Homeಕರ್ನಾಟಕಸನಾತನ ಧರ್ಮ ಎಂದರೇನು?: ಚಿಂತಕ ಕೆ.ಪಿ. ಸುರೇಶ್ ವಿಶ್ಲೇಷಣೆ ಇಲ್ಲಿದೆ..

ಸನಾತನ ಧರ್ಮ ಎಂದರೇನು?: ಚಿಂತಕ ಕೆ.ಪಿ. ಸುರೇಶ್ ವಿಶ್ಲೇಷಣೆ ಇಲ್ಲಿದೆ..

- Advertisement -
- Advertisement -

”ವರ್ಣಾಶ್ರಮ ವ್ಯವಸ್ಥೆಯನ್ನು ಜೀವಂತವಾಗಿ ಇರಿಸುವ ಉದ್ದೇಶ ಸನಾತನ ಧರ್ಮ ಹೊಂದಿದೆ. ಅದಕ್ಕಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯ ಮುಖಂಡರು ಮುಂದಾಗಿದ್ದಾರೆ. ಈ ಕಾರಣದಿಂದ ದೇಶದ ಬಹುಸಂಖ್ಯಾತ ಶೂದ್ರ ಸಮುದಾಯ ಅಪಾಯಕ್ಕೆ ಸಿಲುಕಲಿದೆ” ಎಂದು ವಿಮರ್ಶಕ, ಚಿಂತಕ ಕೆ.ಪಿ. ಸುರೇಶ್ ಹೇಳಿದರು.

ಸಾಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಸನಾತನ ಧರ್ಮ ಎಂದರೇನು? ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ಮಹಾಭಾರತ, ಭಗವದ್ಗೀತೆ ಇವುಗಳನ್ನು ಅಧ್ಯಯನ ಮಾಡಿದರೆ ಸನಾತನ ಧರ್ಮದ ಉದ್ದೇಶಗಳು ತಿಳಿಯುತ್ತವೆ. ಅದರೊಳಗಿನ ಆಂತರ್ಯ ಅರಿಯಲು ನಾವೆಲ್ಲರೂ ಮುಂದಾಗಬೇಕು. ಸನಾತನ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರನೆಂಬ ವರ್ಣಾಶ್ರಮ ವ್ಯವಸ್ಥೆ ಇದ್ದು, ಶೂದ್ರರು ಕನಿಷ್ಠವಾಗಿ ಕಾಣಲ್ಪಡುತ್ತಾರೆ. ಅವರು ಸಹ ನಮ್ಮಂತೆ ಮನುಷ್ಯರೆಂಬ ಅಂಬೇಡ್ಕರ್ ರಚಿತ ಸಂವಿಧಾನವನ್ನು ಇಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ತರದೆ ನಿಷ್ಪಲಗೊಳಿಸುವ ಕೆಲಸಕ್ಕೆ ಮುಂದಾಗುತ್ತಿರುವುದು ಖೇದಕರ ವಿಚಾರ. ಅದಕ್ಕೆ ವಿಚಾರವಾದಿಗಳು ಒಂದಾಗಿ ಸೇರಿ ಜನತೆಯನ್ನು ಜಾಗೃತಿಗೊಳಿಸಬೇಕಿದೆ” ಎಂದು ಹೇಳಿದರು.

”ಈ ದೇಶದಲ್ಲಿ ಆಳಬೇಕಾದ ಸಮುದಾಯ ಆಳಿಸಿಕೊಳ್ಳುತ್ತಿದೆ. ರೈತರು ಸಂಘಟಿತರಾದರೆ ಅವರೇ ಚುಕ್ಕಾಣಿ ಹಿಡಿಯಬಹುದು. ದಲಿತರು, ಹಿಙದುಳಿದವರು ತುಂಡುಗಳಾಗಿ ಒಡೆದು ಹೋಗುತ್ತಿರುವ ದಿನಗಳಲ್ಲಿ ಈ ಸಮುದಾಯಗಳಿಂದ ರಾಜಕಾರಣಿಗಳಿಗೆ ಲಾಭವಾಗುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸಲ್ಮಾನರು ಮೀಸಲಾತಿ ಎಷ್ಟು ಪಡೆದಿದ್ದಾರೆ. ಸಣ್ಣ ಸಮುದಾಯವಾದ ಬ್ರಾಹ್ಮಣ ಸಮುದಾಯ ಎಷ್ಟು ಮೀಸಲಾತಿ ಪಡೆದಿದೆ. ಇದನ್ನು ಹೆಚ್ಚಾಗಿ ಪ್ರಚಾರ ನೀಡದೆ ಅಲ್ಲಿಯೇ ಒತ್ತುತ್ತಿರುವುದು ವಿಷಾದನೀಯ. ಯಾರಾದರೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವವರು ವಿಶ್ವದಲ್ಲಿರುವ ಬೇರೆ ದೇಶಗಳ ಹೆಸರನ್ನಕ್ಕೆ ಹೇಳುವುದಿಲ್ಲ” ಎಂದರು.

”ಇಲ್ಲಿ ಧರ್ಮವನ್ನು ಹಿಡಿದುಕೊಂಡು ರಾಜಕಾರಣ ಮಾಡಲಾಗುತ್ತಿದೆ ಬದಲಿಗೆ ಆಳುವವರು ರಾಜಧರ್ಮ ಪಾಲಿಸದೆ ಶೂದ್ರರನ್ನು ತುಳಿಯುತ್ತಿರುವುದು ಎಷ್ಟು ಸರಿ ಇದೆ ಎಂದು ಹೇಳಿದರು. ವಿಶ್ವದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಹೇಳುವ ನಮ್ಮ ಸರಕಾರಗಳು ಅವರೊಂದಿಗೆ ಏಕೆ ರಾಜ್ಯ ತಾಂತ್ರಿಕ ಭಾಂದವ್ಯವನ್ನು ಮುರಿದುಕೊಂಡಿಲ್ಲ ಎಂಬುದನ್ನು ಈ ದೇಶದ ಜನತೆ ಅರ್ಥಮಾಡಿಕೊಳ್ಳಬೇಕು” ಎಂದು ಎಚ್ಚರಿಸಿದರು.

”ದೇಶದಲ್ಲಿ ಮುಸಲ್ಮಾನ ಸಮುದಾಯ ಬೆರಳು ತೋರಿಸಿ ಅಧಿಕಾರ ಹಿಡಿಯುವ ಪಕ್ಷ ಒಂದು ಅವರ ಹೆಸರಿನಲ್ಲಿ ಶೂದ್ರ ಸಮುದಾಯವನ್ನು ಲೆಕ್ಕಕ್ಕಿಲ್ಲದಂತೆ ಮಾಡುತ್ತಿದ್ದಾರೆ ಮೀಸಲಾತಿಯ ಬಗ್ಗೆ ಮಾತನಾಡುವ ನೇತಾರರು 3% ಇರುವ ಸಮುದಾಯಕ್ಕೆ ಏಕೆ 10% ಮೀಸಲಾತಿ ನೀಡಿದರು. ಇದು ವಿಚಾರ ಮಾಡುವಂಥದ್ದು” ಎಂದರು.

”ನಾವುಗಳು ಇಂದು ಚಿರತೆಯೊಂದು ಜಿಂಕೆಯ ಗುಂಪನ್ನು ದೂರದಿಂದ ನೋಡುತ್ತದೆ. ಮರದ ಮೇಲಿನ ಮುಷಿಯ ಇದನ್ನು ನೋಡಿ ಜೋರಾಗಿ ಕಿರುಚುತ್ತದೆ. ಆಗ ಜಿಂಕೆ ಹಿಂಡು ಅಪಾಯದಿಂದ ಪಾರಾಗಲು ಕೊಡುವ ಸೂಚನೆಯ ಹೊರತು ಇದರಿಂದ ಮರದ ಮೇಲಿನ ಮುಶಿಯಕ್ಕೇನು ಅಪಾಯವಿಲ್ಲ. ಇಂದಿನ ದಿನಮಾನಕ್ಕೆ ಜಾಗೃತರಾಗುವ ಪ್ರಜೆಗಳು ಮುಶಿಯಾದ ಪಾತ್ರ ವಹಿಸಬೇಕು” ಎಂದು ಹೇಳಿದರು.

”ಉದಯ ನಿಧಿ ಸ್ಟಾಲಿನ್ ಹೇಳಿದ ಸನಾತನ ಧರ್ಮದ ಹೇಳಿಕೆಗೆ ಆರಂಭದಲ್ಲಿ ವಿರೋಧ ಉಂಟಾಯಿತು. ಹಿಂದೂಪರ ಸಂಘಟನೆಗಳು ಪ್ರತಿರೋಧ ತೋರಿಸಿದವು. ಆದರೆ ಸನಾತನ ಧರ್ಮದ ಬಗ್ಗೆ ಹೆಚ್ಚಿಗೆ ವಿರೋಧಿಸಿದರೆ ಅಲ್ಲಿ ಇತರ ಸಮುದಾಯಗಳು ನಮ್ಮಿಂದ ದೂರವಾಗಿ ವೋಟ್ ಬ್ಯಾಂಕ್ ಇಲ್ಲದಂತಾಗಬಹುದು ಎಂಬ ಕಾರಣಕ್ಕೆ ಒಂದು ರಾಜಕೀಯ ಪಕ್ಷ ಸುಮ್ಮನಾಗಿದೆ. ಸನಾತನ ಧರ್ಮದ ಬಗ್ಗೆ ಮಾತನಾಡಿದಾಗ ಪ್ರತಿಭಟನೆ ಇಳಿಯುವ ಧರ್ಮರಕ್ಷಕರು ಮಣಿಪುರದಲ್ಲಿ ಕುಕ್ಕಿ ಮತ್ತು ಮೈತೆಯಿ ಈ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡುವಾಗ ಎಲ್ಲಿ ಹೋಗಿದ್ದರೆಂದು ಪ್ರಶ್ನಿಸಿದರು. ಈಗಾಗಲೇ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಭುಗಿಲೆದ್ದಿದೆ. ಈ ಕಾರಣದಿಂದ ಸನಾತನ ಧರ್ಮದ ಉದಯ ನಿಧಿ ಸ್ಟಾಲಿನ್ ಹೇಳಿಕೆ ಮೂಲೆಗುಂಪಾಗಿದೆ. ಇವುಗಳ ಬಗ್ಗೆ ಚರ್ಚೆ ನಡೆಯಬೇಕು” ಎಂದರು.

”ಸನಾತನ ಧರ್ಮದ ಕಿರುಕುಳದಿಂದ ಜೈನ ಧರ್ಮ ಉದಯವಾಯಿತು. ಲಿಂಗಾಯತ ಧರ್ಮ ಉದಯವಾಯಿತು. ಅನೇಕರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮದ ಕಡೆ ಮುಖ ಮಾಡಿದರು. ಇದಕ್ಕೆಲ್ಲ ಕಾರಣ ಧರ್ಮದಲ್ಲಿ ಇರುವ ತಾರತಮ್ಯ ಇವುಗಳ ಬಗ್ಗೆ ಪ್ರಶ್ನಿಸಿದರೆ ಅವರು ಧರ್ಮವಿರೋಧಿಗಳೆಂಬ ಹಣೆಪಟ್ಟಿ ಕಟ್ಟುತ್ತಾರೆ. ಕೋರ್ಟು, ಕೇಸುಗಳೆಂದು ಅಲೆಯುವಂತೆ ಮಾಡುತ್ತಾರೆ. ಆದರೂ ಸತ್ಯವಾದ ಮಾತನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ನಾವೆಲ್ಲರೂ ಸೇರಿ ಮುನ್ನಡೆಯೋಣ” ಎಂದು ಹೇಳಿದರು.

ಇದನ್ನೂ ಓದಿ: ಸನಾತನ ವಿವಾದ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ FIR ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...