Homeಮುಖಪುಟಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

ಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

- Advertisement -
- Advertisement -

ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಘಟನೆಯನ್ನು ‘ತಾಲೀಬಾನೀಕರಣ’ದ ಭಾಗವಾಗಿ ಚರ್ಚಿಸುತ್ತಿರುವ ಮಾಧ್ಯಮಗಳು, ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಹೆಸರನ್ನು ಪ್ರಕರಣಕ್ಕೆ ಥಳುಕುಹಾಕುವ ಪ್ರಯತ್ನವನ್ನು ಮಾಡುತ್ತಿವೆ. ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶೇಷ ವರದಿ ಮಾಡಿದೆ.

“ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್‌ನ ಭೀಕರ ಹತ್ಯೆಯನ್ನು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಸಕ್ರಿಯಗೊಳಿಸಿದ್ದಾರೆ” ಎಂದು ನೀವು ನಂಬಬೇಕೆಂದು ಟೈಮ್ಸ್‌ನೌ ಪತ್ರಕರ್ತ ರಾಹುಲ್ ಶಿವಶಂಕರ್ ಹೇಳಿಬಿಟ್ಟರು.

“ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದನ್ನು ಜುಬೈರ್ ಬೆಳಕಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅದಕ್ಕಾಗಿ ದಂಡ ತೆರಬೇಕಾಯಿತು. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ ರಾಹುಲ್‌. ಕಳೆದ ರಾತ್ರಿ ಟೈಮ್ಸ್ ನೌ ಪ್ರೈಮ್‌ಟೈಮ್ ಚರ್ಚೆಯು ಹೀಗೆ ನಡೆಯುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಬ್ಬರು ಮತಾಂಧರು ಕನ್ಹಯ್ಯಾ ಲಾಲ್‌ ಅವರ ಶಿರಚ್ಛೇದನ ಮಾಡಿದ ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಇಬ್ಬರು ವ್ಯಕ್ತಿಗಳು (ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರಿ) ಘಟನೆಯನ್ನು ಚಿತ್ರೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದರು.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರಿಂದ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರಿಂದ ಲಾಲ್ ಅವರನ್ನು ಟಾರ್ಗೆಟ್ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಟೈಮ್ಸ್ ನೌನಲ್ಲಿ ಪತ್ರಕರ್ತ ಶಿವಶಂಕರ್ ಇದನ್ನು “ಐಸಿಸ್ ಶೈಲಿಯ ಶಿರಚ್ಛೇದನೆ” ಎಂದು ಕರೆಯುತ್ತಲೇ ಜುಬೇರ್‌ ಹೆಸರನ್ನು ಎಳೆದುತಂದರು.

ಪ್ಯಾನೆಲಿಸ್ಟ್ ತೆಹ್ಸೀನ್ ಪೂನಾವಾಲಾ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ್‌‌, “ಈ ಐಸಿಸ್ ಮಾದರಿಯ ಪ್ರತೀಕಾರಕ್ಕೆ ಸಕ್ರಿಯರು ಇದ್ದಾರೆ. ನೀವು ಇಂದು ರಾತ್ರಿ ಜುಬೈರ್ ಹೆಸರು ತೆಗೆದುಕೊಳ್ಳುತ್ತೀರಾ?… ಇಲ್ಲ, ನೀವು ಅವರ ಹೆಸರನ್ನು ತೆಗೆದುಕೊಳ್ಳಬೇಕು..” – ಹೀಗೆ ಮಾತನಾಡುತ್ತಾರೆ.

ನೂಪುರ್‌‌ ಶರ್ಮಾ ಪ್ರವಾದಿ ವಿರುದ್ಧ ಕಾಮೆಂಟ್ ಮಾಡಿದ ವೀಡಿಯೊ ಕ್ಲಿಪ್ ಜುಬೇರ್‌ ಹಂಚಿಕೊಂಡಿದ್ದನ್ನು ಶಿವಶಂಕರ್‌ ಪ್ರಸ್ತಾಪಿಸುತ್ತಾರೆ. ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ಟೈಮ್ಸ್ ನೌನಲ್ಲಿ ಹೇಳಿದರು. ಒಮ್ಮೆ ಹಿನ್ನಡೆ ಪ್ರಾರಂಭವಾದಾಗ, ಚಾನಲ್ ತಕ್ಷಣವೇ ಈ ವಿಷಯದಿಂದ ಅಂತರ ಕಾಯ್ದುಕೊಂಡಿದೆ. “ನಮ್ಮ ಚರ್ಚೆಗಳಲ್ಲಿ ಭಾಗವಹಿಸುವವರು ಸಂಯಮವನ್ನು ಕಾಪಾಡಿಕೊಳ್ಳಲು, ಸಹ ಪ್ಯಾನೆಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆಯಲ್ಲಿ ಮಾತನಾಡದಂತೆ ನಾವು ಒತ್ತಾಯಿಸುತ್ತೇವೆ” ಎಂದು ಟೈಮ್ಸ್ ನೌ ತಿಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಕಳೆದ ರಾತ್ರಿಯ ಚರ್ಚೆಯಲ್ಲಿ ಶಿವಶಂಕರ್, ಜುಬೈರ್ ಅವರ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. “ನೀವು ಪ್ರವಾದಿಯನ್ನು ನಿಂದಿಸಿದಾಗ, ನೀವು ದಂಡ ಕಟ್ಟಬೇಕಾಗುತ್ತದೆ. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ.

ಇಂಡಿಯಾ ಟುಡೇಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಉದಯ್‌ಪುರ ಹತ್ಯೆಯ ಕುರಿತು ಚರ್ಚೆ ನಡೆಸಿದಾಗ ಅಲ್ಲಿಯೂ ಜುಬೇರ್‌ ಹೆಸರು ಪ್ರಸ್ತಾಪವಾಗಿದೆ. “ರಾಜಸ್ಥಾನದಲ್ಲಿ ಐಸಿಸ್ ಶೈಲಿಯ ಹತ್ಯೆ” ಎಂಬ ಚರ್ಚೆ ನಡೆಯುತ್ತಿದ್ದಾಗ, “ಭಾರತವು ಕೋಮು ಹಿಂಸಾಚಾರವನ್ನು ಹೇಗೆ ನಿಲ್ಲಿಸಬಹುದು” ಎಂದು ಸರ್ದೇಸಾಯಿಯವರು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರನ್ನು ಕೇಳುತ್ತಾರೆ. ಅದಕ್ಕೆ ಸಿಂಗ್, “ನೀವು ನೂಪುರ್ ಶರ್ಮಾ ಅಥವಾ ಬೇರೆ ಯಾರನ್ನಾದರೂ ಖಂಡಿಸಿದರೆ, ಜುಬೈರ್ ಅವರನ್ನೂ ಸಹ ಖಂಡಿಸಬೇಕು” ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, “ಉದಯಪುರ್ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು” ಎಂದು ಸ್ಪಷ್ಟಪಡಿಸುತ್ತಾರೆ.

ತಾಲೀಬಾನೀನಿಕರಣದ ಚರ್ಚೆ

ಈ ಭೀಕರ ಘಟನೆಯನ್ನು ‘ತಾಲೀಬಾನೀಕರಣ’ ಎಂದು ಹೆಸರಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದೆ.

ಆಜ್ ತಕ್ ಮಾಧ್ಯಮದಲ್ಲಿ ಚಿತ್ರಾ ತ್ರಿಪಾಠಿ, “ರಾಜಸ್ಥಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಏಕೆ ಸಂಭವಿಸಿದೆ?” ಅಥವಾ “ಇದು ಕ್ರೌರ್ಯದ ಕಥೆ, ತಾಲಿಬಾನಿ ಚಟುವಟಿಕೆ” ಎಂದು ತಿಳಿಸಿದ್ದಾರೆ.

ಚಿತ್ರಾ ತ್ರಿಪಾಠಿಯವರು, “ತಾಲಿಬಾನಿ” ಪದವನ್ನು ಬಳಸುವುದನ್ನು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಆಕ್ಷೇಪಿಸಿದಾಗ ಅವರು, “ನಿಮಗೆ ಅವಮಾನವಿಲ್ಲವೇ? ಮೂರು ಮಕ್ಕಳ ತಂದೆಯನ್ನು ಹಗಲಿನಲ್ಲಿ ನಿರ್ದಯವಾಗಿ ಕೊಲ್ಲಲಾಯಿತು. ಇಲ್ಲಿ ನೀವು ಆಂಕರ್‌ ಬಾಯಿಂದ ಯಾವ ರೀತಿಯ ಪದಗಳು ಬರಬೇಕು ಎಂದು ಹೇಳುತ್ತಿದ್ದೀರಿ” ಎನ್ನುತ್ತಾರೆ.

ನ್ಯೂಸ್ 18 ಇಂಡಿಯಾದಲ್ಲಿ, ಅಮಿಶ್ ದೇವಗನ್ ಅವರ ಕಾರ್ಯಕ್ರಮದಲ್ಲೂ ತಾಲೀಬಾನೀಕರಣ ಚರ್ಚೆಯ ವಿಷಯವಾಗಿತ್ತು. “ಉದಯಪುರದಲ್ಲಿ ತಾಲಿಬಾನ್ ಮಾದರಿಯ ಕೊಲೆ ನಡೆದಿದೆ” ಎನ್ನುತ್ತಾರೆ ದೇವಗನ್‌.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, “ಕಳೆದ ಕೆಲವು ತಿಂಗಳುಗಳಲ್ಲಿ, ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಅಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳನ್ನು ಮಾಡಲಾಗಿದೆ. ಅದು ರಾಮ ನವಮಿ ಮೆರವಣಿಗೆಯಾಗಲಿ ಅಥವಾ ಹನುಮಾನ್ ಉತ್ಸವ ಮೆರವಣಿಗೆಯಾಗಲಿ, ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದ್ದಾರೆ” ಎಂದು ದೂರುತ್ತಾರೆ.

ಝೀ ನ್ಯೂಸ್‌ನಲ್ಲಿ ಆಂಕರ್‌ ರೋಹಿತ್ ರಂಜನ್ ‍ಮಾತನಾಡುತ್ತಾ, “ಈ ಘಟನೆಯು ಧಾರ್ಮಿಕ ಯುದ್ಧದ ಭಾಗವಾಗಿದೆ” ಎನ್ನುತ್ತಾರೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾರ್ಲಿ ಹೆಬ್ಡೊ ದಾಳಿ ಮತ್ತು 2020ರಲ್ಲಿ ಫ್ರೆಂಚ್ ಶಿಕ್ಷಕನ ಶಿರಚ್ಛೇದ ಪ್ರಕರಣವನ್ನು ಪ್ರಸ್ತಾಪಿಸಿದ ರಂಜನ್, “ಯಾರಾದರೂ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದರೆ ಅವರನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಯನ್ನು ಸಮರ್ಥಿಸಲಾಗುತ್ತದೆ ಎಂದು ಇಡೀ ಜಗತ್ತು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ” ಎನ್ನುತ್ತಾರೆ. ವಿಚಿತ್ರವೆಂದರೆ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರ್ಯಕ್ರಮದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ತೆರವು ಮಾಡಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಎಬಿಪಿ ನ್ಯೂಸ್‌ನಲ್ಲಿ ರೂಬಿಕಾ ಲಿಯಾಕತ್, “ರಾ‘ಜಸ್ಥಾನವು ಮತಾಂಧತೆಯ ಪ್ರಯೋಗಾಲಯ ಆಗಿ ಮಾರ್ಪಟ್ಟಿದೆಯೇ?” ಎಂದು ಕೇಳುತ್ತಾರೆ. ಕಾರ್ಯಕ್ರಮದ ವಾಯ್ಸ್‌ವೋವರ್‌ನಲ್ಲಿ, “ಭಾರತದಲ್ಲಿ ತಾಲಿಬಾನ್ ತರಹದ ಮನಸ್ಥಿತಿಯ ಕೆಲವು ಜನರು ಇದ್ದಾರೆ ಎಂಬ ಪ್ರಶ್ನೆಯನ್ನು ಈ ವೀಡಿಯೊ ಎತ್ತುವುದಿಲ್ಲವೇ?” ಎಂದು ಕೇಳಲಾಗುತ್ತದೆ.

NDTVಯಲ್ಲಿ ನಿಧಿ ರಜ್ದಾನ್ ಅವರು ಈ ಕುರಿತು ಚರ್ಚೆಯನ್ನು ನಡೆಸಿದರು. ಕಾಂಗ್ರೆಸ್ ವಕ್ತಾರರಾಗಿರುವ ಪ್ಯಾನೆಲಿಸ್ಟ್ ಗುರುದೀಪ್ ಸಿಂಗ್ ಸಪ್ಪಲ್ ಅವರು ಮಾತನಾಡುತ್ತಾ, “ಈ ಕೊಲೆಯು ಅನಾಗರಿಕವಾದದ್ದು. ತ್ವರಿತವಾಗಿ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಮಾತನಾಡಿ, “ಇದು ಐಸಿಸ್ ಶೈಲಿಯ ಮರಣದಂಡನೆ. ನಾವು ಎಚ್ಚರದಿಂದಿರಬೇಕು” ಅವರು ಎಚ್ಚರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೋಫರ್ ಜುಬೇರ್ ನ ಪರ ಮಾತಾಡೋ ಲೋಫರ್ ಗಳನ್ನ ಸರ್ಕಾರವೇ ಗುಂಡುಕ್ಕಿ ಕೊಲ್ಲುವ ಸಮಯ ಹತ್ತಿರದಲ್ಲಿ ಇದೆ

LEAVE A REPLY

Please enter your comment!
Please enter your name here

- Advertisment -

ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ ಹಾಡಿದ ಪ್ರಕರಣ : ತನಿಖೆಗೆ ಆದೇಶಿಸಿದ ಸರ್ಕಾರ

ಹೊಸದಾಗಿ ಚಾಲನೆ ನೀಡಲಾದ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಸಂಚಾರದ ವೇಳೆ ಶಾಲಾ ಮಕ್ಕಳು ಆರ್‌ಎಸ್‌ಎಸ್‌ ಗೀತೆ (ಗಾನ ಗೀತಂ) ಹಾಡಿದ ಬಗ್ಗೆ ತನಿಖೆಗೆ ಕೇರಳದ ಪ್ರಾಥಮಿಕ ಶಿಕ್ಷಣ ಸಚಿವ...

ಬಿಹಾರ ಚುನಾವಣೆ | ಎಲ್‌ಜೆಪಿ ಸಂಸದೆಯ ಎರಡೂ ಕೈಗಳಲ್ಲಿ ಮತದಾನದ ಶಾಯಿ ಗುರುತು; ಮತಗಳ್ಳತನ ಆರೋಪ

ಬಿಹಾರದಲ್ಲಿ ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಎನ್‌ಡಿಎ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಸಂಸದೆ ಶಾಂಭವಿ ಚೌಧರಿ ಅವರ ಎರಡೂ ಕೈಗಳಲ್ಲಿ ಮತದಾನದ ಗುರುತಿನ ಶಾಯಿ ಕಂಡುಬಂದಿದೆ. ಈ...

ಗೋಲ್ಪಾರದಲ್ಲಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಅಸ್ಸಾಂ ಸರ್ಕಾರ : ನೆಲೆ ಕಳೆದುಕೊಳ್ಳಲಿರುವ 600 ಕುಟುಂಬಗಳು

ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ...

ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ

ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಗೆ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶನಿವಾರ (ನ.8) ಆದೇಶಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ...

ಅಂಡಮಾನ್, ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು (ನ.9, 2025) ಮಧ್ಯಾಹ್ನ 12:06ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯ 90 ಕಿಲೋ ಮೀಟರ್ ಆಳದಲ್ಲಿ...

ತರಬೇತಿ ನಿರತ ಪೊಲೀಸರಿಗೆ ಭಗವದ್ಗೀತೆ ಪಠಿಸಲು ಆದೇಶ : ಇಲಾಖೆಯ ಕೇಸರೀಕರಣ ಎಂದ ಕಾಂಗ್ರೆಸ್

ಎಂಟು ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಮಧ್ಯಪ್ರದೇಶದ ಸುಮಾರು 4,000 ಹೊಸದಾಗಿ ನೇಮಕಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಿಂದೂ ಮಾಸದ ಮಾರ್ಗಶಿರದಲ್ಲಿ ಪ್ರತಿದಿನ ಸಂಜೆ 'ಭಗವದ್ಗೀತೆ'ಯ ಅಧ್ಯಾಯಗಳನ್ನು ಓದಲು ನಿರ್ದೇಶಿಸಲಾಗಿದೆ. ತರಬೇತಿಯಲ್ಲಿರುವ ಕಾನ್‌ಸ್ಟೆಬಲ್‌ಗಳಿಗೆ ನೀತಿವಂತ ಮತ್ತು ಶಿಸ್ತಿನ...

ಪಶ್ಚಿಮ ಬಂಗಾಳ : ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ

ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶುಕ್ರವಾರ (ನ.7) ರಾತ್ರಿ ಈ ಘಟನೆ ನಡೆದಿದೆ. ಅಪರಿಚಿತರು ದುಷ್ಕೃತ್ಯವೆಸಗಿದ್ದಾರೆ. ಮಗುವಿನ...

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಮಕ್ಕಳು, ವಿಡಿಯೋ ಹಂಚಿಕೊಂಡ ರೈಲ್ವೆ : ತೀವ್ರ ವಿರೋಧ

ಶನಿವಾರ (ನ.8) ಎರ್ನಾಕುಲಂ-ಬೆಂಗಳೂರು ನಡುವಿನ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ವಿಡಿಯೋವನ್ನು ದಕ್ಷಿಣ ರೈಲ್ವೆ ಹಂಚಿಕೊಂಡಿದ್ದು, ಕೇರಳದಲ್ಲಿ ತೀವ್ರ ಆಕ್ಷೇಪ...

ಶಾಲಾ ಮಕ್ಕಳಿಗೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ಬಡಿಸಿದ ವಿಡಿಯೋ ವೈರಲ್ : ಪ್ರಧಾನಿ, ಸಿಎಂಗೆ ನಾಚಿಕೆಯಾಗ್ಬೇಕು ಎಂದ ರಾಹುಲ್ ಗಾಂಧಿ

ಮಧ್ಯಪ್ರದೇಶದ ಶಾಲೆಯೊಂದರ ಮಕ್ಕಳು ನ್ಯೂಸ್‌ ಪೇಪರ್‌ನಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, "ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಭವಿಷ್ಯ ಬೆಳಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್...

ಬಿಹಾರ ಚುನಾವಣೆ : ರಸ್ತೆ ಬದಿ ಪತ್ತೆಯಾದ ವಿವಿಪ್ಯಾಟ್‌ ಸ್ಲಿಪ್‌ಗಳು

ಬಿಹಾರದ ಸಮಸ್ತಿಪುರ ಜಿಲ್ಲೆಯ ಶೀತಲ್‌ಪಟ್ಟಿ ಗ್ರಾಮದ ಎಸ್‌ಆರ್ ಕಾಲೇಜು ಬಳಿ ಭಾರೀ ಸಂಖ್ಯೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್‌) ಸ್ಲಿಪ್‌ಗಳು ಪತ್ತೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ...