Homeಮುಖಪುಟಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

- Advertisement -
- Advertisement -

ಕಳೆದವಾರ ಶಿವಮೊಗ್ಗದಲ್ಲಿ ಎರಡು ಘಟನೆ ಸಂಭವಿಸಿವೆ. ಒಂದು ಲಂಕೇಶರ ದೂರದ ಸಂಬಂಧಿಯಾದ ಡಿ.ಬಿ.ಶಂಕರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದರಿಂದ, ನಡೆಸಿದ ಸಾಹಿತ್ಯ ಸಮ್ಮೇಳನ! ಇನ್ನೊಂದು ಡಿವಿಎಸ್ ಕಾಲೇಜಿನ ರೀಡರ್‍ಸ್ ಕ್ಲಬ್ ಏರ್ಪಡಿಸಿದ್ದ “ಲಂಕೇಶ್ ಹೊಸ ತಲೆಮಾರಿಗೆ’ ಎಂಬ ಕಾರ್ಯಕ್ರಮ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಮನೋವೈದ್ಯ ಶ್ರೀಧರ್‌ವರ ಪತ್ನಿ ವಿಜಯಾ ಆಯ್ಕೆಯಾಗಿದ್ದರು. ಇವರ ಮೇಲಿರುವ ಆಪಾದನೆ, ಅದೂ ಗುರುತರ ಆಪಾದನೆಗಳೆಂದರೆ ವಿಜಯಾ ಅವರು ರಾಘವೇಶ್ವರ ಸ್ವಾಮಿಯ ರಾಸಲೀಲೆ ಪರವಾಗಿದ್ದಾರೆ ಎಂಬುದು. ಇನ್ನೊಂದು, ಇವರ ಸಾಹಿತ್ಯದಲ್ಲಿ ಹೆಣ್ಣಿನ ಶೋಷಣೆಯ ಯಾವ ವಿವರವೂ ಇಲ್ಲ ಎಂಬುದು ಸಹ್ಯಾದ್ರಿ ಕಾಲೇಜಿನ ಡಾ. ಹಾಲಮ್ಮ ಅವರ ಅಭಿಮತ.

ಡಿ.ಬಿ.ಶಂಕರಪ್ಪ

ಈ ಆಪಾದನೆಗಳನ್ನ ಬಿಟ್ಟರೆ ವಿಜಯಾ ದೇವರಂತಹ ಮಹಿಳೆ. ಅದಕ್ಕೇ ಏನೋ, ಏನಿದೆ ಅದನ್ನು ವಿಮರ್ಶೆ ಮಾಡಿ ಹೇಳಬೇಕಾದ ವಿದ್ವಾಂಸರನೇಕರು, ವಿಜಯಕ್ಕ, ವಿಜಯಕ್ಕ ಎನ್ನುತ್ತಿದ್ದರು. ವಿಜಯಕ್ಕ ಎಂದಕೂಡಲೇ ಅದರ ಸಾಹಿತ್ಯದಲ್ಲಿ ಕಂಡದ್ದನ್ನು ಹೇಳದೆ ಮರೆಮಾಚಬೇಕಾಗುತ್ತದೆ ಎಂಬ ಸರಳ ಸಿದ್ಧಾಂತ ಈ ಮೂರ್ಖ ವಿದ್ವಾಂಸರಿಗೆ ಹೊಳೆಯದಿದ್ದುದು ಸಹಜವೇ ಸರಿ.

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಚಾರಿಸಲಾಗಿ, ಶಂಕರಪ್ಪನ ಟೀಮು ಒಂದು ಸ್ಟಾಲಿಗೆ ಆರು ಸಾವಿರ ರೂ. ಕೇಳಿತಂತೆ. ಪುಸ್ತಕ ವಿರೋಧಿಗಳು ಮಾತ್ರ ಇಂತಹ ಶರತ್ತು ಹಾಕಬಲ್ಲರು. ಶಿವಮೊಗ್ಗದಲ್ಲಿ ಅಕ್ಷತಾ ನಡೆಸುವ ಅಹರ್ನಿಶಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಪುಸ್ತಕಮನೆ ಇತ್ಯಾದಿ ನಾಡಿನಲ್ಲೇ ಹೆಸರಾದ ಪ್ರಕಾಶನಗಳಾಗಿವೆ. ಇವು ಕುವೆಂಪು ರಂಗಮಂದಿರದ ಆವರಣಕ್ಕೆ ಸಂಭ್ರಮವುಂಟುಮಾಡುತ್ತವೆ. ನಿರರ್ಥಕ ಗೋಷ್ಠಿಯಲ್ಲಿ ಕೂರಲಾಗದವರು ಈ ಪುಸ್ತಕ ಮಳಿಗೆಯಲ್ಲಿ ಸುತ್ತುತ್ತಾರೆ. ಇಂತಹ ವಾತಾವರಣವೇ ಇಲ್ಲದಂತೆ ಮಾಡಿದ್ದ ಶಂಕರಪ್ಪನ ಟೀಮು ಮೂರು ದಿನ ಜನಗಳೇ ಇಲ್ಲದ ನೀರಸ ಸಮ್ಮೇಳನ ನಡೆಸಿ ನಿರ್ಗಮಿಸಿತು.

ಗೋಷ್ಠಿಯಲ್ಲಿ ಮಾತನಾಡುವವರು ಒಂಬತ್ತು ಜನರಿದ್ದರೆ, ಅದನ್ನು ನಿರ್ವಹಿಸಲು ನಾಲ್ಕು ಜನರಿದ್ದುದರಿಂದ ವೇದಿಕೆ ಮೇಲೆ ಕನಿಷ್ಠ ಹದಿನೈದು ಜನರಿರುತ್ತಿದ್ದರು. ವೇದಿಕೆ ಉದ್ದ ಸಾಕಾಗದೆ ಅಡ್ಡ ಕುರ್ಚಿಗಳನ್ನು ಹಾಕುತ್ತಿದ್ದರು. ಇನ್ನು ಎಂಟುನೂರು ಸೀಟಿನ ಕುವೆಂಪು ರಂಗಮಂದಿರದಲ್ಲಿ ಎಪ್ಪತ್ತೈದರಿಂದ ನೂರ ಇಪ್ಪತ್ತೈದು ಜನರವರೆಗೆ ರಂಗಮಂದಿರ ಕಿಕ್ಕಿರಿದಿತ್ತು! ಎರಡನೇ ದಿನ ಕವಿಗೋಷ್ಠಿಗೆ ಜಿಲ್ಲೆಯ ದಶದಿಕ್ಕಿನಿಂದ ಕೆಲ ಕವಿಗಳು ದಾಳಿಯಿಟ್ಟು ಹೊಸದಾಗಿ ಹೆಸರು ಸೇರಿಸಿದ್ದರಿಂದ, ಹೆದರಿಕೊಂಡ ಶಂಕರಪ್ಪ ಹೊಸದಾಗಿ ಸೇರ್ಪಡೆಯಾದ ಕವಿಗಳಿಗೆ, ಪುರಸ್ಕಾರದ ಹಾರ ಶಾಲು ಇಲ್ಲದೇ ಇರುವುದರಿಂದ, ಅನುಸರಿಸಿಕೊಂಡು ಮುಂದಿನ ಬಾರಿ ಪಡೆಯಬೇಕು ಎಂದರು. ಅದರಬದಲು ಆನಂತರ ಅಥವಾ ಮರುದಿನ ಎನ್ನಬಹುದಿತ್ತು.

ಇನ್ನು ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ, ಊಟ ಬಂದಿದ್ದರಿಂದ ಸಭಾಂಗಣದ ಜನ ಆ ಕಡೆ ಓಡಿದರು. ಆದರೂ ಪ್ರಯೋಜನವಾಗಲಿಲ್ಲ. ಅದ್ಯಾರೊ ಏನೊ ಬಂದು ತಿಂದು ಮುಗಿಸಿದ್ದರಿಂದ, ಸಿಟ್ಟಾದ ಕೆಲವರು ಮನೆಯ ಕಡೆ ಹೋದರು. ಶಂಕರಪ್ಪ ಸಮಯಾಭಾವದಿಂದ ಊಟದ ಬಿಡುವಿಲ್ಲದಂತೆ ನಿರಂತರ ಗೋಷ್ಠಿಗಳನ್ನು ನಡೆಸಿದರು. ಈ ಮಧ್ಯೆ ಒಂದಷ್ಟು ದಲಿತರು ಪ್ರತಿಭಟಿಸಿ ನಮಗೇಕೆ ಅವಕಾಶ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಶಂಕರಪ್ಪ ಮುಂದೆ ಕೊಡಲಾಗುತ್ತೆ ಎಂದು ಆಶ್ವಾಸನೆ ಕೊಟ್ಟರು.

ಇನ್ನ ನಮ್ಮ ಜಿಲ್ಲೆ ನಮ್ಮ ನೆಲೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಬೃಹಸ್ಪತಿಗಳ ಪೈಕಿ ಒಬ್ಬ ತರ್ಕಗಳು, ಪ್ರಶ್ನೆಗಳು ಇಲ್ಲದಿದ್ದರೆ ಈ ನಾಡು ಶಾಂತವಾಗಿರುತ್ತದೆ ಎಂದ. ಮತ್ತೊಬ್ಬ ದೇವಸ್ಥಾನಗಳು ನಮ್ಮ ಸಂಸ್ಕೃತಿ ಕೇಂದ್ರಗಳು. ಅವು ಚೆನ್ನಾಗಿರಬೇಕು ಎಂದ. ಸೂಕ್ಷ್ಮವಾಗಿ ನೋಡಿದರೆ ಅವು ಪುರೋಹಿತ ಪಿಂಡಗಳಾಗಿದ್ದುದ್ದು ಆಶ್ಚರ್ಯವಾಗಲಿಲ್ಲ. ಇಂಥವು ಶಂಕರಪ್ಪನ ತಲೆಗೆ ಹೋಗುವುದಿಲ್ಲ. ಮಗಳ ಮದುವೆಗೆ ಇಡೀ ನಾಡೇ ಬಂದಿತ್ತು, ಕರೆದವರೆಲ್ಲ ಬಂದು ಉಂಡರೆಂಬ ತೃಪ್ತಿಭಾವದ ಶಂಕರಪ್ಪನಿಗೆ ಸಾಹಿತ್ಯದ ಸೂಕ್ಷ್ಮಗಳು, ಜಾತ್ಯತೀತ ಮನಸ್ಸುಗಳು, ಸಾಹಿತ್ಯ ಸಮ್ಮೇಳನ ಹೇಗಿರಬೇಕೆಂಬ ಕಲ್ಪನೆಯೇ ಇಲ್ಲ. ಅದಕ್ಕಾಗಿಯೇ ಸಾಹಿತ್ಯ ಸಮ್ಮೇಳನವೂ ಸಾಮಾಜಿಕ ನ್ಯಾಯದ ಸಮಸ್ಯೆಗೆ ತುತ್ತಾಗಿ, ವೇದಿಕೆ ಮೇಲೆ ಒಂದು ಡಜನ್ ವಿದ್ವಾಂಸರು ಕೂರುವುದು. ಇನ್ನು ಅವರ ಆಹ್ವಾನ ಪತ್ರಿಕೆ ನೋಡಿದರೆ ಭಯವಾಗುತ್ತದೆ. ಅದರಲ್ಲಿರುವ ಹೆಸರುಗಳನ್ನು ನೋಡಿದರೆ, ಓಟರ್ ಲಿಸ್ಟು ನೋಡಿದಂತಾಗುತ್ತದೆ. ಇದು ಶಂಕರಪ್ಪನ ಕತೆಯಾದರೆ, ಕೇಂದ್ರ ಸ್ಥಾನದ ಅಧ್ಯಕ್ಷ ಮನು ಬಳಿಗಾರ್ ಎಂಬ ಸರಕಾರಿ ಆಸಾಮಿಗೆ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿದ್ದಿದ್ದರೆ, ಈ ದೇಶ ಕಂಡ ಅಪರೂಪದ ಸಂಶೋಧಕ ಶ.ಷಟ್ಟರ್ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರು.

ಸದ್ಯಕ್ಕೆ ನಮ್ಮ ಸಮಾಜ ಕ್ಷೋಭೆಯಿಂದ ಕುದಿಯುತ್ತಿದೆ. ಎಲ್ಲಿ ನೋಡಿದರೂ ಗಲಾಟೆಯ ಶಬ್ದವೇ ತುಂಬಿದೆ. ಸಂಗೀತವೂ ಗಲಭೆಯಂತೆ ಕೇಳುತ್ತಿದೆ. ಆಶ್ಚರ್ಯವೆಂದರೆ, ಇದರೊಳಕ್ಕೆ ಸಾಹಿತ್ಯ ಸಮ್ಮೇಳನವೂ ಸೇರಿಕೊಂಡಿವೆ. ಸಭೆಯಲ್ಲಿ ಪ್ರಾರ್ಥನೆ ಮಾಡುವ, ಸ್ವಾಗತ ಮಾಡುವ, ನಿರೂಪಣೆ ಮಾಡುವ, ವಂದನಾರ್ಪಣೆ ಮಾಡುವಾಗ ಹಾರತುರಾಯಿ ಶಾಲು ತಂದು ಎಸೆಯುವ ಎಲ್ಲರೂ ಗಲಭೆಗೆ ತುತ್ತಾದವರಂತೆ ಕಾಣುತ್ತಿದ್ದಾರೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ಇಂತಹ ಗಲಭೆ ಸೃಷ್ಟಿಸಬಾರದು. ಭೀಕರವಾದ ಸೌಂಡ್ ಬಾಕ್ಸು, ಮೈಕುಗಳಿಂದ ಉಂಟಾಗುವ ಶಬ್ದಗಳಿಂದ ಮುಕ್ತವಾಗಿ ಸಾಂತ್ವನದಂತಿರುವಂತೆ ನೋಡಿಕೊಳ್ಳಬೇಕು.

ಇಂತಹ ಹೊತ್ತಿನಲ್ಲಿ ಡಿವಿಎಸ್‌ನಲ್ಲಿ ನಡೆದ ಲಂಕೇಶರ ಹುಟ್ಟುಹಬ್ಬರ ಸೆಮಿನಾರನ್ನು ಶಂಕರಪ್ಪ ಬಂದು ನೋಡಬೇಕಿತ್ತು. ಅಲ್ಲಿಗೆ ಲಂಕೇಶರ ನೀಲು ಕಾವ್ಯಕ್ಕೆ ಚಿತ್ರ ಬರೆದಿದ್ದ, ಮತ್ತವರಿಗೆ ಕುತೂಹಲ ಕೆರಳಿಸಿದ್ದ ಎಂ.ಎಸ್.ಮೂರ್ತಿ ಬಂದಿದ್ದರು. ಲಂಕೇಶರ ನಾಟಕಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದ ನಟರಾಜ್ ಹೊನ್ನವಳ್ಳಿ ಆಗಮಿಸಿದ್ದರು. ಜೊತೆಗೆ ಲಂಕೇಶರ ಒಡನಾಡಿಯಾಗಿದ್ದ ಬಿ.ಚಂದ್ರೇಗೌಡರು ಆಶಯ ಭಾಷಣ ಮಾಡಿದರು. ವೇದಿಕೆಯ ಮೇಲೆ ಮೂವರು ಮಾತನಾಡುವವರಿದ್ದರೆ, ಸಭಾಂಗಣದಲ್ಲಿ ನೂರಿಪ್ಪತ್ತೈದು ವಿದ್ಯಾರ್ಥಿಗಳಿದ್ದರು.

ಈ ಹೊಸ ತಲೆಮಾರಿಗೆ ಮಾತನಾಡಿದವರೆಲ್ಲ ಸಾಧ್ಯವಾದಷ್ಟು ಲಂಕೇಶರನ್ನು ತಲುಪಿಸಿದರು. ಕಡೆಯಲ್ಲಿ ಕವಿಯತ್ರಿ ಅಕ್ಷತಾ ಹುಂಚದಕಟ್ಟೆ ಲಂಕೇಶರನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಅವರು ಓದಿದ ನೀಲು ಕವನ ವಿದ್ಯಾರ್ಥಿಗಳಿಗೆ ತುಂಬಾ ಪ್ರೇರಣೆ ನೀಡಿತು.

ಅಕ್ಷತಾ ಹುಂಚದಕಟ್ಟೆ

 

ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ್ದ ಗುಣಮುಖ ನಾಟಕದ ಕಡೆ ದೃಶ್ಯಗಳನ್ನು ಹೊಂಗಿರಣದ ಮತ್ತು ನಾದಿರ್ ಶಾ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುವ ಸಾಸ್ವೆಹಳ್ಳಿ ಸತೀಶ್ ಮತ್ತು ಕೊಟ್ರಪ್ಪ ವಾಚಿಸಿದರು. ಸಭೆಯಲ್ಲಿ ಪ್ರಸ್ತಾಪವಾದ ಸಾರಾ ಅಬೂಬಕರ್ ವಿಷಯ ಕೇಳಿ ಪ್ರೇರಣೆಗೊಂಡ ಮುಸ್ಲಿಂ ಹೆಣ್ಣುಮಗಳೊಬ್ಬಳು, “ನಾನು ಬರೀತಾಯಿದ್ದೀನಿ. ಆದ್ರೆ ಉರ್ದುವಿನಲ್ಲಿ ಬರೀತಿನಿ. ಇನ್ನುಮುಂದೆ ಕನ್ನಡದಲ್ಲಿ ಬರೀಬೇಕು” ಎಂದಳು. ಖಂಡಿತ ನೀನು ಬರೀಲೇಬೇಕು, ಸಾರಾ, ಬಾನು ಬರವಣಿಗೆ ನಿಲ್ಲುಸ್ತಾಯಿದಾರೆ. ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಬರಹಗಾರ್ತಿಯರೇ ಇಲ್ಲ, ನೀನು ಬರಿಬೇಕು ಎಂದಾಗ ಚಿಟ್ಟೆಯಾಕಾರದ ಚೂಡಿದಾರ್ ಹಾಕಿದ್ದ ಆಕೆ ಅದೆಲ್ಲೊ ಮಡಗಿದ್ದ ಬುರ್ಖಾ ಧರಿಸಿಕೊಂಡು ಹೊರಟಳು! ಆಕೆ ಏನಾದರೂ ಬರೆಯಬಹುದು. ಲಂಕೇಶ್ ಅಂತಹವರ ಪ್ರೇರಣೆಯಾಗಿದ್ದರು. ಮುಂದೂ ಕೂಡಾ ಆಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...