Homeಚಳವಳಿ‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

- Advertisement -
- Advertisement -

ನನಗೆ ನಿರಂತರವಾಗಿ ಬರುತ್ತಿದ್ದ ಕೊಲೆ ಬೆದರಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಆದ ಚಿಂತಕರ ಹತ್ಯೆಗಳಿಂದಾಗಿ ನನ್ನ ಮೇಲೆಯೂ ಯಾರಾದರೂ ಗುಂಡು ಹಾರಿಸಲಿದ್ದಾರೆ ಎಂದು ನನಗೆ ಅನಿಸತೊಡಗಿತ್ತು. ಧಾಬೋಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್- ಹೀಗೆ ಹತ್ಯೆಗೀಡಾದ ಚಿಂತಕರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ ಎಂದು ಹೇಳಲು ನನಗೆ ಸಾಧ್ಯವೇ? ಇಂತಹ ಅಂತಿಮ ಸಾಧ್ಯತೆಗೆ ತಾನು ಸಿದ್ಧ ಎಂದು ಹೇಳಲು ಯಾರಿಗಾದರೂ ಸಾಧ್ಯವೇ? ಇಲ್ಲ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ಎರಡು ದಿನ ಮುಂಚೆ ಆದ ಈ ಘಟನೆಯಿಂದ ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅನ್ಯಾಯದ ವಿರುದ್ಧ ಮಾತನಾಡುವ ‘ಅಪರಾಧ’ ಕ್ಕೆ ದೇಶದ ನಾಗರಿಕರು ಜೀವದ ಬೆಲೆ ತೆರಬೇಕಾದರೆ ಈ ‘ಸ್ವಾತಂತ್ರ’ ಅಂದರೆ ಏನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ವಿಪರ್ಯಾಸವೆಂದರೆ, ‘ಭಯದಿಂದ ಮುಕ್ತಿ’ (ಫ್ರೀಡಮ್ ಫ್ರಮ್ ಫಿಯರ್) ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾನ್ಸ್ಟಿಟೂಷನ್ ಕ್ಲಬ್ ಎದುರುಗಡೆಯೇ ಅಪರಿಚಿತ ಬಂದೂಕುಧಾರಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೊಲ್ಲಲೆತ್ನಿಸಿದ.
ನೆನಪಿಡಿ, ನನ್ನ ಮೇಲೆ ಹಲ್ಲೆಯಾಗಿದ್ದು ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ‘ಹೈ ಸೆಕ್ಯುರಿಟಿ’ ವಲಯದಲ್ಲಿ, ಅದೂ ಹಾಡುಹಗಲಿನಲ್ಲಿ. ಇಂತಹ ಕೃತ್ಯವನ್ನು ಎಸಗುವ ಧೈರ್ಯ ಆ ವ್ಯಕ್ತಿಗೆ ಇತ್ತೆಂದರೆ ಅವನಿಗೆ ತಾನೇನು ಮಾಡಿದರೂ ತನ್ನನ್ನು ಯಾರೂ ಮುಟ್ಟಲಾರರು ಎನ್ನುವ ಭಾವನೆ ಇರದೇ ಇದ್ದರೆ ಅವನು ಈ ಕೃತ್ಯ ಎಸಗುತ್ತಿರಲಿಲ್ಲ. ಈಗಿನ ಆಡಳಿತ ಇಂಥವರಿಗೆ ಅಂಥ ಸುರಕ್ಷತೆಯ ಭಾವನೆಯನ್ನು ನೀಡುತ್ತಿದೆ. ಆ ವ್ಯಕ್ತಿ ಯಾರು, ಅವನ ಹಿಂದೆ ಇನ್ಯಾರೆಲ್ಲ ಇದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ಆದರೆ, ನಿನ್ನೆ ನನಗೇನಾದರೂ ಆಗಿದ್ದರೆ, ಅಥವಾ ನಾಳೆ ಮತ್ತೇನಾದರೂ ಆದಲ್ಲಿ ಆ ‘ಅಪರಿಚಿತ ಬಂದೂಕುಧಾರಿ’ಯನ್ನಷ್ಟೇ ದೂಷಿಸಬೇಡಿ. ನಿಜವಾದ ಅಪರಾಧಿಗಳು ಅಧಿಕಾರದ ಸ್ಥಾನದಲ್ಲಿ ಕುಳಿತು ಇಂತಹ ಕೊಲೆಗಡುಕರನ್ನು, ಗುಂಪುಗೂಡಿ ಹತ್ಯೆ ಮಾಡುತ್ತಿರುವವರನ್ನು ರಕ್ಷಿಸುತ್ತ್ತಿರುವವರು, ದೇಶದಾದ್ಯಂತ ದ್ವೇಷದ, ಹಿಂಸೆಯ ಮತ್ತು ಭಯದ ವಾತಾವರಣ ಉಂಟುಮಾಡುತ್ತಿರುವವರು. ನಿಜವಾದ ಅಪರಾಧಿಗಳು, ಆಡಳಿತ ಪಕ್ಷದ ವಕ್ತಾರರು ಮತ್ತು ಪ್ರೈಮ್ ಟೈಮ್‍ನ ನಿರೂಪಕರು ಹಾಗೂ ವಿನಾಕಾರಣ ನನ್ನ ವಿರುದ್ಧ ವಿಷ ಕಾರುತ್ತಾ, ಸುಳ್ಳುಗಳ ಕಂತೆ ಹೆಣೆದು ನನ್ನನ್ನು ಒಬ್ಬ ‘ರಾಷ್ಟ್ರ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಮುಗಿಸಲು ಪ್ರಚೋದಿಸಿದ ಟಿವಿ ಚಾನೆಲ್‍ಗಳು ನಿಜವಾದ ಅಪರಾಧಿಗಳು. ಇವರ ಇಂಥಾ ಹೇಯ ಕೃತ್ಯಗಳಿಂದಾಗಿ ನನ್ನ ಬದುಕು ಇಂಥ ದಾರುಣ ಸ್ಥಿತಿಗೆ ಬಂದುನಿಂತಿದೆ.
ಹಲ್ಲೆ ನಡೆದು ಒಂದು ದಿನವಾದ ನಂತರ, ಸೆಕ್ಷನ್ 307 ಮತ್ತು ಆಮ್ರ್ಸ್ ಅಕ್ಟ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡ ನಂತರವೂ ಮಧ್ಯಪ್ರದೇಶದ ಬಿಜೆಪಿ ಲೋಕಸಭೆಯ ಸದಸ್ಯೆ ಮೀನಾಕ್ಷಿ ಲೇಖಿ ಮತ್ತು ಜಾಲತಾಣದಲ್ಲಿರುವ ಇತರ ಕೇಸರಿ ಪಡೆಯವರು ನನ್ನ ಮೇಲೆ ಹಲ್ಲೆ ನಡೆದೇಯಿಲ್ಲವೆಂದು ಯಾಕೆ ವಾದಿಸುತ್ತಿದ್ದಾರೆ? ಇನ್ನೂ ಮುಂದೆ ಹೋಗಿ ನಾನೇ ಈ ಹಲ್ಲೆಯೆನ್ನು ಸಂಯೋಜಿಸಿದ್ದು ಎಂದು ಯಾಕೆ ಸೂಚಿಸುತ್ತಿದ್ದಾರೆ? ನನ್ನ ಮೇಲಿನ ಹಲ್ಲೆಗೆ ಕಾರಣರೆಂದು ನಾನು ಯಾರ ಮೇಲೆಯೂ ಬೆರಳು ಮಾಡಿ ತೋರಿಸಿಲ್ಲವಾದರೂ ಇವರ್ಯಾಕೆ ಈ ಘಟನೆಯ ನಿರೂಪಣೆಯನ್ನು ತಿರುಚಲು ಕಾತರರಾಗಿದ್ದಾರೆ, ಹತಾಶರಾಗಿದ್ದಾರೆ? ಇವರ ಈ ಹತಾಶೆಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಕೊಲೆ ಯತ್ನವನ್ನು ಇವರೇ ಮಾಡಿದ್ದು ಎಂದೇ? ಈ ಘಟನೆಯನ್ನು ಗೌರಿ ಲಂಕೇಶ್ ಅವರ ಹತ್ಯೆಯ ಉದಾಹರಣೆಯೊಂದಿಗೆ ನೋಡಬೇಕು, ಆ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿರುವ ಆರೋಪಿಗಳನ್ನು ನೋಡಿದರೆ ಹಿಂದುತ್ವ ಹೆಸರಿನ ಭಯೋತ್ಪಾದನೆಯ ಗುಂಪುಗಳ ಕೈವಾಡ ಸ್ಪಷ್ಟವಾಗುತ್ತಿದೆ. ಹಾಗಾಗಿ, ಈ ‘ಅಪರಿಚಿತ ಬಂದೂಕುಧಾರಿ’ಯ ಹಿಂದೆ, ಈ ಭಯೋತ್ಪಾದನಾ ಕೃತ್ಯದ ಹಿಂದಿರುವ ನಿಜವಾದ ಕೈಗಳು ಯಾವುವು ಎಂದು ಗುರುತಿಸುವುದು ಬಹಳ ಮುಖ್ಯ.
ನನ್ನ ವಿರುದ್ಧದ ಈ ದ್ವೇಷಭರಿತ ಪ್ರಚಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಅಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಬರೀ ಸುಳ್ಳುಗಳಿವೆ. ಅಲ್ಲಿ ಆರೋಪ ಪಟ್ಟಿಯಿಲ್ಲ (ಚಾರ್ಜ್‍ಶೀಟ್); ಬರೀ ಮೀಡಿಯಾ ಟ್ರಯಲ್ ಇದೆ. ಅಲ್ಲಿ ವಾದ ಮಾಡುವವರಿಲ್ಲ, ಬರೀ ಟ್ರಾಲ್ ಮಾಡುವವರಿದ್ದಾರೆ. ಅಲ್ಲಿ ಚರ್ಚೆಯಿಲ್ಲ, ಬರೀ ಬೆದರಿಕೆಗಳಿವೆ. ಇದೆಲ್ಲದರ ಅಂತಿಮ ಪರಿಣಾಮ ಇಂದು ಬಂದೂಕಿನ ದಾಳಿಯ ಹಂತಕ್ಕೆ ಬಂದಿದೆ. ‘ತುಕ್ಡೆ ತುಕ್ಡೆ’ (ತುಂಡು ತುಂಡು) ಎನ್ನುವ ಪದವನ್ನು ನನ್ನ ಹೆಸರಿನೊಂದಿಗೆ ಯಾಕೆ ಅಂಟಿಸಲಾಗಿದೆ? ಯಾವುದೋ ಒಂದು ಸಿನಿಮಾ ಬಿಡುಗಡೆಯಾದರೆ ದೇಶ ‘ತುಕ್ಡೆ ತುಕ್ಡೆ’ ಆಗುತ್ತದೆಂದು ಬೊಬ್ಬೆ ಹಾಕುವವರನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ರಾಜಧಾನಿಯ ಹೃದಯಭಾಗದಲ್ಲೇ ಕೆಲವರು ಭಾರತದ ಸಂವಿಧಾನವನ್ನು ಹಾಡುಹಗಲು ಸುಟ್ಟುಹಾಕಿದಾಗ ಯಾವ ಆಕ್ರೋಶವೂ ಕಾಣುವುದಿಲ್ಲ. ಆದರೆ ನನ್ನನ್ನು ಆ್ಯಂಟಿ-ನ್ಯಾಷನಲ್ ಎಂದು ಕರೆದು ನಿರಂತರವಾಗಿ ಮೀಡಿಯಾ ಟ್ರಯಲ್ ಏಕೆ ನಡೆಸಲಾಗುತ್ತಿದೆ? ದೇಶದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿ ದೇಶವನ್ನು ಧ್ರುವೀಕರಿಸುವವರನ್ನು, ಮಾಬ್ ಲಿಂಚಿಂಗ್ ಮಾಡುವವರನ್ನು ಗೌರವಿಸಿ, ಅವರಿಗೆ ಯಾಕೆ ಹೂಮಾಲೆ ಹಾಕಲಾಗುತ್ತಿದೆ? ಇಂಥಾ ದ್ವೇಷ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದೇಕೆ? ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ, ದಲಿತರ ಮೇಲೆ ಹಲ್ಲೆ ಮಾಡುವವರನ್ನು ಸಮಾಜ ಒಡೆಯುತ್ತಿದ್ದಾರೆಂದು ಇವರು ಟೀಕಿಸುವುದಿಲ್ಲ ಯಾಕೆ? ಜಾತಿವಾದಿ ಸಂಭಾಜಿ ಭಿಡೆಯನ್ನು ಪ್ರಧಾನಿ ಮೋದಿ ಮಹಾಪುರುಷ ಎಂದೇಕೆ ಕರೆಯುತ್ತಾರೆ? ಬಡವರ ಬದುಕನ್ನು ಬಲಿಕೊಟ್ಟು ದೇಶವನ್ನು ತುಂಡು ತುಂಡಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಮಾರುತ್ತಿರುವವರನ್ನು ದೇಶಭಕ್ತರೆಂದು ಯಾಕೆ ಕರೆಯಲಾಗುತ್ತಿದೆ? ಇವರ ಈ ಕೃತ್ಯಗಳನ್ನು ಪ್ರಶ್ನಿಸುವವರನ್ನು ‘ರಾಷ್ಟ್ರ ದ್ರೋಹಿ’ ಎಂದು ಯಾಕೆ ಬಿಂಬಿಸಲಾಗುತ್ತಿದೆ. ಇವು ಇಂದು ನಾವು ಕೇಳಲೇಬೇಕಾದ ಪ್ರಶ್ನೆಗಳು.
ಇಂತಹ ಹಲ್ಲೆಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ದೊಡ್ಡ ತಪ್ಪು ಕಲ್ಪನೆಯಷ್ಟೆ. ಗೌರಿ ಲಂಕೇಶ್ ಅವರ ಪರಿಕಲ್ಪನೆಗಳು, ರೋಹಿತ್ ವೆಮುಲಾನ ಐಡಿಯಾಗಳು ಅವರಿಲ್ಲದಿದ್ದರೂ ಜೀವಂತವಾಗಿವೆ, ಜೀವಂತವಾಗಿರುತ್ತವೆ. ಅವರು ನಮ್ಮನ್ನು ಜೈಲಿನ ಭಯ ತೋರಿಸಿ ಅಥವಾ ಗುಂಡಿನ ಭಯ ತೋರಿಸಿ ಸುಮ್ಮನಿರಿಸಲಾಗುವುದಿಲ್ಲ. ಅದನ್ನು ನಾವು ನಿನ್ನೆಯೂ ಸಾಬೀತುಪಡಿಸಿದ್ದೇವೆ. ‘ಭಯದಿಂದ ಮುಕ್ತಿ’ ಎನ್ನುವ ಕಾರ್ಯಕ್ರಮ ನನ್ನ ಮೇಲೆಯ ಹಲ್ಲೆಯ ಹೊರತಾಗಿಯೂ ಕಾನ್ಸ್ಟಿಟೂಷನ್ ಕ್ಲಬ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಶಾಂತ್ ಭೂಷಣ್, ಪ್ರೊ. ಅಪೂರ್ವಾನಂದ, ಎಸ್.ಆರ್.ದಾರಾಪುರಿ, ಮನೋಜ್ ಝಾ ಇವರೊಂದಿಗೆ ನಜೀಬ್‍ನ ತಾಯಿ ಫಾತಿಮ ನಫಿಸ್, ಅಲಿಮುದ್ದೀನ್ (ಕೇಂದ್ರ ಸಚಿವ ಜಯಂತ್ ಸಿನ್ಹ ಇತ್ತೀಚಿಗೆ ಅಲಿಮುದ್ದೀನ್ ಹಂತಕರನ್ನು ಸನ್ಮಾನಿಸಿದ್ದರು) ಅವರ ಹೆಂಡತಿ ಮರಿಯಮ್, ಜುನೈದ್ (ಕಳೆದ ವರ್ಷ ಟ್ರೇನಿನಲ್ಲಿ ಕೊಲ್ಲಲ್ಪಟ್ಟ 16 ವರ್ಷದ ಹುಡುಗ) ನ ತಾಯಿ ಫಾತಿಮ, ರಕ್ಬರ್ ಖಾನ್‍ನ ಸಹೋದರ ಅಕ್ಬರ್, ಡಾ. ಕಫೀಲ್ ಖಾನ್ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಕೇಸರಿ ಭಯೋತ್ಪಾದನೆಯಿಂದ ಆಗುತ್ತಿರುವ ಭಯ, ಗುಂಪುಹತ್ಯೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿದರು. ಇದು ನಮ್ಮ ಪ್ರತಿರೋಧದ ಚೈತನ್ಯ.
ನನಗೆ ಜೀವ ಬೆದರಿಕೆ ಮುಂದುವರೆದಿರುವುದರಿಂದ ದೆಹಲಿ ಪೊಲೀಸರು ನನಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಇಲ್ಲಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ರಕ್ಷಣೆಗಾಗಿ ಪೊಲೀಸರನ್ನು ಕೇಳಿಕೊಂಡಿದ್ದರೂ ಪೊಲೀಸರು ಸ್ಪಂದಿಸಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ನಿನ್ನೆಯ ಘಟನೆಯ ಬಳಿಕ, ದೆಹಲಿ ಪೋಲೀಸರು ಇನ್ನೂ ಯಾತಕ್ಕಾಗಿ ಕಾಯುತ್ತಿದ್ದಾರೋ? ಸೂಕ್ತ ಭದ್ರತೆಯಿಲ್ಲದೆ ನಾನು ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನನಗೆ ಭದ್ರತೆ ಒದಗಿಸುವಂತೆ ದೇಶದ ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಒತ್ತಡ ತರಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಈ ಹೇಡಿತನದ ಕೃತ್ಯದ ವಿರುದ್ಧ ಧ್ವನಿಯೆತ್ತಿ, ನ್ಯಾಯದ ಈ ಹೋರಾಟದಲ್ಲಿ ನನ್ನೊಂದಿಗೆ ನಿಂತ ಎಲ್ಲ ಅಸಂಖ್ಯಾತ ಸಂಗಾತಿಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ನಮ್ಮೆಲ್ಲರ ಈ ಸಾಮೂಹಿಕ ಹೋರಾಟದಲ್ಲಿ ನಾವು ಸಾವರ್ಕರ್ ಮತ್ತು ಗೋಡ್ಸೆಯ ಹಿಂಬಾಲಕರನ್ನು ಖಂಡಿತವಾಗಿಯೂ ಸೋಲಿಸುತ್ತೇವೆ. ದಾಲ್ಮಿಯ ಕಂಪನಿಯ ಕೆಂಪು ಕೋಟೆಯಿಂದ ನಾಳೆ ಇನ್ನಷ್ಟು ಸುಳ್ಳುಗಳು, ಸಿಹಿಲೇಪಿತ ಜುಮ್ಲಾಗಳ ಸುರಿಮಳೆಯಾಗಲಿದೆ; ಹಾಗೆಯೆ, ನೈಜ ಸ್ವಾತಂತ್ರ ಮತ್ತು ಘನತೆಗಾಗಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ನಡೆಯುತ್ತಿರುವ ಹೋರಾಟ ಕೂಡ ಇನ್ನಷ್ಟು ಹುರುಪಿನಿಂದ ಮುಂದೆ ಸಾಗಲಿದೆ.
ಜೈ ಭೀಮ್, ಲಾಲ್ ಸಲಾಮ್

– ಉಮರ್ ಖಾಲಿದ್
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...