Homeಮುಖಪುಟಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

- Advertisement -
- Advertisement -

-1-

’ಇಲ್ಲೇ ಹತ್ತಿರದಲ್ಲಿ ಒಂದು ಗುಡಿ ಇದೆ. ಅದರ ಮುಂದೆ ವಾಕಿಂಗ್ ಮಾಡುವಷ್ಟು ಜಾಗವಿದೆ. ಇವತ್ತು ಸಂಜೆ ಅಲ್ಲಿಗೆ ಹೋಗೋಣ’ ಅಂತ ಮಂಜುಗೆ ಗಂಟುಬಿದ್ದಿದ್ದೆ. ಆಫೀಸ್‌ನಿಂದ ಬಂದ ಕೂಡಲೇ ಆಕೆ ’ಹೋಗೋಣ ಬನ್ನಿ’ ಅಂದಳು. ಹೊರಟೆವು. ಅಲ್ಲಿ ಅಕ್ಕತಂಗಿಯರ ಹೆಸರಿನಲ್ಲಿ ಎರಡು ಗುಡಿಗಳಿದ್ದವು. ಅವು ಗುಡಿಯ ಹೆಸರಿನಂತೆ ಸಣ್ಣದಾಗೇನು ಇರಲಿಲ್ಲ. ಮೊದಲು ಸಣ್ಣಾಕಿಯ ಗುಡಿಯೊಳಗೆ ಹೋದೆವು. ಸ್ಪೀಕರ್‌ಗಳಲ್ಲಿ ಮಾರ್ದನಿಸುವ ’ಶಿಷ್ಟ’ ರಾಗದ ಸ್ತುತಿಗಳು ಅಪ್ಪಳಿಸಲಿಲ್ಲ. ಯಾವುದೇ ಸಂಸ್ಕೃತ ಮಂತ್ರಗಳಿರಲಿಲ್ಲ. ಗರ್ಭಗುಡಿಯೊಳಗೆ ಸಣ್ಣ ಹುಡುಗನೊಬ್ಬ ಪೂಜಾರಿಯಂತೆ ಕೂತಿದ್ದ. ಅವನಿಗೇನು ಕೆಲಸವಿದ್ದಂತೆ ಕಾಣಲಿಲ್ಲ. ಬರುತ್ತಿದ್ದ ಭಕ್ತರೆಲ್ಲರೂ ಸೀದಾ ಗರ್ಭಗುಡಿಯ ಒಳಗೇ ಹೋಗಿ ನಮಸ್ಕರಿಸುತ್ತಿದ್ದರು. ನಾವಿಬ್ಬರು ’ಇಂತಹ ದೊಡ್ಡ ಆಲಯದಲ್ಲಿ ಇಷ್ಟು ಸ್ವಾತಂತ್ರ್ಯವಿದೆಯಲ್ಲ?’ ಅಂಥ ದಂಗಾದೆವು. ಗರ್ಭಗುಡಿಯೊಳಗೆ ಬಗ್ಗಿ ನೋಡಿದೆವು. ಐದಾರು ಜನ ಹೆಂಗಸರು ಅಪ್ಪಣೆ ಕೇಳುವಂತೆ ಕೂತಿದ್ದರು. ಕೆಲವರು ಬೇಡಿಕೆಯಿಟ್ಟು ಧ್ಯಾನಸ್ಥರಾಗಿದ್ದರು. ನಾನು ’ಇಲ್ಲಿ ಸಾಕು ಬಾ. ದೊಡ್ಡಾಕಿಯ ಗುಡಿಯೊಳಗೆ ಹೋಗೋಣ’ ಅಂದೆ. ದೊಡ್ಡಾಕಿಯ ಗರ್ಭಗುಡಿಯೊಳಗೆ ಹೆಂಗಸರು ಗಂಡಸರು ಹೀಗೆ ಹತ್ತಾರು ಜನ ಕೂತ್ತಿದ್ದರು. ಅವರಲ್ಲಿ ಬೇಡಿಕೊಳ್ಳುವಂತೆ ಕೈಮುಗಿದು ಕೂತವರಿದ್ದರು. ಮೊಣಕಾಲೂರಿ ನಮಸ್ಕರಿಸುತ್ತಿದ್ದವರಿದ್ದರು. ದೇವಿಯನ್ನೇ ದಿಟ್ಟಿಸಿ ನೋಡುತ್ತಾ ಏನೇನೋ ಕೇಳುವವರಿದ್ದರು. ಹೀಗೆ ಡೈರಕ್ಟಾಗಿ ದೇವಿ ಮತ್ತು ಭಕ್ತರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಇವರ ನಡುವೆ ನಮಗೆ ಅದ್ಭುತವೊಂದು ಕಾಣಿಸಿತು! ಬುರ್ಖಾಧಾರಿ ಹೆಣ್ಣು ಮಗಳೊಬ್ಬಳು ತನ್ನ ಕೂಸು ಮತ್ತು ತಾಯಿಯೊಂದಿಗೆ ಒಳಗಿದ್ದಳು. ಆಕೆಯ ತಾಯಿ ಮಗು ಆಡಿಸುತ್ತಿದ್ದಳು. ಅವಳು ದೇವಿಯ ಮುಂದಿದ್ದ ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಗೆ ನಮಸ್ಕರಿಸಿ, ಎತ್ತುತ್ತಾ ಇಳಿಸುತ್ತಾ, ಪುನಃ ನಮಸ್ಕರಿಸುವಲ್ಲಿ ತಲ್ಲೀನಳಾಗಿದ್ದಳು. ಆಕೆಯನ್ನು ಮಾತಾಡಿಸಬೇಕೆಂದುಕೊಂಡೆವು. ಆದರೆ ಆಕೆಯ ಭಕ್ತಿಗೇಕೆ ಅಡ್ಡಿಪಡಿಸಬೇಕೆಂದು ಸುಮ್ಮನಾದೆವು.

ನಾವು ಹಿಂದೆಲ್ಲಾ ನೋಡಿದಂತಹ ದೇವಸ್ಥಾನಗಳಲ್ಲಿ, ದೇಹಕ್ಕೆ ತೊಟ್ಟ ಮೇಲ್ಭಾಗದ ವಸ್ತ್ರವನ್ನು ತೆಗೆದು ಬಗಲಲ್ಲಿ ಇಟ್ಟುಕೊಂಡು ಹೋಗುವುದು; ನಡು ಬಗ್ಗಿಸಿ ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನ ಮಾಡಿಕೊಳ್ಳುವುದು; ಅರ್ಥವಾಗದ ಶ್ಲೋಕಗಳನ್ನು ಉಚ್ಚರಿಸುತ್ತಾ ತೀರ್ಥಕೊಡುವ ಅರ್ಚಕನ ಆರತಿ ತಟ್ಟಗೆ ಚಿಲ್ಲರೆ ಹಾಕುವಂತಹದ್ದು ಸಾಮಾನ್ಯವಾಗಿರುತ್ತದೆ. ಹಾಗಾಗಿಯೋ ಏನೋ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ದೇವಿಯ ಗರ್ಭಗುಡಿಯೊಳಗೆ ನೋಡಿದ್ದು ನಮಗೆ ಅದ್ಭುತವಾಗಿ ಕಂಡಿತು. ಆದರೆ ದೇವಿಯ ಗರ್ಭಗುಡಿಯಲ್ಲಿದ್ದ ಸ್ಥಳೀಯರಿಗೆ ಅದು ಸಹಜವಾಗಿಯೇ ಇತ್ತು. ನಮ್ಮ ಸುತ್ತಲೂ ಇಂತಹ ಸಹಜ ಬದುಕನ್ನು ಸಹಿಸದವರು ಇರುವುದರಿಂದಲೇ ಗುಡಿಯಿರುವ ಊರು, ಗುಡಿಯ ಹೆಸರನ್ನು ಇಲ್ಲಿ ಬರೆಯಲಾಗಲಿಲ್ಲ.

-2-

ಇದರ ನಡುವೆ ಮತ್ತೊಂದು ಘಟನೆ ನೆನಪಾಗುತ್ತಿದೆ. ನ್ಯೂಸ್ ಚಾನೆಲ್ ಬಿತ್ತರಿಸಿದ್ದ 59 ಸೆಕೆಂಡಿನ ವಿಡಿಯೋವನ್ನು ನನ್ನ ಗೆಳೆಯರು ವಾಟ್ಸಪ್ ಸ್ಟೇಟಸ್‌ಗೆ ಹಾಕೊಂಡಿದ್ದರು. ಅದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಂಬಂಧಿಸಿತ್ತು. ಇವರು ಮೊನ್ನೆಯ ಏಕಾದಶಿಯಂದು ಇಹಲೋಕ ತ್ಯಜಿಸಿದರು. ಅವರಲ್ಲಿ ದೇವರನ್ನು ಕಂಡಂತಹ ಜನಸಾಮಾನ್ಯರು ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೂರದೂರುಗಳಿಂದಲೂ ದೇಹ ದರ್ಶನಕ್ಕಾಗಿ ಹರಿದುಬರುತ್ತಿದ್ದರು. ಆ ಜನರಲ್ಲಿ ಬೇರೆ ಧರ್ಮದವರೂ ಇದ್ದರು. ಸದಾ ಧರ್ಮದ ಹೆಸರಲ್ಲಿ ಉರಿವ ಬೆಂಕಿಗೆ ತುಪ್ಪ ಸುರಿವ ಮಾಧ್ಯಮಗಳ ಪ್ರತಿನಿಧಿಗಳು ಅಲ್ಲಿ ಕಾಣುತ್ತಿದ್ದ ’ಬೇರೆ ಧರ್ಮ’ದವರನ್ನೇ ಕರೆದು ಮಾತನಾಡಿಸುತ್ತಿದ್ದರು. ಅಂತಹವರಲ್ಲಿ ಸ್ಥಳೀಯ ರಹೀಂನಗರದ ಹಿರಿಜೀವವೂ ಒಂದಾಗಿತ್ತು. ಇವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ’ಶ್ರೀಗಳು ಇವತ್ತು ನಮ್ಮ ಜೊತೆಗಿಲ್ಲ, ತಾವೊಬ್ಬ ಬೇರೆ ಧರ್ಮವರಾಗಿ ಶ್ರೀಗಳ ದರ್ಶಕ್ಕೆ ಬಂದಿದ್ದೀರಿ, ಯಾವ ರೀತಿ ಪ್ರಭಾವ ಬೀರಿದ್ದರು?’ ಎಂಬ ಪ್ರಶ್ನೆ ಕೇಳುತ್ತಾನೆ. ಇದನ್ನು ಕೇಳಿಸಿಕೊಂಡ ಕೂಡಲೇ ಆ ಜೀವ ದುಃಖಿಸುತ್ತಾ, ಬಿಕ್ಕಳಿಸುತ್ತದೆ. ಇದರ ನಡುವೆ ಮಾಧ್ಯಮ ಪ್ರತಿನಿಧಿ ಮತ್ತೆ ’ಹೋಗುತ್ತಿದ್ರಾ, ಶ್ರೀಗಳ ಭಾಷಣಕ್ಕೆ? ಮಠಕ್ಕೆ ಹೋಗುತ್ತಿದ್ರಾ?’ ಅಂಥ ಕೇಳುತ್ತಾನೆ. ಆ ಹಿರಿಜೀವ ’ಏ… ಮಠಕ್ಕೆ ಹೋಗಿಲ್ಲ. ಹೋಗ್ಬೇಕಂತ್ಹೇಳಿ ವಿಚಾರ ಬಾಳ್ ಸರಿ ಬಂದಿತ್ತು ಖರೆ. ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾ ಹಿಂಗಾ ಅನ್ನಾಣ…. ಅಂಥ ಬಿಟ್ಬಿಟ್ಟೇವು. ಹೋಗೋ ವಿಚಾರ ಇಟ್ಟಿದ್ದೇವು. ಅಷ್ಟರಲ್ಲಿ ಹಿಂಗಾತು. ದೈವವಿಲ್ಲ’ ಅಂತ ಉತ್ತರಿಸಿದ ಮಾತುಗಳು ನನ್ನನ್ನು ಕೊರೆಯಲಾರಂಭಿಸಿದವು. ಒಮ್ಮೆಯಾದರೂ ’ನಡೆದಾಡುವ ದೇವರು’ ಬದುಕಿದ್ದಾಗ ಮಠದಲ್ಲಿ ಕಾಣಬಹುದಾಗಿದ್ದ ಹಂಬಲವನ್ನಷ್ಟೇ ಆ ಜೀವ ತೋಡಿಕೊಂಡಿದೆ.

ಜನ ತಮ್ಮಿಚ್ಛೆಯಂತೆ ತಮ್ಮ ಕಷ್ಟಕ್ಕೆ ನೆರವಾಗುವ, ನಂಬುವ, ಪೂಜಿಸುವ ದೇವರನ್ನು ಹೇಗೆಲ್ಲಾ ಬಂಧಿಸಿಟ್ಟಿದ್ದೇವಲ್ಲ? ಆ ಬುರ್ಖಾಧಾರಿ ಹೆಣ್ಣು ಮಗಳ ಸಂಕಟವನ್ನು ಆಲಿಸುವಂತಹ ಹಲವಾರು ಹೆಣ್ಣುದೇವರನ್ನು ದೂರವಿಟ್ಟಿದ್ದೇವಲ್ಲ? ಒಳಿತನ್ನು ಉಪದೇಶಿಸುವ ವ್ಯಕ್ತಿಯನ್ನು ಕಾಣಲು ಹೋದರೆ ’ಏನಾಗಬಹುದೋ’ ಎಂಬ ವಾತಾವರಣವನ್ನು ನಿರ್ಮಿಸಿದ್ದೇವಲ್ಲ? ’ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾಹಿಂಗಾ’ ಎಂಬುದರಲ್ಲಿ ಭಯ ಆತಂಕವೇನೂ ಕಾಣಿಸದು. ಈ ಮಾತುಗಳಲ್ಲಿ ’ನಮ್ಮಿಂದ ಏಕೆ ತೊಂದರೆ ಆಗಬೇಕು? ದೇವರಂತ ಮನುಷ್ಯನ ಮಾತುಗಳನ್ನು ಅಲ್ಲಿಇಲ್ಲಿ ಕೇಳಿಸಿಕೊಂಡರಾತು. ಯಾವ ಸಮಸ್ಯೆಯಾಗದಂತೆ ಎಂದಾದರೊಮ್ಮೆ ಕಂಡರಾತು’ ಎಂಬ ಕಳಕಳಿ ತುಂಬಿದೆ. ಇಷ್ಟೇ ಅಲ್ಲದೆ ನನಗೆ ಆ ಹಿರಿಜೀವದ ಮಾತುಗಳು ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದವರನ್ನು ಕಾಣುವುದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದವರನ್ನು ಅಣಕಿಸುವಂತೆ ಅನುರಣಿಸುತ್ತಿವೆ. ಛೇ…! ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್’, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...