Homeಚಳವಳಿ‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

- Advertisement -
- Advertisement -

ನನಗೆ ನಿರಂತರವಾಗಿ ಬರುತ್ತಿದ್ದ ಕೊಲೆ ಬೆದರಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಆದ ಚಿಂತಕರ ಹತ್ಯೆಗಳಿಂದಾಗಿ ನನ್ನ ಮೇಲೆಯೂ ಯಾರಾದರೂ ಗುಂಡು ಹಾರಿಸಲಿದ್ದಾರೆ ಎಂದು ನನಗೆ ಅನಿಸತೊಡಗಿತ್ತು. ಧಾಬೋಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್- ಹೀಗೆ ಹತ್ಯೆಗೀಡಾದ ಚಿಂತಕರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ ಎಂದು ಹೇಳಲು ನನಗೆ ಸಾಧ್ಯವೇ? ಇಂತಹ ಅಂತಿಮ ಸಾಧ್ಯತೆಗೆ ತಾನು ಸಿದ್ಧ ಎಂದು ಹೇಳಲು ಯಾರಿಗಾದರೂ ಸಾಧ್ಯವೇ? ಇಲ್ಲ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ಎರಡು ದಿನ ಮುಂಚೆ ಆದ ಈ ಘಟನೆಯಿಂದ ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅನ್ಯಾಯದ ವಿರುದ್ಧ ಮಾತನಾಡುವ ‘ಅಪರಾಧ’ ಕ್ಕೆ ದೇಶದ ನಾಗರಿಕರು ಜೀವದ ಬೆಲೆ ತೆರಬೇಕಾದರೆ ಈ ‘ಸ್ವಾತಂತ್ರ’ ಅಂದರೆ ಏನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ವಿಪರ್ಯಾಸವೆಂದರೆ, ‘ಭಯದಿಂದ ಮುಕ್ತಿ’ (ಫ್ರೀಡಮ್ ಫ್ರಮ್ ಫಿಯರ್) ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾನ್ಸ್ಟಿಟೂಷನ್ ಕ್ಲಬ್ ಎದುರುಗಡೆಯೇ ಅಪರಿಚಿತ ಬಂದೂಕುಧಾರಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೊಲ್ಲಲೆತ್ನಿಸಿದ.
ನೆನಪಿಡಿ, ನನ್ನ ಮೇಲೆ ಹಲ್ಲೆಯಾಗಿದ್ದು ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ‘ಹೈ ಸೆಕ್ಯುರಿಟಿ’ ವಲಯದಲ್ಲಿ, ಅದೂ ಹಾಡುಹಗಲಿನಲ್ಲಿ. ಇಂತಹ ಕೃತ್ಯವನ್ನು ಎಸಗುವ ಧೈರ್ಯ ಆ ವ್ಯಕ್ತಿಗೆ ಇತ್ತೆಂದರೆ ಅವನಿಗೆ ತಾನೇನು ಮಾಡಿದರೂ ತನ್ನನ್ನು ಯಾರೂ ಮುಟ್ಟಲಾರರು ಎನ್ನುವ ಭಾವನೆ ಇರದೇ ಇದ್ದರೆ ಅವನು ಈ ಕೃತ್ಯ ಎಸಗುತ್ತಿರಲಿಲ್ಲ. ಈಗಿನ ಆಡಳಿತ ಇಂಥವರಿಗೆ ಅಂಥ ಸುರಕ್ಷತೆಯ ಭಾವನೆಯನ್ನು ನೀಡುತ್ತಿದೆ. ಆ ವ್ಯಕ್ತಿ ಯಾರು, ಅವನ ಹಿಂದೆ ಇನ್ಯಾರೆಲ್ಲ ಇದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ಆದರೆ, ನಿನ್ನೆ ನನಗೇನಾದರೂ ಆಗಿದ್ದರೆ, ಅಥವಾ ನಾಳೆ ಮತ್ತೇನಾದರೂ ಆದಲ್ಲಿ ಆ ‘ಅಪರಿಚಿತ ಬಂದೂಕುಧಾರಿ’ಯನ್ನಷ್ಟೇ ದೂಷಿಸಬೇಡಿ. ನಿಜವಾದ ಅಪರಾಧಿಗಳು ಅಧಿಕಾರದ ಸ್ಥಾನದಲ್ಲಿ ಕುಳಿತು ಇಂತಹ ಕೊಲೆಗಡುಕರನ್ನು, ಗುಂಪುಗೂಡಿ ಹತ್ಯೆ ಮಾಡುತ್ತಿರುವವರನ್ನು ರಕ್ಷಿಸುತ್ತ್ತಿರುವವರು, ದೇಶದಾದ್ಯಂತ ದ್ವೇಷದ, ಹಿಂಸೆಯ ಮತ್ತು ಭಯದ ವಾತಾವರಣ ಉಂಟುಮಾಡುತ್ತಿರುವವರು. ನಿಜವಾದ ಅಪರಾಧಿಗಳು, ಆಡಳಿತ ಪಕ್ಷದ ವಕ್ತಾರರು ಮತ್ತು ಪ್ರೈಮ್ ಟೈಮ್‍ನ ನಿರೂಪಕರು ಹಾಗೂ ವಿನಾಕಾರಣ ನನ್ನ ವಿರುದ್ಧ ವಿಷ ಕಾರುತ್ತಾ, ಸುಳ್ಳುಗಳ ಕಂತೆ ಹೆಣೆದು ನನ್ನನ್ನು ಒಬ್ಬ ‘ರಾಷ್ಟ್ರ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಮುಗಿಸಲು ಪ್ರಚೋದಿಸಿದ ಟಿವಿ ಚಾನೆಲ್‍ಗಳು ನಿಜವಾದ ಅಪರಾಧಿಗಳು. ಇವರ ಇಂಥಾ ಹೇಯ ಕೃತ್ಯಗಳಿಂದಾಗಿ ನನ್ನ ಬದುಕು ಇಂಥ ದಾರುಣ ಸ್ಥಿತಿಗೆ ಬಂದುನಿಂತಿದೆ.
ಹಲ್ಲೆ ನಡೆದು ಒಂದು ದಿನವಾದ ನಂತರ, ಸೆಕ್ಷನ್ 307 ಮತ್ತು ಆಮ್ರ್ಸ್ ಅಕ್ಟ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡ ನಂತರವೂ ಮಧ್ಯಪ್ರದೇಶದ ಬಿಜೆಪಿ ಲೋಕಸಭೆಯ ಸದಸ್ಯೆ ಮೀನಾಕ್ಷಿ ಲೇಖಿ ಮತ್ತು ಜಾಲತಾಣದಲ್ಲಿರುವ ಇತರ ಕೇಸರಿ ಪಡೆಯವರು ನನ್ನ ಮೇಲೆ ಹಲ್ಲೆ ನಡೆದೇಯಿಲ್ಲವೆಂದು ಯಾಕೆ ವಾದಿಸುತ್ತಿದ್ದಾರೆ? ಇನ್ನೂ ಮುಂದೆ ಹೋಗಿ ನಾನೇ ಈ ಹಲ್ಲೆಯೆನ್ನು ಸಂಯೋಜಿಸಿದ್ದು ಎಂದು ಯಾಕೆ ಸೂಚಿಸುತ್ತಿದ್ದಾರೆ? ನನ್ನ ಮೇಲಿನ ಹಲ್ಲೆಗೆ ಕಾರಣರೆಂದು ನಾನು ಯಾರ ಮೇಲೆಯೂ ಬೆರಳು ಮಾಡಿ ತೋರಿಸಿಲ್ಲವಾದರೂ ಇವರ್ಯಾಕೆ ಈ ಘಟನೆಯ ನಿರೂಪಣೆಯನ್ನು ತಿರುಚಲು ಕಾತರರಾಗಿದ್ದಾರೆ, ಹತಾಶರಾಗಿದ್ದಾರೆ? ಇವರ ಈ ಹತಾಶೆಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಕೊಲೆ ಯತ್ನವನ್ನು ಇವರೇ ಮಾಡಿದ್ದು ಎಂದೇ? ಈ ಘಟನೆಯನ್ನು ಗೌರಿ ಲಂಕೇಶ್ ಅವರ ಹತ್ಯೆಯ ಉದಾಹರಣೆಯೊಂದಿಗೆ ನೋಡಬೇಕು, ಆ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿರುವ ಆರೋಪಿಗಳನ್ನು ನೋಡಿದರೆ ಹಿಂದುತ್ವ ಹೆಸರಿನ ಭಯೋತ್ಪಾದನೆಯ ಗುಂಪುಗಳ ಕೈವಾಡ ಸ್ಪಷ್ಟವಾಗುತ್ತಿದೆ. ಹಾಗಾಗಿ, ಈ ‘ಅಪರಿಚಿತ ಬಂದೂಕುಧಾರಿ’ಯ ಹಿಂದೆ, ಈ ಭಯೋತ್ಪಾದನಾ ಕೃತ್ಯದ ಹಿಂದಿರುವ ನಿಜವಾದ ಕೈಗಳು ಯಾವುವು ಎಂದು ಗುರುತಿಸುವುದು ಬಹಳ ಮುಖ್ಯ.
ನನ್ನ ವಿರುದ್ಧದ ಈ ದ್ವೇಷಭರಿತ ಪ್ರಚಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಅಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಬರೀ ಸುಳ್ಳುಗಳಿವೆ. ಅಲ್ಲಿ ಆರೋಪ ಪಟ್ಟಿಯಿಲ್ಲ (ಚಾರ್ಜ್‍ಶೀಟ್); ಬರೀ ಮೀಡಿಯಾ ಟ್ರಯಲ್ ಇದೆ. ಅಲ್ಲಿ ವಾದ ಮಾಡುವವರಿಲ್ಲ, ಬರೀ ಟ್ರಾಲ್ ಮಾಡುವವರಿದ್ದಾರೆ. ಅಲ್ಲಿ ಚರ್ಚೆಯಿಲ್ಲ, ಬರೀ ಬೆದರಿಕೆಗಳಿವೆ. ಇದೆಲ್ಲದರ ಅಂತಿಮ ಪರಿಣಾಮ ಇಂದು ಬಂದೂಕಿನ ದಾಳಿಯ ಹಂತಕ್ಕೆ ಬಂದಿದೆ. ‘ತುಕ್ಡೆ ತುಕ್ಡೆ’ (ತುಂಡು ತುಂಡು) ಎನ್ನುವ ಪದವನ್ನು ನನ್ನ ಹೆಸರಿನೊಂದಿಗೆ ಯಾಕೆ ಅಂಟಿಸಲಾಗಿದೆ? ಯಾವುದೋ ಒಂದು ಸಿನಿಮಾ ಬಿಡುಗಡೆಯಾದರೆ ದೇಶ ‘ತುಕ್ಡೆ ತುಕ್ಡೆ’ ಆಗುತ್ತದೆಂದು ಬೊಬ್ಬೆ ಹಾಕುವವರನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ರಾಜಧಾನಿಯ ಹೃದಯಭಾಗದಲ್ಲೇ ಕೆಲವರು ಭಾರತದ ಸಂವಿಧಾನವನ್ನು ಹಾಡುಹಗಲು ಸುಟ್ಟುಹಾಕಿದಾಗ ಯಾವ ಆಕ್ರೋಶವೂ ಕಾಣುವುದಿಲ್ಲ. ಆದರೆ ನನ್ನನ್ನು ಆ್ಯಂಟಿ-ನ್ಯಾಷನಲ್ ಎಂದು ಕರೆದು ನಿರಂತರವಾಗಿ ಮೀಡಿಯಾ ಟ್ರಯಲ್ ಏಕೆ ನಡೆಸಲಾಗುತ್ತಿದೆ? ದೇಶದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿ ದೇಶವನ್ನು ಧ್ರುವೀಕರಿಸುವವರನ್ನು, ಮಾಬ್ ಲಿಂಚಿಂಗ್ ಮಾಡುವವರನ್ನು ಗೌರವಿಸಿ, ಅವರಿಗೆ ಯಾಕೆ ಹೂಮಾಲೆ ಹಾಕಲಾಗುತ್ತಿದೆ? ಇಂಥಾ ದ್ವೇಷ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದೇಕೆ? ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ, ದಲಿತರ ಮೇಲೆ ಹಲ್ಲೆ ಮಾಡುವವರನ್ನು ಸಮಾಜ ಒಡೆಯುತ್ತಿದ್ದಾರೆಂದು ಇವರು ಟೀಕಿಸುವುದಿಲ್ಲ ಯಾಕೆ? ಜಾತಿವಾದಿ ಸಂಭಾಜಿ ಭಿಡೆಯನ್ನು ಪ್ರಧಾನಿ ಮೋದಿ ಮಹಾಪುರುಷ ಎಂದೇಕೆ ಕರೆಯುತ್ತಾರೆ? ಬಡವರ ಬದುಕನ್ನು ಬಲಿಕೊಟ್ಟು ದೇಶವನ್ನು ತುಂಡು ತುಂಡಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಮಾರುತ್ತಿರುವವರನ್ನು ದೇಶಭಕ್ತರೆಂದು ಯಾಕೆ ಕರೆಯಲಾಗುತ್ತಿದೆ? ಇವರ ಈ ಕೃತ್ಯಗಳನ್ನು ಪ್ರಶ್ನಿಸುವವರನ್ನು ‘ರಾಷ್ಟ್ರ ದ್ರೋಹಿ’ ಎಂದು ಯಾಕೆ ಬಿಂಬಿಸಲಾಗುತ್ತಿದೆ. ಇವು ಇಂದು ನಾವು ಕೇಳಲೇಬೇಕಾದ ಪ್ರಶ್ನೆಗಳು.
ಇಂತಹ ಹಲ್ಲೆಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ದೊಡ್ಡ ತಪ್ಪು ಕಲ್ಪನೆಯಷ್ಟೆ. ಗೌರಿ ಲಂಕೇಶ್ ಅವರ ಪರಿಕಲ್ಪನೆಗಳು, ರೋಹಿತ್ ವೆಮುಲಾನ ಐಡಿಯಾಗಳು ಅವರಿಲ್ಲದಿದ್ದರೂ ಜೀವಂತವಾಗಿವೆ, ಜೀವಂತವಾಗಿರುತ್ತವೆ. ಅವರು ನಮ್ಮನ್ನು ಜೈಲಿನ ಭಯ ತೋರಿಸಿ ಅಥವಾ ಗುಂಡಿನ ಭಯ ತೋರಿಸಿ ಸುಮ್ಮನಿರಿಸಲಾಗುವುದಿಲ್ಲ. ಅದನ್ನು ನಾವು ನಿನ್ನೆಯೂ ಸಾಬೀತುಪಡಿಸಿದ್ದೇವೆ. ‘ಭಯದಿಂದ ಮುಕ್ತಿ’ ಎನ್ನುವ ಕಾರ್ಯಕ್ರಮ ನನ್ನ ಮೇಲೆಯ ಹಲ್ಲೆಯ ಹೊರತಾಗಿಯೂ ಕಾನ್ಸ್ಟಿಟೂಷನ್ ಕ್ಲಬ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಶಾಂತ್ ಭೂಷಣ್, ಪ್ರೊ. ಅಪೂರ್ವಾನಂದ, ಎಸ್.ಆರ್.ದಾರಾಪುರಿ, ಮನೋಜ್ ಝಾ ಇವರೊಂದಿಗೆ ನಜೀಬ್‍ನ ತಾಯಿ ಫಾತಿಮ ನಫಿಸ್, ಅಲಿಮುದ್ದೀನ್ (ಕೇಂದ್ರ ಸಚಿವ ಜಯಂತ್ ಸಿನ್ಹ ಇತ್ತೀಚಿಗೆ ಅಲಿಮುದ್ದೀನ್ ಹಂತಕರನ್ನು ಸನ್ಮಾನಿಸಿದ್ದರು) ಅವರ ಹೆಂಡತಿ ಮರಿಯಮ್, ಜುನೈದ್ (ಕಳೆದ ವರ್ಷ ಟ್ರೇನಿನಲ್ಲಿ ಕೊಲ್ಲಲ್ಪಟ್ಟ 16 ವರ್ಷದ ಹುಡುಗ) ನ ತಾಯಿ ಫಾತಿಮ, ರಕ್ಬರ್ ಖಾನ್‍ನ ಸಹೋದರ ಅಕ್ಬರ್, ಡಾ. ಕಫೀಲ್ ಖಾನ್ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಕೇಸರಿ ಭಯೋತ್ಪಾದನೆಯಿಂದ ಆಗುತ್ತಿರುವ ಭಯ, ಗುಂಪುಹತ್ಯೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿದರು. ಇದು ನಮ್ಮ ಪ್ರತಿರೋಧದ ಚೈತನ್ಯ.
ನನಗೆ ಜೀವ ಬೆದರಿಕೆ ಮುಂದುವರೆದಿರುವುದರಿಂದ ದೆಹಲಿ ಪೊಲೀಸರು ನನಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಇಲ್ಲಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ರಕ್ಷಣೆಗಾಗಿ ಪೊಲೀಸರನ್ನು ಕೇಳಿಕೊಂಡಿದ್ದರೂ ಪೊಲೀಸರು ಸ್ಪಂದಿಸಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ನಿನ್ನೆಯ ಘಟನೆಯ ಬಳಿಕ, ದೆಹಲಿ ಪೋಲೀಸರು ಇನ್ನೂ ಯಾತಕ್ಕಾಗಿ ಕಾಯುತ್ತಿದ್ದಾರೋ? ಸೂಕ್ತ ಭದ್ರತೆಯಿಲ್ಲದೆ ನಾನು ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನನಗೆ ಭದ್ರತೆ ಒದಗಿಸುವಂತೆ ದೇಶದ ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಒತ್ತಡ ತರಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಈ ಹೇಡಿತನದ ಕೃತ್ಯದ ವಿರುದ್ಧ ಧ್ವನಿಯೆತ್ತಿ, ನ್ಯಾಯದ ಈ ಹೋರಾಟದಲ್ಲಿ ನನ್ನೊಂದಿಗೆ ನಿಂತ ಎಲ್ಲ ಅಸಂಖ್ಯಾತ ಸಂಗಾತಿಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ನಮ್ಮೆಲ್ಲರ ಈ ಸಾಮೂಹಿಕ ಹೋರಾಟದಲ್ಲಿ ನಾವು ಸಾವರ್ಕರ್ ಮತ್ತು ಗೋಡ್ಸೆಯ ಹಿಂಬಾಲಕರನ್ನು ಖಂಡಿತವಾಗಿಯೂ ಸೋಲಿಸುತ್ತೇವೆ. ದಾಲ್ಮಿಯ ಕಂಪನಿಯ ಕೆಂಪು ಕೋಟೆಯಿಂದ ನಾಳೆ ಇನ್ನಷ್ಟು ಸುಳ್ಳುಗಳು, ಸಿಹಿಲೇಪಿತ ಜುಮ್ಲಾಗಳ ಸುರಿಮಳೆಯಾಗಲಿದೆ; ಹಾಗೆಯೆ, ನೈಜ ಸ್ವಾತಂತ್ರ ಮತ್ತು ಘನತೆಗಾಗಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ನಡೆಯುತ್ತಿರುವ ಹೋರಾಟ ಕೂಡ ಇನ್ನಷ್ಟು ಹುರುಪಿನಿಂದ ಮುಂದೆ ಸಾಗಲಿದೆ.
ಜೈ ಭೀಮ್, ಲಾಲ್ ಸಲಾಮ್

– ಉಮರ್ ಖಾಲಿದ್
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...