Homeಮುಖಪುಟಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

- Advertisement -
- Advertisement -

ಒಂದಾನೊಂದು ಕಾಲದಾಗ ಜಾನ್ ಕೆನಡಿ ಅಂತ ಒಬ್ಬರು ಇದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಣ್ಣ ಜೀವನ ಕಾಲದಾಗ ಅನೇಕ ಒಳ್ಳೆ ಕೆಲಸ ಮಾಡಿದರು.

ಅವರು 1960ರೊಳಗ ತಮ್ಮ 43ನೇ ವಯಸ್ಸಿಗೆ ಅಧ್ಯಕ್ಷೀಯ ಚುನಾವಣೆ ಗೆದ್ದು ಅತಿಕಮ್ಮಿ ವಯಸ್ಸಿನ ಅಧ್ಯಕ್ಷ ಅಂತ ಅಮೆರಿಕದ ಇತಿಹಾಸದಾಗ ದಾಖಲು ಮಾಡಿದರು. ಆರ್ಥಿಕ ಹಿಂಜರಿಕೆಯಿಂದ ಹೊಡೆತ ತಿಂದಿದ್ದ ಅಮೆರಿಕಾವನ್ನು ಬೆಳವಣಿಗೆಯ ದಾರಿಯೊಳಗ ದೂಡಿದರು. ವಿಶ್ವಾದ್ಯಂತ ಶಾಂತಿ ಹಾಗೂ ಅಭಿವೃದ್ಧಿ ಸ್ಥಾಪಿಸಲಿಕ್ಕೆ ಪೀಸ್‍ಕೋರ್ ಅನ್ನೋ ಸಂಸ್ಥೆ ಸುರು ಮಾಡಿದರು. ರಷಿಯಾ ಒಕ್ಕೂಟದ ಅಧ್ಯಕ್ಷ ಕ್ರುಷೇವ ಅವರ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿ ಪರಮಾಣು ಯುದ್ಧ ತಪ್ಪಿಸಿದರು. ನಿರುದ್ಯೋಗಿಗಳಿಗೆ ಭತ್ಯೆ, ಕೌಶಲ್ಯ ತರಬೇತಿ ಮುಂತಾದ ಯೋಜನೆಗಳನ್ನು ಆರಂಭ ಮಾಡಿದರು. ಕರಿಯರು ಹೆಚ್ಚಾಗಿ ಇದ್ದ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಕರಿಯರ ಶಿಕ್ಷಣದ ಸಲುವಾಗಿ ತೆರೆಯಲಾದ ವಿಶೇಷ ಕಾಲೇಜುಗಳನ್ನು ಬೆಳೆಸಲು ಅನುದಾನ ನೀಡಿದರು. ಮಹಿಳಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯ ಅನುವಾಗಿ ಹೆಚ್ಚಿನ ಕೂಲಿ ಸಿಗುವಂತೆ ಕಾನೂನು ಮಾಡಿದರು, ಇತ್ಯಾದಿ.

ಜಾನ್ ಕೆನಡಿ

ತಮ್ಮ ಚುನಾವಣೆಯ ಗೆಲುವನ್ನು ಅವರು ಇದು `ಒಂದು ಪಕ್ಷದ ಗೆಲುವು ಅಲ್ಲ. ಸ್ವಾತಂತ್ರ್ಯದ ಉತ್ಸವ’ ಅಂತ ಬಣ್ಣಿಸಿದರು. ಇದು ಮನುಷ್ಯರೆಲ್ಲರ ಉತ್ಥಾನದ ಅವಕಾಶದ ದಾರಿ. ಎಲ್ಲ ರೀತಿಯ ಬಡತನವನ್ನೂ, ಗುಲಾಮಗಿರಿಯನ್ನು ತೊಡೆದುಹಾಕುವ ಅವಕಾಶ ಈಗ ನಮ್ಮ ಮುಂದೆ ಇದೆ ಎಂದವರು. ಆದರ ಅವರ ಒಂದು ಮಾತು ಭಾಳ ಫೇಮಸ್ಸು. ಅದು ನಮಗೆಲ್ಲರಿಗೂ ಗೊತ್ತು. ನಿಮಗಾಗಿ ಈ ದೇಶ ಏನು ಮಾಡುತ್ತದೆ ಎಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ನೀಡಬಲ್ಲಿರಿ ಎನ್ನುವುದನ್ನು ಕೇಳಿಕೊಳ್ಳಿರಿ.

ಅವರ ವಿಚಾರಗಳನ್ನು, ಸಿದ್ಧಾಂತಗಳನ್ನು ಮನಸೋ ಇಚ್ಛೆ ಪಾಲಿಸುವವರಿಗೆ ಕೆನಡಿಯನ್ ಅಂತ ಕರೀತಾರ. ಹಂಗಂದರ ಕೆನಡಾದಿಂದ ಬಂದವರು ಅಂತ ಅಲ್ಲ. ಜಾನ್ ಕೆನಡಿಯವರ ವಿಚಾರಗಳನ್ನ, ಕಾರ್ಯಕ್ರಮ- ಯೋಜನೆಗಳನ್ನು ಒಪ್ಪಿಕೊಂಡು ನಡೆಯುವವರು ಅಂತ. ಈಗಿನ ನಮ್ಮ ನಾಯಕರನ್ನು ಕೆನೆಡಿಯನ್ ಅಂತ ಕರೀಬಹುದು ಅಂತೀರೇನು?

ಒಂದು ರೀತಿಯಿಂದ ಅನಬಹುದೋ ಏನೋ. ಅದು ಏನಪಾ ಅಂದರ `ನೀವು ದೇಶಕ್ಕೆ ಏನು ಮಾಡಬಲ್ಲಿರಿ’ ಅನ್ನೋ ಮಾತು. ಇಡೀ ಜಗತ್ತಿನ 177 ದೇಶಗಳಲ್ಲಿ ಈ ಕೊರೊನಾ ವ್ಯಾಧಿ ಹೊಡಕೊಂಡದ. ದೊಡ್ಡ ಸಾಹುಕಾರ ಟ್ರಂಪಣ್ಣನವರಿಂದಾ ಹಿಡಕೊಂಡು ಸಣ್ಣಂಗಡಿ ಶೆಟ್ಟರಾದ ಉಗಾಂಡಾದ ಯಾವೋರಿ ಮುಸೇವಿನಿ ಅವರ ತನಕಾ ಎಲ್ಲಾರೂ ಜನರಿಗೆ `ಹಿಂಗ ಮಾಡರಿ, ಹಂಗ ಮಾಡರಿ, ಹಂಗಂತ ಹಂಗ ಮಾಡಬ್ಯಾಡ್ರಿ’ ಅಂತ ಹೇಳಲಿಕ್ಕೆ ಹತ್ಯಾರ. ಯಾರೂ ನಿಮ್ಮ ಸಲುವಾಗಿ ನಾವು ಏನು ಮಾಡತೇವಿ ಅನ್ನೋದನ್ನ ಹೇಳಲಿಕ್ಕೆ ಒಲ್ಲರು. ಊರು ಮುಂದಿನ ಹಣಮಂತನದೇವರ ಗುಡಿ ಸ್ವಾಮಿ ವಾರಕ್ಕೊಮ್ಮೆ ನೀತಿಪಾಠ ಹೇಳಿದಂಗ ಅವರು ಹೇಳಲಿಕ್ಕೆ ಹತ್ಯಾರ.

ಅವರು ಹೇಳಿದ್ದನ್ನ ನಾವು ಜೀ ಹುಜೂರ್ ಅಂತ ಕೇಳಲಿಕ್ಕೆ ಹತ್ತೇವಿ. ತಿರುಗಿ ಮಾತನಾಡಲಿಕ್ಕೆ ಹತ್ತಿಲ್ಲ. ಪ್ರಶ್ನೆ ಕೇಳಲಿಕ್ಕೆ ನಮಗ ಬರಂಗಿಲ್ಲ.

ಉದಾಹರಣೆಗೆ ಮಹಾಮಹಿಮ ಪ್ರಧಾನಿಗಳು ನೀವು ಕಫ್ರ್ಯೂ ಪಾಲಿಸಿರಿ, 14 ತಾಸು ಹೊರಗ ಬರಬ್ಯಾಡ್ರಿ, ಗಾಡಿ ಓಡಸಬ್ಯಾಡ್ರಿ, ಏನೂ ಖರೀದಿ ಮಾಡಬ್ಯಾಡ್ರಿ, ಒಬ್ಬರಿಗೊಬ್ಬರು ಮಾತು ಆಡಬ್ಯಾಡ್ರಿ, ಇತ್ಯಾದಿ ಇತ್ಯಾದಿ ಅಂತ ಫರಮಾನು ಹೊರಡಿಸಿದಾಗ, ನಾವು ಸುಮ್ಮನೇ ಇದ್ದಿವಿ. ಬೆಂದಕಾಳೂರಿನ ದಂಡಾಧಿಕಾರಿಗಳು ಹೊರಗ ಬಂದರ ಕೇಸು ಹಾಕತೇವಿ ಅಂದರು. ಅವಾಗನೂ ಸುಮ್ಮನೇ ಇದ್ದೆವಿ. ಸಂಜೀಕೆ ಐದಕ್ಕ ಮನೀ ಬಾಲ್ಕನಿಯೊಳಗ ಹೋಗಿ ಚಪ್ಪಾಳೆ ಹೊಡಿಯಿರಿ ಅಂದರ ನಾವು ಶಂಖ, ಜಾಗಟೆ, ತಾಳ, ಡಮರು, ತಾಟು, ತಂಬಿಗಿ ಎಲ್ಲಾನೂ ಬಾರಿಸಿದಿವಿ. ಗುಂಪು ಕಟಿಗೋಬ್ಯಾಡ್ರಿ ಅಂತ ಅವರು ಹೇಳಿದರ ನಾವು ಚಪ್ಪಾಳೆ ಹೊಡೆಯೋ ಪವಿತ್ರ ಕಾರ್ಯಕ್ಕಾಗಿ ಗುಂಪು ಕಟ್ಟಿಕೊಂಡು ಬಿಟ್ಟಿವಿ. ಅದು ಬ್ಯಾರೆ ಮಾತು.

ನಮ್ಮ ಪಂತ ಪ್ರಧಾನರು ನೀವು ಹಿಂಗ ಮಾಡ್ರಿ ಅಂದರು ಆದರ ನಾವು ಏನು ಮಾಡತೇವಿ ಅಂತ ಹೇಳಲಿಲ್ಲ. ಒಂದು ತಾಸು ಭಾಷಣ ಮಾಡಿದರೂ ಸಹಿತ ಕೊರೊನಾ ವಿರುದ್ಧ ಸರಕಾರದ ಯೋಜನೆಗಳು ಏನು ಅನ್ನೋದು ಬಾಯಿ ಬಿಡಲಿಲ್ಲ.

ಹಂಗಾರ ಅವರು ಏನು ಹೇಳಬಹುದಿತ್ತು?-
ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅದರ ಪರಿಹಾರಕ್ಕ ಏನೇನು ಮಾಡಬಹುದು ಅಂತ ತಿಳಿಸಬಹುದಿತ್ತು. ಆದರ ಅವರು ಅದನ್ನು ಹೇಳಲಿಲ್ಲ. ಚುನಾವಣೆ ರಣತಂತ್ರಜ್ಞ ಪ್ರಶಾಂತ ಕಿಶೋರ ಅವರು ಮೋದಿ ಅವರು ಯಾವ ಕೆಟ್ಟ ಸುದ್ದಿಯನ್ನೂ ಕೊಡಬಾರದು. ಅವರು ಯಾವಾಗಲೂ ಬರೇ ಒಳ್ಳೆ ಸುದ್ದಿ ಕೊಡಬೇಕು ಅಂತ ಹೇಳಿಕೊಟ್ಟಿದ್ದರಂತ. ಇವರು ಅದನ್ನು ಚುನಾವಣೆ ಮುಗದ ಮ್ಯಾಲನೂ ಪಾಲಸಲಿಕ್ಕೆ ಹತ್ಯಾರ.

ಇದಕ್ಕ ಎಷ್ಟು ರೊಕ್ಕ ಇಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಗಿಂತ ಮುಂಚೆ ಹಣಕಾಸಿನ ಮಾತು ಹಗಲೆಲ್ಲಾ ಆಡಿದ ಮೋದಿ ಅವರು ಈಗ ಮಾತಾಡವಲ್ಲರು.

ಅದಕ್ಕೊಂದು ವಿಶೇಷ ತಂಡ ಕಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಕಾರ್ಯಕ್ಕೆ, ಪಕ್ಕದ ಕೆಲಸಕ್ಕೆ ತಂಡ ಕಟ್ಟೋರು ವಿಪತ್ತಿನ ನಿರ್ವಹಣೆಗೆ ಕಟ್ಟತಾರೋ ಇಲ್ಲವೋ, ಗೊತ್ತಿಲ್ಲ.

ಅದರ ಸಲುವಾಗಿ ಒಂದು ಆಸ್ಪತ್ರೆ, ಸಂಶೋಧನಾ ಕೇಂದ್ರ, ಪ್ರಯೋಗಾಲಯ ಇತ್ಯಾದಿ ಮೀಸಲು ಇಡತೇವಿ, ಹೊಸದಾಗಿ ಆರಂಭ ಮಾಡತೇವಿ ಅಂತ ಅನ್ನಬಹುದಿತ್ತು. ಅದನ್ನು ಅನ್ನಲಿಲ್ಲ. ರವಾಂಡಾ, ಸಿಯಾರಾ ಲಿಯೋನ್ ಮುಂತಾದ ಸಣ್ಣಸಣ್ಣ ದೇಶಗಳು ಮಾಡಲಿಕ್ಕೆ ಹತ್ಯಾವು.

ಚೀನಾದವರು ಹತ್ತು ದಿನದಾಗ ಹೊಸಾ ಆಸ್ಪತ್ರೆ ಕಟ್ಟಿದ್ದು ನಾವೆಲ್ಲಾ ನೋಡಿ ಚಪ್ಪಾಳೆ ತಟ್ಟೇವಿ. ಆದರ ಈಗ ನಾಯಕರು ಹೇಳಿದರು ಅಂತ ಚಪ್ಪಾಳೆ ತಟ್ಟಿದಿವಿ. ಅದಕ್ಕೂ ಇದಕ್ಕೂ ನಮಗ ವ್ಯತ್ಯಾಸ ಗೊತ್ತಿಲ್ಲ.

ಚೀನಾದ ಕೊರೊನಾ ಆಸ್ಪತ್ರೆ

ಈಗ ನಮ್ಮ ಮುಂದ ಇರೋದು ಏನು-ಯುದ್ಧನೋ? ಸರ್ಜಿಕಲ್ ಸ್ಟ್ರೈಕೋ? ಹೋರಾಟನೋ? ಅಥವಾ ವಿಪತ್ತೋ? ಕೊರೊನಾ ರೋಗದ ಜೊತೆ ಹೊಡೆದಾಟ ಅಂದರ ಜನರ ಹತ್ತರ ಮುಚ್ಚಿ-ಮುಚ್ಚಿ ಇಡುವಂಥಾ ಸೀಕ್ರೆಟ್ ಏನರ ಅದ ಏನು? ಇದನ್ನ ತಿಳಕೋಬೇಕಾರ ನೀವು ಏನು ಸೈನ್ಯದ ಅಧಿಕಾರಿ ಆಗಿರಬೇಕಿಲ್ಲ. ನಿಮಗ ಕನಿಷ್ಠ ಸಾಮಾನ್ಯ ಜ್ಞಾನ ಇದ್ದರ ಸಾಕು. ಆದರ ಈಗಿನ ಕಾಲ ಹೆಂಗಂದ ಅಂದರ ಬ್ಯಾರೆ ಬೇಕಾದ್ದು ಸಿಗತದ, ಸಾಮಾನ್ಯ ಜ್ಞಾನ ಸಿಗಂಗಿಲ್ಲ. ಅದು ಎಷ್ಟು ಅಪರೂಪ ಅಂದರ ರೊಕ್ಕ ಅಲ್ಲಾ, ಜೀವಾ ಕೊಟ್ಟರೂ ಸಿಗಂಗಿಲ್ಲ. ಇದನ್ನು ಸರಿಮಾಡುವುದು ಘಟಾನುಘಟಿ ನಾಯಕರ ಕಡೆನೂ ಸಾಧ್ಯ ಇಲ್ಲ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...