Homeಎಲೆಮರೆಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ

- Advertisement -
- Advertisement -

ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅದರ ಅರ್ಥ ವ್ಯವಸ್ಥಾದ ಬಗ್ಗೆ ಮಾತಾಡೋ ಮುಂದ ಅದು ಹಣದುಬ್ಬರ ಅಂತ ಅರ್ಥ.

ಅಂದರ ಏನು? ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.

ಖರೇ ಹೇಳಬೇಕಂದರ ಆ ಕಾಲ ಸೋವಿ ಕಾಲ ಅಲ್ಲ. ಅದು ಗಟ್ಟಿ ಕಾಲ. ಈಗಿನ ಕಾಲನೇ ಸೋವಿ.

ಈ ವಾರದ ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಭಾರತದ ಉಬ್ಬರದ ಪ್ರಮಾಣ 7.35 ಆಗೇದಂತ. ಹಂಗಂದರ ಏನು?

ಅಂದರ- ಹಿಂದಿನ ಯಾವುದೋ ಒಂದು ವರ್ಷವನ್ನು ಮೂಲ ಅಳತೆಯ ವರ್ಷ ಅಂತ ಹಿಡಕೊಂಡರ ಆ ಲೆಕ್ಕದ ಮ್ಯಾಲೆ ಈ ವರ್ಷ ಕೆಲವು ನಿರ್ದಿಷ್ಟ ಸಾಮಾನುಗಳ ಬೆಲೆ ಎಷ್ಟು ಹೆಚ್ಚಾಗೇದ ಅಂತ.

ಪಂತ ಪ್ರಧಾನ ನರೇಂದ್ರ ಮೋದಿ ಅವರ ಸರಕಾರ ಬರೋ ಮುಂಚೆ ಇದು 1999 ಆಗಿತ್ತು. ಈಗ ಅದು ಬದಲಾಗಿ ಬದಲಾಗಿ ಈಗ 2017- 18 ಆಗೇದ. ಅಂದರ ಒಂದು ವರ್ಷದಾಗ ವಸ್ತುಗಳ ಬೆಲೆ 7.35 ಶೇಕಡಾ ಆಗೇದ ಅಂತ ಅರ್ಥ.

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ.

ಹಂಗಾರ 10 ವರ್ಷದ ಉಬ್ಬರದ ಪ್ರಮಾಣ ಎಷ್ಟು ಅಂತ ನೀವು ಕೇಳಿದರ ಶಾಕ್ ಆಗ್ತೀರಿ. ಅದು ಸುಮಾರು 105 ಶೇ. ಅಂದರ ಹತ್ತು ವರ್ಷದ ಹಿಂದ ನೂರು ರೂಪಾಯಿಗೆ ಇದ್ದ ಬೆಲೆ ಈಗ 205 ರೂಪಾಯಿಗೆ.

ಹಂಗಂತ ನಿರ್ಮಲಾ ಸೀತಾರಾಮನ್ ಅವರ ಕಾಲಕ್ಕೆ ಮಾತ್ರ ಆಪತ್ಕಾಲ ಅಂತ ಅಲ್ಲ. ಹಿಂದಿನವರೂ ಹಿಂಗ ಇದ್ದರು. ನಮ್ಮ ದೇಶದಾಗ ಶೇಕಡಾ 10 ಕ್ಕಿಂತ ಹೆಚ್ಚು ಉಬ್ಬರ ಇದ್ದ ವರ್ಷಗಳು- 1983, 1990, 1996, 1998, 2009 ಹಾಗೂ 2012. ಮತ್ತು ಅತ್ಯಂತ ಹೆಚ್ಚು ಉಬ್ಬರ ಇದ್ದ ವರ್ಷಗಳು 1974 – (25 ಶೇ). 1973 -(21. ಶೇ).

ಈ ವರ್ಷ ಅಮೆರಿಕೆ ಉಬ್ಬರ ಶೇ. 2.1 ಇದ್ದರ ಚೈನಾದ್ದು 2 ಅದ. ಜಪಾನಿನದು 0.9 ಅದ. ಅತ್ಯಂತ ಹೆಚ್ಚು ಇರೋದು ವಿಶ್ವ ಸುಂದರಿಗಳ ನಾಡಾದ ವೆನೆಜೂವೆಲಾದಾಗ ಶೇ. 255 ಅದ. ನಂತರ ಸ್ಥಾನ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದ ದೇಶಗಳದು. ನಾವು ಸದ್ಯ ಈ ಬಡ ದೇಶಗಳ ಜೊತೆ ಸ್ಪರ್ಧೆ ಮಾಡಲಿಕ್ಕೆ ಹತ್ತೇವಿ.

ಇದರ ದುಷ್ಪರಿಣಾಮ ಏನಪಾ ಅಂದರ ರೂಪಾಯಿಯ ಬೆಲೆ ಕಮ್ಮಿ ಆದಂತೆಲ್ಲಾ ಜನಸಾಮಾನ್ಯರ ಖರೀದಿಸುವ ಶಕ್ತಿ ಕಮ್ಮಿ ಆಗತದ. ಇದು ದೇಶದ ಆರ್ಥಿಕ ವ್ಯವಸ್ಥೆಯ ಮ್ಯಾಲೆ ಕೆಟ್ಟ ಪರಿಣಾಮ ಬೀರತದ.

ಅದು ಹೆಂಗಂತ ಹೇಳತೇನಿ. ಇಡೀ ಜಗತ್ತಿನ್ಯಾಗ ಮೂರು ರೀತಿ ಜನ ಇರತಾರ. ಉತ್ಪಾದಕರು, ಮಾರಾಟಗಾರರು ಹಾಗೂ ಬಳಕೆದಾರರು. ಇನ್ನು ಉತ್ಪಾದಕರು ಅಂದರ ರೈತರ ಹಂಗ ಆಹಾರ ಉತ್ಪಾದಕರು ಇರಬಹುದು, ಯಂತ್ರ ತಯಾರಿಸೋ ಉದ್ದಿಮೆದಾರರು ಇರಬಹುದು. ಇವೆರಡೂ ಇರದ ಸೇವೆ ನೀಡುವವರು ಇರಬಹುದು. ನಮ್ಮ ಮನಿಗೆ ಬರೋ ನೀರು ಸರಕು ಅಂತ ಆದರ, ಆ ನೀರು ಬಿಡೋ ನೀರುಗಂಟಿ ಸೇವೆ ಪೂರೈಕೆದಾರ. ಇವರ ಪ್ರಯತ್ನಕ್ಕ ನಾವು ಹಣದೊಳಗ ಬೆಲೆ ಕಟ್ಟತೇವಿ. ಅದು ಅವರ ವರಮಾನ. ಅದನ್ನು ಅವರು ತಮಗ ಬೇಕಾದ್ದನ್ನ ತೊಗೊಳ್ಳಲಿಕ್ಕೆ ಬಳಸಿಕೊಳ್ಳತಾರ.

ಇನ್ನು ವ್ಯಾಪಾರಸ್ಥರು ಏನನ್ನೂ ಉತ್ಪಾದಿಸದಿದ್ದರೂ ಎಲ್ಲಾನೂ ಮಾರಾಟ ಮಾಡತಾರ. ಅವರಿಗೆ ತಮ್ಮ ಬಂಡವಾಳ ಬಿಟ್ಟು ಮಿಕ್ಕೊ ಹಣನ ಲಾಭ. ಅದನ್ನು ಬಳಸಿ ಅವರು ಸರಕನ್ನೋ, ಸೇವೆಯನ್ನೋ ಖರೀದಿ ಮಾಡತಾರ. ಕೆಲವರ ಸೇವೆ ಸೋವಿಯಾಗಿ, ಇನ್ನು ಕೆಲವರದು ತುಟ್ಟಿಯಾಗಿ ಇರತದ. ಇದ ಸಮಸ್ಯೆ.

ಹಂಗಂತ ಇದು ಉಳ್ಳವರಿಗೆ ಒಳ್ಳೆಯದು. ಯಾಕಂದರ ಅವರ ಹತ್ತರ ಆಸ್ತಿ ಇರತದ. ಉಳ್ಳವರಿಗೆ ಇರಂಗಿಲ್ಲ. ಅವರ ಹತ್ತಿರ ಇರೋ ರೂಪಾಯಿಯ ಬೆಲೆ ಸವಿಸಿಗೋತ ಹೋಗತದ. ಆಸ್ತಿ ಸವಿಯಂಗಿಲ್ಲ. ಅದು ಯಾವಾಗಲೂ ಸವಿ -ಸವಿಯಾಗೇ ಇರತದ.

ಉಬ್ಬರದ ಕಾರಣಗಳು ಹಲವು ಅದರಾಗ ಬೇಡಿಕೆ ಎಳೆಯುವಿಕೆ, ಬೆಲೆ ತಳ್ಳುವಿಕೆ ಹಾಗೂ ಸಾಂಸ್ಥಿಕ ಅಂತ ಮೂರು ಪ್ರಮುಖ. ಆ ಅರೇಬಿಯಾದ ಮಹಾರಾಜರೆಲ್ಲ ವರ್ಷಕ್ಕೊಮ್ಮೆ ಸಭೆ ಸೇರಿ ತಮ್ಮ ಪೆಟ್ರೊಲ್ – ಡೀಸಲ್ ಉತ್ಪನ್ನ ಕಮ್ಮಿ ಮಾಡಿ ಅದರ ಬೆಲೆ ಜಾಸ್ತಿ ಮಾಡತಾರಲ್ಲ, ಅದು ಬೇಡಿಕೆ ಎಳೆಯುವಿಕೆ ಉದಾಹರಣೆ. ಇನ್ನೊಂದು ಉದಾಹರಣೆ ಅಂದರ ಇಂಟರ ನೆಟ್ಟಿನ್ಯಾಗ ಹೊಸಾ ಮೊಬೈಲ್ ಫೋನ್ ಮಾರಾಟಕ್ಕ ಬಂದಾಗ ಹತ್ತು ಸೆಕೆಂಡಿನ್ಯಾಗ ಖಾಲಿ ಆಗಿ ಮುಂದಿನ ಬಾರಿ ಅದರ ಬೆಲೆ ಹೆಚ್ಚಾಗತದಲ್ಲಾ ಅದು.

ಬೆಲೆ ತಳ್ಳುವಿಕೆ ಅಂದರ ಯಾವುದೇ ವಸ್ತು ಅಥವಾ ಸೇವೆಯ ಬೇಡಿಕೆ ಕಮ್ಮಿ ಇದ್ದರೂ ಬೆಲೆ ಯಾವುದೇ ಕಾರಣಕ್ಕೆ ಹೆಚ್ಚಾಗುವುದು. ಕುಶಲಿ ವೈದ್ಯರೊಬ್ಬರು ಹೃದಯ ಚಿಕಿತ್ಸೆಗೆ ಜಾಸ್ತಿ ಹಣ ತೊಗೊಳ್ಳೋದು, ಯಾರೂ ಕೊಳ್ಳದೇ ಇದ್ದರೂ ಪ್ಲಾಟಿನಂ ಉಂಗುರದ ಬೆಲೆ ಹೆಚ್ಚಾಗೋದು, ಇದಕ್ಕೆ ಉದಾಹರಣೆ.

ಇನ್ನು ಸಾಂಸ್ಥಿಕ ಅಂದರ, ಒಂದು ದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ಕುಶಲ ಕೂಲಿ ಹಾಗೂ ಕೌಶಲ್ಯ ರಹಿತ ಕೂಲಿ ಹೆಚ್ಚಾಗುವುದು. ಇದನ್ನು ಅರ್ಥ ಶಾಸ್ತ್ರಜ್ಞರು ಆರೋಗ್ಯವಂತ ಉಬ್ಬರ ಅಂತ ಕರೀತಾರ. ಉದಾಹರಣೆಗೆ ಭಾರತದಾಗ ಮನೆ ಕೆಲಸ ಮಾಡೋರಿಗೆ ತಿಂಗಳಿಗೆ ಐನೂರೋ , ಸಾವಿರನೋ ಕೊಟ್ಟರೆ ಅದೇ ಕೆಲಸಕ್ಕೆ ಅಮೆರಿಕಾದಾಗ ತಾಸಿಗೆ ಏಳು ನೂರು ರೂಪಾಯಿ ಕೊಡೋದು. ಉಳಿದ ಎರಡೂ ಥರದ ಉಬ್ಬರಗಳು ಆರೋಗ್ಯಕರ ಅಲ್ಲ.

ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುವ ಉಬ್ಬರದ ಪ್ರಮಾಣ ಶೇ. 2- 4. ಇದರಿಂದ ಜನ ಉಳಿಕೆ ಮಾಡೋಕಿಂತಾ ಖರೀದಿ ಮಾಡಲಿಕ್ಕೆ ಆಸಕ್ತಿ ತೋರಸತಾರ. ಆದರ ಭಾರತದ ಅಭಿವೃದ್ಧಿ ದರ ಶೇ. 5 ಇದ್ದು, ಉಬ್ಬರ 7.35 ಇದ್ದರ ಅದರ ಅರ್ಥ ದೇಶ ಹಿಮ್ಮುಖವಾಗಿ ನಡದದ ಅಂತ. ಇದು ಒಳ್ಳೆಯದಲ್ಲ ಅಂತ ಕೆಲವರು ಹೇಳತಾರ.

ಒಂದು ದೇಶದ ಕೇಂದ್ರ ಬ್ಯಾಂಕು ಸರಕಾರ ಇ‌ಷ್ಟೇ ನೋಟು ಪ್ರಿಂಟು ಮಾಡಬೇಕು. ಇದಕ್ಕಿಂತ ಹೆಚ್ಚು ಮಾಡಿದರ ಅದು ಉಬ್ಬರಕ್ಕ ಕಾರಣವಾಗಿ ರೂಪಾಯಿಯ ಬೆಲೆ ಕಮ್ಮಿ ಆಗತದ ಅಂತ ಸಲಹೆ ಕೊಡತದ. ಬಡವರ ಖರೀದಿ ಶಕ್ತಿ ಹೆಚ್ಚುವಂತಹಾ ಇನ್ನೂ ಕೆಲವು ಕ್ರಮಗಳನ್ನೂ ಕೈಕೊಳ್ಳಬೇಕು.

ಆದರ ಈಗ ನಮ್ಮ ದೇಶದಾಗ ಸರಕಾರಕ್ಕ ಸಲಹೆ ಕೊಡೋವಷ್ಟು ಧೈರ್ಯವಂತರು ಯಾರಿಲ್ಲ. ಅವರು ಕೊಡೋ ಸ್ವಲ್ಪ ಸಲಹೆಯನ್ನೂ ಕೇಳೋ ಕಿವಿಗಳೂ ಇದ್ದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...