Homeಮುಖಪುಟಮೋದಿ ವಿರುದ್ಧ ರೈತರು, ಯೋಧರ ಸ್ಪರ್ಧೆಯು ಜಡಗೊಂಡ ನೈತಿಕ ಪ್ರಜ್ಞೆಗೆ ಚಾಟಿ ಏಟು

ಮೋದಿ ವಿರುದ್ಧ ರೈತರು, ಯೋಧರ ಸ್ಪರ್ಧೆಯು ಜಡಗೊಂಡ ನೈತಿಕ ಪ್ರಜ್ಞೆಗೆ ಚಾಟಿ ಏಟು

- Advertisement -
- Advertisement -

|ಬಿ. ಶ್ರೀಪಾದ ಭಟ್|

ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.

ಮನುಶ್ಯರು ಎಂದರೆ ಏನು, ಯಾರು ಎನ್ನುವುದರ ಕುರಿತು ನನಗೆ ಆಸಕ್ತಿ ಇಲ್ಲ, ಆದರೆ ಅವರು ಏನಾಗಲು ಬಯಸುತ್ತಿದ್ದಾರೆ ಎಂಬುದು ನನಗೆ ಮುಖ್ಯ – ಜೀನ್ ಪೌಲ್ ಸಾರ್ತೆ

ಜನಸಾಮಾನ್ಯರು ಎಂದರೆ ಯಾರು? ವಿವಿದ ಜಾತಿಗಳು, ವರ್ಗಗಳು, ಜನಾಂಗೀಯ ಬಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಂಡ ಸಮಾಜದಲ್ಲಿ ಬಹುಸಂಸ್ಕøತಿಯಲ್ಲಿ ಬದುಕುತ್ತಿರುವವರು ಎಂದು ಸರಳೀಕರಸಿ ಹೇಳಬಹದು. ಏಕರೂಪಿಯಾಗಿ ಶೂನ್ಯದಲ್ಲಿ ಈ ಜನಸಾಮಾನ್ಯ ಇರಲು ಸಾಧ್ಯವೇ ಇಲ್ಲ. ಇಲ್ಲಿ ಪ್ರಜೆಗಳು ಕೇವಲ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಯವಂತ ಸಮುದಾಯವೂ ಹೌದು. ಬಾರತದಂತಹ ವೈವಿದ್ಯತೆಯ ದೇಶದಲ್ಲಿ ಈ ಎಲ್ಲ ಬಿನ್ನತೆ, ಬಹುತ್ವವನ್ನ ಒಳಗೊಂಡು ಪ್ರಜಾಪ್ರಬುತ್ವ ಕಟ್ಟಲ್ಪಟ್ಟಿರುತ್ತದೆ. ಈ ಬಾರತದಲ್ಲಿ ಈಗ 2019ರ ಸಾರ್ವತ್ರಿಕ ಚುನಾವಣೆಯ ಮೂಲಕ ಈ ಪ್ರಜಾಪ್ರಬುತ್ವ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಳಪಡುತ್ತಿದೆ. ಆದರೆ ಈ ಚುನಾವಣೆಯಲ್ಲಿ ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳಸಮುದಾಯಗಳ, ಅಲ್ಪಸಂಖ್ಯಾತರ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿ ಪ್ರತಿನಿದಿಸಲ್ಪಡುತ್ತಿದ್ದಾನೆಯೆ ಎನ್ನುವ ಪ್ರಶ್ನೆಗೆ ದೊರಕುವ ಉತ್ತರ ತುಂಬಾ ನಿರಾಶಾದಾಯಕವಾಗಿದೆ. ಇಲ್ಲಿನ ರಾಜಕೀಯ ಪಕ್ಷಗಳು ತಮ್ಮ ಅಬ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಬಲಿಶ್ಟ ಜಾತಿ, ಕುಟುಂಬ, ಶ್ರೀಮಂತಿಕೆಗೆ ಆದ್ಯತೆ ಕೊಟ್ಟಿವೆ. ದಲಿತರು, ತಳಸಮುದಾಯಗಳು, ಮುಸ್ಲಿಂರ ಪ್ರಾತಿನಿದ್ಯ ಪ್ರಜ್ಞಾಪೂರ್ವಕವಾಗಿ ಕಡೆಗಣಿಸಲ್ಪಟ್ಟಿದೆ. ಇಂತಹ ಬಿಕ್ಕಟ್ಟಿನಲ್ಲಿ ಸಂವಿದಾನದ ನೀತಿಸಂಹಿತೆ ನೆನಪಿಸಿ ಪ್ರಜಾಪ್ರಬುತ್ವದ ಈ ಪ್ರಕ್ರಿಯೆ ಮುಂದುವರೆಸಲು ಜನ ಸಾಮಾನ್ಯರಿಗೆ ವೋಟ್ ಮಾಡಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಚುನಾವಣೋತ್ತರದಲ್ಲಿ ತನಗೆ ಯಾವುದೆ ಬಗೆಯ ಸಾಂತ್ವನ, ಅನುಕೂಲ ದೊರಕದೆ ಇದ್ದರು ಸಹ ಮತದಾರ ಮತಗಟ್ಟೆಗೆ ಹೋಗುತ್ತಿದ್ದಾನೆ. ಶೇಕಡಾ 60% ಪ್ರಮಾಣದಲ್ಲಿ ಮತದಾನವೂ ಆಗುತ್ತಿದೆ ಮತ್ತು ಈಗಾಗಲೆ ನಾಲ್ಕು ಹಂತದ ಮತದಾನ ಮುಗಿದಿದೆ.

ಈ ಬಾರಿ ಜನಸಾಮಾನ್ಯರು ಮತಾಂದ, ಪ್ಯಾಸಿಸ್ಟ್ ಪಕ್ಷ ಬಿಜೆಪಿಯನ್ನ ಮರಳಿ ಅದಿಕಾರಕ್ಕೆ ಬರದಂತೆ ತಡೆಯಲು ಉತ್ಸುಕರಾದಂತಿಲ್ಲ. ತಮಗೆ ಉದ್ಯೋಗ ಕೊಡದ, ಕೃಶಿ ಬಿಕಟ್ಟು ಬಗೆಹರಿಸದ, ಬಹುತ್ವವನ್ನ ನಾಶ ಮಾಡುತ್ತಿರುವ ಬಿಜೆಪಿ ಪಕ್ಷದ ವಿರುದ್ದ, ಮೋದಿ ಎಂಬ ನಿರಂಕುಶ ಆಡಳಿತಗಾರನ ವಿರುದ್ದ ಜನರ ಆಕ್ರೋಶವಿದೆ. ಆದರೆ ಆಯ್ಕೆ ಮಾಡುವ ನಿರ್ಣಾಯಕ ಸಂದರ್ಬದಲ್ಲಿ ಮತ್ತೆ ತನ್ನ ಶೋಶಕನನ್ನ, ಹಲ್ಲೆಗಾರನನ್ನ ಬೆಂಬಲಿಸುವ ಸಬಲ್ಟ್ರಾನ್ ಮನಸ್ಥಿತಿಯಲ್ಲಿ ಇಂದು ಬಾರತದ ಮತದಾರ ನರಳುತ್ತಿದ್ದಾನೆ. ಈ ವೈರುದ್ಯಗಳು ವಿವರಣೆಗೂ ನಿಲುಕುತ್ತಿಲ್ಲ. ಪತ್ರಕರ್ತ ನಿಸ್ಸಿಂ ಮಂತುಕರೆನ್ ಅವರು “ಬಾರ್ಬರಿಸಂ ಮತ್ತು ಪ್ರಾದೇಶಿಕ ಸಂಸ್ಕøತಿಯ ನಡುವೆ ಸಿಲುಕಿಕೊಂಡ ಸಾಮಾನ್ಯ ಜನತೆಯೇ ಬಾಸ್ಟಿಲ್‍ನಲ್ಲಿ ರಾಜ ದರ್ಬಾರನ್ನು ಕೆಳಗಿಳಿಸಿತು, ಹೈಟಿಯಲ್ಲಿ ಗುಲಾಮಿ ಸಂಸ್ಕøತಿಯ ವಿರುದ್ಧ ದಂಗೆಯೆದ್ದಿತು. ದ್ವಾರಪಾಲಕರಾಗಲು, ಕ್ಲರ್ಕಗಳಾಗಲು, ಗಾರ್ಡಗಳಾಗಲು, ನರೋಡಾ ಪಟಿಯಾದ, ರ್ವಾಂಡಾದ ಭವಿಷ್ಯದ ಮ್ಯಾನೇಜರ್‍ಗಳಾಗಲು ನಿರಾಕರಿಸುವಂತಹ “ಆಮ್ ಆದ್ಮಿ”ಗಳನ್ನು ಶೋಧಿಸೋಣ. ನಮ್ಮ “ಆಮ್ ಆದ್ಮಿ”ಗಳನ್ನು ನಾವೇ ಕಟ್ಟೋಣ” ಎಂದು ಹೇಳಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹ ಆಶಾಬಾವನೆ ಎಲ್ಲಿಯೂ ಕಂಡುಬರುತ್ತಿಲ್ಲ

ಆದರೆ ಈ ಎಲ್ಲಾ ಆತಂಕ, ಗೊಂದಲ, ಬೀತಿಯ ವಾತಾವರಣದ ನಡುವೆಯೂ ಆರೆಸ್ಸಸ್-ಮೋದಿಯ ಈ ಸರ್ವಾದಿಕಾರದ ದೋರಣೆಯ ವಿರುದ್ದ ಪ್ರತಿರೋದದ ದನಿ ಸದಾ ಜೀವಂತವಾಗಿದೆ. ಈ ಬಂಡಾಯ ಜನಸಾಮಾನ್ಯರ ನಡುವಿನಿಂದಲೆ ಹುಟ್ಟಿಕೊಳ್ಳುತ್ತಿದೆ. ಮೋದಿಯವರ ನಿರಂಕುಶ ಆಡಳಿತವು ಚುನಾವಣಾ ಸಂದರ್ಬದಲ್ಲಿ ಸಣ್ಣ ಮಟ್ಟದಲ್ಲಾರೂ ಸರಿ ಜನಸಾಮಾನ್ಯರ ಅಕ್ಟಿವಿಸಂಗೆ ಕಾರಣವಾಗುತ್ತಿದೆ. ಚುನಾವಣ ಸಂದರ್ಬದಲ್ಲಿ ಈ ಆಕ್ಟಿವಿಸಂ ಸಾಂಕೇತಿಕವಾಗಿದ್ದರೂ ಸಹ ಮಹತ್ವದಾಗಿರುತ್ತದೆ. ಸರಕಾರದ ಎಲ್ಲಾ ಸಂಸ್ಥೆಗಳು ನಿಶ್ಕ್ರಿಯೆಗೊಂಡಾಗ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವವನ್ನ ಮತ್ತಶ್ಟು ಗಟ್ಟಿಗೊಳಿಸಲು ಈ ಆಕ್ಟಿವಿಸಂ ಸಕ್ರಿಯವಾಗುತ್ತಿದೆ. ಉದಾಹರಣೆಗೆ ಅರಿಶಿಣ ಬೆಳೆಯುವ ತೆಲಂಗಾಣದ 25 ರೈತರು, ಬಹುಜನ ಚಳುವಳಿಯ ಬೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಜಾದ್ ರಾವಣ್, ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್‍ರಂತಹ ಜನಸಾಮಾನ್ಯರು ವಾರಣಾಸಿ ಕ್ಷೇತ್ರದಲ್ಲಿ ಮೋದಿಯವರ ವಿರುದ್ದ ಸ್ಪರ್ದಿಸಲು ನಿರ್ದರಿಸಿದ್ದಾರೆ. ಇದಕ್ಕೂ ಮೊದಲು ತಮಿಳುನಾಡಿನ 111 ರೈತರು ವಾರಣಾಸಿಯಲ್ಲಿ ಮೋದಿಯ ವಿರುದ್ದ ಸ್ಪರ್ದಿಸುತ್ತೇವೆ ಎಂದು ಹೇಳಿದ್ದರು. ಇಂದು ದೇಶದ ಬಹುಪಾಲು ಯುವಜನತೆ, ಮದ್ಯಮವರ್ಗ ತಮ್ಮ ವಿವೇಚನೆ, ಸ್ವಂತಿಕೆ ಕಳೆದುಕೊಂಡು ಕುರುಡಾಗಿ ಮೋದಿಯನ್ನ ಬೆಂಬಲಿಸುತ್ತಿರುವ ಸಂದರ್ಬದಲ್ಲಿ ಮೇಲಿನ ಜನಸಾಮಾನ್ಯರು ಅದು ತಪ್ಪು ನಡುವಳಿಕೆ ಎಂದು ತಮ್ಮ ಸ್ಪರ್ದೆಯ ಮೂಲಕ ಎಚ್ಚರಿಸುತ್ತಿದ್ದಾರೆ. ಏನೂ ಮಾಡಲು ಸಾದ್ಯವಿಲ್ಲ ಎಂದು ಕೈಚೆಲ್ಲಿ ಕೂರಬೇಕಾಗಿಲ್ಲ ಎಂದು ಪ್ರಜ್ಞಾವಂತರಿಗೆ ಸಂದೇಶ ರವಾನಿಸುತ್ತಿದ್ದಾರೆ. 40ರ ದಶಕದಲ್ಲಿ ನೂಕ್ಲಿಯರ್ ಬಾಂಬಿನ ವಿರುದ್ಧದ ಹೋರಾಟವನ್ನು ಹಮ್ಮಿಕೊಂಡ ಬಟ್ರೆಂಡ್ ರಸೆಲ್ ಎಂದಿಗೂ ಏಕಾಂಗಿಯಾಗಿರಲಿಲ್ಲ. ರಸೆಲ್‍ನ ಬಂಡಾಯ ಸಾವಿರಾರು ಹೋರಾಟಗಾರರನ್ನ ಸೃಶ್ಟಿಸಿತ್ತು. ಇಂದು ರೈತರ, ಸೈನಿಕನ ಸ್ಪರ್ದೆ ಮುಂದಿನ ದಿನಗಳಲ್ಲಿ ಹೊಸ ಚೈತನ್ಯವನ್ನ ರೂಪಿಸುವ ಸಾದ್ಯತೆ ಇದೆ.

ಆದರೆ ಚಂದ್ರಶೇಖರ್ ರಾವಣ್ ಅವರು ತಮ್ಮ ಈ ಸ್ಪರ್ದೆಯಿಂದ ವಿರೋದ ಪಕ್ಷಗಳ ಮತಗಳು ವಿಬಜನೆ ಆಗುವುದು ಬೇಡ ಎಂದು ಕಣದಿಂದ ಹಿಂದಕ್ಕೆ ಸರಿದು ಎಸ್‍ಪಿ-ಬಿಎಸ್‍ಪಿ ಮೈತ್ರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ತೆಲಂಗಾಣದ ಕೃಶಿ ಬಿಕ್ಕಟ್ಟು ಕುರಿತಾಗಿ ದೇಶದ ಗಮನ ಸೆಳೆಯಲು ತೆಲಂಗಾಣದ 25 ರೈತರು ವಾರಣಾಸಿಯಲ್ಲಿ ಮೋದಿಯವರ ವಿರುದ್ದ ಸ್ಪರ್ದೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ಮೋದಿಯವರ ಸರ್ವಾದಿಕಾರಕ್ಕೆ ಶರಣಾಗಿ ತನ್ನ ಸ್ವಾಯತ್ತತೆ, ಸ್ವಾತಂತ್ರ್ಯವನ್ನ ಕಳೆದುಕೊಂಡು ದುರ್ಬಲಗೊಂಡಿರುವ ಬಾರತದ ಚುನಾವಣ ಆಯೋಗವು 24 ರೈತರಿಗೆ ಸ್ಪರ್ದಿಸುವ ಅವಕಾಶ ನಿರಾಕರಿಸಿ ಸುನ್ನಂ ನರಸಯ್ಯ ಎನ್ನುವ ರೈತರಿಗೆ ಮಾತ್ರ ಸ್ಪದಿಸಲು ಅದಿಕೃತವಾಗಿ ಮಾನ್ಯತೆ ಕೊಟ್ಟಿದೆ. ತೆಲಂಗಾಣ ಅರಿಶಿಣ ಬೆಳೆಗಾರರ ಸಂಘಟನೆಯ ಅದ್ಯಕ್ಷ ನರಸಿಂಹ ನಾಯಿಡು ಅವರು ‘ಚುನಾವಣಾ ಆಯೋಗವು ಮೋದಿಯವರಿಗೆ ಸಂಪೂರ್ಣ ಶರಣಾಗತವಾಗಿದೆ, ಇದು ಪ್ರಜಾಪ್ರಬುತ್ವದ ಕೊಲೆ. ನಮ್ಮ ಸ್ಪರ್ದೆಯನ್ನ ತಿರಸ್ಕರಿಸಿದ ಈ ಆಯೋಗದ ವಿರುದ್ದ ಸುಪ್ರೀಂ ಕೋರ್ಟನಲ್ಲಿ ದೂರು ದಾಖಲಿಸುತ್ತೇವೆ, ಇದಕ್ಕಾಗಿ 20 ವಕೀಲರು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಈ ನಕಲಿ ಚೌಕಿದಾರ ಮೋದಿಯವರ ವಿರುದ್ದ ಸ್ಪರ್ದಿಸಿದ್ದ ಅಸಲಿ ಚೌಕಿದಾರ, ಮಾಜಿ ಸೈನಿಕ ತೇಜ ಬಹದ್ದೂರ್ ಯಾದವ್ ಅವರ ನಾಮಪತ್ರವನ್ನ ಕ್ಷುಲ್ಲಕ ಕಾರಣ ನೀಡಿ ಆಯೋಗವು ತಿರಸ್ಕøತಗೊಳಿಸಿದೆ. ಇದಕ್ಕೆ ನೀಡಿದ ಕಾರಣಗಳೂ ಅತ್ಯಂತ ಬಾಲಿಶವಾಗಿವೆ. ‘ಬ್ರಶ್ಟಾಚಾರ ಮತ್ತು ರಾಜ್ಯಕ್ಕೆ ವಿರುದ್ದವಾಗಿ ನಡೆದುಕೊಂಡ ಕೇಂದ್ರ, ರಾಜ್ಯ ಸರಕಾರದ ನೌಕರರು ಐದು ವರ್ಶಗಳ ಕಾಲ ಸ್ಪರ್ದಿಸುವಂತಿಲ್ಲ’ ಎನ್ನುವ ಕಾನೂನನ್ನ ಮುಂದಿಟ್ಟಿದ್ದಾರೆ. ಆದರೆ ತೇಜ ಬಹದ್ದೂರ ಅವರ ವಿರುದ್ದ ಬ್ರಶ್ಟಾಚಾರದ, ದೇಶದ್ರೊಹದ ಯಾವುದೆ ಆರೋಪಗಳಿರಲಿಲ್ಲ. ಆದರೆ ಚುನಾವಣ ಆಯೋಗದ ಈ ಏಕಪಕ್ಷೀಯ ನಿರ್ದಾರದ ವಿರುದ್ದ ಸುಪ್ರೀಂ ಕೋರ್ಟಗೆ ಅಪೀಲು ಸಲ್ಲಿಸಲು ತೇಜ್ ಬಹದ್ದೂರ್ ನಿರ್ದರಿಸಿದ್ದಾರೆ. ದ.ವೈರ್.ಇನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತೇಜ ಬಹದ್ದೂರ ಅವರು ‘ಮೋದಿ ಒಬ್ಬ ಸುಳ್ಳುಗಾರ. ಕಳೆದ ಒಂದು ವರ್ಶದಲ್ಲಿ ಸೇನಾ ಅರೆಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ 997 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮೋದಿಯವರೆ ನೇರ ಹೊಣೆ. ನಾನು ಯೋದರಿಗೆ ಕಳಪೆ ಗುಣಮಟ್ಟದ ಆಹಾರ ಕೊಡುತ್ತಿರುವುದರ ವಿರುದ್ದ ಮಾತನಾಡಿದ್ದೆ, ಆದರೆ ಈ ಕಾರಣಕ್ಕೆ ನನ್ನ ವಜಾಗೊಳಿಸಿದರು. ಆದರೆ ಯೋದರ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ. 50,000 ಮಾಜಿ ಸೇನಾ ಅದಿಕಾರಿಗಳು ನನ್ನ ಪರವಾಗಿ ಪ್ರಚಾರ ಮಾಡಲು ತಯಾರಿದ್ದಾರೆ’ ಎಂದು ಹೇಳಿದ್ದಾರೆ.

ಒಂದೆಡೆ ಚುನಾವಣ ಆಯೋಗವು ತನ್ನ ಸ್ವಾಯತ್ತತೆಯನ್ನ ಬಳಸಿಕೊಂಡು ಯಾವುದೆ ಪಕ್ಷಪಾತವಿಲ್ಲದೆ ತನಗಿರುವ ಶಾಸನಬದ್ದ ಅದಿಕಾರವನ್ನ ಚಲಾಯಿಸಬೇಕಾಗಿತ್ತು. ಇದಕ್ಕಾಗಿ ಹೊಸದಾದ ಯಾವುದೆ ಕಟ್ಟುಪಾಡುಗಳನ್ನ ರೂಪಿಸುವ ಅಗತ್ಯವಿರಲಿಲ್ಲ. ಟಿ.ಎನ್.ಶೇಶನ್, ಮೈಕೆಲ್ ಲಿಂಗ್ಡೊರಿಂದ ಮೊದಲುಗೊಂಡು ನಂತರ ಬಂದು ಬಹುತೇಕ ಮುಖ್ಯ ಚುನಾವಣ ಅದಿಕಾರಿಗಳು (2017-18ರ ಅವದಿಯಲ್ಲಿದ್ದ ಜ್ಯೋತಿ, ರಾವತ್‍ರಂತವರನ್ನ ಹೊರತುಪಡಿಸಿ) ಜವಬ್ದಾರಿಯಿಂದ, ಸ್ವಾತಂತ್ರ್ಯದಿಂದ ವಿವೇಚನೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಚುನಾವಣ ಆಯೋಗವು ಕೇಂದ್ರ ಸರಕಾರದ ಕೈಗೊಂಬೆಯಲ್ಲ ಎಂದು ತಮ್ಮದೆ ಮಿತಿಯೊಳಗೆ ಸಾಬಿತುಪಡಿಸಿದ್ದಾರೆ. ಆದರೆ ಈಗಿನ ಮುಖ್ಯ ಚುನಾವಣ ಅದಿಕಾರಿ ಸುನಿಲ್ ಅರೋರ ಸಂಪೂರ್ಣವಾಗಿ ಮೋದಿಯವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಯಾರು ಗೆದ್ದರು ಅಥವಾ ಸೋತರು ಎನ್ನುವುದರ ಜೊತೆಗೆ ಹೇಗೆ ಆಟವಾಡಿದರು ಎನ್ನುವುದು ಸಹ ಮುಖ್ಯವಾಗುತ್ತದೆ. ಇದೆ ರೀತಿ ಚುನಾವಣೆಯ ನಂತರ ಯಾರು ಗೆದ್ದರು ಅಥವಾ ಸೋತರು ಎನ್ನುವುದರ ಜೊತೆಗೆ ಇಡೀ ಚುನಾವಣೆಯನ್ನ ಯಾವ ರೀತಿ ನಡೆಸಲಾಯಿತು, ನಿಬಾಯಿಸಲಾಯಿತು ಎಂಬುದೂ ಮುಖ್ಯವಾಗುತ್ತದೆ. ಇದು ಪ್ರಜಾಪ್ರಬುತ್ವದ ಜೀವಂತಿಕೆಯನ್ನ ನಿರ್ದರಿಸುತ್ತದೆ. ಆದರೆ 2019ರ ಚುನಾವಣೆಯಲ್ಲಿ ಬಾರತ ಚುನಾವಣ ಆಯೋಗವು ಪ್ರಜಾಪ್ರಬುತ್ವವನ್ನ ದುರ್ಬಲಗೊಳಿಸಿದೆ

ಮತ್ತೊಂದೆಡೆ ತಮಗೆ ಯಾವುದೆ ಅದಿಕಾರ, ಸವಲತ್ತು ಮತ್ತು ಹಣದ ಬೆಂಬಲವಿಲ್ಲದಿದ್ದರೂ ವಾರಣಾಸಿಯಲ್ಲಿ ರೈತರ, ತೇಜ ಬಹದ್ದುರ್ ಅವರ ಈ ಸ್ಪರ್ದೆಯು ಈ ಚುನಾವಣೆ ಒಂದು ನಿರ್ವಾತದಲ್ಲಿ ನಡೆಯಲು ಸಾದ್ಯವಾಗದಂತೆ ತಡೆಯುತ್ತಿದೆ. ಈ ಸ್ಪರ್ದೆ ಮೇಲ್ನೊಟಕ್ಕೆ ಸಾಂಕೇತಿಕವಾದರೂ ಸಹ ಅದು ಪ್ರತಿರೋದದ ಚಿಲುಮೆಯಾಗಿ ಚಿಮ್ಮುತ್ತಿದೆ. ಇದರ ಮಹತ್ವವನ್ನ ಗೆಲುವು ಸೋಲುಗಳ ಮೂಲಕ ಅಳೆಯಲಾಗುವುದಿಲ್ಲ. ಒಂದೆಡೆ ಪ್ಯಾಸಿಸಂನ ಪ್ರತಿನಿದಿಸುವ ಮೋದಿ ಮತ್ತೊಂದೆಡೆ ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರುವ ರೈತರು, ಸೈನಿಕನ ನಡುವಿನ ಸ್ಪರ್ದೆ ಜಡಗೊಂಡ ದೇಶದ ನೈತಿಕ ಪ್ರಜ್ಞೆಯನ್ನ ಎಚ್ಚರಿಸಬಲ್ಲದು ಎನ್ನುವ ಆಶಾವಾದ ಇಲ್ಲಿ ಮೊಳಕೆಯೊಡೆಯುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...