HomeUncategorizedಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

ಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಕೊಲೆಯಲ್ಲವೀ ಬಲೆಯು ಮೈಮೇಲಿನ ಕಲೆಯು’

ಈ ವಾರದ ನಾಡಿನ ಮೂರ್ಖರ ಪೆಟ್ಟಿಗೆಯ ಮುಂದೆ ಕೂತ ಹಿರಿ ಕಿರಿಯರನ್ನೆಲ್ಲಾ ಮೋಡಿ ಮಾಡಿದ ಸುದ್ದಿ ಹನಿ ಟ್ರ್ಯಾಪಿನದ್ದು.

ಹಂಗಾರ ಏನಿದು? ಇಲ್ಲಿರೋ ಪ್ರಶ್ನೆ ನಮ್ಮ ರಾಜ್ಯದಾಗ ಆಗಿದ್ದು ಏನು ಅಂತ ಅಲ್ಲಾ. ಯಾಕಂದರ ಅದರಾಗ ತಪ್ಪು ಮಾಡಿದವರು ಇತರರ ವಿರುದ್ಧ ಕೋರ್ಟಿಗೆ ಹೋಗಿ ತಮ್ಮ ಹೆಸರು ತಗೀಬಾರದು ಅಂತ ತಡೆಯಾಜ್ಞೆ ತಂದಾರ.

ನಾವು ಇಲ್ಲಿ ನೋಡಬೇಕಾಗಿರೋದು ಮಧುಪಾಶ ಅಂದರ ಏನೂಂತ, ಅದರ ಇತಿಹಾಸ ಎಷ್ಟು ವರ್ಣರಂಜಿತ ಅನ್ನೋದನ್ನ.

ಇದು ಸಾವಿರಾರು ವರ್ಷಗಳಿಂದ ನಡಕೊಂಡು ಬಂದಿರೋ ಪದ್ಧತಿ. ಇದನ್ನು ಸರಕಾರಗಳು, ಮಿಲಿಟರಿ ಆಡಳಿತಗಾರರು, ಸರ್ವಾಧಿಕಾರಿಗಳು, ಸೈನಿಕರು, ಪೊಲೀಸರು, ಹೋಗಲಿ ಹೊಡದಾಡಿಕೊಳ್ಳೋ ಅಣ್ಣಾ ತಮ್ಮಾ ಸಹಿತ ಮಾಡಿಕೊಂಡು ಬಂದಾರ.

2010ರಾಗ ಬ್ರಿಟಿಷ ಸರಕಾರ ತಮ್ಮಲ್ಲಿನ ಅಧಿಕಾರಿಗಳಿಗೆ, ಸೈನಿಕರಿಗೆ, ವ್ಯಾಪಾರಸ್ಥರಿಗೆ, ಯೂನಿವರ್ಸಿಟಿ ಶಿಕ್ಷಕರಿಗೆ ಎಲ್ಲಿರಿಗೆ ಒಂದು ನೋಟಿಸು ಕೊಟ್ಟಿತು. ಚೈನಾದ ಬೇಹುಗಾರರು ಬಂದು ನಿಮ್ಮನ್ನು ಪ್ರೇಮ ಪಾಶದೊಳಗ ಕೆಡವಬಹುದು. ನಿಮ್ಮಿಂದ ಸರಕಾರಿ ರಹಸ್ಯಗಳನ್ನ ಪಡಕೊಳ್ಳಿಕ್ಕೆ ಪ್ರಯತ್ನ ಮಾಡಬಹುದು. ಇದರಿಂದ ನೀವು ದೂರ ಇರಿ. ಅಂತ ಅದರಾಗ ಬರದಿತ್ತು. “ಅವತ್ತಿನಿಂದ ಸದ್ ಗ್ರಹಸ್ಥರು ಅನ್ನಿಸಿಕೊಂಡವರು ಏಷಿಯಾದ ಹೆಣ್ಣುಮಕ್ಕಳನ್ನು ಕಂಡರೆ ಓಡಲಿಕ್ಕೆ ಶುರುಮಾಡಿದರು” ಅಂತ ಅಲ್ಲಿನ ನಿಯತಕಾಲಿಕ ಒಂದು ವರದಿ ಮಾಡಿತ್ತು.

ಅಬಲೆಯರನ್ನ ಒಳಗೆ ಹಾಕಿಕೊಂಡು ದೇಶದ ರಹಸ್ಯ ಕದಿಯೋ ಜೇಮ್ಸ್ ಬಾಂಡನ್ನ ಜಗತ್ತಿಗೆ ಪರಿಚಯ ಮಾಡಿದ ಇಂಗ್ಲಂಡಿನೊಳಗ ತಮ್ಮ ಮ್ಯಾಲೆ ಪ್ರೇಮ ಪಾಶದಿಂದ ರಹಸ್ಯ ಕದಿಯೋರು ಬಂದಾರ ಅನ್ನೋ ಸುದ್ದಿಯೇ ಸ್ಪೋಟಕವಾಗಿತ್ತು.

ಹಂಗಂತ ಇದರಾಗ ಬರೇ ಹೆಣ್ಣುಮಕ್ಕಳು ಇರೋದಿಲ್ಲ. ಹಿರಿಯ ಮಹಿಳಾ ಅಧಿಕಾರಿಗಳ ಹತ್ತಿರ ರಹಸ್ಯ ಮಾಹಿತಿ ಕದಿಯಲಿಕ್ಕೆ ಅಂತ ಪೂರ್ವ ಜರ್ಮನಿಯವರು ಪಶ್ಚಿಮ ಜರ್ಮನಿಗೆ ಸುಂದರಾಂಗರನ್ನ ಕಳಿಸಿದರಂತ. ಅದರಲ್ಲಿ ಒಬ್ಬ ಕಸಬುದಾರ ಒಬ್ಬ ಮಹಿಳಾ ಅಧಿಕಾರಿಯನ್ನು ಪ್ರೇಮಿಸೋ ನಾಟಕ ಮಾಡಿದ. ಅದು ಎಷ್ಟು ನೈಜವಾಗಿತ್ತು ಅಂದರ ಆತ ಬೇಹುಗಾರ, ನಿನ್ನನ್ನು ಮೋಸ ಮಾಡಿದ್ದಾನೆ ಅಂತ ಸಾಕ್ಷಿ ಸಮೇತ ತೋರಿಸಿದ ಮ್ಯಾಲೆ ಸಹ ಆ ಮಹಿಳೆ ಅದು ಸಾಧ್ಯವೇ ಇಲ್ಲ. ಆತ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂತ ವಾದಿಸಿದಳಂತ.

ಮಾತಾ ಹರಿ
ಜಾಗತಿಕ ಮಿಲಿಟರಿ ಇತಿಹಾಸದೊಳಗ ಅತಿ ಕುಖ್ಯಾತ ಬೇಹುಗಾರ್ತಿ ಮಾತಾ ಹರಿ. ಹೆಸರು ನೋಡಿದರ ನಮ್ಮ ಓಣಿ ಮುತೈದಿಗತೆ ಕಾಣೋ ಇಕಿಗೂ ಭಾರತಕ್ಕೂ ಯಾವ ಸಂಬಂಧನೂ ಇಲ್ಲ.

 

ಇಕಿ ನೆದರಲ್ಯಾಂಡಿನಕಿ. ಜಾವಾದೊಳಗ ನೃತ್ಯಗಾರ್ತಿ ಆಗಿದ್ಲು. ಫ್ರಾನ್ಸ್‌ ದೇಶದ ರಹಸ್ಯಗಳನ್ನ ಜರ್ಮನಿಗೆ ಮಾರಲಿಕ್ಕೆ ಇಕಿಗೆ ಸ್ಪೇನಿನೊಳಗಿನ ಅಧಿಕಾರಿಯೊಬ್ಬ ರೊಕ್ಕ ಕೊಡತಿದ್ದಾ ಅಂತ ಹೇಳಿ ಇಕಿನ್ನ ಜರ್ಮನಿಯವರು ದಸ್ತಗಿರಿ ಮಾಡಿದರು. ಒಂದು ವಾಕ್ಯದೊಳಗ ನಾಲ್ಕು ದೇಶಗಳನ್ನು ಹರಾಜು ಹಾಕಿದ ಇಕಿ ಅಪ್ರತಿಮ ದೇಶಭಕ್ತೆ. ಯಾವ ದೇಶದ್ದು ಅನ್ನೋದಕ್ಕ ಮೇಲಿನ ಸಾಲನ್ನು ಇನ್ನೊಮ್ಮೆ ಓದರಿ. ಆದರೆ ಅಕಿ ವಿರುದ್ಧ ಆ ಯಾವ ನಾಲ್ಕು ದೇಶಗಳಿಗೂ ಸಾಕ್ಷಿ ಸಿಗಲಿಲ್ಲ. ನಿನ್ನ ತಪ್ಪಿರಲಿಕ್ಕಿಲ್ಲ. ಆದರ ನಿನ್ನಂಗ ಯಾರೂ ಆಗಬಾರದು ಅಂತ ಅಕಿನ್ನ ಗುಂಡು ಹಾಕಿ ಕೊಂದರು. ಬಾಟಲಿ ತಗದು ಹಾಕೋದಲ್ಲ. ಟ್ರಿಗರ್ ಒತ್ತಿ ಹಾಕೋದು. ಅಂದರ ಮಧು ಪಾಶ ಅನ್ನೋದು ಎಷ್ಟು ಡೇಂಜರೋ, ಅದರಂಗ ಕಾಣೋದೆಲ್ಲಾ ಅಷ್ಟೇ ಡೇಂಜರು.

ವನೂನು

ಇವನ್ಯಾವನು ಅಂತ ಡೌಟು ಬರೋ ಅಂಥಾ ಹೆಸರಿನ ಮರಡೋಚಿ ವನೂನು ಅನ್ನೋ ಇಸ್ರೇಲಿ ವಿಜ್ಞಾನಿ ತನ್ನ ದೇಶದ ಅಣು ಬಾಂಬಿನ ತಯಾರಿಕೆ ಕಾರ್ಖಾನೆಯ ಫೋಟೋ ತೊಗೊಂಡು ಬ್ರಿಟನ್ನಿನ ಪತ್ರಿಕೆಗಳಿಗೆ ಕೊಟ್ಟ. ಅವು ಖರೇನೋ ಸುಳ್ಳೋ ಅನ್ನೋದನ್ನ ಅವರು ಪತ್ತೇ ಮಾಡೋ ತನಕಾ ಅವನಿಗೆ ಅವರು ಒಂದು ಹೊಟೆಲಿನೊಳಗ ಗುಪ್ತವಾಗಿ ಇಟ್ಟು ತಮ್ಮ ಖರ್ಚಿನೊಳಗ ಊರು ಸುತ್ತಾಡಿಸಿದರು. ಹಂಗ ಸೈಟ್ ಸೀಯಿಂಗ್ ಹೋದಾಗ ಅವನಿಗೆ ಒಂದು ಸೈಟಿಂಗ್ ಆತು. ಅಕಿ ಹೆಸರು ಸಿಂಡೀ. ಅವಳ ಜೊತೆ ನಾನು ನಾಕು ದಿವಸ ರೋಮಿಗೆ ಹೋಗತೇನಿ ಅಂತ ಆತ ಪತ್ರಿಕೆ ಸಂಪಾದಕರಿಗೆ ಹೇಳಿ ಹೋದ. ಹೋದವನನ್ನ ಇಸ್ರೇಲಿನ ಬೇಹು ಸಂಸ್ಥೆ ಮೊಸಾದ್‍ನ ಏಜೆಂಟರು ನಾಕು ಬಿಗಿದು ಸುಮ್ಮ ಇರು ಅಂದರ ಏನೇನೋ ಮಾಡತೀಯಾ ವನೂನು ಅಂತ ಇಸ್ರೇಲಿಗೆ ಕರಕೊಂಡು ಹೋಗಿ 18 ವರ್ಷ ಜೈಲಿನ್ಯಾಗ ಇಟ್ಟರು. ಆಮ್ಯಾಲೆ ಅವ ಹೊರಗ ಬಂದ. ಸಿಂಡೀ ಅನ್ನೋಕಿನೂ ಮೊಸಾದ್ ಏಜೆಂಟ್ ಅನ್ನೋ ವಿಚಾರ ಅವನಿಗೆ ಇನ್ನೂ ಹೊಸಾದು, ಪಾಪ.

ಇನ್ನೊಬ್ಬ ಇವನಾವ್
ಅರವತ್ತರ ದಶಕದಾಗ ಯೂಜೆನಿ ಇವನಾವ್ ಅಂತ ಒಬ್ಬ ರಷಿಯನ್ ಮಿಲಿಟರಿ ಅಧಿಕಾರಿ ಇಂಗ್ಲಂಡಿನಲ್ಲಿ ಮಾರು ವೇಷದಿಂದ ಇದ್ದ. ಹಂಗಂತ ಅವ ವೇಷ ಬದಲಿಸಿಗೊಳ್ಳೋ ಅಷ್ಟು ಅಸಹ್ಯ ಇರಲಿಲ್ಲ. ಖರೇ ಅಂದರ ಅವ ಎಷ್ಟು ಚಂದ ಇದ್ದಾ ಅಂದರ ಆತ ಬೀದಿಯಲ್ಲಿ ನಡೆದರೆ ನೆಲ ಎದ್ದು ಅವನನ್ನು ಚುಂಬಿಸುತ್ತಿತ್ತು ಅಂತ ಕೆಲವು ಪತ್ರಿಕೆಗಳು ಬರೆದವು. ಅವನು ಸ್ಟೀಫನ್ ವಾರ್ಡ್ ಅನ್ನೋ ಸಾಹುಕಾರನ ಪಾರ್ಟಿಗೆ ಹೋದ. ಅಲ್ಲಿ ಕ್ರಿಸ್ಟೀನ್ ಕೀಲರ್ ಅನ್ನೋ ಹುಡಿಗಿ ಅವನ ಕಿಲ್ಲರ್ ಇನಸ್ಟಿಂಕ್ಟ್ ಅನ್ನ ನೋಡಿ ಅವನ ಬಲಿಗೆ ಬಿದ್ಲು. ತನ್ನ ಗೆಣೆಯನಾಗಿದ್ದ ಬ್ರಿಟನ್ನಿನ ರಕ್ಷಣಾ ಖಾತೆ ಸಚಿವ ಜಾನ್ ಪೋಫೂಮೋ ಅನ್ನೋ ಮನುಷ್ಯನಿಗೆ ಕೈ ಕೊಟ್ಟಳು. ಈ ರಷಿಯನ್ನಿನ ನಸುಗೆಂಪು ಕೈ ಹಿಡದ್ಲು.

ಆ ಪೋಫೂಮೋ ಅನ್ನೋ ಪ್ರಾಣಿ ತನ್ನ ಕೆಲಸಾ ಬಿಟ್ಟು ಅಮೇರಿಕಾದ ಕ್ಷಿಪಣಿಗಳನ್ನ ಜರ್ಮನಿಗೆ ಮಾರಾಟ ಮಾಡಿಸೋ ದಲ್ಲಾಳಿ ಕೆಲಸ ಮಾಡಲಿಕ್ಕೆ ಹತ್ತಿದ್ದ. ಈ ಕೀಲರ್ ಅನ್ನೋ ಮಂತ್ರಿಯ ಗೆಣತಿ ಅವನ್ಯಾವನೋ ರಷಿಯನ್ನನ ಹಿಂದೆ ಬಿದ್ದಾಳ ಅನ್ನೋದನ್ನ ಬ್ರಿಟಿಷ್‌ ಪತ್ರಿಕೆಗಳು ತಮ್ಮ ಮುಖಪುಟಕ್ಕಿಂತ ದೊಡ್ಡ ಅಕ್ಷರಗಳಲ್ಲಿ ಬರದವು. ಮಂತ್ರಿಯ ಹೆಂಡತಿ ಅವನಿಗೆ ಬೈದಳು, ಕಣ್ಣೀರು ಹಾಕಿದ್ಲು, ಆದರ ಬಿಟ್ಟು ಹೋಗಲಿಲ್ಲ. ಮಂತ್ರಿ ಮಹಾಷಯರು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಸಂಗತೆ ರಾಜೀ ಮಾಡಿಕೊಳ್ಳಬೇಕಾತು. ಅವನಾವ್‍ನನ್ನು ಅವನಾವ ಊರಿಂದಾ ಬಂದಿದ್ದನೋ ಅಲ್ಲಿಗೆ ವಾಪಸ್ ಕಳಿಸಲಾಯಿತು. ಆದರ ಕೀಲರಮ್ಮಾ ಅವನ್ಯಾವನಿಗೋ ಕ್ಷಿಪಣಿ ರಹಸ್ಯಗಳನ್ನ ಕೈಮುಚ್ಚಿ ಕೊಟ್ಟಳು ಅಂತ ಹೇಳಲಿಕ್ಕೆ ಸರಕಾರಕ್ಕ, ಪತ್ರಿಕೆಗಳಿಗೆ ಸಾಕ್ಷಿನ ಸಿಗಲಿಲ್ಲ.

ತೋಳ ಹೋತು ತೋಳ

ಮಾಸ್ಕೋದಲ್ಲಿನ ಬ್ರಿಟಿಷ್ ಪತ್ರಕರ್ತ ಜೆರೆಮಿ ವೋಲ್ಫೆನ್‍ಡನ್ ಸಲಿಂಗಕಾಮಿ ಅನ್ನೋದು ರಷಿಯಾ ಸರಕಾರಕ್ಕೆ ಗೊತ್ತಾತು. ಅವರು ಅವನ ಮ್ಯಾಲೆ ತೋಳ ಬಿದ್ದಂಗ ಬಿದ್ದರು. ಅವನು ಹೋಗುತ್ತಿದ್ದ ಕಟಿಂಗ್ ಸಲೂನಿನಲ್ಲಿನ ಹುಡುಗನ ಜೊತೆ ಅವನು ಪ್ರೇಮ ಪಾಶಕ್ಕ ಬೀಳೋಹಂಗ ಮಾಡಲಾಯಿತು. ಅವನು ಮೈಮರೆತಾಗ ಫೋಟೋ ತಗದು ಅವನನ್ನು ಬ್ಲಾಕ್ ಮೇಲ್ ಮಾಡಲಾಯಿತು. ನಮ್ಮ ದೇಶದಲ್ಲಿರೋ ನಿಮ್ಮ ದೇಶದ ಜನರ ಮೇಲೆ ಬೇಹುಗಾರಿಕೆ ಮಾಡು. ಇಲ್ಲಾಂದರ ಪೇಪರಿನ್ಯಾಗ ನಿನ್ನ ಫೋಟೋ ನೋಡು ಅಂತ ಹೇಳಿ ಅವನಿಗೆ ಹೆದರಿಕೆ ಹಾಕಿದರು. ಅವನು ಓಡಿ ಹೋಗಿ ಇಂಗ್ಲೆಂಡಿನ ಸರಕಾರಕ್ಕ ಅವರು ನನಗ ಹಿಂಗಿಂಗ ಮಾಡ್ಯಾರ ಅಂತ ಛಾಡಿ ಹೇಳಿದ. ಇರಲಿ, ಅವರಿಗೆ ಒಂದಿಷ್ಟು ಉಪಯೋಗ ಇಲ್ಲದ ಮಾಹಿತಿ ತೊಗೊಂಡು ಕೊಡು. ಆದರ ಅವರ ಮಾಹಿತಿ ತೊಗೊಂಡು ನಮಗ ಕೊಡು. ಇಲ್ಲಾಂದರ ನೋಡು. ನಿನ್ನ ರಷಿಯಾದ ಕರಾಮತ್ತಿನ ಫೋಟೋ ಇಂಗ್ಲೆಂಡಿನೊಳಗ ಬರತದ ಅಂತ ಹೇಳಿ ಹೆದರಿಸಿದರು. ಎರಡೂ ಕಡೆ ಸಿಕ್ಕೊಂಡು ಆತ ಕುಡುದು ಕುಡುದು 31 ವರ್ಷಕ್ಕ ಸತ್ತ.

ಮತ್ತೊಂದು ತೋಳ

ಮಾರ್ಕಸ್ ವೂಲ್ಫ್ ಅನ್ನೋ ಪೂರ್ವ ಜರ್ಮನಿಯ ಸೇನಾಧಿಕಾರಿ ಪಶ್ಚಿಮ ಜರ್ಮನಿ ಸರಕಾರದಲ್ಲಿ ಮದುವೆಯಾಗದೇ ಉಳಿದ ಮಧ್ಯ ವಯಸ್ಸಿನ ಮಹಿಳೆಯರ ಗೆಳೆತನ ಮಾಡಲು ಯುವ ತರುಣರ ಒಂದು ತಂಡವನ್ನೇ ಕಟ್ಟಿದ. ಅದರ ಹೆಸರು ರೋಮಿಯೋ ಕ್ಲಬ್. ಬಹುಶಃ ಇವರನ್ನು ನೋಡಿಯೇ ನಮ್ಮ ಆದಿತ್ಯನಾಥರು ರೋಮಿಯೋ ವಿರೋಧಿ ಪಡೆ ಮಾಡಿರಬೇಕು.

ಅವರು ನೂರಾರು ಮಹಿಳೆಯರ ಸ್ನೇಹ ಮಾಡಿದರು. ಹಲವಾರು ಜನ ಮದುವೆಯಾಗಿ ಪಶ್ಚಿಮ ಜರ್ಮನಿಯಲ್ಲಿ ಸಂಸಾರ ನಡೆಸಿದರು. ಅವರು ಸೈನ್ಯದ, ಸರಕಾರದ ವಿವಿಧ ಅಂಗಗಳ ರಹಸ್ಯಗಳನ್ನು ಹತ್ತಾರು ವರ್ಷ ವಿಲೇವಾರಿ ಮಾಡಿದರು. ಕೊನೆಗೆ ಎರಡೂ ಜರ್ಮನಿಗಳು ಒಂದಾದಾಗ ಇವರೆಲ್ಲ ಸೆರೆ ಸಿಕ್ಕರು. ಇವರ ವಿಚಾರಣೆಯಲ್ಲಿ ಇವರು ಈಗ ನಮ್ಮ ಪ್ರಜೆಗಳು. ಇವರ ಮೇಲೆ ದೇಶದ್ರೋಹದ ಆರೋಪ ಹೊರಿಸುವುದು ಹೇಗೆ ಅಂತ ಅನೇಕರನ್ನು ಬಿಟ್ಟರು. ಮಾರ್ಕಸ್ ವೂಲ್ಫ್‌ನನ್ನು ತೋಳ ಬಂದೇ ಇಲ್ಲ, ಎಲ್ಲಾ ಸುಳ್ಳೇ ಅನ್ನೋ ಹಂಗ ಎರಡೇ ವರ್ಷ ಜೈಲಿಗೆ ಹಾಕಿದರು. ಆ ಪುಣ್ಯಾತ್ಮ ಹೊರಗ ಬಂದು ಮುಖವಿಲ್ಲದ ಮನುಷ್ಯನ ಕತೆ ಅಂತ ಕಾದಂಬರಿ ಬರದು ಲಕ್ಷಾಧೀಶನಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...