Homeಮುಖಪುಟಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

8 ಪೊಲೀಸರನ್ನೇ ನಿರ್ದಯವಾಗಿ ಕೊಲ್ಲುವ ಮಟ್ಟಕ್ಕೆ ವಿಕಾಸ್ ದುಬೆ ಬೆಳೆದುದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು..

- Advertisement -
- Advertisement -

ಕಾನ್ಪುರದಲ್ಲಿ ದರೋಡೆಕೋರ, ಕ್ರಿಮಿನಲ್ ವಿಕಾಸ್ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಕೊಂದದ್ದು ಪದಗಳಿಗೆ ನಿಲುಕದ ದುರಂತ. ಇದರ ನೋವಿನ ಆಳ ನನಗೆ ಗೊತ್ತಾಗುತ್ತದೆ. ಯಾಕೆಂದರೆ 2017 ಎಪ್ರಿಲ್ ವರೆಗೆ ನಾನು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥನಾಗಿ ಪೊಲೀಸರನ್ನು ಮುನ್ನಡೆಸುವ ಗೌರವ ಪಡೆದಿದ್ದೇನೆ. ನನ್ನ ಮಾಜಿ ಸಹೋದ್ಯೋಗಿಗಳ ಮೇಲಾದ ಗುಂಡಿನ ಸುರಿಮಳೆ ನನ್ನನ್ನು ವಿಚಲಿತನನ್ನಾಗಿಸುತ್ತದೆ. ವಿಕಾಸ್ ದುಬೆ ಯಾಕಾಗಿ ಇದನ್ನು ಮಾಡಿದ?

ವಿಕಾಸ್ ದುಬೆ, ಕಳೆದ ಕೆಲವು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಆಳವಾಗಿ ಬೇರು ಬಿಟ್ಟುಕೊಂಡಿರುವ ಪೊಲೀಸ್-ರಾಜಕೀಯ ಸಂಬಂಧದ ಫಲಾನುಭವಿ. ಏಕಕಾಲದಲ್ಲಿ ಈತ ಕ್ರಿಮಿನಲ್, ಭೂ ಕಬಳಿಕೆದಾರ, ರಾಜಕೀಯ ಶಕ್ತಿಯ ದಲ್ಲಾಳಿ, ಬ್ರಾಹ್ಮಣ ರಾಬಿನ್ ಹುಡ್ ಆಗಲು ಸಾಧ್ಯವಾಗಿದ್ದಾದರೂ ಹೇಗೆ?

ನಾನು ಇದರ ಕುರಿತು ವಿವರಿಸಲು ಪ್ರಯತ್ನಿಸುತ್ತೇನೆ. ವಿಕಾಸ್ ದುಬೆ ಗ್ರಾಮೀಣ ಕಾನ್ಪುರ್ ಪ್ರದೇಶದ ಚೌಬೆಪುರದ ನಿವಾಸಿ. 1990 ರ ದಶಕದ ಆರಂಭದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈತ ಕಾನೂನಿನ ಬಗ್ಗೆ ತಿರಸ್ಕಾರ ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಆ ಸಮಯದಲ್ಲಿ ಆಡಳಿತ ಪಕ್ಷದಲ್ಲಿದ್ದ ಅತ್ಯಂತ ಹಿರಿಯ ಸ್ಥಳೀಯ ರಾಜಕಾರಣಿ ಈತನಿಗೆ ಪ್ರೋತ್ಸಾಹ ನೀಡಿದ್ದರು.

ಇದು ಯುವಕ ದುಬೆಗೆ ನಿರ್ಣಾಯಕವಾಗಿತ್ತು. ದುಬೆ ಸ್ಥಳೀಯ ರಾಜಕೀಯ ಪ್ರವೇಶಿಸಿ ಅವುಗಳ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ. ಇದು ಮುಂದಿನ 25-30 ವರ್ಷಗಳಲ್ಲಿ ಅವನು ತನ್ನ ಅನುಕೂಲಕ್ಕೆ ತಕ್ಕಂತೆ ಅವರನ್ನು ಆಡಿಸುವಂತಾಯಿತು. ಈತ 1990 ಮತ್ತು 2000 ರ ದಶಕಗಳಲ್ಲಿ ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಹಾರುತ್ತಾ ಕ್ರಿಯಾಶೀಲವಾಗಿದ್ದ. ಅದೇ ಸಮಯದಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿದ್ದ ಚೌಬೆಪುರ ಪ್ರದೇಶದಲ್ಲಿ ಅಸಹಾಯಕರಿಂದ ಭೂಮಿಯನ್ನು ಕಸಿದುಕೊಳ್ಳುತ್ತಿದ್ದ. ರಾಜಕೀಯ ಪ್ರೋತ್ಸಾಹವು ಪೊಲೀಸ್ ತನಿಖೆಯಿಂದ ದುಬೆಗೆ ರಕ್ಷಣೆ ನೀಡಿತು.

ಪೊಲೀಸ್ ಠಾಣೆಯೊಳಗಡೆ ಕೊಲೆ

ಸ್ಥಳೀಯ ಭಾರತೀಯ ಜನತಾ ಪಕ್ಷದ ಮುಖಂಡ ಸಂತೋಷ್ ಶುಕ್ಲಾ ಸಕ್ರಿಯವಾಗಿರುವವರೆಗೂ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳು ಈಡೇರುವುದಿಲ್ಲ ಎಂದು ದುಬೆ ಅರಿತುಕೊಂಡಿದ್ದ. ಶುಕ್ಲಾ ಕೂಡ ಬ್ರಾಹ್ಮಣರಾಗಿದ್ದು, ಈರ್ವರು ಪ್ರಮುಖ ಓಟ್‌ಬ್ಯಾಂಕ್ ಅನ್ನು ಮುನ್ನಡೆಸಲು ಸ್ಪರ್ಧಿಸುತ್ತಿದ್ದರು. ಇದಲ್ಲದೆ, ಶುಕ್ಲಾ ದುಬೆಗಿಂತ ಸೀನಿಯರ್. ಇದರಿಂದ ತನಗಿರುವ ರಾಜಕೀಯ ಬೆಂಬಲದಿಮದ ದುಬೆ 2001 ರಲ್ಲಿ ಶಿವ್ಲಿ ಪೊಲೀಸ್ ಠಾಣೆಯೊಳಗೆ ಸಚಿವ ಮಟ್ಟದ ಕಾರ್ಯಕಾರಿಯಾಗಿದ್ದ ಶುಕ್ಲಾರನ್ನು ಕೊಲೆ ಮಾಡಿದ.

ವಿಕಾಸ್ ದುಬೆಗಿರುವ ಪೊಲೀಸರೊಂದಿಗಿನ ಮೈತ್ರಿಯನ್ನು ಅನೇಕ ಪುಟಗಳಲ್ಲಿ ಬರೆಯಬಹುದು. ಆದರೆ ನಾನು ಶುಕ್ಲಾ ಹತ್ಯೆಯಿಂದ ಪ್ರಾರಂಭಿಸಿ ಬರೆಯುತ್ತೇನೆ. ತನಿಖೆಯು ಆತನನ್ನು ಆರೋಪಿಯೆಂದು ಘೋಷಿಸಿ, ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಆದರೆ ವಿಚಾರಣೆಯ ಸಮಯದಲ್ಲಿ, ಪ್ರತ್ಯಕ್ಷದರ್ಶಿಗಳು, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗಳು ಪ್ರತಿಕೂಲ ಸಾಕ್ಷ್ಯ ನುಡಿದರು. ಪೊಲೀಸ್ ಠಾಣೆಯೊಳಗೆ ಸರ್ಕಾರಿ ಸಚಿವ ಮಟ್ಟದ ರಾಜಕಾರಣಿಯನ್ನು ಹೊಡೆದುರುಳಿಸಿದರೂ ಸಾಕ್ಷ್ಯಾಧಾರದ ಕೊರತೆಯಿಂದ ಅವನನ್ನು ಖುಲಾಸೆಗೊಳಿಸಲಾಯಿತು.

ಆ ಸಮಯದಲ್ಲಿ ಪ್ರಾಸಿಕ್ಯೂಷನ್ ಏನು ಮಾಡುತ್ತಿತ್ತು? ರಾಜಕೀಯ ನೇಮಕಾತಿಯಾಗಿರುವ ಜಿಲ್ಲಾ ಸರ್ಕಾರಿ ಮಂಡಳಿ ಪ್ರಶ್ನೆ ಎತ್ತ ಬೇಕಿತ್ತು. ಪ್ರಾಸಿಕ್ಯೂಷನ್ ಉಸ್ತುವಾರಿ ಹೊಂದಿರುವ ಜಿಲ್ಲಾಧಿಕಾರಿ ಇದನ್ನು ಕೈಗೈತ್ತಿಕೊಂಡು ವಾದಿಸಬೇಕಿತ್ತು. ಆದರೆ ಇದರ ಬದಲಾಗಿ ಖುಲಾಸೆ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲಾಗುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧರಿಸಿತು.

ಅದರ ನಂತರ, 2000 ರಲ್ಲಿ ಶಾಲಾ ಪ್ರಾಂಶುಪಾಲರ ಹತ್ಯೆ ಪ್ರಕರಣದಲ್ಲಿ ದುಬೆ ಮತ್ತೊಂದು ವಿಚಾರಣೆಯನ್ನು ಎದುರಿಸಬೇಕಾಯಿತು, 2004 ರಲ್ಲಿ ಈ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. ಆದರೆ ಆಶ್ಚರ್ಯವೇನೆಂದರೆ ಅನೇಕ ಕೊಲೆ ಪ್ರಕರಣಗಳು ಮತ್ತು ದರೋಡೆ ಸೇರಿದಂತೆ 60 ಕ್ಕೂ ಹೆಚ್ಚು ಪ್ರಕರಣಗಳ ಅಪರಾಧ ಇತಿಹಾಸ ಹೊಂದಿರುವ ವ್ಯಕ್ತಿಗೆ ಶೀಘ್ರದಲ್ಲೇ ಜಾಮೀನು ನೀಡಲಾಗುತ್ತಿರವುದು. ಮತ್ತೆ ಚೌಬೆಪುರಕ್ಕೆ ಬಂದಾಗ ಆತನಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ವಿವಿಧ ಸರ್ಕಾರಗಳ ಅಡಿಯಲ್ಲಿ ಈತನ ಅಪರಾಧಗಳ ವಿರುದ್ಧದ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಲಿಲ್ಲ?

ಬಲಶಾಲಿ ಬ್ರಾಹ್ಮಣ 

ಆ ಹೊತ್ತಿಗೆ, ವಿಕಾಸ್ ದುಬೆ ಚೌಬೆಪುರ ಪ್ರದೇಶದಲ್ಲಿ ಎರಡು ಡಜನ್‌ಗೂ ಹೆಚ್ಚು ಬ್ರಾಹ್ಮಣ ಪ್ರಾಬಲ್ಯದ ಗ್ರಾಮಗಳನ್ನು ನಿಯಂತ್ರಿಸುವ ಮಟ್ಟಿಗೆ ಖ್ಯಾತಿ ಪಡೆದಿದ್ದನು. ಅವನು ಹೇಳಿದವರು ಮಾತ್ರ ಈ ಗ್ರಾಮಗಳಲ್ಲಿ ಪ್ರಧಾನ್ ಆಗಲು ಸಾಧ್ಯವಾಗುತ್ತಿತ್ತು. ಈ ಮೂಲಕ ಅನಧಿಕೃತವಾಗಿ ಅಧಿಕಾರ ಅನುಭವಿಸುತ್ತಿದ್ದ. ಆತನ ಪರವಾಗಿ 20 ಪ್ರಧಾನ್‌ಗಳು ಆಯ್ಕೆಯಾದರೆ ಸಾಕು ಶಾಸಕಾಂಗ ಸಭೆ ಸ್ಥಾನವನ್ನು ಗೆಲ್ಲಲು ಮತ್ತು ಸಂಸತ್ತಿನ ಚುನಾವಣೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲು ಇದು ಸಾಕಾಗುತ್ತಿತ್ತು.

ಸ್ಥಳೀಯ ರಾಜಕೀಯ ಪುಡಾರಿಗಳ ಆಜ್ಞೆಯ ಮೇರೆಗೆ ಸ್ಟೇಷನ್ ಹೌಸ್ ಅಧಿಕಾರಿಯನ್ನು ವಾಡಿಕೆಯಂತೆ ನಿಯೋಜಿಸಲಾಗುತ್ತಿತ್ತು. ಇದರಿಂದ ಸ್ಥಳೀಯ ಪೊಲೀಸರು ದುಬೆಯನ್ನು ಎದುರು ಹಾಕಿಕೊಳ್ಳಲು ಧೈರ್ಯಮಾಡುತ್ತಾರೆಯೇ? ಅವರು ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾಗಿತ್ತು. ಪೊಲೀಸರು ಇರುವುದು ಸುವ್ಯವಸ್ಥೆ‌ ಕಾಪಾಡಿಕೊಳ್ಳಲು ಮಾತ್ರ. ಎಲ್ಲಿಯವರೆಗೆ ಅವರು ದುಬೆಗೆ ತೊಂದರೆ ನೀಡಲಿಲ್ಲವೋ, ಅಲ್ಲಿಯವರೆಗೆ ಆತ ಪೊಲೀಸರಿಗೆ ತೊಂದರೆ ನೀಡಲಿಲ್ಲ. ರಾಜ್ಯ ರಾಜಧಾನಿ ಲಕ್ನೋ ಇದನ್ನೆಲ್ಲ ತಿಳಿಯಲು ಅಥವಾ ಕಾಳಜಿ ವಹಿಸಲು ತುಂಬಾ ದೂರದಲ್ಲಿತ್ತು.

ತೀರಾ ಇತ್ತೀಚೆಗೆ, ಸೋದರ ಸಂಬಂಧಿಯನ್ನು ಕೊಲೆ ಮಾಡಿದ್ದಕ್ಕಾಗಿ 2018 ರಲ್ಲಿ ಬಂಧಿಸಲ್ಪಟ್ಟಿದ್ದರೂ ದುಬೆ ಫೆಬ್ರವರಿಯಲ್ಲಿ ಜಾಮೀನು ಪಡೆದಿದ್ದ.

ಈಗ ಸ್ಪಷ್ಟವಾದ ಸಂಗತಿಯೆಂದರೆ, ದುರಂತ ನಡೆದ ಎರಡು – ಮೂರು ದಿನಗಳ ಮೊದಲು, ಹೊಸ ಅಧಿಕಾರಿಯೊಬ್ಬರು ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾದರು. ಅವರು ಪರಾರಿಯಾದ ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 25 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದರು. ಬಹುಮಾನದ ಘೋಷಣೆಯು ಅಪರಾಧಿನ್ನು “ಭೀತಿಗೊಳಿಸುವ ಅಂಶ”ವಾಗಿತ್ತು.

ಸರ್ಕಲ್ ಇನ್ಸ್‌ಪೆಕ್ಟರ್ ದೇವೇಂದರ್ ಮಿಶ್ರಾ ನೇತೃತ್ವದ ಪೊಲೀಸ್ ಪಡೆ ಜುಲೈ 1 ರಂದು ವಿಕಾಸ್ ದುಬೆ ಮೇಲೆ ದಾಳಿ ನಡೆಸಲು ಯೋಜಿಸಿದಾಗ, ಕಾನ್ಪುರ್ ಪೊಲೀಸರೇ ಯಾರೋ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಶೂಟರ್‌ಗಳನ್ನು ಬಾಡಿಗೆಗೆ ಕರೆತಂದು ಹೊಂಚುಹಾಕಿ ದಾಳಿ ಮಾಡಿರುವುದರಿಂದ ಈ ದುರ್ಘಟನೆ ಜರುಗಿದೆ.

ಜೀವ ಕಳೆದುಕೊಂಡ ನನ್ನ ಸಂಗಾತಿಗಳಿಗಾಗಿ ನಾನು ದುಃಖಿಸುತ್ತೇನೆ. ನಾನು ಈ ವ್ಯವಸ್ಥೆಯ ಬಗ್ಗೆ ವಿಷಾದಿಸುತ್ತೇನೆ ಮತ್ತು ಅದು ಬದಲಾಗಬೇಕೆಂದು ಒತ್ತಾಯಿಸುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ವೃತ್ತಪರವಾಗಿ ಮಾಡುತ್ತಾರೆಯೇ ಹೊರತು ದ್ವೇಷ, ಕೋಪದಿಂದಲ್ಲ ಎಂದು ನಾನು ನಂಬುತ್ತೇನೆ. ಆರೋಪಿಗೆ ಶಿಕ್ಷೆಯಾಗುವಂತೆ ಸಾಕ್ಷಿಗಳನ್ನು ಸಂಗ್ರಹಿಸುತ್ತಾರೆ ಎಂದು ನಾನು ನಂಬುತ್ತೇನೆ.

ಕೃಪೆ: ಜಾವೀದ್ ಅಹ್ಮದ್, ಸ್ಕ್ರೋಲ್.ಇನ್

(ಜಾವೀದ್ ಅಹ್ಮದ್, ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು)


ಓದಿ: ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...