Homeಮುಖಪುಟಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

ಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

- Advertisement -
- Advertisement -

| ನೀಲಗಾರ |

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ ಎಲ್ಲರೂ ಕಾತುರದಿಂದ ನೋಡುತ್ತಿರುವ ರಾಜ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಗೆದ್ದವರು ದೇಶವನ್ನು ಗೆಲ್ಲುತ್ತಾರೆ ಎಂಬ ಹಳೆಯ ಮಾತು ಈ ಸಾರಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ, 2014ಕ್ಕೆ ಹೋಲಿಸಿದರೆ, ಬಿಜೆಪಿಯು ದೇಶದ ಉಳಿದೆಲ್ಲಾ ಭಾಗಗಳಲ್ಲಿ ಪಡೆದುಕೊಳ್ಳುವ ಹೆಚ್ಚುವರಿ ಸೀಟುಗಳನ್ನು ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢಗಳಲ್ಲಿ ಕಳೆದುಕೊಳ್ಳಲಿದೆ. ಅದೇ ರೀತಿ ಕ್ಲೀನ್ ಸ್ವೀಪ್ ಮಾಡಿದ್ದ ಉಳಿದ ರಾಜ್ಯಗಳಲ್ಲೂ ಸೀಟುಗಳು ಕಡಿಮೆಯಾಗಿ ಅದರ ಬಹುಮತವನ್ನು 30 ಸೀಟುಗಳಷ್ಟು ಕಡಿಮೆ ಮಾಡಲಿದೆ. ಎನ್‍ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿ ಆಳ್ವಿಕೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಉ.ಪ್ರ ಮತ್ತು ಬಿಹಾರಗಳು ನಿರ್ಧಾರ ಮಾಡಲಿವೆ. ಎರಡೂ ರಾಜ್ಯಗಳು ಸೇರಿ ಬಿಜೆಪಿಯು 50 ಸೀಟುಗಳನ್ನು ಕಳೆದುಕೊಂಡರೆ ಅಲ್ಲಿಗೆ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಬರುವುದು ಖಾಯಂ.

ಹಾಗಾಗಿಯೇ ಎಲ್ಲರ ಕಣ್ಣು ಉತ್ತರ ಪ್ರದೇಶದತ್ತ. ಈಗಾಗಲೇ 4 ಹಂತದ ಚುನಾವಣೆಗಳು ಮುಗಿದಿದ್ದು, ಇನ್ನೆರಡು ಹಂತದ ಚುನಾವಣೆಗಳಾದ ನಂತರ ಸಂಪೂರ್ಣ ಚಿತ್ರಣ ಸಿಗುತ್ತದಾದರೂ, ಈಗಾಗಲೇ ಹಲವು ವಿಶ್ಲೇಷಣೆಗಳು ಹೊರಬಂದಿವೆ. ವಿಪರ್ಯಾಸವೆಂದರೆ, ವಿವಿಧ ವಿಶ್ಲೇಷಣೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ.

ಉ.ಪ್ರದೇಶದಾದ್ಯಂತ ಸುತ್ತಾಡಿ, ಸ್ಥಳೀಯ ಸಂಗತಿಗಳನ್ನು ಅಧ್ಯಯನ ಮಾಡಿ ವರದಿ ಬರೆದಿರುವ ಮೀಡಿಯಾವಿಜಿಲ್.ಕಾಂನ ಅಭಿಜಿತ್ ಶ್ರೀವಾಸ್ತವ ಅವರು ಮಹಾಘಟಬಂಧನ್ (ಎಸ್ಪಿ ಬಿಎಸ್ಪಿ ಮತ್ತು ಆರ್‍ಎಲ್‍ಡಿ ಮೈತ್ರಿ)ಗೆ ಅನಾನುಕೂಲಕರ ಅಂಶಗಳು ಹೆಚ್ಚಿವೆ ಎನ್ನುತ್ತಾರೆ. ಆದರೆ, ಆಂತ್ರೋ.ಎಐ ಎಂಬ ಕೃತಕ ಬುದ್ಧಿಮತ್ತೆಯನ್ನಾಧರಿಸಿ ವಿಶ್ಲೇಷಣೆ ಮಾಡುವ ಗುಂಪು, ಚಾಣಕ್ಯ.ಕಾಂ ಮತ್ತು ತಮ್ಮದೇ ಮೂಲಗಳನ್ನಾಧರಿಸಿ ಕ್ವಿಂಟ್‍ನ ಆದಿತ್ಯ ಮೆನನ್ ಅದಕ್ಕೆ ವಿರುದ್ಧವಾದ ವಿಶ್ಲೇಷಣೆ ಮಾಡುತ್ತಾರೆ.

ಇದುವರೆಗೆ ಆಗಿರುವ ನಾಲ್ಕು ಹಂತದ ಮತದಾನದಲ್ಲಿ ಬಿಜೆಪಿಗೆ ಅಷ್ಟೇನೂ ಅನುಕೂಲವಾಗಿಲ್ಲ. ಉ.ಪ್ರ.ದ ಈ ಪಶ್ಚಿಮ ಭಾಗಗಳಲ್ಲಿ ಮುಸ್ಲಿಮರು, ಜಾಟರು, ಜಾಟವ್ (ಮಾಯಾವತಿಯವರ ಜೊತೆಗಿರುವ ದಲಿತ ಸಮುದಾಯ) ಮತ್ತು ಯಾದವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದ, ಮೈತ್ರಿಯು ಮುನ್ನಡೆ ಸಾಧಿಸಿದ್ದು ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕ್ವಿಂಟ್ ಹೇಳುತ್ತದೆ. ಆದರೆ ಮಾಯಾವತಿಯವರು “ಮುಸ್ಲಿಮರು ಕಾಂಗ್ರೆಸ್‍ಗೆ ಮತ ನೀಡಿ ವ್ಯರ್ಥಗೊಳಿಸಿಕೊಳ್ಳಬೇಡಿ” ಎಂಬ ಹೇಳಿಕೆಯಿಂದ ಉಂಟಾಗಿರುವ ಪ್ರತಿಧ್ರುವೀಕರಣ ಹಾಗೂ ತಳಮಟ್ಟದಲ್ಲಿ ಇನ್ನೂ ಬೆರೆಯದ ಮೈತ್ರಿ ಕಾರ್ಯಕರ್ತರ ಕಾರಣದಿಂದ ಬಿಜೆಪಿಗೇ ಹೆಚ್ಚಿನ ಅನುಕೂಲ ಎಂದು ಅಭಿಜಿತ್ ವಾದಿಸುತ್ತಾರೆ.

ಅವರ ಪ್ರಕಾರ ಮೈತ್ರಿಯಿಂದ ‘ಮಹತ್ವ’ದ ಸಾಧನೆ ಮಾಡಿದ ಉಪಚುನಾವಣೆಗಳಲ್ಲೇ ಈ ಸಂಗತಿ ಎದ್ದು ಕಂಡಿತ್ತು. ಮೂರೂ ಪಕ್ಷಗಳು ಒಟ್ಟುಗೂಡಿದರೆ ಅವರೆಲ್ಲರ ಮತಗಳೂ ಒಟ್ಟುಗೂಡುತ್ತವೆ ಎಂಬುದು ಸತ್ಯವಾಗಿಲ್ಲ. 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ವಿರೋಧ ಪಕ್ಷಗಳು ಪಡೆದುಕೊಂಡ ಮತಗಳನ್ನು ಕೂಡಿಸಿ, 2018ರ ಮಾರ್ಚ್‍ನ ಉಪಚುನಾವಣೆಯಲ್ಲಿ ಒಟ್ಟುಗೂಡಿ ಪಡೆದುಕೊಂಡ ಮತಗಳಿಗೆ ಹೋಲಿಸಿದರೆ ಇದು ಗೊತ್ತಾಗುತ್ತದೆ. ಬಿಜೆಪಿ ಪರ ಇರುವ ರಾಜಕೀಯ ವಿಶ್ಲೇಷಕ ಗುರುಮೂರ್ತಿಯವರು ಬರೆದಿರುವ ಅಂಕಣಲ್ಲಿನ ಸಂಗತಿಗಳು ಸರಿಯಿವೆ ಎಂಬುದು ಅಭಿಜಿತ್ ಅವರ ಅಂಬೋಣ. ಅಸೆಂಬ್ಲಿಗೆ ಹೋಲಿಸಿದರೆ, ಉಪಚುನಾವಣೆಯ ಹೊತ್ತಿಗೆ ಗೋರಖ್‍ಪುರದಲ್ಲಿ 14.8%ನಿಂದ 2.4%ಗೆ ಮೈತ್ರಿಯ ಮುನ್ನಡೆ ಇಳಿದಿತ್ತು. ಅಂದರೆ ಅಸೆಂಬ್ಲಿಯ ಸಂದರ್ಭದಲ್ಲಿ ಆ ಲೋಕಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಪಡೆದುಕೊಂಡ ಮತಗಳಷ್ಟನ್ನು ಉಪಚುನಾವಣೆಯಲ್ಲಿ ಪಡೆದುಕೊಳ್ಳಲಿಲ್ಲ. ಅದೇ ರೀತಿ ಫುಲ್‍ಪುರದಲ್ಲಿ 24%ನಿಂದ 8%ಗಿಳಿದಿತ್ತು ಹಾಗೂ ಕೈರಾನಾದಲ್ಲಿ 19.2%ನಿಂದ 4.7%ಗಿಳಿದಿತ್ತು. ಈ ಅಂಶವನ್ನು ಎಲ್ಲರೂ ಕಡೆಗಣಿಸಿ, ಮೈತ್ರಿಯಾಗಿಬಿಟ್ಟರೆ ಈ ಪಕ್ಷಗಳ ಮತಗಳೂ ಕ್ರೋಢೀಕೃತವಾಗುತ್ತವೆ ಎನ್ನುತ್ತಿದ್ದಾರೆ, ಇದು ತಪ್ಪು ಎನ್ನುತ್ತಾರೆ. ಜೊತೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೆ ಜನರು ಮತ ಹಾಕಲು ಬಯಸುತ್ತಾರಾದ್ದರಿಂದ, ಬಿಜೆಪಿಗೇ ಹೆಚ್ಚಿನ ಅನುಕೂಲವಾಗುತ್ತದೆ.

ಆದರೆ, ಆದಿತ್ಯ ಮೆನನ್ ಸರಳ ಅಂಗಗಣಿತ ಮುಂದಿಡುತ್ತಾರೆ. ಇದುವರೆಗೆ ಮತದಾನ ನಡೆದ 39 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿಗೆ ಇದ್ದ ಮತಪ್ರಮಾಣವು ಮೈತ್ರಿಗಿಂತ ಹೆಚ್ಚಿತ್ತು. ಆದರೆ, ಮುಸ್ಲಿಂ, ಯಾದವ್, ಜಾಟವ್‍ರ ಜೊತೆಗೆ ಜಾಟ್ & ಗುಜ್ಜರ್ ಮತಗಳೂ ಸೇರಿ ಮೈತ್ರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಉಳಿದ 41 ಸೀಟುಗಳಲ್ಲಿ ಮೈತ್ರಿಯು 24ರಲ್ಲಿ, ಬಿಜೆಪಿಯು 15ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ (ಮೈತ್ರಿಯ ಸೀಟುಗಳನ್ನು ಕೂಡಿದರೆ) ಮುನ್ನಡೆ ಹೊಂದಿದ್ದವು. ಹೀಗಾಗಿ ಮತಗಳ ಕೂಡಿಕೆಯಿಂದಲೇ ಅರ್ಧಕ್ಕಿಂತ ಹೆಚ್ಚು, ಅಂದರೆ 45, ಸೀಟುಗಳಲ್ಲಿ ಮೈತ್ರಿಯು ಗೆಲ್ಲುತ್ತದೆ. ಅದರ ಜೊತೆಗೆ ಮೈತ್ರಿಯಿಂದ ಸಂಚಯವಾಗಿರುವ ಬಲ ಹಾಗೂ ಗೆಲ್ಲುವ ಕೂಟವೆಂದು ಬಿಂಬಿತವಾಗಿರುವುದರಿಂದ ಇದು ಶೇ.80ರಷ್ಟು ಸೀಟು ಗೆದ್ದರೂ ಆಶ್ಚರ್ಯವಿಲ್ಲ ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಮತದಾನದ ಪ್ರಮಾಣದ ಆಧಾರದ ಮೇಲೆ ಆಂತ್ರೋ.ಎಐ ಮಾಡಿರುವ ವಿಶ್ಲೇಷಣೆಯ ಸಹಾಯವನ್ನೂ ಅವರು ತೆಗೆದುಕೊಂಡಿದ್ದಾರೆ.

ಮೂರೂ ಪಕ್ಷಗಳು ಸೇರಿಕೊಂಡು ಮೇಲ್ಮಟ್ಟದಲ್ಲಿ ಮಾಡಿಕೊಂಡಿರುವ ಮೈತ್ರಿಯು ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಿಷ್ಠಾವಂತ ಮತದಾರರ ಮೇಲೆ ಯಾವ ಪ್ರಭಾವವನ್ನು ಬೀರಿದೆ ಎಂಬುದು ಮತ್ತು ಈ ಸಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವ ಮತಗಳೆಷ್ಟು ಎಂಬ ಅಂಶಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ, ಉ.ಪ್ರ.ದಲ್ಲಿ ಮೂರು ವಿರೋಧ ಪಕ್ಷಗಳು ಜೊತೆಗೂಡಿರುವುದು ಜಿದ್ದಾಜಿದ್ದಿ ಸ್ಪರ್ಧೆಯನ್ನು ಕೂದಲೆಳೆಯ ಅಂತರಕ್ಕೆ ತಂದಿದೆ. ಹಾಗಾಗಿ ಪ್ರತಿಯೊಂದು ಅಂಶವೂ ಮುಖ್ಯವಾಗಲಿದೆ.

ಮತಬ್ಯಾಂಕುಗಳಲ್ಲಿ ಮೇಲ್ಜಾತಿಗಳು ಬಿಜೆಪಿಯ ಜೊತೆಗಿರುವುದರ ಜೊತೆಗೆ, ಎಲ್ಲಾ ಜಾತಿಗಳಿಗೂ ಸೇರಿದ ಹೊಸ ಮತದಾರರು ಜಾತಿ ಮೀರಿ ಬಿಜೆಪಿಗೇ ಮತ ಹಾಕುತ್ತಾರೆಂಬುದು ಹಲವಾರು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಆದರೆ, ಯಾದವೇತರ ಓಬಿಸಿ ಮತ್ತು ಜಾಟವೇತರ ದಲಿತರು ಬಿಜೆಪಿಯಿಂದ ಈ ಸಾರಿ ಮೈತ್ರಿಯ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ. ಯೋಗಿ ಆದಿತ್ಯನಾಥ್ ಆಳ್ವಿಕೆಯ ವಿರುದ್ಧವೂ ಖಚಿತವಾದ ಆಡಳಿತ ವಿರೋಧ ಅಲೆಯಿದ್ದು, ಅದು ಮೋದಿ ವಿರುದ್ಧ ಇನ್ನೂ ಕ್ರೋಢೀಕೃತವಾಗಿಲ್ಲ ಎಂದು ಹೇಳಲಾಗುತ್ತಿತ್ತು. ರೈತರಿಗೆ ಬೆಲೆಯ ಸಮಸ್ಯೆ ಮತ್ತು ಬೀಡಾಡಿ ದನಗಳ ಸಮಸ್ಯೆ ತೀವ್ರವಾಗಿದ್ದು, ಇದರ ಪರಿಣಾಮ ಯಾವ ಪ್ರಮಾಣಕ್ಕೆ ಆಗಬಹುದು ಎಂಬುದನ್ನೂ ನೋಡಬೇಕು.

ಯಾವ ಕಡೆಗೂ ಸೇರಿಕೊಳ್ಳದೇ ತೇಲುತ್ತಿದ್ದ 4ರಿಂದ 5% ಮತಗಳು ಬಿಜೆಪಿಯ ವಿರುದ್ಧವೇ ಇದ್ದವು (ಈ ಮಾತನ್ನು ಯೋಗೇಂದ್ರ ಯಾದವ್ ಸಹಾ ಪುಷ್ಟೀಕರಿಸುತ್ತಾರೆ). ಆದರೆ, ಅದನ್ನು ನಿರ್ಣಾಯಕವಾಗಿ ತಮ್ಮ ಕಡೆಗೆ ತಿರುಗಿಸಿಕೊಳ್ಳುವಲ್ಲಿ ಮೈತ್ರಿ ಪಕ್ಷಗಳು ಶಕ್ತರಾಗಲಿಲ್ಲ; ಮಾಯಾವತಿಯವರ ಮುಸ್ಲಿಂ ವೋಟಿನ ಹೇಳಿಕೆ ದೊಡ್ಡ ಡ್ಯಾಮೇಜ್ ಮಾಡಿತು ಎಂದು ಅಭಿಜಿತ್ ಹೇಳುತ್ತಾರೆ.

ಅದೇ ರೀತಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಾಗಿ ಸೂಚನೆ ನೀಡಿ ‘ಸಸ್ಪೆನ್ಸ್’ನಲ್ಲಿ ಇಟ್ಟಿದ್ದ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಬಹಳ ದೊಡ್ಡ ತಪ್ಪನ್ನು (shock doctrine) ಮಾಡಿದರು ಹಾಗೂ ತೇಜ್ ಬಹದ್ದೂರ್ ಯಾದವ್‍ರನ್ನು ಕಣಕ್ಕಿಳಿಸುವ ಮೂಲಕ (ನಂತರ ನಾಮಪತ್ರ ತಿರಸ್ಕೃತಗೊಂಡಿತು) ಸ್ಪರ್ಧೆ ಇರುವುದು ಮೋದಿ ಹಾಗೂ ಮೈತ್ರಿಯ ಮಧ್ಯೆ ಎಂಬ ಚಿತ್ರಣವನ್ನು ಕೊಡುವಲ್ಲಿಯೂ ಅಖಿಲೇಶ್-ಮಾಯಾವತಿ ಯಶಸ್ವಿಯಾದರು ಎಂಬುದು ಅವರ ಅಭಿಪ್ರಾಯ. ಇವೆಲ್ಲದರ ಲಾಭ ಬಿಜೆಪಿಗಾಗುತ್ತದೆ ಎಂದು ಅವರು ಹೇಳುತ್ತಾರೆ.

ಜೊತೆಗೆ ಪೂರ್ವ ಉ.ಪ್ರ.ದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಶಕ್ತಿ, ಪ್ರಿಯಾಂಕಾರ ಎಂಟ್ರಿಯಿಂದ ಮತ್ತು ಬಾಬುಸಿಂಗ್ ಕುಶ್ವಾಹಾ ಹಾಗೂ ರಮಕಾಂತ ಯಾದವ್‍ರ ಸೇರ್ಪಡೆಯಿಂದ ಬಲ ಹೆಚ್ಚಿಸಿಕೊಂಡಿದೆ. ಆದರೆ, ಇವೆಲ್ಲವೂ ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಅನಿಸಿಕೆ ವ್ಯಕ್ತ ಮಾಡುತ್ತಾರೆ.

ಅದೇನೇ ಇದ್ದರೂ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಿಂದಿನಷ್ಟು ಸೀಟುಗಳನ್ನು ಪಡೆದುಕೊಳ್ಳುವುದಿಲ್ಲ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮೇಲೆ ಹೇಳಲಾಗಿರುವ ಹಲವು ಅಂಶಗಳು ಬಿಜೆಪಿಯ ವಿರುದ್ಧವಾದರೆ, ಅದು 10ರಿಂದ 15 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಮೈತ್ರಿಯ ವಿರುದ್ಧವಾದರೆ, ಬಿಜೆಪಿಯು 65 ಸೀಟುಗಳವರೆಗೆ ಗೆಲ್ಲಬಹುದು. ವಿಶ್ಲೇಷಣೆಯಲ್ಲಿ ಸೇಫ್ ಇರಬೇಕು ಎಂದಾದಲ್ಲಿ ಬಿಜೆಪಿಯು 38, ಮೈತ್ರಿಯು 37 ಮತ್ತು ಕಾಂಗ್ರೆಸ್ 4-5 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಬೇಕಾಗುತ್ತದೆ.

ಅಂತಿಮ ಫಲಿತಾಂಶವು ಮೇ 23ಕ್ಕೇ ಬರುತ್ತದಾದರೂ, ಮೇ 18ರ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...