HomeUncategorizedಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

ಹನಿ ಟ್ರ್ಯಾಪ್ (ಮಧುಪಾಶ) ಎಂದರೇನು: ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಕೊಲೆಯಲ್ಲವೀ ಬಲೆಯು ಮೈಮೇಲಿನ ಕಲೆಯು’

ಈ ವಾರದ ನಾಡಿನ ಮೂರ್ಖರ ಪೆಟ್ಟಿಗೆಯ ಮುಂದೆ ಕೂತ ಹಿರಿ ಕಿರಿಯರನ್ನೆಲ್ಲಾ ಮೋಡಿ ಮಾಡಿದ ಸುದ್ದಿ ಹನಿ ಟ್ರ್ಯಾಪಿನದ್ದು.

ಹಂಗಾರ ಏನಿದು? ಇಲ್ಲಿರೋ ಪ್ರಶ್ನೆ ನಮ್ಮ ರಾಜ್ಯದಾಗ ಆಗಿದ್ದು ಏನು ಅಂತ ಅಲ್ಲಾ. ಯಾಕಂದರ ಅದರಾಗ ತಪ್ಪು ಮಾಡಿದವರು ಇತರರ ವಿರುದ್ಧ ಕೋರ್ಟಿಗೆ ಹೋಗಿ ತಮ್ಮ ಹೆಸರು ತಗೀಬಾರದು ಅಂತ ತಡೆಯಾಜ್ಞೆ ತಂದಾರ.

ನಾವು ಇಲ್ಲಿ ನೋಡಬೇಕಾಗಿರೋದು ಮಧುಪಾಶ ಅಂದರ ಏನೂಂತ, ಅದರ ಇತಿಹಾಸ ಎಷ್ಟು ವರ್ಣರಂಜಿತ ಅನ್ನೋದನ್ನ.

ಇದು ಸಾವಿರಾರು ವರ್ಷಗಳಿಂದ ನಡಕೊಂಡು ಬಂದಿರೋ ಪದ್ಧತಿ. ಇದನ್ನು ಸರಕಾರಗಳು, ಮಿಲಿಟರಿ ಆಡಳಿತಗಾರರು, ಸರ್ವಾಧಿಕಾರಿಗಳು, ಸೈನಿಕರು, ಪೊಲೀಸರು, ಹೋಗಲಿ ಹೊಡದಾಡಿಕೊಳ್ಳೋ ಅಣ್ಣಾ ತಮ್ಮಾ ಸಹಿತ ಮಾಡಿಕೊಂಡು ಬಂದಾರ.

2010ರಾಗ ಬ್ರಿಟಿಷ ಸರಕಾರ ತಮ್ಮಲ್ಲಿನ ಅಧಿಕಾರಿಗಳಿಗೆ, ಸೈನಿಕರಿಗೆ, ವ್ಯಾಪಾರಸ್ಥರಿಗೆ, ಯೂನಿವರ್ಸಿಟಿ ಶಿಕ್ಷಕರಿಗೆ ಎಲ್ಲಿರಿಗೆ ಒಂದು ನೋಟಿಸು ಕೊಟ್ಟಿತು. ಚೈನಾದ ಬೇಹುಗಾರರು ಬಂದು ನಿಮ್ಮನ್ನು ಪ್ರೇಮ ಪಾಶದೊಳಗ ಕೆಡವಬಹುದು. ನಿಮ್ಮಿಂದ ಸರಕಾರಿ ರಹಸ್ಯಗಳನ್ನ ಪಡಕೊಳ್ಳಿಕ್ಕೆ ಪ್ರಯತ್ನ ಮಾಡಬಹುದು. ಇದರಿಂದ ನೀವು ದೂರ ಇರಿ. ಅಂತ ಅದರಾಗ ಬರದಿತ್ತು. “ಅವತ್ತಿನಿಂದ ಸದ್ ಗ್ರಹಸ್ಥರು ಅನ್ನಿಸಿಕೊಂಡವರು ಏಷಿಯಾದ ಹೆಣ್ಣುಮಕ್ಕಳನ್ನು ಕಂಡರೆ ಓಡಲಿಕ್ಕೆ ಶುರುಮಾಡಿದರು” ಅಂತ ಅಲ್ಲಿನ ನಿಯತಕಾಲಿಕ ಒಂದು ವರದಿ ಮಾಡಿತ್ತು.

ಅಬಲೆಯರನ್ನ ಒಳಗೆ ಹಾಕಿಕೊಂಡು ದೇಶದ ರಹಸ್ಯ ಕದಿಯೋ ಜೇಮ್ಸ್ ಬಾಂಡನ್ನ ಜಗತ್ತಿಗೆ ಪರಿಚಯ ಮಾಡಿದ ಇಂಗ್ಲಂಡಿನೊಳಗ ತಮ್ಮ ಮ್ಯಾಲೆ ಪ್ರೇಮ ಪಾಶದಿಂದ ರಹಸ್ಯ ಕದಿಯೋರು ಬಂದಾರ ಅನ್ನೋ ಸುದ್ದಿಯೇ ಸ್ಪೋಟಕವಾಗಿತ್ತು.

ಹಂಗಂತ ಇದರಾಗ ಬರೇ ಹೆಣ್ಣುಮಕ್ಕಳು ಇರೋದಿಲ್ಲ. ಹಿರಿಯ ಮಹಿಳಾ ಅಧಿಕಾರಿಗಳ ಹತ್ತಿರ ರಹಸ್ಯ ಮಾಹಿತಿ ಕದಿಯಲಿಕ್ಕೆ ಅಂತ ಪೂರ್ವ ಜರ್ಮನಿಯವರು ಪಶ್ಚಿಮ ಜರ್ಮನಿಗೆ ಸುಂದರಾಂಗರನ್ನ ಕಳಿಸಿದರಂತ. ಅದರಲ್ಲಿ ಒಬ್ಬ ಕಸಬುದಾರ ಒಬ್ಬ ಮಹಿಳಾ ಅಧಿಕಾರಿಯನ್ನು ಪ್ರೇಮಿಸೋ ನಾಟಕ ಮಾಡಿದ. ಅದು ಎಷ್ಟು ನೈಜವಾಗಿತ್ತು ಅಂದರ ಆತ ಬೇಹುಗಾರ, ನಿನ್ನನ್ನು ಮೋಸ ಮಾಡಿದ್ದಾನೆ ಅಂತ ಸಾಕ್ಷಿ ಸಮೇತ ತೋರಿಸಿದ ಮ್ಯಾಲೆ ಸಹ ಆ ಮಹಿಳೆ ಅದು ಸಾಧ್ಯವೇ ಇಲ್ಲ. ಆತ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಅಂತ ವಾದಿಸಿದಳಂತ.

ಮಾತಾ ಹರಿ
ಜಾಗತಿಕ ಮಿಲಿಟರಿ ಇತಿಹಾಸದೊಳಗ ಅತಿ ಕುಖ್ಯಾತ ಬೇಹುಗಾರ್ತಿ ಮಾತಾ ಹರಿ. ಹೆಸರು ನೋಡಿದರ ನಮ್ಮ ಓಣಿ ಮುತೈದಿಗತೆ ಕಾಣೋ ಇಕಿಗೂ ಭಾರತಕ್ಕೂ ಯಾವ ಸಂಬಂಧನೂ ಇಲ್ಲ.

 

ಇಕಿ ನೆದರಲ್ಯಾಂಡಿನಕಿ. ಜಾವಾದೊಳಗ ನೃತ್ಯಗಾರ್ತಿ ಆಗಿದ್ಲು. ಫ್ರಾನ್ಸ್‌ ದೇಶದ ರಹಸ್ಯಗಳನ್ನ ಜರ್ಮನಿಗೆ ಮಾರಲಿಕ್ಕೆ ಇಕಿಗೆ ಸ್ಪೇನಿನೊಳಗಿನ ಅಧಿಕಾರಿಯೊಬ್ಬ ರೊಕ್ಕ ಕೊಡತಿದ್ದಾ ಅಂತ ಹೇಳಿ ಇಕಿನ್ನ ಜರ್ಮನಿಯವರು ದಸ್ತಗಿರಿ ಮಾಡಿದರು. ಒಂದು ವಾಕ್ಯದೊಳಗ ನಾಲ್ಕು ದೇಶಗಳನ್ನು ಹರಾಜು ಹಾಕಿದ ಇಕಿ ಅಪ್ರತಿಮ ದೇಶಭಕ್ತೆ. ಯಾವ ದೇಶದ್ದು ಅನ್ನೋದಕ್ಕ ಮೇಲಿನ ಸಾಲನ್ನು ಇನ್ನೊಮ್ಮೆ ಓದರಿ. ಆದರೆ ಅಕಿ ವಿರುದ್ಧ ಆ ಯಾವ ನಾಲ್ಕು ದೇಶಗಳಿಗೂ ಸಾಕ್ಷಿ ಸಿಗಲಿಲ್ಲ. ನಿನ್ನ ತಪ್ಪಿರಲಿಕ್ಕಿಲ್ಲ. ಆದರ ನಿನ್ನಂಗ ಯಾರೂ ಆಗಬಾರದು ಅಂತ ಅಕಿನ್ನ ಗುಂಡು ಹಾಕಿ ಕೊಂದರು. ಬಾಟಲಿ ತಗದು ಹಾಕೋದಲ್ಲ. ಟ್ರಿಗರ್ ಒತ್ತಿ ಹಾಕೋದು. ಅಂದರ ಮಧು ಪಾಶ ಅನ್ನೋದು ಎಷ್ಟು ಡೇಂಜರೋ, ಅದರಂಗ ಕಾಣೋದೆಲ್ಲಾ ಅಷ್ಟೇ ಡೇಂಜರು.

ವನೂನು

ಇವನ್ಯಾವನು ಅಂತ ಡೌಟು ಬರೋ ಅಂಥಾ ಹೆಸರಿನ ಮರಡೋಚಿ ವನೂನು ಅನ್ನೋ ಇಸ್ರೇಲಿ ವಿಜ್ಞಾನಿ ತನ್ನ ದೇಶದ ಅಣು ಬಾಂಬಿನ ತಯಾರಿಕೆ ಕಾರ್ಖಾನೆಯ ಫೋಟೋ ತೊಗೊಂಡು ಬ್ರಿಟನ್ನಿನ ಪತ್ರಿಕೆಗಳಿಗೆ ಕೊಟ್ಟ. ಅವು ಖರೇನೋ ಸುಳ್ಳೋ ಅನ್ನೋದನ್ನ ಅವರು ಪತ್ತೇ ಮಾಡೋ ತನಕಾ ಅವನಿಗೆ ಅವರು ಒಂದು ಹೊಟೆಲಿನೊಳಗ ಗುಪ್ತವಾಗಿ ಇಟ್ಟು ತಮ್ಮ ಖರ್ಚಿನೊಳಗ ಊರು ಸುತ್ತಾಡಿಸಿದರು. ಹಂಗ ಸೈಟ್ ಸೀಯಿಂಗ್ ಹೋದಾಗ ಅವನಿಗೆ ಒಂದು ಸೈಟಿಂಗ್ ಆತು. ಅಕಿ ಹೆಸರು ಸಿಂಡೀ. ಅವಳ ಜೊತೆ ನಾನು ನಾಕು ದಿವಸ ರೋಮಿಗೆ ಹೋಗತೇನಿ ಅಂತ ಆತ ಪತ್ರಿಕೆ ಸಂಪಾದಕರಿಗೆ ಹೇಳಿ ಹೋದ. ಹೋದವನನ್ನ ಇಸ್ರೇಲಿನ ಬೇಹು ಸಂಸ್ಥೆ ಮೊಸಾದ್‍ನ ಏಜೆಂಟರು ನಾಕು ಬಿಗಿದು ಸುಮ್ಮ ಇರು ಅಂದರ ಏನೇನೋ ಮಾಡತೀಯಾ ವನೂನು ಅಂತ ಇಸ್ರೇಲಿಗೆ ಕರಕೊಂಡು ಹೋಗಿ 18 ವರ್ಷ ಜೈಲಿನ್ಯಾಗ ಇಟ್ಟರು. ಆಮ್ಯಾಲೆ ಅವ ಹೊರಗ ಬಂದ. ಸಿಂಡೀ ಅನ್ನೋಕಿನೂ ಮೊಸಾದ್ ಏಜೆಂಟ್ ಅನ್ನೋ ವಿಚಾರ ಅವನಿಗೆ ಇನ್ನೂ ಹೊಸಾದು, ಪಾಪ.

ಇನ್ನೊಬ್ಬ ಇವನಾವ್
ಅರವತ್ತರ ದಶಕದಾಗ ಯೂಜೆನಿ ಇವನಾವ್ ಅಂತ ಒಬ್ಬ ರಷಿಯನ್ ಮಿಲಿಟರಿ ಅಧಿಕಾರಿ ಇಂಗ್ಲಂಡಿನಲ್ಲಿ ಮಾರು ವೇಷದಿಂದ ಇದ್ದ. ಹಂಗಂತ ಅವ ವೇಷ ಬದಲಿಸಿಗೊಳ್ಳೋ ಅಷ್ಟು ಅಸಹ್ಯ ಇರಲಿಲ್ಲ. ಖರೇ ಅಂದರ ಅವ ಎಷ್ಟು ಚಂದ ಇದ್ದಾ ಅಂದರ ಆತ ಬೀದಿಯಲ್ಲಿ ನಡೆದರೆ ನೆಲ ಎದ್ದು ಅವನನ್ನು ಚುಂಬಿಸುತ್ತಿತ್ತು ಅಂತ ಕೆಲವು ಪತ್ರಿಕೆಗಳು ಬರೆದವು. ಅವನು ಸ್ಟೀಫನ್ ವಾರ್ಡ್ ಅನ್ನೋ ಸಾಹುಕಾರನ ಪಾರ್ಟಿಗೆ ಹೋದ. ಅಲ್ಲಿ ಕ್ರಿಸ್ಟೀನ್ ಕೀಲರ್ ಅನ್ನೋ ಹುಡಿಗಿ ಅವನ ಕಿಲ್ಲರ್ ಇನಸ್ಟಿಂಕ್ಟ್ ಅನ್ನ ನೋಡಿ ಅವನ ಬಲಿಗೆ ಬಿದ್ಲು. ತನ್ನ ಗೆಣೆಯನಾಗಿದ್ದ ಬ್ರಿಟನ್ನಿನ ರಕ್ಷಣಾ ಖಾತೆ ಸಚಿವ ಜಾನ್ ಪೋಫೂಮೋ ಅನ್ನೋ ಮನುಷ್ಯನಿಗೆ ಕೈ ಕೊಟ್ಟಳು. ಈ ರಷಿಯನ್ನಿನ ನಸುಗೆಂಪು ಕೈ ಹಿಡದ್ಲು.

ಆ ಪೋಫೂಮೋ ಅನ್ನೋ ಪ್ರಾಣಿ ತನ್ನ ಕೆಲಸಾ ಬಿಟ್ಟು ಅಮೇರಿಕಾದ ಕ್ಷಿಪಣಿಗಳನ್ನ ಜರ್ಮನಿಗೆ ಮಾರಾಟ ಮಾಡಿಸೋ ದಲ್ಲಾಳಿ ಕೆಲಸ ಮಾಡಲಿಕ್ಕೆ ಹತ್ತಿದ್ದ. ಈ ಕೀಲರ್ ಅನ್ನೋ ಮಂತ್ರಿಯ ಗೆಣತಿ ಅವನ್ಯಾವನೋ ರಷಿಯನ್ನನ ಹಿಂದೆ ಬಿದ್ದಾಳ ಅನ್ನೋದನ್ನ ಬ್ರಿಟಿಷ್‌ ಪತ್ರಿಕೆಗಳು ತಮ್ಮ ಮುಖಪುಟಕ್ಕಿಂತ ದೊಡ್ಡ ಅಕ್ಷರಗಳಲ್ಲಿ ಬರದವು. ಮಂತ್ರಿಯ ಹೆಂಡತಿ ಅವನಿಗೆ ಬೈದಳು, ಕಣ್ಣೀರು ಹಾಕಿದ್ಲು, ಆದರ ಬಿಟ್ಟು ಹೋಗಲಿಲ್ಲ. ಮಂತ್ರಿ ಮಹಾಷಯರು ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಸಂಗತೆ ರಾಜೀ ಮಾಡಿಕೊಳ್ಳಬೇಕಾತು. ಅವನಾವ್‍ನನ್ನು ಅವನಾವ ಊರಿಂದಾ ಬಂದಿದ್ದನೋ ಅಲ್ಲಿಗೆ ವಾಪಸ್ ಕಳಿಸಲಾಯಿತು. ಆದರ ಕೀಲರಮ್ಮಾ ಅವನ್ಯಾವನಿಗೋ ಕ್ಷಿಪಣಿ ರಹಸ್ಯಗಳನ್ನ ಕೈಮುಚ್ಚಿ ಕೊಟ್ಟಳು ಅಂತ ಹೇಳಲಿಕ್ಕೆ ಸರಕಾರಕ್ಕ, ಪತ್ರಿಕೆಗಳಿಗೆ ಸಾಕ್ಷಿನ ಸಿಗಲಿಲ್ಲ.

ತೋಳ ಹೋತು ತೋಳ

ಮಾಸ್ಕೋದಲ್ಲಿನ ಬ್ರಿಟಿಷ್ ಪತ್ರಕರ್ತ ಜೆರೆಮಿ ವೋಲ್ಫೆನ್‍ಡನ್ ಸಲಿಂಗಕಾಮಿ ಅನ್ನೋದು ರಷಿಯಾ ಸರಕಾರಕ್ಕೆ ಗೊತ್ತಾತು. ಅವರು ಅವನ ಮ್ಯಾಲೆ ತೋಳ ಬಿದ್ದಂಗ ಬಿದ್ದರು. ಅವನು ಹೋಗುತ್ತಿದ್ದ ಕಟಿಂಗ್ ಸಲೂನಿನಲ್ಲಿನ ಹುಡುಗನ ಜೊತೆ ಅವನು ಪ್ರೇಮ ಪಾಶಕ್ಕ ಬೀಳೋಹಂಗ ಮಾಡಲಾಯಿತು. ಅವನು ಮೈಮರೆತಾಗ ಫೋಟೋ ತಗದು ಅವನನ್ನು ಬ್ಲಾಕ್ ಮೇಲ್ ಮಾಡಲಾಯಿತು. ನಮ್ಮ ದೇಶದಲ್ಲಿರೋ ನಿಮ್ಮ ದೇಶದ ಜನರ ಮೇಲೆ ಬೇಹುಗಾರಿಕೆ ಮಾಡು. ಇಲ್ಲಾಂದರ ಪೇಪರಿನ್ಯಾಗ ನಿನ್ನ ಫೋಟೋ ನೋಡು ಅಂತ ಹೇಳಿ ಅವನಿಗೆ ಹೆದರಿಕೆ ಹಾಕಿದರು. ಅವನು ಓಡಿ ಹೋಗಿ ಇಂಗ್ಲೆಂಡಿನ ಸರಕಾರಕ್ಕ ಅವರು ನನಗ ಹಿಂಗಿಂಗ ಮಾಡ್ಯಾರ ಅಂತ ಛಾಡಿ ಹೇಳಿದ. ಇರಲಿ, ಅವರಿಗೆ ಒಂದಿಷ್ಟು ಉಪಯೋಗ ಇಲ್ಲದ ಮಾಹಿತಿ ತೊಗೊಂಡು ಕೊಡು. ಆದರ ಅವರ ಮಾಹಿತಿ ತೊಗೊಂಡು ನಮಗ ಕೊಡು. ಇಲ್ಲಾಂದರ ನೋಡು. ನಿನ್ನ ರಷಿಯಾದ ಕರಾಮತ್ತಿನ ಫೋಟೋ ಇಂಗ್ಲೆಂಡಿನೊಳಗ ಬರತದ ಅಂತ ಹೇಳಿ ಹೆದರಿಸಿದರು. ಎರಡೂ ಕಡೆ ಸಿಕ್ಕೊಂಡು ಆತ ಕುಡುದು ಕುಡುದು 31 ವರ್ಷಕ್ಕ ಸತ್ತ.

ಮತ್ತೊಂದು ತೋಳ

ಮಾರ್ಕಸ್ ವೂಲ್ಫ್ ಅನ್ನೋ ಪೂರ್ವ ಜರ್ಮನಿಯ ಸೇನಾಧಿಕಾರಿ ಪಶ್ಚಿಮ ಜರ್ಮನಿ ಸರಕಾರದಲ್ಲಿ ಮದುವೆಯಾಗದೇ ಉಳಿದ ಮಧ್ಯ ವಯಸ್ಸಿನ ಮಹಿಳೆಯರ ಗೆಳೆತನ ಮಾಡಲು ಯುವ ತರುಣರ ಒಂದು ತಂಡವನ್ನೇ ಕಟ್ಟಿದ. ಅದರ ಹೆಸರು ರೋಮಿಯೋ ಕ್ಲಬ್. ಬಹುಶಃ ಇವರನ್ನು ನೋಡಿಯೇ ನಮ್ಮ ಆದಿತ್ಯನಾಥರು ರೋಮಿಯೋ ವಿರೋಧಿ ಪಡೆ ಮಾಡಿರಬೇಕು.

ಅವರು ನೂರಾರು ಮಹಿಳೆಯರ ಸ್ನೇಹ ಮಾಡಿದರು. ಹಲವಾರು ಜನ ಮದುವೆಯಾಗಿ ಪಶ್ಚಿಮ ಜರ್ಮನಿಯಲ್ಲಿ ಸಂಸಾರ ನಡೆಸಿದರು. ಅವರು ಸೈನ್ಯದ, ಸರಕಾರದ ವಿವಿಧ ಅಂಗಗಳ ರಹಸ್ಯಗಳನ್ನು ಹತ್ತಾರು ವರ್ಷ ವಿಲೇವಾರಿ ಮಾಡಿದರು. ಕೊನೆಗೆ ಎರಡೂ ಜರ್ಮನಿಗಳು ಒಂದಾದಾಗ ಇವರೆಲ್ಲ ಸೆರೆ ಸಿಕ್ಕರು. ಇವರ ವಿಚಾರಣೆಯಲ್ಲಿ ಇವರು ಈಗ ನಮ್ಮ ಪ್ರಜೆಗಳು. ಇವರ ಮೇಲೆ ದೇಶದ್ರೋಹದ ಆರೋಪ ಹೊರಿಸುವುದು ಹೇಗೆ ಅಂತ ಅನೇಕರನ್ನು ಬಿಟ್ಟರು. ಮಾರ್ಕಸ್ ವೂಲ್ಫ್‌ನನ್ನು ತೋಳ ಬಂದೇ ಇಲ್ಲ, ಎಲ್ಲಾ ಸುಳ್ಳೇ ಅನ್ನೋ ಹಂಗ ಎರಡೇ ವರ್ಷ ಜೈಲಿಗೆ ಹಾಕಿದರು. ಆ ಪುಣ್ಯಾತ್ಮ ಹೊರಗ ಬಂದು ಮುಖವಿಲ್ಲದ ಮನುಷ್ಯನ ಕತೆ ಅಂತ ಕಾದಂಬರಿ ಬರದು ಲಕ್ಷಾಧೀಶನಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...