಿಡಿದಿತ್ತು. ಆಗ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು ಬಂದ ಮೇಲೆ ಭೂಬಾಲನ್ ಉಳಿಸಿಹೋಗಿದ್ದ ಸುಮಾರು 9 ರಿಂದ 12 ಕೋಟಿ ರೂ ಹಣ ‘ಕರಗಿ’ಹೋಯಿತು. ಎರಡು ಮೂರು ತಿಂಗಳೊತ್ತಿನಲ್ಲಿ ಕೋಟಿಕೋಟಿ ಹಣ ಧನದಾಹಿಗಳ ಕೈಗೆ ಸೇರಿತ್ತು. ಐರನ್ ಮೈಂಡ್ ಗಳ ಅಸೆಯೂ ಈಡೇರಿತ್ತು. ಪಾಲಿಕೆ ಖಜಾನೆ ಖಾಲಿಖಾಲಿ ಆಗಿದೆ. ಇಷ್ಟೊಂದು ಮೊತ್ತ ಯಾವ ಬಾಬ್ತಿಗೆ ವೆಚ್ಚವಾಯ್ತು ಅಂಬೋ ಲೆಕ್ಕವನ್ನು ಯಾರಿಗೆ ಕೇಳೋದು ಎಂದು ಜನರಂತೂ ಮಾತನಾಡಿಕೊಳ್ಳುತ್ತಿದ್ದಾರೆ.

ಇಂಥೆಂಬೋ ಹೊತ್ತಿನಲ್ಲಿ ತುಮಕೂರು ನಗರಪಾಲಿಕೆಯ ಆಯುಕ್ತರಾಗಿ ಭೂಬಾಲನ್ ಎರಡನೇ ಅವಧಿಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲು ಇದ್ದ ಹುಮ್ಮಸ್ಸು, ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಗಾಂಧಿನಗರದಲ್ಲಿ ಬಿಜೆಪಿ ಮುಖಂಡರೊಬ್ಬರು ಪಿಜಿ ನಡೆಸುತ್ತಿದ್ದರು. ಇದರ ಬಗ್ಗೆ ಮರಗಳಿಗೆ ಪಿಜಿ ಫಲಕಗಳು ನೇತುಹಾಕಿ ಉಚಿತ ಜಾಹಿರಾತು ನೀಡಿದರು. ತಮ್ಮದೇ ಆಡಳಿತ, ತಮ್ಮದೇ ಸಂಸದರು, ತಮ್ಮದೇ ಶಾಸಕರು ಕೇಳುವವರು ಯಾರು ಎಂಬ ಹುಂಬುತನದಿಂದ ಮರಮರಗಳಿಗೂ ಬೋರ್ಡ್ ಗಳು ನೇತುಬಿದ್ದವು.

ಇದೆಲ್ಲವನ್ನು ನೋಡಿದ ಆಯುಕ್ತ ಬೂಬಾಲನ್ ಸೀದಾ ಗಾಂಧೀನಗರಕ್ಕೆ ಹೋಗಿ ಎಚ್ಚರಿಕೆ ನೀಡಿದರು. ಕೂಡಲೇ ಮರಗಳಿಗೆ ನೇತುಹಾಕಿರುವ ಫಲಕಗಳನ್ನು ತೆರವುಗೊಳಿಸುವಂತೆ ಹೇಳಿಬಂದರು. ಇದು ಆ ಬಿಜೆಪಿ ಮುಖಂಡನನ್ನು ಕೆರಳಿಸಿತು. ಪಾಲಿಕೆ ಕಚೇರಿಗೆ ಹೋಗಿ ಆಯುಕ್ತರಿಗೆ ಧಮಕಿ ಹಾಕಿದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವ್ಯಾಪಕ ಖಂಡನೆ ವ್ಯಕ್ತವಾದ ಮೇಲೆ ‘ಆಂಜನೇಯ’ ಹೋಗಿ ಕ್ಷಮೆಯಾಚಿಸಿದ.

ಆಗ ಆಯುಕ್ತ ಭೂಬಾಲನ್ ಬಿಜೆಪಿ ಮುಖಂಡನಿಗೆ ತರಾಟೆಗೆ ತೆಗೆದುಕೊಂಡು ನೀರಿಳಿಸಿದರು. ನಿಮ್ಮದೇ ಸರ್ಕಾರ ಇದೆ. ನಿಮ್ಮವರೇ ‘ಎಲ್ಲರೂ’ ಇದ್ದಾರೆ. ಟ್ರಾನ್ಸ್ ಫರ್ ಮಾಡಿಸು. ನನಗೆ ಇಲ್ಲೇ ಇರಬೇಕೆಂದೇ ಇಲ್ಲ. ಮತ್ತೆ ಹೀಗೆಲ್ಲ ಮಾಡಬೇಡ ಎಂದು ಎಚ್ಚರಿಸಿದ್ದಾರೆ. ಆದರೆ ಈಗ ಬಂದಿರುವ ವರ್ತಮಾನವೆಂದರೆ ಇಂಥವರ ನಡುವೆ ಹೇಗೆ ಕೆಲಸ ಮಾಡುವುದು? ಕೆಲಸ ಮಾಡಲು ಮನಸ್ಸೇ ಬರುತ್ತಿಲ್ಲ ಎಂದು ಭೂಬಾಲನ್ ಕೆಲವರಲ್ಲಿ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ. ಈಗ ‘ಬಸವಜ್ಯೋತಿ’ ಮತ್ತಷ್ಟು ಪ್ರಖರವಾಗಿ ಬೆಳಗುತ್ತಿದೆ. ಸೂಟ್ ಕೇಸ್ ಗಳ ಕೈಬದಲಾವಣೆ ಎಲ್ಲವನ್ನೂ ಒಂದಾಗಿಸುತ್ತದೆ ಎಂದು ಪಾಲಿಕೆ ಆವರಣದಲ್ಲಿ ಮಗುಮ್ಮಾಗಿ ನಗುವವರ ಸಂಖ್ಯೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...