Homeಮುಖಪುಟಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

- Advertisement -
- Advertisement -

ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಬರುವ ಮೊದಲೆ ಬಿಜೆಪಿ ಈ ಬಾರಿ ಮತ್ತೆ ಸರ್ಕಾರ ರಚಿಸುವುದಿಲ್ಲ. ಸೋಲನುಭವಿಸಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಈ ಬಗ್ಗೆ ದಿ ವೈರ್‌ಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಚುನಾವಣೆ ನಡೆದಿರುವ ಎರಡು ಹಂತಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದು, ಈ ಕುರಿತು ಸಂಘದ ಉನ್ನತ ಪದಾಧಿಕಾರಿಗಳೊಂದಿಗೆ ವರ್ಚುವಲ್ ಕಾನ್ಫರೆನ್ಸ್ ನಡೆಸಿದ್ದಾರೆ.

ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ’ಭಾರತೀಯ ಜನತಾ ಪಕ್ಷವು ಸೋಲುವುದು ಖಚಿತ ಮತ್ತು ಹೊಸ ಸರ್ಕಾರವನ್ನು ರಚಿಸುವುದಿಲ್ಲ. ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಆರಾಮವಾಗಿ 202 ಸ್ಥಾನಗಳನ್ನು ದಾಟುತ್ತವೆ ಮತ್ತು ತಮ್ಮದೇ ಆದ ಬಹುಮತವನ್ನು ಪಡೆಯುತ್ತವೆ. ಬೇರೆ ಪಕ್ಷಗಳ ಬೆಂಬಲದ ಅಗತ್ಯವಿಲ್ಲದೆ ಅವರು ಸರ್ಕಾರ ರಚಿಸುತ್ತಾರೆ” ಎಂದಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಮಾಜಿ ಉಪಕುಲಪತಿಯೂ ಆಗಿರುವ ನಜೀಬ್ ಜಂಗ್ ಯುಪಿಯಲ್ಲಿ ಬಿಜೆಪಿ ಸೋಲಿನತ್ತ ಸಾಗುತ್ತಿರುವುದಕ್ಕೆ ನಾಲ್ಕು ನಿರ್ಣಾಯಕ ಕಾರಣಗಳನ್ನು ಗುರುತಿಸಿದ್ದಾರೆ.

ಇದನ್ನೂ ಓದಿ: ‘ನಾನು ಮತ್ತೆ ಗೆದ್ದರೆ ಮುಸ್ಲಿಮರು ತಿಲಕ ಧರಿಸುವರು’- ಯುಪಿ ಬಿಜೆಪಿ ಶಾಸಕನಿಂದ ಕೋಮು ಪ್ರಚೋದನೆ

ಮೊದಲನೆಯದು ಈ ಬಾರಿ ನರೇಂದ್ರ ಮೋದಿ ಅವರು ಬಿಜೆಪಿ ಪ್ರಚಾರದ ಮುಖವಾಗಿಲ್ಲ, ಅವರ ಸ್ಥಾನದಲ್ಲಿ ಯೋಗಿ ಆದಿತ್ಯನಾಥ್  ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಎರಡನೇಯದು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಅಸಮಾಧಾನ ಮತ್ತು ಕೋಪ. ಮೂರನೇಯದು ಬಿಡಾಡಿ ಹಸುಗಳ ವ್ಯಾಪಕ ಸಮಸ್ಯೆ ಮತ್ತು ಕೊನೆಯದಾಗಿ ನಿರುದ್ಯೋಗ.

ನಿರುದ್ಯೋಗ ಬಹುಶಃ ಇತರ ರಾಜ್ಯಗಳಿಗಿಂತ ಯುಪಿಯಲ್ಲಿ ಹೆಚ್ಚಾಗಿದ್ದು, ವಿಶೇಷವಾಗಿ ಯುವ ಜನತೆಯ ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಅಸಮರ್ಥ ನಿರ್ವಹಣೆ ಮತ್ತು ಅದು ಸೃಷ್ಟಿಸಿದ ಆಘಾತವನ್ನು ಇಲ್ಲಿನ ಜನ ಇನ್ನು  ಮರೆತಿಲ್ಲ ಎಂದಿದ್ದಾರೆ.

ಯೋಗಿ ಆದಿತ್ಯನಾಥ್‌ಗೆ ವ್ಯತಿರಿಕ್ತವಾಗಿ, ಅಖಿಲೇಶ್ ಯಾದವ್ ಅವರು ಹಿಂದುತ್ವದ ಸವಾಲನ್ನು ನಿಭಾಯಿಸಿದ್ದಾರೆ. ಅವರು ಯಾದವ್ ಒಬಿಸಿಗಳನ್ನು ಮಾತ್ರವಲ್ಲದೆ ಯಾದವೇತರ ಒಬಿಸಿಗಳನ್ನು ಆಕರ್ಷಿಸಿದ್ದಾರೆ. ಇದರಿಂದ ಬಿಜೆಪಿಯಿಂದ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳಿಗೆ ಹಲವರು ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ 80% ಅಥವಾ ಹೆಚ್ಚಿನ ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಮತ ಹಾಕುತ್ತಾರೆ (2017 ರಲ್ಲಿ 58%). ಮತ್ತೊಂದೆಡೆ, ಬ್ರಾಹ್ಮಣರು ಅಧಿಕ ಸಂಖ್ಯೆಯಲ್ಲಿ ಬಿಜೆಪಿಯಿಂದ ದೂರ ಸರಿದಿದ್ದಾರೆ. ಬಹುಶಃ ಕಾಂಗ್ರೆಸ್‌ಗೆ ಅವರು ಮತಹಾಕಲಿದ್ದು, ಅವರು ಸಮಾಜವಾದಿ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ಕಡಿಮೆ. ಇದು ಬಿಜೆಪಿಯನ್ನು ದುರ್ಬಲಗೊಳಿಸುವುದು ನಿಶ್ಚಿತ ಎಂದು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಯುಪಿ ಕೇರಳವಾದರೆ ಅತ್ಯುತ್ತಮ ಶಿಕ್ಷಣ, ಆರೋಗ್ಯ, ಜೀವನಮಟ್ಟ ಸಿಗಲಿದೆ: ಆದಿತ್ಯನಾಥ್‌ಗೆ ಪಿಣರಾಯಿ ತಿರುಗೇಟು

ಇತ್ತ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉತ್ತರ ಪ್ರದೇಶದಲ್ಲಿ ನಡೆದಿರುವ ಎರಡನೇ ಹಂತದ ಮತದಾನದ ನಂತರ,  “ಬಿಜೆಪಿ ಮೊದಲ ಬಾರಿಗೆ ಎರಡು ಹಂತಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ” ಎಂದು ಸಂಘದ ಉನ್ನತ ಪದಾಧಿಕಾರಿಗಳೊಂದಿಗೆ ವರ್ಚುವಲ್ ಕಾನ್ಫರೆನ್ಸ್ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲು ತಿಳಿಸಿದ್ದಾರೆ.

“ಮೊದಲ ಹಂತದಲ್ಲಿ ಬಿಜೆಪಿ ಕೇವಲ 17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಎರಡನೇ ಹಂತದಲ್ಲಿ ಪಕ್ಷವು ಅಷ್ಟೇ ಕೆಟ್ಟದ್ದನ್ನು ಮಾಡಿದೆ” ಎಂದು ಭಾಗವತ್ ಅವರನ್ನು ಉಲ್ಲೇಖಿಸಿ ಆರ್‌ಎಸ್‌ಎಸ್ ಹಿರಿಯ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ.

ಯುಪಿಯಲ್ಲಿ ಫೆಬ್ರವರಿ 10 ರಂದು ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 58 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 2017 ರಲ್ಲಿ ಬಿಜೆಪಿ ಈ ಪೈಕಿ 53 ಸ್ಥಾನಗಳನ್ನು ಗೆದ್ದಿದ್ದರೆ, ಆರೆಸ್ಸೆಸ್ ಐಬಿ ಇನ್‌ಪುಟ್ ಆಧರಿಸಿ ಈ ಬಾರಿ 17 ಸ್ಥಾನಗಳನ್ನು ಗೆಲ್ಲಲಿದೆ. ಫೆಬ್ರವರಿ 14 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಕನಿಷ್ಠ 55 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 2017ರಲ್ಲಿ ಬಿಜೆಪಿ ಈ ಪೈಕಿ 38 ಸ್ಥಾನಗಳನ್ನು ಗೆದ್ದಿತ್ತು ಮತ್ತು ಈ ಬಾರಿ ಅರ್ಧದಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಆರ್‌ಎಸ್‌ಎಸ್‌ ಲೆಕ್ಕಾಚಾರ.

ಸಂಘದ ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರ ಮಾಡಲು ಮತ್ತು ಬಿಜೆಪಿಗೆ ಮತ ಹಾಕಲು ಹಿಂದೂಗಳನ್ನು ಪ್ರೇರೇಪಿಸಲು ಸಭೆಯಲ್ಲಿ ಕೇಳಿಕೊಳ್ಳಲಾಗಿದೆ. “ಇದು ತುಂಬಾ ಸ್ಪಷ್ಟವಾಗಿದೆ. ಯೋಗಿ 2022ರ ಚುನಾವಣೆಯಲ್ಲಿ ಸೋತರೆ, 2024ರಲ್ಲಿ ಮೋದಿ ಸೋಲುವುದು ನಿಶ್ಚಿತ” ಎಂದು ಸಂಘದ ಪ್ರಚಾರಕ ಹೇಳಿದ್ದಾರೆ.

ಒಟ್ಟಾರೆ 2017 ರಲ್ಲಿ ಗೆಲುವಿನ ತುತ್ತತುದಿಗೆ ಏರಿದ್ದ ಬಿಜೆಪಿ ಈ ಬಾರಿ ಕೆಳಗೆ ಬೀಳುವುದು ಖಚಿತ ಎನ್ನುವ ಮಾತುಗಳು ಕೇಳಿ ಬಂದಿವೆ. ವಿವಾದಿತ ಕೃಷಿ ಕಾನೂನುಗಳ ವಿವಾದ, ಲಖಿಂಪುರ್‌ ಖೇರಿ ರೈತರ ಹತ್ಯಾಕಾಂಡ, ಬಿಡಾಡಿ ದನಗಳ ಹಾವಳಿ ಮತ್ತು ನಿರುದ್ಯೋಗ ಯುಪಿಯ ಬಿಜೆಪಿ ಸರ್ಕಾರಕ್ಕೆ ಕಗ್ಗಂಟಾಗಿದೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ಯುಪಿ: ಚುನಾವಣಾ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...