Homeಕರ್ನಾಟಕಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

ಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

- Advertisement -
- Advertisement -

| ಶುದ್ಧೋಧನ |

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಶಿರಸಿಯ ‘ಸು’ಪ್ರಸಿದ್ಧ ಸ್ವಯಂಘೋಷಿತ ಪರಿಸರ ಪರಾಕ್ರಮಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ-ಮಂಡಳಿ ಹುದ್ದೆ ದಕ್ಕುತ್ತಿದೆ. ಅಂಥದೊಂದು ಗದ್ದುಗೆ ಏರುವ ಯಾವ ಯೋಗ್ಯತೆ ಇಲ್ಲದಿದ್ದರೂ ಆಶೀಸರ ಮಾಣಿಗೆ ಯೋಗ ಖುಲಾಯಿಸುತ್ತಿರುವುದು ಪಕ್ಕಾಚೆಡ್ಡಿ ಚಮತ್ಕಾರದಿಂದಷ್ಟೇ! ತಾನೊಬ್ಬ ಹುಟ್ಟಾ ಸಂಘಿ ಸರದಾರನೆಂತಲೂ ಪರಿಸರ ಬಚಾವಾಗಿರುವುದೇ ತನ್ನ ಮೂರೂವರೆ ದಶಕದ ಹಗಲಿರುಳಿನ ಹಾರಾಟದಿಂದೆಂತಲೂ ಎಂಬಂತೆ ಆರೆಸ್ಸೆಸ್‍ನ ಆಯಕಟ್ಟಿನ ರಿಂಗ್‍ಮಾಸ್ಟರ್‍ಗಳೆದುರು ಅದ್ಭುತ ಪ್ರದರ್ಶನ ಕೊಡಬಲ್ಲ ಆಶೀಸರ್ ಗೂಟದ ಕಾರು ಪಟಾಯಿಸುತ್ತಿದ್ದಾನೆ. ಬಿಜೆಪಿ-ಆರೆಸ್ಸೆಸ್‍ನ ಬ್ರಾಹ್ಮಣ ಲಾಬಿ 2008ರಲ್ಲಿ ಆಶೀಸರ್‍ಗೆ ಬಳುವಳಿಯಾಗಿ ಕೊಟ್ಟಿತ್ತು. ಈಗ ಅದೇ ಆಶೀಸರ್‍ಗೆ ಅದೇ ಕೇಸರಿ ಜನಿವಾರ ಕೂಟ ಜೀವ ವೈವಿಧ್ಯ ಮಂಡಳಿಯಲ್ಲಿ “ಪುನರ್ವಸತಿ” ಕಲ್ಪಿಸಿದೆ!

ಇದು ಉತ್ತರ ಕನ್ನಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಿಚಾಯಿಸುತ್ತಿದೆ. ಸಹಜವಾಗೇ ಪಕ್ಷಕಟ್ಟಿದ ಹಿಂದುಳಿದ ವರ್ಗದ ಎರಡನೇ ಸ್ತರದ ಮರಿಮುಖಂಡರು ಕೆರಳಿದ್ದಾರೆ; ಪಕ್ಷಕ್ಕಾಗಿ ತಮ್ಮನ್ನು ದುಡಿಸಿಕೊಂಡು ಮಹತ್ವದ ಲಾಭದ ಸ್ಥಾನ-ಮಾನವೆಲ್ಲ ಬ್ರಾಹ್ಮಣರಿಗೆ ಕೊಡಬೇಕಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಎಂಪಿ ಅನಂತ್ಮಾಣಿ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಮೀಸಲಿಡಲ್ಪಟ್ಟಿರುವ “ಅನರ್ಹ” ಶಿವರಾಮ ಹೆಬ್ಬಾರ್ ಮತ್ತು ನಿಗಮ-ಮಂಡಳಿಗೆ ವಕ್ಕರಿಸಿರುವ ಆಶೀಸರ ಎಲ್ಲರೂ ಹವ್ಯಕ ಬ್ರಾಹ್ಮಣ ಸಮುದಾಯದವರು. ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಂಕಣಿ ಬ್ರಾಹ್ಮಣ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗ್ಡೆಗೆ ಕೊಡಲು ರಹಸ್ಯ ತಯಾರಿ ಮತ್ತೊಂದೆಡೆ ನಡೆದಿದೆ. ಒಟ್ಟಿನಲ್ಲಿ ಬ್ರಾಹ್ಮಣರ ಹಿಂದೂತ್ವದ ಅಧಿಕಾರ ರಾಜಕಾರಣದ ಯುದ್ಧದಲ್ಲಿ ದೀವರು, ಮೀನುಗಾರರು, ಹಾಲಕ್ಕಿ ಒಕ್ಕಲಿಗರೇ ಮುಂದಾದ ಶೂದ್ರರು ಬರೀ ಕಾಲಾಳುಗಳು ಮಾತ್ರ.

ಶೂದ್ರರ ಕೈಲಿ ಲಾಠಿಕೊಟ್ಟು ಶೀಟಿ ಊದುತ್ತಾ ಬೇಳೆ ಬೇಯಿಸಿಕೊಳ್ಳುವ ಜನಿವಾರ ಪಡೆಯ ತೆರೆಮರೆ ತಂತ್ರಗಾರರಲ್ಲಿ ಆಶೀಸರನೂ ಒಬ್ಬನೆಂಬುದಕ್ಕೆ ಅನುಮಾನವೇ ಇಲ್ಲ. ಸ್ವಜಾತಿ ಅನಂತ್ಮಾಣಿಗೇ ಟಾಂಗುಕೊಟ್ಟು ಎಂಪಿಗಿರಿ ಟಿಕೆಟ್ ಪಡೆಯಲು ಈತ ಚೆಡ್ಡಿ ಬಿಡಾರದಲ್ಲಿ ವಶೀಲಿ ಕಾರ್ಯಾಚರಣೆ ಮಾಡಿದ್ದೂ ಇದೆ. ಹಾಗಂತ ಉತ್ತರ ಕನ್ನಡ ಬಿಜೆಪಿಗೆ ಈತನಿಂದ ನಯಾಪೈಸೆ ಫಾಯ್ದೆಯಿಲ್ಲ. ಬ್ರಾಹ್ಮಣೇತರ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸದ್ದಿಲ್ಲದೆ ಸೇರಿಕೊಳ್ಳುವ ಘಟಸರ್ಪವೆಂಬ ಚರ್ಚೆ ಸ್ಥಳೀಯ ಬಿಜೆಪಿಯಲ್ಲೀಗ ಜೋರಾಗಿದೆ. ಈತನ ಪರಿಸರ ಧೋರಣೆಯೂ ಇಬ್ಬಂದಿ ಸ್ವಜಾತಿ ಅಡಿಕೆ ತೋಟಿಗರಿಗೆ ಸರ್ಕಾರಿ ಯೋಜನೆಗಳಿಂದ ತೊಂದರೆ ಆಗುತ್ತದೆಂದಾಗ ಆಶೀಸರ್‍ನಲ್ಲಿ ಅತ್ಯುಗ್ರ ಪರಿಸರ ಕಾಳಜಿ ಶುರುಹೊಡೆಯುತ್ತದೆ! ಉತ್ತರ ಕನ್ನಡದ ಅಭಿವೃದ್ಧಿಯ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆಶೀಸರ್ ನೇತೃತ್ವದ ಪರಿಸರವಾಧಿ ತಂಡ ಕಲ್ಲು ಹಾಕುತ್ತಲೇ ಬಂದಿದೆ!!

ಈ ರೈಲು ಹಳಿಯಿಂದ ಅರಣ್ಯ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ, ಪರಿಸರ ಸರ್ವನಾಶವಾಗುತ್ತದೆಂದು ಬೊಬ್ಬಿರಿವ ಆಶೀಸರ್‍ಗೆ ತನ್ನ ಸಮುದಾಯಕ್ಕೆ ಅನುಕೂಲವಾಗುವ ಹಾವೇರಿ-ಶಿರಸಿ ರೈಲು ಮಾರ್ಗದ ಪರಿಸರ ಹಾನಿ ಗೌಣ! ಕುಮಟಾ-ಶಿರಸಿ ರಸ್ತೆ ಅಗಲಗೊಂಡು ರಾಷ್ಟ್ರೀಯ ಹೆದ್ದಾರಿಯಾದರೆ ಜೀವ ವೈವಿಧ್ಯಕ್ಕೆ ಧಕ್ಕೆ ಎಂಬ ವಾದ ಈ ಪರಿಸರ “ತಜ್ಞ”ನದು. ಆನರ ಬಹುಬೇಡಿಕೆಯ ಜಿಲ್ಲೆಯ ಮಹತ್ವದ ಯೋಜನೆಯಿದು. ಆಶೀಸರ್ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗುತ್ತಲೇ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಎಳ್ಳು-ನೀರು ಬಿಟ್ಟಂತಾಗಿದೆ!! ಪರಿಸರ ಸಂರಕ್ಷಣೆ ಕುರಿತು ಉದ್ದುದ್ದ ಭಾಷಣ ಬಿಗಿಯುವ ಈ ಪರಿಸರ ದುರಂಧರ ಎಕರೆಗಟ್ಟಲೆ ಅರಣ್ಯ ಕಬಳಿಸಿ ಸಮೃದ್ಧ ಅಡಿಕೆ ತೋಟ ಮಾಡಿಕೊಂಡಿರುವ ಅಪವಾದಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!

ಕಾಡು ನುಂಗಿರುವ “ಕ್ಯಾತಿ”ಯ ಆಶೀಸರ ಸ್ವರ್ಣವಲ್ಲಿ ಮಠದ ಹುಸಿ ಹಸಿರು ಸ್ವಾಮಿಯ ಆಸ್ಥಾನದ ಪರಿಸರ ಪಂಡಿತ. ಕಾವಿ-ಚೆಡ್ಡಿ ಪ್ರಭಾವದಿಂದ ರಾಜ್ಯ ಬಿಜೆಪಿಯ ಪರಮೋಚ್ಚ ನಾಯಕ ಸಂತೋಷ್‍ಜೀ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ಆಶೀಸರ್ ಮಾಣಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಪಡೆಯುವುದಕ್ಕೆ ತ್ರಾಸೇನೂ ಆಗಿಲ್ಲ! ಆಶೀಸರ್ ನೇಮಕಾತಿ ಘೋಷಣೆ ಆಗುತ್ತಲೇ ಉತ್ತರ ಕನ್ನಡ ಬಿಜೆಪಿ ಬಣ ಬಡಿದಾಟಕ್ಕೆ ಬಣ್ಣ ಬಂದುಬಿಟ್ಟಿದೆ. ಎಂಪಿ ಅನಂತ್ಮಾಣಿಗೆ ಮಂಡಳಿ ಅಧ್ಯಕ್ಷತೆ ಆಶೀಸರ್‍ಗೆ ಕೊಟ್ಟಿರುವುದು ಇಷ್ಟವಾಗಿಲ್ಲ. ಅನಂತ್ಮಾಣಿ ಎದುರಾಳಿ ಸ್ಪೀಕರ್ ಕಾಗೇರಿ- “ಪಾಪ, ಆಶೀಸರ್‍ಗೆ ಗೂಟದ ಕಾರೊಂದು ಕೊಡೋದ್ರಿಂದ ತೊಂದ್ರೆಂತದೂ ಇಲ್ಲೆ” ಎಂದು ಸಮಾಧಾನ ಮಂತ್ರ ಪಠಿಸುತ್ತಿದ್ದಾರೆ. ಆಶೀಸರ್ ನೇಮಕಾತಿಯನ್ನ ದೊಡ್ಡದೊಂದು ವರ್ಗ ಬಲವಾಗಿ ವಿರೋಧಿಸುತ್ತಿದೆ.

ಪಕ್ಷಕ್ಕಾಗಿ ಹಲವು ವರ್ಷದಿಂದ ನಿಷ್ಠೆಯಿಂದ ದುಡಿದ ಶೂದ್ರರನ್ನು ಕಡೆಗಣಿಸಿ ಜನಿವಾರ ಲಾಬಿ ಮಾಡೋರಿಗೆ ಅವಕಾಶ ಕೊಡುವ ಹೈಕಮಾಂಡ್ ವಿರುದ್ಧ ಕೂಗೆದ್ದಿದೆ. ಆಶೀಸರ್ ನೇಮಕಾತಿ ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಲಗ್ಗೆ ಹಾಕಲು ಕಾರ್ಯಕರ್ತರು ಸ್ಕೆಚ್ ಹಾಕುತ್ತಿದ್ದಾರೆ. ಅಸಮಾನಿತರ ಬೆನ್ನಿಗೆ ಅನಂತ್ಮಾಣಿ ಬಲವಿರುವುದರಿಂದ ಆಶೀಸರ್ ಮುಖ ಸಪ್ಪಗಾಗಿದೆ. ಬಿಜೆಪಿಯ ಗ್ಯಾಂಗ್‍ವಾರ್ ಬೀದಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ತನ್ನ ಎಂಪಿ ಸೀಟಿಗೇ ಕೈಹಾಕಿದ್ದ, ಮುಂದೂ ಹಾಕಲಿರುವ ಆಶೀಸರ್‍ಗೆ ಅನಂತ್ಮಾಣಿ ಸುಮ್ಮನೆ ಬಿಡಲು ಸಾಧ್ಯವಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...