Homeಮುಖಪುಟಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

ಹಲವು ಬದಲಾವಣೆಗಳಿಗೆ ಕಾರಣವಾದ ಭಾರತ ಜೋಡೋದ ಎರಡು ತಿಂಗಳ ಯಾತ್ರೆ

- Advertisement -
- Advertisement -

ಭಾರತ್ ಜೋಡೊ ಯಾತ್ರೆ ಶುರು ಆದ ಮೊದಲ ದಿನಗಳಲ್ಲಿ ಸ್ನೇಹಿತರು ಫೋನ್ ಮಾಡಿ ಈ ರೀತಿ ಹೇಳುತ್ತಿದ್ದರು: “ರಾಹುಲ್ ಗಾಂಧಿಯ ಯಾತ್ರೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಾ?” ಎಂದು. ಈಗ ಎರಡು ತಿಂಗಳ ನಂತರ ಈ ರೀತಿ ಹೇಳುತ್ತಿದ್ದಾರೆ: “ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲಿ ಸೇರಿಕೊಂಡಿದ್ದೀರಾ? ಹೇಗೆ ಸೇರಿಕೊಂಡಿದ್ದೀರಾ?” ಎಂದು. ಭಾರತ್ ಜೋಡೊ ಯಾತ್ರೆಯ ಪರಿಣಾಮವನ್ನು ಈ ಬದಲಾವಣೆಯಲ್ಲಿ ಕಾಣಬಹುದಾಗಿದೆ. ಸುಮಾರು 70 ದಿನ ಹಾಗೂ 1,800 ಕಿಲೊಮೀಟರ್ ನಡಿಗೆಯ ನಂತರ ಈ ಯಾತ್ರೆಯು ತನ್ನ ಅರ್ಧ ದೂರವನ್ನು ಕ್ರಮಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಈ ಯಾತ್ರೆಯು ಕೇರಳ, ಕರ್ನಾಟಕ, ಆಂಧ್ರ ಪ್ರದೇಶ-ತೆಲಂಗಾಣದಿಂದ ಹಾದು ಈಗ ಮಹಾರಾಷ್ಟ್ರವನ್ನೂ ಮುಗಿಸಿ ಮಧ್ಯಪ್ರದೇಶದ ಬಾಗಿಲು ತಟ್ಟಲಿದೆ.

ಸ್ವಾಭಾವಿಕವಾಗಿಯೇ ಕಾಂಗ್ರೆಸ್ ಪಕ್ಷ ಆಯೋಜಿಸಿದ ಈ ಯಾತ್ರೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮುಗಿಬಿದ್ದು ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿಯೊಂದಿಗೆ 100ಕ್ಕೂ ಹೆಚ್ಚು ’ಭಾರತ ಯಾತ್ರಿ’ಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಸಾವಿರಾರು ’ಪ್ರದೇಶ ಯಾತ್ರಿಗಳು ರಾಜ್ಯದ ಆರಂಭದಿಂದ ಆ ರಾಜ್ಯದ ಗಡಿ ಕೊನೆಯಾಗುವ ತನಕ ಪಾದಯಾತ್ರೆ ಮಾಡುತ್ತಲಿದ್ದಾರೆ. ಹಾಗೂ ಪ್ರತಿನಿತ್ಯ ಸಾವಿರಾರು ಸ್ಥಳೀಯ ಕಾರ್ಯಕರ್ತರು ಯಾತ್ರೆಯ ನಡಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿರಾಜ್ಯದಲ್ಲಿ ಒಂದು ಅಥವಾ ಎರಡು ಕಡೆ ವಿಶಾಲವಾದ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಬಹಳ ಸಮಯದ ನಂತರ ಕಾಂಗ್ರೆಸ್ ಸಂಘಟನೆಗೆ ಚುನಾವಣೆ ಎದುರಿಸುವುದರ ಹೊರತಾಗಿ ಬೇರೊಂದು ಸಕಾರಾತ್ಮಕ ಕೆಲಸ ಸಿಕ್ಕಿದೆ. ಬಹಳ ಸಮಯದ ನಂತರ ಕಾಂಗ್ರೆಸ್‌ನ ಕಾರ್ಯಕತೆ/ರ್ತ ರಸ್ತೆಗೆ ಇಳಿದಿದ್ದಾಳೆ/ನೆ. ಈ ಹೊಸ ಕಾರ್ಯಕ್ರಮದಿಂದ ಒಂದು ಹೊಸ ಆತ್ಮವಿಶ್ವಾಸ ಹುಟ್ಟಿದೆ ಮತ್ತು ತನ್ನ ನಾಯಕತ್ವದಲ್ಲಿ ಭರವಸೆ ಹುಟ್ಟುಕೊಂಡಿದೆ. ಇಷ್ಟಕ್ಕೇ ಕಾಂಗ್ರೆಸ್‌ನ ಪುನರ್ಜನ್ಮದ ಮಾತುಗಳನ್ನಾಡುವುದು ಆತುರ ಮಾಡಿದಂತಾಗುವುದು, ಆದರೆ ಕೆಲವು ಮೂಲಭೂತ ಬದಲಾವಣೆಯ ಬೀಜ ಮೊಳೆಯುವ ಒಂದು ಝಲಕ್ ಕಾಣಿಸಿಕೊಂಡಿದೆ.

ಈ ಎರಡು ತಿಂಗಳಲ್ಲಿ ಅತ್ಯಂತ ದೊಡ್ಡ ಬದಲಾವಣೆ ಕಾಣಿಸಿಕೊಂಡಿದ್ದು ಯಾವುದು ಎಂದು ನೋಡಿದಾಗ, ಅದು ರಾಹುಲ್ ಗಾಂಧಿಯ ಇಮೇಜ್‌ನಲ್ಲಿ ಆದ ಬದಲಾವಣೆ ಎನ್ನಬಹುದು. ಯಾತ್ರೆ ಶುರುವಾದ ಸಮಯದಲ್ಲಿ ಹಲವಾರು ಹಿತೈಷಿಗಳು ನನಗೆ ಈ ರೀತಿ ಎಚ್ಚರಿಕೆ ನೀಡಿದ್ದರು: “ನೀನಂತೂ ರಸ್ತೆಯಲ್ಲಿ ಕಾಲ್ನಡಿಗೆ ಮಾಡುತ್ತೀಯ, ಆದರೆ ರಾಹುಲ್ ಗಾಂಧಿ ಕೆಲ ದಿನಗಳ ನಂತರ ಗಾಡಿ ಹತ್ತಿಬಿಟ್ಟಾರು, ಹೊರದೇಶಕ್ಕೆ ಹಾರಿಬಿಟ್ಟಾರು” ಎಂದು. ’ಪಪ್ಪು’ ಎಂಬ ಇಮೇಜ್ ರಾಹುಲ್ ಗಾಂಧಿಯ ವ್ಯಕ್ತಿತ್ವದ ಮೇಲೆ ಸಂಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿತ್ತು. ಆದರೆ, ಯಾವ ರಾಹುಲ್ ಗಾಂಧಿಯನ್ನು ನಾನು ಕಳೆದ 15 ವರ್ಷಗಳಿಂದ ನೋಡಿದ್ದೇನೋ, ಅವರು ಒಬ್ಬ ಶಾಲೀನ, ಗಂಭೀರ, ಸ್ಪಷ್ಟತೆಯುಳ್ಳ ಹಾಗೂ ಜಿಜ್ಞಾಸೆಯುಳ್ಳ ವ್ಯಕ್ತಿಯಾಗಿದ್ದರು. ಎಲ್ಲೂ ಕಪಟತೆ, ವಂಚನೆಯಿಲ್ಲದ ಮತ್ತು ಯಾವುದೇ ಕೃತಕತೆಯಿಲ್ಲದ ವ್ಯಕ್ತಿ. ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ, ಸಮಾಜದ ಕೊನೆಯಲ್ಲಿರುವ ವ್ಯಕ್ತಿಯ ಬಗ್ಗೆ ಕಾಳಜಿಯುಳ್ಳ ಹಾಗೂ ಅವಕಾಶವಾದಿ ರಾಜಕೀಯದಿಂದ ದೂರವಿರುವ ವ್ಯಕ್ತಿ. ನಾನು ಕಾಂಗ್ರೆಸ್‌ನ ಕಟು ಟೀಕೆ ಮಾಡಿದಾಗ ಹಾಗೂ ಅವರ ಸರಕಾರದ ವಿರುದ್ಧ ಬೀದಿಗಿಳಿದು ವಿರೋಧ ಮಾಡಿದಾಗಲೂ ರಾಹುಲ್ ಗಾಂಧಿಯ ವ್ಯಕ್ತಿತ್ವದ ಬಗ್ಗೆ ನನ್ನ ಅಭಿಪ್ರಾಯದಲ್ಲಿ ಬದಲಾವಣೆ ಆಗಿದ್ದಿಲ್ಲ.

ಆದರೆ ರಾಹುಲ್ ಗಾಂಧಿಯನ್ನು ಪಪ್ಪು ಮಾಡುವ ಮಾಧ್ಯಮಗಳ ಹಾಗೂ ರಾಜಕೀಯ ಅಭಿಯಾನವು ಅವರ ಬೇರೆಯದೇ ಒಂದು ಇಮೇಜನ್ನು ಸಾಮಾನ್ಯ ಜನರ ಮುಂದಿಟ್ಟಿತ್ತು. ರಾಜಕೀಯ ಕುಟುಂಬದ ಎರಡನೆಯ ಅಥವಾ ಮೂರನೆಯ ತಲೆಮಾರಿನ ನಾಯಕರ ತರಹವೇ ರಾಹುಲ್ ಗಾಂಧಿ ಕೂಡ ಒಬ್ಬ ಗಂಭೀರವಲ್ಲದ, ದೇಶದೊಂದಿಗೆ ಸಂಬಂಧವಿಟ್ಟುಕೊಳ್ಳದ, ತಿಳಿವಳಿಕೆಯಿಲ್ಲದ ಹಾಗೂ ದುರಹಂಕಾರಿ ವ್ಯಕ್ತಿ ಎಂದು ಅವರ ಬಗ್ಗೆ ತಿಳಿಯದಿರುವ ಒಬ್ಬ ಸಾಧಾರಣ ವ್ಯಕ್ತಿಯು ನಂಬಿಕೆ ಬೆಳೆಸಿಕೊಳ್ಳುವಂತೆ ಮಾಡಿತು. ಈ ದೇಶದ ಧೂಳು ಮಣ್ಣಿನಲ್ಲಿ ಎರಡು ದಿನಾನೂ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ತಿಳಿದುಕೊಂಡಿದ್ದರು. ಆದರೆ ಈ ಎರಡು ತಿಂಗಳಲ್ಲಿ ದೇಶದ ಜನರು ಅದೇ ರಾಹುಲ್ ಗಾಂಧಿಯನ್ನು ದೇಶದ ಉಬ್ಬುತಗ್ಗಿನ ರಸ್ತೆಗಳಲ್ಲಿ ನಡೆಯುವುದನ್ನು ನೋಡುತ್ತಿದ್ದಾರೆ, ಒಂದು ’ರಾಜಕೀಯ ತಪಸ್ಸಿ’ನ ತನ್ನ ಸಂಕಲ್ಪವನ್ನು ಪೂರ್ಣಗೊಳಿಸುವುದನ್ನು ನೋಡುತ್ತಿದ್ದಾರೆ. ಒಂದೆಡೆ, ಪ್ರಧಾನಮಂತ್ರಿಗಳು ಒಂದು ಫ್ಲೈಓವರ್ ಮೇಲೆ 20 ನಿಮಿಷ ಸಿಕ್ಕಾಕಿಕೊಂಡಾಗ, ತಮ್ಮದೇ ಪಕ್ಷದ ಬೆಂಬಲಿಗರ ಸಲುವಾಗಿಯೂ ತಮ್ಮ ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸುವುದಿಲ್ಲ, ಇನ್ನೊಂದೆಡೆ ರಾಹುಲ್ ಗಾಂಧಿ ಪ್ರತಿಯೊಬ್ಬ ಮಗು, ಮುದುಕ ಮತ್ತು ಯುವಜನರನ್ನು ಅಪ್ಪಿಕೊಳ್ಳುತ್ತಿದ್ದಾರೆ; ಪರಿಚಯವಿದ್ದವರು, ಇಲ್ಲದವರ ಕೈಹಿಡಿದು ನಡೆಯುತ್ತಿದ್ದಾರೆ, ಓಡುತ್ತಿದ್ದಾರೆ, ಆಡುತ್ತಿದ್ದಾರೆ. ಇದೇ ರಾಹುಲ್ ಗಾಂಧಿ ಪ್ರತಿ ಸಂಜೆ ದೇಶವನ್ನು ಉದ್ದೇಶಿಸಿ ಬೆಲೆಏರಿಕೆ, ನಿರುದ್ಯೋಗ ಹಾಗೂ ಶ್ರೀಮಂತ ಮತ್ತು ಬಡವರ ನಡುವೆ ಇರುವ ಕಂದರದ ಬಗ್ಗೆ ದೇಶವನ್ನು ಎಚ್ಚರಿಸುತ್ತಿದ್ದಾರೆ; ಗೌರವ ಮತ್ತು ಸಮತೋಲನ ಕಳೆದುಕೊಳ್ಳದೇ ದ್ವೇಷದ ರಾಜಕೀಯದ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶವು ಒಬ್ಬ ಹೊಸ ರಾಹುಲ್ ಗಾಂಧಿಯ ದರ್ಶನ ಮಾಡುತ್ತಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಹೊರತಾಗಿ ಈ ಯಾತ್ರೆಯು ದೇಶದಲ್ಲಿಯ ಜನಾಂದೋಲನಗಳು ಹಾಗೂ ಜನರ ಸಂಘಟನೆಗಳ ನಡುವೆ ಒಂದು ಹೊಸ ಶಕ್ತಿಯ ಸಂಚಲನವಾಗುವಂತೆ ಹಾಗೂ ಅದರೊಂದಿಗೆ ಅವುಗಳ ನಡುವೆ ಸಮನ್ವಯ ಆಗುವಂತೆ ಮಾಡುತ್ತಿದೆ. ಈ ಯಾತ್ರೆಗೆ ಅಹ್ವಾನಿಸುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಹಲವಾರು ರಾಜಕೀಯ ಪಕ್ಷ, ಜನಾಂದೋಲನಗಳು, ಜನರ ಸಂಘಟನೆಗಳಿಗೆ ಈ ಯಾತ್ರೆಯೊಂದಿಗೆ ಸೇರಿಕೊಳ್ಳಲು ಆಹ್ವಾನಿಸಿತ್ತು. ಈ ಆಹ್ವಾನವನ್ನು ಸ್ವೀಕರಿಸಿ ದೇಶದ ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಜನರ ಸಂಘಟನೆಗಳು ಆರಂಭದಿಂದಲೇ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದರು. ಆದರೆ ಅನೇಕರ ಮನಸ್ಸಿನಲ್ಲಿ ಹಲವಾರು ಅನುಮಾನಗಳಿದ್ದವು, ಹಳೆಯ ತಕರಾರುಗಳಿದ್ದವು. ಕಳೆದ ಎರಡು ತಿಂಗಳಲ್ಲಿ ಈ ಅವಿಶ್ವಾಸ ನಿಧಾನವಾಗಿ ಕಾಣೆಯಾಗುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸೇರಿ ನಡೆಯುತ್ತಿರುವ ಜನಾಂದೋಲನಗಳ ದಂಡು ಜೊತೆಜೊತೆಗೆ ಹೆಜ್ಜೆಹಾಕುತ್ತಿವೆ. ಪ್ರತಿದಿನ ಸ್ಥಳೀಯ ಸಂಘಟನೆಗಳು ತಳಮಟ್ಟದ ವಿಷಯಗಳನ್ನಿಟ್ಟುಕೊಂಡು ರಾಹುಲ್ ಗಾಂಧಿಯೊಂದಿಗೆ ಭೇಟಿ ಮಾಡುತ್ತಿವೆ. ಒಂದು ದಿನ ಆತ್ಮಹತ್ಯೆಗೆ ಬಲಿಯಾದ ರೈತರ ಕುಟುಂಬ ಭೇಟಿಯಾದರೆ ಇನ್ನೊಂದು ದಿನ ಬೀಡಿ ಕಾರ್ಮಿಕರು ಭೇಟಿ ಮಾಡಿದ್ದಾರೆ. ಯಾವುದೋ ಒಂದು ದಿನ ದೇವದಾಸಿ ಪದ್ಧತಿಗೆ ಬಲಿಯಾದ ಮಹಿಳೆಯರು ಭೇಟಿಯಾದರೆ ಇನ್ನೊಂದು ದಿನ ಇಂದಿಗೂ ಅಂಚಿನಲ್ಲಿರುವ ಆದಿವಾಸಿ ಹಾಗೂ ಶೋಷಿತ ಸಮಾಜದವರು ಭೇಟಿಯಾಗಿದ್ದಾರೆ. ಒಂದು ದಿನ ಸಾರಾಯಿ ವಿರೋಧಿ ಅಂದೋಲನದ ಪ್ರತಿನಿಧಿಗಳು ಹಾಗೂ ಕೆಲವು ಸಲ ಪರ್ಯಾಯ ಶಿಕ್ಷಣ, ಆರೋಗ್ಯ ಹಾಗೂ ಕೃಷಿಯ ಪ್ರಯೋಗಗಳನ್ನು ಮಾಡುತ್ತಿರುವ ಸಂಘಟನೆಗಳು. ಈ ಯಾತ್ರೆ ಕನಸುಗಳನ್ನು ಒಂದುಗೂಡಿಸುತ್ತಿದೆ, ನೋವಿನಿಂದಲೇ ಪ್ರಾರಂಭವಾಗಿ ಹಲವು ಸಂಬಂಧಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಈ ನದಿಯಲ್ಲಿ ಹಲವಾರು ಧಾರೆಗಳು ಬಂದು ಸೇರಿಕೊಂಡಿವೆ, ಸಣ್ಣಸಣ್ಣ ಯಾತ್ರೆಗಳು ಸೇರಿಕೊಳ್ಳುತ್ತಿವೆ, ಹೆಸರಾಂತ ನಾಗರಿಕರು ಸೇರಿಕೊಳ್ಳುತ್ತಿದ್ದಾರೆ. ಒಂದು ಸಮಯದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಕಾಂಗ್ರೆಸ್‌ಅನ್ನು ವಿರೋಧ ಮಾಡುತ್ತಿದ್ದ ಪ್ರಶಾಂತ್ ಭೂಷಣ್ ಮತ್ತು ಮಾಜಿ ನೌಕಾಸೇನೆ ಪ್ರಮುಖ ಅಡ್ಮಿರಲ್ ರಾಮದಾಸ್ ಅವರುಗಳು ರಾಹುಲ್ ಗಾಂಧಿಯೊಂದಿಗೆ ಯಾತ್ರೆ ಮಾಡುತ್ತಿದ್ದಾರೆ; ಸಿನೆಮಾ ಜಗತ್ತಿನ ಪೂಜಾ ಭಟ್ ಮತ್ತು ಸುಶಾಂತ್ ಸಿಂಗ್ ಕೂಡ ನಡೆಯುತ್ತಿದ್ದಾರೆ. ಕಾಂಗ್ರೆಸ್‌ನ ತುರ್ತುಪರಿಸ್ಥಿತಿಯ ಸಮಯದಲ್ಲಿ 19 ತಿಂಗಳು ಸೆರೆವಾಸ ಅನುಭವಿಸಿದ ಸೇನಾನಿಯೂ ಜೊತೆಗೆ ನಡೆಯುತ್ತಿದ್ದಾರೆ ಹಾಗೂ ಯಾವುದೇ ಪಕ್ಷ ಅಥವಾ ಸಂಘಟನೆಯೊಂದಿಗೆ ಸಂಬಂಧವಿಟ್ಟುಕೊಳ್ಳದ ಯುವಕ ಯುವತಿಯರೂ ನಡೆಯುತ್ತಿದ್ದಾರೆ. ನಿಧಾನವಾಗಿ ಸಣ್ಣ ಹಳ್ಳವೊಂದು ಈಗ ಒಂದು ನದಿಯಾಗಿ ಬದಲಾಗುತ್ತಿದೆ.

ಹಾಗಾದರೆ, ದೇಶದ ಮೂಡ್ ಬದಲಾಗಿದೆಯೇ? ದ್ವೇಷದ ರಾಜಕೀಯ ನಿಲ್ಲುವುದೇ? ಸದ್ಯದಲ್ಲೇ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದೇ? ಸದ್ಯಕ್ಕೆ ಇಂತಹ ಯಾವುದೇ ದೂರಗಾಮಿ ಅಥವಾ ತಾತ್ಕಾಲಿಕ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಈಗ ಇಷ್ಟನ್ನು ಹೇಳಬಹುದು: ದೇಶದಲ್ಲಿ ಯಾವ ಅಂಧಕಾರದ, ನಿರಾಶೆಯ ಹಾಗೂ ಶೋಕದ ವಾತಾವರಣವಿತ್ತೋ, ಒಂದು ಪರ್ಯಾಯವಿಲ್ಲದ ಘಟ್ಟವಿತ್ತೋ, ಮೌನದ, ಒಂಟಿತನದ ಹಾಗೂ ಭಯದ ಗೋಡೆಯಿತ್ತೋ, ಅದರಲ್ಲಿ ಒಂದು ಬಿರುಕು ಮೂಡಿದೆ. ಅಂಧಕಾರದಲ್ಲಿ ಬೆಳಕಿನ ಕಿರಣವೊಂದು ಕಾಣಿಸಿಕೊಳ್ಳುತ್ತಿದೆ. ಭೋಪಾಲ್‌ದಲ್ಲಿ ಈ ಯಾತ್ರೆಯ ಬಗ್ಗೆ ಆಯೋಜಿಸಿದ್ದ ಒಂದು ಗೋಷ್ಠಿಯಲ್ಲಿ ಎಡಪಂಥೀಯ ಚಿಂತಕ ಹಾಗೂ ಕಾರ್ಯಕರ್ತ ಬಾದಲ್ ಸರೋಜ್ ಹೇಳಿದ್ದು ಇದು: “ಭಾರತ ಜೋಡೊ ಯಾತ್ರೆಯು ನಮ್ಮ ಕಾಲಘಟ್ಟದ ಒಂದು ಮಹತ್ವಪೂರ್ಣ ಘಟನೆಯಾಗಿದೆ” ಎಂದು.

ನನಗೆ ಯಾರಾದರೂ ಈ ಯಾತ್ರೆಯಿಂದ ಏನನ್ನು ಸಾಧಿಸಲಾಗಿದೆ ಎಂದು ಕೇಳಿದಾಗ ನಾನು ರಘುವೀರ್ ಸಹಾಯ್ ಅವರ ಪ್ರಸಿದ್ಧ ಕವಿತೆ ’ಆತ್ಮಹತ್ಯೆಯ ವಿರುದ್ಧ’ದ ಈ ಸಾಲುಗಳನ್ನು ಹೇಳುತ್ತೇನೆ:

“ಏನೋ ಆಗುವುದು, ಏನೋ ಆಗುವುದು ಒಂದು ವೇಳೆ ನಾನು ಮಾತನಾಡಿದರೆ
ಮುರಿದು ಬೀಳಲಿಲ್ಲ ಮುರಿದು ಬೀಳಲಿಲ್ಲ ಅಧಿಕಾರದ ಭ್ರಮೆ
ನನ್ನೊಳಗಿನ ಒಬ್ಬ ಹೇಡಿ ಮುರಿದು ಬೀಳುವನು”

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...