Homeಕರ್ನಾಟಕಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

ಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

- Advertisement -
- Advertisement -

| ಶುದ್ಧೋಧನ |

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಶಿರಸಿಯ ‘ಸು’ಪ್ರಸಿದ್ಧ ಸ್ವಯಂಘೋಷಿತ ಪರಿಸರ ಪರಾಕ್ರಮಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ-ಮಂಡಳಿ ಹುದ್ದೆ ದಕ್ಕುತ್ತಿದೆ. ಅಂಥದೊಂದು ಗದ್ದುಗೆ ಏರುವ ಯಾವ ಯೋಗ್ಯತೆ ಇಲ್ಲದಿದ್ದರೂ ಆಶೀಸರ ಮಾಣಿಗೆ ಯೋಗ ಖುಲಾಯಿಸುತ್ತಿರುವುದು ಪಕ್ಕಾಚೆಡ್ಡಿ ಚಮತ್ಕಾರದಿಂದಷ್ಟೇ! ತಾನೊಬ್ಬ ಹುಟ್ಟಾ ಸಂಘಿ ಸರದಾರನೆಂತಲೂ ಪರಿಸರ ಬಚಾವಾಗಿರುವುದೇ ತನ್ನ ಮೂರೂವರೆ ದಶಕದ ಹಗಲಿರುಳಿನ ಹಾರಾಟದಿಂದೆಂತಲೂ ಎಂಬಂತೆ ಆರೆಸ್ಸೆಸ್‍ನ ಆಯಕಟ್ಟಿನ ರಿಂಗ್‍ಮಾಸ್ಟರ್‍ಗಳೆದುರು ಅದ್ಭುತ ಪ್ರದರ್ಶನ ಕೊಡಬಲ್ಲ ಆಶೀಸರ್ ಗೂಟದ ಕಾರು ಪಟಾಯಿಸುತ್ತಿದ್ದಾನೆ. ಬಿಜೆಪಿ-ಆರೆಸ್ಸೆಸ್‍ನ ಬ್ರಾಹ್ಮಣ ಲಾಬಿ 2008ರಲ್ಲಿ ಆಶೀಸರ್‍ಗೆ ಬಳುವಳಿಯಾಗಿ ಕೊಟ್ಟಿತ್ತು. ಈಗ ಅದೇ ಆಶೀಸರ್‍ಗೆ ಅದೇ ಕೇಸರಿ ಜನಿವಾರ ಕೂಟ ಜೀವ ವೈವಿಧ್ಯ ಮಂಡಳಿಯಲ್ಲಿ “ಪುನರ್ವಸತಿ” ಕಲ್ಪಿಸಿದೆ!

ಇದು ಉತ್ತರ ಕನ್ನಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಿಚಾಯಿಸುತ್ತಿದೆ. ಸಹಜವಾಗೇ ಪಕ್ಷಕಟ್ಟಿದ ಹಿಂದುಳಿದ ವರ್ಗದ ಎರಡನೇ ಸ್ತರದ ಮರಿಮುಖಂಡರು ಕೆರಳಿದ್ದಾರೆ; ಪಕ್ಷಕ್ಕಾಗಿ ತಮ್ಮನ್ನು ದುಡಿಸಿಕೊಂಡು ಮಹತ್ವದ ಲಾಭದ ಸ್ಥಾನ-ಮಾನವೆಲ್ಲ ಬ್ರಾಹ್ಮಣರಿಗೆ ಕೊಡಬೇಕಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಎಂಪಿ ಅನಂತ್ಮಾಣಿ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಮೀಸಲಿಡಲ್ಪಟ್ಟಿರುವ “ಅನರ್ಹ” ಶಿವರಾಮ ಹೆಬ್ಬಾರ್ ಮತ್ತು ನಿಗಮ-ಮಂಡಳಿಗೆ ವಕ್ಕರಿಸಿರುವ ಆಶೀಸರ ಎಲ್ಲರೂ ಹವ್ಯಕ ಬ್ರಾಹ್ಮಣ ಸಮುದಾಯದವರು. ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಂಕಣಿ ಬ್ರಾಹ್ಮಣ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗ್ಡೆಗೆ ಕೊಡಲು ರಹಸ್ಯ ತಯಾರಿ ಮತ್ತೊಂದೆಡೆ ನಡೆದಿದೆ. ಒಟ್ಟಿನಲ್ಲಿ ಬ್ರಾಹ್ಮಣರ ಹಿಂದೂತ್ವದ ಅಧಿಕಾರ ರಾಜಕಾರಣದ ಯುದ್ಧದಲ್ಲಿ ದೀವರು, ಮೀನುಗಾರರು, ಹಾಲಕ್ಕಿ ಒಕ್ಕಲಿಗರೇ ಮುಂದಾದ ಶೂದ್ರರು ಬರೀ ಕಾಲಾಳುಗಳು ಮಾತ್ರ.

ಶೂದ್ರರ ಕೈಲಿ ಲಾಠಿಕೊಟ್ಟು ಶೀಟಿ ಊದುತ್ತಾ ಬೇಳೆ ಬೇಯಿಸಿಕೊಳ್ಳುವ ಜನಿವಾರ ಪಡೆಯ ತೆರೆಮರೆ ತಂತ್ರಗಾರರಲ್ಲಿ ಆಶೀಸರನೂ ಒಬ್ಬನೆಂಬುದಕ್ಕೆ ಅನುಮಾನವೇ ಇಲ್ಲ. ಸ್ವಜಾತಿ ಅನಂತ್ಮಾಣಿಗೇ ಟಾಂಗುಕೊಟ್ಟು ಎಂಪಿಗಿರಿ ಟಿಕೆಟ್ ಪಡೆಯಲು ಈತ ಚೆಡ್ಡಿ ಬಿಡಾರದಲ್ಲಿ ವಶೀಲಿ ಕಾರ್ಯಾಚರಣೆ ಮಾಡಿದ್ದೂ ಇದೆ. ಹಾಗಂತ ಉತ್ತರ ಕನ್ನಡ ಬಿಜೆಪಿಗೆ ಈತನಿಂದ ನಯಾಪೈಸೆ ಫಾಯ್ದೆಯಿಲ್ಲ. ಬ್ರಾಹ್ಮಣೇತರ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸದ್ದಿಲ್ಲದೆ ಸೇರಿಕೊಳ್ಳುವ ಘಟಸರ್ಪವೆಂಬ ಚರ್ಚೆ ಸ್ಥಳೀಯ ಬಿಜೆಪಿಯಲ್ಲೀಗ ಜೋರಾಗಿದೆ. ಈತನ ಪರಿಸರ ಧೋರಣೆಯೂ ಇಬ್ಬಂದಿ ಸ್ವಜಾತಿ ಅಡಿಕೆ ತೋಟಿಗರಿಗೆ ಸರ್ಕಾರಿ ಯೋಜನೆಗಳಿಂದ ತೊಂದರೆ ಆಗುತ್ತದೆಂದಾಗ ಆಶೀಸರ್‍ನಲ್ಲಿ ಅತ್ಯುಗ್ರ ಪರಿಸರ ಕಾಳಜಿ ಶುರುಹೊಡೆಯುತ್ತದೆ! ಉತ್ತರ ಕನ್ನಡದ ಅಭಿವೃದ್ಧಿಯ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆಶೀಸರ್ ನೇತೃತ್ವದ ಪರಿಸರವಾಧಿ ತಂಡ ಕಲ್ಲು ಹಾಕುತ್ತಲೇ ಬಂದಿದೆ!!

ಈ ರೈಲು ಹಳಿಯಿಂದ ಅರಣ್ಯ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ, ಪರಿಸರ ಸರ್ವನಾಶವಾಗುತ್ತದೆಂದು ಬೊಬ್ಬಿರಿವ ಆಶೀಸರ್‍ಗೆ ತನ್ನ ಸಮುದಾಯಕ್ಕೆ ಅನುಕೂಲವಾಗುವ ಹಾವೇರಿ-ಶಿರಸಿ ರೈಲು ಮಾರ್ಗದ ಪರಿಸರ ಹಾನಿ ಗೌಣ! ಕುಮಟಾ-ಶಿರಸಿ ರಸ್ತೆ ಅಗಲಗೊಂಡು ರಾಷ್ಟ್ರೀಯ ಹೆದ್ದಾರಿಯಾದರೆ ಜೀವ ವೈವಿಧ್ಯಕ್ಕೆ ಧಕ್ಕೆ ಎಂಬ ವಾದ ಈ ಪರಿಸರ “ತಜ್ಞ”ನದು. ಆನರ ಬಹುಬೇಡಿಕೆಯ ಜಿಲ್ಲೆಯ ಮಹತ್ವದ ಯೋಜನೆಯಿದು. ಆಶೀಸರ್ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗುತ್ತಲೇ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಎಳ್ಳು-ನೀರು ಬಿಟ್ಟಂತಾಗಿದೆ!! ಪರಿಸರ ಸಂರಕ್ಷಣೆ ಕುರಿತು ಉದ್ದುದ್ದ ಭಾಷಣ ಬಿಗಿಯುವ ಈ ಪರಿಸರ ದುರಂಧರ ಎಕರೆಗಟ್ಟಲೆ ಅರಣ್ಯ ಕಬಳಿಸಿ ಸಮೃದ್ಧ ಅಡಿಕೆ ತೋಟ ಮಾಡಿಕೊಂಡಿರುವ ಅಪವಾದಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!

ಕಾಡು ನುಂಗಿರುವ “ಕ್ಯಾತಿ”ಯ ಆಶೀಸರ ಸ್ವರ್ಣವಲ್ಲಿ ಮಠದ ಹುಸಿ ಹಸಿರು ಸ್ವಾಮಿಯ ಆಸ್ಥಾನದ ಪರಿಸರ ಪಂಡಿತ. ಕಾವಿ-ಚೆಡ್ಡಿ ಪ್ರಭಾವದಿಂದ ರಾಜ್ಯ ಬಿಜೆಪಿಯ ಪರಮೋಚ್ಚ ನಾಯಕ ಸಂತೋಷ್‍ಜೀ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ಆಶೀಸರ್ ಮಾಣಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಪಡೆಯುವುದಕ್ಕೆ ತ್ರಾಸೇನೂ ಆಗಿಲ್ಲ! ಆಶೀಸರ್ ನೇಮಕಾತಿ ಘೋಷಣೆ ಆಗುತ್ತಲೇ ಉತ್ತರ ಕನ್ನಡ ಬಿಜೆಪಿ ಬಣ ಬಡಿದಾಟಕ್ಕೆ ಬಣ್ಣ ಬಂದುಬಿಟ್ಟಿದೆ. ಎಂಪಿ ಅನಂತ್ಮಾಣಿಗೆ ಮಂಡಳಿ ಅಧ್ಯಕ್ಷತೆ ಆಶೀಸರ್‍ಗೆ ಕೊಟ್ಟಿರುವುದು ಇಷ್ಟವಾಗಿಲ್ಲ. ಅನಂತ್ಮಾಣಿ ಎದುರಾಳಿ ಸ್ಪೀಕರ್ ಕಾಗೇರಿ- “ಪಾಪ, ಆಶೀಸರ್‍ಗೆ ಗೂಟದ ಕಾರೊಂದು ಕೊಡೋದ್ರಿಂದ ತೊಂದ್ರೆಂತದೂ ಇಲ್ಲೆ” ಎಂದು ಸಮಾಧಾನ ಮಂತ್ರ ಪಠಿಸುತ್ತಿದ್ದಾರೆ. ಆಶೀಸರ್ ನೇಮಕಾತಿಯನ್ನ ದೊಡ್ಡದೊಂದು ವರ್ಗ ಬಲವಾಗಿ ವಿರೋಧಿಸುತ್ತಿದೆ.

ಪಕ್ಷಕ್ಕಾಗಿ ಹಲವು ವರ್ಷದಿಂದ ನಿಷ್ಠೆಯಿಂದ ದುಡಿದ ಶೂದ್ರರನ್ನು ಕಡೆಗಣಿಸಿ ಜನಿವಾರ ಲಾಬಿ ಮಾಡೋರಿಗೆ ಅವಕಾಶ ಕೊಡುವ ಹೈಕಮಾಂಡ್ ವಿರುದ್ಧ ಕೂಗೆದ್ದಿದೆ. ಆಶೀಸರ್ ನೇಮಕಾತಿ ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಲಗ್ಗೆ ಹಾಕಲು ಕಾರ್ಯಕರ್ತರು ಸ್ಕೆಚ್ ಹಾಕುತ್ತಿದ್ದಾರೆ. ಅಸಮಾನಿತರ ಬೆನ್ನಿಗೆ ಅನಂತ್ಮಾಣಿ ಬಲವಿರುವುದರಿಂದ ಆಶೀಸರ್ ಮುಖ ಸಪ್ಪಗಾಗಿದೆ. ಬಿಜೆಪಿಯ ಗ್ಯಾಂಗ್‍ವಾರ್ ಬೀದಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ತನ್ನ ಎಂಪಿ ಸೀಟಿಗೇ ಕೈಹಾಕಿದ್ದ, ಮುಂದೂ ಹಾಕಲಿರುವ ಆಶೀಸರ್‍ಗೆ ಅನಂತ್ಮಾಣಿ ಸುಮ್ಮನೆ ಬಿಡಲು ಸಾಧ್ಯವಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...