Homeಕರ್ನಾಟಕಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

ಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

- Advertisement -
- Advertisement -

| ಶುದ್ಧೋಧನ |

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಶಿರಸಿಯ ‘ಸು’ಪ್ರಸಿದ್ಧ ಸ್ವಯಂಘೋಷಿತ ಪರಿಸರ ಪರಾಕ್ರಮಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ-ಮಂಡಳಿ ಹುದ್ದೆ ದಕ್ಕುತ್ತಿದೆ. ಅಂಥದೊಂದು ಗದ್ದುಗೆ ಏರುವ ಯಾವ ಯೋಗ್ಯತೆ ಇಲ್ಲದಿದ್ದರೂ ಆಶೀಸರ ಮಾಣಿಗೆ ಯೋಗ ಖುಲಾಯಿಸುತ್ತಿರುವುದು ಪಕ್ಕಾಚೆಡ್ಡಿ ಚಮತ್ಕಾರದಿಂದಷ್ಟೇ! ತಾನೊಬ್ಬ ಹುಟ್ಟಾ ಸಂಘಿ ಸರದಾರನೆಂತಲೂ ಪರಿಸರ ಬಚಾವಾಗಿರುವುದೇ ತನ್ನ ಮೂರೂವರೆ ದಶಕದ ಹಗಲಿರುಳಿನ ಹಾರಾಟದಿಂದೆಂತಲೂ ಎಂಬಂತೆ ಆರೆಸ್ಸೆಸ್‍ನ ಆಯಕಟ್ಟಿನ ರಿಂಗ್‍ಮಾಸ್ಟರ್‍ಗಳೆದುರು ಅದ್ಭುತ ಪ್ರದರ್ಶನ ಕೊಡಬಲ್ಲ ಆಶೀಸರ್ ಗೂಟದ ಕಾರು ಪಟಾಯಿಸುತ್ತಿದ್ದಾನೆ. ಬಿಜೆಪಿ-ಆರೆಸ್ಸೆಸ್‍ನ ಬ್ರಾಹ್ಮಣ ಲಾಬಿ 2008ರಲ್ಲಿ ಆಶೀಸರ್‍ಗೆ ಬಳುವಳಿಯಾಗಿ ಕೊಟ್ಟಿತ್ತು. ಈಗ ಅದೇ ಆಶೀಸರ್‍ಗೆ ಅದೇ ಕೇಸರಿ ಜನಿವಾರ ಕೂಟ ಜೀವ ವೈವಿಧ್ಯ ಮಂಡಳಿಯಲ್ಲಿ “ಪುನರ್ವಸತಿ” ಕಲ್ಪಿಸಿದೆ!

ಇದು ಉತ್ತರ ಕನ್ನಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಿಚಾಯಿಸುತ್ತಿದೆ. ಸಹಜವಾಗೇ ಪಕ್ಷಕಟ್ಟಿದ ಹಿಂದುಳಿದ ವರ್ಗದ ಎರಡನೇ ಸ್ತರದ ಮರಿಮುಖಂಡರು ಕೆರಳಿದ್ದಾರೆ; ಪಕ್ಷಕ್ಕಾಗಿ ತಮ್ಮನ್ನು ದುಡಿಸಿಕೊಂಡು ಮಹತ್ವದ ಲಾಭದ ಸ್ಥಾನ-ಮಾನವೆಲ್ಲ ಬ್ರಾಹ್ಮಣರಿಗೆ ಕೊಡಬೇಕಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಎಂಪಿ ಅನಂತ್ಮಾಣಿ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಮೀಸಲಿಡಲ್ಪಟ್ಟಿರುವ “ಅನರ್ಹ” ಶಿವರಾಮ ಹೆಬ್ಬಾರ್ ಮತ್ತು ನಿಗಮ-ಮಂಡಳಿಗೆ ವಕ್ಕರಿಸಿರುವ ಆಶೀಸರ ಎಲ್ಲರೂ ಹವ್ಯಕ ಬ್ರಾಹ್ಮಣ ಸಮುದಾಯದವರು. ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಂಕಣಿ ಬ್ರಾಹ್ಮಣ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗ್ಡೆಗೆ ಕೊಡಲು ರಹಸ್ಯ ತಯಾರಿ ಮತ್ತೊಂದೆಡೆ ನಡೆದಿದೆ. ಒಟ್ಟಿನಲ್ಲಿ ಬ್ರಾಹ್ಮಣರ ಹಿಂದೂತ್ವದ ಅಧಿಕಾರ ರಾಜಕಾರಣದ ಯುದ್ಧದಲ್ಲಿ ದೀವರು, ಮೀನುಗಾರರು, ಹಾಲಕ್ಕಿ ಒಕ್ಕಲಿಗರೇ ಮುಂದಾದ ಶೂದ್ರರು ಬರೀ ಕಾಲಾಳುಗಳು ಮಾತ್ರ.

ಶೂದ್ರರ ಕೈಲಿ ಲಾಠಿಕೊಟ್ಟು ಶೀಟಿ ಊದುತ್ತಾ ಬೇಳೆ ಬೇಯಿಸಿಕೊಳ್ಳುವ ಜನಿವಾರ ಪಡೆಯ ತೆರೆಮರೆ ತಂತ್ರಗಾರರಲ್ಲಿ ಆಶೀಸರನೂ ಒಬ್ಬನೆಂಬುದಕ್ಕೆ ಅನುಮಾನವೇ ಇಲ್ಲ. ಸ್ವಜಾತಿ ಅನಂತ್ಮಾಣಿಗೇ ಟಾಂಗುಕೊಟ್ಟು ಎಂಪಿಗಿರಿ ಟಿಕೆಟ್ ಪಡೆಯಲು ಈತ ಚೆಡ್ಡಿ ಬಿಡಾರದಲ್ಲಿ ವಶೀಲಿ ಕಾರ್ಯಾಚರಣೆ ಮಾಡಿದ್ದೂ ಇದೆ. ಹಾಗಂತ ಉತ್ತರ ಕನ್ನಡ ಬಿಜೆಪಿಗೆ ಈತನಿಂದ ನಯಾಪೈಸೆ ಫಾಯ್ದೆಯಿಲ್ಲ. ಬ್ರಾಹ್ಮಣೇತರ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸದ್ದಿಲ್ಲದೆ ಸೇರಿಕೊಳ್ಳುವ ಘಟಸರ್ಪವೆಂಬ ಚರ್ಚೆ ಸ್ಥಳೀಯ ಬಿಜೆಪಿಯಲ್ಲೀಗ ಜೋರಾಗಿದೆ. ಈತನ ಪರಿಸರ ಧೋರಣೆಯೂ ಇಬ್ಬಂದಿ ಸ್ವಜಾತಿ ಅಡಿಕೆ ತೋಟಿಗರಿಗೆ ಸರ್ಕಾರಿ ಯೋಜನೆಗಳಿಂದ ತೊಂದರೆ ಆಗುತ್ತದೆಂದಾಗ ಆಶೀಸರ್‍ನಲ್ಲಿ ಅತ್ಯುಗ್ರ ಪರಿಸರ ಕಾಳಜಿ ಶುರುಹೊಡೆಯುತ್ತದೆ! ಉತ್ತರ ಕನ್ನಡದ ಅಭಿವೃದ್ಧಿಯ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆಶೀಸರ್ ನೇತೃತ್ವದ ಪರಿಸರವಾಧಿ ತಂಡ ಕಲ್ಲು ಹಾಕುತ್ತಲೇ ಬಂದಿದೆ!!

ಈ ರೈಲು ಹಳಿಯಿಂದ ಅರಣ್ಯ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ, ಪರಿಸರ ಸರ್ವನಾಶವಾಗುತ್ತದೆಂದು ಬೊಬ್ಬಿರಿವ ಆಶೀಸರ್‍ಗೆ ತನ್ನ ಸಮುದಾಯಕ್ಕೆ ಅನುಕೂಲವಾಗುವ ಹಾವೇರಿ-ಶಿರಸಿ ರೈಲು ಮಾರ್ಗದ ಪರಿಸರ ಹಾನಿ ಗೌಣ! ಕುಮಟಾ-ಶಿರಸಿ ರಸ್ತೆ ಅಗಲಗೊಂಡು ರಾಷ್ಟ್ರೀಯ ಹೆದ್ದಾರಿಯಾದರೆ ಜೀವ ವೈವಿಧ್ಯಕ್ಕೆ ಧಕ್ಕೆ ಎಂಬ ವಾದ ಈ ಪರಿಸರ “ತಜ್ಞ”ನದು. ಆನರ ಬಹುಬೇಡಿಕೆಯ ಜಿಲ್ಲೆಯ ಮಹತ್ವದ ಯೋಜನೆಯಿದು. ಆಶೀಸರ್ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗುತ್ತಲೇ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಎಳ್ಳು-ನೀರು ಬಿಟ್ಟಂತಾಗಿದೆ!! ಪರಿಸರ ಸಂರಕ್ಷಣೆ ಕುರಿತು ಉದ್ದುದ್ದ ಭಾಷಣ ಬಿಗಿಯುವ ಈ ಪರಿಸರ ದುರಂಧರ ಎಕರೆಗಟ್ಟಲೆ ಅರಣ್ಯ ಕಬಳಿಸಿ ಸಮೃದ್ಧ ಅಡಿಕೆ ತೋಟ ಮಾಡಿಕೊಂಡಿರುವ ಅಪವಾದಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!

ಕಾಡು ನುಂಗಿರುವ “ಕ್ಯಾತಿ”ಯ ಆಶೀಸರ ಸ್ವರ್ಣವಲ್ಲಿ ಮಠದ ಹುಸಿ ಹಸಿರು ಸ್ವಾಮಿಯ ಆಸ್ಥಾನದ ಪರಿಸರ ಪಂಡಿತ. ಕಾವಿ-ಚೆಡ್ಡಿ ಪ್ರಭಾವದಿಂದ ರಾಜ್ಯ ಬಿಜೆಪಿಯ ಪರಮೋಚ್ಚ ನಾಯಕ ಸಂತೋಷ್‍ಜೀ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ಆಶೀಸರ್ ಮಾಣಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಪಡೆಯುವುದಕ್ಕೆ ತ್ರಾಸೇನೂ ಆಗಿಲ್ಲ! ಆಶೀಸರ್ ನೇಮಕಾತಿ ಘೋಷಣೆ ಆಗುತ್ತಲೇ ಉತ್ತರ ಕನ್ನಡ ಬಿಜೆಪಿ ಬಣ ಬಡಿದಾಟಕ್ಕೆ ಬಣ್ಣ ಬಂದುಬಿಟ್ಟಿದೆ. ಎಂಪಿ ಅನಂತ್ಮಾಣಿಗೆ ಮಂಡಳಿ ಅಧ್ಯಕ್ಷತೆ ಆಶೀಸರ್‍ಗೆ ಕೊಟ್ಟಿರುವುದು ಇಷ್ಟವಾಗಿಲ್ಲ. ಅನಂತ್ಮಾಣಿ ಎದುರಾಳಿ ಸ್ಪೀಕರ್ ಕಾಗೇರಿ- “ಪಾಪ, ಆಶೀಸರ್‍ಗೆ ಗೂಟದ ಕಾರೊಂದು ಕೊಡೋದ್ರಿಂದ ತೊಂದ್ರೆಂತದೂ ಇಲ್ಲೆ” ಎಂದು ಸಮಾಧಾನ ಮಂತ್ರ ಪಠಿಸುತ್ತಿದ್ದಾರೆ. ಆಶೀಸರ್ ನೇಮಕಾತಿಯನ್ನ ದೊಡ್ಡದೊಂದು ವರ್ಗ ಬಲವಾಗಿ ವಿರೋಧಿಸುತ್ತಿದೆ.

ಪಕ್ಷಕ್ಕಾಗಿ ಹಲವು ವರ್ಷದಿಂದ ನಿಷ್ಠೆಯಿಂದ ದುಡಿದ ಶೂದ್ರರನ್ನು ಕಡೆಗಣಿಸಿ ಜನಿವಾರ ಲಾಬಿ ಮಾಡೋರಿಗೆ ಅವಕಾಶ ಕೊಡುವ ಹೈಕಮಾಂಡ್ ವಿರುದ್ಧ ಕೂಗೆದ್ದಿದೆ. ಆಶೀಸರ್ ನೇಮಕಾತಿ ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಲಗ್ಗೆ ಹಾಕಲು ಕಾರ್ಯಕರ್ತರು ಸ್ಕೆಚ್ ಹಾಕುತ್ತಿದ್ದಾರೆ. ಅಸಮಾನಿತರ ಬೆನ್ನಿಗೆ ಅನಂತ್ಮಾಣಿ ಬಲವಿರುವುದರಿಂದ ಆಶೀಸರ್ ಮುಖ ಸಪ್ಪಗಾಗಿದೆ. ಬಿಜೆಪಿಯ ಗ್ಯಾಂಗ್‍ವಾರ್ ಬೀದಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ತನ್ನ ಎಂಪಿ ಸೀಟಿಗೇ ಕೈಹಾಕಿದ್ದ, ಮುಂದೂ ಹಾಕಲಿರುವ ಆಶೀಸರ್‍ಗೆ ಅನಂತ್ಮಾಣಿ ಸುಮ್ಮನೆ ಬಿಡಲು ಸಾಧ್ಯವಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬೆಳಗಾವಿಯ ವಿವಿದೆಡೆ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು. ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ...

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...