HomeUncategorizedಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

ಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಕೊಲೆಯಲ್ಲವೀ ಬಲೆಯು ಮೈಮೇಲಿನ ಕಲೆಯು’

ಈ ವಾರದ ನಾಡಿನ ಮೂರ್ಖರ ಪೆಟ್ಟಿಗೆಯ ಮುಂದೆ ಕೂತ ಹಿರಿ ಕಿರಿಯರನ್ನೆಲ್ಲಾ ಮೋಡಿ ಮಾಡಿದ ಸುದ್ದಿ ಹನಿ ಟ್ರ್ಯಾಪಿನದ್ದು.

ಹಂಗಾರ ಏನಿದು? ಇಲ್ಲಿರೋ ಪ್ರಶ್ನೆ ನಮ್ಮ ರಾಜ್ಯದಾಗ ಆಗಿದ್ದು ಏನು ಅಂತ ಅಲ್ಲಾ. ಯಾಕಂದರ ಅದರಾಗ ತಪ್ಪು ಮಾಡಿದವರು ಇತರರ ವಿರುದ್ಧ ಕೋರ್ಟಿಗೆ ಹೋಗಿ ತಮ್ಮ ಹೆಸರು ತಗೀಬಾರದು ಅಂತ ತಡೆಯಾಜ್ಞೆ ತಂದಾರ.

ನಾವು ಇಲ್ಲಿ ನೋಡಬೇಕಾಗಿರೋದು ಮಧುಪಾಶ ಅಂದರ ಏನೂಂತ, ಅದರ ಇತಿಹಾಸ ಎಷ್ಟು ವರ್ಣರಂಜಿತ ಅನ್ನೋದನ್ನ.

ಇದು ಸಾವಿರಾರು ವರ್ಷಗಳಿಂದ ನಡಕೊಂಡು ಬಂದಿರೋ ಪದ್ಧತಿ. ಇದನ್ನು ಸರಕಾರಗಳು, ಮಿಲಿಟರಿ ಆಡಳಿತಗಾರರು, ಸರ್ವಾಧಿಕಾರಿಗಳು, ಸೈನಿಕರು, ಪೊಲೀಸರು, ಹೋಗಲಿ ಹೊಡದಾಡಿಕೊಳ್ಳೋ ಅಣ್ಣಾ ತಮ್ಮಾ ಸಹಿತ ಮಾಡಿಕೊಂಡು ಬಂದಾರ.

2010ರಾಗ ಬ್ರಿಟಿಷ ಸರಕಾರ ತಮ್ಮಲ್ಲಿನ ಅಧಿಕಾರಿಗಳಿಗೆ, ಸೈನಿಕರಿಗೆ, ವ್ಯಾಪಾರಸ್ಥರಿಗೆ, ಯೂನಿವರ್ಸಿಟಿ ಶಿಕ್ಷಕರಿಗೆ ಎಲ್ಲಿರಿಗೆ ಒಂದು ನೋಟಿಸು ಕೊಟ್ಟಿತು. ಚೈನಾದ ಬೇಹುಗಾರರು ಬಂದು ನಿಮ್ಮನ್ನು ಪ್ರೇಮ ಪಾಶದೊಳಗ ಕೆಡವಬಹುದು. ನಿಮ್ಮಿಂದ ಸರಕಾರಿ ರಹಸ್ಯಗಳನ್ನ ಪಡಕೊಳ್ಳಿಕ್ಕೆ ಪ್ರಯತ್ನ ಮಾಡಬಹುದು. ಇದರಿಂದ ನೀವು ದೂರ ಇರಿ. ಅಂತ ಅದರಾಗ ಬರದಿತ್ತು. “ಅವತ್ತಿನಿಂದ ಸದ್ ಗ್ರಹಸ್ಥರು ಅನ್ನಿಸಿಕೊಂಡವರು ಏಷಿಯಾದ ಹೆಣ್ಣುಮಕ್ಕಳನ್ನು ಕಂಡರೆ ಓಡಲಿಕ್ಕೆ ಶುರುಮಾಡಿದರು” ಅಂತ ಅಲ್ಲಿನ ನಿಯತಕಾಲಿಕ ಒಂದು ವರದಿ ಮಾಡಿತ್ತು.

ಅಬಲೆಯರನ್ನ ಒಳಗೆ ಹಾಕಿಕೊಂಡು ದೇಶದ ರಹಸ್ಯ ಕದಿಯೋ ಜೇಮ್ಸ್ ಬಾಂಡನ್ನ ಜಗತ್ತಿಗೆ ಪರಿಚಯ ಮಾಡಿದ ಇಂಗ್ಲಂಡಿನೊಳಗ ತಮ್ಮ ಮ್ಯಾಲೆ ಪ್ರೇಮ ಪಾಶದಿಂದ ರಹಸ್ಯ ಕದಿಯೋರು ಬಂದಾರ ಅನ್ನೋ ಸುದ್ದಿಯೇ ಸ್ಪೋಟಕವಾಗಿತ್ತು.

ಹಂಗಂತ ಇದರಾಗ ಬರೇ ಹೆಣ್ಣುಮಕ್ಕಳು ಇರೋದಿಲ್ಲ. ಹಿರಿಯ ಮಹಿಳಾ ಅಧಿಕಾರಿಗಳ ಹತ್ತಿರ ರಹಸ್ಯ ಮಾಹಿತಿ ಕದಿಯಲಿಕ್ಕೆ ಅಂತ ಪೂರ್ವ ಜರ್ಮನಿಯವರು ಪಶ್ಚಿಮ ಜರ್ಮನಿಗೆ ಸುಂದರಾಂಗರನ್ನ ಕಳಿಸಿದರಂತ. ಅದರಲ್ಲಿ ಒಬ್ಬ ಕಸಬುದಾರ ಒಬ್ಬ ಮಹಿಳಾ ಅಧಿಕಾರಿಯನ್ನು ಪ್ರೇಮಿಸೋ ನಾಟಕ ಮಾಡಿದ. ಅದು ಎಷ್ಟು ನೈಜವಾಗಿತ್ತು ಅಂದರ ಆತ ಬೇಹುಗಾರ, ನಿನ್ನನ್ನು ಮೋಸ ಮಾಡಿದ್ದಾನೆ ಅಂತ ಸಾಕ್ಷಿ ಸಮೇತ ತೋರಿಸಿದ ಮ್ಯಾಲೆ ಸಹ ಆ ಮಹಿಳೆ ಅದು ಸಾಧ್ಯವೇ ಇಲ್ಲ. ಆತ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂತ ವಾದಿಸಿದಳಂತ.

ಮಾತಾ ಹರಿ
ಜಾಗತಿಕ ಮಿಲಿಟರಿ ಇತಿಹಾಸದೊಳಗ ಅತಿ ಕುಖ್ಯಾತ ಬೇಹುಗಾರ್ತಿ ಮಾತಾ ಹರಿ. ಹೆಸರು ನೋಡಿದರ ನಮ್ಮ ಓಣಿ ಮುತೈದಿಗತೆ ಕಾಣೋ ಇಕಿಗೂ ಭಾರತಕ್ಕೂ ಯಾವ ಸಂಬಂಧನೂ ಇಲ್ಲ.

 

ಇಕಿ ನೆದರಲ್ಯಾಂಡಿನಕಿ. ಜಾವಾದೊಳಗ ನೃತ್ಯಗಾರ್ತಿ ಆಗಿದ್ಲು. ಫ್ರಾನ್ಸ್‌ ದೇಶದ ರಹಸ್ಯಗಳನ್ನ ಜರ್ಮನಿಗೆ ಮಾರಲಿಕ್ಕೆ ಇಕಿಗೆ ಸ್ಪೇನಿನೊಳಗಿನ ಅಧಿಕಾರಿಯೊಬ್ಬ ರೊಕ್ಕ ಕೊಡತಿದ್ದಾ ಅಂತ ಹೇಳಿ ಇಕಿನ್ನ ಜರ್ಮನಿಯವರು ದಸ್ತಗಿರಿ ಮಾಡಿದರು. ಒಂದು ವಾಕ್ಯದೊಳಗ ನಾಲ್ಕು ದೇಶಗಳನ್ನು ಹರಾಜು ಹಾಕಿದ ಇಕಿ ಅಪ್ರತಿಮ ದೇಶಭಕ್ತೆ. ಯಾವ ದೇಶದ್ದು ಅನ್ನೋದಕ್ಕ ಮೇಲಿನ ಸಾಲನ್ನು ಇನ್ನೊಮ್ಮೆ ಓದರಿ. ಆದರೆ ಅಕಿ ವಿರುದ್ಧ ಆ ಯಾವ ನಾಲ್ಕು ದೇಶಗಳಿಗೂ ಸಾಕ್ಷಿ ಸಿಗಲಿಲ್ಲ. ನಿನ್ನ ತಪ್ಪಿರಲಿಕ್ಕಿಲ್ಲ. ಆದರ ನಿನ್ನಂಗ ಯಾರೂ ಆಗಬಾರದು ಅಂತ ಅಕಿನ್ನ ಗುಂಡು ಹಾಕಿ ಕೊಂದರು. ಬಾಟಲಿ ತಗದು ಹಾಕೋದಲ್ಲ. ಟ್ರಿಗರ್ ಒತ್ತಿ ಹಾಕೋದು. ಅಂದರ ಮಧು ಪಾಶ ಅನ್ನೋದು ಎಷ್ಟು ಡೇಂಜರೋ, ಅದರಂಗ ಕಾಣೋದೆಲ್ಲಾ ಅಷ್ಟೇ ಡೇಂಜರು.

ವನೂನು

ಇವನ್ಯಾವನು ಅಂತ ಡೌಟು ಬರೋ ಅಂಥಾ ಹೆಸರಿನ ಮರಡೋಚಿ ವನೂನು ಅನ್ನೋ ಇಸ್ರೇಲಿ ವಿಜ್ಞಾನಿ ತನ್ನ ದೇಶದ ಅಣು ಬಾಂಬಿನ ತಯಾರಿಕೆ ಕಾರ್ಖಾನೆಯ ಫೋಟೋ ತೊಗೊಂಡು ಬ್ರಿಟನ್ನಿನ ಪತ್ರಿಕೆಗಳಿಗೆ ಕೊಟ್ಟ. ಅವು ಖರೇನೋ ಸುಳ್ಳೋ ಅನ್ನೋದನ್ನ ಅವರು ಪತ್ತೇ ಮಾಡೋ ತನಕಾ ಅವನಿಗೆ ಅವರು ಒಂದು ಹೊಟೆಲಿನೊಳಗ ಗುಪ್ತವಾಗಿ ಇಟ್ಟು ತಮ್ಮ ಖರ್ಚಿನೊಳಗ ಊರು ಸುತ್ತಾಡಿಸಿದರು. ಹಂಗ ಸೈಟ್ ಸೀಯಿಂಗ್ ಹೋದಾಗ ಅವನಿಗೆ ಒಂದು ಸೈಟಿಂಗ್ ಆತು. ಅಕಿ ಹೆಸರು ಸಿಂಡೀ. ಅವಳ ಜೊತೆ ನಾನು ನಾಕು ದಿವಸ ರೋಮಿಗೆ ಹೋಗತೇನಿ ಅಂತ ಆತ ಪತ್ರಿಕೆ ಸಂಪಾದಕರಿಗೆ ಹೇಳಿ ಹೋದ. ಹೋದವನನ್ನ ಇಸ್ರೇಲಿನ ಬೇಹು ಸಂಸ್ಥೆ ಮೊಸಾದ್‍ನ ಏಜೆಂಟರು ನಾಕು ಬಿಗಿದು ಸುಮ್ಮ ಇರು ಅಂದರ ಏನೇನೋ ಮಾಡತೀಯಾ ವನೂನು ಅಂತ ಇಸ್ರೇಲಿಗೆ ಕರಕೊಂಡು ಹೋಗಿ 18 ವರ್ಷ ಜೈಲಿನ್ಯಾಗ ಇಟ್ಟರು. ಆಮ್ಯಾಲೆ ಅವ ಹೊರಗ ಬಂದ. ಸಿಂಡೀ ಅನ್ನೋಕಿನೂ ಮೊಸಾದ್ ಏಜೆಂಟ್ ಅನ್ನೋ ವಿಚಾರ ಅವನಿಗೆ ಇನ್ನೂ ಹೊಸಾದು, ಪಾಪ.

ಇನ್ನೊಬ್ಬ ಇವನಾವ್
ಅರವತ್ತರ ದಶಕದಾಗ ಯೂಜೆನಿ ಇವನಾವ್ ಅಂತ ಒಬ್ಬ ರಷಿಯನ್ ಮಿಲಿಟರಿ ಅಧಿಕಾರಿ ಇಂಗ್ಲಂಡಿನಲ್ಲಿ ಮಾರು ವೇಷದಿಂದ ಇದ್ದ. ಹಂಗಂತ ಅವ ವೇಷ ಬದಲಿಸಿಗೊಳ್ಳೋ ಅಷ್ಟು ಅಸಹ್ಯ ಇರಲಿಲ್ಲ. ಖರೇ ಅಂದರ ಅವ ಎಷ್ಟು ಚಂದ ಇದ್ದಾ ಅಂದರ ಆತ ಬೀದಿಯಲ್ಲಿ ನಡೆದರೆ ನೆಲ ಎದ್ದು ಅವನನ್ನು ಚುಂಬಿಸುತ್ತಿತ್ತು ಅಂತ ಕೆಲವು ಪತ್ರಿಕೆಗಳು ಬರೆದವು. ಅವನು ಸ್ಟೀಫನ್ ವಾರ್ಡ್ ಅನ್ನೋ ಸಾಹುಕಾರನ ಪಾರ್ಟಿಗೆ ಹೋದ. ಅಲ್ಲಿ ಕ್ರಿಸ್ಟೀನ್ ಕೀಲರ್ ಅನ್ನೋ ಹುಡಿಗಿ ಅವನ ಕಿಲ್ಲರ್ ಇನಸ್ಟಿಂಕ್ಟ್ ಅನ್ನ ನೋಡಿ ಅವನ ಬಲಿಗೆ ಬಿದ್ಲು. ತನ್ನ ಗೆಣೆಯನಾಗಿದ್ದ ಬ್ರಿಟನ್ನಿನ ರಕ್ಷಣಾ ಖಾತೆ ಸಚಿವ ಜಾನ್ ಪೋಫೂಮೋ ಅನ್ನೋ ಮನುಷ್ಯನಿಗೆ ಕೈ ಕೊಟ್ಟಳು. ಈ ರಷಿಯನ್ನಿನ ನಸುಗೆಂಪು ಕೈ ಹಿಡದ್ಲು.

ಆ ಪೋಫೂಮೋ ಅನ್ನೋ ಪ್ರಾಣಿ ತನ್ನ ಕೆಲಸಾ ಬಿಟ್ಟು ಅಮೇರಿಕಾದ ಕ್ಷಿಪಣಿಗಳನ್ನ ಜರ್ಮನಿಗೆ ಮಾರಾಟ ಮಾಡಿಸೋ ದಲ್ಲಾಳಿ ಕೆಲಸ ಮಾಡಲಿಕ್ಕೆ ಹತ್ತಿದ್ದ. ಈ ಕೀಲರ್ ಅನ್ನೋ ಮಂತ್ರಿಯ ಗೆಣತಿ ಅವನ್ಯಾವನೋ ರಷಿಯನ್ನನ ಹಿಂದೆ ಬಿದ್ದಾಳ ಅನ್ನೋದನ್ನ ಬ್ರಿಟಿಷ್‌ ಪತ್ರಿಕೆಗಳು ತಮ್ಮ ಮುಖಪುಟಕ್ಕಿಂತ ದೊಡ್ಡ ಅಕ್ಷರಗಳಲ್ಲಿ ಬರದವು. ಮಂತ್ರಿಯ ಹೆಂಡತಿ ಅವನಿಗೆ ಬೈದಳು, ಕಣ್ಣೀರು ಹಾಕಿದ್ಲು, ಆದರ ಬಿಟ್ಟು ಹೋಗಲಿಲ್ಲ. ಮಂತ್ರಿ ಮಹಾಷಯರು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಸಂಗತೆ ರಾಜೀ ಮಾಡಿಕೊಳ್ಳಬೇಕಾತು. ಅವನಾವ್‍ನನ್ನು ಅವನಾವ ಊರಿಂದಾ ಬಂದಿದ್ದನೋ ಅಲ್ಲಿಗೆ ವಾಪಸ್ ಕಳಿಸಲಾಯಿತು. ಆದರ ಕೀಲರಮ್ಮಾ ಅವನ್ಯಾವನಿಗೋ ಕ್ಷಿಪಣಿ ರಹಸ್ಯಗಳನ್ನ ಕೈಮುಚ್ಚಿ ಕೊಟ್ಟಳು ಅಂತ ಹೇಳಲಿಕ್ಕೆ ಸರಕಾರಕ್ಕ, ಪತ್ರಿಕೆಗಳಿಗೆ ಸಾಕ್ಷಿನ ಸಿಗಲಿಲ್ಲ.

ತೋಳ ಹೋತು ತೋಳ

ಮಾಸ್ಕೋದಲ್ಲಿನ ಬ್ರಿಟಿಷ್ ಪತ್ರಕರ್ತ ಜೆರೆಮಿ ವೋಲ್ಫೆನ್‍ಡನ್ ಸಲಿಂಗಕಾಮಿ ಅನ್ನೋದು ರಷಿಯಾ ಸರಕಾರಕ್ಕೆ ಗೊತ್ತಾತು. ಅವರು ಅವನ ಮ್ಯಾಲೆ ತೋಳ ಬಿದ್ದಂಗ ಬಿದ್ದರು. ಅವನು ಹೋಗುತ್ತಿದ್ದ ಕಟಿಂಗ್ ಸಲೂನಿನಲ್ಲಿನ ಹುಡುಗನ ಜೊತೆ ಅವನು ಪ್ರೇಮ ಪಾಶಕ್ಕ ಬೀಳೋಹಂಗ ಮಾಡಲಾಯಿತು. ಅವನು ಮೈಮರೆತಾಗ ಫೋಟೋ ತಗದು ಅವನನ್ನು ಬ್ಲಾಕ್ ಮೇಲ್ ಮಾಡಲಾಯಿತು. ನಮ್ಮ ದೇಶದಲ್ಲಿರೋ ನಿಮ್ಮ ದೇಶದ ಜನರ ಮೇಲೆ ಬೇಹುಗಾರಿಕೆ ಮಾಡು. ಇಲ್ಲಾಂದರ ಪೇಪರಿನ್ಯಾಗ ನಿನ್ನ ಫೋಟೋ ನೋಡು ಅಂತ ಹೇಳಿ ಅವನಿಗೆ ಹೆದರಿಕೆ ಹಾಕಿದರು. ಅವನು ಓಡಿ ಹೋಗಿ ಇಂಗ್ಲೆಂಡಿನ ಸರಕಾರಕ್ಕ ಅವರು ನನಗ ಹಿಂಗಿಂಗ ಮಾಡ್ಯಾರ ಅಂತ ಛಾಡಿ ಹೇಳಿದ. ಇರಲಿ, ಅವರಿಗೆ ಒಂದಿಷ್ಟು ಉಪಯೋಗ ಇಲ್ಲದ ಮಾಹಿತಿ ತೊಗೊಂಡು ಕೊಡು. ಆದರ ಅವರ ಮಾಹಿತಿ ತೊಗೊಂಡು ನಮಗ ಕೊಡು. ಇಲ್ಲಾಂದರ ನೋಡು. ನಿನ್ನ ರಷಿಯಾದ ಕರಾಮತ್ತಿನ ಫೋಟೋ ಇಂಗ್ಲೆಂಡಿನೊಳಗ ಬರತದ ಅಂತ ಹೇಳಿ ಹೆದರಿಸಿದರು. ಎರಡೂ ಕಡೆ ಸಿಕ್ಕೊಂಡು ಆತ ಕುಡುದು ಕುಡುದು 31 ವರ್ಷಕ್ಕ ಸತ್ತ.

ಮತ್ತೊಂದು ತೋಳ

ಮಾರ್ಕಸ್ ವೂಲ್ಫ್ ಅನ್ನೋ ಪೂರ್ವ ಜರ್ಮನಿಯ ಸೇನಾಧಿಕಾರಿ ಪಶ್ಚಿಮ ಜರ್ಮನಿ ಸರಕಾರದಲ್ಲಿ ಮದುವೆಯಾಗದೇ ಉಳಿದ ಮಧ್ಯ ವಯಸ್ಸಿನ ಮಹಿಳೆಯರ ಗೆಳೆತನ ಮಾಡಲು ಯುವ ತರುಣರ ಒಂದು ತಂಡವನ್ನೇ ಕಟ್ಟಿದ. ಅದರ ಹೆಸರು ರೋಮಿಯೋ ಕ್ಲಬ್. ಬಹುಶಃ ಇವರನ್ನು ನೋಡಿಯೇ ನಮ್ಮ ಆದಿತ್ಯನಾಥರು ರೋಮಿಯೋ ವಿರೋಧಿ ಪಡೆ ಮಾಡಿರಬೇಕು.

ಅವರು ನೂರಾರು ಮಹಿಳೆಯರ ಸ್ನೇಹ ಮಾಡಿದರು. ಹಲವಾರು ಜನ ಮದುವೆಯಾಗಿ ಪಶ್ಚಿಮ ಜರ್ಮನಿಯಲ್ಲಿ ಸಂಸಾರ ನಡೆಸಿದರು. ಅವರು ಸೈನ್ಯದ, ಸರಕಾರದ ವಿವಿಧ ಅಂಗಗಳ ರಹಸ್ಯಗಳನ್ನು ಹತ್ತಾರು ವರ್ಷ ವಿಲೇವಾರಿ ಮಾಡಿದರು. ಕೊನೆಗೆ ಎರಡೂ ಜರ್ಮನಿಗಳು ಒಂದಾದಾಗ ಇವರೆಲ್ಲ ಸೆರೆ ಸಿಕ್ಕರು. ಇವರ ವಿಚಾರಣೆಯಲ್ಲಿ ಇವರು ಈಗ ನಮ್ಮ ಪ್ರಜೆಗಳು. ಇವರ ಮೇಲೆ ದೇಶದ್ರೋಹದ ಆರೋಪ ಹೊರಿಸುವುದು ಹೇಗೆ ಅಂತ ಅನೇಕರನ್ನು ಬಿಟ್ಟರು. ಮಾರ್ಕಸ್ ವೂಲ್ಫ್‌ನನ್ನು ತೋಳ ಬಂದೇ ಇಲ್ಲ, ಎಲ್ಲಾ ಸುಳ್ಳೇ ಅನ್ನೋ ಹಂಗ ಎರಡೇ ವರ್ಷ ಜೈಲಿಗೆ ಹಾಕಿದರು. ಆ ಪುಣ್ಯಾತ್ಮ ಹೊರಗ ಬಂದು ಮುಖವಿಲ್ಲದ ಮನುಷ್ಯನ ಕತೆ ಅಂತ ಕಾದಂಬರಿ ಬರದು ಲಕ್ಷಾಧೀಶನಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...