Homeಮುಖಪುಟತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

1975ರಲ್ಲಿ ದೇಶದಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿಗೆ ಇಂದಿಗೆ 45 ವರ್ಷ ತುಂಬಿದೆ. ತುರ್ತು ಪರಿಸ್ಥಿತಿಯ ದಿನಗಳನ್ನು, ಅಂದಿಗೂ ಇಂದಿಗೂ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ ಹಿರಿಯ ಹೋರಾಟಗಾರ ಹಿರೇಮಠ್‌ರವರು.

- Advertisement -
- Advertisement -

ನಾನು 11 ವರ್ಷ ಅಮೇರಿಕಾದಲ್ಲಿ ಇದ್ದೆ. ಬಡಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ಇರಾದೆಯಿಂದ ಕೆಲಸ ಬಿಟ್ಟೆ. ನಮ್ಮ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ 1974 ಜನವರಿ 1 ರಂದು ಇಂಡಿಯಾ ಡೆವಲಪ್‍ಮೆಂಟ್ ಎಂಬ ಸಂಸ್ಥೆಯೊಂದನ್ನು ಮಾಡಿದೆವು. ಯಾವುದೇ ಒಂದು ಮಾನವೀಯ ಅಭಿವೃದ್ಧಿಯನ್ನು ಮಾಡಬೇಕಾದಾರೆ ಒಂದು ಲಾರ್ಜರ್ ಡೆಮಾಕ್ರಿಟಿಕ್ ಫ್ರೇಮ್‍ವರ್ಕ್ ಇರುವ ಪ್ರಜಾಪ್ರಭುತ್ವ ಆಶಯಗಳು ಮತ್ತು ಮೌಲ್ಯಗಳಿಗೆ ಗೌರವ ಇರುವಂತಹ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ.

1971ರ ಬಾಂಗ್ಲಾದೇಶ ಲಿಬರೇಶನ್‍ನಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿತು. ಅದರ ನಂತರ ಬರಬರುತ್ತಾ ಇಂದಿರಾ ಗಾಂಧಿಯವರು ಟೊಟಾಲಿಟೇರಿಯನಿಸಂ ಅಂತ ನಾವು ಏನು ಕರಿತೀವಿ, ಹಾಗೆ ಡಿಕ್ಟೇಟರ್‍ಶಿಪ್ ಕಡೆಗೆ ಹೋಗುವುದನ್ನ ನಾವು ನೋಡಿದೆವು. ಯಾಕೆಂದರೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬೇಕಾದರೆ ಪ್ರಜಾಪ್ರಭುತ್ವವನ್ನ ಎತ್ತಿಹಿಡಿಯುವಂತಹ ಸಂಸ್ಥೆಗಳ ಸಶಕ್ತೀಕರಣ ಆಗಬೇಕಾಗುತ್ತದೆ.

ಇಂದಿರಾಗಾಂಧಿ ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಮಾತುಗಳಿಗೆ ಒಪ್ಪುವಂತಹವರು, ಆ ತರದ ನಿರ್ಣಯಗಳನ್ನ ಕೊಡುವಂತಹವರಾದ ಎ.ಕೆ ರೇ. ಅನ್ನುವವರನ್ನು 1973ರಲ್ಲಿ ಮೂರು ಜನ ಜಡ್ಜಸ್- ಹಿಂದಿನ ಲೋಕಯುಕ್ತ ಸಂತೋಷ್ ಹೆಗೆಡೆ ಅವರ ತಂದೆಯನ್ನು ಒಳಗೊಂಡಂತೆ- ಆಯ್ಕೆ ಮಾಡಿದಾಗ ಈ ಸರ್ವಾಧಿಕಾರದ ಟ್ರೆಂಡ್ ಬರುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು.

ನಾನು ಅಮೆರಿಕಾದಲ್ಲಿ ಇದ್ದಾಗ ನ್ಯೂರ್ಯಾಕ್ ಟೈಮ್ಸ್ ಗಮನಿಸುತ್ತಿದ್ದೆ. ಅದರಲ್ಲಿ ಜಯಪ್ರಕಾಶ್ ನಾರಾಯಣ ಅವರ ಬಗ್ಗೆ 6 ಪುಟಗಳ ವರದಿ ನೋಡಿದೆ. ಅದೇ ಸಮಯದಲ್ಲಿ ಚಿಕಾಗೊಗೆ ಅನಿರಿಕ್ಷಿತವಾಗಿ ಯು.ಆರ್ ಅನಂತಮೂರ್ತಿಯವರು ಬಂದಿದ್ದರು. ಅಲ್ಲಿ ಎಲ್ಲರೂ ಸೇರಿ ಅವರೊಂದಿಗೆ ಸಭೆ ಸೇರಿ ಭಾರತದಲ್ಲಿ ಏನು ನಡಿಯುತ್ತಿದೆ ಎಂದು ತಿಳಿದೆವು. ಅಲಹಾಬಾದ್ ಕೋರ್ಟ್ ಜೂನ್ ತಿಂಗಳಲ್ಲಿ ಇಂದಿರಾಗಾಂದಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಿತು. ಇದು ಸರ್ಕಾರನ್ನು ಅಲುಗಾಡಿಸಿತು. ಇನ್ನು ಕೆಲವು ಘಟನೆಗಳು ಕೂಡ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಕಡೆ ತೆಗೆದುಕೊಂಡು ಹೋಗಲು ಕಾರಣವಾಯಿತು. ಆಗ ತುರ್ತು ಪರಿಸ್ಥಿತಿಯ ಮೂಲಕ ನಮ್ಮ ಸಂವಿಧಾನವನ್ನೆ ಅಪ್ರಸ್ತುತಗೊಳಿಸಲು ಹೊರಟಿದ್ದರು. ಆಗ ನಾವು ವಾಷಿಂಗ್ಟನ್‍ನ ನಮ್ಮ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದೆವು. ನಾವು ಆಗ ಸತ್ಯಗಳನ್ನು ಮಾತಾಡಿದ್ದಕ್ಕಾಗಿ ನಮ್ಮ ಪಾಸ್‍ಪೋರ್ಟ್‍ಗಳನ್ನು ರದ್ದುಮಾಡಿದ್ದರು.

ಈಗ ವಲಸೆ ಕಾರ್ಮಿಕರ ಘಟನೆ ಬಗ್ಗೆ ಕೋರ್ಟ್‍ಗಳೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆಗಲೂ ಸಹ ಇದೇ ರೀತಿ ಆಯಿತು. ಜನಪರವಾಗಿ ತೀರ್ಪುಕೊಟ್ಟ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದರು. ಮೂಲಭೂತ ಹಕ್ಕುಗಳನ್ನು ತೆಗೆದು ಹಾಕುವಂತಹ ಪರಿಸ್ಥಿತಿ ಬಂತು. ಇವತ್ತಿನ ಮೋದಿಯ ಮೊದಲನೇ ಮತ್ತು ಎರಡನೇ ಅವಧಿಯ ಸರ್ಕಾರ ಬಹಳ ಕರಾಳವಾಗಿದೆ. ತುರ್ತುಪರಿಸ್ಥಿತಿಗಿಂತ ಇಪ್ಪತ್ತು ಪಟ್ಟು ಗಂಭೀರವಾಗಿದೆ. ನೋಡಿ ಸಂವಿಧಾನದ ಮೂಲತತ್ವಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವಗಳನ್ನು ಎತ್ತಿಹಿಡಿಯುವ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದರೆ ಇಂದಿರಾಗಾಂದಿಯವರಿಗಿಂತ ಹೆಚ್ಚಿನದಾದ ತುರ್ತುಪರಿಸ್ಥಿತಿ ಇದಾಗಿದೆ. ಇದನ್ನು ಖಂಡಿಸಿ ಆಳವಾದ ಅಧ್ಯಯನದಿಂದ ಆಂದೋಲನವನ್ನು ಕಟ್ಟಬೇಕು.

ಕಾರ್ಮಿಕರ ದುಡಿಮೆಯ ಅವಧಿಯನ್ನೇ ಕಡಿಮೆ ಮಾಡಿ ಮೂರು ವರ್ಷ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ಇಡುವುದನ್ನು ಈ ಸರ್ಕಾರ ಮಾಡಿದೆ. ಇದನ್ನು ನಾವು ಬುದ್ದ, ಬಸವ, ಅಂಬೇಡ್ಕರ್‌ರ ಆಶಯದೊಂದಿಗೆ ಎದುರಿಸಲೇಬೇಕು. ಅಂದು ಜಯಪ್ರಕಾಶ್ ನಾರಾಯಣರವರು ಸಮಗ್ರ ಪರಿವರ್ತನೆ ಎನ್ನುವ ಪರಿಕಲ್ಪನೆಯಲ್ಲಿ ಯುವಕರಿಗೆ ಕರೆಕೊಟ್ಟಿದ್ದರು. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಂವಿಧಾನದ ಪೂರಕ ಅಂಶಗಳಿಂದ ಸ್ಫೂರ್ತಿಪಡೆದ ಯುವಜನರು ಈ ದೇಶಕ್ಕೆ ಅವಶ್ಯಕತೆ ಇದ್ದಾರೆ. ಜೆಪಿಯವರು ಎಲ್ಲಾಪಕ್ಷಗಳನ್ನು ಕೂಡಿಸಿ ಹೊಸತೊಂದನ್ನು ಮಾಡಲು ಹೊರಟರು ಆದರೆ ಅವರ ಕಣ್ಣ ಮುಂದೆಯೇ ಜನತಾ ಪಕ್ಷ ಒಡೆದುಹೋಯಿತು. ಇದು ಕೂಡ ಐತಿಹಾಸಿಕ ಪ್ರಮಾದ ಅನಿಸುತ್ತೆ.

ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಹಿನ್ನಲೆ ಇರದ ಆರ್.ಎಸ್.ಎಸ್ ದೇಶವನ್ನು ಹಿಂದಕ್ಕೆ ಒಯ್ಯುವ ಮತ್ತು ಭಯಾನಕ ಸಿದ್ಧಾಂತವನ್ನು ಹೊಂದಿರುವ ಸಂಘಟನೆ. ಸಂವಿಧಾನದ ಪ್ರಸ್ತಾವನೆ ಮತ್ತು ದೇಶದ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಆರ್ಥಿಕ ಅಸಮಾನತೆಯ ಜನಕರು ಕಾಂಗ್ರೆಸ್. ಆದರೆ ಇದನ್ನ ಇನ್ನಷ್ಟು ನಾಗಲೋಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಬಿಜೆಪಿ. ಗಾಂಧಿ, ಶುಮಾಕರ್ ಅವರುಗಳು ಹೇಳಿದ ಆರ್ಥಿಕ ಸಮಾನತೆ, ಅಂಬೇಡ್ಕರ್ ಅವರು ಹೇಳಿದ ಜಾತಿವಿನಾಶ ಈ ವಿಚಾರಗಳ ಕಡೆಗೆ ನಾವು ಹೋಗಬೇಕು. ನನ್ನ ಪ್ರಕಾರ ಈ ದೇಶದ ಆತ್ಮ ಶರಣ ಸಂತರು. ಅವರು ಸಾವಿರಾರು ವರ್ಷಗಳ ಪರಂಪರೆ, ಜೀವನದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆ ಮಾರ್ಗದಲ್ಲಿ ಇರಬೇಕು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ.

ಸಂದರ್ಶನ: ಬಸವರಾಜ ಸೂಳಿಬಾವಿ

( ಲೇಖಕ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ನಡೆಸಿದ ಎಸ್ ಆರ್ ಹಿರೇಮಠರೊಂದಿಗಿನ ದೀರ್ಘ ಸಂದರ್ಶನದ ಸಂಗ್ರಹ ರೂಪ. ಪೂರ್ಣ ಸಂದರ್ಶನದ ವಿಡಿಯೋವನ್ನು ತಾಣದಲ್ಲಿ ನೋಡಬಹುದು)


ಇದನ್ನೂ ಓದಿ: 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿ: ದೇಶಾದ್ಯಂತ ಚಿಂತಕರ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...