ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಲಕ್ಷಾಂತರ ಅಭಿಮಾನಿಗಳು ತೀವ್ರ ನಿರಾಶೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ವೈಮನಸ್ಸು ಮತ್ತೆ ಬೀದಿಗೆ ಬಂದಿದೆ. ಜುಲೈ 9ರಂದು ವಿರಾಟ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಅಪಸ್ವರ ತೆಗೆದಿದ್ದಾರೆ.
ಟಿವಿ9 ಭಾರತ್ ನಡೆಸಿದ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಗೌತಮ್ ಗಂಭೀರ್ “ವಿರಾಟ್ ಕೊಹ್ಲಿ ಒಬ್ಬ ಉತ್ತಮ ಬ್ಯಾಟ್ಸ್ ಮನ್ ಇರಬಹುದು. ಆದರೆ ರೋಹಿತ್ ಶರ್ಮಾ ಮತ್ತು ದೋನಿ ಇಲ್ಲದಿದ್ದರೆ ವಿರಾಟ್ ಏನೇನು ಅಲ್ಲ” ಎಂದು ಟೀಕಿಸಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿಯ ವಿರುದ್ಧ ತಮ್ಮ ಅಸಮಾಧಾನವನ್ನು ಮತ್ತೆ ಹೊರ ಹಾಕಿದ್ದಾರೆ.
1) Kohli is a good captain for India because He has Rohit Sharma and MS Dhoni
2) Kohli, the batsman is in Top 4 in the world ( I mean Top 4)
really?
Such a crybaby this GG pic.twitter.com/TkOAf472Tk— Abhishek Mishra (@Ohyessabhi) July 9, 2019
ವಿರಾಟ್ ಕೊಹ್ಲಿ ಯಶಸ್ವಿ ನಾಯಕನಾಗಿದ್ದರೆ ಏಕೆ ಐಪಿಎಲ್ ನಲ್ಲಿ ಬೆಂಗಳೂರು ತಂಡಕ್ಕೆ ಒಂದೂ ಪ್ರಶಸ್ತಿ ಗೆದ್ದುಕೊಟ್ಟಿಲ್ಲ ಎಂದಿರುವ ಗಂಭೀರ್ ಬಹಳಷ್ಟು ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆಯೂ ಗಂಭೀರ್ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದರು. 2019ರ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ “ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ವಿರಾಟ್ ಕೊಹ್ಲಿಯನ್ನು ತಮ್ಮ ನಾಯಕನನ್ನಾಗಿ ಇಟ್ಟುಕೊಂಡಿರುವ ಆರ್.ಸಿ.ಬಿ ಯ ತಾಳ್ಮೆಯನ್ನು ಮೆಚ್ಚಬೇಕು ಎಂದು ವ್ಯಂಗ್ಯವಾಡಿದ್ದರು.
ಗೌತಮ್ ಗಂಭೀರ್ ಇತ್ತೀಚೆಗೆ ತಾನೇ ಬಿಜೆಪಿ ಪಕ್ಷವನ್ನು ಸೇರಿದ್ದಲ್ಲದೇ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.