Homeಕರ್ನಾಟಕಹಠಾತ್ ಜನಸಂಖ್ಯೆ ಏರಲು ಕಾರಣವೇನು? - ಯಾಹೂ

ಹಠಾತ್ ಜನಸಂಖ್ಯೆ ಏರಲು ಕಾರಣವೇನು? – ಯಾಹೂ

- Advertisement -
- Advertisement -

ಭಾರತ ತನ್ನೆಲ್ಲಾ ಬಗೆಹರಿಸಲಾಗದ ಸಮಸ್ಯೆಗಳ ನಡುವೆ ತೊಳಲಾಡುತ್ತಲೇ ಜನಸಂಖ್ಯೆಯಲ್ಲಿ ಜಗತ್ತನ್ನೇ ಮೀರಿಸಿದೆಯಂತಲ್ಲಾ. ಇಷ್ಟೆಲ್ಲಾ ವಿಚ್ಛೇದನಗಳು, ಸಂತಾನಹರಣ ಸಾಮಗ್ರಿಗಳು, ಸಂತಾನ ನಿಯಂತ್ರಣ ನಿಯಮಗಳಿದ್ದರೂ, ಚೀನಾ ಎಂಬ ಜೀವ ಸೃಷ್ಟಿ ಕಾರ್ಖಾನೆಯನ್ನು ಮೀರಿಸಿ ಮುನ್ನಡೆದಿರುವುದು ಭಾರತದ ಬಡವರ ದಿಗ್ವಿಜಯವೇ ಸರಿ. ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದಂತೆ ಮಕ್ಕಳು ಹೆಚ್ಚಾಗಲು ಕಾರಣ ಕೊರೊನಾ ಸಮಯದಲ್ಲಿ ಹೊರಹೋಗದಂತೆ ತಿಂಗಳುಗಟ್ಟಲೆ ಸರಕಾರ ಜನರನ್ನ ಮನೆಯಲ್ಲಿ ಕೂಡಿಹಾಕಿದ್ದೇ ಕಾರಣವೆಂದು ಹಳ್ಳಿಗರ ವಾದವಾಗಿದೆಯಲ್ಲಾ. ಕೆಲಸ ಇರಲಿ ಇಲ್ಲದಿರಲಿ ದಿನವಿಡಿ ನಾಯಿಯಂತೆ ಅಲೆದು ಬರುತ್ತಿದ್ದ ಗಂಡಸರು ಏನೋ ಕಡಿದು ಕಟ್ಟೆಹಾಕಿ ಬಂದವರಂತೆ ಮಲಗಿಬಿಡುತ್ತಿದ್ದರು. ಆದರೆ ಕೊರೊನಾ ಕಾಲದಲ್ಲಿ ಮನೆಯಲ್ಲೇ ಬಂದಿಯಾದ ಅವರಿಗೆ ಹೆಂಡತಿ ಪ್ರೀತಿಯಿಂದ ಗರ್ಮಿ ಪದಾರ್ಥಗಳನ್ನ ಹುರಿದು ಕರಿದು ಕೊಟ್ಟ ಕಾರಣಕ್ಕೆ ಗರ್ಭ ಕುದುರಿತೆಂದು ಹಳ್ಳಿಗರು ಹಾಸ್ಯ ಮಾಡುತ್ತಿದ್ದಾರಲ್ಲಾ. ಈ ಸಮಯದಲ್ಲಿ ನಡೆದುಹೋದ ಇನ್ನೆಂದು ಅನಾಹುತ ಯಾರ ಗಮನಕ್ಕೆ ಬಂದಿಲ್ಲ. ಅದೇನೆಂದರೆ ಮನೆಯಲ್ಲಿದ್ದ ಗೃಹಿಣಿಯರು ಮೂರು ಹೊತ್ತು ಪ್ರಸಾರವಾಗುವ ಮಂಗಳಗೌರಿ ಮದುವೆ, ದೊರೆಸಾನಿ, ನಾಗಿಣಿ, ಕನ್ನಡತಿ, ಗೀತಾ, ಗಿಣಿರಾಮ ಧಾರಾವಾಹಿಗಳನ್ನ ಗಂಡಂದಿರೂ ನೋಡುವಂತೆ ಮಾಡಿದರಂತಲ್ಲಾ, ಥೂತ್ತೇರಿ.

*****
ಆರೆಸ್ಸೆಸಿಗರು ಮೀಸಲಾತಿ ವಿರೋಧಿಗಳು. ಅವರ ಮನುಧರ್ಮಶಾಸ್ತ್ರದಲ್ಲಿ ಮೀಸಲಾತಿಯಿಲ್ಲವಂತಲ್ಲಾ. ಅವರ ಪ್ರಕಾರ ಶ್ರೇಣೀಕೃತ ಸಮಾಜದ ಜೀವಿಗಳು ತಮ್ಮತಮ್ಮ ಆವರಣದಲ್ಲಿ ನಿಂತು ಅಲ್ಲಿಯೇ ಅಭಿವೃದ್ಧಿ ಕಾಣಬೇಕು. ಅಂದರೆ ದೋಭಿ ತನಗೆ ಧರ್ಮ ನಿಗದಿಪಡಿಸಿದ ಕೆಲಸದಲ್ಲಿ ಭಗವಂತನನ್ನ ಕಾಣಬೇಕು. ಇನ್ನ ಜಲಗಾರ, ಮಡಿವಾಳ, ಕ್ಷೌರಿಕ, ಕುರಿಗಾಯಿ, ದನಗಾಯಿ ಹೀಗೆ ಸಕಲೆಂಟು ಜಾತಿಗಳು ತಮ್ಮತಮ್ಮ ಆವರಣದಲ್ಲಿ ಧೃಢವಾಗಿ ನಿಂತು ತಮ್ಮ ಕರ್ತವ್ಯ ಮಾಡಬೇಕು. ಇದು ನಮ್ಮ ಧರ್ಮದ ನಿಯಮ. ಇದನ್ನ ಒಪ್ಪಿದ ನಮ್ಮ ಕನ್ನಡದ ಶ್ರೇಷ್ಠ ಕತೆಗಾರ ಮಾಸ್ತಿಯವರೂ ಇದನ್ನು ಪ್ರತಿಪಾದಿಸಿದರು. ಇನ್ನು ಆ ತುದಿಯಲ್ಲಿ ನ್ಯಾಯಾಂಗದ ಉನ್ನತ ಸ್ಥಾನ ಅಲಂಕರಿಸಿ ಬಂದ ರಾಮಾಜೋಯಿಸರು ಕೂಡ ಇದನ್ನೇ ಪ್ರತಿವಾದಿಸಿದ್ದಲ್ಲದೆ, ಮೀಸಲಾತಿ ಕೊಡಕೂಡದೆಂಬ ಅರ್ಜಿಯನ್ನು ಸುಪ್ರೀಂಕೊರ್ಟಿಗೆ ಕೊಟ್ಟಿದ್ದರು. ಇವರೇ ಜಡ್ಜ್ ಆಗಿ ಅಂತಹ ಅರ್ಜಿ ಬಂದಿದ್ದರೆ, ಅನಾಮತ್ತು ಅಂಗೀಕರಿಸಿ ಆಜ್ಞೆ ಮಾಡುತ್ತಿದ್ದರೇನೋ! ಆದರೆ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದ ಜಡ್ಜ್ ಸಾಹೇಬರು ಈ ರಾಮಾಜೋಯಿಸರ ಅರ್ಜಿಯನ್ನ ನೋಡಿ ಹುಸಿನಕ್ಕು ತಿರಸ್ಕರಿಸಿದರು. ನಾನೂ ಒಬ್ಬ ಜಡ್ಜ್ ಆಗಿದ್ದು ನನ್ನ ಆರ್ಜಿಯನ್ನ ನನಗಿಂತ ಕಿರಿಯರಿಂದ ತಿರಸ್ಕರಿಸಲ್ಪಟ್ಟಿತಲ್ಲಾ ಎಂದು ನೊಂದುಕೊಂಡರಂತೆ ರಾಮಾಜೋಯಿಸರು. ಈಗ ಮೇಲ್ಜಾತಿಗಳಿಗೆ ಅದರಲ್ಲಿ ಬ್ರಾಹ್ಮಣರಿಗೆ ಉಪಯೋಗವಾಗುವ ಹತ್ತು ಪರಸೆಂಟ್ ಮೀಸಲಾತಿ ತಂದಿರುವುದು ಚಡ್ಡಿಗಳಿಗೆ ತಡೆಯಲಾರದ ಸಂತೋಷವಾಗಿದೆಯಂತಲ್ಲಾ, ಥೂತ್ತೇರಿ.
******

ಹತ್ತು ಪರಸೆಂಟ್ ಮೀಸಲಾತಿ ಹೇಗೆ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ ಎಂಬ ದೇವನೂರರ ವಿವರಣೆಯಿಂದ ಆರೆಸ್ಸಿಸಿಗರ ಬಾಲಕ್ಕೆ ಬೆಂಕಿ ಬಿದ್ದಿದೆಯಂತಲ್ಲಾ. ಅವುಗಳು ಹತ್ತು ಪರಸೆಂಟಿನ ಫಲಾನುಭವಿಗಳು ಯಾರು ಎಂಬ ಬಗ್ಗೆ ವಿವರ ಕೊಡಲಾಗಿ ಈ ವಿವರವೂ ಸಮತೂಕದಲ್ಲಿ ಸಮಂಜಸವಾಗಿದೆ ಎಂದು ಕವಿ ಚಂದ್ರಶೇಖರ ತಾಳ್ಯ ವಕಾಲತ್ತು ವಹಿಸಿದ್ದಾರಲ್ಲಾ. ಕವಿ ಮನಸ್ಸು ಆರೋಗ್ಯವಾಗಿರಬೇಕು. ಯಾವುದೇ ಕೆಲಸ ಅಥವಾ ಮಾತುಕತೆಯಲ್ಲಿ ತಮ್ಮ ಅಜೆಂಡಾಗಳ ಸಂಚನ್ನೇ ಹೂಡುವ ಪುರೋಹಿತರನ್ನು ಸರಿಯಾಗಿ ಅರಿಯಬೇಕು. ಮೀಸಲಾತಿ ವಿರೋಧಿಗಳು ಹತ್ತು ಪರಸೆಂಟನ್ನ ಪ್ರತಿವಾದಿಸಿ ಸಂಭ್ರಮಿಸುವುದರ ಹಿಂದಿನ ಹಿಕಮತ್ತು ಅರಿವಾಗಬೇಕು. ಈ ನಮ್ಮ ದೇಶದಲ್ಲಿ ಅಸಾಧ್ಯವಾದ ಯಾವುದೇ ಅಕ್ರಮವಿಲ್ಲ. ಆದ್ದರಿಂದ ಹತ್ತು ಪರಸೆಂಟು ಯಾರ ಮೀಸಲಾಗುತ್ತದೆಂದು ಅರಿಯಬೇಕಿತ್ತು. ಇಲ್ಲಿ ಜಾತಿ ಕಾರಣಕ್ಕೆ ಬಡವರಾದವರು ದರಿದ್ರರಾದರು ಮತ್ತು ಇಂದು ಕೂಡ ಅಸ್ಪೃಶ್ಯತೆಗೆ ತುತ್ತಾದವರು. ಇದು ಕವಿಗೆ ಕಾಣಬೇಕಿತ್ತು. ಸಾಮಾಜಿಕವಾಗಿ ಮೇಲ್ವರ್ಗದಲ್ಲಿದ್ದು ಬಡವನಾದವನ ಬಡತನ ಎಂತಹದ್ದು ಎಂಬುದನ್ನ ಗ್ರಹಿಸಬೇಕಿತ್ತು. ಸಾವಿರಾರು ವರ್ಷದಿಂದ ಬಡ ಬ್ರಾಹ್ಮಣ ಎಂಬ ಹಣೆಪಟ್ಟಿ ಅಂಟಿಸಿಕೊಂಡು ನಿಜವಾದ ಬಡವವರಿಗೆ ಬಳಸಲು ಪದವೇ ಇಲ್ಲದಂತೆ ಮಾಡಿರುವವರ ಸಂಚು ತಾಳ್ಯರಿಗೆ ತಿಳಿಯಬೇಕಿತ್ತಲ್ಲಾ, ಥೂತ್ತೇರಿ.
*******

ನಮ್ಮ ದೇಶದ ಲಾಂಛನವಾದ ಚತುರ್ಮುಖ ಸಿಂಹ ಈವರೆಗೆ ಧೀರಗಂಭೀರವಾಗಿ ದೇಶದ ಬಗ್ಗೆ ಯೋಚಿಸುವಂತೆ ಕಾಣುತಿತ್ತು. ಇದನ್ನ ಸಹಿಸಲಾಗದ ಮೋದಿಪಡೆ ಸಿಂಹ ವೈರಿ ಕಂಡಂತೆ ಘರ್ಜಿಸುವ ಮುಖಭಾವ ತಯಾರಿಸಿ ಹೊಸ ಪಾರ್ಲಿಮೆಂಟಿನ ಮೇಲೆ ಪ್ರತಿಷ್ಠಾಪಿದವಂತಲ್ಲಾ. ಈ ಮಹಾಕಾರ್ಯಕ್ಕೆ ವಿರೋಧ ಪಕ್ಷದ ಯಾರನ್ನೂ ಕರೆಯದೆ ಪ್ರಧಾನಿ ಸ್ವತಃ ತಾವೆ ಉದ್ಘಾಟಿಸಿ, ಕೆಳಗಿಳಿದು ಯಾವುದೋ ಪುರೋಹಿತ ಕೊಟ್ಟ ಕಾರ್ಯಕ್ರಮ ಹುಡುಕುತ್ತ ಹೋದರಂತಲ್ಲಾ. ಬಿ.ಜೆ.ಪಿಗಳು ಸಿಂಹಕ್ಕೆ ಸಿಟ್ಟುಬರಿಸುವ ಮುಖ ಮಾಡಿದ್ದು ಹೊಸದೇನಲ್ಲ. ಲಕ್ಷ್ಮಣ ಸೀತೆ ಮತ್ತು ಆಂಜನೇಯರೊಡಗೂಡಿ ಪುರುಷೋತ್ತಮನಂತೆ ನಿಂತಿದ್ದ ರಾಮನನ್ನ ಆ ಪಟದಿಂದ ಬೇರ್ಪಡಿಸಿ ಬಿಲ್ಲು ಬಾಣಗಳೊಡನೆ ಯುದ್ಧಕ್ಕೆ ನಿಂತ ಭಂಗಿ ರೂಪಿಸಿ ಸರ್ಕಲ್ಲುಗಳಲ್ಲಿ ನಿಲ್ಲಿಸಿ ಆಗಲೇ ಎರಡು ದಶಕವಾಯಿತು. ಅದು ಅಡ್ವಾನಿಯ ಕಾಲ. ಈ ಮೋದಿ ಕಾಲದಲ್ಲಿ ಕರ್ತವ್ಯ ಪ್ರಜ್ಞೆ, ಭಕ್ತಿ ವಿಧೇಯತೆ ಮತ್ತು ಅಸಾಮಾನ್ಯ ಸಂಗೀತದ ಪ್ರತೀಕವಾಗಿದ್ದ ಆಂಜನೇಯನನ್ನ ಶ್ರೀರಾಮನ ಪದತಲದಿಂದೆಳೆದು ವಾಘಾ ಗಡಿಯ ಕೆರಳಿದ ಸೈನಿಕನನ್ನಾಗಿ ಮಾಡಿ ದಶಕವೇ ಆಯ್ತು. ಈಗ ಎಲ್ಲಿ ನೋಡಿದರೂ ಕೆರಳಿದ ಒಂದು ರೀತಿ ನರಸಿಂಹನಂತೆ ಕಾಣುವ ಆಂಜನೇಯನ ಚಿತ್ರವನ್ನ ನೋಡುತ್ತಿದ್ದೇವೆ. ಬರಲಿರುವ ದಿನಗಳಲ್ಲಿ ನಮ್ಮ ಪುರಾಣದ ವ್ಯಕ್ತಿಗಳು ಈ ಬಿ.ಜೆ.ಪಿಗಳ ಕೈಗೆ ಸಿಕ್ಕಿ ಇನ್ನ ಯಾವ್ಯಾವ ಆಯುಧ ಹಿಡಿದುಕೊಂಡು ಕೆಕ್ಕರಿಸಿ ನೋಡುತ್ತವೋ ಏನೋ ಎಂಬಂತಾಗಿದೆಯಲ್ಲಾ, ಥೂತ್ತೇರಿ.
*******

ಬಿ.ಜೆ.ಪಿಗಳು ಆಂಜನೇಯನಿಗೇ ಅಂಟಿಕೊಳ್ಳಲು ಪ್ರಬಲ ಕಾರಣವಿದೆ. ಲಂಕಾಪಟ್ಟಣದ ಅಶೋಕವನದಲ್ಲಿ ಶೋಕಸಾಗರದಲ್ಲಿ ಕುಳಿತಿರುವ ಸೀತಾದೇವಿಯನ್ನ ಕಂಡು ’ರಾಮ ಬಂದು ಕರೆದುಕೊಂಡು ಹೋಗುತ್ತಾನೆಂದು ಧೈರ್ಯ ಹೇಳಿ ಬಾ’ ಎಂದು ಶ್ರೀರಾಮಚಂದ್ರ ಆಂಜನೇಯನನ್ನು ಕಳಿಸಿದನಂತೆ. ಆಗ ಆಂಜನೇಯ ಸೀತೆ ನನ್ನನ್ನು ನೋಡಿ ನಂಬದೇಹೋದರೆ ಏನುಮಾಡಬೇಕೆಂದು ಕೇಳಿದಾಗ ರಾಮ ಮುದ್ರೆಯುಂಗುರ ಕೊಟ್ಟು ಕಳಿಸಿದನಂತೆ. ಅದನ್ನು ತೆಗೆದುಕೊಂಡು ಹಾರಿಹೋದ ಹನುಮ ರಾಮ ಹೇಳಿದ ಕೆಲಸ ಮಾಡುವುದರ ಜೊತೆಗೆ ಲಂಕೆಗೆ ಬೆಂಕಿಯಿಟ್ಟು ಬಂದನಂತೆ. ರಾವಣನ ಕಡೆಯವರೇನೋ ಆಂಜನೇಯನ ಬಾಲಕ್ಕೆ ಬೆಂಕಿಹಚ್ಚಿದರು ಸರಿ. ಆದರೆ ಆಂಜನೇಯ ಜವಾಬ್ದಾರಿಯುತನಾಗಿದ್ದರೆ ಬೆಂಕಿ ನಂದಿಸಿಕೊಂಡು ಬರಬೇಕಿತ್ತು. ಅದು ಬಿಟ್ಟು ಲಂಕೆಗೇ ಬೇಂಕಿ ಹಚ್ಚಿದ. ಅಲ್ಲಿ ಮಕ್ಕಳಿದ್ದರು, ಮುದುಕರಿದ್ದರು, ಗರ್ಭಿಣಿಯರಿದ್ದರು. ಊರುಬಿಟ್ಟು ಓಡಲಾರದ ಅಶಕ್ತ ಅಸಹಾಯಕರಿದ್ದರು. ಇವರಿಗೂ ರಾವಣ ಹೊತ್ತು ತಂದ ಸೀತೆಗೂ ಯಾವ ಸಂಬಂಧವೂ ಇರಲಿಲ್ಲ. ಅದೇನಾದರಾಗಲಿ ಯಾವುದೇ ವಿವೇಚನೆಯಿಲ್ಲದೆ ತಾವು ಹೇಳಿದ ಕೇರಿಗೆ ಬೆಂಕಿ ಹಚ್ಚುವ ವ್ಯಕ್ತಿಗಳು ಬಿ.ಜೆ.ಪಿಗಳಿಗೆ ಸಿಕ್ಕಿವೆ. ಈ ವಾನರ ಸೇನೆಗೆ ಒಬ್ಬ ದೈವ ಬೇಕಿತ್ತು. ಅದಕ್ಕಾಗಿ ಆಂಜನೇಯನೇ ಸೂಕ್ತವೆಂದು ಮುಗ್ಧ ಆಂಜನೇಯನಿಗೆ ವ್ಯಗ್ರರೂಪಕೊಟ್ಟು ಮೆರೆಸುತ್ತಿದ್ದಾರಂತಲ್ಲಾ, ಥೂತ್ತೇರಿ.

– ಯಾಹೂ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೊಲೆ ಮಾಡ್ತಿರೋದು SDPI,PFI . ಬಲಿ ಆಗ್ತಿರೋದು ಹಿಂದೂಗಳು ,ಆದರೂ ಇದಕ್ಕೆ ಹೊಣೆ ಹಿಂದೂ ಸಂಘಟನೆ , ಈ ಪತ್ರಿಕೆ ಸಂಪಾದಕ ಹೊಟ್ಟೆಗೆ ಎಂದೂ ಊಟ ತಿನ್ನಲ್ಲಾ ಅನಿಸುತ್ತೇ ಹಂದಿಗಳ ಲದ್ದಿ ಬಿಟ್ಟು ,ತೂ …..

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...