Homeಮುಖಪುಟಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

- Advertisement -
- Advertisement -

ಕಳೆದವಾರ ಶಿವಮೊಗ್ಗದಲ್ಲಿ ಎರಡು ಘಟನೆ ಸಂಭವಿಸಿವೆ. ಒಂದು ಲಂಕೇಶರ ದೂರದ ಸಂಬಂಧಿಯಾದ ಡಿ.ಬಿ.ಶಂಕರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದರಿಂದ, ನಡೆಸಿದ ಸಾಹಿತ್ಯ ಸಮ್ಮೇಳನ! ಇನ್ನೊಂದು ಡಿವಿಎಸ್ ಕಾಲೇಜಿನ ರೀಡರ್‍ಸ್ ಕ್ಲಬ್ ಏರ್ಪಡಿಸಿದ್ದ “ಲಂಕೇಶ್ ಹೊಸ ತಲೆಮಾರಿಗೆ’ ಎಂಬ ಕಾರ್ಯಕ್ರಮ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಮನೋವೈದ್ಯ ಶ್ರೀಧರ್‌ವರ ಪತ್ನಿ ವಿಜಯಾ ಆಯ್ಕೆಯಾಗಿದ್ದರು. ಇವರ ಮೇಲಿರುವ ಆಪಾದನೆ, ಅದೂ ಗುರುತರ ಆಪಾದನೆಗಳೆಂದರೆ ವಿಜಯಾ ಅವರು ರಾಘವೇಶ್ವರ ಸ್ವಾಮಿಯ ರಾಸಲೀಲೆ ಪರವಾಗಿದ್ದಾರೆ ಎಂಬುದು. ಇನ್ನೊಂದು, ಇವರ ಸಾಹಿತ್ಯದಲ್ಲಿ ಹೆಣ್ಣಿನ ಶೋಷಣೆಯ ಯಾವ ವಿವರವೂ ಇಲ್ಲ ಎಂಬುದು ಸಹ್ಯಾದ್ರಿ ಕಾಲೇಜಿನ ಡಾ. ಹಾಲಮ್ಮ ಅವರ ಅಭಿಮತ.

ಡಿ.ಬಿ.ಶಂಕರಪ್ಪ

ಈ ಆಪಾದನೆಗಳನ್ನ ಬಿಟ್ಟರೆ ವಿಜಯಾ ದೇವರಂತಹ ಮಹಿಳೆ. ಅದಕ್ಕೇ ಏನೋ, ಏನಿದೆ ಅದನ್ನು ವಿಮರ್ಶೆ ಮಾಡಿ ಹೇಳಬೇಕಾದ ವಿದ್ವಾಂಸರನೇಕರು, ವಿಜಯಕ್ಕ, ವಿಜಯಕ್ಕ ಎನ್ನುತ್ತಿದ್ದರು. ವಿಜಯಕ್ಕ ಎಂದಕೂಡಲೇ ಅದರ ಸಾಹಿತ್ಯದಲ್ಲಿ ಕಂಡದ್ದನ್ನು ಹೇಳದೆ ಮರೆಮಾಚಬೇಕಾಗುತ್ತದೆ ಎಂಬ ಸರಳ ಸಿದ್ಧಾಂತ ಈ ಮೂರ್ಖ ವಿದ್ವಾಂಸರಿಗೆ ಹೊಳೆಯದಿದ್ದುದು ಸಹಜವೇ ಸರಿ.

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಚಾರಿಸಲಾಗಿ, ಶಂಕರಪ್ಪನ ಟೀಮು ಒಂದು ಸ್ಟಾಲಿಗೆ ಆರು ಸಾವಿರ ರೂ. ಕೇಳಿತಂತೆ. ಪುಸ್ತಕ ವಿರೋಧಿಗಳು ಮಾತ್ರ ಇಂತಹ ಶರತ್ತು ಹಾಕಬಲ್ಲರು. ಶಿವಮೊಗ್ಗದಲ್ಲಿ ಅಕ್ಷತಾ ನಡೆಸುವ ಅಹರ್ನಿಶಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಪುಸ್ತಕಮನೆ ಇತ್ಯಾದಿ ನಾಡಿನಲ್ಲೇ ಹೆಸರಾದ ಪ್ರಕಾಶನಗಳಾಗಿವೆ. ಇವು ಕುವೆಂಪು ರಂಗಮಂದಿರದ ಆವರಣಕ್ಕೆ ಸಂಭ್ರಮವುಂಟುಮಾಡುತ್ತವೆ. ನಿರರ್ಥಕ ಗೋಷ್ಠಿಯಲ್ಲಿ ಕೂರಲಾಗದವರು ಈ ಪುಸ್ತಕ ಮಳಿಗೆಯಲ್ಲಿ ಸುತ್ತುತ್ತಾರೆ. ಇಂತಹ ವಾತಾವರಣವೇ ಇಲ್ಲದಂತೆ ಮಾಡಿದ್ದ ಶಂಕರಪ್ಪನ ಟೀಮು ಮೂರು ದಿನ ಜನಗಳೇ ಇಲ್ಲದ ನೀರಸ ಸಮ್ಮೇಳನ ನಡೆಸಿ ನಿರ್ಗಮಿಸಿತು.

ಗೋಷ್ಠಿಯಲ್ಲಿ ಮಾತನಾಡುವವರು ಒಂಬತ್ತು ಜನರಿದ್ದರೆ, ಅದನ್ನು ನಿರ್ವಹಿಸಲು ನಾಲ್ಕು ಜನರಿದ್ದುದರಿಂದ ವೇದಿಕೆ ಮೇಲೆ ಕನಿಷ್ಠ ಹದಿನೈದು ಜನರಿರುತ್ತಿದ್ದರು. ವೇದಿಕೆ ಉದ್ದ ಸಾಕಾಗದೆ ಅಡ್ಡ ಕುರ್ಚಿಗಳನ್ನು ಹಾಕುತ್ತಿದ್ದರು. ಇನ್ನು ಎಂಟುನೂರು ಸೀಟಿನ ಕುವೆಂಪು ರಂಗಮಂದಿರದಲ್ಲಿ ಎಪ್ಪತ್ತೈದರಿಂದ ನೂರ ಇಪ್ಪತ್ತೈದು ಜನರವರೆಗೆ ರಂಗಮಂದಿರ ಕಿಕ್ಕಿರಿದಿತ್ತು! ಎರಡನೇ ದಿನ ಕವಿಗೋಷ್ಠಿಗೆ ಜಿಲ್ಲೆಯ ದಶದಿಕ್ಕಿನಿಂದ ಕೆಲ ಕವಿಗಳು ದಾಳಿಯಿಟ್ಟು ಹೊಸದಾಗಿ ಹೆಸರು ಸೇರಿಸಿದ್ದರಿಂದ, ಹೆದರಿಕೊಂಡ ಶಂಕರಪ್ಪ ಹೊಸದಾಗಿ ಸೇರ್ಪಡೆಯಾದ ಕವಿಗಳಿಗೆ, ಪುರಸ್ಕಾರದ ಹಾರ ಶಾಲು ಇಲ್ಲದೇ ಇರುವುದರಿಂದ, ಅನುಸರಿಸಿಕೊಂಡು ಮುಂದಿನ ಬಾರಿ ಪಡೆಯಬೇಕು ಎಂದರು. ಅದರಬದಲು ಆನಂತರ ಅಥವಾ ಮರುದಿನ ಎನ್ನಬಹುದಿತ್ತು.

ಇನ್ನು ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ, ಊಟ ಬಂದಿದ್ದರಿಂದ ಸಭಾಂಗಣದ ಜನ ಆ ಕಡೆ ಓಡಿದರು. ಆದರೂ ಪ್ರಯೋಜನವಾಗಲಿಲ್ಲ. ಅದ್ಯಾರೊ ಏನೊ ಬಂದು ತಿಂದು ಮುಗಿಸಿದ್ದರಿಂದ, ಸಿಟ್ಟಾದ ಕೆಲವರು ಮನೆಯ ಕಡೆ ಹೋದರು. ಶಂಕರಪ್ಪ ಸಮಯಾಭಾವದಿಂದ ಊಟದ ಬಿಡುವಿಲ್ಲದಂತೆ ನಿರಂತರ ಗೋಷ್ಠಿಗಳನ್ನು ನಡೆಸಿದರು. ಈ ಮಧ್ಯೆ ಒಂದಷ್ಟು ದಲಿತರು ಪ್ರತಿಭಟಿಸಿ ನಮಗೇಕೆ ಅವಕಾಶ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಶಂಕರಪ್ಪ ಮುಂದೆ ಕೊಡಲಾಗುತ್ತೆ ಎಂದು ಆಶ್ವಾಸನೆ ಕೊಟ್ಟರು.

ಇನ್ನ ನಮ್ಮ ಜಿಲ್ಲೆ ನಮ್ಮ ನೆಲೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಬೃಹಸ್ಪತಿಗಳ ಪೈಕಿ ಒಬ್ಬ ತರ್ಕಗಳು, ಪ್ರಶ್ನೆಗಳು ಇಲ್ಲದಿದ್ದರೆ ಈ ನಾಡು ಶಾಂತವಾಗಿರುತ್ತದೆ ಎಂದ. ಮತ್ತೊಬ್ಬ ದೇವಸ್ಥಾನಗಳು ನಮ್ಮ ಸಂಸ್ಕೃತಿ ಕೇಂದ್ರಗಳು. ಅವು ಚೆನ್ನಾಗಿರಬೇಕು ಎಂದ. ಸೂಕ್ಷ್ಮವಾಗಿ ನೋಡಿದರೆ ಅವು ಪುರೋಹಿತ ಪಿಂಡಗಳಾಗಿದ್ದುದ್ದು ಆಶ್ಚರ್ಯವಾಗಲಿಲ್ಲ. ಇಂಥವು ಶಂಕರಪ್ಪನ ತಲೆಗೆ ಹೋಗುವುದಿಲ್ಲ. ಮಗಳ ಮದುವೆಗೆ ಇಡೀ ನಾಡೇ ಬಂದಿತ್ತು, ಕರೆದವರೆಲ್ಲ ಬಂದು ಉಂಡರೆಂಬ ತೃಪ್ತಿಭಾವದ ಶಂಕರಪ್ಪನಿಗೆ ಸಾಹಿತ್ಯದ ಸೂಕ್ಷ್ಮಗಳು, ಜಾತ್ಯತೀತ ಮನಸ್ಸುಗಳು, ಸಾಹಿತ್ಯ ಸಮ್ಮೇಳನ ಹೇಗಿರಬೇಕೆಂಬ ಕಲ್ಪನೆಯೇ ಇಲ್ಲ. ಅದಕ್ಕಾಗಿಯೇ ಸಾಹಿತ್ಯ ಸಮ್ಮೇಳನವೂ ಸಾಮಾಜಿಕ ನ್ಯಾಯದ ಸಮಸ್ಯೆಗೆ ತುತ್ತಾಗಿ, ವೇದಿಕೆ ಮೇಲೆ ಒಂದು ಡಜನ್ ವಿದ್ವಾಂಸರು ಕೂರುವುದು. ಇನ್ನು ಅವರ ಆಹ್ವಾನ ಪತ್ರಿಕೆ ನೋಡಿದರೆ ಭಯವಾಗುತ್ತದೆ. ಅದರಲ್ಲಿರುವ ಹೆಸರುಗಳನ್ನು ನೋಡಿದರೆ, ಓಟರ್ ಲಿಸ್ಟು ನೋಡಿದಂತಾಗುತ್ತದೆ. ಇದು ಶಂಕರಪ್ಪನ ಕತೆಯಾದರೆ, ಕೇಂದ್ರ ಸ್ಥಾನದ ಅಧ್ಯಕ್ಷ ಮನು ಬಳಿಗಾರ್ ಎಂಬ ಸರಕಾರಿ ಆಸಾಮಿಗೆ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿದ್ದಿದ್ದರೆ, ಈ ದೇಶ ಕಂಡ ಅಪರೂಪದ ಸಂಶೋಧಕ ಶ.ಷಟ್ಟರ್ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರು.

ಸದ್ಯಕ್ಕೆ ನಮ್ಮ ಸಮಾಜ ಕ್ಷೋಭೆಯಿಂದ ಕುದಿಯುತ್ತಿದೆ. ಎಲ್ಲಿ ನೋಡಿದರೂ ಗಲಾಟೆಯ ಶಬ್ದವೇ ತುಂಬಿದೆ. ಸಂಗೀತವೂ ಗಲಭೆಯಂತೆ ಕೇಳುತ್ತಿದೆ. ಆಶ್ಚರ್ಯವೆಂದರೆ, ಇದರೊಳಕ್ಕೆ ಸಾಹಿತ್ಯ ಸಮ್ಮೇಳನವೂ ಸೇರಿಕೊಂಡಿವೆ. ಸಭೆಯಲ್ಲಿ ಪ್ರಾರ್ಥನೆ ಮಾಡುವ, ಸ್ವಾಗತ ಮಾಡುವ, ನಿರೂಪಣೆ ಮಾಡುವ, ವಂದನಾರ್ಪಣೆ ಮಾಡುವಾಗ ಹಾರತುರಾಯಿ ಶಾಲು ತಂದು ಎಸೆಯುವ ಎಲ್ಲರೂ ಗಲಭೆಗೆ ತುತ್ತಾದವರಂತೆ ಕಾಣುತ್ತಿದ್ದಾರೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ಇಂತಹ ಗಲಭೆ ಸೃಷ್ಟಿಸಬಾರದು. ಭೀಕರವಾದ ಸೌಂಡ್ ಬಾಕ್ಸು, ಮೈಕುಗಳಿಂದ ಉಂಟಾಗುವ ಶಬ್ದಗಳಿಂದ ಮುಕ್ತವಾಗಿ ಸಾಂತ್ವನದಂತಿರುವಂತೆ ನೋಡಿಕೊಳ್ಳಬೇಕು.

ಇಂತಹ ಹೊತ್ತಿನಲ್ಲಿ ಡಿವಿಎಸ್‌ನಲ್ಲಿ ನಡೆದ ಲಂಕೇಶರ ಹುಟ್ಟುಹಬ್ಬರ ಸೆಮಿನಾರನ್ನು ಶಂಕರಪ್ಪ ಬಂದು ನೋಡಬೇಕಿತ್ತು. ಅಲ್ಲಿಗೆ ಲಂಕೇಶರ ನೀಲು ಕಾವ್ಯಕ್ಕೆ ಚಿತ್ರ ಬರೆದಿದ್ದ, ಮತ್ತವರಿಗೆ ಕುತೂಹಲ ಕೆರಳಿಸಿದ್ದ ಎಂ.ಎಸ್.ಮೂರ್ತಿ ಬಂದಿದ್ದರು. ಲಂಕೇಶರ ನಾಟಕಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದ ನಟರಾಜ್ ಹೊನ್ನವಳ್ಳಿ ಆಗಮಿಸಿದ್ದರು. ಜೊತೆಗೆ ಲಂಕೇಶರ ಒಡನಾಡಿಯಾಗಿದ್ದ ಬಿ.ಚಂದ್ರೇಗೌಡರು ಆಶಯ ಭಾಷಣ ಮಾಡಿದರು. ವೇದಿಕೆಯ ಮೇಲೆ ಮೂವರು ಮಾತನಾಡುವವರಿದ್ದರೆ, ಸಭಾಂಗಣದಲ್ಲಿ ನೂರಿಪ್ಪತ್ತೈದು ವಿದ್ಯಾರ್ಥಿಗಳಿದ್ದರು.

ಈ ಹೊಸ ತಲೆಮಾರಿಗೆ ಮಾತನಾಡಿದವರೆಲ್ಲ ಸಾಧ್ಯವಾದಷ್ಟು ಲಂಕೇಶರನ್ನು ತಲುಪಿಸಿದರು. ಕಡೆಯಲ್ಲಿ ಕವಿಯತ್ರಿ ಅಕ್ಷತಾ ಹುಂಚದಕಟ್ಟೆ ಲಂಕೇಶರನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಅವರು ಓದಿದ ನೀಲು ಕವನ ವಿದ್ಯಾರ್ಥಿಗಳಿಗೆ ತುಂಬಾ ಪ್ರೇರಣೆ ನೀಡಿತು.

ಅಕ್ಷತಾ ಹುಂಚದಕಟ್ಟೆ

 

ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ್ದ ಗುಣಮುಖ ನಾಟಕದ ಕಡೆ ದೃಶ್ಯಗಳನ್ನು ಹೊಂಗಿರಣದ ಮತ್ತು ನಾದಿರ್ ಶಾ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುವ ಸಾಸ್ವೆಹಳ್ಳಿ ಸತೀಶ್ ಮತ್ತು ಕೊಟ್ರಪ್ಪ ವಾಚಿಸಿದರು. ಸಭೆಯಲ್ಲಿ ಪ್ರಸ್ತಾಪವಾದ ಸಾರಾ ಅಬೂಬಕರ್ ವಿಷಯ ಕೇಳಿ ಪ್ರೇರಣೆಗೊಂಡ ಮುಸ್ಲಿಂ ಹೆಣ್ಣುಮಗಳೊಬ್ಬಳು, “ನಾನು ಬರೀತಾಯಿದ್ದೀನಿ. ಆದ್ರೆ ಉರ್ದುವಿನಲ್ಲಿ ಬರೀತಿನಿ. ಇನ್ನುಮುಂದೆ ಕನ್ನಡದಲ್ಲಿ ಬರೀಬೇಕು” ಎಂದಳು. ಖಂಡಿತ ನೀನು ಬರೀಲೇಬೇಕು, ಸಾರಾ, ಬಾನು ಬರವಣಿಗೆ ನಿಲ್ಲುಸ್ತಾಯಿದಾರೆ. ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಬರಹಗಾರ್ತಿಯರೇ ಇಲ್ಲ, ನೀನು ಬರಿಬೇಕು ಎಂದಾಗ ಚಿಟ್ಟೆಯಾಕಾರದ ಚೂಡಿದಾರ್ ಹಾಕಿದ್ದ ಆಕೆ ಅದೆಲ್ಲೊ ಮಡಗಿದ್ದ ಬುರ್ಖಾ ಧರಿಸಿಕೊಂಡು ಹೊರಟಳು! ಆಕೆ ಏನಾದರೂ ಬರೆಯಬಹುದು. ಲಂಕೇಶ್ ಅಂತಹವರ ಪ್ರೇರಣೆಯಾಗಿದ್ದರು. ಮುಂದೂ ಕೂಡಾ ಆಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...