Homeಮುಖಪುಟತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

1975ರಲ್ಲಿ ದೇಶದಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿಗೆ ಇಂದಿಗೆ 45 ವರ್ಷ ತುಂಬಿದೆ. ತುರ್ತು ಪರಿಸ್ಥಿತಿಯ ದಿನಗಳನ್ನು, ಅಂದಿಗೂ ಇಂದಿಗೂ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ ಹಿರಿಯ ಹೋರಾಟಗಾರ ಹಿರೇಮಠ್‌ರವರು.

- Advertisement -
- Advertisement -

ನಾನು 11 ವರ್ಷ ಅಮೇರಿಕಾದಲ್ಲಿ ಇದ್ದೆ. ಬಡಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ಇರಾದೆಯಿಂದ ಕೆಲಸ ಬಿಟ್ಟೆ. ನಮ್ಮ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ 1974 ಜನವರಿ 1 ರಂದು ಇಂಡಿಯಾ ಡೆವಲಪ್‍ಮೆಂಟ್ ಎಂಬ ಸಂಸ್ಥೆಯೊಂದನ್ನು ಮಾಡಿದೆವು. ಯಾವುದೇ ಒಂದು ಮಾನವೀಯ ಅಭಿವೃದ್ಧಿಯನ್ನು ಮಾಡಬೇಕಾದಾರೆ ಒಂದು ಲಾರ್ಜರ್ ಡೆಮಾಕ್ರಿಟಿಕ್ ಫ್ರೇಮ್‍ವರ್ಕ್ ಇರುವ ಪ್ರಜಾಪ್ರಭುತ್ವ ಆಶಯಗಳು ಮತ್ತು ಮೌಲ್ಯಗಳಿಗೆ ಗೌರವ ಇರುವಂತಹ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ.

1971ರ ಬಾಂಗ್ಲಾದೇಶ ಲಿಬರೇಶನ್‍ನಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿತು. ಅದರ ನಂತರ ಬರಬರುತ್ತಾ ಇಂದಿರಾ ಗಾಂಧಿಯವರು ಟೊಟಾಲಿಟೇರಿಯನಿಸಂ ಅಂತ ನಾವು ಏನು ಕರಿತೀವಿ, ಹಾಗೆ ಡಿಕ್ಟೇಟರ್‍ಶಿಪ್ ಕಡೆಗೆ ಹೋಗುವುದನ್ನ ನಾವು ನೋಡಿದೆವು. ಯಾಕೆಂದರೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬೇಕಾದರೆ ಪ್ರಜಾಪ್ರಭುತ್ವವನ್ನ ಎತ್ತಿಹಿಡಿಯುವಂತಹ ಸಂಸ್ಥೆಗಳ ಸಶಕ್ತೀಕರಣ ಆಗಬೇಕಾಗುತ್ತದೆ.

ಇಂದಿರಾಗಾಂಧಿ ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಮಾತುಗಳಿಗೆ ಒಪ್ಪುವಂತಹವರು, ಆ ತರದ ನಿರ್ಣಯಗಳನ್ನ ಕೊಡುವಂತಹವರಾದ ಎ.ಕೆ ರೇ. ಅನ್ನುವವರನ್ನು 1973ರಲ್ಲಿ ಮೂರು ಜನ ಜಡ್ಜಸ್- ಹಿಂದಿನ ಲೋಕಯುಕ್ತ ಸಂತೋಷ್ ಹೆಗೆಡೆ ಅವರ ತಂದೆಯನ್ನು ಒಳಗೊಂಡಂತೆ- ಆಯ್ಕೆ ಮಾಡಿದಾಗ ಈ ಸರ್ವಾಧಿಕಾರದ ಟ್ರೆಂಡ್ ಬರುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು.

ನಾನು ಅಮೆರಿಕಾದಲ್ಲಿ ಇದ್ದಾಗ ನ್ಯೂರ್ಯಾಕ್ ಟೈಮ್ಸ್ ಗಮನಿಸುತ್ತಿದ್ದೆ. ಅದರಲ್ಲಿ ಜಯಪ್ರಕಾಶ್ ನಾರಾಯಣ ಅವರ ಬಗ್ಗೆ 6 ಪುಟಗಳ ವರದಿ ನೋಡಿದೆ. ಅದೇ ಸಮಯದಲ್ಲಿ ಚಿಕಾಗೊಗೆ ಅನಿರಿಕ್ಷಿತವಾಗಿ ಯು.ಆರ್ ಅನಂತಮೂರ್ತಿಯವರು ಬಂದಿದ್ದರು. ಅಲ್ಲಿ ಎಲ್ಲರೂ ಸೇರಿ ಅವರೊಂದಿಗೆ ಸಭೆ ಸೇರಿ ಭಾರತದಲ್ಲಿ ಏನು ನಡಿಯುತ್ತಿದೆ ಎಂದು ತಿಳಿದೆವು. ಅಲಹಾಬಾದ್ ಕೋರ್ಟ್ ಜೂನ್ ತಿಂಗಳಲ್ಲಿ ಇಂದಿರಾಗಾಂದಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಿತು. ಇದು ಸರ್ಕಾರನ್ನು ಅಲುಗಾಡಿಸಿತು. ಇನ್ನು ಕೆಲವು ಘಟನೆಗಳು ಕೂಡ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಕಡೆ ತೆಗೆದುಕೊಂಡು ಹೋಗಲು ಕಾರಣವಾಯಿತು. ಆಗ ತುರ್ತು ಪರಿಸ್ಥಿತಿಯ ಮೂಲಕ ನಮ್ಮ ಸಂವಿಧಾನವನ್ನೆ ಅಪ್ರಸ್ತುತಗೊಳಿಸಲು ಹೊರಟಿದ್ದರು. ಆಗ ನಾವು ವಾಷಿಂಗ್ಟನ್‍ನ ನಮ್ಮ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದೆವು. ನಾವು ಆಗ ಸತ್ಯಗಳನ್ನು ಮಾತಾಡಿದ್ದಕ್ಕಾಗಿ ನಮ್ಮ ಪಾಸ್‍ಪೋರ್ಟ್‍ಗಳನ್ನು ರದ್ದುಮಾಡಿದ್ದರು.

ಈಗ ವಲಸೆ ಕಾರ್ಮಿಕರ ಘಟನೆ ಬಗ್ಗೆ ಕೋರ್ಟ್‍ಗಳೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆಗಲೂ ಸಹ ಇದೇ ರೀತಿ ಆಯಿತು. ಜನಪರವಾಗಿ ತೀರ್ಪುಕೊಟ್ಟ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದರು. ಮೂಲಭೂತ ಹಕ್ಕುಗಳನ್ನು ತೆಗೆದು ಹಾಕುವಂತಹ ಪರಿಸ್ಥಿತಿ ಬಂತು. ಇವತ್ತಿನ ಮೋದಿಯ ಮೊದಲನೇ ಮತ್ತು ಎರಡನೇ ಅವಧಿಯ ಸರ್ಕಾರ ಬಹಳ ಕರಾಳವಾಗಿದೆ. ತುರ್ತುಪರಿಸ್ಥಿತಿಗಿಂತ ಇಪ್ಪತ್ತು ಪಟ್ಟು ಗಂಭೀರವಾಗಿದೆ. ನೋಡಿ ಸಂವಿಧಾನದ ಮೂಲತತ್ವಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವಗಳನ್ನು ಎತ್ತಿಹಿಡಿಯುವ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದರೆ ಇಂದಿರಾಗಾಂದಿಯವರಿಗಿಂತ ಹೆಚ್ಚಿನದಾದ ತುರ್ತುಪರಿಸ್ಥಿತಿ ಇದಾಗಿದೆ. ಇದನ್ನು ಖಂಡಿಸಿ ಆಳವಾದ ಅಧ್ಯಯನದಿಂದ ಆಂದೋಲನವನ್ನು ಕಟ್ಟಬೇಕು.

ಕಾರ್ಮಿಕರ ದುಡಿಮೆಯ ಅವಧಿಯನ್ನೇ ಕಡಿಮೆ ಮಾಡಿ ಮೂರು ವರ್ಷ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ಇಡುವುದನ್ನು ಈ ಸರ್ಕಾರ ಮಾಡಿದೆ. ಇದನ್ನು ನಾವು ಬುದ್ದ, ಬಸವ, ಅಂಬೇಡ್ಕರ್‌ರ ಆಶಯದೊಂದಿಗೆ ಎದುರಿಸಲೇಬೇಕು. ಅಂದು ಜಯಪ್ರಕಾಶ್ ನಾರಾಯಣರವರು ಸಮಗ್ರ ಪರಿವರ್ತನೆ ಎನ್ನುವ ಪರಿಕಲ್ಪನೆಯಲ್ಲಿ ಯುವಕರಿಗೆ ಕರೆಕೊಟ್ಟಿದ್ದರು. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಂವಿಧಾನದ ಪೂರಕ ಅಂಶಗಳಿಂದ ಸ್ಫೂರ್ತಿಪಡೆದ ಯುವಜನರು ಈ ದೇಶಕ್ಕೆ ಅವಶ್ಯಕತೆ ಇದ್ದಾರೆ. ಜೆಪಿಯವರು ಎಲ್ಲಾಪಕ್ಷಗಳನ್ನು ಕೂಡಿಸಿ ಹೊಸತೊಂದನ್ನು ಮಾಡಲು ಹೊರಟರು ಆದರೆ ಅವರ ಕಣ್ಣ ಮುಂದೆಯೇ ಜನತಾ ಪಕ್ಷ ಒಡೆದುಹೋಯಿತು. ಇದು ಕೂಡ ಐತಿಹಾಸಿಕ ಪ್ರಮಾದ ಅನಿಸುತ್ತೆ.

ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಹಿನ್ನಲೆ ಇರದ ಆರ್.ಎಸ್.ಎಸ್ ದೇಶವನ್ನು ಹಿಂದಕ್ಕೆ ಒಯ್ಯುವ ಮತ್ತು ಭಯಾನಕ ಸಿದ್ಧಾಂತವನ್ನು ಹೊಂದಿರುವ ಸಂಘಟನೆ. ಸಂವಿಧಾನದ ಪ್ರಸ್ತಾವನೆ ಮತ್ತು ದೇಶದ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಆರ್ಥಿಕ ಅಸಮಾನತೆಯ ಜನಕರು ಕಾಂಗ್ರೆಸ್. ಆದರೆ ಇದನ್ನ ಇನ್ನಷ್ಟು ನಾಗಲೋಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಬಿಜೆಪಿ. ಗಾಂಧಿ, ಶುಮಾಕರ್ ಅವರುಗಳು ಹೇಳಿದ ಆರ್ಥಿಕ ಸಮಾನತೆ, ಅಂಬೇಡ್ಕರ್ ಅವರು ಹೇಳಿದ ಜಾತಿವಿನಾಶ ಈ ವಿಚಾರಗಳ ಕಡೆಗೆ ನಾವು ಹೋಗಬೇಕು. ನನ್ನ ಪ್ರಕಾರ ಈ ದೇಶದ ಆತ್ಮ ಶರಣ ಸಂತರು. ಅವರು ಸಾವಿರಾರು ವರ್ಷಗಳ ಪರಂಪರೆ, ಜೀವನದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆ ಮಾರ್ಗದಲ್ಲಿ ಇರಬೇಕು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ.

ಸಂದರ್ಶನ: ಬಸವರಾಜ ಸೂಳಿಬಾವಿ

( ಲೇಖಕ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ನಡೆಸಿದ ಎಸ್ ಆರ್ ಹಿರೇಮಠರೊಂದಿಗಿನ ದೀರ್ಘ ಸಂದರ್ಶನದ ಸಂಗ್ರಹ ರೂಪ. ಪೂರ್ಣ ಸಂದರ್ಶನದ ವಿಡಿಯೋವನ್ನು ತಾಣದಲ್ಲಿ ನೋಡಬಹುದು)


ಇದನ್ನೂ ಓದಿ: 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿ: ದೇಶಾದ್ಯಂತ ಚಿಂತಕರ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...