ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಒಡಿಶಾ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದ ಒಂದು ದಿನದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರರಾದ, ಸಂಸದೆ ಅಪರಾಜಿತಾ ಸಾರಂಗಿ ಅವರ ಕಚೇರಿಯನ್ನು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (BMC) ಸೀಲ್ ಮಾಡಿದೆ.
BMC ವಲಯ ಉಪ ಆಯುಕ್ತ (ನೈರುತ್ಯ) ರಬಿನಾರಾಯಣ್ ಜೆಥಿ ನೇತೃತ್ವದ ತಂಡವು ಕಚೇರಿಯನ್ನು 15 ದಿನಗಳ ಕಾಲ ಸೀಲ್ ಮಾಡಿದೆ.
ಇದನ್ನೂ ಓದಿ: ಕಂಟೈನ್ಮೆಂಟ್ ಪ್ರದೇಶಗಳ ಸೀಲ್ಡೌನ್ಗೆ 20-25 ಕೋಟಿ ರೂ. ಖರ್ಚು ಮಾಡಿದ ಬಿಬಿಎಂಪಿ!
“ಕೋವಿಡ್ ಮಾನದಂಡಗಳ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 15 ದಿನಗಳ ನಂತರ ಕಛೇರಿಯನ್ನು ಮತ್ತೆ ತೆರೆಯುವ ಮೊದಲು ಸ್ವಚ್ಚಗೊಳಿಸಲಾಗುವುದು” ಎಂದು ರಬಿನಾರಾಯಣ್ ಜೆಥಿ ಹೇಳಿದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅಕ್ಟೋಬರ್ 8 ರಂದು ನಗರದಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭುವನೇಶ್ವರದ ಸಂಸದರು ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಸಚಿವ (ಗೃಹ) ದಿಬ್ಯಾ ಶಂಕರ್ ಮಿಶ್ರಾ ಆರೋಪಿಸಿ, ಕೇಂದ್ರ ರಾಜ್ಯ ಸಚಿವ (ಗೃಹ) ನಿತ್ಯಾನಂದ್ ರೈ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬಿಜೆಪಿ ಲಜ್ಜೆಗೆಟ್ಟ, ಕರೆಪ್ಟ್ ಪೊಲಿಟಿಕಲ್ ಪಾರ್ಟಿ: ಸಿದ್ದರಾಮಯ್ಯ ಟೀಕೆ
ಈ ಘಟನೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಅಪರಾಜಿತಾ ಸಾರಂಗಿಯನ್ನು ಹಲವು ಮಹಿಳೆಯರು ಸುತ್ತುವರೆದಿದ್ದು, ಅವರು ಮಾಸ್ಕ್ಗಳನ್ನು ಧರಿಸಲಿಲ್ಲ, ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿರಲಿಲ್ಲ ಎಂಬುದು ಸ್ಪಷ್ಟವಾಗಿ ದಾಖಲಾಗಿದೆ. ಇದನ್ನು ತನಿಖೆಗೆ ಒಳಪಡಿಸಿದಾಗ, ಈ ಸ್ಥಳವು ಪಾಲಸ್ಪಲ್ಲಿಯ ಸಂಸದರ ಕಛೇರಿ ಎಂದು ತಿಳಿಯಿತು ಎಂದು ರಬಿನಾರಾಯಣ್ ಜೆಥಿ
ಆದರೆ ಈ ಕ್ರಮವನ್ನು ಸಂಸದೆ, ‘ಪ್ರತೀಕಾರಕ’ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಇದನ್ನೂ ಓದಿ: ಒಂದು ಭಾರತದೊಳಗೆ ಹಲವು ಭಾರತಗಳಿವೆ; ಇದು ಬಿಜೆಪಿಯವರಿಗೆ ಗೊತ್ತಿಲ್ಲ
ದಿವಂಗತ ಪ್ರದೀಪ್ ಮಹಾರಾತಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ, ಶಾಲಾ ಶಿಕ್ಷಣ ಸಚಿವ ಸಮೀರ್ ದಾಶ್ ಮತ್ತು ಬಿಜೆಡಿ ಶಾಸಕ ಉಮಾಕಾಂತ್ ಸಮಂತ್ರೇ ಅವರ ವಿಷಯದಲ್ಲಿ ರಾಜ್ಯ ಸರ್ಕಾರ ಏಕೆ ಮೌನವಾಗಿದೆ. ಮಾನದಂಡಗಳು ಎಲ್ಲರಿಗೂ ಒಂದೇ ಇರಬೇಕು” ಎಂದು ತಮ್ಮ ವಿರುದ್ಧದ ದೂರಿಗೆ ಪ್ರತಿಕ್ರಿಯೆಯಾಗಿ ಹೇಳಿದ್ದಾರೆ.
ಕುತೂಹಲಕಾರಿಯೆಂಬಂತೆ, ಸಂಸದೆ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ, ಬಿಜೆಡಿ ಶಾಸಕ ಉಮಾಕಾಂತ್ ಸಮಂತ್ರೇ ಅವರು ಶನಿವಾರ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರದೀಪ್ ಮಹಾರಾತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.
“ಇದು ಭಾವನಾತ್ಮಕ ಪ್ರತಿಕ್ರಿಯೆಯಾಗಿದೆ. ಆದರೆ ಕಾನೂನಿನ ಪ್ರಕಾರ ಯಾವುದೇ ಕ್ರಮವನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಕಾನೂನಿನ ದೃಷ್ಟಿಯಲ್ಲಿ ಯಾರೂ ಮೇಲಲ್ಲ. ನಾನು ಕಾನೂನಿನ ನಿಯಮಕ್ಕೆ ಬದ್ಧನಾಗಿರುತ್ತೇನೆ” ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ