Homeಮುಖಪುಟಟಿ.ವಿ9 ತೆಲುಗು ಚಾನೆಲ್ ನ ಮಾಜಿ ಸಿಈಓ ರವಿಪ್ರಕಾಶ್ ಹೊರಕ್ಕೆ: ಕಾರಣವೇನು? ಇಲ್ಲಿದೆ ಶಾಕಿಂಗ್ ಸ್ಟೋರಿ

ಟಿ.ವಿ9 ತೆಲುಗು ಚಾನೆಲ್ ನ ಮಾಜಿ ಸಿಈಓ ರವಿಪ್ರಕಾಶ್ ಹೊರಕ್ಕೆ: ಕಾರಣವೇನು? ಇಲ್ಲಿದೆ ಶಾಕಿಂಗ್ ಸ್ಟೋರಿ

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಇತ್ತಿಚಿಗೆ ರಾಜಕೀಯ ವಲಯಕ್ಕಿಂತ ಅತಿ ಭ್ರಷ್ಟವಾಗಿರುವುದು ಮಾಧ್ಯಮ ಎಂದು ನೇರವಾದ ಆರೋಪವನ್ನು ಒಬ್ಬ ಹಿರಿಯ ರಾಜಕಾರಣಿ ಮಾಡಿದ್ದರು. ಅದಕ್ಕೆ ಪೂರಕವೆಂಬಂತೆ ನಮ್ಮ ರಾಜ್ಯದಲ್ಲೂ ಹಲವು ಬ್ಲಾಕ್ ಮೈಲ್ ಮಾದ್ಯಮ ಮುಖ್ಯಸ್ಥರು ಜೈಲಿಗೆ ಹೋಗಿ ಬಂದ ನಿರ್ದಶನಗಳು ನಮ್ಮ ಕಣ್ಣ ಮುಂದೆ ಕಾಣಿಸುತ್ತಿವೆ. ದುಡ್ಡಿಗಾಗಿಯೇ ಸುದ್ದಿ ಎನ್ನುಂತಹ ಕಾಲ ಬಂದು ಬಹಳ ವರ್ಷವೇ ಆಗಿ ಹೋಗಿವೆ. 24/7 ಸುಧ್ಧಿವಾಹಿನಿಗಳೂ ಬಂದ ನಂತರವಂತು ನೈಜ ಸುದ್ಧಿಯ ಜಾಗದಲ್ಲಿ ಕೆಲವು ರಾಜಕೀಯ ಪಕ್ಷಗಳ ವಕ್ತಾರರಂತೆ ಪ್ರೊಪಗಂಡ ಹರಡುವ ಸುದ್ಧಿ ಮನೆಗಳಾಗಿ ಬದಲಾಗಿವೆ. ಎಷ್ಟೋ ಸಲ ತನ್ನ ಮಾಲೀಕನ ಹಿತ ಕಾಪಾಡುವ ನಾಯಿಯಂತಿರುವವರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಆಚೆ ತಳ್ಳುವ ಸುದ್ದಿ ಮಾಧ್ಯಮಗಳು ಇವೆ. ಅಂತಹ ಒಂದು ಸ್ಟೋರಿ ಓದಿ.

ಇತ್ತಿಚಿಗೆ ಸುದ್ಧಿವಾಹಿನಿಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಟಿ.ವಿ9 ತೆಲುಗು ವಾಹಿನಿಯಲ್ಲಿ ಸಾಕಷ್ಟು ಜಗಳಗಳು ನಡೆದು ಹೋಗಿವೆ. ಬಹಳ ತಿಂಗಳುಗಳಿಂದ ನಡೆಯುತ್ತಿದ್ದ ಜಗಳ ಬಹಳ ವರ್ಷಗಳ ಕಾಲ ಟಿ.ವಿ 9 ಸಿ.ಈ.ಓ ಆಗಿದ್ದ ರವಿಪ್ರಕಾಶ್ ರನ್ನು ಸಂಸ್ಥೆ ದಿಢೀರನೆ ತೆಗೆದು ಹಾಕಿ ಅವರ ಮೇಲೆ ಕೇಸ್ ಹಾಕಿದ್ದು ಈಗ ದೊಡ್ಡ ವಿವಾದವಾಗಿದೆ. ಆದ ನಂತರ ಟಿ.ವಿ9 ಪಾಲುಧಾರಿಕೆ ಮಾರಟದ ವಿವಾದ ಹೊರಬಂದ ನಂತರ ತೆಲುಗು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ದುಡ್ಡಿಗಾಗಿ ಬೀದಿ ಜಗಳ ಮಾಡಿಕೊಳ್ಳುತ್ತಿರುವ ಮಾಧ್ಯಮ ಮಂದಿಯನ್ನು ನೋಡಿ ಜನ ಸಿಟ್ಟಿಗೆದ್ದಿದ್ದಾರೆ.

ಟಿ.ವಿ.9 ಸಂಸ್ಥೆಯ ಆಡಳಿತ ಮಂಡಳಿ ಮತ್ತು ರವಿ ಪ್ರಕಾಶ್ ನಡುವಿನ ವಿವಾದ

ಟಿ.ವಿ.9 ಮುಖ್ಯ ಕಾರ್ಯನಿರ್ವಹಣಧಿಕಾರಿಯಾಗಿದ್ದ ರವಿಪ್ರಕಾಶ್ ರನ್ನು ಮೇ ತೀಂಗಳಲ್ಲಿ ಏಕಾಏಕಿ ಕೆಳಗಿಳಿಸಿತು. ಅಸೋಸಿಯೇಟೆಡ್ ಬ್ರಾಡ್‍ಕಾಸಟಿಂಗ್ ಕಂಪನಿ ಪ್ರೈ.ಲಿಮಿಟೆಡ್ (ಎ.ಬಿ.ಸಿ.ಬಿ.ಪಿ.ಎಲ್ – ಟಿವಿ9) ಸಂಸ್ಥೆಯ ಲೆಕ್ಕಪತ್ರಗಳನ್ನು ತಿರುಚಿದ್ದು ಮತ್ತು ಸಂಸ್ಥೆಯನ್ನು ಮೋಸಗೊಳಿಸಿದ್ದಾರೆಂದು ರವಿಪ್ರಕಾಶ್ ಮೇಲೆ ಹೊಸ ಆಡಳೀತ ಮಂಡಳಿ ‘ಅಳಂದಾ ಮೀಡಿಯಾ ಸಂಸ್ಥೆ’ಯ ಕೌಶಿಕ್ ರಾವ್ ರವರು ಸೈಬಾರ್ ಬಾದ್ ಪೋಲೀಸರಿಗೆ ದೂರನ್ನು ನೀಡಿದ್ದರು. ಟಿ.ವಿ9 ಸಂಸ್ಥೆಯ ತನ್ನ ಆಸ್ತಿ ಒಡೆತನದ, ಪಾಲುಗಳ ಮಾರಟದ ಬಗ್ಗೆ ರವಿಪ್ರಕಾಶ್ ಸುಳ್ಳು ಪತ್ರಗಳನ್ನು ಸೃಷ್ಟಿಮಾಡಿದ್ದಾರೆ ಮತ್ತು ತೆಲುಗು ಸಿನಿಮಾ ನಟ ಶಿವಾಜಿ, ಟಿವಿ9 ಸಂಸ್ಥೆಯ ಒಡೆತನದ ಹಕ್ಕುಗಳು ರವಿಪ್ರಕಾಶ್ ನಿಂದ ಖರೀದಿಮಾಡಿದ ರೀತಿಯ ನಕಲಿಪತ್ರಗಳು ಸೃಷ್ಟಿ ಮಾಡಿದ್ದಾರೆ ಇದಕ್ಕೆ ಅವರಿಬ್ಬರ ನಡುವೆ ನಡೆದ ಈಮೈಲ್ ವ್ಯವಹಾರಗಳೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

ರವಿ ಪ್ರಕಾಶ್

ದೂರು ನೀಡಿದ ದಿನವೇ ಬಂಜಾರಾ ಹಿಲ್ಸ್ ನಲ್ಲಿರುವ ರವಿಪ್ರಕಾಶ್ ಮನೆ ಮತ್ತು ಟಿವಿ9 ಕಛೇರಿಯಲ್ಲಿದ್ದ ಕೆಲವು ಹಾರ್ಡಗ ಡಿಸ್ಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ಪೋಲಿಸರು ಸೆಕ್ಷನ್ 160, 41 ಅಡಿಯಲ್ಲಿ ಎರಡು ಭಾರಿ ಆತ ಮತ್ತು ಆತನ ಜೊತೆಗಾರ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಉತ್ತರಿಸದ ಇವರಿಬ್ಬರು ಬಹಳ ದಿನಗಳ ವರೆಗೆ ಅಜ್ಞಾತವಾಸದಲ್ಲಿದ್ದರು. ಹೈಕೋರ್ಟ್‍ಗೆ ಬೇಲ್ ಗಾಗಿ ಹೋದ ರವಿಪ್ರಕಾಶ್ ಗೆ ಬೇಲ್ ಸಿಕ್ಕಿಲ್ಲ ಮತ್ತೆ ಈತ ಸುಪ್ರೀಂಕೋರ್ಟ್‍ನಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಹೈಕೋರ್ಟ್‍ಗೆ ಹೋಗಿ ಎಂದ ನಂತರ ಹೈಕೋರ್ಟಿನಲ್ಲಿಯೇ ಮಧ್ಯಂತರ ಬೇಲ್ ಸಿಕ್ಕಕಾರಣ ಸೈಬಾರಾಬಾದ್ ಸೈಬರ್ ಪೋಲಿಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಐದು ಘಂಟೆಗಳ ಕಾಲ ಸುಧೀರ್ಘವಾಗಿ ರವಿಪ್ರಕಾಶ್‍ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ .

ಕೌಶಿಕ್ ರಾವ್

ಈ ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ರವಿಪ್ರಕಾಶ್ ಟಿ.ವಿ9ನನ್ನು ಇಬ್ಬರು ದೊಡ್ಡ ಬಂಡವಾಳಿಗರು ಅಕ್ರಮವಾಗಿ ಕೊಂಡುಕೊಂಡಿದ್ದಾರೆ ಮತ್ತು ನನ್ನ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ. ನಿಯಮಗಳನ್ನು ಮೀರಿ ಮಂಡಳಿ ಸಭೆ ನಡೆಸಿ ನನ್ನನ್ನು ಹೊರಗೆ ಕಳುಹಿಸಿದ್ದಾರೆ. ಇದು ಮಾಫೀಯಾಗೂ, ಮಾಧ್ಯಮಕ್ಕು ಮಧ್ಯೆ ನಡೆಯುತ್ತಿರುವ ಧರ್ಮಯುಧ್ಧ, ಕೊನೆಗೆ ಪತ್ರಿಕೋಧ್ಯಮವೇ ಗೆಲ್ಲಲಿದೆ ಎಂದಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಪೋಲಿಸರಿಗೆ ಸಹಕರಿಸುತ್ತಿದ್ದೇನೆ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಹೇಳಿದ್ದಾರೆ. ಈಗ ಪ್ರಸ್ತುತ ಟಿ.ವಿ9 ಕನ್ನಡದ ಸಿ.ಈ.ಓ ನೇ ತೆಲುಗು ಟಿ.ವಿ.9 ವಾಹಿನಿಯ ಸಿ.ಈ.ಓ ಆಗಿ ನೇಮಕಗೊಂಡಿದ್ದಾರೆ.

ನಟ ಶಿವಾಜಿ

ಯಾರು ಈ ರವಿಪ್ರಕಾಶ್ ?

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಒಂದೋ ಎರಡೋ ಇಪ್ಪತ್ತನಾಲ್ಕು ಗಂಟೆ ಸುದ್ಧಿ ಮಾಧ್ಯಮಗಳಿದ್ದ ಸಮಯಕ್ಕೆ ಮೊದಲನೇ ಭಾರಿಗೆ ತೆಲುಗಿನಲ್ಲಿ ಟಿವಿ9 ಪ್ರಾರಂಭಿಸಿ ಸಂಚಲನ ಮೂಡಿಸಿದ್ದ. ಟಿವಿ9 ಅನ್ನು ನಂಬರ್ 1 ಮಾಡಲು ಸುದ್ಧಿಯಲ್ಲದ ಸುದ್ದಿಗಳನ್ನು ಡಿಬೇಟ್ ನಡೆಸಿದ ಬಗ್ಗೆ ಮತ್ತು TRP ಹುಚ್ಚು ಹತ್ತಿಸಿದವ ಎಂದು ಈತನ ಬಗ್ಗೆ ಆರೋಪವಿದೆ. ಆದರೆ ಅತಿವೇಗವಾಗಿ ಬೆಳೆದ ಈತ ಈಗ ನೆಲಕ್ಕೆ ಬಿದ್ದಿದ್ದು ಮೀಡೀಯಾ ಮಾಫೀಯಾವೇ ಕಾರಣವಾ? ಅಥವಾ ತನ್ನ ಕೆಡುಕುಬುದ್ದಿ ಕಾರಣವಾ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ.

ಮೀಡಿಯಾ ಹೌಸ್ ಗಳಲ್ಲಿ ನಿಜವಾಗಲೂ ಏನು ನಡೆಯುತ್ತಿದೆ?

ಸುದ್ಧಿಗಾಗಿ ನಿರಂತರ ಇಪ್ಪತ್ತನಾಲ್ಕು ಗಂಟೆ ತೋರಿಸುವ ಚಾನೆಲ್ ಗಳು ಬಂದಾಗಿನಿಂದ ಜನರು ಬಿಸಿ ಬಿಸಿ ಸುದ್ಧಿಗಳನ್ನು ನೋಡಲು ಶುರುಮಾಡಿದ ನಂತರ ಟಿ.ಆರ್.ಪಿ ಮತ್ತು ರಾಜಕೀಯ ಹಿಡತ ಇದನ್ನು ನಿಯಂತ್ರಿಸಲು ಶುರು ಮಾಡಿತ್ತು. ಈ ಮಾಧ್ಯಮಗಳು ಕೇವಲ ರಾಜಕೀಯ ಪಕ್ಷಗಳ ಬಾಲಗಳಾಗಿ ಕೆಲಸ ಮಾಡಿತ್ತಿರುವುದನ್ನು ಕಾಣಬಹುದಾಗಿದೆ. ಇದರ ನಡುವೆ ಸುದ್ದಿಮಾಧ್ಯಮಗಳನ್ನು ಅಡ್ಡ ಇಟ್ಟಕೊಂಡು ದೊಡ್ಡ ವ್ಯಾಪಾರಗಳೇ ನಡೆಯುತ್ತಿವೆ. ಕೆಲವು ಚಾನೆಲ್ ಗಳಂತು ಟಿ.ಆರ್.ಪಿಯನ್ನು ತೋರಿಸಿ ತಮಗೆ ಬೇಕಾದ ಸುದ್ಧಿಗಳನ್ನು ತೋರಿಸಿ ಪ್ರಪೊಗಂಡ ಮಾಡಲು ಪ್ಯಾಕೇಜ್ ತೆಗೆದುಕೊಳ್ಳುತ್ತಿದ್ದಾರೆ. ಈ ಸುದ್ಧಿ ವಾಹಿನಿಗಳ ಒಳಗಡೆ ಇರುವಂತಹ ಮುಖ್ಯಸ್ಥರು ಲಾಭದ ವಿಚಾರದಲ್ಲಿ ದೊಡ್ಡ ಜಗಳಗಳನ್ನೆ ಮಾಡಿಕೊಂಡಿದ್ದಾರೆ. ಆದರೆ ಈ ಗಲಾಟೆ ಮಾತ್ರ ಹೊರಬಂದು ಸಂಚಲನ ಉಂಟುಮಾಡಿದೆ. ಇನ್ನುಳಿದವರು ಯಾವಾಗ ಹೊರಬರುತ್ತವೊ ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...