Homeಮುಖಪುಟಉತ್ತರಾಖಂಡ ಪ್ರವಾಹ; ಹವಾಮಾನ ವೈಪರೀತ್ಯದ ಬಗ್ಗೆ ವೈಜ್ಞಾನಿಕ ಆಲೋಚನೆ ಬೇಕಿದೆ

ಉತ್ತರಾಖಂಡ ಪ್ರವಾಹ; ಹವಾಮಾನ ವೈಪರೀತ್ಯದ ಬಗ್ಗೆ ವೈಜ್ಞಾನಿಕ ಆಲೋಚನೆ ಬೇಕಿದೆ

- Advertisement -
- Advertisement -

ಫೆಬ್ರವರಿ 7, 2021ರಂದು ಕೇಂದ್ರ ಸರ್ಕಾರದ ನೀತಿ ಆಯೋಗ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿತು. ಪರಿಸರ ಪರವಾದ ತೀರ್ಪುಗಳಿಂದ ಭಾರತದ ಆರ್ಥಿಕ ಅಭಿವೃದ್ಧಿಯ ಮೇಲೆ ಉಂಟಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸುವ ಕುರಿತ ಪ್ರಕಟಣೆ ಅದಾಗಿತ್ತು. ಈ ಅಂಗವಾಗಿ ಪರಮೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಹಸಿರು ಪೀಠಗಳು ನೀಡಿದ 5 ತೀರ್ಪುಗಳ ಅಧ್ಯಯನ ನಡೆಸಿ, ಅದರಿಂದ ಹೇಗೆ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮವಾಗಿದೆ ಎಂಬುದರ ಕುರಿತು ನ್ಯಾಯಮೂರ್ತಿಗಳಿಗೆ “ಅರಿವು” ಮೂಡಿಸುವ ಯೋಜನೆಯನ್ನೂ ಹಾಕಿಕೊಂಡಿತ್ತು.

ಈ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರಾಖಂಡದ ಚಮೋಲಿ ಜಿಲ್ಲೆಯ ಖುಷಿ ಗಂಗಾ, ಧೌಲಿ ಗಂಗಾ ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಕ್ಷಿಪ್ರ ಪ್ರವಾಹ ಬಂದು ಅಪಾರ ಸಾವುನೋವು ಉಂಟಾದ ಸುದ್ದಿ ಬರಹತ್ತಿತು. ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ ಋಷಿಗಂಗಾ ಜಲವಿದ್ಯುತ್ ಯೋಜನೆಯು ಕೊಚ್ಚಿಕೊಂಡುಹೋಗಿತ್ತು. ಧೌಲಿ ಗಂಗಾ ಅಣೆಕಟ್ಟೆಯೇ ಒಡೆದುಹೋಗಿತ್ತು ಮತ್ತು ನದಿ ಪಾತ್ರದ 13 ಹಳ್ಳಿಗಳು ಕೊಚ್ಚಿಕೊಂಡು ಹೋಗಿದ್ದವು. “ನಿಮ್ಮ ಅತಿ ಬುದ್ಧಿವಂತಿಕೆ ನನ್ನ ಮುಂದೆ ನಡೆಯುವುದಿಲ್ಲ” ಎಂದು ಪ್ರಕೃತಿಯು ನೀತಿ ಆಯೋಗಕ್ಕೆ ನೀತಿ ಪಾಠ ಹೇಳಬಯಸಿತ್ತೋ ಏನೋ?

ಹಿಮಾಲಯದ ಮಡಿಲಲ್ಲಿ ಇರುವ ಪುಟ್ಟ ರಾಜ್ಯ ಉತ್ತರಾಖಂಡಕ್ಕೆ ಇದೇನೂ ಮೊದಲನೇ ಪ್ರವಾಹವೂ ಅಲ್ಲ ಮತ್ತು ಕೊನೆಯದೂ ಆಗಿರುವುದಿಲ್ಲ. ಆದರೆ ಇದಕ್ಕೂ ಮುಂಚೆ ಉಂಟಾದ ತೊಂದರೆಗಳಿಂದ ನಾವು ಪಾಠ ಕಲಿತಿದ್ದರೆ ಅದು ಜಾಣತನದ ಲಕ್ಷಣವಾಗಿರುತ್ತಿತ್ತು. ಆದರೆ ಪಾಠ ಕಲಿಯುವುದು ಒತ್ತಟ್ಟಿಗಿರಲಿ ಈ ಮುಂಚೆಯಿದ್ದ ಎಲ್ಲ ನಿಯಮಗಳನ್ನು ಮತ್ತು ಅಪಾಯದ ಮುನ್ಸೂಚನೆಗಳನ್ನು ಗಾಳಿಗೆ ತೂರಿ ಇನ್ನೂ ಹೆಚ್ಚಿನ ವಿನಾಶಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ. ಇದಕ್ಕೂ ಮುಂಚೆ 2013ರಲ್ಲಿ ಇನ್ನೂ ದೊಡ್ಡ ಮಟ್ಟದ ಪ್ರವಾಹವನ್ನು ಉತ್ತರಾಖಂಡವು ನೋಡಿತ್ತು. ಮೇಘ ಸ್ಫೋಟದಿಂದಾಗಿ ನದಿಗಳೆಲ್ಲ ಉಕ್ಕಿ ಹರಿದು ಸುಮಾರು 5 ಸಾವಿರ ಜನರು ಪ್ರಾಣವನ್ನು ಕಳೆದುಕೊಂಡಿದ್ದರು.

ಆಗಿನ ಕೇಂದ್ರ ಸರ್ಕಾರವು ಇದರ ಕುರಿತು ವರದಿಯನ್ನು ಸಲ್ಲಿಸಲು ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ರಚಿಸಿತ್ತು. ಅವರ ವರದಿಯ ಪ್ರಕಾರ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಅತಿಯಾದ ಮಾನವ ಹಸ್ತಕ್ಷೇಪವೇ ಕಾರಣ ಎಂದು ದಾಖಲಿಸಿದ್ದಲ್ಲದೆ ಇನ್ನು ಮುಂದೆ ಹಿಮನದಿಗಳು ಇರುವ ಪ್ರದೇಶದಲ್ಲಿ ಮತ್ತು ಅಸ್ಥಿರವಾಗಿರುವ ಬೆಟ್ಟ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳನ್ನು ನಿಷೇಧಿಸುವಂತೆ ಆ ಸಮಿತಿಯು ಹೇಳಿತ್ತು. ಆದರೆ 2016ರಲ್ಲಿ ಹೊಸ ಸರ್ಕಾರವು, ಈ ಮುಂಚೆ ಈ ವರದಿಯನ್ನು ಅನುಮೋದಿಸಿದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಈ ಶಿಫಾರಸ್ಸುಗಳನ್ನು ಕಡೆಗಣಿಸಿತು. ಈಗ ಉತ್ತರಾಖಂಡದ ಹಿಮನದಿಗಳಿರುವ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು 76 ಜಲವಿದ್ಯುತ್ ಯೋಜನೆಗಳಿವೆ ಮತ್ತು ತಜ್ಞರೇ ಹೇಳುವಂತೆ ಅವೆಲ್ಲ ಸಿಡಿಯಲು ಸಿದ್ದವಾಗಿರುವ ಟೈಮ್‌ಬಾಂಬಿನಂತೆ ಕುಳಿತಿವೆ.

ಈ ಪ್ರವಾಹಕ್ಕೆ ನಿಖರ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದ್ದರೂ ಹಿಮನದಿಗಳು ಕರಗುವಿಕೆಯೇ ಈ ಪ್ರವಾಹಕ್ಕೆ ಕಾರಣವಿರಬಹುದು ಎಂಬುದು ತಜ್ಞರ ಅನಿಸಿಕೆ. ತಾಪಮಾನವು ಹೆಚ್ಚಿದಂತೆ ಹಿಮನದಿಗಳು ಹೆಚ್ಚಿನ ಪ್ರಮಾಣದಲ್ಲಿ ಕರಗಿ ಎತ್ತರದ ಪ್ರದೇಶದಲ್ಲಿ ನೀರಿನ ಸರೋವರಗಳು ಉಂಟಾಗುತ್ತವೆ. ಇವುಗಳಲ್ಲಿ ನೀರು ಹೆಚ್ಚಿದಂತೆ ಅತಿಯಾದ ಒತ್ತಡ ಉಂಟಾಗಿ ಸರೋವರದ ಒಡ್ಡುಗಳು ಕುಸಿಯತೊಡಗುತ್ತವೆ, ಇದರಿಂದಾಗಿ ಅಪಾರ ಪ್ರಮಾಣದ ನೀರು ಕಲ್ಲು ಬಂಡೆಗಳನ್ನು ಒಳಗೊಂಡು ಇಳಿಜಾರಿನಲ್ಲಿ ರಭಸವಾಗಿ ಹರಿಯತೊಡಗುತ್ತದೆ. ಕಡಿದಾದ ಬೆಟ್ಟಗಳಿಂದ ಹರಿಯುವ ಈ ನೀರಿಗೆ ಎಷ್ಟು ರಭಸವಿರುತ್ತದೆ ಎಂದರೆ ಇದು ಅಣೆಕಟ್ಟೆಯನ್ನೇ ಒಡೆದು ಮುನ್ನುಗ್ಗಬಹುದು.

ಒಂದು ಅಧ್ಯಯನದ ಪ್ರಕಾರ ಹಿಮಾಲಯದಲ್ಲಿದ್ದ ದೊಡ್ಡ ಹಿಮನದಿಗಳು ಸುಮಾರು 20%ರಷ್ಟು ಹಿಂದಕ್ಕೆ ಸರಿದಿವೆ ಮತ್ತು ಪ್ರತಿವರ್ಷ ಸುಮಾರು ಮೀಟರುಗಳಷ್ಟು ಹಿಮವು ಕರಗಿ ಹಿಮನದಿಗಳ ತಳವೂ ಗೋಚರಿಸುತ್ತಿದೆ. ಹಿಮನದಿಗಳು ಒಂದು ರೀತಿಯಲ್ಲಿ ನೀರಿನ ಠೇವಣಿಯಿದ್ದಂತೆ. ಹಿಮವು ನಿಧಾನವಾಗಿ ಕರಗಿ ವರ್ಷವಿಡೀ ನೀರನ್ನು ಉಣಿಸುತ್ತಲೇ ಇರುತ್ತವೆ. ಒಂದು ರೀತಿಯಲ್ಲಿ ನಮ್ಮ ಪಶ್ಚಿಮಘಟ್ಟದ ಶೋಲಾ ಅರಣ್ಯಗಳು ಹೇಗೆ ಸ್ಪಂಜಿನಂತೆ ನೀರನ್ನು ಹಿಡಿದುಕೊಂಡ ವರ್ಷಪೂರ್ತಿ ನದಿಹಳ್ಳಗಳಲ್ಲಿ ನೀರಿನ ಹರಿವು ಇರುವಂತೆ ನೋಡಿಕೊಳ್ಳುತ್ತವೆಯೋ ಹಾಗೆ. ಶೋಲಾ ಅರಣ್ಯದ ನಾಶದಿಂದ ಪಶ್ಚಿಮಘಟ್ಟದ ನದಿಗಳು ಹೇಗೆ ಬತ್ತುತ್ತವೆಯೋ ಹಾಗೆಯೇ ಹಿಮನದಿಗಳು ಕರಗಿ ಹೋಗುವುದರಿಂದ ಉತ್ತರ ಭಾರತದ ಬಹುತೇಕ ನದಿಗಳು ಗಂಭೀರವಾದ ನೀರಿನ ಕೊರತೆಯನ್ನು ಅನುಭವಿಸಲಿವೆ. ನಾವು ಇಂಗಾಲದ ಹೊರಸೂಸುವಿಕೆಯನ್ನು ತಡೆದು ಜಾಗತಿಕ ತಾಪಮಾನವನ್ನು ಹದ್ದುಬಸ್ತಿನಲ್ಲಿ ಇಟ್ಟರೂ ಶತಮಾನದ ಅಂಚಿಗೆ ನಮ್ಮಲ್ಲಿದ್ದ ಒಟ್ಟಾರೆ 33% ಹಿಮನದಿಗಳು ಸಂಪೂರ್ಣವಾಗಿ ಕರಗಿ ಹೋಗಲಿವೆ. ನಾವು ಯಾವ ನಿಯಂತ್ರಣವನ್ನು ಹೇರದೆ ಯಥಾಸ್ಥಿತಿಯನ್ನು ಮುಂದುವರಿಸಿದರೆ ಸುಮಾರು 66% ಹಿಮನದಿಗಳು ಶಾಶ್ವತವಾಗಿ ಕರಗಿಹೋಗಲಿವೆ.

ಸರಿ ಇನ್ನೂ ಒಂದು ಶತಮಾನ ತಾನೇ, ಈಗ ನಾವು ಆರಾಮವಾಗಿ ಇರಬಹುದಲ್ಲ ಎಂದು ನಾವೇನೂ ಯೋಚಿಸುವಂತಿಲ್ಲ. ಈ ಎಲ್ಲ ಬದಲಾವಣೆಗಳು ಒಂದೇ ಸಾರಿ ಆಗಿಬಿಡುವುದಿಲ್ಲ. ಸಾಮಾನ್ಯವಾಗಿ ಕಳೆದೆರಡು ದಶಕಗಳಲ್ಲಿ ಹೇಗೆ ಹವಾಮಾನದ ವೈಪರೀತ್ಯ ಉಂಟಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿರುತ್ತದೆ. ಒಂದು ತಿಂಗಳಿನಲ್ಲಿ ಆಗಬೇಕಾದ ಮಳೆ ಒಂದೇ ವಾರದಲ್ಲಿ ಆಗುವುದು, ಬಿತ್ತಿದ ಫಸಲನ್ನು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿಯೇ ಏಕಾಏಕಿ ಮಳೆಯಾಗಿ ಆ ವರ್ಷದ ಶ್ರಮ ಮತ್ತು ಬಂಡವಾಳವನ್ನು ಹಾಳು ಮಾಡಿಬಿಡುವುದು, ಇವೆಲ್ಲ ವಿದ್ಯಮಾನಗಳು ಸಹಜವೇನೋ ಅನ್ನುವಂತಾಗಿವೆ. ಕೊಡಗಿನಲ್ಲಿ, ಕೇರಳದಲ್ಲಿ ಕಂಡುಕೇಳರಿಯದಂತಹ ಭೂಕುಸಿತ ಉಂಟಾಗಿದೆ.

ಹೀಗೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಅನಾಹುತಗಳು ಉಂಟಾಗುತ್ತಲೇ ಇರುತ್ತವೆ. ಎರಡು ವರ್ಷದ ಹಿಂದೆ ನಾನು ಸಿಕ್ಕಿಂಗೆ ಹೋದ ಸಂದರ್ಭದಲ್ಲಿ ಸ್ಥಳೀಯರನ್ನು ಮಾತಿಗೆಳೆದಾಗ ಅವರೂ ಇದೇ ಮಾತನ್ನು ಪುನರುಚ್ಚರಿಸಿದರು. ಮುಂಚೆ ಹಿಮಪಾತವಾಗುತ್ತಿದ್ದ ಸ್ಥಳಗಳಲ್ಲಿ ಈಗ ಹಿಮಪಾತವೇ ಆಗುತ್ತಿಲ್ಲ, ಎಲ್ಲೋ ಮಂಜಿನಂತೆ ಸ್ವಲ್ಪ ಹಿಮ ಬಿದ್ದು ಹೋಗುತ್ತದಷ್ಟೇ. ಅವರು ಕೃಷಿ ಚಟುವಟಿಕೆಗಳಿಗಾಗಿ ಸಾಂಪ್ರದಾಯಿಕವಾಗಿ ಪಾಲಿಸುತ್ತಿದ್ದ ಪಂಚಾಂಗ, ತಿಥಿ ಮತ್ತು ನಕ್ಷತ್ರಗಳ ಲೆಕ್ಕಾಚಾರಗಳೆಲ್ಲ ಈಗ ಅವರ ಉಪಯೋಗಕ್ಕೆ ಬರುತ್ತಲೇ ಇಲ್ಲ. ಕಾರಣ ಮಳೆ ಮತ್ತು ಹಿಮಪಾತ ಆಗುತ್ತಿದ್ದ ವೇಳಾಪಟ್ಟಿಯೇ ಬುಡಮೇಲಾಗಿದೆ.

ಭಾರತದ ಪರಿಸರ ಹೋರಾಟಗಳಲ್ಲಿ ಎದ್ದು ಕಾಣುವುದು ಇದೇ ಚಮೋಲಿ ಜಿಲ್ಲೆಯ ಸುಂದರಲಾಲ್ ಬಹುಗುಣ ಮತ್ತು ಇತರ ಮಹಿಳೆಯರ ನೇತೃತ್ವದಲ್ಲಿ ನಡೆದ ಚಿಪ್ಕೋ(ಅಪ್ಪಿಕೋ) ಚಳವಳಿ. ಕಾಕತಾಳೀಯವೆಂದರೆ ಚಳವಳಿ ಪ್ರಾರಂಭವಾದ ಇದೇ ರೇಣಿ ಗ್ರಾಮದ ಆನತಿ ದೂರದಲ್ಲಿಯೇ ಈ ಅನಾಹುತ ಸಂಭವಿಸಿದೆ. ಅರಣ್ಯ ನಾಶದಿಂದ ಏನೇನು ಪರಿಣಾಮಗಳು ಉಂಟಾಗಬಹುದೆಂದು ಆ ಗ್ರಾಮಸ್ಥರು ಹೋರಾಟಕ್ಕೆ ಇಳಿದಿದ್ದರೋ ಅವೆಲ್ಲವೂ ಒಂದೊಂದಾಗಿ ಅವರ ಕಣ್ಣಮುಂದೆಯೇ ಘಟಿಸುತ್ತಿವೆ. ಚಿಪ್ಕೋ ಚಳವಳಿ ಈಗ ನೇಪಥ್ಯಕ್ಕೆ ಸರಿದಿದೆ, ಈ ಅನಾಹುತಗಳ ಕುರಿತು ಎಚ್ಚರಿಸುವ ವಿಜ್ಞಾನಿಗಳ ಮಾತಿಗೆ ಬೆಲೆಯಿಲ್ಲ, ಇದ್ದಬದ್ದ ಪರಿಸರ ಕಾನೂನುಗಳನ್ನು ಗಾಳಿಗೆ ತೂರಿ ಎಲ್ಲೆಡೆ ಜೆಸಿಬಿ, ಬುಲ್ಡೋಜರ್‌ಗಳನ್ನು ನುಗ್ಗಿಸಲಾಗುತ್ತಿದೆ ಡೈನಮೇಟುಗಳನ್ನು ಸಿಡಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರದ ಮತ್ತು ಎಲ್ಲ ಜೀವಿಗಳ ಉಳಿವು ನಾವೆಲ್ಲರೂ ಈ ವಿಷಯಗಳನ್ನು ಎಷ್ಟು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಈ ಕುರಿತು ಎಷ್ಟು ಗಟ್ಟಿಯಾಗಿ ದನಿ ಎತ್ತುತ್ತೇವೆ ಎಂಬುದರ ಮೇಲೆ ಆಧಾರಪಟ್ಟಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದ ಬಿಸಿ: ಪಂಜಾಬ್, ಹರಿಯಾಣಗಳಲ್ಲಿ ಜಿಯೋ ಚಂದಾದಾರರ ಗಣನೀಯ ಕುಸಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...