Homeಮುಖಪುಟನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

ನಾವು ಯಾವುದನ್ನು ಮಾಡಬಾರದು? ಯೋಗೇಂದ್ರ ಯಾದವ್

- Advertisement -
- Advertisement -

ಹರಿಯಾಣ ರಾಜ್ಯದ ಯೋಗೇಂದ್ರ ಯಾದವ್ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯವಾಗಿರುತ್ತಲೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದರು. ಆದರೆ, ಅವರ ರಾಜಕೀಯ ಶಾಸ್ತ್ರದ ಪರಿಣಿತಿ ಅವರನ್ನು ದೆಹಲಿಗೆ, ಅಲ್ಲಿನ ಸಿಎಸ್‍ಡಿಎಸ್, ಟಿವಿ ಚರ್ಚೆ ಮತ್ತು ಅಂತಿಮವಾಗಿ ನೇರ ರಾಜಕಾರಣಕ್ಕೇ ಎಳೆದು ತಂದಿತು. ರೈತರ ಸಂಕಷ್ಟದ ನಿವಾರಣೆಗೆ ದೇಶಾದ್ಯಂತ ಓಡಾಡಿ ಸಂಘಟಿಸಿದ ಬೃಹತ್ ಹೋರಾಟದ ರೂವಾರಿ ಅವರು. ಇದೀಗ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರು.

ಭಾರತವೆಂಬ ಪರಿಕಲ್ಪನೆಯೇ ಹಿಂದೆಂದೂ ಕಾಣದಂತಹ ಸವಾಲನ್ನು ಎದುರಿಸುತ್ತಿದೆ. 2019ರ ಫಲಿತಾಂಶದ ನಂತರದಲ್ಲಿ ಭಾರತದ ಗಣತಂತ್ರವನ್ನು ಕೆಡವುವುದ ತಪ್ಪಿಸುವುದೇ ನಮ್ಮ ಕಾಲದ ಅತ್ಯಂತ ಜರೂರಿಯಾದ ಕಾರ್ಯವಾಗಿದೆ. ಇದು ನಮ್ಮ ಯುಗಧರ್ಮ. ಈ ತನಕ ಈ ಸವಾಲನ್ನು ಎದುರಿಸುತ್ತಿರುವ ರೀತಿಯಲ್ಲಿ ಒಂದೋ ಬೌದ್ಧಿಕ ಆಲಸ್ಯ, ರಾಜಕೀಯ ಪಕ್ಷಪಾತ ಅಥವಾ ಕೇವಲ ಮೋದಿ ವಿರೋಧದ ಗೀಳುಗಳು ಎದ್ದು ಕಾಣುತ್ತಿವೆ.

ಮೋದಿ ಸರಕಾರಕ್ಕೆ ಎದುರಾಗಿರುವ ವಿರೋಧದ ದೊಡ್ಡ ಸಮಸ್ಯೆಯೆಂದರೆ, ಈ ವಿರೋಧಿಗಳಲ್ಲಿ ಹೊಸ ಆಡಳಿತವು ಯಾವ ಮಟ್ಟಿಗೆ ಸವಾಲೊಡ್ಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೇ ಇಲ್ಲ. ಈ ಪರಿವಾರದ ಆಳವಾದ ಬೇರುಗಳನ್ನು ಗುರುತಿಸದೆ, ತಕ್ಷಣದ ಪರಿಹಾರಗಳನ್ನು ಹುಡುಕುವುದರಾಚೆ ತಲೆ ಕೆಡಿಸಿಕೊಳ್ಳದಿರುವ ಸಮಸ್ಯೆ ಗಾಢವಾಗಿದೆ. ಇದುವರೆಗೆ, ಮೋದಿ ಆಡಳಿತಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂಚೆಯೇ ಊಹಿಸಬಹುದಾದಂಥವು ಮಾತ್ರವೇ ಆಗಿದೆ: ಮೋದಿ ಗುಳ್ಳೆ ತನ್ನಂತೆ ತಾನೇ ಒಡೆದು ಹೋಗಲಿ ಎಂದು ಬಯಸಿ ಕಾಯುವುದು; ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧ ಎಂದು ತೋರುವಂತೆ ಪ್ರತಿಕ್ರಿಯಿಸುವುದು; ಅವರು ಯಾವುದರಲ್ಲಿ ಪ್ರಬಲರೋ ಅದೇರೀತಿಯಲ್ಲಿ ಎದುರಿಸುವ ಪ್ರಯತ್ನ; ಜನರ ಕಣ್ಣಲ್ಲಿ ಅಮಾನ್ಯರಾಗಿರುವ ಬಿಜೆಪಿ ವಿರೋಧಿ ಪಕ್ಷಗಳ ಮಹಾಕೂಟ ರಚಿಸುವುದು. ಇವ್ಯಾವುವೂ ಯಶಸ್ವಿಯಾಗುವ ಸಾಧ್ಯತೆಗಳಿಲ್ಲ. ಬಿಜೆಪಿ ವಿರೋಧಿ ಪಕ್ಷಗಳ ಮರ್ಯಾದೆ ಎಷ್ಟು ಹೋಗಿದೆ ಎಂದರೆ, ಈ ತನಕ ಇವರ ಯಾವುದೇ ಮೈತ್ರಿ ಯಶಸ್ವಿಯಾಗಿಲ್ಲ; ಇನ್ನೆಂದಿಗೂ ಯಶಸ್ವಿಯಾಗುವ ಸಾಧ್ಯತೆ ಇಲ್ಲ.

ನರೇಂದ್ರ ಮೋದಿ ಕುರಿತಾದ ಗೀಳಿನಲ್ಲಿ, ಆತನ ಟೀಕಾಕಾರರು, ಆತನನ್ನು ಇನ್ನೂ ದೊಡ್ಡವನನ್ನಾಗಿ ಮಾಡುತ್ತಾರೆ. ಸಕಾರಾತ್ಮಕವಾದ ಏನೇ ಕಂಡರೂ, ಅದರ ಹಿರಿಮೆಯನ್ನು ತನಗೇ ಆರೋಪಿಸಿಕೊಳ್ಳುವ ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೇನು ಮಾಡುತ್ತಿದ್ದಾರೆ ಗೊತ್ತೇ? ಕಂಡ ಸಮಸ್ಯೆಗಳಿಗೆಲ್ಲಾ ಮೋದಿಯೇ ಕಾರಣ ಎಂದು ಗೂಬೆ ಕೂರಿಸುತ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆ ಇರಲಿ, ಕೃಷಿ ನೀತಿಯ ವೈಫಲ್ಯ ಇರಲಿ, ಯಾವುದೇ ಸಮತೋಲನ, ಲೆಕ್ಕಾಚಾರ ಇಲ್ಲದ ಬಜೆಟ್ ಇರಲಿ- ಪ್ರತಿಯೊಂದನ್ನೂ ಪ್ರಧಾನಮಂತ್ರಿಯ ಮೇಲೆ ಹೇರಲಾಗುತ್ತಿದೆ. ಮೋದಿಗೆ ಆತನ ಭಕ್ತರು ಕೊಡುವಷ್ಟೇ ಪ್ರಚಾರವನ್ನು ಆತನ ಟೀಕಾಕಾರರು ಕೊಡುತ್ತಿದ್ದಾರೆ.

ಎರಡನೆಯದಾಗಿ, ಮೋದಿ ವಿರೋಧಿಗಳು ತಕ್ಷಣದ ಪ್ರತಿಕ್ರಿಯೆ (knee-jerk ರಿಯಾಕ್ಷನ್) ನೀಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವುದೇ ನೀತಿ ಅಥವಾ ಧೋರಣೆಯು ಅವರ ಸರ್ಕಾರಕ್ಕೇ ಸಂಬಂಧಿಸಿದ್ದಾದ್ದರಿಂದ ನಾವು ಅದನ್ನು ವಿರೋಧಿಸಲೇಬೇಕು. ಆದರೆ, ಈಗ ಅವರ ಸರ್ಕಾರದ ನೀತಿಗಳ ವಿರುದ್ಧ ಬರುತ್ತಿರುವ ವಿಮರ್ಶೆಯು ಆ ನೀತಿಗಳ ವಿರೋಧಕ್ಕಿಂತ ಮೋದಿ ಸರ್ಕಾರದ ಅಡಿಯಲ್ಲಿ ಈ ನೀತಿಗಳು ಬಂದಿವೆ ಎನ್ನುವ ಕಾರಣಕ್ಕೇ ಬರುತ್ತಿದೆ ಎಂದು ನನಗನ್ನಿಸುತ್ತದೆ. ಅಂದರೆ, ಮೋದಿ ಏನೋ ಒಂದನ್ನು ಮಾಡಿದರೆ ನಾವು ವಿಮರ್ಶೆ ಮಾಡುತ್ತೇವೆ. ಒಂದು ವೇಳೆ ಅದನ್ನು ಮಾಡದಿದ್ದರೆ ಇನ್ನೂ ತೀವ್ರವಾಗಿ ವಿಮರ್ಶೆ ಮಾಡುತ್ತೇವೆ. ಇಂತಹ ವಿರೋಧದಿಂದ ಆಗುವ ಸಮಸ್ಯೆಯೇನೆಂದರೆ, ಈ ವಿರೋಧವನ್ನು ಜನಸಾಮಾನ್ಯರು ಒಪ್ಪುವುದಿಲ್ಲ. ಇದು ವಿರೋಧದ ಸಲುವಾಗಿ ವಿರೋಧ ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಮೂರನೆಯ ಮತ್ತು ಮುಖ್ಯವಾದ ಸಂಗತಿಯೆಂದರೆ, ಮೋದಿ ವಿರೋಧಿಗಳು ನಿರಾಕರಣೆಯ ಭಾವದಲ್ಲಿ ಬದುಕುತ್ತಾರೆ. ಅವರು ಮೋದಿ ಅತ್ಯಂತ ಜನಪ್ರಿಯರು ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಮತ್ತು ಹಾಗಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂಗಾಣುವುದರಲ್ಲಿನ ವೈಫಲ್ಯವು ಅದಕ್ಕೆ ದೊಡ್ಡ ಉದಾಹರಣೆ. 2018ರ ಉತ್ತರಾರ್ಧದಲ್ಲಿ ಮೋದಿಯ ಜನಪ್ರಿಯತೆ ಕುಗ್ಗಿದ್ದೇನೋ ನಿಜ. ಆದರೆ, ಪುಲ್ವಾಮಾ ಮತ್ತು ಬಾಲಾಕೋಟ್ ನಂತರ ಎಲ್ಲಾ ವಿರೋಧಿ ನಾಯಕರ ಒಟ್ಟು ಜನಪ್ರಿಯತೆಗಿಂತ ಎಷ್ಟೋ ಪಟ್ಟು ಮೋದಿಯ ಜನಪ್ರಿಯತೆ ಹೆಚ್ಚಾಗಿತ್ತು. ಆ ನಂತರ ಚುನಾವಣೆಯಲ್ಲಿ ಸ್ಪರ್ಧೆ ಎಂದೇ ಇರಲಿಲ್ಲ. ಆದರೆ, ಮೋದಿ ವಿರೋಧಿಗಳು ಈ ವಾಸ್ತವಕ್ಕೆ ಹತ್ತಿರವಿರಲಿಲ್ಲ. ಚುನಾವಣಾ ಫಲಿತಾಂಶದ ನಂತರವೂ ಅವರು ನಿರಾಕರಣೆಯಲ್ಲೇ ಇದ್ದಾರೆ. ಬಿಜೆಪಿಯು ಗೆದ್ದಿದೆ ಎಂಬುದನ್ನು ಒಪ್ಪಿಕೊಳ್ಳದೇ, ಜನರು ಮೋದಿಗೆ ಮತ್ತೊಂದು ಅವಕಾಶ ಕೊಡಲು ಬಯಸಿದ್ದಾರೆ ಎನ್ನುವುದಕ್ಕಿಂತ ಇವಿಎಂ ತಿರುಚಿದ್ದರಿಂದಲೇ ಗೆದ್ದಿರುವುದು ಎಂದು ಅವರು ನಂಬುತ್ತಾರೆ.

ಮೋದಿಯ ಜನಪ್ರಿಯತೆ ವಾಸ್ತವ ಎಂಬುದನ್ನು ಒಪ್ಪಿಕೊಳ್ಳುವುಲ್ಲಿನ ಈ ಪ್ರಮಾಣದ ವೈಫಲ್ಯವು ಅದಕ್ಕಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಜನಸಾಮಾನ್ಯ ಮತದಾರರು ಒಳ್ಳೆಯ ಕಾರಣಗಳಿಂದಲೇ ಅವರಿಗೆ ಮತ ಹಾಕಿರಬಹುದೆಂಬುದನ್ನು ಒಪ್ಪಿಕೊಳ್ಳಲು ಇವರಿಗೆ ಸಾಧ್ಯವೇ ಇಲ್ಲ. ಅಮೆರಿಕಾದ ಉದಾರವಾದಿಗಳು ಟ್ರಂಪ್‍ಗೆ ಜನರು ಮತ ಹಾಕುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಬಗೆದಿರುವುದು ಹೇಗೋ, ಇಲ್ಲಿಯೂ ಸಾಮಾನ್ಯ ಭಾರತೀಯ ಮತದಾರರ ಇಂಗಿತವನ್ನು ಅರ್ಥೈಸಲೂ ಇಂಥವರಿಗೆ ಆಗುತ್ತಿಲ್ಲ. ಮೋದಿ ವಿರೋಧಿಗಳು ಸಮಾಜದ ಇತರರಿಂದ ಪ್ರತ್ಯೇಕಿಸಲ್ಪಟ್ಟು ಚಿಕ್ಕದಾದ ಮತ್ತು ಚಿಕ್ಕದಾಗುತ್ತಿರುವ ವರ್ತುಲದಲ್ಲೇ ಇರುತ್ತಾರೆ. ಇದರ ಫಲಿತವೆಂದರೆ ಅವಿಶ್ವಾಸ, ಆತಂಕ, ಕೋಪ ಮತ್ತು ನಿಷ್ಕ್ರಿಯತೆ. ರಾಜಕೀಯ ಪಕ್ಷವಾತಕ್ಕೆ ಇದು ದಾರಿ ಮಾಡಿಕೊಡುತ್ತದೆ.

ನಾವು ಹೊಸದಾಗಿಯೇ ಆರಂಭಿಸಬೇಕು. ನಾವು ಹೊಸ ರಾಜಕೀಯ ಯುಗವನ್ನು ಪ್ರವೇಶಿಸಿದ್ದೇವೆನ್ನುವುದನ್ನು ಒಪ್ಪಿಕೊಳ್ಳಬೇಕು. ನಾವು ಗುರುತಿಸಲಾಗದಷ್ಟು ಪ್ರಮಾಣಕ್ಕೆ ಜನರ ಆದ್ಯತೆಗಳು, ಅಭಿರುಚಿ ಮತ್ತು ಮಾನದಂಡಗಳು ಬದಲಾಗಿವೆ ಎಂಬುದನ್ನು ಗುರುತಿಸಬೇಕು. ನಮ್ಮ ಹಳೆಯ ಪರಿಭಾಷೆಗಳು ಹೊಸ ಪೀಳಿಗೆಯೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿದರೆ, ನಮ್ಮೆಲ್ಲಾ ತಂತ್ರಗಳು ಆ ಪೀಳಿಗೆಯ ಮುಂದೆ ಬಕ್ಕಾಬೋರಲು ಮಲಗುತ್ತಿರುವುದು ಗೊತ್ತಾಗುತ್ತದೆ. ಈ ಹೊಸ ಪೀಳಿಗೆ ಅಸ್ತಿತ್ವದಲ್ಲಿರುವುದು ವಾಸ್ತವ ಮತ್ತು ನಾವು ಅದನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಲಾಗದು. ಹಾಗಾಗಿ ಉಳಿದಿರುವುದು ಒಂದೇ ದಾರಿ. ಅಪಾಯದ ಆಳ ಮತ್ತು ಅದೊಡ್ಡುತ್ತಿರುವ ಸವಾಲನ್ನು ಸರಿಯಾಗಿ ಅಂದಾಜಿಸಿ, ದೀರ್ಘಕಾಲದ ಮುನ್ನೋಟದೊಂದಿಗೆ ಅಲ್ಪಕಾಲೀನ ಮತ್ತು ಮಧ್ಯಕಾಲೀನ ವ್ಯೂಹತಂತ್ರವನ್ನೊಳಗೊಂಡ ಮಾರ್ಗನಕ್ಷೆಯನ್ನು ತಯಾರಿಸುವುದು. ವಿನೂತನ ಉಪಾಯಗಳು ಮತ್ತು ಸ್ಮಾರ್ಟ್ ಆದ ಸಂವಹನದೊಂದಿಗೆ ನಡೆಸಬೇಕಿರುವ ಸಾಂಸ್ಕೃತಿಕ ಸಂಗ್ರಾಮವದು ಎಂದು ಕಡೆಯದಾಗಿ ಹೇಳಬಯಸುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...