Homeಮುಖಪುಟಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

- Advertisement -
- Advertisement -

-1-

’ಇಲ್ಲೇ ಹತ್ತಿರದಲ್ಲಿ ಒಂದು ಗುಡಿ ಇದೆ. ಅದರ ಮುಂದೆ ವಾಕಿಂಗ್ ಮಾಡುವಷ್ಟು ಜಾಗವಿದೆ. ಇವತ್ತು ಸಂಜೆ ಅಲ್ಲಿಗೆ ಹೋಗೋಣ’ ಅಂತ ಮಂಜುಗೆ ಗಂಟುಬಿದ್ದಿದ್ದೆ. ಆಫೀಸ್‌ನಿಂದ ಬಂದ ಕೂಡಲೇ ಆಕೆ ’ಹೋಗೋಣ ಬನ್ನಿ’ ಅಂದಳು. ಹೊರಟೆವು. ಅಲ್ಲಿ ಅಕ್ಕತಂಗಿಯರ ಹೆಸರಿನಲ್ಲಿ ಎರಡು ಗುಡಿಗಳಿದ್ದವು. ಅವು ಗುಡಿಯ ಹೆಸರಿನಂತೆ ಸಣ್ಣದಾಗೇನು ಇರಲಿಲ್ಲ. ಮೊದಲು ಸಣ್ಣಾಕಿಯ ಗುಡಿಯೊಳಗೆ ಹೋದೆವು. ಸ್ಪೀಕರ್‌ಗಳಲ್ಲಿ ಮಾರ್ದನಿಸುವ ’ಶಿಷ್ಟ’ ರಾಗದ ಸ್ತುತಿಗಳು ಅಪ್ಪಳಿಸಲಿಲ್ಲ. ಯಾವುದೇ ಸಂಸ್ಕೃತ ಮಂತ್ರಗಳಿರಲಿಲ್ಲ. ಗರ್ಭಗುಡಿಯೊಳಗೆ ಸಣ್ಣ ಹುಡುಗನೊಬ್ಬ ಪೂಜಾರಿಯಂತೆ ಕೂತಿದ್ದ. ಅವನಿಗೇನು ಕೆಲಸವಿದ್ದಂತೆ ಕಾಣಲಿಲ್ಲ. ಬರುತ್ತಿದ್ದ ಭಕ್ತರೆಲ್ಲರೂ ಸೀದಾ ಗರ್ಭಗುಡಿಯ ಒಳಗೇ ಹೋಗಿ ನಮಸ್ಕರಿಸುತ್ತಿದ್ದರು. ನಾವಿಬ್ಬರು ’ಇಂತಹ ದೊಡ್ಡ ಆಲಯದಲ್ಲಿ ಇಷ್ಟು ಸ್ವಾತಂತ್ರ್ಯವಿದೆಯಲ್ಲ?’ ಅಂಥ ದಂಗಾದೆವು. ಗರ್ಭಗುಡಿಯೊಳಗೆ ಬಗ್ಗಿ ನೋಡಿದೆವು. ಐದಾರು ಜನ ಹೆಂಗಸರು ಅಪ್ಪಣೆ ಕೇಳುವಂತೆ ಕೂತಿದ್ದರು. ಕೆಲವರು ಬೇಡಿಕೆಯಿಟ್ಟು ಧ್ಯಾನಸ್ಥರಾಗಿದ್ದರು. ನಾನು ’ಇಲ್ಲಿ ಸಾಕು ಬಾ. ದೊಡ್ಡಾಕಿಯ ಗುಡಿಯೊಳಗೆ ಹೋಗೋಣ’ ಅಂದೆ. ದೊಡ್ಡಾಕಿಯ ಗರ್ಭಗುಡಿಯೊಳಗೆ ಹೆಂಗಸರು ಗಂಡಸರು ಹೀಗೆ ಹತ್ತಾರು ಜನ ಕೂತ್ತಿದ್ದರು. ಅವರಲ್ಲಿ ಬೇಡಿಕೊಳ್ಳುವಂತೆ ಕೈಮುಗಿದು ಕೂತವರಿದ್ದರು. ಮೊಣಕಾಲೂರಿ ನಮಸ್ಕರಿಸುತ್ತಿದ್ದವರಿದ್ದರು. ದೇವಿಯನ್ನೇ ದಿಟ್ಟಿಸಿ ನೋಡುತ್ತಾ ಏನೇನೋ ಕೇಳುವವರಿದ್ದರು. ಹೀಗೆ ಡೈರಕ್ಟಾಗಿ ದೇವಿ ಮತ್ತು ಭಕ್ತರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಇವರ ನಡುವೆ ನಮಗೆ ಅದ್ಭುತವೊಂದು ಕಾಣಿಸಿತು! ಬುರ್ಖಾಧಾರಿ ಹೆಣ್ಣು ಮಗಳೊಬ್ಬಳು ತನ್ನ ಕೂಸು ಮತ್ತು ತಾಯಿಯೊಂದಿಗೆ ಒಳಗಿದ್ದಳು. ಆಕೆಯ ತಾಯಿ ಮಗು ಆಡಿಸುತ್ತಿದ್ದಳು. ಅವಳು ದೇವಿಯ ಮುಂದಿದ್ದ ಕಟ್ಟಿಗೆಯಿಂದ ಮಾಡಿದ ಪೆಟ್ಟಿಗೆಗೆ ನಮಸ್ಕರಿಸಿ, ಎತ್ತುತ್ತಾ ಇಳಿಸುತ್ತಾ, ಪುನಃ ನಮಸ್ಕರಿಸುವಲ್ಲಿ ತಲ್ಲೀನಳಾಗಿದ್ದಳು. ಆಕೆಯನ್ನು ಮಾತಾಡಿಸಬೇಕೆಂದುಕೊಂಡೆವು. ಆದರೆ ಆಕೆಯ ಭಕ್ತಿಗೇಕೆ ಅಡ್ಡಿಪಡಿಸಬೇಕೆಂದು ಸುಮ್ಮನಾದೆವು.

ನಾವು ಹಿಂದೆಲ್ಲಾ ನೋಡಿದಂತಹ ದೇವಸ್ಥಾನಗಳಲ್ಲಿ, ದೇಹಕ್ಕೆ ತೊಟ್ಟ ಮೇಲ್ಭಾಗದ ವಸ್ತ್ರವನ್ನು ತೆಗೆದು ಬಗಲಲ್ಲಿ ಇಟ್ಟುಕೊಂಡು ಹೋಗುವುದು; ನಡು ಬಗ್ಗಿಸಿ ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನ ಮಾಡಿಕೊಳ್ಳುವುದು; ಅರ್ಥವಾಗದ ಶ್ಲೋಕಗಳನ್ನು ಉಚ್ಚರಿಸುತ್ತಾ ತೀರ್ಥಕೊಡುವ ಅರ್ಚಕನ ಆರತಿ ತಟ್ಟಗೆ ಚಿಲ್ಲರೆ ಹಾಕುವಂತಹದ್ದು ಸಾಮಾನ್ಯವಾಗಿರುತ್ತದೆ. ಹಾಗಾಗಿಯೋ ಏನೋ ಬುರ್ಖಾಧಾರಿ ಮಹಿಳೆಯೊಬ್ಬಳನ್ನು ದೇವಿಯ ಗರ್ಭಗುಡಿಯೊಳಗೆ ನೋಡಿದ್ದು ನಮಗೆ ಅದ್ಭುತವಾಗಿ ಕಂಡಿತು. ಆದರೆ ದೇವಿಯ ಗರ್ಭಗುಡಿಯಲ್ಲಿದ್ದ ಸ್ಥಳೀಯರಿಗೆ ಅದು ಸಹಜವಾಗಿಯೇ ಇತ್ತು. ನಮ್ಮ ಸುತ್ತಲೂ ಇಂತಹ ಸಹಜ ಬದುಕನ್ನು ಸಹಿಸದವರು ಇರುವುದರಿಂದಲೇ ಗುಡಿಯಿರುವ ಊರು, ಗುಡಿಯ ಹೆಸರನ್ನು ಇಲ್ಲಿ ಬರೆಯಲಾಗಲಿಲ್ಲ.

-2-

ಇದರ ನಡುವೆ ಮತ್ತೊಂದು ಘಟನೆ ನೆನಪಾಗುತ್ತಿದೆ. ನ್ಯೂಸ್ ಚಾನೆಲ್ ಬಿತ್ತರಿಸಿದ್ದ 59 ಸೆಕೆಂಡಿನ ವಿಡಿಯೋವನ್ನು ನನ್ನ ಗೆಳೆಯರು ವಾಟ್ಸಪ್ ಸ್ಟೇಟಸ್‌ಗೆ ಹಾಕೊಂಡಿದ್ದರು. ಅದು ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಂಬಂಧಿಸಿತ್ತು. ಇವರು ಮೊನ್ನೆಯ ಏಕಾದಶಿಯಂದು ಇಹಲೋಕ ತ್ಯಜಿಸಿದರು. ಅವರಲ್ಲಿ ದೇವರನ್ನು ಕಂಡಂತಹ ಜನಸಾಮಾನ್ಯರು ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೂರದೂರುಗಳಿಂದಲೂ ದೇಹ ದರ್ಶನಕ್ಕಾಗಿ ಹರಿದುಬರುತ್ತಿದ್ದರು. ಆ ಜನರಲ್ಲಿ ಬೇರೆ ಧರ್ಮದವರೂ ಇದ್ದರು. ಸದಾ ಧರ್ಮದ ಹೆಸರಲ್ಲಿ ಉರಿವ ಬೆಂಕಿಗೆ ತುಪ್ಪ ಸುರಿವ ಮಾಧ್ಯಮಗಳ ಪ್ರತಿನಿಧಿಗಳು ಅಲ್ಲಿ ಕಾಣುತ್ತಿದ್ದ ’ಬೇರೆ ಧರ್ಮ’ದವರನ್ನೇ ಕರೆದು ಮಾತನಾಡಿಸುತ್ತಿದ್ದರು. ಅಂತಹವರಲ್ಲಿ ಸ್ಥಳೀಯ ರಹೀಂನಗರದ ಹಿರಿಜೀವವೂ ಒಂದಾಗಿತ್ತು. ಇವರಿಗೆ ಮಾಧ್ಯಮ ಪ್ರತಿನಿಧಿಯೊಬ್ಬ ’ಶ್ರೀಗಳು ಇವತ್ತು ನಮ್ಮ ಜೊತೆಗಿಲ್ಲ, ತಾವೊಬ್ಬ ಬೇರೆ ಧರ್ಮವರಾಗಿ ಶ್ರೀಗಳ ದರ್ಶಕ್ಕೆ ಬಂದಿದ್ದೀರಿ, ಯಾವ ರೀತಿ ಪ್ರಭಾವ ಬೀರಿದ್ದರು?’ ಎಂಬ ಪ್ರಶ್ನೆ ಕೇಳುತ್ತಾನೆ. ಇದನ್ನು ಕೇಳಿಸಿಕೊಂಡ ಕೂಡಲೇ ಆ ಜೀವ ದುಃಖಿಸುತ್ತಾ, ಬಿಕ್ಕಳಿಸುತ್ತದೆ. ಇದರ ನಡುವೆ ಮಾಧ್ಯಮ ಪ್ರತಿನಿಧಿ ಮತ್ತೆ ’ಹೋಗುತ್ತಿದ್ರಾ, ಶ್ರೀಗಳ ಭಾಷಣಕ್ಕೆ? ಮಠಕ್ಕೆ ಹೋಗುತ್ತಿದ್ರಾ?’ ಅಂಥ ಕೇಳುತ್ತಾನೆ. ಆ ಹಿರಿಜೀವ ’ಏ… ಮಠಕ್ಕೆ ಹೋಗಿಲ್ಲ. ಹೋಗ್ಬೇಕಂತ್ಹೇಳಿ ವಿಚಾರ ಬಾಳ್ ಸರಿ ಬಂದಿತ್ತು ಖರೆ. ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾ ಹಿಂಗಾ ಅನ್ನಾಣ…. ಅಂಥ ಬಿಟ್ಬಿಟ್ಟೇವು. ಹೋಗೋ ವಿಚಾರ ಇಟ್ಟಿದ್ದೇವು. ಅಷ್ಟರಲ್ಲಿ ಹಿಂಗಾತು. ದೈವವಿಲ್ಲ’ ಅಂತ ಉತ್ತರಿಸಿದ ಮಾತುಗಳು ನನ್ನನ್ನು ಕೊರೆಯಲಾರಂಭಿಸಿದವು. ಒಮ್ಮೆಯಾದರೂ ’ನಡೆದಾಡುವ ದೇವರು’ ಬದುಕಿದ್ದಾಗ ಮಠದಲ್ಲಿ ಕಾಣಬಹುದಾಗಿದ್ದ ಹಂಬಲವನ್ನಷ್ಟೇ ಆ ಜೀವ ತೋಡಿಕೊಂಡಿದೆ.

ಜನ ತಮ್ಮಿಚ್ಛೆಯಂತೆ ತಮ್ಮ ಕಷ್ಟಕ್ಕೆ ನೆರವಾಗುವ, ನಂಬುವ, ಪೂಜಿಸುವ ದೇವರನ್ನು ಹೇಗೆಲ್ಲಾ ಬಂಧಿಸಿಟ್ಟಿದ್ದೇವಲ್ಲ? ಆ ಬುರ್ಖಾಧಾರಿ ಹೆಣ್ಣು ಮಗಳ ಸಂಕಟವನ್ನು ಆಲಿಸುವಂತಹ ಹಲವಾರು ಹೆಣ್ಣುದೇವರನ್ನು ದೂರವಿಟ್ಟಿದ್ದೇವಲ್ಲ? ಒಳಿತನ್ನು ಉಪದೇಶಿಸುವ ವ್ಯಕ್ತಿಯನ್ನು ಕಾಣಲು ಹೋದರೆ ’ಏನಾಗಬಹುದೋ’ ಎಂಬ ವಾತಾವರಣವನ್ನು ನಿರ್ಮಿಸಿದ್ದೇವಲ್ಲ? ’ಅಲ್ಲಿ ಬಿಡಾಂಗಿಲ್ಲ, ಅದಾಗುತೈತಿ, ಹಂಗಾಹಿಂಗಾ’ ಎಂಬುದರಲ್ಲಿ ಭಯ ಆತಂಕವೇನೂ ಕಾಣಿಸದು. ಈ ಮಾತುಗಳಲ್ಲಿ ’ನಮ್ಮಿಂದ ಏಕೆ ತೊಂದರೆ ಆಗಬೇಕು? ದೇವರಂತ ಮನುಷ್ಯನ ಮಾತುಗಳನ್ನು ಅಲ್ಲಿಇಲ್ಲಿ ಕೇಳಿಸಿಕೊಂಡರಾತು. ಯಾವ ಸಮಸ್ಯೆಯಾಗದಂತೆ ಎಂದಾದರೊಮ್ಮೆ ಕಂಡರಾತು’ ಎಂಬ ಕಳಕಳಿ ತುಂಬಿದೆ. ಇಷ್ಟೇ ಅಲ್ಲದೆ ನನಗೆ ಆ ಹಿರಿಜೀವದ ಮಾತುಗಳು ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದವರನ್ನು ಕಾಣುವುದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದವರನ್ನು ಅಣಕಿಸುವಂತೆ ಅನುರಣಿಸುತ್ತಿವೆ. ಛೇ…! ಎಲ್ಲರ ದೇವರನ್ನು ಎಷ್ಟೆಲ್ಲಾ ಗೋಡೆಗಳು ಬಂಧಿಸಿವೆ!

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್’, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...