Homeಕರ್ನಾಟಕಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

ಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ' ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ.

- Advertisement -
- Advertisement -

| ನಹುಷ |

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ. ಶಿವಮೊಗ್ಗ ಜಿಲ್ಲೆಯ ಸೊರಬ-ಶಿಕಾರಿಪುರ ತಾಲ್ಲೂಕಿನ ಅಂಚಿನಲ್ಲಿರುವ ಕನ್ನಡದ ಈ ಮೊದಲ ರಾಜಧಾನಿ, ಯಡ್ಡಿ ಮುಖ್ಯಮಂತ್ರಿ ಆದಾಗೆಲ್ಲಾ ಕರುಳು ಸಂಬಂಧವೇ ಕಡಿದು ಹೋಗುವ ಆತಂಕಕ್ಕೆ ಬಿದ್ದು ಒದ್ದಾಡುತ್ತದೆ.

ಯಡ್ಡಿ ಈ ಹಿಂದೆ ಸಿಎಂ ಆಗಿದ್ದಾಗ ಬನವಾಸಿಯನ್ನು ಸೊರಬದ ಆನವಟ್ಟಿ ಹೋಬಳಿಗೆ ಸೇರಿಸುವ ಮಸಲತ್ತು ನಡೆದಿತ್ತು. ಆದರೆ ಯಡ್ಡಿ ಭಿನ್ನಮತಕ್ಕೆ ಬಲಿಯಾಗಿ ಅಧಿಕಾರ ಕಳಕೊಂಡು ಬಿಜೆಪಿ ಪಾಲಿಗೆ “ಕಾಫಿರ್” ಆಗಿಹೋಗಿದ್ದರು. ಹೀಗಾಗಿ ಬನವಾಸಿಯನ್ನು ಉತ್ತರ ಕನ್ನಡದಿಂದ ಹೊತ್ತೊಯ್ಯುವ ಯಡ್ಡಿ ಮತ್ತವರ ಮಗನೂ ಸಂಸದನೂ ಆಗಿರುವ ಬಸ್‍ಸ್ಟ್ಯಾಂಡ್ ರಾಘುನ ಪ್ಲಾನ್ ಫ್ಲಾಪ್ ಆಗಿತ್ತು. ಈಗ ಮತ್ತೆ ಶಿರಸಿಯ ಬನವಾಸಿ ಮೇಲೆ ಯಡ್ಡಿ ಕುಟುಂಬದ ಕಣ್ಣು ಬಿದ್ದಿದೆ. ಈ ರಹಸ್ಯ ಹುನ್ನಾರದ ಹೂರಣ ಹೊರಬರುತ್ತಲೇ ಬನವಾಸಿ ಭಾಗದ ಜನರು ಕೆರಳಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಅಷ್ಟಕ್ಕೂ ಈ ಅಪ್ಪ-ಮಗನಿಗೆ ಉತ್ತರ ಕನ್ನಡ ಸಂಸ್ಕøತಿ-ಸಂಸ್ಕಾರದ ಬನವಾಸಿ ಮತ್ತದರ ಸುತ್ತಲಿನ ಹಳ್ಳಿಗಳನ್ನು ಕಬಳಿಸುವ ಹಠವೇಕೆಂದು ಬಲ್ಲಿರಾ? ಶಿವಮೊಗ್ಗ ಜಿಲ್ಲೆಯನ್ನು ಒಡೆದು ಶಿಕಾರಿಪುರ ಜಿಲ್ಲೆ ರಚನೆ ಮಾಡಿ ರಾಜಕೀಯ ಫಾಯ್ದೆ ಹೊಡೆಯಲು ಯಡ್ಡಿ-ರಾಘು ಸ್ಕೆಚ್ ಹಾಕಿದ್ದಾರೆ. ಆದರೆ ಜಿಲ್ಲೆ ರಚನೆಗೆ ಬೇಕಾದ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯ ಕೊರತೆಯಿದೆ. ಪಕ್ಕದ ಬನವಾಸಿ ಮತ್ತು ಅದರ ಆಚೀಚೆಯ ಹತ್ತು ಗ್ರಾಮ ಪಂಚಾಯತ್ ಏರಿಯಾ ಸೇರಿಸಿಕೊಂಡರೆ ಏಕ್‍ದಮ್ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯೂ ಸಿಗುತ್ತದೆ! ಈ ದೂ(ದು)ರಾಲೋಚನೆಯಿಂದ ಬನವಾಸಿ ಸೀಮೆ ಆಪೋಷನಕ್ಕೆ ಯಡ್ಡಿ-ರಾಘು ಸರ್ಕಸ್ ನಡೆಸಿದ್ದಾರೆ.

ಯಡ್ಡಿ ಅಕ್ರಮ ಸರ್ಕಾರದ ಚಕ್ರವರ್ತಿಯಾಗುತ್ತಲೇ ಆತನ ತವರೂರು ಶಿಕಾರಿಪುರಕ್ಕೆ ಭರಪೂರ ಅನುದಾನ ಹರಿದುಬರುತ್ತಿದೆ. ಪಕ್ಕದ ಶಿಕಾರಿಪುರದ ಉದ್ಧಾರಕ್ಕೆ ಯಥೇಚ್ಛವಾಗಿ ಹಣ ಹರಿದು ಬರುತ್ತಿದ್ದರೆ ಉತ್ತರ ಕನ್ನಡಕ್ಕೆ ಅನ್ಯಾಯ-ಅತ್ಯಾಚಾರ ಆಗುತ್ತಿದೆ! ಅನುದಾನ ತರುವುದು ಸಾಯಲಿ, ಜಿಲ್ಲೆ ಬರಡಾಗದಂತೆ ತಡೆಯಬೇಕೆಂಬ ಕನಿಷ್ಟ ಕಾಳಜಿಯೂ ಉತ್ತರ ಕನ್ನಡದ ಹೇತ್ಲಾಂಡಿ ಶಾಸಕ-ಸಂಸದ-ಮಂತ್ರಿಗಳಿಗಿಲ್ಲ. ಲಾಗಾಯ್ತಿನಿಂದ ಉತ್ತರ ಕನ್ನಡದ ಪ್ರಗತಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಂಕೋಲಾ-ಹುಬ್ಬಳ್ಳಿ, ಹಾವೇರಿ-ಶಿರಸಿ ಮತ್ತು ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗ ಹಲವು ವರ್ಷದಿಂದ ಬರೀ ಕನಸಾಗೇ ಕಾಡುತ್ತಿದೆ. ಉತ್ತರ ಕನ್ನಡಕ್ಕೆ ತೀರಾ ಹತ್ತಿರದಲ್ಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ರೈಲು ಟರ್ಮಿನಲನ್ನು ಯಡ್ಡಿ ಪರ್ವದಲ್ಲಿ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಕಿತಾಪತಿ ನಡೆಯುತ್ತಿದೆ. ತಾಳಗುಪ್ಪ ಜಂಕ್ಷನ್ ಆಗಿದ್ದರೆ ಈ ರೈಲು ಮಾರ್ಗ ಸಿದ್ಧಾಪುರದವರೆಗೆ ವಿಸ್ತರಿಸಲು ಅನುಕೂಲವಾಗುತ್ತಿತ್ತು.

ಈಗ ಅದಕ್ಕೂ ಕಲ್ಲು ಹಾಕಲಾಗುತ್ತಿದೆ. ಜಂಕ್ಷನ್ ಸ್ಥಳಾಂತರಕ್ಕೆ ಸಾಕ್ಷಾತ್ ಸಿಎಂ ಸಾಹೇಬರೇ ಒಪ್ಪಿಗೆ ಕೊಟ್ಟಿದ್ದಾರೆ. ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗಕ್ಕೆಂದು ಅಂದಿನ ರೈಲು ಮಂತ್ರಿ ಸುರೇಶ್ ಪ್ರಭು 320 ಕೋಟಿ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಈ ಹಣ ಎಲ್ಲಿ ಹೋಯಿತೆಂದು ಸಂಸದ ಅನಂತ್ಮಾಣಿಗೂ ಗೊತ್ತಾಗಿಲ್ಲ. ಉತ್ತರ ಕನ್ನಡದ ಅಭಿವೃದ್ಧಿಗಾಗೇ ಅವತಾರ ಎತ್ತಿದ್ದೇನೆಂದು ಒಣ ಘರ್ಜನೆ ಮಾಡುವ ಮಾಣಿ ಮೋದಿ ಮಂತ್ರಿಗಿರಿಯಿಂದ ತೆಗೆದುಹಾಕಿದ ಕ್ಷಣದಿಂದಲೇ ಬಿಲ ಸೇರಿಕೊಂಡಿದ್ದಾನೆ. ಬನವಾಸಿ ಅಪಹರಿಸುವ ಸುದ್ಧಿ ಕೇಳಿ ಜನರು ಬೀದಿಗಿಯಲು ಅಣಿಯಾದರೂ ಶಿರಸಿ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ಬನವಾಸಿಯ ‘ಅನರ್ಹ’ ಶಾಸಕ ಶಿವರಾಮ ಹೆಬ್ಬಾರನಾಗಲಿ, ಶಿರಸಿಯಲ್ಲೇ ಐಷಾರಾಮಿ ಬಂಗಲೆ ಕಟ್ಟಿಕೊಂಡು ವಾಸಿಸುತ್ತಿರುವ ಸ್ವಯಂ ಘೋಷಿತ ದೇಶಭಕ್ತ ಅನಂತ್ಮಾಣಿಯಾಗಲಿ ತುಟಿಪಿಟಿಕ್ ಅಂದಿಲ್ಲ.

ಗುರುವಾರ 10ನೇ ತಾರೀಖಿನಂದು ಬನವಾಸಿ ಮತ್ತು ಸುತ್ತಲಿನ ಹಳ್ಳಿಗರು ಸಹಸ್ರಾರು ಸಂಖ್ಯೆಯಲ್ಲಿ ಮಧುಕೇಶ್ವರ ದೇವಾಲಯದ ಅಂಗಳದಲ್ಲಿ ಜಮೆಯಾಗಿ ಬನವಾಸಿ ಹೈಜಾಕ್ ಮಾಡದಂತೆ ಎಚ್ಚರಿಕೆಯ ರ್ಯಾಲಿ ನಡೆಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದಿರುವ ಅನರ್ಹ ಶಾಸಕ ಹೆಬ್ಬಾರ್ `ಬನವಾಸಿ ಶಿಕಾರಿಪುರಕ್ಕೆ ಸೇರಿಸುವ ಸುದ್ದಿ ಸುಳ್ಳೆಂದು’ ತಿಪ್ಪರಲಾಗ ಹೊಡೆದಿದ್ದಾನೆ. ಉಪಚುನಾವಣೆಯಲ್ಲಿ ಬನವಾಸಿ ಭಾನ್ಗಡಿ ತನಗೆ ದುಬಾರಿ ಆಗಬಾರದೆಂಬ ಭಯವೇ ಹೊರತು ಕ್ಷೇತ್ರದ ಬಗ್ಗೆ ಪ್ರಾಮಾಣಿಕ ಕಾಳಜಿಯೇನಿಲ್ಲ ಈ ರಾಜಕಾರಣಿಗೆ.

ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷಗಳು ಉರುಳಿದರೂ ಹೆಬ್ಬಾರ್‍ನ ಅಯೋಗ್ಯತೆಯಿಂದಾಗಿ ಅರ್ಧಕಾಸಿನ ಪ್ರಯೋಜನವಾಗಿಲ್ಲ. ಬನವಾಸಿಯನ್ನು ತಾಲ್ಲೂಕು ಮಾಡಿಯೆಂದು ಜನ ಬೊಬ್ಬೆ ಹೊಡೆಯುತ್ತಿದ್ದರೂ ಶಾಸಕನಾಗಿದ್ದ ಹೆಬ್ಬಾರ್‍ಗೆ ಅಡ್ಡದಾರಿಯಲ್ಲಿ ಮಂತ್ರಿಯಾಗುವುದೇ ಮುಖ್ಯವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...