Homeಮುಖಪುಟಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

- Advertisement -
- Advertisement -

ಕಳೆದವಾರ ಶಿವಮೊಗ್ಗದಲ್ಲಿ ಎರಡು ಘಟನೆ ಸಂಭವಿಸಿವೆ. ಒಂದು ಲಂಕೇಶರ ದೂರದ ಸಂಬಂಧಿಯಾದ ಡಿ.ಬಿ.ಶಂಕರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದರಿಂದ, ನಡೆಸಿದ ಸಾಹಿತ್ಯ ಸಮ್ಮೇಳನ! ಇನ್ನೊಂದು ಡಿವಿಎಸ್ ಕಾಲೇಜಿನ ರೀಡರ್‍ಸ್ ಕ್ಲಬ್ ಏರ್ಪಡಿಸಿದ್ದ “ಲಂಕೇಶ್ ಹೊಸ ತಲೆಮಾರಿಗೆ’ ಎಂಬ ಕಾರ್ಯಕ್ರಮ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಮನೋವೈದ್ಯ ಶ್ರೀಧರ್‌ವರ ಪತ್ನಿ ವಿಜಯಾ ಆಯ್ಕೆಯಾಗಿದ್ದರು. ಇವರ ಮೇಲಿರುವ ಆಪಾದನೆ, ಅದೂ ಗುರುತರ ಆಪಾದನೆಗಳೆಂದರೆ ವಿಜಯಾ ಅವರು ರಾಘವೇಶ್ವರ ಸ್ವಾಮಿಯ ರಾಸಲೀಲೆ ಪರವಾಗಿದ್ದಾರೆ ಎಂಬುದು. ಇನ್ನೊಂದು, ಇವರ ಸಾಹಿತ್ಯದಲ್ಲಿ ಹೆಣ್ಣಿನ ಶೋಷಣೆಯ ಯಾವ ವಿವರವೂ ಇಲ್ಲ ಎಂಬುದು ಸಹ್ಯಾದ್ರಿ ಕಾಲೇಜಿನ ಡಾ. ಹಾಲಮ್ಮ ಅವರ ಅಭಿಮತ.

ಡಿ.ಬಿ.ಶಂಕರಪ್ಪ

ಈ ಆಪಾದನೆಗಳನ್ನ ಬಿಟ್ಟರೆ ವಿಜಯಾ ದೇವರಂತಹ ಮಹಿಳೆ. ಅದಕ್ಕೇ ಏನೋ, ಏನಿದೆ ಅದನ್ನು ವಿಮರ್ಶೆ ಮಾಡಿ ಹೇಳಬೇಕಾದ ವಿದ್ವಾಂಸರನೇಕರು, ವಿಜಯಕ್ಕ, ವಿಜಯಕ್ಕ ಎನ್ನುತ್ತಿದ್ದರು. ವಿಜಯಕ್ಕ ಎಂದಕೂಡಲೇ ಅದರ ಸಾಹಿತ್ಯದಲ್ಲಿ ಕಂಡದ್ದನ್ನು ಹೇಳದೆ ಮರೆಮಾಚಬೇಕಾಗುತ್ತದೆ ಎಂಬ ಸರಳ ಸಿದ್ಧಾಂತ ಈ ಮೂರ್ಖ ವಿದ್ವಾಂಸರಿಗೆ ಹೊಳೆಯದಿದ್ದುದು ಸಹಜವೇ ಸರಿ.

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಚಾರಿಸಲಾಗಿ, ಶಂಕರಪ್ಪನ ಟೀಮು ಒಂದು ಸ್ಟಾಲಿಗೆ ಆರು ಸಾವಿರ ರೂ. ಕೇಳಿತಂತೆ. ಪುಸ್ತಕ ವಿರೋಧಿಗಳು ಮಾತ್ರ ಇಂತಹ ಶರತ್ತು ಹಾಕಬಲ್ಲರು. ಶಿವಮೊಗ್ಗದಲ್ಲಿ ಅಕ್ಷತಾ ನಡೆಸುವ ಅಹರ್ನಿಶಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಪುಸ್ತಕಮನೆ ಇತ್ಯಾದಿ ನಾಡಿನಲ್ಲೇ ಹೆಸರಾದ ಪ್ರಕಾಶನಗಳಾಗಿವೆ. ಇವು ಕುವೆಂಪು ರಂಗಮಂದಿರದ ಆವರಣಕ್ಕೆ ಸಂಭ್ರಮವುಂಟುಮಾಡುತ್ತವೆ. ನಿರರ್ಥಕ ಗೋಷ್ಠಿಯಲ್ಲಿ ಕೂರಲಾಗದವರು ಈ ಪುಸ್ತಕ ಮಳಿಗೆಯಲ್ಲಿ ಸುತ್ತುತ್ತಾರೆ. ಇಂತಹ ವಾತಾವರಣವೇ ಇಲ್ಲದಂತೆ ಮಾಡಿದ್ದ ಶಂಕರಪ್ಪನ ಟೀಮು ಮೂರು ದಿನ ಜನಗಳೇ ಇಲ್ಲದ ನೀರಸ ಸಮ್ಮೇಳನ ನಡೆಸಿ ನಿರ್ಗಮಿಸಿತು.

ಗೋಷ್ಠಿಯಲ್ಲಿ ಮಾತನಾಡುವವರು ಒಂಬತ್ತು ಜನರಿದ್ದರೆ, ಅದನ್ನು ನಿರ್ವಹಿಸಲು ನಾಲ್ಕು ಜನರಿದ್ದುದರಿಂದ ವೇದಿಕೆ ಮೇಲೆ ಕನಿಷ್ಠ ಹದಿನೈದು ಜನರಿರುತ್ತಿದ್ದರು. ವೇದಿಕೆ ಉದ್ದ ಸಾಕಾಗದೆ ಅಡ್ಡ ಕುರ್ಚಿಗಳನ್ನು ಹಾಕುತ್ತಿದ್ದರು. ಇನ್ನು ಎಂಟುನೂರು ಸೀಟಿನ ಕುವೆಂಪು ರಂಗಮಂದಿರದಲ್ಲಿ ಎಪ್ಪತ್ತೈದರಿಂದ ನೂರ ಇಪ್ಪತ್ತೈದು ಜನರವರೆಗೆ ರಂಗಮಂದಿರ ಕಿಕ್ಕಿರಿದಿತ್ತು! ಎರಡನೇ ದಿನ ಕವಿಗೋಷ್ಠಿಗೆ ಜಿಲ್ಲೆಯ ದಶದಿಕ್ಕಿನಿಂದ ಕೆಲ ಕವಿಗಳು ದಾಳಿಯಿಟ್ಟು ಹೊಸದಾಗಿ ಹೆಸರು ಸೇರಿಸಿದ್ದರಿಂದ, ಹೆದರಿಕೊಂಡ ಶಂಕರಪ್ಪ ಹೊಸದಾಗಿ ಸೇರ್ಪಡೆಯಾದ ಕವಿಗಳಿಗೆ, ಪುರಸ್ಕಾರದ ಹಾರ ಶಾಲು ಇಲ್ಲದೇ ಇರುವುದರಿಂದ, ಅನುಸರಿಸಿಕೊಂಡು ಮುಂದಿನ ಬಾರಿ ಪಡೆಯಬೇಕು ಎಂದರು. ಅದರಬದಲು ಆನಂತರ ಅಥವಾ ಮರುದಿನ ಎನ್ನಬಹುದಿತ್ತು.

ಇನ್ನು ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ, ಊಟ ಬಂದಿದ್ದರಿಂದ ಸಭಾಂಗಣದ ಜನ ಆ ಕಡೆ ಓಡಿದರು. ಆದರೂ ಪ್ರಯೋಜನವಾಗಲಿಲ್ಲ. ಅದ್ಯಾರೊ ಏನೊ ಬಂದು ತಿಂದು ಮುಗಿಸಿದ್ದರಿಂದ, ಸಿಟ್ಟಾದ ಕೆಲವರು ಮನೆಯ ಕಡೆ ಹೋದರು. ಶಂಕರಪ್ಪ ಸಮಯಾಭಾವದಿಂದ ಊಟದ ಬಿಡುವಿಲ್ಲದಂತೆ ನಿರಂತರ ಗೋಷ್ಠಿಗಳನ್ನು ನಡೆಸಿದರು. ಈ ಮಧ್ಯೆ ಒಂದಷ್ಟು ದಲಿತರು ಪ್ರತಿಭಟಿಸಿ ನಮಗೇಕೆ ಅವಕಾಶ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಶಂಕರಪ್ಪ ಮುಂದೆ ಕೊಡಲಾಗುತ್ತೆ ಎಂದು ಆಶ್ವಾಸನೆ ಕೊಟ್ಟರು.

ಇನ್ನ ನಮ್ಮ ಜಿಲ್ಲೆ ನಮ್ಮ ನೆಲೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಬೃಹಸ್ಪತಿಗಳ ಪೈಕಿ ಒಬ್ಬ ತರ್ಕಗಳು, ಪ್ರಶ್ನೆಗಳು ಇಲ್ಲದಿದ್ದರೆ ಈ ನಾಡು ಶಾಂತವಾಗಿರುತ್ತದೆ ಎಂದ. ಮತ್ತೊಬ್ಬ ದೇವಸ್ಥಾನಗಳು ನಮ್ಮ ಸಂಸ್ಕೃತಿ ಕೇಂದ್ರಗಳು. ಅವು ಚೆನ್ನಾಗಿರಬೇಕು ಎಂದ. ಸೂಕ್ಷ್ಮವಾಗಿ ನೋಡಿದರೆ ಅವು ಪುರೋಹಿತ ಪಿಂಡಗಳಾಗಿದ್ದುದ್ದು ಆಶ್ಚರ್ಯವಾಗಲಿಲ್ಲ. ಇಂಥವು ಶಂಕರಪ್ಪನ ತಲೆಗೆ ಹೋಗುವುದಿಲ್ಲ. ಮಗಳ ಮದುವೆಗೆ ಇಡೀ ನಾಡೇ ಬಂದಿತ್ತು, ಕರೆದವರೆಲ್ಲ ಬಂದು ಉಂಡರೆಂಬ ತೃಪ್ತಿಭಾವದ ಶಂಕರಪ್ಪನಿಗೆ ಸಾಹಿತ್ಯದ ಸೂಕ್ಷ್ಮಗಳು, ಜಾತ್ಯತೀತ ಮನಸ್ಸುಗಳು, ಸಾಹಿತ್ಯ ಸಮ್ಮೇಳನ ಹೇಗಿರಬೇಕೆಂಬ ಕಲ್ಪನೆಯೇ ಇಲ್ಲ. ಅದಕ್ಕಾಗಿಯೇ ಸಾಹಿತ್ಯ ಸಮ್ಮೇಳನವೂ ಸಾಮಾಜಿಕ ನ್ಯಾಯದ ಸಮಸ್ಯೆಗೆ ತುತ್ತಾಗಿ, ವೇದಿಕೆ ಮೇಲೆ ಒಂದು ಡಜನ್ ವಿದ್ವಾಂಸರು ಕೂರುವುದು. ಇನ್ನು ಅವರ ಆಹ್ವಾನ ಪತ್ರಿಕೆ ನೋಡಿದರೆ ಭಯವಾಗುತ್ತದೆ. ಅದರಲ್ಲಿರುವ ಹೆಸರುಗಳನ್ನು ನೋಡಿದರೆ, ಓಟರ್ ಲಿಸ್ಟು ನೋಡಿದಂತಾಗುತ್ತದೆ. ಇದು ಶಂಕರಪ್ಪನ ಕತೆಯಾದರೆ, ಕೇಂದ್ರ ಸ್ಥಾನದ ಅಧ್ಯಕ್ಷ ಮನು ಬಳಿಗಾರ್ ಎಂಬ ಸರಕಾರಿ ಆಸಾಮಿಗೆ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿದ್ದಿದ್ದರೆ, ಈ ದೇಶ ಕಂಡ ಅಪರೂಪದ ಸಂಶೋಧಕ ಶ.ಷಟ್ಟರ್ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರು.

ಸದ್ಯಕ್ಕೆ ನಮ್ಮ ಸಮಾಜ ಕ್ಷೋಭೆಯಿಂದ ಕುದಿಯುತ್ತಿದೆ. ಎಲ್ಲಿ ನೋಡಿದರೂ ಗಲಾಟೆಯ ಶಬ್ದವೇ ತುಂಬಿದೆ. ಸಂಗೀತವೂ ಗಲಭೆಯಂತೆ ಕೇಳುತ್ತಿದೆ. ಆಶ್ಚರ್ಯವೆಂದರೆ, ಇದರೊಳಕ್ಕೆ ಸಾಹಿತ್ಯ ಸಮ್ಮೇಳನವೂ ಸೇರಿಕೊಂಡಿವೆ. ಸಭೆಯಲ್ಲಿ ಪ್ರಾರ್ಥನೆ ಮಾಡುವ, ಸ್ವಾಗತ ಮಾಡುವ, ನಿರೂಪಣೆ ಮಾಡುವ, ವಂದನಾರ್ಪಣೆ ಮಾಡುವಾಗ ಹಾರತುರಾಯಿ ಶಾಲು ತಂದು ಎಸೆಯುವ ಎಲ್ಲರೂ ಗಲಭೆಗೆ ತುತ್ತಾದವರಂತೆ ಕಾಣುತ್ತಿದ್ದಾರೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ಇಂತಹ ಗಲಭೆ ಸೃಷ್ಟಿಸಬಾರದು. ಭೀಕರವಾದ ಸೌಂಡ್ ಬಾಕ್ಸು, ಮೈಕುಗಳಿಂದ ಉಂಟಾಗುವ ಶಬ್ದಗಳಿಂದ ಮುಕ್ತವಾಗಿ ಸಾಂತ್ವನದಂತಿರುವಂತೆ ನೋಡಿಕೊಳ್ಳಬೇಕು.

ಇಂತಹ ಹೊತ್ತಿನಲ್ಲಿ ಡಿವಿಎಸ್‌ನಲ್ಲಿ ನಡೆದ ಲಂಕೇಶರ ಹುಟ್ಟುಹಬ್ಬರ ಸೆಮಿನಾರನ್ನು ಶಂಕರಪ್ಪ ಬಂದು ನೋಡಬೇಕಿತ್ತು. ಅಲ್ಲಿಗೆ ಲಂಕೇಶರ ನೀಲು ಕಾವ್ಯಕ್ಕೆ ಚಿತ್ರ ಬರೆದಿದ್ದ, ಮತ್ತವರಿಗೆ ಕುತೂಹಲ ಕೆರಳಿಸಿದ್ದ ಎಂ.ಎಸ್.ಮೂರ್ತಿ ಬಂದಿದ್ದರು. ಲಂಕೇಶರ ನಾಟಕಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದ ನಟರಾಜ್ ಹೊನ್ನವಳ್ಳಿ ಆಗಮಿಸಿದ್ದರು. ಜೊತೆಗೆ ಲಂಕೇಶರ ಒಡನಾಡಿಯಾಗಿದ್ದ ಬಿ.ಚಂದ್ರೇಗೌಡರು ಆಶಯ ಭಾಷಣ ಮಾಡಿದರು. ವೇದಿಕೆಯ ಮೇಲೆ ಮೂವರು ಮಾತನಾಡುವವರಿದ್ದರೆ, ಸಭಾಂಗಣದಲ್ಲಿ ನೂರಿಪ್ಪತ್ತೈದು ವಿದ್ಯಾರ್ಥಿಗಳಿದ್ದರು.

ಈ ಹೊಸ ತಲೆಮಾರಿಗೆ ಮಾತನಾಡಿದವರೆಲ್ಲ ಸಾಧ್ಯವಾದಷ್ಟು ಲಂಕೇಶರನ್ನು ತಲುಪಿಸಿದರು. ಕಡೆಯಲ್ಲಿ ಕವಿಯತ್ರಿ ಅಕ್ಷತಾ ಹುಂಚದಕಟ್ಟೆ ಲಂಕೇಶರನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಅವರು ಓದಿದ ನೀಲು ಕವನ ವಿದ್ಯಾರ್ಥಿಗಳಿಗೆ ತುಂಬಾ ಪ್ರೇರಣೆ ನೀಡಿತು.

ಅಕ್ಷತಾ ಹುಂಚದಕಟ್ಟೆ

 

ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ್ದ ಗುಣಮುಖ ನಾಟಕದ ಕಡೆ ದೃಶ್ಯಗಳನ್ನು ಹೊಂಗಿರಣದ ಮತ್ತು ನಾದಿರ್ ಶಾ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುವ ಸಾಸ್ವೆಹಳ್ಳಿ ಸತೀಶ್ ಮತ್ತು ಕೊಟ್ರಪ್ಪ ವಾಚಿಸಿದರು. ಸಭೆಯಲ್ಲಿ ಪ್ರಸ್ತಾಪವಾದ ಸಾರಾ ಅಬೂಬಕರ್ ವಿಷಯ ಕೇಳಿ ಪ್ರೇರಣೆಗೊಂಡ ಮುಸ್ಲಿಂ ಹೆಣ್ಣುಮಗಳೊಬ್ಬಳು, “ನಾನು ಬರೀತಾಯಿದ್ದೀನಿ. ಆದ್ರೆ ಉರ್ದುವಿನಲ್ಲಿ ಬರೀತಿನಿ. ಇನ್ನುಮುಂದೆ ಕನ್ನಡದಲ್ಲಿ ಬರೀಬೇಕು” ಎಂದಳು. ಖಂಡಿತ ನೀನು ಬರೀಲೇಬೇಕು, ಸಾರಾ, ಬಾನು ಬರವಣಿಗೆ ನಿಲ್ಲುಸ್ತಾಯಿದಾರೆ. ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಬರಹಗಾರ್ತಿಯರೇ ಇಲ್ಲ, ನೀನು ಬರಿಬೇಕು ಎಂದಾಗ ಚಿಟ್ಟೆಯಾಕಾರದ ಚೂಡಿದಾರ್ ಹಾಕಿದ್ದ ಆಕೆ ಅದೆಲ್ಲೊ ಮಡಗಿದ್ದ ಬುರ್ಖಾ ಧರಿಸಿಕೊಂಡು ಹೊರಟಳು! ಆಕೆ ಏನಾದರೂ ಬರೆಯಬಹುದು. ಲಂಕೇಶ್ ಅಂತಹವರ ಪ್ರೇರಣೆಯಾಗಿದ್ದರು. ಮುಂದೂ ಕೂಡಾ ಆಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಜಿತ್ ಪವಾರ್ ಸಾವು | ಪತನಗೊಂಡ ವಿಮಾನದ ನಿರ್ವಹಣಾ ಸಂಸ್ಥೆಗೂ ಟಿಡಿಪಿಗೂ ನಂಟು : ರೋಹಿತ್ ಪವಾರ್

ಅಜಿತ್ ಪವಾರ್ ಸಾವಿಗೆ ಕಾರಣವಾದ ಪತನಗೊಂಡ ವಿಮಾನದ ನಿರ್ವಾಹಕ ಸಂಸ್ಥೆ ವಿಎಸ್ಆರ್ ವೆಂಚರ್ಸ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಡುವೆ ಸಂಬಂಧವಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣದ)...

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...