Homeಕರ್ನಾಟಕಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ...

- Advertisement -
- Advertisement -

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತೀಚೆಗೆ ತನ್ನ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 16 ವಿವಿಧ ಅಕಾಡೆಮಿ ಹಾಗೂ ಅಧ್ಯಯನ ಕೇಂದ್ರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿತ್ತು. ಆದರೆ, ಹೀಗೆ ಸರ್ಕಾರದಿಂದ ಅಕಾಡೆಮಿಗೆ ಆಯ್ಕೆಯಾದ ಸದಸ್ಯರ ಪೈಕಿ ಬಹುತೇಕರು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಭಟ್ಟಂಗಿಗಳು, ಅಕಾಡೆಮಿ ನೇಮಕಾತಿಯಲ್ಲಿ ಸಾಮಾಜಿಕ ಭೌಗೋಳಿಕ ನ್ಯಾಯ ಪಾಲಿಸಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಆರೋಪ.

ರಾಜ್ಯದ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು-ಸದಸ್ಯರನ್ನು ನೇಮಕ ಮಾಡುವುದು ಹಾಗೂ ಈ ನೇಮಕಾತಿ ಹಿಂದೆಯೇ ಕೆಲವು ಅಪಸ್ವರಗಳು, ಟೀಕೆಟಿಪ್ಪಣಿಗಳು ಕೇಳಿಬರುವುದು ಸಾಹಿತ್ಯ ವಲಯದಲ್ಲಿ ತೀರಾ ಸಾಂಪ್ರದಾಯಿಕ ಮತ್ತು ವಾಡಿಕೆ. ಅಂತಹದ್ದೇ ವಾಡಿಕೆಯ ಟೀಕೆ ಈ ಬಾರಿಯೂ ಕೇಳಿಬಂದದ್ದು ಅಚ್ಚರಿ ಏನಲ್ಲ.

ಅಸಲಿಗೆ ಅಕಾಡೆಮಿ ಹಂತದ ಅಧ್ಯಕ್ಷರು ಸದಸ್ಯರ ಆಯ್ಕೆ ಕುರಿತ ಕಾಂಗ್ರೆಸ್ ನಾಯಕರ ಇಂತಹ ಟೀಕೆಗಳಿಗೆ ನಿಜಕ್ಕೂ ಅಷ್ಟಾಗಿ ಮಾನ್ಯತೆ ಸಿಕ್ಕಿರಲಿಲ್ಲ. ಅಕ್ಷರಶಃ ಕೆಲವು ದಿನ ಪತ್ರಿಕೆಗಳಲ್ಲಿ ಮಾತ್ರ ಈ ಹೇಳಿಕೆ ಮುದ್ರಣವಾಗಿತ್ತು. ಆ ಮುದ್ರಣವೂ ಕೇವಲ ಮೂರು ಸಾಲುಗಳಿಗಷ್ಟೇ ಮೀಸಲಾಗಿತ್ತು.

ಆದರೆ, ಹೀಗೆ ಮೂರು ಸಾಲಿಗೆ ಮಾತ್ರ ಮೀಸಲಾಗಿದ್ದ ಕಾಂಗ್ರೆಸ್ ನಾಯಕರ ಟೀಕೆಗೆ ಮತ್ತಷ್ಟು ಮೈಲೇಜ್ ಕೊಟ್ಟದ್ದು ಸಚಿವ ಸಿ.ಟಿ. ರವಿ ಅವರ ಆ ಒಂದು ಹೇಳಿಕೆ.

ಅಕಾಡೆಮಿಗಳಿಗೆ ಸದಸ್ಯರ ನೇಮಕ ವಿಚಾರ ಕುರಿತಂತೆ ಮಾಧ್ಯಮಗಳ ಎದುರು ಏಕಾಏಕಿ ಹೇಳಿಕೆ ನೀಡಿದ್ದ ಸಿ.ಟಿ. ರವಿ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡುವಾಗ ಮನೆಹಾಳು ಜನರನ್ನು ದೂರ ಇಡಲಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಲು ನಾವು ಬದ್ಧರಿದ್ದೇವೆ. ಆದರೆ, ಈ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವ ಜನರನ್ನು ನೇಮಕ ಮಾಡಿಲ್ಲ. ಈ ಸಲ ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಸಿದೆ. ಈ ಹೇಳಿಕೆಯ ವಿರುದ್ಧ ಕನ್ನಡ ಸಾಹಿತ್ಯ ಲೋಕ ಇದೀಗ ಮುರಿದುಕೊಂಡು ಬಿದ್ದಿದೆ. ಸಿ.ಟಿ. ರವಿ ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಪಡಿಸಲಾಗುತ್ತಿದೆ.

ಬಿಜೆಪಿ ಸರ್ಕಾರ ಪ್ರಸ್ತುತ ಅಕಾಡೆಮಿ ಸದಸ್ಯರ ಆಯ್ಕೆ ವಿಚಾರದಲ್ಲಿ ಮನೆಹಾಳರನ್ನು ಅಧಿಕಾರದ ವ್ಯಾಪ್ತಿಗೆ ಬಿಟ್ಟುಕೊಂಡಿಲ್ಲ ಎಂದಾದರೆ ಈವರೆಗೆ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸಿದವರು ಮನೆಹಾಳು ಜನರೇ? ಸರಿ, ಸಚಿವರು ಹೇಳಿದಂತೆ ಹಿಂದೆಲ್ಲ ನೇಮಕಗೊಂಡ ಮನೆಹಾಳರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಅಂತ ನೋಡೋಣ. ಬೇರೆ ಅಕ್ಯಾಡೆಮಿಗಳ ಮಾತಿರಲಿ, ಸಾಹಿತ್ಯ ಅಕಾಡೆಮಿಯನ್ನೇ ಪರಿಗಣಿಸುವುದಾದರೆ ಅ.ನ.ಕೃ, ಕೆ.ವಿ.ಶಂಕರೇಗೌಡ್ರು, ಹಾ.ಮಾ.ನಾಯಕ್, ನಿತ್ಯೋತ್ಸವ ಕವಿ ನಿಸಾರ್ ಅಹಮದ್, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜರು, ಗೀತಾ ನಾಗಭೂಷಣ…. ಇಂತವರೆಲ್ಲ ಅಧ್ಯಕ್ಷರಾಗಿದ್ದಂತವರು. ಇಲ್ಲಿಯವರೆಗೆ ಇವರನ್ನೆಲ್ಲ ಕನ್ನಡದ, ಕರ್ನಾಟಕದ ಹೆಮ್ಮೆ ಎಂದೇ ನಾವೇ ಭಾವಿಸಿದ್ದೆವು. ಆದರೆ ಸಚಿವರ ಗೀತೋಪದೇಶದಿಂದ ಇವರೆಲ್ಲ ಅನಾಮತ್ತು `ಮನೆಹಾಳರ’ ಪಟ್ಟಿಗೆ ಸೇರಿದಂತಾಗಿದೆ. ಇಂತಹ ಹೇಳಿಕೆಗಳ ಮೂಲಕ ಸಚಿವ ಸಿ.ಟಿ. ರವಿ ಕನ್ನಡ ಸಾಹಿತಿಗಳನ್ನು ಅವಮಾನಿಸಿದ್ದಾರೆ ಎಂಬುದು ಟೀಕಾಕಾರದ ಪ್ರಬಲ ವಾದ.

ಆದರೆ, ಸಚಿವ ಸಿ.ಟಿ. ರವಿ ಹಾಗೂ ಅವರ ಟೀಕಾಕಾರರ ನಡುವಿನ ವಾಗ್ಯುದ್ಧ ಜೋರಾಗುತ್ತಿದ್ದಂತೆ ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಮಾತುಗಳು ಸರ್ಕಾರಕ್ಕೆ ಮತ್ತು ಸಚಿವರಿಗೆ ಮತ್ತಷ್ಟು ಇರಿಸುಮುರಿಸಿಗೆ ಕಾರಣವಾಗಿದೆ.

ಅಸಲಿಗೆ ಬ್ಯಾರಿ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿರುವ ಡಾ. ಮುನೀರ್ ಬಾವ, ಫಝಲ್ ಆಸೈಗೋಳಿ ಮತ್ತು ಸಿರಾಜುದ್ದೀನ್ ಮುಡಿಪು ಎಂಬ ಮೂವರೂ ಸಾಹಿತಿಗಳಲ್ಲ, ಕವಿಗಳೂ ಅಲ್ಲ, ಅಲ್ಲದೆ ಇವರಿಗೆ ಬ್ಯಾರಿ ಭಾಷೆಯೂ ಬರಲ್ಲ. ಈ ಮೂವರು ಇತ್ತೀಚೆಗೆ ಸ್ವತಃ ಮಾಧ್ಯಮಗಳ ಎದುರು ಬಹಿರಂಗ ಹೇಳಿಕೆ ನೀಡಿದ್ದು, “ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ. ಅಲ್ಲದೆ, ಈ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆಯೂ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದಾರೆ.

ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಈ ಮಾತುಗಳು ಹಾಗೂ ಗೊಂದಲ ಅಸಲಿಗೆ ಮನೆಹಾಳರು ಯಾರು? ಎಂಬ ಕುರಿತು ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಕಡೆಗೆ ಬೊಟ್ಟು ಮಾಡುತ್ತಿದೆ. ಅಸಲಿಗೆ ಬ್ಯಾರಿ ಅಕಾಡೆಮಿ ಕೆಲಸವೇನು? ಇತಿಹಾಸವೇನು? ಇಲ್ಲಿದೆ ಡೀಟೈಲ್ಸ್

ಏನದು ಬ್ಯಾರಿ ಅಕಾಡೆಮಿ ರಾದ್ಧಾಂತ?
ಕನ್ನಡ ರಾಜ್ಯದ ನಾಡಭಾಷೆಯಾದರೂ, ಕರ್ನಾಟಕ ಎಂಬುದು ವಿವಿಧ ಭಾಷೆ ಮತ್ತು ಶ್ರೀಮಂತ ಸಂಸ್ಕೃತಿಗಳ ಕಣಜ. ಪ್ರತಿ 40 ಕಿಮಿ ಗೂ ಭಾಷೆ ಮತ್ತು ಸಂಸ್ಕೃತಿಯಲ್ಲಿರುವ ಬದಲಾವಣೆ, ಜನರ ಬದುಕುವ ಕ್ರಮದಲ್ಲಿನ ವಿಭಿನ್ನತೆಯನ್ನು ನಾವಿಲ್ಲಿ ಕಾಣಬಹುದು.ಭಾಗಶಃ ಭಾರತದ ಬೇರೆ ಯಾವ ರಾಜ್ಯಕ್ಕೂ ಇಲ್ಲದಷ್ಟು ವಿವಿಧತೆಯ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂದರೆ ತಪ್ಪಾಗಲಾರದು.

ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ. ಕರ್ನಾಟಕ ಸಾಹಿತ್ಯ ಪರಿಷತ್ ಮೂಲಕ ಭಾಷೆಯ ಅಭಿವೃದ್ಧಿಗೆ, ಸಾಹಿತ್ಯ ಕೃಷಿಗೆ ಸಾಕಷ್ಟು ಪ್ರೇರಣೆ ನೀಡಲಾಗುತ್ತಿದೆ. ಇದೇ ರೀತಿ ಕನ್ನಡದ ಸಹೋದರ ಭಾಷೆಯಾದ ತುಳು, ಕೊಂಕಣಿ, ಕೊಡವ ಭಾಷೆಗಳ ಅಭಿವೃದ್ಧಿಗೂ ಕರ್ನಾಟಕ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಅಕಾಡೆಮಿ ರಚಿಸಲಾಗಿದೆ.
ಒಂದು ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ ಎಂದಾದರೆ ಆ ಭಾಷೆಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ ಎಂದೇ ಅರ್ಥ. ಕೊಂಕಣಿ, ಕೊಡವ ಹಾಗೂ ತುಳು ಭಾಷೆಯಂತೆ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಮತ್ತೊಂದು ಭಾಷೆಯೇ ಬ್ಯಾರಿ. ಉರ್ದು ಬಾಷೆಗೂ ಅಕಾಡೆಮಿ ರಚಿಸಿರುವ ರಾಜ್ಯ ಸರ್ಕಾರ ತೀರಾ ಇತ್ತೀಚೆಗೆ ಬ್ಯಾರಿ ಭಾಷೆಗೂ ಒಂದು ಅಕಾಡೆಮಿ ರಚಿಸಿತ್ತು.
ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಬಹುಪಾಲು ಇಸ್ಲಾಂ ಜನರಿಂದ ಬಳಕೆಯಾಗುತ್ತಿರುವ ಭಾಷೆಗಳಲ್ಲಿ ಬ್ಯಾರಿ ಎಂಬುದು ಚಿರಪರಿಚಿತ ಭಾಷೆ. ಕನ್ನಡ ಭಾಷೆಯಷ್ಟೇ ಪ್ರಾಚೀನ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಯಲ್ಲಿ ಜನಪದ ಸಾಹಿತ್ಯದ ಭಂಡಾರವೇ ಇದೆ. ಬ್ಯಾರಿ ಜನರ ಮದುವೆ ಸಮಾರಂಭಗಳಲ್ಲಿ, ಹಬ್ಬದ ದಿನಗಳಲ್ಲಿ, ಧಾರ್ಮಿಕ ದಿನಾಚರಣೆಗಳ ಸಂದರ್ಭದಲ್ಲಿ ಹೆಂಗಸರು, ಮಕ್ಕಳು ಹಾಗೂ ಪುರುಷರು ಬ್ಯಾರಿ ಜನಪದ ಸಾಹಿತ್ಯವನ್ನು ಹಾಡಿ ಕುಣಿದು ಸಂತೋಷ ಪಡುತ್ತಾರೆ. ಆದರೆ, ಇಂತಹ ಬ್ಯಾರಿ ಜನಪದ ಸಾಹಿತ್ಯ ಇಂದು ನವ ನಾಗರಿಕತೆಯ ಸೆಳೆತಕ್ಕೆ ಸಿಲುಕಿ ಅಳಿವಿನ ಅಂಚಿಗೆ ಸರಿದಿದೆ.

 

 

ಹೀಗಾಗಿ ಇಂತಹ ಶ್ರೀಮಂತ ಜನಪದ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಬ್ಯಾರಿ ಸಮಾಜದ ಪ್ರತಿಭಾವಂತ ಲೇಖಕರು, ಲೇಖಕಿಯರ ಪ್ರತಿಭೆಯನ್ನು ಪೋಷಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಈ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿತ್ತು. ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ.

ಕಳೆದ ಒಂದು ದಶಕದಿಂದ ಬ್ಯಾರಿ ಭಾಷೆ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಯಾರಿ ಸಂಸ್ಕೃತಿಗೆ ಪೂರಕವಾಗಿ ಬ್ಯಾರಿಗಳ ವಿಶಿಷ್ಟ ಹಬ್ಬಗಳಾದ ಪೆರ್ನಾಲ್, ಸಂದೋಲ ಹಬ್ಬಗಳನ್ನು ಬ್ಯಾರಿ ಜನರ ನಡುವೆ ಸಡಗರದಿಂದ ಆಚರಿಸಲಾಗುತ್ತಿದೆ. ಬ್ಯಾರಿ ಜಾನಪದ ಸಂಗೀತ, ನಾಟಕಗಳಿಗೆ ಸಂಬಂಧಿಸಿದಂತೆ ಉತ್ಸವ, ಸಮಾವೇಶ, ಸಮ್ಮೇಳನ, ದಫ್ ಸ್ಪರ್ಧೆ, ಬ್ಯಾರಿ ನಾಟಕ ಸ್ಪರ್ಧೆ ಮತ್ತು ಬ್ಯಾರಿ ಜಾನಪದ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆಗಳಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ಆಯೋಜಿಸಲಾಗುತ್ತಿದೆ.

ಅಳಿವಿನ ಅಂಚಿನಲ್ಲಿರುವ ಬ್ಯಾರಿ ಸಂಸ್ಕೃತಿಯನ್ನು ಭಾಷೆಯನ್ನು ಉಳಿಸಿಕೊಳ್ಳಲು ಇಂತಹ ಹತ್ತಾರು ಕಾರ್ಯಕ್ರಮಗಳ ಅಗತ್ಯ ಇರುವಂತೆ, ಇಂತಹ ಅಕಾಡೆಮಿಗಳಿಗೆ ಭಾಷೆಯ ಮೇಲೆ ಪ್ರೀತಿ ಇರುವ ಹಾಗೂ ಈ ಕ್ಷೇತ್ರದಲ್ಲಿ ವಿಫುಲ ಕೃಷಿ ಮಾಡಿರುವ ವ್ಯಕ್ತಿಗಳ ಅಗತ್ಯತೆಯೂ ಇದೆ. ಅಧಿಕಾರ ವಲಯದಲ್ಲಿ ಅಂತವರು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಆದರೆ, ಇಂತಹ ಅಕಾಡೆಮಿಗಳ ಜವಾಬ್ದಾರಿಯುತ ಹುದ್ದೆಗೆ ಆಡಳಿತದ ಚುಕ್ಕಾಣಿ ಹಿಡಿದಿರುವವರು ಅಷ್ಟೇ ಬೇಜವಾಬ್ದಾರಿಯಿಂದ ಬ್ಯಾರಿ ಭಾಷೆಯ ಕುರಿತು ಅರಿವಿಲ್ಲದ, ಸಾಹಿತಿಗಳಲ್ಲದ ಹಾಗೂ ಕೊನೆಗೆ ಈ ಹುದ್ದೆಯನ್ನು ಕೋರಿ ಅರ್ಜಿಯನ್ನೂ ಹಾಕದ ಅನಾಮಧೇಯ ಜನರನ್ನು ಆ ಸ್ಥಾನಗಳಿಗೆ ತಂದು ಕೂರಿಸಿರುವುದು ಯಾವ ಪುರುಷಾರ್ಥದ ಮನೆ ಉದ್ಧಾರಕ ಕೆಲಸ? ಎಂಬುದು ಪ್ರಸ್ತುತ ಸಾಹಿತ್ಯ ವಲಯದಲ್ಲಿ ಸಚಿವ ಸಿ.ಟಿ. ರವಿ ವಿರುದ್ಧ ಕೇಳಿಬರುತ್ತಿರುವ ಕಟುಪ್ರಶ್ನೆ. ಆದರೆ, ಈ ಕುರಿತ ಟೀಕೆಗೆ ಅವರು ಉತ್ತರಿಸಬೇಕು ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...