Homeಪುಸ್ತಕ ವಿಮರ್ಶೆತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

ತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

- Advertisement -
- Advertisement -

ಇದು ಬಲು ತೀಟೆ ಅಥವಾ ಹೈಪರ್ ಆ್ಯಕ್ಟೀವಾಗಿದ್ದ ಹುಡುಗಿಯೊಬ್ಬಳು ಕಲಿಯುತ್ತಿದ್ದ ಶಾಲೆಯಿಂದ ಹೊರಹಾಕಲ್ಪಟ್ಟು ನಂತರ ಸಹಜ ಕಲಿಕೆಯ ಶಾಲೆಗೆ ಸೇರಿ ಯಶಸ್ವೀ ಮಹಿಳೆಯಾದ ಕತೆಯಾದರೂ, ಇದು ತೊಮೊಯೆ ಎಂಬ ಶಾಲೆಯು ಮಕ್ಕಳೊಡನೆ ಜೀವ ತಳೆದಿದ್ದ ಕತೆ. ಸೊಸಾಕು ಕೊಬಾಯಾಶಿ ಎಂಬ ಶಿಕ್ಷಣ ತಜ್ಞ ಸಹಜ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆದ ಅಮರಕತೆ.

ಹೌದು, ಒಂದು ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ, ಅದು ವ್ಯಕ್ತಿಗತವಾಗಿಯಾದರೂ ಅಥವಾ ಸಾಮಾಜಿಕವಾಗಿಯಾದರೂ, ಕುಟುಂಬ, ಶಿಕ್ಷಕರು ಮತ್ತು ಕಲಿಕೆಯ ಕೇಂದ್ರ; ಎಲ್ಲವೂ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇವರಲ್ಲಿ ಯಾರೂ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡಬಾರದು ಎಂದು ತೊತ್ತೊ-ಚಾನ್ ಧ್ವನಿಸುತ್ತದೆ.

ತಾಯಿ

ತನ್ನ ಪುಟ್ಟ ಮಗಳು ತೊತ್ತೊ-ಚಾನ್ ಶಾಲೆಯಲ್ಲಿ ಡೆಸ್ಕನ್ನು ಪದೇಪದೇ ತೆಗೆದು ಮುಚ್ಚುತ್ತಾಗಲಾಟೆ ಮಾಡುವುದನ್ನು ಉಪಾಧ್ಯಾಯಿನಿ ದೂರಿನ ಪಟ್ಟಿಯಲ್ಲಿಟ್ಟರೂ ತಾಯಿ ಅದರ ಹಿಂದಿನ ಕಾರಣ, ಕುತೂಹಲ ಮತ್ತು ಅದರ ಪರಿಣಾಮವನ್ನು ಯೋಚಿಸುತ್ತಾಳೆ. ತಮ್ಮ ಮನೆಯಲ್ಲಿದ್ದ ಮೇಜಿನಲ್ಲಿ ಎಳೆಯುವ ಡ್ರಾಯರ್ ಇದ್ದು, ಶಾಲೆಯಲ್ಲಿ ಡೆಸ್ಕಿನ ಡಬ್ಬಿಯ ಮುಚ್ಚಳದಂತೆ ತೆಗೆದುಹಾಕುವುದಕ್ಕೆ ಅವಳಿಗೆ ಸಂತೋಷ ಎಂದು ತಿಳಿಯುತ್ತಾಳೆ. ಅದರ ಬಗ್ಗೆ ಉಪಾಧ್ಯಾಯರಿಗೂ ಹೇಳುವುದಿಲ್ಲ. ತನ್ನ ಮಗುವಿಗೂ ಹೇಳುವುದಿಲ್ಲ. ತೊತ್ತೋ ಗುಬ್ಬಚ್ಚಿಯ ಬಳಿ ಮಾತಾಡುವುದು, ಕಿಟಕಿಯ ಬಳಿ ನಿಂತುಕೊಂಡು ಸ್ಟ್ರೀಟ್ ಬ್ಯಾಂಡ್‍ರವರನ್ನು ಕರೆದು ಸಂಗೀತವಾದ್ಯಗಳನ್ನು ನುಡಿಸುವಂತೆ ಮಾಡುವುದೇ ಮೊದಲಾದ ಎಲ್ಲಾ ಆರೋಪಗಳ ಪಟ್ಟಿಯು “ನಿಮ್ಮ ಮಗಳನ್ನು ಶಾಲೆಯಿಂದ ಹೊರ ಹಾಕಲಾಗಿದೆ” ಎಂದು ಉಪಾಧ್ಯಾಯಿನಿ ತಾಯಿಗೆ ಹೇಳುವಂತಾಯಿತು. ಶಾಲೆಯಿಂದ ಹೊರಹಾಕುವುದನ್ನು ಸ್ವೀಕರಿಸಿದ ತಾಯಿ, ಅವಳ ಮಗಳ ಮೇಲಿನ ಆರೋಪಗಳ ಪಟ್ಟಿಯನ್ನು ಸ್ವೀಕರಿಸುವುದಿಲ್ಲ. ಬದಲಿಗೆ ನನ್ನ ಮಗಳು ಇವರಿಗರ್ಥವಾಗಲಿಲ್ಲ ಎಂದೇ ಬೇರೆ ಶಾಲೆಗೆ ಹೊರಳುತ್ತಾಳೆ. ಆದರೆ ಮಗಳಿಗೆ ನೀನು ಶಾಲೆಯಿಂದ ಹೊರದೂಡಲ್ಪಟ್ಟವಳೆಂದು ಹೇಳುವುದೇ ಇಲ್ಲ. ಹೇಳುತ್ತಾಳೆ, ತೊತ್ತೋಗೆ ಇಪ್ಪತ್ತನೇ ವರ್ಷದ ಹುಟ್ಟುಹಬ್ಬದಲ್ಲಿ. ಸಣ್ಣ ಮಗುವಿನ ಮೃದು ಮನಸ್ಸಿಗೆ ನೀನು ತಿರಸ್ಕೃತೆ ಎಂಬ ಭಾವಉಂಟಾಗದಿರುವಂತೆ ನೋಡಿಕೊಂಡತಾಯಿ ಅವರು.

ತೊಮೊಯೆ

ತೊಮೊಯೆ ಶಾಲೆಯ ಹೆಸರು. ನಿಸರ್ಗದ ಒಡಲಲ್ಲಿ ಆ ಶಾಲೆ ಮಕ್ಕಳಿಗೆ ಮಡಿಲನ್ನೊದಗಿಸಿತ್ತು. ಇನ್ನು ತರಗತಿಗಳೋ ರೈಲಿನ ಡಬ್ಬಿಗಳು. ಮಕ್ಕಳ ಆಯ್ಕೆಯ ವಿಷಯಗಳು ಅವರ ಕಲಿಕೆಗೆ. ಅವರವರ ಕಲಿಕೆ ಅವರಿಗೆ ಬಿಟ್ಟದ್ದು.ಉಪಾಧ್ಯಾಯರ ಸಹಾಯ ಬೇಕಾದಾಗ ಅವರೊದಗುತ್ತಾರೆ. ಮಧ್ಯಾಹ್ನ ಎಲ್ಲರೂ ಕಲೆತು ಊಟ ಮಾಡಿದ ಮೇಲೆ ತರಗತಿಗಳೆಂದು ಕರೆಸಿಕೊಳ್ಳುವ ರೈಲಿನ ಬೋಗಿಗಳಿಗೆ ಹೋಗುವಷ್ಟಿಲ್ಲ. ಹೊರಗೆ ನಿಸರ್ಗದಲ್ಲಿ ಮಿಕ್ಕೆಲ್ಲಾ ಸಹಜ ಕಲಿಕೆ. ನಿರ್ಬಂಧಿಸುವರಿಲ್ಲ, ತಾಕೀತು ಮಾಡುವವರಿಲ್ಲ, ಕಲಿಸುವಿಕೆ, ಕಲಿಯುವಿಕೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಎಲ್ಲವೂ ಸಹಜ.

ತೊತ್ತೊ ತನ್ನ ಮುನ್ನುಡಿಯಲ್ಲಿ ಹೇಳುವ ಮಾತು ನಿಜ. “ಈಗ ತೊಮೊಯೆದಂತಹ ಶಾಲೆಗಳಿದ್ದಿದ್ದರೆ ಇಂದು ಕಂಡುಬರುತ್ತಿರುವ ಕ್ರೌರ್ಯ ಎಷ್ಟೋ ಕಡಿಮೆಯಾಗುತ್ತಿತ್ತು.”

ಕೊಬಾಯಾಶಿ

ಸೊಸಾಕು ಕೊಬಾಯಾಶಿಯೇ ತೊತ್ತೊ-ಚಾನ್ ಪುಸ್ತಕದ ನಾಯಕ. ತೊಮೊಯೆ ಶಾಲೆಯ ಅಡಿಪಾಯ. ಅವರ ಶಿಕ್ಷಣ ನೀತಿಯೇ ಮಕ್ಕಳಿಗೆ ಉಸಿರಾಡಲು ತಂಗಾಳಿಯನ್ನು ನೀಡುತ್ತಿದ್ದದ್ದು. ಇಡೀ ಪುಸ್ತಕ ಹೇಳುವುದು ಕೊಬಾಯಾಶಿಯವರ ಸಹಜ ಕಲಿಕೆಯ ಪದ್ಧತಿ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿಸಾಧಿಸಿದ ಯಶಸ್ಸನ್ನು. ಎಲ್ಲಾ ಮಕ್ಕಳೂ ಸ್ವಾಭಾವಿಕವಾಗಿ ಉತ್ತಮರೇ. ಪರಿಸರ ಮತ್ತುದೊಡ್ಡವರ ಬೇಡದೇ ಇರುವ ಪ್ರಭಾವದಿಂದ ಹಾಳಾಗುತ್ತದೆ ಎಂಬುದು ಅವರ ತಿಳಿವಳಿಕೆ. ಮಕ್ಕಳು ತಮ್ಮ ಸಹಜ ಸ್ವಭಾವದಂತೆ ಕಲಿತುಕೊಂಡು ಹೋಗಲು, ಪ್ರಕೃತಿಯಿಂದ ತಿಳಿವಳಿಕೆ ಪಡೆಯಲು ಸಹಕರಿಸುವುದನ್ನು ತಮ್ಮ ಹೊಣೆಯಾಗಿಸಿಕೊಂಡಿದ್ದರು.

ಅವರ ಶಾಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಎಲ್ಲರೂ ಗ್ರೂಪ್ ಪೋಟೋ ತೆಗೆಸಿಕೊಳ್ಳುವಾಗ ಕೊಬಾಯಾಶಿ ಅಲ್ಲಿಕಾಣುವ ಇತರ ಮಕ್ಕಳನ್ನೆಲ್ಲಾ ಕರೆದು ಪೋಟೋಗೆ ನಿಲ್ಲಿಸಿಕೊಳ್ಳುತ್ತಿದ್ದರು. ಔಪಚಾರಿಕವಾದ ಪದವೀಧರರ ಚಿತ್ರಗಳಿಗಿಂತ ಮಕ್ಕಳ ಜೀವಂತ ಚಿತ್ರಗಳನ್ನು ನೋಡುವ ಪ್ರೀತಿ ಅವರದು.

ಮೊದಲ ದಿನ ತೊತ್ತೊ ಶಾಲೆಗೆ ಸೇರಲು ಬಂದಾಗ ಕೊಬಾಯಾಶಿ ಮಗುವಿಗೆ ಪ್ರಶ್ನೆಗಳನ್ನು ಕೇಳದೇ ಅವಳೇ ಅವಳಿಷ್ಟದ್ದನ್ನೆಲ್ಲಾ ಹೇಳಲು ಬಿಡುತ್ತಾರೆ. ಇದೇ ಅವರಿಗೆ ಮಗುವಿನ ಪ್ರೀತಿ ಪಡೆಯಲು ಸಾಧ್ಯವಾಗುವುದು. ಅವಳು ಹೇಳಿದ್ದನ್ನೆಲ್ಲಾ ಕೇಳಿ, “ನೀನು ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ”ಎಂದಾಗ ಅವಳು ಅನುಭವಿಸುವ ವಾತ್ಸಲ್ಯ ಅನುಪಮವಾದದ್ದು.

ಅವರು ಪದೇಪದೇ ಹೇಳುತ್ತಿರುತ್ತಾರೆ, “ನೀನು ನಿಜವಾಗಿ ಒಳ್ಳೆಯ ಹುಡುಗಿ”ಅಂತ. ಇದನ್ನು ಕೇಳಿ ಕೇಳಿಯೇ ತೊತ್ತೋ ಆತ್ಮವಿಶ್ವಾಸವನ್ನು ಮತ್ತು ತನ್ನ ಬಗ್ಗೆ ಧನಾತ್ಮಕ ಧೋರಣೆಯನ್ನು ಹೊಂದಲು ಸಾಧ್ಯವಾಗಿದ್ದು. ಇಲ್ಲವಾಗಿದ್ದರೆ ಕೆಟ್ಟ ಹುಡುಗಿ ಎಂಬ ಕೀಳರಿಮೆಯಲ್ಲಿ ತನ್ನ ವ್ಯಕ್ತಿತ್ವವನ್ನು ತಾನೇ ನಾಶ ಮಾಡಿಕೊಳ್ಳುತ್ತಿದ್ದಳೇನೋ ಎಂದು ತಾನೇ ಹೇಳಿಕೊಳ್ಳುತ್ತಾರೆ. ಮುಂದೆ ತೊಮೊಯೆ ಯುದ್ಧದಲ್ಲಿ ನಾಶವಾದಾಗ ಸಂಕಟವಾಗುತ್ತದೆ.

ಇಡೀ ಪುಸ್ತಕವು ನವಿರಾದ ಹಾಸ್ಯ ಮತ್ತು ಗಂಭೀರದಲ್ಲಿ ವಿಚಾರಗಳನ್ನು ತೆರೆದಿಡುತ್ತದೆ. ನಗಿಸುತ್ತದೆ, ಚಿಂತಿಸುವಂತೆ ಮಾಡುತ್ತದೆ. ಮಕ್ಕಳ ವಿಕಾಸಕ್ಕೆ ಪೂರಕವಾದ ಕಲಿಕೆಯ ಕ್ರಮವನ್ನು ಅರಿವಿಗೆಟಕಿಸುತ್ತದೆ.

ಮಕ್ಕಳನ್ನು ಪ್ರೀತಿಸುವವರು ಈ ಪುಸ್ತಕದ ಓದನ್ನು ತಪ್ಪಿಸಿಕೊಂಡರೆ ಒಂದು ಕೊರತೆಯೆಂದೇ ನನ್ನ ಭಾವನೆ. ಇದನ್ನು ಕನ್ನಡಕ್ಕೆ ವಿ ಗಾಯತ್ರಿಯವರು ತಂದಿದ್ದು, ನ್ಯಾಷನಲ್ ಬುಕ್‍ಟ್ರಸ್ಟ್ ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...