Homeಕವನಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

ಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

- Advertisement -
- Advertisement -

ದೇವರಿಗೊಂದು ಪತ್ರ

ಓ ಪ್ರಭುವೆ
ನೀ ನನ್ನ ಅಸ್ಪೃಶ್ಯನನ್ನಾಗಿಸಿದ್ದಕ್ಕೆ
ಕೃತಜ್ಞತೆಗಳು
ಜಗದ ದುಃಖ ಅವಮಾನಗಳ
ಜೊತೆಯಾಗಿಸಿದ್ದಕ್ಕೆ.

ಪಕ್ಕದ ಅಮೆರಿಕಾದೊಳು
ಕರಿಯರ ಕೊಲೆಯಾದಾಗಲೆಲ್ಲ
ಸೋದರರ ಸಾವಿಗಾಗಿ ಅಳುವ
ರುಡಾಲಿಗಳು ನಾವೆ.
ಅನುಮಾನದ ತುಪಾಕಿಗೆ
ಬಲಿಯಾದ ಮೆಕ್ಲಿನ್, ಫ್ಲಾಯ್ಡ್
ಲಾಕಪ್‌ನಲ್ಲಿ ಕೊಲೆಯಾದ ಸ್ಟೀವ್
ಗಲ್ಲಿಗೇರಿದ ಬೆಂಜಮಿನ್
ಇವರೆಲ್ಲ ನನ್ನ ರಕ್ತ ಸಂಬಂಧಿಗಳೆ.

ಪ್ರತಿದಿನ ಬಜಾರಿನೊಳು
ಬಿಕರಿಯಾಗುತ್ತಿರುವ
ಸೂಳೆಯರು ನನ್ನ ಸೋದರಿಯರೆ.

ಓ ಪ್ರಭುವೆ
ಇಲ್ಲಿ! ನಾವು ಎಷ್ಟೊಂದು ಧನ್ಯರು
ಈ ಸಂತೆಯೊಳು
ನಮ್ಮ ಬೆವರಿಗೆ, ಕಣ್ಣೀರಿಗೆ
ಎಷ್ಟೊಂದು ಬೇಡಿಕೆ.
ಸಾವಿನ ಸರತಿಯಲ್ಲಿ
ನಾವು ಕಾಯಬೇಕಿಲ್ಲ
ನಮ್ಮ ಸತ್ತ ಶವವೂಳಲು
ಈ ಭೂಮಿಯ ನೀ ಛಿದ್ರಮಾಡಲಿಲ್ಲ
ಅದಕ್ಕೆ ನಾವು ನಿನಗೆ ಮತ್ತಷ್ಟು ಕೃತಜ್ಞರು.

 

’ಶವ ಯಾತ್ರೆ’

ಶವಯಾತ್ರೆಗೆ ಸಜ್ಜಾಗಿದ್ದ ತಮಟೆಗಳು
ಕುಣಿದು ಕುಪ್ಪಳಿಸುತ್ತಿರುವಂತೆ
ಮಧ್ಯರಾತ್ರಿಯೊಂದು ಕನಸ್ಸು ಬಿತ್ತು.

ತಮಟೆಗಳ ಸದ್ದಡಗಿದ ಮೇಲೆ
ಶವ ಕೇಳಿತು.
ದಯಮಾಡಿ ಭೇದವಿಲ್ಲದ ಜಾಗದಲಿ
ನನಗೊಂದು ಗೋರಿಮಾಡಿ
ಈ ಶವಕ್ಕೊಂದು ಜಾತಿಯಿಲ್ಲದ ಮಸಣ ಹುಡುಕಿ ಎಂದು.

ಕೆಲವರು ನಗುತ್ತಿದ್ದರೆ
ಕೆಲವರು ಮೌನ
ಶವ ಮತ್ತೆ ಕೇಳಿತು.
ಎಲ್ಲಿ ಬಂದೂಕಿನ ಗುಂಡು ಸಿಡಿಯುವುದಿಲ್ಲವೋ
ಹೆಣ್ಣಿನ ಚೀರು ಧ್ವನಿ ಕೇಳುವುದಿಲ್ಲವೋ
ಮುಳ್ಳು ತಂತಿಯ ಗಡಿಗಳಿರುವುದಿಲ್ಲವೊ
ಮನುಷ್ಯರೆಲ್ಲ ಮನುಷ್ಯರೇ
ಆಗಿರುವ ಜಾಗದಲಿ ನನಗೊಂದು ಗೋರಿಮಾಡಿ.

ತಮಟೆಗಳ ಕುಣಿತ ಹೆಚ್ಚಾಯಿತು,
ಶವ ಕೂಗಿಕೊಳ್ಳುತ್ತಲೇ ಇತ್ತು.
ಕಣ್ಣೀರು ಜಾರದ, ಮುಖಬಾಡಿ, ತುಟಿಯೊಣಗಿ
ರಕ್ತದ ಕಲೆ ಇರದ ಜಾಗ ಹುಡುಕಿ.

ಗದ್ದಲ ಮತ್ತಷ್ಟು ಜೋರಾಯಿತು.
ಎಲ್ಲರೂ ಶವಕ್ಕೆ ಸಿಂಗರಿಸಿ
ಹೂತುಹಾಕಲು ಮುಂದಾದರು.

ಕೊನೆಯದಾಗಿ..!
ಅಂತಿಮ ಯಾತ್ರೆಗೆ ಬಂದಿದ್ದ
ಪಾದ್ರಿಯೊಬ್ಬರು
ಭೂಮಿಯ ಮೇಲಿನ ಮನುಷ್ಯರೆಲ್ಲರು
ದೇವರ ಮಕ್ಕಳು
ನಾವೆಲ್ಲರೂ ಸಮಾನರು ಎಂದು
ಶವದ ಎದುರು ಪ್ರಾರ್ಥಿಸಿದರು.


ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ.​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...