Homeಸಾಹಿತ್ಯ-ಸಂಸ್ಕೃತಿಕವನಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

ಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

- Advertisement -
- Advertisement -

ದೇವರಿಗೊಂದು ಪತ್ರ

ಓ ಪ್ರಭುವೆ
ನೀ ನನ್ನ ಅಸ್ಪೃಶ್ಯನನ್ನಾಗಿಸಿದ್ದಕ್ಕೆ
ಕೃತಜ್ಞತೆಗಳು
ಜಗದ ದುಃಖ ಅವಮಾನಗಳ
ಜೊತೆಯಾಗಿಸಿದ್ದಕ್ಕೆ.

ಪಕ್ಕದ ಅಮೆರಿಕಾದೊಳು
ಕರಿಯರ ಕೊಲೆಯಾದಾಗಲೆಲ್ಲ
ಸೋದರರ ಸಾವಿಗಾಗಿ ಅಳುವ
ರುಡಾಲಿಗಳು ನಾವೆ.
ಅನುಮಾನದ ತುಪಾಕಿಗೆ
ಬಲಿಯಾದ ಮೆಕ್ಲಿನ್, ಫ್ಲಾಯ್ಡ್
ಲಾಕಪ್‌ನಲ್ಲಿ ಕೊಲೆಯಾದ ಸ್ಟೀವ್
ಗಲ್ಲಿಗೇರಿದ ಬೆಂಜಮಿನ್
ಇವರೆಲ್ಲ ನನ್ನ ರಕ್ತ ಸಂಬಂಧಿಗಳೆ.

ಪ್ರತಿದಿನ ಬಜಾರಿನೊಳು
ಬಿಕರಿಯಾಗುತ್ತಿರುವ
ಸೂಳೆಯರು ನನ್ನ ಸೋದರಿಯರೆ.

ಓ ಪ್ರಭುವೆ
ಇಲ್ಲಿ! ನಾವು ಎಷ್ಟೊಂದು ಧನ್ಯರು
ಈ ಸಂತೆಯೊಳು
ನಮ್ಮ ಬೆವರಿಗೆ, ಕಣ್ಣೀರಿಗೆ
ಎಷ್ಟೊಂದು ಬೇಡಿಕೆ.
ಸಾವಿನ ಸರತಿಯಲ್ಲಿ
ನಾವು ಕಾಯಬೇಕಿಲ್ಲ
ನಮ್ಮ ಸತ್ತ ಶವವೂಳಲು
ಈ ಭೂಮಿಯ ನೀ ಛಿದ್ರಮಾಡಲಿಲ್ಲ
ಅದಕ್ಕೆ ನಾವು ನಿನಗೆ ಮತ್ತಷ್ಟು ಕೃತಜ್ಞರು.

 

’ಶವ ಯಾತ್ರೆ’

ಶವಯಾತ್ರೆಗೆ ಸಜ್ಜಾಗಿದ್ದ ತಮಟೆಗಳು
ಕುಣಿದು ಕುಪ್ಪಳಿಸುತ್ತಿರುವಂತೆ
ಮಧ್ಯರಾತ್ರಿಯೊಂದು ಕನಸ್ಸು ಬಿತ್ತು.

ತಮಟೆಗಳ ಸದ್ದಡಗಿದ ಮೇಲೆ
ಶವ ಕೇಳಿತು.
ದಯಮಾಡಿ ಭೇದವಿಲ್ಲದ ಜಾಗದಲಿ
ನನಗೊಂದು ಗೋರಿಮಾಡಿ
ಈ ಶವಕ್ಕೊಂದು ಜಾತಿಯಿಲ್ಲದ ಮಸಣ ಹುಡುಕಿ ಎಂದು.

ಕೆಲವರು ನಗುತ್ತಿದ್ದರೆ
ಕೆಲವರು ಮೌನ
ಶವ ಮತ್ತೆ ಕೇಳಿತು.
ಎಲ್ಲಿ ಬಂದೂಕಿನ ಗುಂಡು ಸಿಡಿಯುವುದಿಲ್ಲವೋ
ಹೆಣ್ಣಿನ ಚೀರು ಧ್ವನಿ ಕೇಳುವುದಿಲ್ಲವೋ
ಮುಳ್ಳು ತಂತಿಯ ಗಡಿಗಳಿರುವುದಿಲ್ಲವೊ
ಮನುಷ್ಯರೆಲ್ಲ ಮನುಷ್ಯರೇ
ಆಗಿರುವ ಜಾಗದಲಿ ನನಗೊಂದು ಗೋರಿಮಾಡಿ.

ತಮಟೆಗಳ ಕುಣಿತ ಹೆಚ್ಚಾಯಿತು,
ಶವ ಕೂಗಿಕೊಳ್ಳುತ್ತಲೇ ಇತ್ತು.
ಕಣ್ಣೀರು ಜಾರದ, ಮುಖಬಾಡಿ, ತುಟಿಯೊಣಗಿ
ರಕ್ತದ ಕಲೆ ಇರದ ಜಾಗ ಹುಡುಕಿ.

ಗದ್ದಲ ಮತ್ತಷ್ಟು ಜೋರಾಯಿತು.
ಎಲ್ಲರೂ ಶವಕ್ಕೆ ಸಿಂಗರಿಸಿ
ಹೂತುಹಾಕಲು ಮುಂದಾದರು.

ಕೊನೆಯದಾಗಿ..!
ಅಂತಿಮ ಯಾತ್ರೆಗೆ ಬಂದಿದ್ದ
ಪಾದ್ರಿಯೊಬ್ಬರು
ಭೂಮಿಯ ಮೇಲಿನ ಮನುಷ್ಯರೆಲ್ಲರು
ದೇವರ ಮಕ್ಕಳು
ನಾವೆಲ್ಲರೂ ಸಮಾನರು ಎಂದು
ಶವದ ಎದುರು ಪ್ರಾರ್ಥಿಸಿದರು.


ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...