Homeಅಂಕಣಗಳುನಾಗಸುಧೆ ಜಗಲಿಯಿಂದಪರಕಾಯ ಪ್ರವೇಶದ ತಲ್ಲಣದ ಸಾಲುಗಳು - ಪ್ರಕಾಶ ಕಡಮೆ

ಪರಕಾಯ ಪ್ರವೇಶದ ತಲ್ಲಣದ ಸಾಲುಗಳು – ಪ್ರಕಾಶ ಕಡಮೆ

ಉಮಾರವರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು...

- Advertisement -
- Advertisement -

ಉಮಾ ಮುಕುಂದ ಕನ್ನಡ ಸಾಹಿತ್ಯಕ್ಕೆ ಒಂದು ಸಾಂಸ್ಕೃತಿಕ ಮನೆಯ ಕೊಡುಗೆ. ಗಂಡ ಮಗ ಇಬ್ಬರೂ ನಾಡಲ್ಲಿ ಹೆಸರು ಮಾಡುತ್ತಿದ್ದಾಗ, ತಮ್ಮ ಬದುಕಿನ ಐದು ದಶಕಗಳ ನಂತರ ಸದ್ದು ಗದ್ದಲವಿಲ್ಲದೇ ಹೊಸ ಕವಿತೆಯ ಸಾಲುಗಳಂತೇ ಸಾಹಿತ್ಯಲೋಕವನ್ನು ಅಧಿಕೃತವಾಗಿ ಪ್ರವೇಶಿಸಿದವರು. ಹಾಗೆಂದ ಮಾತ್ರಕ್ಕೆ ಕಾವ್ಯದ ಅರಿವಿಲ್ಲದವರಂತಲ್ಲ ಇವರು. ತಮ್ಮ ಬದುಕಿನ ಎಲ್ಲಾ ಅನುಭವಗಳನ್ನೂ ಮನದೊಳಗೇ ಹುದುಗಿಸಿಟ್ಟು ಕುದಿಸಿ ತಡೆಲಾರದೇ ಶಾಂತವಾಗಿ ಹೊರಹಾಕಿ, “ಕಡೇ ನಾಲ್ಕು ಸಾಲು” ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿರುವರು.

ಬೆಂಗಳೂರಿನ “ಬಹುರೂಪಿ” ಈ ಪುಸ್ತಕ ಪ್ರಕಾಶಿಸಿರುವರು. ಈ ಸಂಕಲನದಲ್ಲಿ ಹಸಿ ಹಸಿಯ ತಾಜಾತನದಿಂದ ಕೂಡಿದ 36 ಸರ್ವಕಾಲಿಕ ಸತ್ಯದ ಕವಿತೆಗಳಿವೆ. ತಮ್ಮ ಸಂಗಾತಿ ಮುಕುಂದಗೆ ಈ ಲವಲವಿಕೆಯ ಅಕ್ಷರದ ಸಾಲುಗಳ ಪದಪುಂಜವನ್ನು ಉಮಾ ಅರ್ಪಿಸಿರುವರು.

ಪೆಚ್ಚಾಗಿ ನಿಂತವಳು ಎಚ್ಚರಾಗಿ
ಒಳಗೆ ಬಂದು ಬಾಗಿಲು ಹಾಕಿದರೆ
ಅವಳ ನಗೆಯ ಘಮಲು ಹೊದ್ದ ಸೊಪ್ಪಿಗೆ
ದಟ್ಟ ನೋವಿನ ವಾಸನೆ

ಎಂದು “ಸೊಪ್ಪಿನವಳು” ಕವಿತೆಯ ಮೂಲಕ ದುಡಿಯುವ ವರ್ಗದ ಮಹಿಳೆಯ ಮೂಕ ವೇದನೆಯನ್ನು ಅವರ ಮನದೊಳಗೆ ನಿಂತು ಬಿಂಬಿಸಿರುವರು. ಸೊಪ್ಪಿನ ಆ ಹೆಂಗಸು ‘ಸೊಪ್ಪಮ್ಮೋ ಸೊಪ್ಪು’ ಎಂದು ಕೂಗುವಾಗ ಅವಳ ಬದುಕಿನ ನೋವೆಲ್ಲಾ ಗಂಟಲಿಗೆ ಬಂದಂತಿರುತ್ತದೆ. ಬದುಕಿನ ಗಾಯದ ಕುರಿತು ಕೇಳಿದರೆ ಏನನ್ನೂ ತೋರ್ಪಡದೇ ಸುಮ್ಮನೇ ನಕ್ಕುಬಿಡುವ ಇವರು ನೋವೆಲ್ಲಾ ನುಂಗಿಕೊಂಡು, ಕೇಳಿದ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉಳಿದು, ನಗೆಯ ಘಮಲು ಸೊಪ್ಪಿಗೆ ನೋವಿನ ವಾಸನೆ ಸೂಸುತಿತ್ತು ಎಂದು ಕವಿ ಹೆಣ್ಣಿನ, ದುಡಿಯುವ ವರ್ಗದ ಜನರ, ಶೋಷಿತರ ಮನೋವೇದನೆಯನ್ನು ಇಲ್ಲಿ ನಿರೂಪಿಸಿರುವರು.

“ಪುಟ್ಟಕ್ಕನ ಓಲೆ” ಕವನದಲ್ಲಿ

ಬಿಟ್ಟು ಹೋದ ಗಂಡನ ಬಗ್ಗೆ
ಕೆಟ್ಟ ಮಾತಾಡದೇ
ಹುಟ್ಟಿದೆರಡು ಮಕ್ಕಳಿಗಾಗಿ
ಎಂಟುಮನೆ ಕೆಲಸಮಾಡಿ
ಕೊಟ್ಟ ತಿನಿಸು ಕಟ್ಟಿಕೊಂಡು
ಮುಚ್ಚಟೆಯಾಗಿ ಬದುಕುವ
ಮೂವತ್ತರ ಕಪ್ಪು ಚೆಲುವೆ
ಪುಟ್ಟಕ್ಕನೆಂಬೋ ಈ ವಿಶ್ವ ಸುಂದರಿ
ನನಗೊಂದು ಅಚ್ಚರಿ

ಎಂದು ಶೋಷಿತ, ಬಾಯಿಸತ್ತ ಹೆಣ್ಣಿನ ಮನದಾಳದ ಭಾವನೆಗಳನ್ನು ಬಿಚ್ಚಿಟ್ಟಿರುವರು. ಅವಳ ಮೂವತ್ತನೇ ವಯಸ್ಸಿಗೇ ನಡೆಯಬಾರದೆಲ್ಲಾ ನಡೆದುಹೋಗಿದೆ. ಗಂಡ ಬಿಟ್ಟುಹೋಗುವ ಮೊದಲೇ ಮಕ್ಕಳೆರಡನ್ನು ಕೊಟ್ಟು ಹೋಗಿರುವನು. ತನಗೆ ಬಾಳು ಬೇಡವಾದರೂ ಮಕ್ಕಳಿಗಾದರೂ ಬದುಕಿ ಮನೆಗೆಲಸ ಮಾಡಿ ತಾನು ತಿನ್ನಬೇಕಾದ್ದುದನ್ನೇ ಕಂದಮ್ಮಗಳಿಗೆ ಕಟ್ಟಿಟ್ಟು ಜೀವ ಸಹಿಸುವ ಬಡ ಹೆಣ್ಣಿನ ದೈನಂದಿನ ಬದುಕು ದಮನೀಯವಾಗಿದೆ. ಇವಳು ತಾನು ಕಷ್ಟದಲ್ಲಿದ್ದೇನೆ ಎಂದು ಎಂದಿಗೂ ಪರಿತಪಿಸದೇ, ಇಡೀ ಬದುಕಲಿ ಜೀವಸವೆದ ಹಣ, ಒಡವೆ ಎಲ್ಲವನೂ ಮಕ್ಕಳಿಗಾಗಿ ಎಂದು ಹೊಳಪ ಕಣ್ಣ ಪಿಳುಕಿಸುವ ತಾಯಿ ಹೃದಯದ, ಚಿತ್ರಣ ಕವಿ ಇಲ್ಲಿ ಚಿತ್ರಸಿ ಇವಳು ನನಗೊಂದು ಅಚ್ಚರಿ ಎಂದು ದಮನಿತರ ಪರ ನಿಲ್ಲುವರು.

ಜಿ.ಎನ್.ಮೋಹನ್ ‘ಕಾಫಿ ಡೇ’ಯ ಕೆಪುಚಿನೊ ಅಲ್ಲ ಎನ್ನುತ್ತಾ ‘ಉಮಾ ರವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವದನ್ನು ಗೊತ್ತು ಮಾಡಿಕೊಳ್ಳುತ್ತದೆ. ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಇವರ ಕವಿತೆಗೆ ಕಾಲುದಾರಿಯೂ ಗೊತ್ತು, ಹೈವೇಯೂ ಗೊತ್ತು. ಇಲ್ಲಿ ಎಲ್ಲವೂ ಇದೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು’ ಎಂದಿರುವರು.

ಚಿಂದಿ ಹಾಸಿ ಹಸಿವ ಮರೆಸಿ
ತಟ್ಟಿ ತಟ್ಟಿ ಲಾಲಿ ಹಾಡಿ
ಬೆಟ್ಟ ಕಣಿವೆ ಕಡಲು ಮುಗಿಲು
ಹೂವು ಹೊನಲು ಹಕ್ಕಿ ಕುಕಿಲು
ಬಾಡಿನೂಟ ಬಣ್ಣದರಿವೆ
ಪದಗಳಲ್ಲೆ ಹೆಣೆದು ಹೊದಿಸಿ
ಕನಸ ಕದವ ತೆರೆದಳು

ಎಂದು “ಹಸಿವು” ಕವಿತೆಯಲ್ಲಿ ತಾಯಿಯ ಕನಸನ್ನು ಮನಮುಟ್ಟುವಂತೆ ಸಾಲುಗಳಲ್ಲಿ ಹಿಡಿದಿಟ್ಟು ತಮ್ಮ ಕಾವ್ಯ ಕಟ್ಟುವಿಕೆ ಬಗೆಯನ್ನು ಪ್ರದರ್ಶಿಸಿರುವರು. ಕವಿತೆ ಓದುತ್ತಿದ್ದಂತೆ ಸು.ರಂ.ಎಕ್ಕುಂಡಿಯವರ ಕಥನ ಕಾವ್ಯ ಕಣ್ಣಿಗೆ ಕಟ್ಟಿದಂತಾಗುತ್ತದೆ. ಈ ಕವಿತೆಯಲ್ಲಿ ಅರ್ಥಗರ್ಭಿತವಾಗಿ ಪ್ರಾಸಗಳು ಬಂದು ಇಡೀ ಕವಿತೆಯ ಮೌಲ್ಯ ವೃದ್ಧಿಸಿದೆ. ತಾಯಿಯ ನಿಸ್ವಾರ್ಥ ಬದುಕು, ತನ್ನ ಮಗುವಿಗಾಗಿ ತನ್ನದೆಲ್ಲವನ್ನೂ ತ್ಯಾಗಮಾಡಿ, ಹಸಿವಿನಿಂದ ಬಳಲಿದರೂ ತೋರ್ಪಡಿಸದೇ, ನೀರನಷ್ಟೂ ಸುರುವಿಕೊಂಡು ಹೊಟ್ಟೆತುಂಬ ಕುಡಿದಳು ಎಂದು ತಾಯಿಯ ಮಮತೆ ಇಲ್ಲಿ ವ್ಯಕ್ತವಾಗಿದೆ. ಬಾಡಿನೂಟ ಬಣ್ಣದರಿವೆ ಪದಗಳಲ್ಲೇ ಹೆಣೆದು ಹೊದಿಸಿ ಕನಸ ಕದವ ತೆರೆದಳು ಎಂದು ಬಡ ತಾಯಿ ಮಗುವಿಗೆ ಮಲಗಿಸುವಾಗ ಅದ್ಭುತವಾದ ವರ್ಣನೆಯಲ್ಲಿ ಚಿತ್ರಿಸಿದ್ದು ಇವರ ಕಾವ್ಯ ಶಕ್ತಿಯ, ಕಾವ್ಯ ಕಟ್ಟುವಿಕೆಯ ನಿದರ್ಶನವಾಗಿದೆ.

“ಬೇರೆ ಬೇರೆ” ಕವನದಲ್ಲಿ

ಅದೇ ಸೂರ್ಯ ಅದೇ ಬೆಳಗು
ಬೆಳಕಿನಾಟ ಬೇರೆ ಬೇರೆ
ಅದೇ ನಾನು ಅದೇ ಅವನು
ಅನುದಿನದ ಸಾಂಗತ್ಯ
ಬೇರೆ ಬೇರೆ ಬೇರೆ

ಎಂದು ನಮ್ಮ ಅನುದಿನದ ಹೊಚ್ಚ ಹೊಸ ಬದುಕಿನ ರೀತಿ-ನೀತಿಗಳನ್ನು ಚಿತ್ರಿಸಿರುವರು. ದಿನದಿನವೂ ಅದೇ ಸೂರ್ಯ, ಪ್ರಕೃತಿ, ಹಕ್ಕಿ, ಹಾಡು, ಉಡುಗೆ ತೊಡುಗೆಯಿದ್ದರೂ ನಿತ್ಯವೂ ನವನವೀನ. ಸತಿ ಪತಿಗಳ, ಪ್ರೇಮಿಗಳ ಒಡನಾಟವು ಒಂದೇ ಇದ್ದರೂ ಬದುಕು ದಿನ-ದಿನವೂ ಬಗೆ ಬಗೆಯದಾಗಿದ್ದು ನಿನ್ನೆಯಂತಿರದೇ ಹೊಸ ಹೊಸ ಕಾಮನಬಿಲ್ಲಿನಂತೆ ಎಂದು ಹೊಸ ಆಶಾಕಿರಣಕೆ ದಾರಿಮಾಡಿ ಕೊಟ್ಟಿರುವರು.

ಆನ್‌ಲೈನ್ ಮೂಲಕ ಕೃತಿ ಬಿಡುಗಡೆ ಸಂದರ್ಭ

ಸಂಕಲನಕೆ, ಒಳಗು-ಹೊರಗು : ಬೆರಗು-ಕೊರಗು ಎಂದು ಬೆನ್ನುತಟ್ಟಿದ ನಾಡಿನ ಹಿರಿಯ ಬರಹಗಾರರಾದ ಎಚ್.ಎಸ್.ರಾಘವೇಂದ್ರರಾವ್ ‘ಇವರ ಕವಿತೆಯು ಗಹನವಾದ ತಾತ್ವಿಕ ಸಂಗತಿಗಳ ಅನುಸಂಧಾನ ಮಾಡುವ ದಿಕ್ಕಿನಲ್ಲಿ ಚಲಿಸುವದಿಲ್ಲ. ದಿನನಿತ್ಯದ ಬದುಕಿನಲ್ಲಿಯೇ ಮೂಡಿ ಮುಳುಗುವ ತಂಪು, ಬಿಸುಪುಗಳನ್ನು, ಬಯಕೆ-ಭ್ರಮನಿರಸನಗಳನ್ನು ಅನುಭವಿಸುವ ಹಂಚಿಕೊಳ್ಳುವ ಹಂಬಲ ಇವರದು. ತಮ್ಮ ಸರಳತೆಯಲ್ಲಿ ಮತ್ತು ನಮ್ಮ ನಿಮ್ಮಂತ ಸಾಮಾನ್ಯರ ಬದುಕಿನ ಬಗ್ಗೆ ಇರುವ ತೀವ್ರವಾದ ಆಸಕ್ತಿಯಲ್ಲಿ. ಅಂಥ ಕಿರು ಹಣತೆ ಬೆಳಕಿನಲ್ಲಿಯೇ ತಾತ್ವಿಕತೆಯೊಂದು ಸಹಜವಾಗಿಯೇ ಮೂಡಿಬರುತ್ತದೆ. ಇವರ ಕವಿತೆಗಳಲ್ಲಿ ಸವಾಲಾಗಬಹುದಾದ ರೂಪಕ, ಪ್ರತಿಮೆಗೂ ಎಲ್ಲರ ತೆಕ್ಕೆಗೂ ನಿಲುಕುತ್ತದೆ’ ಎಂದಿರುವರು.

ಬೀದಿ ಬದಿ ಕಟ್ಟೆ ನಾಗರಕಲ್ಲಿಗೆ
ಭರಪೂರ ಹಾಲು ತುಪ್ಪದ ಅಭಿಷೇಕ
ಸಿಡಿಲ ಈಡುಗಾಯಿ ಚೂರಿನಾಸೆಗೆ
ಓಡೋಡಿ ಬಂದ ಕೊಳಕು ಲಂಗದ ಪೋರಿ
ಮೈ ತಾಗಿಸಿದಳೆಂದು ಛೀಮಾರಿ ಮಾಡಿ
ದುಡುದುಡು ನಡೆವ ಮಡಿ ಸೀರೆಯವಳು

ಎಂದು “ನಾಗರಪಂಚಮಿ” ಕವಿತೆಯಲ್ಲಿ ಇಂದಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ವಿವರಿಸುತ್ತಾ ಬಡತನದ ತಲ್ಲಣಗಳಿಗೆ ರೋಸಿ ಹೋಗಿರುವರು. ದೇಶದ ಸ್ಥಿತಿಗತಿಯೇ ಹಾಗಿದೆ, ಶ್ರೀಮಂತ ಬಡವರ ನಡುವಿನ ಕಂದಕ ಕಣ್ಮುಟ್ಟದಂತಾಗಿದೆ. ಹೊತ್ತಿನ ತುತ್ತು ಅನ್ನಕ್ಕಾಗಿ ಬಡವ ಪರಿತಪಿಸುತ್ತಿದ್ದರೆ ಶ್ರೀಮಂತರ ಅಟ್ಟಹಾಸ, ವೈಭವದ ಜೀವನ ಮುಗಿಲು ಮುಟ್ಟಿದೆ. ಕಲ್ಲ ನಾಗರಿಗೆ ಅಭಿಷೇಕದ ಮಹಾಪೂರ, ಹಸಿವೆಯಿಂದ ಬಸವಳಿದ ಮಗುವಿಗೆ ತೊಟ್ಟು ಹಾಲು ನೀಡದೇ ವೈಭವದಲಿ ಮೆರೆಯುವ ಮಂದಿಯ ಧರ್ಮ, ಶಾಸ್ತ್ರಗಳು ಸಾಂಗೋಪಾಂಗವಾಗಿ ನಡೆಯುತಿದೆ. ಇಷ್ಟಾಗಿಯೂ ಹಾಲುಣಿಸುತ್ತ ಹೂಮಾರಿ ಬದುಕ ನಡೆಸುವ ಜನರೊಂದಿಗೂ ಚೌಕಾಸಿಯ ವ್ಯವಹಾರ. ಈ ಕವಿತೆಯಲ್ಲಿ ಪರಿಸ್ಥಿತಿಗೆ ರೋಸಿಹೋಗಿ ಕವಿ ಹಸಿದ ಕಂದಮ್ಮಗಳಿಗೆ ಹೊಟ್ಟೆ ತುಂಬಾ ಹಾಲು ಸಿಗಲಿ ಎಂದು ಕರುಣಾಮಯಿಯಾಗಿ ಬೇಡಿಕೊಳ್ಳುವರು.

ನಾಡಿನ ಹೆಸರಾಂತ ಲೇಖಕಿ ವೈದೇಹಿಯವರು, ‘ನಿನ್ನುಸಿರ ನಾನಾ ಬಗೆಯ ಉಸಿರಾಟ’ ಎಂಬ ಹಿಂಬರಹದಲ್ಲಿ ಉಮಾರಿಗೆ ಆತ್ಮೀಯವಾಗಿ ಬರೆಯುತ್ತಾ ‘ನಿನ್ನ ಸಂವೇದನೆಯ ಸ್ವರೂಪ ಸ್ಪಷ್ಟವಾಗಿ ಕಂಡದ್ದರಿಂದಲೋ ಏನೋ ಈ ಕವಿತೆಗಳು ಎಲ್ಲಿಯೂ ಕವಿತೆಯಾಗಬೇಕೆಂದು ಹುಟ್ಟಿದವಲ್ಲ. ಅಲ್ಲಲ್ಲೇ ಹೂವಿನಂತೆ ಅರಳಿಕೊಂಡಂಥವು ಅಂತನಿಸಿತು. ಒಳಮಾತಿನ, ಹೊರಮಾತಿನ, ಬದುಕಿನ ವಿವಿಧ ತಲ್ಲಣ ತಳಮಳದ, ಸಹಸ್ಪಂದನ, ವಿಸ್ಮಯದ, ತಾಳುವಿಕೆ ಎಂಬ ತಪದ, ವಿಷಾದವಿದ್ದೂ ಅದರಲ್ಲಿ ಅದ್ದಿ ಹೋಗದ ಈ ಕವನಗಳು ನಿಜಕ್ಕೂ ನನಗೆ ಒಂದುರೀತಿಯಲ್ಲಿ ನಿನ್ನುಸಿರ ನಾನಾ ಬಗೆಯ ಉಸಿರಾಟಗಳಾಗಿಯೇ ಕೇಳಿಸಿದವು ಎನ್ನುತ್ತಾ, ಅಲ್ಲಲ್ಲೇ ಏಳುವ ಉರಿಗಾಳಿಯನ್ನು ಸಹಿಸಿ ಶಮನಿಸುತ್ತ ಪ್ರೀತಿಯ ಅಂತರ್ದೀಪ ಆರದಂತೆ ಕಾಪಾಡಿಕೊಂಡು ಬರುವ ದೃಢ ನಡೆಯ ಚಿತ್ರಣ ಇಲ್ಲಿದೆ’ ಎಂದಿರುವರು.

“ಪಯಣ” ಕವಿತೆಯಲ್ಲಿ

ಎಲ್ಲೋ ಹುಟ್ಟಿದ ಅವನು
ಮತ್ತೆಲ್ಲೋ ಹುಟ್ಟಿದ ನಾನು
ಹೇಗೋ ಬೆಸೆದ ಬಂಧ
ಶುರುವಾದ ಪಯಣ
ಸಾಗಿದೆ ಮೂರು ದಶಕಗಳಿಂದ

ಎನ್ನುತ್ತಾ, ಬದುಕಿನ ಸಾಮರಸ್ಯಕ್ಕೆ ಬೆಳಕು ಚೆಲ್ಲಿರುವರು. ಒಂದು ಗಂಡು, ಒಂದು ಹೆಣ್ಣು ಮದುವೆಯ ಪೂರ್ವದಲಿ ಯಾರೋ ಏನೋ ಅವರ ಆಚಾರ, ವಿಚಾರ, ನಂಬಿಕೆಗಳೇ ಬೇರೆ, ಇವರದ್ದೂ ಎಲ್ಲವೂ ವಿಭಿನ್ನ. ಆದರೂ ಒಂದಾಗಿ ಬದುಕ ಕಟ್ಟಿ ಜೀವಿಸಬೇಕು. ಆದರೆ ನಡುವೆ ಜಗಳ, ಸಿಟ್ಟು, ಸೆಡವು ಇದ್ದದ್ದೇ. ಇವೆಲ್ಲಾ ತಾತ್ಕಾಲಿಕ. ಜಗಳದ ನಡುವೆಯೂ ಮಾನವೀಯತೆಯ ತಳಹದಿಯ ಮೇಲೆ ನಾವೆಲ್ಲಾ ಬದುಕಬೇಕಾಗಿದೆ ಎಂದು ಕವಿ ಸಾಮರಸ್ಯದ ಹಾಡು ಹಾಡಿರುವರು, ತಮ್ಮ ಬದುಕನ್ನು ನೆನೆಯುತ್ತಾ.

ಸಂಕಲನದ ಕವಿ ಉಮಾ ಮುಕುಂದ ತಮ್ಮ ಕಾವ್ಯ ಪಯಣ ನೆನೆಯುತ್ತಾ ‘ಮಗುವೊಂದು ನಿಧನಿಧಾನವಾಗಿ ನಡಿಗೆ ಕಲಿಯುವಂತೆ ನನ್ನ ಎರಡು ಸಾಲು, ನಾಲ್ಕು ಸಾಲುಗಳಿಂದ ಕಾವ್ಯ ಲೋಕಕ್ಕೆ ಅಡಿ ಇಟ್ಟೆ. ಇದರಿಂದಾಗಿ ನನಗೆ ಗೊತ್ತಿಲ್ಲದಂತೆಯೇ ನನಗೊಂದು ಹೊಸ ಅಸ್ಮಿತೆಯೂ ದೊರಕಿತು. ಕವಿತೆಯೊಂದು ಬರೆದಾಗ ಆಗುವಷ್ಟು ಸಂತೋಷ, ಬೆರಗು ಇತ್ಯಾದಿ ದಿನ ನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಾಗಲೂ ಅನಿರೀಕ್ಷಿತವಾಗಿ ದಕ್ಕುತ್ತಿರುತ್ತದೆ’ ಎನ್ನುತ್ತಾ ‘ಒಂದು ರೀತಿಯಲ್ಲಿ ನಾನು ಫೇಸ್ಬುಕ್ ಕವಿಯೇ. ಹೀಗೆ ಗುರುತಿಸಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದಿರುವರು.

ಹಗಲಿರುಳೆನ್ನದೆ ಬೆನ್ನು ಹತ್ತಿದೆ
ಬಿರಿದೆದ್ದ ನಿನ್ನ ಪಾದ
ಒಂದೇ ಒಂದು ಕಾಳು ಬೆಳೆಯದ ನಾನು
ಕಾದ ನೆಲದ ಮೇಲೆ ಕಾಲಿಡದ ನಾನು,
ಬೆವರು ಬಸಿದ ನೀ ಬೆಳೆದ
ಮೂಟೆ ಮೂಟೆ ಅಕ್ಕಿ ಮುಕ್ಕಿ
ಸೊಕ್ಕಿಬೆಳೆದ ನಾನು
…………………..
ಅನ್ನ ಕಲೆಸಿ ಉಣಿಸಬೇಕು

ಎಂದು “ಪಾದ ಕಾರಣ” ಕವಿತೆಯಲ್ಲಿ ನಾಡಿಗಾಗಿ, ದೇಶದ ಜನರಿಗಾಗಿ ದುಡಿವ ಮಣ್ಣಿನ ಮಕ್ಕಳ ತ್ಯಾಗವ ನೆನೆನೆನೆದು ನಾವು ಬರೀ ಸ್ವಾರ್ಥಿಗಳಾಗಿ ಅವರು ಬೆಳೆದ ಮೂಟೆ ಮೂಟೆ ಅಕ್ಕಿಗಳನು ಮುಕ್ಕುತಿದ್ದೇವೆಯೇ ಹೊರತು ಅವರ ಸ್ಥಿತಿಗತಿಗಳ ಕುರಿತೆಂದೂ ಯೋಚಿಸುವದೇ ಇಲ್ಲ. ಅವರ ಬದುಕಿಗೆ ನಾವು ಕಣ್ಣಾಗಬೇಕು, ಅವರ ದುಃಖ ದಲಿ ನಾವೂ ಪಾಲುದಾರರಾಗಿ ನಮ್ಮ ಸಂತೋಷವನ್ನು ಅವರಿಗೂ ಹಂಚಬೇಕು ಎಂಬ ಮಾನವ ಪರ ಧೋರಣೆಯೊಂದಿಗೆ ಬಡ ಜನರ, ದುಡಿಯುವ ಕೈಗಳಿಗೆ ಶಕ್ತಿಯಾಗಬೇಕು ಎನ್ನುತ್ತಾ ನಮ್ಮ ಇಂದಿನ ಸಿರಿ ಸಂಪತ್ತಿಗೆ ನಿಮ್ಮ ಬೊಕ್ಕೆ ಎದ್ದ ಪಾದಗಳೇ ಕಾರಣ ಎಂದು ಮನಸಾ ದುಡಿಯುವ ಜನಕೆ ವಂದಿಸಿರುವರು.

“ನಡೆ” ಕವಿತೆಯಲ್ಲಿ

ಜೊತೆ ಜೊತೆಗೆ ನಡೆಯುವಾಗ ದೀಪ ಯಾರ ಕೈಯ್ಯಲಿದ್ದರೇನು? ಜೊತೆಗೆ ನಡೆಯುವುದಷ್ಟೇ ಮುಖ್ಯ, ಎನ್ನುತ್ತಾ ನಮ್ಮೆಲ್ಲಾ ಅಂಹಕಾರ, ದುರಹಂಕಾರಗಳ ಮರೆತು ಮನುಷ್ಯರಾಗಿ ಬದುಕುವ. ಹೆಸರಿಗಾಗಿ ಅಧಿಕಾರಕ್ಕಾಗಿ ಮನುಷ್ಯತ್ವವ ಮರೆತು ಬದುಕುವ ಬದಲು, ಜಾತಿ, ಧರ್ಮಗಳೆಲ್ಲಾ ಒಂದಾಗಿ ಎಲ್ಲರೂ ಜೊತೆಯಲೇ ಸಾಗುವಾ, ದೀಪದ ಬೆಳಕಲ್ಲಿ ಎಂಬ ಆಶಾ ಭಾವ ವ್ಯಕ್ತಪಡಿಸಿರುವರು.

ಉಮಾರ ಕವಿತೆಯಲ್ಲಿ ದಿನ ನಿತ್ಯದ ಆಗು-ಹೋಗುಗಳ ಅಭಿವ್ಯಕ್ತಿ ಇದೆ. ಇವೆಲ್ಲವೂ ಬದುಕಿನ ಅನುಭವದಿಂದ ಪುಟಿದೆದ್ದ ಸಾಲುಗಳು. ಮತ್ತೊಬ್ಬರ ಮನದಲಿ ಹೊಕ್ಕಿ ಅವರ ಭಾವನೆಗಳನ್ನು ಹೊರಹಾಕುವ, ಕಾವ್ಯ ಕಟ್ಟುವ ಇವರ ಜೀವಪರ ಮನಸಿಗೆ ಅಭಿನಂದಿಸಿ ಶುಭ ಕೋರುವೆನು.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ‘ಕತ್ತರಿ ಸಾಣೆಯ ಮುದುಕ’ – ಮಿಸ್ರಿಯಾ ಐ. ಪಜೀರ್ ಬರೆದ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...