Homeಮುಖಪುಟಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

- Advertisement -
- Advertisement -

-1-

’ಇಲ್ಲೇ ಹತ್ತಿರದಲ್ಲಿ ಒಂದು ಗುಡಿ ಇದೆ. ಅದರ ಮುಂದೆ ವಾಕಿಂಗ್ ಮಾಡುವಷ್ಟು ಜಾಗವಿದೆ. ಇವತ್ತು ಸಂಜೆ ಅಲ್ಲಿಗೆ ಹೋಗೋಣ’ ಅಂತ ಮಂಜುಗೆ ಗಂಟುಬಿದ್ದಿದ್ದೆ. ಆಫೀಸ್‌ನಿಂದ ಬಂದ ಕೂಡಲೇ ಆಕೆ ’ಹೋಗೋಣ ಬನ್ನಿ’ ಅಂದಳು. ಹೊರಟೆವು. ಅಲ್ಲಿ ಅಕ್ಕತಂಗಿಯರ ಹೆಸರಿನಲ್ಲಿ ಎರಡು ಗುಡಿಗಳಿದ್ದವು. ಅವು ಗುಡಿಯ ಹೆಸರಿನಂತೆ ಸಣ್ಣದಾಗೇನು ಇರಲಿಲ್ಲ. ಮೊದಲು ಸಣ್ಣಾಕಿಯ ಗುಡಿಯೊಳಗೆ ಹೋದೆವು. ಸ್ಪೀಕರ್‌ಗಳಲ್ಲಿ ಮಾರ್ದನಿಸುವ ’ಶಿಷ್ಟ’ ರಾಗದ ಸ್ತುತಿಗಳು ಅಪ್ಪಳಿಸಲಿಲ್ಲ. ಯಾವುದೇ ಸಂಸ್ಕೃತ ಮಂತ್ರಗಳಿರಲಿಲ್ಲ. ಗರ್ಭಗುಡಿಯೊಳಗೆ ಸಣ್ಣ ಹುಡುಗನೊಬ್ಬ ಪೂಜಾರಿಯಂತೆ ಕೂತಿದ್ದ. ಅವನಿಗೇನು ಕೆಲಸವಿದ್ದಂತೆ ಕಾಣಲಿಲ್ಲ. ಬರುತ್ತಿದ್ದ ಭಕ್ತರೆಲ್ಲರೂ ಸೀದಾ ಗರ್ಭಗುಡಿಯ ಒಳಗೇ ಹೋಗಿ ನಮಸ್ಕರಿಸುತ್ತಿದ್ದರು. ನಾವಿಬ್ಬರು ’ಇಂತಹ ದೊಡ್ಡ ಆಲಯದಲ್ಲಿ ಇಷ್ಟು ಸ್ವಾತಂತ್ರ್ಯವಿದೆಯಲ್ಲ?’ ಅಂಥ ದಂಗಾದೆವು. ಗರ್ಭಗುಡಿಯೊಳಗೆ ಬಗ್ಗಿ ನೋಡಿದೆವು. ಐದಾರು ಜನ ಹೆಂಗಸರು ಅಪ್ಪಣೆ ಕೇಳುವಂತೆ ಕೂತಿದ್ದರು. ಕೆಲವರು ಬೇಡಿಕೆಯಿಟ್ಟು ಧ್ಯಾನಸ್ಥರಾಗಿದ್ದರು. ನಾನು ’ಇಲ್ಲಿ ಸಾಕು ಬಾ. ದೊಡ್ಡಾಕಿಯ ಗುಡಿಯೊಳಗೆ ಹೋಗೋಣ’ ಅಂದೆ. ದೊಡ್ಡಾಕಿಯ ಗರ್ಭಗುಡಿಯೊಳಗೆ ಹೆಂಗಸರು ಗಂಡಸರು ಹೀಗೆ ಹತ್ತಾರು ಜನ ಕೂತ್ತಿದ್ದರು. ಅವರಲ್ಲಿ ಬೇಡಿಕೊಳ್ಳುವಂತೆ ಕೈಮುಗಿದು ಕೂತವರಿದ್ದರು. ಮೊಣಕಾಲೂರಿ ನಮಸ್ಕರಿಸುತ್ತಿದ್ದವರಿದ್ದರು. ದೇವಿಯನ್ನೇ ದಿಟ್ಟಿಸಿ ನೋಡುತ್ತಾ ಏನೇನೋ ಕೇಳುವವರಿದ್ದರು. ಹೀಗೆ ಡೈರಕ್ಟಾಗಿ ದೇವಿ ಮತ್ತು ಭಕ್ತರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಇವರ ನಡುವೆ ನಮಗೆ ಅದ್ಭುತವೊಂದು ಕಾಣಿಸಿತು! ಬುರ್ಖಾಧಾರಿ ಹೆಣ್ಣು ಮಗಳೊಬ್ಬಳು ತನ್ನ ಕೂಸು ಮತ್ತು ತಾಯಿಯೊಂದಿಗೆ ಒಳಗಿದ್ದಳು. ಆಕೆಯ ತಾಯಿ ಮಗು ಆಡಿಸುತ್ತಿದ್ದಳು. ಅವಳು ದೇವಿಯ ಮುಂದಿದ್ದ ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಗೆ ನಮಸ್ಕರಿಸಿ, ಎತ್ತುತ್ತಾ ಇಳಿಸುತ್ತಾ, ಪುನಃ ನಮಸ್ಕರಿಸುವಲ್ಲಿ ತಲ್ಲೀನಳಾಗಿದ್ದಳು. ಆಕೆಯನ್ನು ಮಾತಾಡಿಸಬೇಕೆಂದುಕೊಂಡೆವು. ಆದರೆ ಆಕೆಯ ಭಕ್ತಿಗೇಕೆ ಅಡ್ಡಿಪಡಿಸಬೇಕೆಂದು ಸುಮ್ಮನಾದೆವು.

ನಾವು ಹಿಂದೆಲ್ಲಾ ನೋಡಿದಂತಹ ದೇವಸ್ಥಾನಗಳಲ್ಲಿ, ದೇಹಕ್ಕೆ ತೊಟ್ಟ ಮೇಲ್ಭಾಗದ ವಸ್ತ್ರವನ್ನು ತೆಗೆದು ಬಗಲಲ್ಲಿ ಇಟ್ಟುಕೊಂಡು ಹೋಗುವುದು; ನಡು ಬಗ್ಗಿಸಿ ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನ ಮಾಡಿಕೊಳ್ಳುವುದು; ಅರ್ಥವಾಗದ ಶ್ಲೋಕಗಳನ್ನು ಉಚ್ಚರಿಸುತ್ತಾ ತೀರ್ಥಕೊಡುವ ಅರ್ಚಕನ ಆರತಿ ತಟ್ಟಗೆ ಚಿಲ್ಲರೆ ಹಾಕುವಂತಹದ್ದು ಸಾಮಾನ್ಯವಾಗಿರುತ್ತದೆ. ಹಾಗಾಗಿಯೋ ಏನೋ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ದೇವಿಯ ಗರ್ಭಗುಡಿಯೊಳಗೆ ನೋಡಿದ್ದು ನಮಗೆ ಅದ್ಭುತವಾಗಿ ಕಂಡಿತು. ಆದರೆ ದೇವಿಯ ಗರ್ಭಗುಡಿಯಲ್ಲಿದ್ದ ಸ್ಥಳೀಯರಿಗೆ ಅದು ಸಹಜವಾಗಿಯೇ ಇತ್ತು. ನಮ್ಮ ಸುತ್ತಲೂ ಇಂತಹ ಸಹಜ ಬದುಕನ್ನು ಸಹಿಸದವರು ಇರುವುದರಿಂದಲೇ ಗುಡಿಯಿರುವ ಊರು, ಗುಡಿಯ ಹೆಸರನ್ನು ಇಲ್ಲಿ ಬರೆಯಲಾಗಲಿಲ್ಲ.

-2-

ಇದರ ನಡುವೆ ಮತ್ತೊಂದು ಘಟನೆ ನೆನಪಾಗುತ್ತಿದೆ. ನ್ಯೂಸ್ ಚಾನೆಲ್ ಬಿತ್ತರಿಸಿದ್ದ 59 ಸೆಕೆಂಡಿನ ವಿಡಿಯೋವನ್ನು ನನ್ನ ಗೆಳೆಯರು ವಾಟ್ಸಪ್ ಸ್ಟೇಟಸ್‌ಗೆ ಹಾಕೊಂಡಿದ್ದರು. ಅದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಂಬಂಧಿಸಿತ್ತು. ಇವರು ಮೊನ್ನೆಯ ಏಕಾದಶಿಯಂದು ಇಹಲೋಕ ತ್ಯಜಿಸಿದರು. ಅವರಲ್ಲಿ ದೇವರನ್ನು ಕಂಡಂತಹ ಜನಸಾಮಾನ್ಯರು ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೂರದೂರುಗಳಿಂದಲೂ ದೇಹ ದರ್ಶನಕ್ಕಾಗಿ ಹರಿದುಬರುತ್ತಿದ್ದರು. ಆ ಜನರಲ್ಲಿ ಬೇರೆ ಧರ್ಮದವರೂ ಇದ್ದರು. ಸದಾ ಧರ್ಮದ ಹೆಸರಲ್ಲಿ ಉರಿವ ಬೆಂಕಿಗೆ ತುಪ್ಪ ಸುರಿವ ಮಾಧ್ಯಮಗಳ ಪ್ರತಿನಿಧಿಗಳು ಅಲ್ಲಿ ಕಾಣುತ್ತಿದ್ದ ’ಬೇರೆ ಧರ್ಮ’ದವರನ್ನೇ ಕರೆದು ಮಾತನಾಡಿಸುತ್ತಿದ್ದರು. ಅಂತಹವರಲ್ಲಿ ಸ್ಥಳೀಯ ರಹೀಂನಗರದ ಹಿರಿಜೀವವೂ ಒಂದಾಗಿತ್ತು. ಇವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ’ಶ್ರೀಗಳು ಇವತ್ತು ನಮ್ಮ ಜೊತೆಗಿಲ್ಲ, ತಾವೊಬ್ಬ ಬೇರೆ ಧರ್ಮವರಾಗಿ ಶ್ರೀಗಳ ದರ್ಶಕ್ಕೆ ಬಂದಿದ್ದೀರಿ, ಯಾವ ರೀತಿ ಪ್ರಭಾವ ಬೀರಿದ್ದರು?’ ಎಂಬ ಪ್ರಶ್ನೆ ಕೇಳುತ್ತಾನೆ. ಇದನ್ನು ಕೇಳಿಸಿಕೊಂಡ ಕೂಡಲೇ ಆ ಜೀವ ದುಃಖಿಸುತ್ತಾ, ಬಿಕ್ಕಳಿಸುತ್ತದೆ. ಇದರ ನಡುವೆ ಮಾಧ್ಯಮ ಪ್ರತಿನಿಧಿ ಮತ್ತೆ ’ಹೋಗುತ್ತಿದ್ರಾ, ಶ್ರೀಗಳ ಭಾಷಣಕ್ಕೆ? ಮಠಕ್ಕೆ ಹೋಗುತ್ತಿದ್ರಾ?’ ಅಂಥ ಕೇಳುತ್ತಾನೆ. ಆ ಹಿರಿಜೀವ ’ಏ… ಮಠಕ್ಕೆ ಹೋಗಿಲ್ಲ. ಹೋಗ್ಬೇಕಂತ್ಹೇಳಿ ವಿಚಾರ ಬಾಳ್ ಸರಿ ಬಂದಿತ್ತು ಖರೆ. ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾ ಹಿಂಗಾ ಅನ್ನಾಣ…. ಅಂಥ ಬಿಟ್ಬಿಟ್ಟೇವು. ಹೋಗೋ ವಿಚಾರ ಇಟ್ಟಿದ್ದೇವು. ಅಷ್ಟರಲ್ಲಿ ಹಿಂಗಾತು. ದೈವವಿಲ್ಲ’ ಅಂತ ಉತ್ತರಿಸಿದ ಮಾತುಗಳು ನನ್ನನ್ನು ಕೊರೆಯಲಾರಂಭಿಸಿದವು. ಒಮ್ಮೆಯಾದರೂ ’ನಡೆದಾಡುವ ದೇವರು’ ಬದುಕಿದ್ದಾಗ ಮಠದಲ್ಲಿ ಕಾಣಬಹುದಾಗಿದ್ದ ಹಂಬಲವನ್ನಷ್ಟೇ ಆ ಜೀವ ತೋಡಿಕೊಂಡಿದೆ.

ಜನ ತಮ್ಮಿಚ್ಛೆಯಂತೆ ತಮ್ಮ ಕಷ್ಟಕ್ಕೆ ನೆರವಾಗುವ, ನಂಬುವ, ಪೂಜಿಸುವ ದೇವರನ್ನು ಹೇಗೆಲ್ಲಾ ಬಂಧಿಸಿಟ್ಟಿದ್ದೇವಲ್ಲ? ಆ ಬುರ್ಖಾಧಾರಿ ಹೆಣ್ಣು ಮಗಳ ಸಂಕಟವನ್ನು ಆಲಿಸುವಂತಹ ಹಲವಾರು ಹೆಣ್ಣುದೇವರನ್ನು ದೂರವಿಟ್ಟಿದ್ದೇವಲ್ಲ? ಒಳಿತನ್ನು ಉಪದೇಶಿಸುವ ವ್ಯಕ್ತಿಯನ್ನು ಕಾಣಲು ಹೋದರೆ ’ಏನಾಗಬಹುದೋ’ ಎಂಬ ವಾತಾವರಣವನ್ನು ನಿರ್ಮಿಸಿದ್ದೇವಲ್ಲ? ’ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾಹಿಂಗಾ’ ಎಂಬುದರಲ್ಲಿ ಭಯ ಆತಂಕವೇನೂ ಕಾಣಿಸದು. ಈ ಮಾತುಗಳಲ್ಲಿ ’ನಮ್ಮಿಂದ ಏಕೆ ತೊಂದರೆ ಆಗಬೇಕು? ದೇವರಂತ ಮನುಷ್ಯನ ಮಾತುಗಳನ್ನು ಅಲ್ಲಿಇಲ್ಲಿ ಕೇಳಿಸಿಕೊಂಡರಾತು. ಯಾವ ಸಮಸ್ಯೆಯಾಗದಂತೆ ಎಂದಾದರೊಮ್ಮೆ ಕಂಡರಾತು’ ಎಂಬ ಕಳಕಳಿ ತುಂಬಿದೆ. ಇಷ್ಟೇ ಅಲ್ಲದೆ ನನಗೆ ಆ ಹಿರಿಜೀವದ ಮಾತುಗಳು ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದವರನ್ನು ಕಾಣುವುದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದವರನ್ನು ಅಣಕಿಸುವಂತೆ ಅನುರಣಿಸುತ್ತಿವೆ. ಛೇ…! ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್’, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...