Homeಮುಖಪುಟತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ

1975ರಲ್ಲಿ ದೇಶದಲ್ಲಿ ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತುಪರಿಸ್ಥಿತಿಗೆ ಇಂದಿಗೆ 45 ವರ್ಷ ತುಂಬಿದೆ. ತುರ್ತು ಪರಿಸ್ಥಿತಿಯ ದಿನಗಳನ್ನು, ಅಂದಿಗೂ ಇಂದಿಗೂ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ ಹಿರಿಯ ಹೋರಾಟಗಾರ ಹಿರೇಮಠ್‌ರವರು.

- Advertisement -
- Advertisement -

ನಾನು 11 ವರ್ಷ ಅಮೇರಿಕಾದಲ್ಲಿ ಇದ್ದೆ. ಬಡಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ಇರಾದೆಯಿಂದ ಕೆಲಸ ಬಿಟ್ಟೆ. ನಮ್ಮ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ 1974 ಜನವರಿ 1 ರಂದು ಇಂಡಿಯಾ ಡೆವಲಪ್‍ಮೆಂಟ್ ಎಂಬ ಸಂಸ್ಥೆಯೊಂದನ್ನು ಮಾಡಿದೆವು. ಯಾವುದೇ ಒಂದು ಮಾನವೀಯ ಅಭಿವೃದ್ಧಿಯನ್ನು ಮಾಡಬೇಕಾದಾರೆ ಒಂದು ಲಾರ್ಜರ್ ಡೆಮಾಕ್ರಿಟಿಕ್ ಫ್ರೇಮ್‍ವರ್ಕ್ ಇರುವ ಪ್ರಜಾಪ್ರಭುತ್ವ ಆಶಯಗಳು ಮತ್ತು ಮೌಲ್ಯಗಳಿಗೆ ಗೌರವ ಇರುವಂತಹ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ.

1971ರ ಬಾಂಗ್ಲಾದೇಶ ಲಿಬರೇಶನ್‍ನಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿತು. ಅದರ ನಂತರ ಬರಬರುತ್ತಾ ಇಂದಿರಾ ಗಾಂಧಿಯವರು ಟೊಟಾಲಿಟೇರಿಯನಿಸಂ ಅಂತ ನಾವು ಏನು ಕರಿತೀವಿ, ಹಾಗೆ ಡಿಕ್ಟೇಟರ್‍ಶಿಪ್ ಕಡೆಗೆ ಹೋಗುವುದನ್ನ ನಾವು ನೋಡಿದೆವು. ಯಾಕೆಂದರೆ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಬೇಕಾದರೆ ಪ್ರಜಾಪ್ರಭುತ್ವವನ್ನ ಎತ್ತಿಹಿಡಿಯುವಂತಹ ಸಂಸ್ಥೆಗಳ ಸಶಕ್ತೀಕರಣ ಆಗಬೇಕಾಗುತ್ತದೆ.

ಇಂದಿರಾಗಾಂಧಿ ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಮಾತುಗಳಿಗೆ ಒಪ್ಪುವಂತಹವರು, ಆ ತರದ ನಿರ್ಣಯಗಳನ್ನ ಕೊಡುವಂತಹವರಾದ ಎ.ಕೆ ರೇ. ಅನ್ನುವವರನ್ನು 1973ರಲ್ಲಿ ಮೂರು ಜನ ಜಡ್ಜಸ್- ಹಿಂದಿನ ಲೋಕಯುಕ್ತ ಸಂತೋಷ್ ಹೆಗೆಡೆ ಅವರ ತಂದೆಯನ್ನು ಒಳಗೊಂಡಂತೆ- ಆಯ್ಕೆ ಮಾಡಿದಾಗ ಈ ಸರ್ವಾಧಿಕಾರದ ಟ್ರೆಂಡ್ ಬರುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು.

ನಾನು ಅಮೆರಿಕಾದಲ್ಲಿ ಇದ್ದಾಗ ನ್ಯೂರ್ಯಾಕ್ ಟೈಮ್ಸ್ ಗಮನಿಸುತ್ತಿದ್ದೆ. ಅದರಲ್ಲಿ ಜಯಪ್ರಕಾಶ್ ನಾರಾಯಣ ಅವರ ಬಗ್ಗೆ 6 ಪುಟಗಳ ವರದಿ ನೋಡಿದೆ. ಅದೇ ಸಮಯದಲ್ಲಿ ಚಿಕಾಗೊಗೆ ಅನಿರಿಕ್ಷಿತವಾಗಿ ಯು.ಆರ್ ಅನಂತಮೂರ್ತಿಯವರು ಬಂದಿದ್ದರು. ಅಲ್ಲಿ ಎಲ್ಲರೂ ಸೇರಿ ಅವರೊಂದಿಗೆ ಸಭೆ ಸೇರಿ ಭಾರತದಲ್ಲಿ ಏನು ನಡಿಯುತ್ತಿದೆ ಎಂದು ತಿಳಿದೆವು. ಅಲಹಾಬಾದ್ ಕೋರ್ಟ್ ಜೂನ್ ತಿಂಗಳಲ್ಲಿ ಇಂದಿರಾಗಾಂದಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಿತು. ಇದು ಸರ್ಕಾರನ್ನು ಅಲುಗಾಡಿಸಿತು. ಇನ್ನು ಕೆಲವು ಘಟನೆಗಳು ಕೂಡ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಕಡೆ ತೆಗೆದುಕೊಂಡು ಹೋಗಲು ಕಾರಣವಾಯಿತು. ಆಗ ತುರ್ತು ಪರಿಸ್ಥಿತಿಯ ಮೂಲಕ ನಮ್ಮ ಸಂವಿಧಾನವನ್ನೆ ಅಪ್ರಸ್ತುತಗೊಳಿಸಲು ಹೊರಟಿದ್ದರು. ಆಗ ನಾವು ವಾಷಿಂಗ್ಟನ್‍ನ ನಮ್ಮ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದೆವು. ನಾವು ಆಗ ಸತ್ಯಗಳನ್ನು ಮಾತಾಡಿದ್ದಕ್ಕಾಗಿ ನಮ್ಮ ಪಾಸ್‍ಪೋರ್ಟ್‍ಗಳನ್ನು ರದ್ದುಮಾಡಿದ್ದರು.

ಈಗ ವಲಸೆ ಕಾರ್ಮಿಕರ ಘಟನೆ ಬಗ್ಗೆ ಕೋರ್ಟ್‍ಗಳೂ ಕೂಡ ಸರಿಯಾಗಿ ಸ್ಪಂದಿಸಿಲ್ಲ. ಆಗಲೂ ಸಹ ಇದೇ ರೀತಿ ಆಯಿತು. ಜನಪರವಾಗಿ ತೀರ್ಪುಕೊಟ್ಟ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿದರು. ಮೂಲಭೂತ ಹಕ್ಕುಗಳನ್ನು ತೆಗೆದು ಹಾಕುವಂತಹ ಪರಿಸ್ಥಿತಿ ಬಂತು. ಇವತ್ತಿನ ಮೋದಿಯ ಮೊದಲನೇ ಮತ್ತು ಎರಡನೇ ಅವಧಿಯ ಸರ್ಕಾರ ಬಹಳ ಕರಾಳವಾಗಿದೆ. ತುರ್ತುಪರಿಸ್ಥಿತಿಗಿಂತ ಇಪ್ಪತ್ತು ಪಟ್ಟು ಗಂಭೀರವಾಗಿದೆ. ನೋಡಿ ಸಂವಿಧಾನದ ಮೂಲತತ್ವಗಳಾದ ಸಮಾನತೆ, ಸಹೋದರತೆ, ಭ್ರಾತೃತ್ವಗಳನ್ನು ಎತ್ತಿಹಿಡಿಯುವ ಆನಂದ್ ತೇಲ್ತುಂಬ್ಡೆಯಂತಹ ಬುದ್ಧಿಜೀವಿಗಳನ್ನು ಬಂಧನದಲ್ಲಿ ಇಟ್ಟಿದ್ದಾರೆ ಎಂದರೆ ಇಂದಿರಾಗಾಂದಿಯವರಿಗಿಂತ ಹೆಚ್ಚಿನದಾದ ತುರ್ತುಪರಿಸ್ಥಿತಿ ಇದಾಗಿದೆ. ಇದನ್ನು ಖಂಡಿಸಿ ಆಳವಾದ ಅಧ್ಯಯನದಿಂದ ಆಂದೋಲನವನ್ನು ಕಟ್ಟಬೇಕು.

ಕಾರ್ಮಿಕರ ದುಡಿಮೆಯ ಅವಧಿಯನ್ನೇ ಕಡಿಮೆ ಮಾಡಿ ಮೂರು ವರ್ಷ ಕಾರ್ಮಿಕ ಕಾನೂನುಗಳಿಗೆ ತಿಲಾಂಜಲಿ ಇಡುವುದನ್ನು ಈ ಸರ್ಕಾರ ಮಾಡಿದೆ. ಇದನ್ನು ನಾವು ಬುದ್ದ, ಬಸವ, ಅಂಬೇಡ್ಕರ್‌ರ ಆಶಯದೊಂದಿಗೆ ಎದುರಿಸಲೇಬೇಕು. ಅಂದು ಜಯಪ್ರಕಾಶ್ ನಾರಾಯಣರವರು ಸಮಗ್ರ ಪರಿವರ್ತನೆ ಎನ್ನುವ ಪರಿಕಲ್ಪನೆಯಲ್ಲಿ ಯುವಕರಿಗೆ ಕರೆಕೊಟ್ಟಿದ್ದರು. ಈ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಂವಿಧಾನದ ಪೂರಕ ಅಂಶಗಳಿಂದ ಸ್ಫೂರ್ತಿಪಡೆದ ಯುವಜನರು ಈ ದೇಶಕ್ಕೆ ಅವಶ್ಯಕತೆ ಇದ್ದಾರೆ. ಜೆಪಿಯವರು ಎಲ್ಲಾಪಕ್ಷಗಳನ್ನು ಕೂಡಿಸಿ ಹೊಸತೊಂದನ್ನು ಮಾಡಲು ಹೊರಟರು ಆದರೆ ಅವರ ಕಣ್ಣ ಮುಂದೆಯೇ ಜನತಾ ಪಕ್ಷ ಒಡೆದುಹೋಯಿತು. ಇದು ಕೂಡ ಐತಿಹಾಸಿಕ ಪ್ರಮಾದ ಅನಿಸುತ್ತೆ.

ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಹಿನ್ನಲೆ ಇರದ ಆರ್.ಎಸ್.ಎಸ್ ದೇಶವನ್ನು ಹಿಂದಕ್ಕೆ ಒಯ್ಯುವ ಮತ್ತು ಭಯಾನಕ ಸಿದ್ಧಾಂತವನ್ನು ಹೊಂದಿರುವ ಸಂಘಟನೆ. ಸಂವಿಧಾನದ ಪ್ರಸ್ತಾವನೆ ಮತ್ತು ದೇಶದ ಬಾವುಟ ಹಿಡಿದು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ಆರ್ಥಿಕ ಅಸಮಾನತೆಯ ಜನಕರು ಕಾಂಗ್ರೆಸ್. ಆದರೆ ಇದನ್ನ ಇನ್ನಷ್ಟು ನಾಗಲೋಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಬಿಜೆಪಿ. ಗಾಂಧಿ, ಶುಮಾಕರ್ ಅವರುಗಳು ಹೇಳಿದ ಆರ್ಥಿಕ ಸಮಾನತೆ, ಅಂಬೇಡ್ಕರ್ ಅವರು ಹೇಳಿದ ಜಾತಿವಿನಾಶ ಈ ವಿಚಾರಗಳ ಕಡೆಗೆ ನಾವು ಹೋಗಬೇಕು. ನನ್ನ ಪ್ರಕಾರ ಈ ದೇಶದ ಆತ್ಮ ಶರಣ ಸಂತರು. ಅವರು ಸಾವಿರಾರು ವರ್ಷಗಳ ಪರಂಪರೆ, ಜೀವನದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಆ ಮಾರ್ಗದಲ್ಲಿ ಇರಬೇಕು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲ.

ಸಂದರ್ಶನ: ಬಸವರಾಜ ಸೂಳಿಬಾವಿ

( ಲೇಖಕ, ಪ್ರಕಾಶಕ ಬಸವರಾಜ ಸೂಳಿಬಾವಿ ಅವರು ನಡೆಸಿದ ಎಸ್ ಆರ್ ಹಿರೇಮಠರೊಂದಿಗಿನ ದೀರ್ಘ ಸಂದರ್ಶನದ ಸಂಗ್ರಹ ರೂಪ. ಪೂರ್ಣ ಸಂದರ್ಶನದ ವಿಡಿಯೋವನ್ನು ತಾಣದಲ್ಲಿ ನೋಡಬಹುದು)


ಇದನ್ನೂ ಓದಿ: 1% ಅತಿ ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ವಿಧಿಸಿ: ದೇಶಾದ್ಯಂತ ಚಿಂತಕರ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...