Homeಮುಖಪುಟಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

ಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

- Advertisement -
- Advertisement -

ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಘಟನೆಯನ್ನು ‘ತಾಲೀಬಾನೀಕರಣ’ದ ಭಾಗವಾಗಿ ಚರ್ಚಿಸುತ್ತಿರುವ ಮಾಧ್ಯಮಗಳು, ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಹೆಸರನ್ನು ಪ್ರಕರಣಕ್ಕೆ ಥಳುಕುಹಾಕುವ ಪ್ರಯತ್ನವನ್ನು ಮಾಡುತ್ತಿವೆ. ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶೇಷ ವರದಿ ಮಾಡಿದೆ.

“ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್‌ನ ಭೀಕರ ಹತ್ಯೆಯನ್ನು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಸಕ್ರಿಯಗೊಳಿಸಿದ್ದಾರೆ” ಎಂದು ನೀವು ನಂಬಬೇಕೆಂದು ಟೈಮ್ಸ್‌ನೌ ಪತ್ರಕರ್ತ ರಾಹುಲ್ ಶಿವಶಂಕರ್ ಹೇಳಿಬಿಟ್ಟರು.

“ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದನ್ನು ಜುಬೈರ್ ಬೆಳಕಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅದಕ್ಕಾಗಿ ದಂಡ ತೆರಬೇಕಾಯಿತು. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ ರಾಹುಲ್‌. ಕಳೆದ ರಾತ್ರಿ ಟೈಮ್ಸ್ ನೌ ಪ್ರೈಮ್‌ಟೈಮ್ ಚರ್ಚೆಯು ಹೀಗೆ ನಡೆಯುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಬ್ಬರು ಮತಾಂಧರು ಕನ್ಹಯ್ಯಾ ಲಾಲ್‌ ಅವರ ಶಿರಚ್ಛೇದನ ಮಾಡಿದ ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಇಬ್ಬರು ವ್ಯಕ್ತಿಗಳು (ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರಿ) ಘಟನೆಯನ್ನು ಚಿತ್ರೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದರು.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರಿಂದ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರಿಂದ ಲಾಲ್ ಅವರನ್ನು ಟಾರ್ಗೆಟ್ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಟೈಮ್ಸ್ ನೌನಲ್ಲಿ ಪತ್ರಕರ್ತ ಶಿವಶಂಕರ್ ಇದನ್ನು “ಐಸಿಸ್ ಶೈಲಿಯ ಶಿರಚ್ಛೇದನೆ” ಎಂದು ಕರೆಯುತ್ತಲೇ ಜುಬೇರ್‌ ಹೆಸರನ್ನು ಎಳೆದುತಂದರು.

ಪ್ಯಾನೆಲಿಸ್ಟ್ ತೆಹ್ಸೀನ್ ಪೂನಾವಾಲಾ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ್‌‌, “ಈ ಐಸಿಸ್ ಮಾದರಿಯ ಪ್ರತೀಕಾರಕ್ಕೆ ಸಕ್ರಿಯರು ಇದ್ದಾರೆ. ನೀವು ಇಂದು ರಾತ್ರಿ ಜುಬೈರ್ ಹೆಸರು ತೆಗೆದುಕೊಳ್ಳುತ್ತೀರಾ?… ಇಲ್ಲ, ನೀವು ಅವರ ಹೆಸರನ್ನು ತೆಗೆದುಕೊಳ್ಳಬೇಕು..” – ಹೀಗೆ ಮಾತನಾಡುತ್ತಾರೆ.

ನೂಪುರ್‌‌ ಶರ್ಮಾ ಪ್ರವಾದಿ ವಿರುದ್ಧ ಕಾಮೆಂಟ್ ಮಾಡಿದ ವೀಡಿಯೊ ಕ್ಲಿಪ್ ಜುಬೇರ್‌ ಹಂಚಿಕೊಂಡಿದ್ದನ್ನು ಶಿವಶಂಕರ್‌ ಪ್ರಸ್ತಾಪಿಸುತ್ತಾರೆ. ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ಟೈಮ್ಸ್ ನೌನಲ್ಲಿ ಹೇಳಿದರು. ಒಮ್ಮೆ ಹಿನ್ನಡೆ ಪ್ರಾರಂಭವಾದಾಗ, ಚಾನಲ್ ತಕ್ಷಣವೇ ಈ ವಿಷಯದಿಂದ ಅಂತರ ಕಾಯ್ದುಕೊಂಡಿದೆ. “ನಮ್ಮ ಚರ್ಚೆಗಳಲ್ಲಿ ಭಾಗವಹಿಸುವವರು ಸಂಯಮವನ್ನು ಕಾಪಾಡಿಕೊಳ್ಳಲು, ಸಹ ಪ್ಯಾನೆಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆಯಲ್ಲಿ ಮಾತನಾಡದಂತೆ ನಾವು ಒತ್ತಾಯಿಸುತ್ತೇವೆ” ಎಂದು ಟೈಮ್ಸ್ ನೌ ತಿಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಕಳೆದ ರಾತ್ರಿಯ ಚರ್ಚೆಯಲ್ಲಿ ಶಿವಶಂಕರ್, ಜುಬೈರ್ ಅವರ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. “ನೀವು ಪ್ರವಾದಿಯನ್ನು ನಿಂದಿಸಿದಾಗ, ನೀವು ದಂಡ ಕಟ್ಟಬೇಕಾಗುತ್ತದೆ. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ.

ಇಂಡಿಯಾ ಟುಡೇಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಉದಯ್‌ಪುರ ಹತ್ಯೆಯ ಕುರಿತು ಚರ್ಚೆ ನಡೆಸಿದಾಗ ಅಲ್ಲಿಯೂ ಜುಬೇರ್‌ ಹೆಸರು ಪ್ರಸ್ತಾಪವಾಗಿದೆ. “ರಾಜಸ್ಥಾನದಲ್ಲಿ ಐಸಿಸ್ ಶೈಲಿಯ ಹತ್ಯೆ” ಎಂಬ ಚರ್ಚೆ ನಡೆಯುತ್ತಿದ್ದಾಗ, “ಭಾರತವು ಕೋಮು ಹಿಂಸಾಚಾರವನ್ನು ಹೇಗೆ ನಿಲ್ಲಿಸಬಹುದು” ಎಂದು ಸರ್ದೇಸಾಯಿಯವರು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರನ್ನು ಕೇಳುತ್ತಾರೆ. ಅದಕ್ಕೆ ಸಿಂಗ್, “ನೀವು ನೂಪುರ್ ಶರ್ಮಾ ಅಥವಾ ಬೇರೆ ಯಾರನ್ನಾದರೂ ಖಂಡಿಸಿದರೆ, ಜುಬೈರ್ ಅವರನ್ನೂ ಸಹ ಖಂಡಿಸಬೇಕು” ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, “ಉದಯಪುರ್ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು” ಎಂದು ಸ್ಪಷ್ಟಪಡಿಸುತ್ತಾರೆ.

ತಾಲೀಬಾನೀನಿಕರಣದ ಚರ್ಚೆ

ಈ ಭೀಕರ ಘಟನೆಯನ್ನು ‘ತಾಲೀಬಾನೀಕರಣ’ ಎಂದು ಹೆಸರಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದೆ.

ಆಜ್ ತಕ್ ಮಾಧ್ಯಮದಲ್ಲಿ ಚಿತ್ರಾ ತ್ರಿಪಾಠಿ, “ರಾಜಸ್ಥಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಏಕೆ ಸಂಭವಿಸಿದೆ?” ಅಥವಾ “ಇದು ಕ್ರೌರ್ಯದ ಕಥೆ, ತಾಲಿಬಾನಿ ಚಟುವಟಿಕೆ” ಎಂದು ತಿಳಿಸಿದ್ದಾರೆ.

ಚಿತ್ರಾ ತ್ರಿಪಾಠಿಯವರು, “ತಾಲಿಬಾನಿ” ಪದವನ್ನು ಬಳಸುವುದನ್ನು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಆಕ್ಷೇಪಿಸಿದಾಗ ಅವರು, “ನಿಮಗೆ ಅವಮಾನವಿಲ್ಲವೇ? ಮೂರು ಮಕ್ಕಳ ತಂದೆಯನ್ನು ಹಗಲಿನಲ್ಲಿ ನಿರ್ದಯವಾಗಿ ಕೊಲ್ಲಲಾಯಿತು. ಇಲ್ಲಿ ನೀವು ಆಂಕರ್‌ ಬಾಯಿಂದ ಯಾವ ರೀತಿಯ ಪದಗಳು ಬರಬೇಕು ಎಂದು ಹೇಳುತ್ತಿದ್ದೀರಿ” ಎನ್ನುತ್ತಾರೆ.

ನ್ಯೂಸ್ 18 ಇಂಡಿಯಾದಲ್ಲಿ, ಅಮಿಶ್ ದೇವಗನ್ ಅವರ ಕಾರ್ಯಕ್ರಮದಲ್ಲೂ ತಾಲೀಬಾನೀಕರಣ ಚರ್ಚೆಯ ವಿಷಯವಾಗಿತ್ತು. “ಉದಯಪುರದಲ್ಲಿ ತಾಲಿಬಾನ್ ಮಾದರಿಯ ಕೊಲೆ ನಡೆದಿದೆ” ಎನ್ನುತ್ತಾರೆ ದೇವಗನ್‌.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, “ಕಳೆದ ಕೆಲವು ತಿಂಗಳುಗಳಲ್ಲಿ, ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಅಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳನ್ನು ಮಾಡಲಾಗಿದೆ. ಅದು ರಾಮ ನವಮಿ ಮೆರವಣಿಗೆಯಾಗಲಿ ಅಥವಾ ಹನುಮಾನ್ ಉತ್ಸವ ಮೆರವಣಿಗೆಯಾಗಲಿ, ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದ್ದಾರೆ” ಎಂದು ದೂರುತ್ತಾರೆ.

ಝೀ ನ್ಯೂಸ್‌ನಲ್ಲಿ ಆಂಕರ್‌ ರೋಹಿತ್ ರಂಜನ್ ‍ಮಾತನಾಡುತ್ತಾ, “ಈ ಘಟನೆಯು ಧಾರ್ಮಿಕ ಯುದ್ಧದ ಭಾಗವಾಗಿದೆ” ಎನ್ನುತ್ತಾರೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾರ್ಲಿ ಹೆಬ್ಡೊ ದಾಳಿ ಮತ್ತು 2020ರಲ್ಲಿ ಫ್ರೆಂಚ್ ಶಿಕ್ಷಕನ ಶಿರಚ್ಛೇದ ಪ್ರಕರಣವನ್ನು ಪ್ರಸ್ತಾಪಿಸಿದ ರಂಜನ್, “ಯಾರಾದರೂ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದರೆ ಅವರನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಯನ್ನು ಸಮರ್ಥಿಸಲಾಗುತ್ತದೆ ಎಂದು ಇಡೀ ಜಗತ್ತು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ” ಎನ್ನುತ್ತಾರೆ. ವಿಚಿತ್ರವೆಂದರೆ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರ್ಯಕ್ರಮದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ತೆರವು ಮಾಡಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಎಬಿಪಿ ನ್ಯೂಸ್‌ನಲ್ಲಿ ರೂಬಿಕಾ ಲಿಯಾಕತ್, “ರಾ‘ಜಸ್ಥಾನವು ಮತಾಂಧತೆಯ ಪ್ರಯೋಗಾಲಯ ಆಗಿ ಮಾರ್ಪಟ್ಟಿದೆಯೇ?” ಎಂದು ಕೇಳುತ್ತಾರೆ. ಕಾರ್ಯಕ್ರಮದ ವಾಯ್ಸ್‌ವೋವರ್‌ನಲ್ಲಿ, “ಭಾರತದಲ್ಲಿ ತಾಲಿಬಾನ್ ತರಹದ ಮನಸ್ಥಿತಿಯ ಕೆಲವು ಜನರು ಇದ್ದಾರೆ ಎಂಬ ಪ್ರಶ್ನೆಯನ್ನು ಈ ವೀಡಿಯೊ ಎತ್ತುವುದಿಲ್ಲವೇ?” ಎಂದು ಕೇಳಲಾಗುತ್ತದೆ.

NDTVಯಲ್ಲಿ ನಿಧಿ ರಜ್ದಾನ್ ಅವರು ಈ ಕುರಿತು ಚರ್ಚೆಯನ್ನು ನಡೆಸಿದರು. ಕಾಂಗ್ರೆಸ್ ವಕ್ತಾರರಾಗಿರುವ ಪ್ಯಾನೆಲಿಸ್ಟ್ ಗುರುದೀಪ್ ಸಿಂಗ್ ಸಪ್ಪಲ್ ಅವರು ಮಾತನಾಡುತ್ತಾ, “ಈ ಕೊಲೆಯು ಅನಾಗರಿಕವಾದದ್ದು. ತ್ವರಿತವಾಗಿ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಮಾತನಾಡಿ, “ಇದು ಐಸಿಸ್ ಶೈಲಿಯ ಮರಣದಂಡನೆ. ನಾವು ಎಚ್ಚರದಿಂದಿರಬೇಕು” ಅವರು ಎಚ್ಚರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೋಫರ್ ಜುಬೇರ್ ನ ಪರ ಮಾತಾಡೋ ಲೋಫರ್ ಗಳನ್ನ ಸರ್ಕಾರವೇ ಗುಂಡುಕ್ಕಿ ಕೊಲ್ಲುವ ಸಮಯ ಹತ್ತಿರದಲ್ಲಿ ಇದೆ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...