Homeಮುಖಪುಟಟಿ.ವಿ9 ತೆಲುಗು ಚಾನೆಲ್ ನ ಮಾಜಿ ಸಿಈಓ ರವಿಪ್ರಕಾಶ್ ಹೊರಕ್ಕೆ: ಕಾರಣವೇನು? ಇಲ್ಲಿದೆ ಶಾಕಿಂಗ್ ಸ್ಟೋರಿ

ಟಿ.ವಿ9 ತೆಲುಗು ಚಾನೆಲ್ ನ ಮಾಜಿ ಸಿಈಓ ರವಿಪ್ರಕಾಶ್ ಹೊರಕ್ಕೆ: ಕಾರಣವೇನು? ಇಲ್ಲಿದೆ ಶಾಕಿಂಗ್ ಸ್ಟೋರಿ

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಇತ್ತಿಚಿಗೆ ರಾಜಕೀಯ ವಲಯಕ್ಕಿಂತ ಅತಿ ಭ್ರಷ್ಟವಾಗಿರುವುದು ಮಾಧ್ಯಮ ಎಂದು ನೇರವಾದ ಆರೋಪವನ್ನು ಒಬ್ಬ ಹಿರಿಯ ರಾಜಕಾರಣಿ ಮಾಡಿದ್ದರು. ಅದಕ್ಕೆ ಪೂರಕವೆಂಬಂತೆ ನಮ್ಮ ರಾಜ್ಯದಲ್ಲೂ ಹಲವು ಬ್ಲಾಕ್ ಮೈಲ್ ಮಾದ್ಯಮ ಮುಖ್ಯಸ್ಥರು ಜೈಲಿಗೆ ಹೋಗಿ ಬಂದ ನಿರ್ದಶನಗಳು ನಮ್ಮ ಕಣ್ಣ ಮುಂದೆ ಕಾಣಿಸುತ್ತಿವೆ. ದುಡ್ಡಿಗಾಗಿಯೇ ಸುದ್ದಿ ಎನ್ನುಂತಹ ಕಾಲ ಬಂದು ಬಹಳ ವರ್ಷವೇ ಆಗಿ ಹೋಗಿವೆ. 24/7 ಸುಧ್ಧಿವಾಹಿನಿಗಳೂ ಬಂದ ನಂತರವಂತು ನೈಜ ಸುದ್ಧಿಯ ಜಾಗದಲ್ಲಿ ಕೆಲವು ರಾಜಕೀಯ ಪಕ್ಷಗಳ ವಕ್ತಾರರಂತೆ ಪ್ರೊಪಗಂಡ ಹರಡುವ ಸುದ್ಧಿ ಮನೆಗಳಾಗಿ ಬದಲಾಗಿವೆ. ಎಷ್ಟೋ ಸಲ ತನ್ನ ಮಾಲೀಕನ ಹಿತ ಕಾಪಾಡುವ ನಾಯಿಯಂತಿರುವವರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಆಚೆ ತಳ್ಳುವ ಸುದ್ದಿ ಮಾಧ್ಯಮಗಳು ಇವೆ. ಅಂತಹ ಒಂದು ಸ್ಟೋರಿ ಓದಿ.

ಇತ್ತಿಚಿಗೆ ಸುದ್ಧಿವಾಹಿನಿಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಟಿ.ವಿ9 ತೆಲುಗು ವಾಹಿನಿಯಲ್ಲಿ ಸಾಕಷ್ಟು ಜಗಳಗಳು ನಡೆದು ಹೋಗಿವೆ. ಬಹಳ ತಿಂಗಳುಗಳಿಂದ ನಡೆಯುತ್ತಿದ್ದ ಜಗಳ ಬಹಳ ವರ್ಷಗಳ ಕಾಲ ಟಿ.ವಿ 9 ಸಿ.ಈ.ಓ ಆಗಿದ್ದ ರವಿಪ್ರಕಾಶ್ ರನ್ನು ಸಂಸ್ಥೆ ದಿಢೀರನೆ ತೆಗೆದು ಹಾಕಿ ಅವರ ಮೇಲೆ ಕೇಸ್ ಹಾಕಿದ್ದು ಈಗ ದೊಡ್ಡ ವಿವಾದವಾಗಿದೆ. ಆದ ನಂತರ ಟಿ.ವಿ9 ಪಾಲುಧಾರಿಕೆ ಮಾರಟದ ವಿವಾದ ಹೊರಬಂದ ನಂತರ ತೆಲುಗು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ದುಡ್ಡಿಗಾಗಿ ಬೀದಿ ಜಗಳ ಮಾಡಿಕೊಳ್ಳುತ್ತಿರುವ ಮಾಧ್ಯಮ ಮಂದಿಯನ್ನು ನೋಡಿ ಜನ ಸಿಟ್ಟಿಗೆದ್ದಿದ್ದಾರೆ.

ಟಿ.ವಿ.9 ಸಂಸ್ಥೆಯ ಆಡಳಿತ ಮಂಡಳಿ ಮತ್ತು ರವಿ ಪ್ರಕಾಶ್ ನಡುವಿನ ವಿವಾದ

ಟಿ.ವಿ.9 ಮುಖ್ಯ ಕಾರ್ಯನಿರ್ವಹಣಧಿಕಾರಿಯಾಗಿದ್ದ ರವಿಪ್ರಕಾಶ್ ರನ್ನು ಮೇ ತೀಂಗಳಲ್ಲಿ ಏಕಾಏಕಿ ಕೆಳಗಿಳಿಸಿತು. ಅಸೋಸಿಯೇಟೆಡ್ ಬ್ರಾಡ್‍ಕಾಸಟಿಂಗ್ ಕಂಪನಿ ಪ್ರೈ.ಲಿಮಿಟೆಡ್ (ಎ.ಬಿ.ಸಿ.ಬಿ.ಪಿ.ಎಲ್ – ಟಿವಿ9) ಸಂಸ್ಥೆಯ ಲೆಕ್ಕಪತ್ರಗಳನ್ನು ತಿರುಚಿದ್ದು ಮತ್ತು ಸಂಸ್ಥೆಯನ್ನು ಮೋಸಗೊಳಿಸಿದ್ದಾರೆಂದು ರವಿಪ್ರಕಾಶ್ ಮೇಲೆ ಹೊಸ ಆಡಳೀತ ಮಂಡಳಿ ‘ಅಳಂದಾ ಮೀಡಿಯಾ ಸಂಸ್ಥೆ’ಯ ಕೌಶಿಕ್ ರಾವ್ ರವರು ಸೈಬಾರ್ ಬಾದ್ ಪೋಲೀಸರಿಗೆ ದೂರನ್ನು ನೀಡಿದ್ದರು. ಟಿ.ವಿ9 ಸಂಸ್ಥೆಯ ತನ್ನ ಆಸ್ತಿ ಒಡೆತನದ, ಪಾಲುಗಳ ಮಾರಟದ ಬಗ್ಗೆ ರವಿಪ್ರಕಾಶ್ ಸುಳ್ಳು ಪತ್ರಗಳನ್ನು ಸೃಷ್ಟಿಮಾಡಿದ್ದಾರೆ ಮತ್ತು ತೆಲುಗು ಸಿನಿಮಾ ನಟ ಶಿವಾಜಿ, ಟಿವಿ9 ಸಂಸ್ಥೆಯ ಒಡೆತನದ ಹಕ್ಕುಗಳು ರವಿಪ್ರಕಾಶ್ ನಿಂದ ಖರೀದಿಮಾಡಿದ ರೀತಿಯ ನಕಲಿಪತ್ರಗಳು ಸೃಷ್ಟಿ ಮಾಡಿದ್ದಾರೆ ಇದಕ್ಕೆ ಅವರಿಬ್ಬರ ನಡುವೆ ನಡೆದ ಈಮೈಲ್ ವ್ಯವಹಾರಗಳೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

ರವಿ ಪ್ರಕಾಶ್

ದೂರು ನೀಡಿದ ದಿನವೇ ಬಂಜಾರಾ ಹಿಲ್ಸ್ ನಲ್ಲಿರುವ ರವಿಪ್ರಕಾಶ್ ಮನೆ ಮತ್ತು ಟಿವಿ9 ಕಛೇರಿಯಲ್ಲಿದ್ದ ಕೆಲವು ಹಾರ್ಡಗ ಡಿಸ್ಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ಪೋಲಿಸರು ಸೆಕ್ಷನ್ 160, 41 ಅಡಿಯಲ್ಲಿ ಎರಡು ಭಾರಿ ಆತ ಮತ್ತು ಆತನ ಜೊತೆಗಾರ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಉತ್ತರಿಸದ ಇವರಿಬ್ಬರು ಬಹಳ ದಿನಗಳ ವರೆಗೆ ಅಜ್ಞಾತವಾಸದಲ್ಲಿದ್ದರು. ಹೈಕೋರ್ಟ್‍ಗೆ ಬೇಲ್ ಗಾಗಿ ಹೋದ ರವಿಪ್ರಕಾಶ್ ಗೆ ಬೇಲ್ ಸಿಕ್ಕಿಲ್ಲ ಮತ್ತೆ ಈತ ಸುಪ್ರೀಂಕೋರ್ಟ್‍ನಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್ ಹೈಕೋರ್ಟ್‍ಗೆ ಹೋಗಿ ಎಂದ ನಂತರ ಹೈಕೋರ್ಟಿನಲ್ಲಿಯೇ ಮಧ್ಯಂತರ ಬೇಲ್ ಸಿಕ್ಕಕಾರಣ ಸೈಬಾರಾಬಾದ್ ಸೈಬರ್ ಪೋಲಿಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಐದು ಘಂಟೆಗಳ ಕಾಲ ಸುಧೀರ್ಘವಾಗಿ ರವಿಪ್ರಕಾಶ್‍ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ .

ಕೌಶಿಕ್ ರಾವ್

ಈ ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ರವಿಪ್ರಕಾಶ್ ಟಿ.ವಿ9ನನ್ನು ಇಬ್ಬರು ದೊಡ್ಡ ಬಂಡವಾಳಿಗರು ಅಕ್ರಮವಾಗಿ ಕೊಂಡುಕೊಂಡಿದ್ದಾರೆ ಮತ್ತು ನನ್ನ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ. ನಿಯಮಗಳನ್ನು ಮೀರಿ ಮಂಡಳಿ ಸಭೆ ನಡೆಸಿ ನನ್ನನ್ನು ಹೊರಗೆ ಕಳುಹಿಸಿದ್ದಾರೆ. ಇದು ಮಾಫೀಯಾಗೂ, ಮಾಧ್ಯಮಕ್ಕು ಮಧ್ಯೆ ನಡೆಯುತ್ತಿರುವ ಧರ್ಮಯುಧ್ಧ, ಕೊನೆಗೆ ಪತ್ರಿಕೋಧ್ಯಮವೇ ಗೆಲ್ಲಲಿದೆ ಎಂದಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಪೋಲಿಸರಿಗೆ ಸಹಕರಿಸುತ್ತಿದ್ದೇನೆ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಹೇಳಿದ್ದಾರೆ. ಈಗ ಪ್ರಸ್ತುತ ಟಿ.ವಿ9 ಕನ್ನಡದ ಸಿ.ಈ.ಓ ನೇ ತೆಲುಗು ಟಿ.ವಿ.9 ವಾಹಿನಿಯ ಸಿ.ಈ.ಓ ಆಗಿ ನೇಮಕಗೊಂಡಿದ್ದಾರೆ.

ನಟ ಶಿವಾಜಿ

ಯಾರು ಈ ರವಿಪ್ರಕಾಶ್ ?

ಹಾರ್ವಡ್ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಮೀಡಿಯಾ ಸ್ಟಾಟಜಿ ವಿಭಾಗದಲ್ಲಿ ಹಿಡಿತ ಸಾಧಿಸಿಬಂದ ರವಿಪ್ರಕಾಶ್, ತೇಜಾ ಟಿವಿಯಲ್ಲಿ ನ್ಯೂಸ್ ಹೆಡ್ಡ್ ಆಗಿ ಕೆಲಸಕ್ಕೆ ಸೇರಿದ ಸಮಯದಲ್ಲಿ ತನ್ನ ವಿಭಿನ್ನ ಶೈಲಿಯ ಕೆಲಸದಿಂದ ಮಾಧ್ಯಮಲೋಕದ ಮಂದಿಗೆ ಪರಿಚಿತನಾದ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಒಂದೋ ಎರಡೋ ಇಪ್ಪತ್ತನಾಲ್ಕು ಗಂಟೆ ಸುದ್ಧಿ ಮಾಧ್ಯಮಗಳಿದ್ದ ಸಮಯಕ್ಕೆ ಮೊದಲನೇ ಭಾರಿಗೆ ತೆಲುಗಿನಲ್ಲಿ ಟಿವಿ9 ಪ್ರಾರಂಭಿಸಿ ಸಂಚಲನ ಮೂಡಿಸಿದ್ದ. ಟಿವಿ9 ಅನ್ನು ನಂಬರ್ 1 ಮಾಡಲು ಸುದ್ಧಿಯಲ್ಲದ ಸುದ್ದಿಗಳನ್ನು ಡಿಬೇಟ್ ನಡೆಸಿದ ಬಗ್ಗೆ ಮತ್ತು TRP ಹುಚ್ಚು ಹತ್ತಿಸಿದವ ಎಂದು ಈತನ ಬಗ್ಗೆ ಆರೋಪವಿದೆ. ಆದರೆ ಅತಿವೇಗವಾಗಿ ಬೆಳೆದ ಈತ ಈಗ ನೆಲಕ್ಕೆ ಬಿದ್ದಿದ್ದು ಮೀಡೀಯಾ ಮಾಫೀಯಾವೇ ಕಾರಣವಾ? ಅಥವಾ ತನ್ನ ಕೆಡುಕುಬುದ್ದಿ ಕಾರಣವಾ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ.

ಮೀಡಿಯಾ ಹೌಸ್ ಗಳಲ್ಲಿ ನಿಜವಾಗಲೂ ಏನು ನಡೆಯುತ್ತಿದೆ?

ಸುದ್ಧಿಗಾಗಿ ನಿರಂತರ ಇಪ್ಪತ್ತನಾಲ್ಕು ಗಂಟೆ ತೋರಿಸುವ ಚಾನೆಲ್ ಗಳು ಬಂದಾಗಿನಿಂದ ಜನರು ಬಿಸಿ ಬಿಸಿ ಸುದ್ಧಿಗಳನ್ನು ನೋಡಲು ಶುರುಮಾಡಿದ ನಂತರ ಟಿ.ಆರ್.ಪಿ ಮತ್ತು ರಾಜಕೀಯ ಹಿಡತ ಇದನ್ನು ನಿಯಂತ್ರಿಸಲು ಶುರು ಮಾಡಿತ್ತು. ಈ ಮಾಧ್ಯಮಗಳು ಕೇವಲ ರಾಜಕೀಯ ಪಕ್ಷಗಳ ಬಾಲಗಳಾಗಿ ಕೆಲಸ ಮಾಡಿತ್ತಿರುವುದನ್ನು ಕಾಣಬಹುದಾಗಿದೆ. ಇದರ ನಡುವೆ ಸುದ್ದಿಮಾಧ್ಯಮಗಳನ್ನು ಅಡ್ಡ ಇಟ್ಟಕೊಂಡು ದೊಡ್ಡ ವ್ಯಾಪಾರಗಳೇ ನಡೆಯುತ್ತಿವೆ. ಕೆಲವು ಚಾನೆಲ್ ಗಳಂತು ಟಿ.ಆರ್.ಪಿಯನ್ನು ತೋರಿಸಿ ತಮಗೆ ಬೇಕಾದ ಸುದ್ಧಿಗಳನ್ನು ತೋರಿಸಿ ಪ್ರಪೊಗಂಡ ಮಾಡಲು ಪ್ಯಾಕೇಜ್ ತೆಗೆದುಕೊಳ್ಳುತ್ತಿದ್ದಾರೆ. ಈ ಸುದ್ಧಿ ವಾಹಿನಿಗಳ ಒಳಗಡೆ ಇರುವಂತಹ ಮುಖ್ಯಸ್ಥರು ಲಾಭದ ವಿಚಾರದಲ್ಲಿ ದೊಡ್ಡ ಜಗಳಗಳನ್ನೆ ಮಾಡಿಕೊಂಡಿದ್ದಾರೆ. ಆದರೆ ಈ ಗಲಾಟೆ ಮಾತ್ರ ಹೊರಬಂದು ಸಂಚಲನ ಉಂಟುಮಾಡಿದೆ. ಇನ್ನುಳಿದವರು ಯಾವಾಗ ಹೊರಬರುತ್ತವೊ ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...