Homeಕರ್ನಾಟಕನಮ್ಮದು ಗಾಂಧೀಜಿ ಹಿಂದುತ್ವ, ಅವರದ್ದು ಗೋಡ್ಸೆ ಹಿಂದುತ್ವ: ಕೆ.ಎನ್.ರಾಜಣ್ಣ

ನಮ್ಮದು ಗಾಂಧೀಜಿ ಹಿಂದುತ್ವ, ಅವರದ್ದು ಗೋಡ್ಸೆ ಹಿಂದುತ್ವ: ಕೆ.ಎನ್.ರಾಜಣ್ಣ

ಕಾಂಗ್ರೆಸ್‌ ಬೆಂಬಲದಿಂದ ಪಿಎಂ, ಸಿಎಂ ಆದವರಿಗೆ ಉಪಕಾರ ಸ್ಮರಣೆ ಇದೆಯಾ? ಇವರಿಗೆ ಲಾಟರಿ ಪ್ರಧಾನಿ, ಲಾಟರಿ ಮುಖ್ಯಮಂತ್ರಿ ಎಂದು ಹೇಳುತ್ತೇನೆ: ಮಾಜಿ ಸಚಿವ ಕೆ.ಎನ್‌.ರಾಜಣ್ಣ ವಾಗ್ದಾಳಿ

- Advertisement -
- Advertisement -

“ನಮ್ಮದು ಗಾಂಧೀಜಿ ಹಿಂದುತ್ವ, ಇತರ ಪಕ್ಷಗಳದ್ದು ಗೋಡ್ಸೆ ಹಿಂದುತ್ವ” ಎಂದು ಮಾಜಿ ಸಚಿವ, ಸಹಕಾರಿ ಕ್ಷೇತ್ರದ ಧುರೀಣ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ರೈತರ ಬಗರ್‌ ಹುಕುಂ ಸಾಗುವಳಿ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಅರಣ್ಯ ಇಲಾಖೆ ಹಾಗೂ ಸರ್ಕಾರದ ಹುನ್ನಾರದ ವಿರುದ್ಧ ಮಧುಗಿರಿ ತಾಲ್ಲೂಕಿನ ಬಂದ್ರೇಹಳ್ಳಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದ್ದಾರೆ.

ಹಿಂದುತ್ವದ ಬಗ್ಗೆ ಮಾತನಾಡುವವರಿಗೆ ಹೇಳುತ್ತೇನೆ. ನಾವು ಎಲ್ಲರೂ ಹಿಂದೂಗಳೇ. ನಾವೇನು ಕ್ರಿಶ್ಚಿಯನ್‌, ಪಾರ್ಸಿ ಮತ್ಯಾವುದೋ ಧರ್ಮದವರಲ್ಲ. ಆದರೆ ನಾವು ಪ್ರತಿಪಾದನೆ ಮಾಡುವುದು ಮಹಾತ್ಮ ಗಾಂಧೀಜಿಯವರ ಹಿಂದುತ್ವ. ಬೇರೆ ಪಕ್ಷದವರು ಪ್ರತಿಪಾದನೆ ಮಾಡುವುದು ಗೋಡ್ಸೆ ಹಿಂದುತ್ವ. ಗೋಡ್ಸೆ ಹಿಂದುತ್ವನ್ನು ನಾವು ವಿರೋಧ ಮಾಡಲೇಬೇಕು. ಗಾಂಧಿಯ ಹಿಂದುತ್ವದ ಜನರು ನಾವಾಗಬೇಕು ಎಂದು ಹೇಳಿದ್ದಾರೆ.

ಗೋಡ್ಸೆ ಹಿಂದುತ್ವವನ್ನು ತೋರಿಸಿ ಹಿಂದೂಗಳೆಲ್ಲ ಒಂದೇ ಎನ್ನುವವರು, ಪರಿಶಿಷ್ಟ ಜಾತಿಯವರನ್ನಾಗಲೀ, ನಮ್ಮೊಂದಿಗಾಗಲೀ ಸಂಬಂಧ ಮಾಡಲಿ ನೋಡೋಣ.  ವೋಟ್‌ಗಾಗಿ ಮಾತ್ರ ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಚೀನಾದವರು ಬಂದು ಇಂಡಿಯಾ ದೇಶದಲ್ಲಿ ಕೂತಿದ್ದಾರಲ್ಲ, 58 ಇಂಚಿನ ಎದೆಯವರು, ದೇಶಭಕ್ತರು ಹೋಗಿ ಅವರನ್ನು ಓಡಿಸಲಿ. ದೇಶಭಕ್ತಿಯನ್ನು ಇಲ್ಲಿ ತೋರಿಸುವುದಲ್ಲ ಎಂದು ಟೀಕಿಸಿದ್ದಾರೆ.

ಹಿಂದುತ್ವದ ಆಧಾರದ ಮೇಲೆ ಜಾತಿ, ಜಾತಿಗಳನ್ನು ಎತ್ತಿಕಟ್ಟಲಾಗುತ್ತಿದೆ. ಐದು ರಾಜ್ಯಗಳಲ್ಲಿ ಗೆದ್ದಿರಬಹುದು. ಅದು ಬೇರೆ ವಿಚಾರ. ವಿರೋಧ ಪಕ್ಷಗಳ ಲೋಪಗಳೂ ಇದಕ್ಕೆ ಕಾರಣವಾಗಿರುತ್ತವೆ. ಆದರೆ ಈ ದೇಶವನ್ನು, ಜನರನ್ನು ಒಡೆಯುವುದು, ದ್ವೇಶವನ್ನು ಹುಟ್ಟುಹಾಕುವುದು ದೇಶಕ್ಕೆ ಅಪಾಯ ಎಂದು ಎಚ್ಚರಿಸಿದ್ದಾರೆ.

ದೇವೇಗೌಡರನ್ನು ಸೆಕ್ಯುಲರ್‌ ಫ್ಯಾಬ್ರಿಕ್ ಅಂತಾರೆ. ಈ ಪದವನ್ನು ಎಲ್ಲಿಂದ ಹಿಡಿದುಕೊಂಡು ಬಂದರೋ ಗೊತ್ತಿಲ್ಲ. ಸೆಕ್ಯೂಲರ್‌ ಫ್ಯಾಬ್ರಿಕ್ ಅಂದರೆ ಏನಪ್ಪ? ಅಲ್ಲಿ ಹೋಗಿ ಮೋದಿಯನ್ನು ಭೇಟಿ ಮಾಡ್ತಾರೆ, ಇಲ್ಲಿ ಗೋ ಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್‌ನಲ್ಲಿ ಬೆಂಬಲ ಕೊಟ್ಟು ಪಾಸ್ ಮಾಡಿಸುತ್ತಾರೆ. ನಂತರ ಮೌರ್ಯ ಸರ್ಕಲ್‌ನಲ್ಲಿ ಕೂತು ಮಸೂದೆ ವಿರುದ್ಧವಾಗಿ ಧರಣಿ ಮಾಡ್ತಾರೆ. ಈ ರೀತಿಯ ಇಬ್ಬಂದಿ ರಾಜಕಾರಣ ಮಾಡುವುದರಿಂದ ದೇಶಕ್ಕೆ ಅಪಾಯವಿದೆ ಎಂದಿದ್ದಾರೆ.

ಹಾನಗಲ್‌, ಬಸವ ಕಲ್ಯಾಣ, ಸಿಂಧಗಿ ಉಪಚುನಾವಣೆಯಲ್ಲಿ ಜೆಡಿಎಸ್‌ನವರು ಮುಸ್ಲಿಮರಿಗೆ ಟಿಕೆಟ್ ನೀಡಿತು. ರಾಮನಗರದಲ್ಲಿ, ಚೆನ್ನಪಟ್ಟಣದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ, ಅಲ್ಲಿ ಜೆಡಿಎಸ್ ಮುಸ್ಲಿಮರಿಗೆ ಟಿಕೆಟ್ ಕೊಡಲಿ. ಕಡಿಮೆ ಸಂಖ್ಯೆಯಲ್ಲಿರುವಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದರೂ ಜನ ಮತ ಹಾಕಲಿಲ್ಲ ಅನ್ನುತ್ತಾರೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲದಿಂದ ಪ್ರಧಾನಿಯಾದವರು ಕಾಂಗ್ರೆಸ್‌ ಪಕ್ಷವನ್ನೇ ನಾಶ ಮಾಡುತ್ತೇನೆ ಎನ್ನುತ್ತಾರೆ. 13 ಜನ ಇದ್ದರೆ ಮಾತ್ರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯ. 37 ಜನ ಎಂಎಲ್‌ಎಗಳಿದ್ದರೂ ಕಾಂಗ್ರೆಸ್‌ ಬೆಂಬಲದಿಂದಾಗಿ ಮುಖ್ಯಮಂತ್ರಿಯಾದರು. ಅಧಿಕಾರ ಹೋದ ತಕ್ಷಣ ಕಾಂಗ್ರೆಸ್‌ ಮುಗಿಸುತ್ತೇನೆ ಅಂತಾರೆ. ಇವರಿಗೆ ಉಪಕಾರ ಸ್ಮರಣೆ ಇದೆಯಾ? ಇವರಿಗೆ ಲಾಟರಿ ಪ್ರಧಾನಿ, ಲಾಟರಿ ಮುಖ್ಯಮಂತ್ರಿ ಎಂದು ಹೇಳುತ್ತೇನೆ. 274 ಜನ ಎಂಪಿಗಳಿದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ. 16 ಜನ ಸದಸ್ಯರಿದ್ದರೂ ಕಾಂಗ್ರೆಸ್‌ ಬೆಂಬಲದಿಂದ ಪ್ರಧಾನಿಯಾದರು. ಈಗ ಕಾಂಗ್ರೆಸ್ ಮುಗಿಸುತ್ತೇನೆ ಎಂದರೆ ಇವರಿಗೆ ಉಪಕಾರ ಸ್ಮರಣೆ ಇದೆಯಾ? ಸುಳ್ಳು ಹೇಳಿಕೊಂಡು, ಜಾತಿ ಹೇಳಿಕೊಂಡು ಇರುವವರಿಗೆ ಯಶಸ್ಸು ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2023ರ ಚುನಾವಣೆಯಲ್ಲಿ ಮತ ಕೇಳಲು ಬಂದಿಲ್ಲ. ಚುನಾವಣೆಯಲ್ಲಿ ಮತ ಕೇಳಿ ಎಂಎಲ್‌ಎ ಆಗಬಹುದು. ಎಂಎಲ್‌ಎ ಎಂದು ಕರೆಸಿಕೊಳ್ಳುವ ಚಟವಿಲ್ಲ. ಜನರ ಹೃದಯದಲ್ಲಿ ಸ್ಥಾನ ಬಯಸುತ್ತೇನೆ. ವಿಧಾನಸಭೆಯಲ್ಲಿ ಅಲ್ಲ. ಎಲ್ಲ ಅಪಪ್ರಚಾರದ ನಡುವೆ 70,000 ಮತದಾರರು ನನಗೆ ಮತ ಹಾಕಿದ್ದೀರಿ. ದುಡ್ಡು ಹಾಗೂ ಜಾತಿ ಮೀರಿ ಬೆಂಬಲ ನೀಡಿದ್ದೀರಿ. ದುಡ್ಡಿದ್ದರೆ ಸಾಕು ಮಧುಗಿರಿಯಲ್ಲಿ ಗೆದ್ದು ಬಿಡ್ತಾರೆ ಎಂಬ ಭಾವನೆ ಹೊರಗಡೆ ಬೆಳೆದುಬಿಟ್ಟಿದೆ. ಇದನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದ್ದಾರೆ.

2008ರಲ್ಲಿ 500 ಮತಗಳ ಅಂತರದಲ್ಲಿ ಸೋಲು ಕಂಡೆ. ಅದಕ್ಕೆ ಕಾರಣಗಳು ಬೇರೆ ಇರಬಹುದು. ಮುಂದಿನ ಚುನಾವಣೆಯಲ್ಲಿ 1,000 ಮತಗಳ ಅಂತರದಲ್ಲಿ ಸೋತೆ. ನನಗೆ ಆಗಲೂ ಬೇಸರವಾಗಲಿಲ್ಲ. 2018 ಸೋತ ಮೇಲೆ ಮತ್ತೆ ಚುನಾವಣೆಯತ್ತ ತಲೆಯೂ ಹಾಕಬಾರದು ಎಂದುಕೊಂಡಿದ್ದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲ ಗೌರವ ತಂದಿರಿ. ನಾವು ಬಿಜೆಪಿಗೆ ಮತ ಹಾಕಿಸಿಲ್ಲ. ಆದರೆ ಜಿ.ಎಸ್‌.ಬಸವರಾಜು ಅವರಿಗೆ ಮತ ಹಾಕಿಸಿದೆವು ಅಷ್ಟೇ. ಯಾಕೆಂದರೆ ಬಸವರಾಜು ಅವರು ಹಳೆಯ ಕಾಂಗ್ರೆಸ್ಸಿಗರು. ಅವರು ಜನಪರವಾಗಿರುತ್ತಾರೆಂದು ಮತ ಹಾಕಿಸಿದ್ದೇವೆ. ಅದರಲ್ಲಿ ಎರಡನೇ ಮಾತಿಲ್ಲ. ಬಸವರಾಜು ಬಿಜೆಪಿಯವರು ಎಂದು ನಾವು ಭಾವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿರಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...