Homeಎಲೆಮರೆಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ

- Advertisement -
- Advertisement -

ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅದರ ಅರ್ಥ ವ್ಯವಸ್ಥಾದ ಬಗ್ಗೆ ಮಾತಾಡೋ ಮುಂದ ಅದು ಹಣದುಬ್ಬರ ಅಂತ ಅರ್ಥ.

ಅಂದರ ಏನು? ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.

ಖರೇ ಹೇಳಬೇಕಂದರ ಆ ಕಾಲ ಸೋವಿ ಕಾಲ ಅಲ್ಲ. ಅದು ಗಟ್ಟಿ ಕಾಲ. ಈಗಿನ ಕಾಲನೇ ಸೋವಿ.

ಈ ವಾರದ ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಭಾರತದ ಉಬ್ಬರದ ಪ್ರಮಾಣ 7.35 ಆಗೇದಂತ. ಹಂಗಂದರ ಏನು?

ಅಂದರ- ಹಿಂದಿನ ಯಾವುದೋ ಒಂದು ವರ್ಷವನ್ನು ಮೂಲ ಅಳತೆಯ ವರ್ಷ ಅಂತ ಹಿಡಕೊಂಡರ ಆ ಲೆಕ್ಕದ ಮ್ಯಾಲೆ ಈ ವರ್ಷ ಕೆಲವು ನಿರ್ದಿಷ್ಟ ಸಾಮಾನುಗಳ ಬೆಲೆ ಎಷ್ಟು ಹೆಚ್ಚಾಗೇದ ಅಂತ.

ಪಂತ ಪ್ರಧಾನ ನರೇಂದ್ರ ಮೋದಿ ಅವರ ಸರಕಾರ ಬರೋ ಮುಂಚೆ ಇದು 1999 ಆಗಿತ್ತು. ಈಗ ಅದು ಬದಲಾಗಿ ಬದಲಾಗಿ ಈಗ 2017- 18 ಆಗೇದ. ಅಂದರ ಒಂದು ವರ್ಷದಾಗ ವಸ್ತುಗಳ ಬೆಲೆ 7.35 ಶೇಕಡಾ ಆಗೇದ ಅಂತ ಅರ್ಥ.

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ.

ಹಂಗಾರ 10 ವರ್ಷದ ಉಬ್ಬರದ ಪ್ರಮಾಣ ಎಷ್ಟು ಅಂತ ನೀವು ಕೇಳಿದರ ಶಾಕ್ ಆಗ್ತೀರಿ. ಅದು ಸುಮಾರು 105 ಶೇ. ಅಂದರ ಹತ್ತು ವರ್ಷದ ಹಿಂದ ನೂರು ರೂಪಾಯಿಗೆ ಇದ್ದ ಬೆಲೆ ಈಗ 205 ರೂಪಾಯಿಗೆ.

ಹಂಗಂತ ನಿರ್ಮಲಾ ಸೀತಾರಾಮನ್ ಅವರ ಕಾಲಕ್ಕೆ ಮಾತ್ರ ಆಪತ್ಕಾಲ ಅಂತ ಅಲ್ಲ. ಹಿಂದಿನವರೂ ಹಿಂಗ ಇದ್ದರು. ನಮ್ಮ ದೇಶದಾಗ ಶೇಕಡಾ 10 ಕ್ಕಿಂತ ಹೆಚ್ಚು ಉಬ್ಬರ ಇದ್ದ ವರ್ಷಗಳು- 1983, 1990, 1996, 1998, 2009 ಹಾಗೂ 2012. ಮತ್ತು ಅತ್ಯಂತ ಹೆಚ್ಚು ಉಬ್ಬರ ಇದ್ದ ವರ್ಷಗಳು 1974 – (25 ಶೇ). 1973 -(21. ಶೇ).

ಈ ವರ್ಷ ಅಮೆರಿಕೆ ಉಬ್ಬರ ಶೇ. 2.1 ಇದ್ದರ ಚೈನಾದ್ದು 2 ಅದ. ಜಪಾನಿನದು 0.9 ಅದ. ಅತ್ಯಂತ ಹೆಚ್ಚು ಇರೋದು ವಿಶ್ವ ಸುಂದರಿಗಳ ನಾಡಾದ ವೆನೆಜೂವೆಲಾದಾಗ ಶೇ. 255 ಅದ. ನಂತರ ಸ್ಥಾನ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದ ದೇಶಗಳದು. ನಾವು ಸದ್ಯ ಈ ಬಡ ದೇಶಗಳ ಜೊತೆ ಸ್ಪರ್ಧೆ ಮಾಡಲಿಕ್ಕೆ ಹತ್ತೇವಿ.

ಇದರ ದುಷ್ಪರಿಣಾಮ ಏನಪಾ ಅಂದರ ರೂಪಾಯಿಯ ಬೆಲೆ ಕಮ್ಮಿ ಆದಂತೆಲ್ಲಾ ಜನಸಾಮಾನ್ಯರ ಖರೀದಿಸುವ ಶಕ್ತಿ ಕಮ್ಮಿ ಆಗತದ. ಇದು ದೇಶದ ಆರ್ಥಿಕ ವ್ಯವಸ್ಥೆಯ ಮ್ಯಾಲೆ ಕೆಟ್ಟ ಪರಿಣಾಮ ಬೀರತದ.

ಅದು ಹೆಂಗಂತ ಹೇಳತೇನಿ. ಇಡೀ ಜಗತ್ತಿನ್ಯಾಗ ಮೂರು ರೀತಿ ಜನ ಇರತಾರ. ಉತ್ಪಾದಕರು, ಮಾರಾಟಗಾರರು ಹಾಗೂ ಬಳಕೆದಾರರು. ಇನ್ನು ಉತ್ಪಾದಕರು ಅಂದರ ರೈತರ ಹಂಗ ಆಹಾರ ಉತ್ಪಾದಕರು ಇರಬಹುದು, ಯಂತ್ರ ತಯಾರಿಸೋ ಉದ್ದಿಮೆದಾರರು ಇರಬಹುದು. ಇವೆರಡೂ ಇರದ ಸೇವೆ ನೀಡುವವರು ಇರಬಹುದು. ನಮ್ಮ ಮನಿಗೆ ಬರೋ ನೀರು ಸರಕು ಅಂತ ಆದರ, ಆ ನೀರು ಬಿಡೋ ನೀರುಗಂಟಿ ಸೇವೆ ಪೂರೈಕೆದಾರ. ಇವರ ಪ್ರಯತ್ನಕ್ಕ ನಾವು ಹಣದೊಳಗ ಬೆಲೆ ಕಟ್ಟತೇವಿ. ಅದು ಅವರ ವರಮಾನ. ಅದನ್ನು ಅವರು ತಮಗ ಬೇಕಾದ್ದನ್ನ ತೊಗೊಳ್ಳಲಿಕ್ಕೆ ಬಳಸಿಕೊಳ್ಳತಾರ.

ಇನ್ನು ವ್ಯಾಪಾರಸ್ಥರು ಏನನ್ನೂ ಉತ್ಪಾದಿಸದಿದ್ದರೂ ಎಲ್ಲಾನೂ ಮಾರಾಟ ಮಾಡತಾರ. ಅವರಿಗೆ ತಮ್ಮ ಬಂಡವಾಳ ಬಿಟ್ಟು ಮಿಕ್ಕೊ ಹಣನ ಲಾಭ. ಅದನ್ನು ಬಳಸಿ ಅವರು ಸರಕನ್ನೋ, ಸೇವೆಯನ್ನೋ ಖರೀದಿ ಮಾಡತಾರ. ಕೆಲವರ ಸೇವೆ ಸೋವಿಯಾಗಿ, ಇನ್ನು ಕೆಲವರದು ತುಟ್ಟಿಯಾಗಿ ಇರತದ. ಇದ ಸಮಸ್ಯೆ.

ಹಂಗಂತ ಇದು ಉಳ್ಳವರಿಗೆ ಒಳ್ಳೆಯದು. ಯಾಕಂದರ ಅವರ ಹತ್ತರ ಆಸ್ತಿ ಇರತದ. ಉಳ್ಳವರಿಗೆ ಇರಂಗಿಲ್ಲ. ಅವರ ಹತ್ತಿರ ಇರೋ ರೂಪಾಯಿಯ ಬೆಲೆ ಸವಿಸಿಗೋತ ಹೋಗತದ. ಆಸ್ತಿ ಸವಿಯಂಗಿಲ್ಲ. ಅದು ಯಾವಾಗಲೂ ಸವಿ -ಸವಿಯಾಗೇ ಇರತದ.

ಉಬ್ಬರದ ಕಾರಣಗಳು ಹಲವು ಅದರಾಗ ಬೇಡಿಕೆ ಎಳೆಯುವಿಕೆ, ಬೆಲೆ ತಳ್ಳುವಿಕೆ ಹಾಗೂ ಸಾಂಸ್ಥಿಕ ಅಂತ ಮೂರು ಪ್ರಮುಖ. ಆ ಅರೇಬಿಯಾದ ಮಹಾರಾಜರೆಲ್ಲ ವರ್ಷಕ್ಕೊಮ್ಮೆ ಸಭೆ ಸೇರಿ ತಮ್ಮ ಪೆಟ್ರೊಲ್ – ಡೀಸಲ್ ಉತ್ಪನ್ನ ಕಮ್ಮಿ ಮಾಡಿ ಅದರ ಬೆಲೆ ಜಾಸ್ತಿ ಮಾಡತಾರಲ್ಲ, ಅದು ಬೇಡಿಕೆ ಎಳೆಯುವಿಕೆ ಉದಾಹರಣೆ. ಇನ್ನೊಂದು ಉದಾಹರಣೆ ಅಂದರ ಇಂಟರ ನೆಟ್ಟಿನ್ಯಾಗ ಹೊಸಾ ಮೊಬೈಲ್ ಫೋನ್ ಮಾರಾಟಕ್ಕ ಬಂದಾಗ ಹತ್ತು ಸೆಕೆಂಡಿನ್ಯಾಗ ಖಾಲಿ ಆಗಿ ಮುಂದಿನ ಬಾರಿ ಅದರ ಬೆಲೆ ಹೆಚ್ಚಾಗತದಲ್ಲಾ ಅದು.

ಬೆಲೆ ತಳ್ಳುವಿಕೆ ಅಂದರ ಯಾವುದೇ ವಸ್ತು ಅಥವಾ ಸೇವೆಯ ಬೇಡಿಕೆ ಕಮ್ಮಿ ಇದ್ದರೂ ಬೆಲೆ ಯಾವುದೇ ಕಾರಣಕ್ಕೆ ಹೆಚ್ಚಾಗುವುದು. ಕುಶಲಿ ವೈದ್ಯರೊಬ್ಬರು ಹೃದಯ ಚಿಕಿತ್ಸೆಗೆ ಜಾಸ್ತಿ ಹಣ ತೊಗೊಳ್ಳೋದು, ಯಾರೂ ಕೊಳ್ಳದೇ ಇದ್ದರೂ ಪ್ಲಾಟಿನಂ ಉಂಗುರದ ಬೆಲೆ ಹೆಚ್ಚಾಗೋದು, ಇದಕ್ಕೆ ಉದಾಹರಣೆ.

ಇನ್ನು ಸಾಂಸ್ಥಿಕ ಅಂದರ, ಒಂದು ದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ಕುಶಲ ಕೂಲಿ ಹಾಗೂ ಕೌಶಲ್ಯ ರಹಿತ ಕೂಲಿ ಹೆಚ್ಚಾಗುವುದು. ಇದನ್ನು ಅರ್ಥ ಶಾಸ್ತ್ರಜ್ಞರು ಆರೋಗ್ಯವಂತ ಉಬ್ಬರ ಅಂತ ಕರೀತಾರ. ಉದಾಹರಣೆಗೆ ಭಾರತದಾಗ ಮನೆ ಕೆಲಸ ಮಾಡೋರಿಗೆ ತಿಂಗಳಿಗೆ ಐನೂರೋ , ಸಾವಿರನೋ ಕೊಟ್ಟರೆ ಅದೇ ಕೆಲಸಕ್ಕೆ ಅಮೆರಿಕಾದಾಗ ತಾಸಿಗೆ ಏಳು ನೂರು ರೂಪಾಯಿ ಕೊಡೋದು. ಉಳಿದ ಎರಡೂ ಥರದ ಉಬ್ಬರಗಳು ಆರೋಗ್ಯಕರ ಅಲ್ಲ.

ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುವ ಉಬ್ಬರದ ಪ್ರಮಾಣ ಶೇ. 2- 4. ಇದರಿಂದ ಜನ ಉಳಿಕೆ ಮಾಡೋಕಿಂತಾ ಖರೀದಿ ಮಾಡಲಿಕ್ಕೆ ಆಸಕ್ತಿ ತೋರಸತಾರ. ಆದರ ಭಾರತದ ಅಭಿವೃದ್ಧಿ ದರ ಶೇ. 5 ಇದ್ದು, ಉಬ್ಬರ 7.35 ಇದ್ದರ ಅದರ ಅರ್ಥ ದೇಶ ಹಿಮ್ಮುಖವಾಗಿ ನಡದದ ಅಂತ. ಇದು ಒಳ್ಳೆಯದಲ್ಲ ಅಂತ ಕೆಲವರು ಹೇಳತಾರ.

ಒಂದು ದೇಶದ ಕೇಂದ್ರ ಬ್ಯಾಂಕು ಸರಕಾರ ಇ‌ಷ್ಟೇ ನೋಟು ಪ್ರಿಂಟು ಮಾಡಬೇಕು. ಇದಕ್ಕಿಂತ ಹೆಚ್ಚು ಮಾಡಿದರ ಅದು ಉಬ್ಬರಕ್ಕ ಕಾರಣವಾಗಿ ರೂಪಾಯಿಯ ಬೆಲೆ ಕಮ್ಮಿ ಆಗತದ ಅಂತ ಸಲಹೆ ಕೊಡತದ. ಬಡವರ ಖರೀದಿ ಶಕ್ತಿ ಹೆಚ್ಚುವಂತಹಾ ಇನ್ನೂ ಕೆಲವು ಕ್ರಮಗಳನ್ನೂ ಕೈಕೊಳ್ಳಬೇಕು.

ಆದರ ಈಗ ನಮ್ಮ ದೇಶದಾಗ ಸರಕಾರಕ್ಕ ಸಲಹೆ ಕೊಡೋವಷ್ಟು ಧೈರ್ಯವಂತರು ಯಾರಿಲ್ಲ. ಅವರು ಕೊಡೋ ಸ್ವಲ್ಪ ಸಲಹೆಯನ್ನೂ ಕೇಳೋ ಕಿವಿಗಳೂ ಇದ್ದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...